ಅಂಕಣ 

ನಮ್ಮ ಯೋಚನಾ ಶಕ್ತಿಯ ಮೂಲಗಳು – ಕ್ರಮವಾಗಿ….

ನಮ್ಮ ಯೋಚನಾ ಶಕ್ತಿಯ ಮೂಲಗಳು – ಕ್ರಮವಾಗಿ…. ಸೃಷ್ಟಿಯ ಮೂಲದಿಂದ ಹುಟ್ಟುವ ಚಿಂತನೆಗಳು….. ಜೀವಪರ ನಿಲುವಿನ ವಿಚಾರಗಳು. ‌‌.‌.. ಮಾನವೀಯ ಮುಖದ ಚಿಂತನೆಗಳು…. ಸತ್ಯದ ಮೂಲದಿಂದ ಹೊಳೆಯುವ ಚಿಂತನೆಗಳು… ಅನುಭವದ ಆಧಾರದ ಮೇಲೆ ಅರಿಯುವ ವಿಚಾರಗಳು…. ಜ್ಞಾನದ ಆಧಾರದಿಂದ ಬರುವ ಚಿಂತನೆಗಳು…….. ನಾಗರಿಕತೆಯ ನಡವಳಿಕೆಗಳಿಂದ ಮೂಡುವ ಅಂಶಗಳು…. ಒಂದು ಪ್ರದೇಶ ಅಥವಾ ದೇಶದ ಕಾರಣದಿಂದಾಗಿ ಹುಟ್ಟುವ ವಿಚಾರಗಳು…… ಧರ್ಮದ ಮೂಲದಿಂದ ರೂಪಿಸಿಕೊಳ್ಳುವ ವಿಚಾರಗಳು…… ಆಡಳಿತ ವ್ಯವಸ್ಥೆಯಿಂದ ಮೂಡುವ ಚಿಂತನೆಗಳು…. ಪಕ್ಷದ ದೃಷ್ಟಿಕೋನದಿಂದ ಬರುವ ಚಿಂತನೆಗಳು.. ಭಾಷೆಯ ಬಲದಿಂದ ಸೃಷ್ಟಿಯಾಗುವ ವಿಚಾರಗಳು…. ಸಂಬಂಧಗಳ ಆಧಾರದಲ್ಲಿ ಬೆಳೆಯುವ ಚಿಂತನೆಗಳು…. ಕುಟುಂಬದ ನೆರಳಲ್ಲಿ ಬೆಳೆಯುವ ಚಿಂತನೆಗಳು.. ಸ್ವಾರ್ಥದ ಮೂಲದಿಂದ ಹೊಳೆಯುವ ವಿಚಾರಗಳು….. ದುರಹಂಕಾರದಿಂದ ಮೊಳೆಯುವ ವಿಚಾರಗಳು….. ಕೋಪದಿಂದ ಮೂಡುವ ಚಿಂತನೆಗಳು……. ಅಸೂಯೆಯಿಂದ ಹುಟ್ಟುವ ವಿಚಾರಗಳು…… ಹೀಗೆ ನಮ್ಮಲ್ಲಿ, ಇವುಗಳಲ್ಲಿ ಯಾವ ಆಧಾರದಲ್ಲಿ ನಮ್ಮ ಚಿಂತನೆಗಳು ಅಭಿಪ್ರಾಯಗಳು ಮೂಡಿವೆ ಎಂಬುದರ ಮೇಲೆ ನಮ್ಮ…

