ಸುದ್ದಿ 

ಬೆಂಗಳೂರು ನಗರದ ಆರ್ ಕೆ ಹೆಗಡೆನಗರದಲ್ಲಿ ಸ್ಕೂಟರ್ ಕಳ್ಳತನ – ಕ್ಯಾಬ್ ಚಾಲಕರಿಂದ ದೂರು

ಬೆಂಗಳೂರು, ಜುಲೈ 7 2025 ನಗರದ ಆರ್ ಕೆ ಹೆಗಡೆನಗರದ ಬಾಲಾಜಿ ಕೃಪಾ ಲೇಔಟ್‌ನಲ್ಲಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಸ್ಥಳಾಂತರಗೊಂಡಿದ್ದ ವ್ಯಕ್ತಿಯೊಬ್ಬರು ತಮ್ಮ ಹಳೆಯ ನಿವಾಸದ ಮುಂದೆ ನಿಲ್ಲಿಸಿದ್ದ TVS NTorq ಸ್ಕೂಟರ್ ಕಳ್ಳತನವಾಗಿರುವುದಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಮ್ರಾನ್ ಅಹ್ಮದ್ ಅವರ ಮಾಹಿತಿ ಪ್ರಕಾರ, ಅವರು ಕ್ಯಾಬ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 25/05/2025ರಂದು ತಮ್ಮ KA 03 KM 5054 ನಂ ಗಣಿಯ ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಅನ್ನು ಬಾಲಾಜಿ ಕೃಪಾ ಲೇಔಟ್‌ನ 10ನೇ ಕ್ರಾಸ್, ಮನೆ ನಂ. 28ರ ಮುಂಭಾಗದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದರು. ನಂತರ ಅವರು ವಸತಿಯನ್ನು ಬದಲಾಯಿಸಿ ರಾಜಾಜಿನಗರದ ರಾಮಚಂದ್ರಪುರಕ್ಕೆ ಸ್ಥಳಾಂತರಗೊಂಡಿದ್ದರು. ಅದಾದ ನಂತರ ದಿನಾಂಕ 02/07/2025 ರಂದು ಅವರು ಹಳೆಯ ಸ್ಥಳಕ್ಕೆ ಮರಳಿದಾಗ ಸ್ಕೂಟರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ವಾಹನದ ಮೌಲ್ಯವನ್ನು ₹50,000…

ಮುಂದೆ ಓದಿ..
ಸುದ್ದಿ 

19 ವರ್ಷದ ಯುವತಿ ಪಾವನಿ ಕಾಣೆ: ಕುಟುಂಬದವರು ಆತಂಕದಲ್ಲಿ

ಬೆಂಗಳೂರು, ಜುಲೈ 7, 2025: ಬೆಂಗಳೂರು ನಗರದ ಅಸ್ಪಥ್ ನಗರ್‌ನ ಅಮರಜ್ಯೋತಿ ಲೇಔಟ್‌ನ ನಿವಾಸಿ ನಾಗಮೂರ್ತಿ ಅವರ 19 ವರ್ಷದ ಮಗಳು ಕು|| ಪಾವನಿ ಕೆ ಎನ್ ಜುಲೈ 4ರಂದು ಮನೆಯಿಂದ ಹೊರಟು ಬಳಿಕ ವಾಪಸ್ ಬಾರದೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪಾವನಿ ಅವರು ಆ ದಿನ ಬೆಳಿಗ್ಗೆ ಸುಮಾರು 11:00 ಗಂಟೆಗೆ “ಹೊರಗಡೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ನಿರ್ಗಮಿಸಿದ್ದು, ಸಂಜೆ ತನಕ ಕೂಡಾ ಮನೆಗೆ ವಾಪಸ್ ಬಾರದೇ ಇದ್ದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಅಪಾರ್ತ್‌ಮೆಂಟ್, ಪಕ್ಕದ ಬಡಾವಣೆ, ಸ್ನೇಹಿತರು, ಸಂಬಂಧಿಕರು ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಗದೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದ ಯುವತಿಯ ವಿವರಗಳು ಹೀಗಿವೆ: ಹೆಸರು: ಕು|| ಪಾವನಿ ಕೆ ಎನ್ ತಂದೆ: ನಾಗಮೂರ್ತಿ ವಯಸ್ಸು: 19 ವರ್ಷ ಉಡುಪು: ಬಿಳಿ ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ…

