ಸುದ್ದಿ 

ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿಯ ದ್ವಿಚಕ್ರ ವಾಹನ ಕಳ್ಳತನ

ಬೆಂಗಳೂರು: 21 ಆಗಸ್ಟ್ 2025ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ದ್ವಿಚಕ್ರ ವಾಹನ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ರತ್ನಮ್ಮ ಅವರು ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕ್ಷೇಮ-18 O-4544 ಸಂಖ್ಯೆಯ ದ್ವಿಚಕ್ರ ವಾಹನವನ್ನು ಆಗಸ್ಟ್ 9ರ ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ, ಆಗಸ್ಟ್ 10ರ ಬೆಳಿಗ್ಗೆ 8:30ಕ್ಕೆ ವಾಹನವನ್ನು ಪರಿಶೀಲಿಸಿದಾಗ ಅದು ಕಾಣಿಸದೆ ಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದರೂ ವಾಹನ ಪತ್ತೆಯಾಗದ ಕಾರಣ, ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಕೆಲಸಗಳಿಗೆ ಅಗತ್ಯವಾದ ಈ ವಾಹನವನ್ನು ಶೀಘ್ರ ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರತ್ನಮ್ಮ ಅವರು ಪೊಲೀಸರನ್ನು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿಯ ದ್ವಿಚಕ್ರ ವಾಹನ ಕಳ್ಳತನ

ಬೆಂಗಳೂರು:21 ಆಗಸ್ಟ್ 2025ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರ ದ್ವಿಚಕ್ರ ವಾಹನ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ಪಿರ್ಯಾದುದಾರರು ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೆಲಸಗಳಿಗೆ ಬಳಸುತ್ತಿದ್ದ ಕ್ಷೇಮ-18 0-4544 ಸಂಖ್ಯೆಯ ದ್ವಿಚಕ್ರ ವಾಹನವನ್ನು ಆಗಸ್ಟ್ 09 ರಂದು ರಾತ್ರಿ 10 ಗಂಟೆಗೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ, ಆಗಸ್ಟ್ 10 ರಂದು ಬೆಳಿಗ್ಗೆ 8:30ಕ್ಕೆ ವಾಹನವನ್ನು ಪರಿಶೀಲಿಸಿದಾಗ ಅದು ಕಾಣಿಸದೆ ಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಎಲ್ಲಾ ಕಡೆ ಹುಡುಕಿದರೂ ವಾಹನ ಪತ್ತೆಯಾಗದ ಕಾರಣ, ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪಿರ್ಯಾದುದಾರರು ತಮ್ಮ ಕೆಲಸಗಳಿಗೆ ಅಗತ್ಯವಾದ ಈ ವಾಹನವನ್ನು ಶೀಘ್ರ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ವಾಟ್ಸಾಪ್ ನಂಬರ ಹ್ಯಾಕ್ ಮಾಡಿ ₹60,000 ವಂಚನೆ

ಬೆಂಗಳೂರು:21 ಆಗಸ್ಟ್ 2025ನಗರದಲ್ಲಿ ದೊಡ್ಡ ಬೆಟ್ಟಳ್ಳಿ ಯಲ್ಲಿ ಮತ್ತೊಂದು ವಾಟ್ಸಾಪ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. 18-08-2025 ರಂದು, ಒಬ್ಬ ವ್ಯಕ್ತಿಯ ಸ್ನೇಹಿತನ ವಾಟ್ಸಾಪ್ ನಂಬರವನ್ನು ಅಪರಿಚಿತರು ಹ್ಯಾಕ್ ಮಾಡಿಕೊಂಡು “ಹಣದ ಅವಶ್ಯಕತೆ ಇದೆ” ಎಂದು ಸಂದೇಶ ಕಳುಹಿಸಿದ್ದಾರೆ. ಕೃಷ್ಣಮೂರ್ತಿ ಅವರು ಅದನ್ನು ನಂಬಿ, ನೀಡಲಾದ ಖಾತೆ ಸಂಖ್ಯೆ 3862002101011780 (PUNB0004100) ಹಾಗೂ ಫೋನ್‌ಪೇ/ಜಿಪೇ ನಂಬರುಗಳಾದ 7763048771, 8409465877ಗಳಿಗೆ ಒಟ್ಟು ₹60,000 ರು. ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನಗೊಂಡ ಅವರು ನೇರವಾಗಿ ತಮ್ಮ ಸ್ನೇಹಿತನಿಗೆ ಕರೆ ಮಾಡಿದಾಗ, ಅವರ ವಾಟ್ಸಾಪ್ ನಂಬರವನ್ನು ಹ್ಯಾಕ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಈ ಕುರಿತು ತಕ್ಷಣವೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ವಂಚನೆ ಮಾಡಿದವರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೀಡಿತರು ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಟ್ಸಾಪ್ ನಂಬರ ಹ್ಯಾಕ್ ಮಾಡಿ…