ಮುಂದೆ ಓದಿ..
ಸುದ್ದಿ 

ಕೋಟೆ ಗಣಪತಿ ವಿಸರ್ಜನೆಗಾಗಿ ಸಿಂಗಾರಗೊಂಡಿರುವ ನಾಗಮಂಗಲ

ಕೋಟೆ ಗಣಪತಿ ವಿಸರ್ಜನೆಗಾಗಿ ಸಿಂಗಾರಗೊಂಡಿರುವ ನಾಗಮಂಗಲ ಇಂದು ನಾಗಮಂಗಲ ಪಟ್ಟಣದಲ್ಲಿ ವೈಭವಯುತ ಮೆರವಣಿಗೆಯೊಂದಿಗೆ 73ನೇ ವರ್ಷದ ಕೋಟೆ ಗಣಪತಿ ವಿಸರ್ಜನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಯಶಸ್ವಿಯಾದ ಅನ್ನ ಸಂತರ್ಪಣ ಕಾರ್ಯಕ್ರಮ: ದಿ:15/10/25 ರಂದು ಕೋಟೆ ಗಣಪತಿ ಸೇವಾ ಸಮಿತಿಯಿಂದ ಜರುಗಿದ ಅನ್ನ ಸಂತರ್ಪಣ ಕಾರ್ಯಕ್ರಮದಲ್ಲಿ ಸು 9000 ಮಂದಿ ಪ್ರಸಾದ ಸ್ವೀಕರಿಸಿ ವಿನಾಯಕನ ಕೃಪೆಗೆ ಪಾತ್ರರಾದರು. ಟಿ ಮರಿಯಪ್ಪ ವೃತ್ತದ ಮಹಾದ್ವಾರ ಪ್ರಮುಖ ಆಕರ್ಷಣೆ: ಬೀದರ್ – ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆ ಎಸ್ ಟಿ ರಸ್ತೆ ಸಂಧಿಸುವ ಟಿ ಮರಿಯಪ್ಪ ವೃತ್ತದಲ್ಲಿ ನಿರ್ಮಿಸಿರುವ ಭಜರಂಗಿ ಹಾಗೂ ಶ್ರೀರಾಮಚಂದ್ರ ಲಕ್ಷ್ಮಣರ ಪ್ರತಿಮೆ ಇರುವ ಮಹಾದ್ವಾರವು ದಾರಿಹೋಕರ ನಯನ ಚಿತ್ತಗಳನ್ನು ಆಕರ್ಷಿಸುತ್ತಿದ್ದು ಹಿಂದುತ್ವದ ಭಾವವನ್ನು ಪ್ರತಿಯೊಬ್ಬ ನೋಡುಗರಲ್ಲೂ ಮೂಡಿಸುವಂತಿದೆ. ಸುಮಾರು 25,000 ಜನರು ಭಾಗಿಯಾಗುವ ನಿರೀಕ್ಷೆ :ಇಂದು ನೆಡೆಯುವ ಶೋಭಾಯಾತ್ರೆಯಲ್ಲಿ ಸರಿಸುಮಾರು 25,000 ಜನರು ಹಾಗೂ ನೂರಾರು ಕಲಾ…

ಮುಂದೆ ಓದಿ..
ಸುದ್ದಿ 

ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮೇಲೆ ಕೋಟಿ ಕೋಟಿ ವಂಚನೆ – ASB ಡೆವಲಪರ್ಸ್‌ ವಿರುದ್ಧ FIR ದಾಖಲಾಗಿದೆ.

ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮೇಲೆ ಕೋಟಿ ಕೋಟಿ ವಂಚನೆ – ASB ಡೆವಲಪರ್ಸ್‌ ವಿರುದ್ಧ FIR ದಾಖಲಾಗಿದೆ. 139 ಮಂದಿ ಸ್ಯಾಂಡಲ್ವುಡ್ ಹಿರುತೆರೆ, ಕಿರುತೆರೆ ನಟ–ನಟಿಯರಿಗೆ ನಿವೇಶನ ಕೊಡುವ ಭರವಸೆ ನೀಡುವ ಮೂಲಕ ASB ಡೆವಲಪರ್ಸ್ ನ ಸಂಸ್ಥಾಪಕರು, ಚೇರ್ಮನ್ ಭಗೀರಥ ಮತ್ತು MD ವಿಜಯ್ ಕುಮಾರ್, ನೂರಾರು ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ FIR ದಾಖಲಾಗಿದೆ. ಘಟನೆಯ ಮುಖ್ಯ ಅಂಶಗಳು: 139 ನಟ–ನಟಿಯರನ್ನು ತಾವು ನೀಡುವ ನವೀನ ನಿವೇಶನದ ಭರವಸೆ ನೀಡಿ ಕೋಟಿ ಕೋಟಿ ಹಣ ವಂಚನೆ. ಖ್ಯಾತ ಪತ್ರಕರ್ತ ರವಿಬೆಳೆಗೆರೆ ಪುತ್ರಿ ಭಾವನಾ ಬೆಳಗೆರೆ ಕೂಡ ವಂಚನೆಯ ಪೀಡಿತರಲ್ಲಿ ಒಬ್ಬರು. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ, ಆದರೆ ಇನ್ನೂ ಯಾವುದೇ ಬಂಧನ ನಡೆಯಿಲ್ಲ. ಒಂದು FIR ನಲ್ಲಿ ಮಾತ್ರ 1.6 ಕೋಟಿ ರೂ. ವಂಚನೆ ದಾಖಲಾಗಿದೆ. 10ಕ್ಕೂ ಹೆಚ್ಚು ಪ್ರಕರಣಗಳು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಗೇಲ್ ಸಂಸ್ಥೆಯಿಂದ CBG ಘಟಕ

ಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಗೇಲ್ ಸಂಸ್ಥೆಯಿಂದ CBG ಘಟಕ ಬೆಂಗಳೂರು: ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೆಸಿಡಿಸಿ ಪ್ರದೇಶದಲ್ಲಿ ಗೇಲ್ ಸಂಸ್ಥೆಯು ಕಂಪ್ರೆಸ್ಡ್ ಬಯೋ ಗ್ಯಾಸ್ (CBG) ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹಾಗೂ ಗೇಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಎನ್. ಯಾದವ್ ರವರು, ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಇಂದು ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮೂಲಕ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಬೆ.ಘ.ತ್ಯಾ.ನಿ. ನಿಯಮಿತದ ಸಿಇಒ ಕರೀಗೌಡ, ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು…

ಮುಂದೆ ಓದಿ..
ಸುದ್ದಿ 

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – ಸಾರ್ವಜನಿಕ ಸೇವಕರ ಸುರಕ್ಷತೆ ಯಾರು ಕಾಪಾಡಬೇಕು?

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – ಸಾರ್ವಜನಿಕ ಸೇವಕರ ಸುರಕ್ಷತೆ ಯಾರು ಕಾಪಾಡಬೇಕು? ಬೆಂಗಳೂರು ನಗರದ ಬಿಎಂಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ನಡೆದ ಹಲ್ಲೆ, ನಮ್ಮ ಸಮಾಜದ ಅಸಹಿಷ್ಣುತೆಯ ನಿಜವಾದ ಮುಖವನ್ನು ಮತ್ತೊಮ್ಮೆ ಬಯಲಿಗೆಳೆಯಿದೆ. ಚಿಕ್ಕಗೊಲ್ಲರಹಟ್ಟಿ ಬಳಿ ನಡೆದ ಈ ಘಟನೆ ಕೇವಲ ಒಂದು ತಕರಾರು ಅಲ್ಲ – ಅದು ಸಾರ್ವಜನಿಕ ಸೇವೆ ನೀಡುವವರ ಮೇಲಿನ ಗೌರವ ಕುಸಿಯುತ್ತಿರುವ ಸಂಕೇತ. ಬೈಕ್ ಸವಾರರಿಗೆ ಹಾರ್ನ್ ಕೊಟ್ಟ ಅಷ್ಟೇ ಕಾರಣಕ್ಕೆ ಬಸ್ ನಿಲ್ಲಿಸಿ, ಚಾಲಕ-ಕಂಡಕ್ಟರ್‌ರನ್ನು ಹೊಡೆದು ರಕ್ತಸಿಕ್ತಗೊಳಿಸಿದ ಪುಂಡತನ, ನಾವು ಹೇಗೆ ನಾಗರಿಕ ಸಮಾಜವೆಂದು ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಎಬ್ಬಿಸುತ್ತದೆ. ರಸ್ತೆಯ ನಿಯಮ ಪಾಲಿಸುವವರು ತಪ್ಪಿತಸ್ಥರಾಗುತ್ತಿದ್ದರೆ, ಕಾನೂನು ಯಾವತ್ತಿಗೆ ಕೇವಲ ಕಾಗದದ ಮೇಲೇ ಉಳಿಯಬೇಕು? ಈ ಘಟನೆಯ ನಂತರ ಪೊಲೀಸರ ಕ್ರಮ ಶ್ಲಾಘನೀಯವಾದರೂ, ಮನೋಭಾವದ ಬದಲಾವಣೆ ಮಾತ್ರವೇ ಇಂತಹ ಘಟನೆಗಳ ತಡೆಗಟ್ಟುವ ದಾರಿ.ಬಸ್ ಚಾಲಕರು,…

