ಸುದ್ದಿ 

ಭಾರತೀಯರ ಭಾವ ಕೋಶ……

Taluknewsmedia.com

Taluknewsmedia.comಭಾರತೀಯರ ಭಾವ ಕೋಶ…… ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?………. ಪ್ರೀತಿ…….. ಉತ್ತಮ,ದ್ವೇಷ…….. ಮಧ್ಯಮ,ಕೋಪ…….. ಸ್ವಲ್ಪ ಹೆಚ್ಚು,ಕಾಮ…… ಸಮಾಧಾನಕರ,ಕರುಣೆ…… ಪರವಾಗಿಲ್ಲ,ತ್ಯಾಗ…….ಸುಮಾರಾಗಿದೆ,ಧೈರ್ಯ……. ಕಡಿಮೆ,ಅಹಂಕಾರ…. ಒಂದಷ್ಟುಇದೆ,ತಾಳ್ಮೆ…… ಸ್ವಲ್ಪ ಕಡಿಮೆ,ಸಹಕಾರ…. ಓ ಕೆ,ಭಕ್ತಿ…….. ತುಂಬಾ ಹೆಚ್ಚು,ನಂಬಿಕೆ…. ಅಪಾರ,ಹಾಸ್ಯ….. ಉತ್ತಮ, ಆದರೆ,ಇದನ್ನೆಲ್ಲಾ ಮೀರಿದ ಅತಿಹೆಚ್ಚು ಭಾವ ,ನನಗೆ ತಿಳಿದಂತೆ” ಅಸೂಯೆ “ಅಥವಾ” ಮತ್ಸರ “ ಬಹುಶಃ ನಮ್ಮ ರಕ್ತದಲ್ಲಿಯೇ ಅಡಕವಾಗಿರಬೇಕು ಎನಿಸುತ್ತದೆ. ಮೇಲ್ನೋಟಕ್ಕೆ ಮತ್ತು ನೇರವಾಗಿ ಅದು ಗೋಚರಿಸದಿದ್ದರು ಪರೋಕ್ಷವಾಗಿ ಅದು ತುಂಬಿ ತುಳುಕುತ್ತಿರುತ್ತದೆ. ಕೆಲವರಿಗೆ ಮುಖದ ಮೇಲೆಯೇ ಕಾಣಿಸಿದರೆ, ಮತ್ತೆ ಕೆಲವರ ನಗುವಿನಲ್ಲಿ ಕಾಣುತ್ತದೆ. ಮತ್ತೆ ಕೆಲವರಲ್ಲಿ ಅವರ ದೇಹ ಭಾಷೆಯಿಂದ, ಅವರ ನಡವಳಿಕೆಯಿಂದ, ಅಪರೂಪವಾಗಿ ಅವರ ಮಾತು ಮತ್ತು ಮೌನದಿಂದ, ಆಗಾಗ ಅವರ ಕಣ್ಣೋಟದಿಂದ, ಇದು ವ್ಯಕ್ತವಾಗುತ್ತದೆ. ಅಸೂಯೆ ಅಥವಾ ಮಾತ್ಸರ್ಯ ನಮ್ಮ ಸುತ್ತಮುತ್ತಲಿನ ಮತ್ತು ಮುಖ್ಯವಾಗಿ ಹತ್ತಿರದ ವಿವಿಧ ಸಂಬಂಧಗಳ…

ಮುಂದೆ ಓದಿ..
ಸುದ್ದಿ 

ಓಲಾ ಎಲೆಕ್ಟ್ರಿಕ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣಸಿಇಒ ಭವೀಶ್ ಅಗರ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್!