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ ವಾರೆಂಟ್ ಜಾರಿ – ಆರೋಪಿಯನ್ನು ಪೊಲೀಸರ ವಶಕ್ಕೆ

ಬೆಂಗಳೂರು:21 ಆಗಸ್ಟ್ 2025ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಸಿಬ್ಬಂದಿ ದಸ್ತಗಿರಿ ವಾರೆಂಟ್ ಜಾರಿಗೊಳಿಸಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರಣ್ಯಪುರ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾರೆಂಟ್ ಜಾರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಆಗಸ್ಟ್ 19ರಂದು ಬೆಳಿಗ್ಗೆ 8.30ಕ್ಕೆ ಕರ್ತವ್ಯಕ್ಕೆ ಹಾಜರಾದರು. ಈ ವೇಳೆ, ತಬ್ರೇಜ್ ಬಿನ್ ಲೇಟ್ ಅನ್ವರ್ (38 ವರ್ಷ, ವಿಳಾಸ: ಎಂ.ಎಸ್. ಪಾಳ್ಯ, ಉರ್ದು ಸ್ಕೂಲ್ ಹಿಂಭಾಗ, ಬೆಂಗಳೂರು) ಎಂಬುವವರ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಠಾಣೆಯ ನಿರ್ದೇಶನದಂತೆ, ಕರ್ತವ್ಯಕ್ಕೆ ನೇಮಿಸಲಾದ ಸಿಬ್ಬಂದಿ ಹಾಗೂ ಶ್ರೀ ಪ್ರಭಾಕರ್ (ಹೆಚ್ಚಿ, 11637) ಅವರು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಬೆಳಿಗ್ಗೆ 9.15ಕ್ಕೆ ಅವನ ಮನೆಯಲ್ಲಿ ಪತ್ತೆಹಚ್ಚಿದರು. ನಂತರ 9.30ಕ್ಕೆ ಆರೋಪಿಯನ್ನು ವಿದ್ಯಾರಣ್ಯಪುರ ಠಾಣೆಗೆ ಕರೆತರಲಾಯಿತು.

ಮುಂದೆ ಓದಿ..
ಸುದ್ದಿ 

ವಿದೇಶಿ ಆರೋಪಿಯ ಬಂಧನ – ಎನ್.ಬಿ.ಡಬ್ಲ್ಯೂ ವಾರೆಂಟ್ ಜಾರಿಯ ನಂತರ ಪೊಲೀಸರು ವಶಕ್ಕೆ

ಬೆಂಗಳೂರು:21 ಆಗಸ್ಟ್ 2025ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ಸಂ.360/2023, ಕಲಂ 8(ಸಿ), 22(ಸಿ), 14 ಆಫ್ ಫಾರಿನರ‍್ಸ್ ಆಕ್ಟ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೀಟರ್ ಐಕಿಡಿ ಬಿಲೋನ್ ಎಂಬ ವಿದೇಶಿ ಮೂಲದ ವ್ಯಕ್ತಿ ಹಲವು ಬಾರಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ, ಮಾನ್ಯ ಸಿ.ಸಿ.ಎಚ್ 35 ನ್ಯಾಯಾಲಯವು ಆರೋಪಿಯ ವಿರುದ್ಧ ಎನ್.ಬಿ.ಡಬ್ಲ್ಯೂ (Non-Bailable Warrant) ಜಾರಿಗೊಳಿಸಿತ್ತು. ಪೊಲೀಸರು ಈ ವಾರೆಂಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, 2025ರ ಆಗಸ್ಟ್ 20 ರಂದು ರಾತ್ರಿ 11.00 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿದ್ದಾರೆ. ಅವರ ವಿರುದ್ಧ ಈಗ ಕಲಂ 269 ಬಿ.ಎನ್.ಎಸ್ ಅನ್ವಯ ಹೊಸ ಪ್ರಕರಣವೂ ದಾಖಲಾಗಿದ್ದು, ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