ಮುಂದೆ ಓದಿ..
ಸುದ್ದಿ 

ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿನಿಯ ಹತ್ಯೆ : ಪ್ರೇಮ ವಿಚಾರವೇ ಹಿನ್ನೆಲೆ

ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿನಿಯ ಹತ್ಯೆ : ಪ್ರೇಮ ವಿಚಾರವೇ ಹಿನ್ನೆಲೆ! ನಗರದ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ನಡೆದ ಭೀಕರ ಘಟನೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃತ ಯುವತಿ ಯಾಮಿನಿ ಪ್ರಿಯಾ, ಬಿ.ಫಾರ್ಮಸಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಬೆಳಿಗ್ಗೆ ಪರೀಕ್ಷೆಗೆ ತೆರಳಿದ್ದ ಅವರು ಮಧ್ಯಾಹ್ನ ಕಾಲೇಜು ಮುಗಿಸಿ ಮನೆಗೆ ಹಿಂದಿರುಗುವ ವೇಳೆ ದುಷ್ಕರ್ಮಿಯ ದಾಳಿಗೆ ಬಲಿಯಾದರು. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಘ್ನೇಶ್ ಎಂಬ ಯುವಕ ಯಾಮಿನಿ ಪ್ರಿಯಾಳ ಮೇಲೆ ಪ್ರೇಮಾಸಕ್ತಿ ತೋರಿಸಿದ್ದಾನೆ. ಆದರೆ ಯುವತಿ ಆತನ ಪ್ರೇಮ ಪ್ರಸ್ತಾವನೆಗೆ ಒಪ್ಪದಿದ್ದ ಕಾರಣ ಕೋಪದಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಬೈಕ್‌ನಲ್ಲಿ ಬಂದ ಆರೋಪಿಯು ಹಿಂದಿನಿಂದಲೇ ಯುವತಿಯ ಮೇಲೆ ದಾಳಿ ನಡೆಸಿ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ.…

ಮುಂದೆ ಓದಿ..
ಸಿನೆಮಾ ಸುದ್ದಿ 

ಡಾ. ಎಸ್. ನಾರಾಯಣ್ ನಿರ್ದೇಶನದ “ಮಾರುತ” ಸಿನಿಮಾ ಬಿಡುಗಡೆಯ ದಿನಾಂಕ ಮುಂದೂಡಿಕೆ – ನವೆಂಬರ್ 21ಕ್ಕೆ ಹೊಸ ದಿನಾಂಕ ನಿಗದಿ!