Taluknewsmedia.com

Taluknewsmedia.comಓಲಾ ಎಲೆಕ್ಟ್ರಿಕ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣಸಿಇಒ ಭವೀಶ್ ಅಗರ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್! ದೇಶದ ಪ್ರಮುಖ ಇ–ವಾಹನ ತಯಾರಿಕಾ ಸಂಸ್ಥೆ ಓಲಾ ಎಲೆಕ್ಟ್ರಿಕ್ ಕಂಪನಿಯೊಳಗೆ ಸಂಭವಿಸಿದ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣ ಇದೀಗ ಕಂಪನಿ ಉನ್ನತ ಮಟ್ಟದವರನ್ನೇ ಕಾನೂನು ಬಲೆಯೊಳಗೆ ಎಳೆದುಕೊಂಡಿದೆ. ಈ ಘಟನೆಯಲ್ಲಿ ಸಿಇಒ ಭವೀಶ್ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಹಿನ್ನೆಲೆ…ಬೆಂಗಳೂರಿನ ಹೋಮೋಲೋಗೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ. ಅರವಿಂದ್ (35) ಅವರು ಸೆಪ್ಟೆಂಬರ್ 28ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾರಂಭದಲ್ಲಿ ಪೊಲೀಸರು ಇದನ್ನು ಯುಡಿಆರ್ (Unnatural Death Report) ಪ್ರಕರಣವೆಂದು ದಾಖಲಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಬೆಳಕಿಗೆ ಬಂದ ಕೆಲವು ವಿಚಾರಗಳು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿವೆ. ಅನುಮಾನ ಹುಟ್ಟಿಸಿದ ಹಣ ವರ್ಗಾವಣೆ…ಅರವಿಂದ್ ಸಾವಿನ ಕೇವಲ ಎರಡು ದಿನಗಳ ಬಳಿಕ…

ಮುಂದೆ ಓದಿ..
ಸುದ್ದಿ 

ಮತ್ತೆ ಭೂಮಿಪೂಜೆ, ಮತ್ತೆ ಪ್ರದರ್ಶನ! ಗಾಂಧಿನಗರದ ವೈಟ್ ಟಾಪಿಂಗ್ ಕಾಮಗಾರಿಗೆ ಜನರ ಕೋಪ

Taluknewsmedia.com

Taluknewsmedia.comಮತ್ತೆ ಭೂಮಿಪೂಜೆ, ಮತ್ತೆ ಪ್ರದರ್ಶನ! ಗಾಂಧಿನಗರದ ವೈಟ್ ಟಾಪಿಂಗ್ ಕಾಮಗಾರಿಗೆ ಜನರ ಕೋಪ ನಗರದ ರಸ್ತೆ ಕಾಮಗಾರಿಗಳು ಕಂದಕಗಳಂತಿರುವಾಗ, ಸರ್ಕಾರ ಮತ್ತೊಂದು ಶೋ ಪೀಸ್ ಭೂಮಿಪೂಜೆ ನಡೆಸಿ ಜನರ ಕೋಪಕ್ಕೆ ಗುರಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಿವಿಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್‌ನಲ್ಲಿ ಭೂಮಿ ಪೂಜೆ ನೆರವೇರಿಸಿದರು. ಆದರೆ ಜನರ ಪ್ರಶ್ನೆ — ಭೂಮಿಪೂಜೆ ಮಾತ್ರ ಬೇಕೆ, ಕೆಲಸ ಯಾವಾಗ? ಹಿಂದಿನ ಕಾಮಗಾರಿಗಳು ಅರ್ಧದಲ್ಲೇ ಬಿಟ್ಟಿರುವಾಗ ಮತ್ತೆ ಹೊಸ ಕಾಮಗಾರಿಗಳ ಘೋಷಣೆ ಮಾಡುವುದು ನಿಜಕ್ಕೂ ಆಡಂಬರದ ರಾಜಕೀಯ ಎಂದು ನಾಗರಿಕರು ಕಿಡಿ ಕಾರಿದ್ದಾರೆ. ನಗರದಲ್ಲಿ ನಡೆಯುತ್ತಿರುವ ವೈಟ್…

ಮುಂದೆ ಓದಿ..
ಸಿನೆಮಾ ಸುದ್ದಿ 

ಜೆಸಿ’ ಚಿತ್ರದ ಮಾಸ್ ರ್ಯಾಪ್ ಸಾಂಗ್ ಬಿಡುಗಡೆ – ಪ್ರಖ್ಯಾತ್ ಮಿಂಚಿನ ಎಂಟ್ರಿ!