ಮುಂದೆ ಓದಿ..
ಸುದ್ದಿ 

ವಿಜಯಪುರದಲ್ಲಿ ಸಾಮಾಜಿಕ ವೈಮನಸ್ಯ ಹುಟ್ಟುಹಾಕುವ ವಿಡಿಯೋ ಕುರಿತು ಎಫ್‌.ಐ.ಆರ್

ಬೆಂಗಳೂರು 21 ಆಗಸ್ಟ್ 2025ಡಾ. ಬಿ.ಆರ್. ಅಂಬೇಡ್ಕರ್ ದಲಿತ ಧ್ವನಿ ವೇದಿಕೆ (ರಿ) ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಅವರು, ಕೆ.ಎನ್. ಜಗದೀಶ್ ಕುಮಾರ್ ವಿರುದ್ಧ ಎಫ್‌.ಐ.ಆರ್ ದಾಖಲಿಸಿದ್ದಾರೆ. ಮಂಜುನಾಥ್ ಅವರ ಪ್ರಕಾರ, ಜಗದೀಶ್ ಕುಮಾರ್ ಅವರು 11-08-2025 ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಒಂದು ವಿಡಿಯೋವನ್ನು ಶೇರ್ ಮಾಡಿದ್ದು, ಅದರಲ್ಲಿ ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ಜಾತಿ-ಧರ್ಮ ಆಧಾರಿತ ಉಸ್ಕರಿಸುವ ಹೇಳಿಕೆಗಳನ್ನು ನೀಡಿದ್ದಾರೆ. ವಿಡಿಯೋದಲ್ಲಿ ಅವರು“ನಿನ್ನ ಇಬ್ಬರು ಗಂಡು ಮಕ್ಕಳಿಗೆ ಒಬ್ಬರಿಗೆ SC/ST ಸಮುದಾಯದ ಹೆಣ್ಣು ಹಾಗೂ ಮತ್ತೊಬ್ಬರಿಗೆ ಮುಸ್ಲಿಂ ಸಮುದಾಯದ ಹೆಣ್ಣು ಮದುವೆ ಮಾಡಿಸೋಣ. ಅದಕ್ಕೆ ನನಗೆ ₹5 ಕೋಟಿ ಫಂಡಿಂಗ್ ಸಿಗಲಿದೆ” ಎಂದು ಹೇಳಿದ್ದಾರೆ. ಅಲ್ಲದೆ SC/ST ಸಮುದಾಯದ ಹೆಣ್ಣುಮಕ್ಕಳ ಕುರಿತು ಹಲವು ಬಾರಿ ತುಚ್ಛ ರೀತಿಯಲ್ಲಿ ಮಾತನಾಡಿದ್ದಾರೆ.ದೂರುದಾರರ ಪ್ರಕಾರ, ಈ ಹೇಳಿಕೆಗಳು –SC/ST…

ಮುಂದೆ ಓದಿ..
ಅಂಕಣ 

ಧರ್ಮಸ್ಥಳದ ಶ್ರೀ ವಿರೇಂದ್ರ ಹೆಗಡೆಯವರಿಗೊಂದು ಬಹಿರಂಗ ಪತ್ರ…….