ಡಾ. ಎಸ್. ನಾರಾಯಣ್ ನಿರ್ದೇಶನದ “ಮಾರುತ” ಸಿನಿಮಾ ಬಿಡುಗಡೆಯ ದಿನಾಂಕ ಮುಂದೂಡಿಕೆ – ನವೆಂಬರ್ 21ಕ್ಕೆ ಹೊಸ ದಿನಾಂಕ ನಿಗದಿ! ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ, ಖ್ಯಾತ ನಿರ್ದೇಶಕ ಡಾ. ಎಸ್. ನಾರಾಯಣ್ ಅವರ ಬಹುನಿರೀಕ್ಷಿತ “ಮಾರುತ” ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಮೂಲತಃ ಅಕ್ಟೋಬರ್ 31ರಂದು ತೆರೆಗೆ ಬರಬೇಕಿದ್ದ ಈ ಚಿತ್ರ ಇದೀಗ ನವೆಂಬರ್ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕೆ. ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸಿರುವ ಈಶಾ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬಂದಿರುವ “ಮಾರುತ” ಚಿತ್ರ ಈಗಾಗಲೇ ತನ್ನ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರಮಂದಿರಗಳ ಅಭಾವ ಮತ್ತು ಬಿಡುಗಡೆಯ ಹೋರಾಟದ ಹಿನ್ನೆಲೆ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ. “ಮಾರುತ” ಚಿತ್ರವನ್ನು ನಿರ್ದೇಶಿಸಿರುವ ಡಾ. ಎಸ್. ನಾರಾಯಣ್ ಅವರು…

ಮುಂದೆ ಓದಿ..
ಸುದ್ದಿ 

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ – ಮಹಾರಾಷ್ಟ್ರದ ಯುವಕ ಬಂಧನ!

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ – ಮಹಾರಾಷ್ಟ್ರದ ಯುವಕ ಬಂಧನ! ಸರ್ಕಾರಿ ಕಚೇರಿಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ವಿರಾಮ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆ ಇದೀಗ ವಿವಾದದ ಸುಳಿಗಾಳಿಯನ್ನು ಎಬ್ಬಿಸಿದೆ. ಈ ಹೇಳಿಕೆಯ ವಿರುದ್ಧ ಭುಗಿಲೆದ್ದಿದ್ದ ಕೆಲ ಹಿಂದೂಪರ ಸಂಘಟನೆಗಳ ಆಕ್ರೋಶವು ಇದೀಗ ಬೆದರಿಕೆ ಕರೆ ರೂಪದಲ್ಲಿ ಸಚಿವರಿಗೆ ತಲುಪಿತ್ತು. ಬೆದರಿಕೆ ಕರೆ ಮಾಡಿದ ಆರೋಪಿ ಮಹಾರಾಷ್ಟ್ರದ ಸೋಲಾಪುರ ಮೂಲದ ದಾನಪ್ಪ ಅಲಿಯಾಸ್ ದಾನೇಶ್. ಈತ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದನೆ ನಡೆಸಿದ್ದಾನೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ಸಂಬಂಧ, ಸಚಿವರ ಪರವಾಗಿ ಕಾಂಗ್ರೆಸ್ ಮುಖಂಡ ಮನೋಹರ್ ಅವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಬೆಂಗಳೂರು ಮತ್ತು ಕಲಬುರ್ಗಿ ಘಟಕಗಳ ಜಂಟಿ ಕಾರ್ಯಾಚರಣೆಯಡಿ ದಾನೇಶನ್ನು ಮಹಾರಾಷ್ಟ್ರದ ಲಾತೂರ್ ನಗರದಲ್ಲಿ ಬಂಧಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!

ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್! ಚಿತ್ರದುರ್ಗ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನೀರಿನ ಕ್ಯಾನ್ಗೆ ಎಣ್ಣೆ (ಮದ್ಯ) ಮಿಕ್ಸ್ ಮಾಡಿ ಕಚೇರಿಗೆ ತಂದಿದ್ದ ಸಿಬ್ಬಂದಿ, ಕಚೇರಿಯಲ್ಲೇ ಕುಡಿಯುತ್ತಾ ಪಾರ್ಟಿ ಮಾಡಿರುವುದು ಕ್ಯಾಮೆರಾಕ್ಕೆ ಸಿಕ್ಕಿದೆ. ಸೋರ್ಸ್‌ಗಳ ಪ್ರಕಾರ, ಸಿಬ್ಬಂದಿಯೋರ್ವ ಕಾರು ಖರೀದಿ ಮಾಡಿದ ಹಿನ್ನೆಲೆಯಲ್ಲಿ ಕಚೇರಿಯಲ್ಲೇ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಕಚೇರಿಯಂತಹ ಸರ್ಕಾರಿ ಸ್ಥಳದಲ್ಲೇ ಎಣ್ಣೆ ಪಾರ್ಟಿ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡವಳಿಕೆಯನ್ನು ಖಂಡಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಳೆ ಸುರಿಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರತಿಕ್ರಿಯಿಸಿ, “ಘಟನೆಯ ವಿಚಾರ ತಿಳಿದು, ಕಾರು ಚಾಲಕ ಸೇರಿ ಐವರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಅಧೀಕ್ಷಕ ಸುನಿಲ್,…

ಮುಂದೆ ಓದಿ..
ವಿಶೇಷ ಸುದ್ದಿ 

ನಿಗೂಢ ಸಾವಿನಿಂದ ಕೊಲೆ ತನಿಖೆಯ ತನಕ..

ನಿಗೂಢ ಸಾವಿನಿಂದ ಕೊಲೆ ತನಿಖೆಯ ತನಕ.. ಮರತ್ತಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಏಪ್ರಿಲ್ 24 ರಂದು ಡಾ. ಕೃತಿಕಾ ರೆಡ್ಡಿ ಅವರ ಸಾವಿನ ಸುದ್ದಿ ವೈದ್ಯಕೀಯ ವಲಯದಲ್ಲಿ ನಡುಕ ಮೂಡಿಸಿತ್ತು. ಆರಂಭದಲ್ಲಿ “ಅಸಹಜ ಸಾವು” (UDR) ಎಂದು ದಾಖಲಿಸಲ್ಪಟ್ಟ ಈ ಪ್ರಕರಣ, ಈಗ ಸಂಪೂರ್ಣ ಕೊಲೆ ತನಿಖೆಯ ರೂಪ ಪಡೆದಿದೆ.ಆದಿಯಲ್ಲಿ ಕುಟುಂಬದವರು ಯಾವುದೇ ಅನುಮಾನ ವ್ಯಕ್ತಪಡಿಸದೆ ಮರಣೋತ್ತರ ಪರೀಕ್ಷೆಗೂ ವಿರೋಧಿಸಿದ್ದರು. ಆದರೆ ಪೊಲೀಸರ ಅನುಮಾನದಿಂದಾಗಿ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಯಿತು — ಇದೇ ತಿರುವು ತನಿಖೆಗೆ ಹೊಸ ದಾರಿ ತೋರಿಸಿತು. ಎಫ್‌ಎಸ್‌ಎಲ್ ವರದಿ:ಪ್ರೊಪೋಫಾಲ್ ಓವರ್‌ಡೋಸ್‌ನ ಪತ್ತೆ…ಮೃತದೇಹದ ಬಳಿ ಪತ್ತೆಯಾದ ವೈದ್ಯಕೀಯ ಉಪಕರಣಗಳು ಮತ್ತು ಇಂಜೆಕ್ಷನ್‌ಗಳನ್ನು SOCO (Scene of Crime Officer) ತಂಡವು ವಶಪಡಿಸಿಕೊಂಡು ಎಫ್‌ಎಸ್‌ಎಲ್ (Forensic Science Laboratory) ಗೆ ಕಳುಹಿಸಿತು.ಫಲಿತಾಂಶಗಳು ಪೊಲೀಸರ ಅನುಮಾನಕ್ಕೆ ತಕ್ಕಂತೆ ಬಂದವು — ಕೃತಿಕಾ ರೆಡ್ಡಿಯವರ ಶರೀರದಲ್ಲಿ ಪ್ರೊಪೋಫಾಲ್…

ಮುಂದೆ ಓದಿ..