Taluknewsmedia.com

Taluknewsmedia.comಜೆಸಿ’ ಚಿತ್ರದ ಮಾಸ್ ರ್ಯಾಪ್ ಸಾಂಗ್ ಬಿಡುಗಡೆ – ಪ್ರಖ್ಯಾತ್ ಮಿಂಚಿನ ಎಂಟ್ರಿ! ಖ್ಯಾತ ನಟ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಜೆಸಿ (Judicial Custody)’ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಚಿತ್ರತಂಡವು ಚಿತ್ರೀಕರಣವನ್ನು ಪೂರ್ಣಗೊಳಿಸಿ ಇದೀಗ ಮಾಸ್ ರ್ಯಾಪ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಪ್ರಖ್ಯಾತ್, ದೊಡ್ಡ ಗ್ಯಾಪ್ ನಂತರ ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಮರಳಿ ದರ್ಶನ ನೀಡುತ್ತಿದ್ದಾರೆ. “ವ್ರೂಮ್… ವ್ರೂಮ್… ರೋಡ್ ಮೇಲೆ ಬೀಸ್ಟ್ ಬಂತು, ಸೈಡ್ ಕೊಡು…” ಎಂಬ ಶಕ್ತಿಯುತ ರ್ಯಾಪ್ ಸಾಂಗ್ ಬಿಡುಗಡೆಯಾಗಿದ್ದು, ಪ್ರಖ್ಯಾತ್ ಬೈಕ್ ಏರಿ ಮಿಂಚಿರುವ ದೃಶ್ಯಗಳು ಈಗಾಗಲೇ ವೈರಲ್ ಆಗಿವೆ. ಈ ಹಾಡನ್ನು ಖ್ಯಾತ ರ್ಯಾಪರ್‌ಗಳಾದ ಎಂ.ಸಿ. ಬಿಜ್ಜು ಮತ್ತು ರಾಹುಲ್ ಡಿಟ್ಟೋ ಬರೆದು, ಸಂಗೀತ ನೀಡಿ, ತಮ್ಮದೇ ಧ್ವನಿಯಲ್ಲಿ ಹಾಡಿದ್ದಾರೆ. ಬೈಕ್…

ಮುಂದೆ ಓದಿ..
ಸುದ್ದಿ 

ಕಾಂಗ್ರೆಸ್ ಸರ್ಕಾರದಲ್ಲೂ ‘ಕಮಿಷನ್ ರಾಜ’ ಮುಂದುವರಿಕೆ? ಗುತ್ತಿಗೆದಾರರಿಂದ ಭಾರೀ ಆರೋಪ

Taluknewsmedia.com

Taluknewsmedia.comಕಾಂಗ್ರೆಸ್ ಸರ್ಕಾರದಲ್ಲೂ ‘ಕಮಿಷನ್ ರಾಜ’ ಮುಂದುವರಿಕೆ? ಗುತ್ತಿಗೆದಾರರಿಂದ ಭಾರೀ ಆರೋಪ ಕಳೆದ ಬಾರಿಯ ಬಿಜೆಪಿ ಸರ್ಕಾರದ ಕಾಲದಲ್ಲಿ ನಡೆದಿದ್ದ “ಶೇ. 40 ಕಮಿಷನ್” ವಿವಾದ ಇದೀಗ ಮತ್ತೆ ಜೀವಂತವಾಗಿದೆ. ಆದರೆ ಈ ಬಾರಿ ಗುರಿ ಕಾಂಗ್ರೆಸ್ ಸರ್ಕಾರ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಗುತ್ತಿಗೆದಾರರು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ — ಸರ್ಕಾರದ ವಸತಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿಗಳ ಅನುಮೋದನೆ, ಬಿಲ್ ರಿಲೀಸ್ ಹಾಗೂ ತಾಂತ್ರಿಕ ಅನುಮತಿ ಪಡೆಯಲು ಅಧಿಕಾರಿಗಳು ಶೇ.40 ರಷ್ಟು ಕಮಿಷನ್ ಬೇಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಮಂಜುನಾಥ್ ಅವರು ವಸತಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸ್ಲಂ ಬೋರ್ಡ್‌ನ ಟೆಕ್ನಿಕಲ್ ಅಡ್ವೈಸರ್ ಬಾಲರಾಜ್ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿತು.ಆದರೆ ಆ ಆರೋಪಗಳು…

ಮುಂದೆ ಓದಿ..
ಸುದ್ದಿ 

ಪತ್ನಿ ಕೊಲೆ ಪ್ರಕರಣ – ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯ ಕೃತ್ಯ ಬಯಲು!