ಧರ್ಮಸ್ಥಳದ ಶ್ರೀ ವಿರೇಂದ್ರ ಹೆಗಡೆಯವರಿಗೊಂದು ಬಹಿರಂಗ ಪತ್ರ……. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ ಪದ್ಮ ವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀಯುತ ಡಿ. ವೀರೇಂದ್ರ ಹೆಗಡೆಯವರೇ ಮತ್ತು ಆ ರೀತಿಯ ಕರ್ನಾಟಕದ ಮಹತ್ವದ ವ್ಯಕ್ತಿಗಳೇ……… ಕಳೆದ 75 ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಮತ್ತು ಅದರ ಮುಖ್ಯಸ್ಥರಾದ ವೀರೇಂದ್ರ ಹೆಗಡೆಯವರ ಪಾತ್ರವೂ ಇದೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಕೇಂದ್ರವಾಗಿ ಕರ್ನಾಟಕದಲ್ಲಿ ಧರ್ಮಸ್ಥಳ ಮುಂಚೂಣಿಯಲ್ಲಿದೆ. ದಿನಕ್ಕೆ ಕನಿಷ್ಠವೆಂದರು 20 ರಿಂದ 30,000 ಭಕ್ತಾದಿಗಳು, ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಲ್ಲಿ ಸೇರುತ್ತಾರೆ. ನಿಮ್ಮ ಸಂಸ್ಥೆ ಉಚಿತ ಊಟದ ವ್ಯವಸ್ಥೆಯ ಜೊತೆಗೆ, ಕಡಿಮೆ ಬೆಲೆಯ ವಸತಿ ಸೌಕರ್ಯವನ್ನು ಒದಗಿಸುತ್ತಿದೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು, ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದೆ. ಆರ್ಥಿಕ ಕ್ಷೇತ್ರದಲ್ಲಿಯೂ ತಾವು…

ಮುಂದೆ ಓದಿ..
ಸುದ್ದಿ 

ಹಾನಗಲ್ ನಲ್ಲಿ ಅಕ್ರಮ ಗಾಂಜಾ ಮಾರಾಟ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಾದ್ಯಂತ ಇತ್ತೀಚಿಗೆ ಗಾಂಜಾ ಹಾವಳಿ ಹೆಚ್ಚಾಗಿದ್ದು ಆಗಸ್ಟ್ 17ನೆ ತಾರಿಕಿನಂದು ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಬಳಿ ದೊಡ್ಡ ಪ್ರಮಾಣದ ಅಕ್ರಮ ಗಾಂಜಾ ಪತ್ತೆಯಾಗಿದೆ 17/08/2025 ರಂದು ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ದನದ ಮಾರುಕಟ್ಟೆಯ ಹತ್ತಿರದ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಸಾಯಂಕಾಲ 7ಗಂಟೆಯ ಸುಮಾರಿಗೆ ಓಪನ್ ಮಾರ್ಕೆಟ್ ಗಾಂಜಾ ದಂದೆ ಬಯಲಿಗೆ ಬಂದಿದೆ ಅದರಲ್ಲಿ ಮುಖ್ಯವಾಗಿ ಇದ್ದವರು ಮುಬಾರಕ್ ಗೌಸ್ಮುದ್ದಿನ ಮಕಂದ್ ರ್,ಮುಕ್ತಿಯಾರ್ ಮೊಹಮದಜಾಫರ್ ಮಕಂದರ್, ಮೊಹಮದ್ಫ್ಜಲ್ ನಿಜಾಮುದ್ದೀನ್ ಪೆಂಡಾರಿ, ಮೊಹಮದ್ ಸಾದಿಕ್ ಅನ್ವರಸಾಬ್ ಸುಂಕದಈ ಮೇಲೆ ಕಾಣಿಸುವ 4 ಆರೋಪಿಗಳು ಪ್ರಮುಖವಾಗಿ ಅಕ್ರಮವಾಗಿ ಓಪನ್ ಮಾರ್ಕೆಟ್ ರೀತಿ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಇವರು 3ಕೆಜಿ 78ಗ್ರಾಂ ಅಂದರೆ 1 ಲಕ್ಷ 20 ಸಾವಿರ ರೂಪಾಯಿ ಗಾಂಜಾ ಮಾಲು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ ಇದರ ಮುಂದಾಲೋಚನೆ ತಿಳಿದ ಹಾನಗಲ್ ನಗರದ ಪೊಲೀಸರು ತಕ್ಷಣ…