Taluknewsmedia.com

Taluknewsmedia.comಪತ್ನಿ ಕೊಲೆ ಪ್ರಕರಣ – ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯ ಕೃತ್ಯ ಬಯಲು! ಬೆಂಗಳೂರು ನಗರದ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಬಳಿಕ ಕೃತ್ಯ ಮರೆಮಾಚಲು “ವಿದ್ಯುತ್ ಶಾಕ್‌ನಿಂದ ಸಾವು” ಎಂದು ನಾಟಕವಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳು ರೇಷ್ಮಾ (32), ಆರೋಪಿ ಪತಿ ಪ್ರಶಾಂತ್ ಕಮ್ಮಾರ್ (25) ಎಂಬಾತ. ರೇಷ್ಮಾ ಸಹೋದರಿ ರೇಣುಕಾ ನೀಡಿದ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸುತ್ತಿದ್ದಾರೆ. ಮರಗೊಂಡಹಳ್ಳಿ ನಿವಾಸಿ ರೇಷ್ಮಾ ಅವರು 15 ವರ್ಷಗಳ ಹಿಂದೆ ಸುರೇಂದ್ರ ಎಂಬುವರನ್ನು ವಿವಾಹವಾಗಿದ್ದರು. ಆದರೆ ಮೊದಲ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರಿಗೆ 15 ವರ್ಷದ ಮಗಳು ಇದ್ದಾಳೆ. ಬಳಿಕ 9 ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮೂಲದ ಪ್ರಶಾಂತ್ ಕಮ್ಮಾರ್ ಎಂಬಾತನ ಪರಿಚಯವಾಗಿ, ಇಬ್ಬರು ಪ್ರೀತಿಯಲ್ಲಿ ಬಿದ್ದು…

ಮುಂದೆ ಓದಿ..
ಸಿನೆಮಾ ಸುದ್ದಿ 

‘ದಿಗ್ಲುಪುರ’ ಚಿತ್ರಕ್ಕೆ ಮುಹೂರ್ತ – ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಂದ ಕ್ಲಾಪ್!

Taluknewsmedia.com

Taluknewsmedia.com‘ದಿಗ್ಲುಪುರ’ ಚಿತ್ರಕ್ಕೆ ಮುಹೂರ್ತ – ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಂದ ಕ್ಲಾಪ್! ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಮ್ಯಾಜಿಕ್ ಅಥವಾ ಮಾಟಮಂತ್ರ ಆಧಾರಿತ ಸಿನಿಮಾಗಳು ಅಪರೂಪ. ಹಿಂದಿನ ದಶಕಗಳಲ್ಲಿ ಏಟು ಎದಿರೇಟು, ಇತ್ತೀಚಿನ ಕಟಕ ಮುಂತಾದ ಚಿತ್ರಗಳು ಆ ಶೈಲಿಯ ಯಶಸ್ವಿ ಪ್ರಯೋಗಗಳಾಗಿದ್ದವು. ಈಗ ಆ ದಾರಿಗೆ ಹೊಸ ಹಾದಿ ತೆರೆದು ದಿಗ್ಲುಪುರ ಎಂಬ ಹೊಸ ಚಿತ್ರ ರೂಪುಗೊಳ್ಳುತ್ತಿದೆ. ಕಳೆದ ಶುಕ್ರವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಮೊದಲ ಕ್ಲಾಪ್‌ ನೀಡಿದರು. “ದಿ ಡೆಡ್ ವಾಕ್ ಇನ್ ಸ್ಕೇರಿ ವಿಲೇಜ್” ಎಂಬ ಅಡಿಬರಹ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ – ಎಲ್ಲವೂ ಮನೋಜ್ಞ ಮನ್ವಂತರ ಅವರದೇ. ರೇರ್ ವಿಜನ್ ಮೂವೀ ಮೇಕರ್ಸ್ ಸಂಸ್ಥೆಯಡಿ ಆರ್.ವಿ.ಎಂ.ಎಂ. ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮುಖ್ಯ…

ಮುಂದೆ ಓದಿ..
ಸಿನೆಮಾ ಸುದ್ದಿ 

“ಬ್ರ್ಯಾಟ್” ಟ್ರೇಲರ್ ಬಿಡುಗಡೆ – ಕಿಚ್ಚ ಸುದೀಪ್ ಅನಾವರಣ, ಶಶಾಂಕ್ ನಿರ್ದೇಶನ – ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿ!

Taluknewsmedia.com

Taluknewsmedia.com“ಬ್ರ್ಯಾಟ್” ಟ್ರೇಲರ್ ಬಿಡುಗಡೆ – ಕಿಚ್ಚ ಸುದೀಪ್ ಅನಾವರಣ, ಶಶಾಂಕ್ ನಿರ್ದೇಶನ – ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿ! ಡಾಲ್ಫಿನ್ ಎಂಟರ್ಟೈನ್ಮೆಂಟ್‌ನ ಅಡಿಯಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ಅವರ ನಿರ್ದೇಶನದಲ್ಲಿ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ “ಬ್ರ್ಯಾಟ್” ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಈ ಟ್ರೇಲರ್ ಅನ್ನು ನಟ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಲಾಂಛನಗೊಳಿಸಿದರು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುದೀಪ್, “ಶಶಾಂಕ್ ಒಬ್ಬ ಪ್ರತಿಭಾವಂತ ಕಥೆಗಾರ ಹಾಗೂ ದೃಢ ನಿರ್ದೇಶಕ. ಅವರ ಸಿನಿಮಾಗಳು ಯಾವಾಗಲೂ ಹೊಸ ಪ್ರಯೋಗಗಳನ್ನು ಒಳಗೊಂಡಿರುತ್ತವೆ. ಕೃಷ್ಣ ಕೂಡ ಶ್ರೇಷ್ಠ ನಟ. ಇವರಿಬ್ಬರ ‘ಕೌಸಲ್ಯ ಸುಪ್ರಜ ರಾಮ’ ಚಿತ್ರ ದೊಡ್ಡ ಹಿಟ್ ಆಗಿತ್ತು. ಅದೇ ಯಶಸ್ಸು ‘ಬ್ರ್ಯಾಟ್’ಗೂ ದೊರೆಯಲಿ ಎಂದು ಹಾರೈಸುತ್ತೇನೆ” ಎಂದರು. ನಟ ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ, “ನನಗೆ ಹಾಗೂ ಸುದೀಪ್ ಸರ್‌ರಿಗೆ ಒಳ್ಳೆಯ…

ಮುಂದೆ ಓದಿ..
ಸುದ್ದಿ 

ಉಪಪ್ರಾಂಶುಪಾಲರ ನೇಮಕದಲ್ಲಿ 7.45 ಲಕ್ಷ ರೂಪಾಯಿ ವಂಚನೆ: ಸಿಎಆರ್ ಮುಖ್ಯಪೇದೆ, ಪತ್ನಿ ಸೇರಿದಂತೆ 7 ಮಂದಿ ವಿರುದ್ಧ FIR.