ಮುಂದೆ ಓದಿ..
ಸುದ್ದಿ 

ಹಾನಗಲ್ಲಿನ ಇಂದಿರಾನಗರದಲ್ಲಿ ₹5.90 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾನಗಲ್ಲ: ನಗರದ ಇಂದಿರಾನಗರದಲ್ಲಿ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮನೆಯೊಂದರ ಬೀಗ ಮುರಿದು ಸುಮಾರು ₹5.90 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆಯು ಆಗಸ್ಟ್ 10 ರ ಮಧ್ಯಾಹ್ನ 3:30 ರಿಂದ ಆಗಸ್ಟ್ 11 ರ ಮುಂಜಾನೆ 11:00 ಗಂಟೆಯ ನಡುವೆ ನಡೆದಿದೆ ಎಂದು ವರದಿಯಾಗಿದೆ. ಮನೆ ಮಾಲೀಕರು ಮನೆಯಲ್ಲಿ ಇಲ್ಲದ ಸಮಯವನ್ನು ಬಳಸಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಳ್ಳರು ಮನೆಯೊಳಗೆ ನುಗ್ಗಿ, ಕೋಣೆಯಲ್ಲಿದ್ದ ಬೀರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಅದರಲ್ಲಿ ಇರಿಸಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕಳುವಾದ ವಸ್ತುಗಳಲ್ಲಿ ವಿವಿಧ ತೂಕದ ಚಿನ್ನದ ನೆಕ್ಲೇಸ್, ಕಿವಿಯೋಲೆಗಳು, ಉಂಗುರಗಳು, ಮಾಂಗಲ್ಯ ಸೂತ್ರ ಮತ್ತು ಚೈನ್‌ಗಳು ಸೇರಿವೆ. ಒಟ್ಟು 105 ಗ್ರಾಂ ಚಿನ್ನದ ಆಭರಣಗಳ ಮೌಲ್ಯ ₹5.65 ಲಕ್ಷ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, ಸುಮಾರು 350…

ಮುಂದೆ ಓದಿ..
ಸುದ್ದಿ 

ಆಸ್ತಿ ವಿಷಯದಲ್ಲಿ ಹೆಂಡತಿಯ ಮೇಲೆ ಅನುಮಾನ ಮತ್ತು ಲೈಂಗಿಕ ಹಲ್ಲೆ ಯತ್ನ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟರಾಜ ಗವಾಯಿಗಳ ನಗರದಲ್ಲಿ ಸುಮಾರು ವರ್ಷದಿಂದ ಪುಷ್ಪಾ ಅಶೋಕ್ ಅಂಗಡಿ ಎನ್ನುವ ಮಹಿಳೆ ಅಲ್ಲೇ ಹಲವು ವರ್ಷದಿಂದ ಶಿಕ್ಷಕಿ ವೃತಿ ಮಾಡಿಕೊಂಡಿರುತ್ತಾಳೆ ಅವಳ ಗಂಡನಾದ ಅಶೋಕ್ ಕೊಟ್ರಪ್ಪ ಅಂಗಡಿ ಅವಳನ್ನು ಬಿಟ್ಟು ದೂರ ಇರುತ್ತಾನೆ ಆದ್ರೆ ದಿಡಿರ ಅಂತ ಆಗಸ್ಟ್ 15 ರ ರಾತ್ರಿ 8 ಗಂಟೆಗೆ ಬಂದು ಆಸ್ತಿ ವಿಷಯದ ಹಂಚಿಕೆಯಲ್ಲಿ ಆ ಮಹಿಳೆ ರಾಣೆಬೆನ್ನೂರು ಕೋರ್ಟ್ ನಲ್ಲಿ ಕೇಸ್ ಮಾಡಿರುತ್ತಾಳೆ ಅವನು ಅದೇ ಕಾರಣ ಮುಂದಿಟ್ಟುಕೊಂಡು ಅವಳನ್ನು ಹೊಡೆದು ನೀನು ಜಾತಿಗೆಟ್ಟವಳು ನಿನಗೂ ನನ್ನ ಜಾತಿಗೂ ಸರಿ ಹೋಗಲ್ಲ ನೀನು ನಿನ್ನ ಮತ್ತೆ ನಿನ್ನ ಊರಿಗೆ ಬೆಂಕಿ ಹಚ್ಚುತ್ತೇನೆ ಅಂತ ಬೆದರಿಕೆ ಹಾಕಿ ಬಂದಿದ್ದಾನೆ ಇದರ ಬಗ್ಗೆ ಪುಷ್ಪಾ ಅಂಗಡಿ ಎನ್ನುವ ಅವನ ಹೆಂಡತಿಯೂ ಪೊಲೀಸರಿಗೆ ಮಾಹಿತಿ ತಿಳಿಸಿ ದೂರು ನೀಡಿರುತ್ತಾಳೆ ಇದರ ಬಗ್ಗೆ ಹಾನಗಲ್ ನಗರದ ಪೊಲೀಸರು…

ಮುಂದೆ ಓದಿ..