Taluknewsmedia.com

Taluknewsmedia.comಉಪಪ್ರಾಂಶುಪಾಲರ ನೇಮಕದಲ್ಲಿ 7.45 ಲಕ್ಷ ರೂಪಾಯಿ ವಂಚನೆ: ಸಿಎಆರ್ ಮುಖ್ಯಪೇದೆ, ಪತ್ನಿ ಸೇರಿದಂತೆ 7 ಮಂದಿ ವಿರುದ್ಧ FIR. ವಿದ್ಯಾ ಕ್ಷೇತ್ರದಲ್ಲಿ ಹೆಸರು ಮಾಡಿದ ಅಕ್ಷರ ಫೌಂಡೇಶನ್ ಸಂಸ್ಥಾಪಕ ಸುನಿಲ್ ಅವರಿಗೆ ಉಪಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಸದಸ್ಯರಾಗಿ ನೇಮಕ ಮಾಡಿಸುವ ಭರವಸೆ ನೀಡಿ 7.45 ಲಕ್ಷ ರೂಪಾಯಿ ವಂಚಿಸಲಾದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸಿಎಆರ್ ಮುಖ್ಯಪೇದೆ ಚೆನ್ನಕೇಶವ, ಅವರ ಪತ್ನಿ ಮಮತಾ ಹಾಗೂ ಟ್ರಸ್ಟ್‌ನ 5 ಸದಸ್ಯರ ವಿರುದ್ಧ FIR ದಾಖಲಿಸಲಾಗಿದೆ. ಸುನಿಲ್ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಹೊಂದಿರುವ ವ್ಯಕ್ತಿ. ಚೆನ್ನಕೇಶವ ರಾಮಕೃಷ್ಣನಗರದಲ್ಲಿ “ಗುರುಕಲ್ಪ ಟ್ರಸ್ಟ್” ಮೂಲಕ ವಿಶ್ವಮಾನವ ಪಿಯು ಕಾಲೇಜ್ ಅನ್ನು ನಡೆಸುತ್ತಿದ್ದಾರೆ. ಸುನಿಲ್ ಅವರನ್ನು ಕಾಲೇಜಿಗೆ ಉಪಪ್ರಾಂಶುಪಾಲರಾಗಿ ನೇಮಿಸುವ ಪ್ರಸ್ತಾವನೆ ನಿರಾಕರಿಸಿದ್ದರೂ, ಉತ್ತಮ ವೇತನ ನೀಡುವ ಭರವಸೆ ನೀಡಿದ ಕಾರಣ ಅವರು ಒಪ್ಪಿದ್ದಾರೆ.ಮುಂದಿನ ದಿನಗಳಲ್ಲಿ ಸುನಿಲ್ ಕಾಲೇಜಿನ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ – ಮೂವರು ಕಿಡಿಗೇಡಿಗಳು ವಶಕ್ಕೆ!

Taluknewsmedia.com

Taluknewsmedia.comಬೆಂಗಳೂರಿನಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ – ಮೂವರು ಕಿಡಿಗೇಡಿಗಳು ವಶಕ್ಕೆ! ಮಹಾನಗರದ ಹೃದಯಭಾಗದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ! ಹೆಣ್ಣೂರು ಬಡಾವಣೆಯ ಸಾರ್ವಜನಿಕ ಪ್ರದೇಶದಲ್ಲಿ ಮಧ್ಯರಾತ್ರಿ ಐವರು ಯುವಕರ ಗುಂಪು ಲಾಂಗ್ ಮತ್ತು ಆಯುಧಗಳೊಂದಿಗೆ ಹಲ್ಲೆ ನಡೆಸಿದ ಘಟನೆ ನಗರದ ಶಾಂತಿಗೆ ಕಲೆಹಾಕಿದೆ. ಹಠಾತ್‌ ಉಂಟಾದ ಈ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದು ಭಯಭೀತರಾಗಿದ್ದಾರೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಯುವಕರು “ಏರಿಯಾದಲ್ಲಿ ಹವಾ ಮೇಂಟೇನ್‌ ಮಾಡಲು” ಅಂದ್ರೆ ತಮ್ಮ ಪ್ರಭಾವ ತೋರಿಸಲು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಮೂವರು ಬಂಧನ – ಇಬ್ಬರಿಗೆ ಹುಡುಕಾಟ ಹೆಣ್ಣೂರು ಠಾಣೆಯ ಪೊಲೀಸರು ತ್ವರಿತ ಕ್ರಮ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಂದರೆ.. ಅಮೀನ್ ಷರೀಫ್ಸೈಯದ್ ಅರ್ಬಾಸ್ಶೀದ್ ಖಾದರ್ ಇನ್ನಿಬ್ಬರು ಆರೋಪಿ ಯುವಕರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎಲ್ಲ ಆರೋಪಿಗಳು ಸರ್ವಜ್ಞನಗರ ಪ್ರದೇಶದ ನಿವಾಸಿಗಳಾಗಿದ್ದಾರೆ. ಕಾನೂನು ಕ್ರಮ ಕೈಗೊಂಡ…

ಮುಂದೆ ಓದಿ..