ಮುಂದೆ ಓದಿ..
ಸುದ್ದಿ 

ಬೈಕ್ ಕಳವು ಪ್ರಕರಣ: ಹೆಸರಘಟ್ಟದಲ್ಲಿ Yamaha RX-135 ದ್ವಿಚಕ್ರ ವಾಹನ ಕಳವು

ಹೆಸರಘಟ್ಟ, 07 ಜುಲೈ 2025:ಬೆಂಗಳೂರುನಗರ ಜಿಲ್ಲೆಯ ಹೆಸರಘಟ್ಟ ಹೋಬಳಿಯ ಐವರಕಂಡಪುರದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿದೆ. ವೆಂಕಟಾಚಲಯ್ಯ ಬಿನ್ ಮುನಿಕೃಷ್ಣಪ್ಪ (ವಯಸ್ಸು 40), ಸರ್ಕಾರಿ ಕಾಲೇಜು ಹತ್ತಿರ ವಾಸವಿದ್ದ ವೆಂಕಟಾಚಲಯ್ಯ ರವರು, ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಕೇಬಲ್ ಬಿಸಿನೆಸ್ ನಡೆಸುತ್ತಿದ್ದರು. ವೆಂಕಟಾಚಲಯ್ಯ ಅವರ ತಮ್ಮ ತಂಗಿಯ ಗಂಡನಾದ ಶ್ರೀಮೂರ್ತಿ ಅವರಿಗೆ ಸೇರಿದ Yamaha RX-135 ಬೈಕ್ (ನೋಂದಣಿ ಸಂಖ್ಯೆ: KA-04 EB-1792) ಅನ್ನು ದಿನನಿತ್ಯದ ಓಡಾಟಕ್ಕೆ ಬಳಸುತ್ತಿದ್ದು, ದಿನಾಂಕ 03.07.2025 ರಂದು ಬೆಳಿಗ್ಗೆ 10:30ರ ಸುಮಾರಿಗೆ ಹೆಸರಘಟ್ಟದ ಟಿ.ಬಿ. ಕ್ರಾಸ್ ಬಳಿ ಇರುವ ಶ್ರೀನಿವಾಸ ಕೋಳಿ ಅಂಗಡಿಯ ಮುಂಭಾಗ ಲಾಕ್‌ಮಾಡಿ ನಿಲ್ಲಿಸಿದ್ದರು. ಚಿಕಿತ್ಸೆಯ ಅಗತ್ಯದಿಂದ ಅವರು ಬಿಎಂಟಿಸಿ ಬಸ್ ಮೂಲಕ ಜಯನಗರಕ್ಕೆ ತೆರಳಿದ ಅವರು ಸಂಜೆ 06:00 ಗಂಟೆಗೆ ಮರಳಿ ಬಂದಾಗ ಬೈಕ್ ಕಣ್ಮರೆಯಾಗಿರುವುದು ಕಂಡುಬಂದಿದೆ. ಪರಿಸರದಲ್ಲಿ ಎಲ್ಲೆಡೆ ಹುಡುಕಿದರೂ ಬೈಕ್ ಪತ್ತೆಯಾಗದ ಹಿನ್ನೆಲೆಯಲ್ಲಿ, ಅಪರಿಚಿತ…

ಮುಂದೆ ಓದಿ..
ಸುದ್ದಿ 

ಮಾರುತಿ ಲೇಔಟ್‌ನಲ್ಲಿ ಅಂದರ್-ಬಾಹರ್ ಜೂಜಾಟ: ನಾಲ್ವರು ಬಂಧನ, ಇಸ್ಪೀಟ್ ಎಲೆಗಳು ಹಾಗೂ ನಗದು ವಶ

ಬೆಂಗಳೂರು, ಜುಲೈ 7— ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ಧನುಷ್ ಚಂದ್ ರವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿ, ದಿನಾಂಕ 02.07.2025 ರಂದು ಮಧ್ಯಾಹ್ನ 4:30ರ ಸುಮಾರಿಗೆ ನಡೆಯಿತು. ಇದಕ್ಕೂ ಮೊದಲು, ಪೊಲೀಸ್ ಅಧಿಕಾರಿ ಸಿದ್ದು ಶೇಗುಣಸಿ ರವರಿಗೆ ಕೊಡಗಿತಿರುಮಲಾಪುರದಿಂದ ಹುರಳಿಚಿಕ್ಕನಹಳ್ಳಿಗೆ ಹೋಗುವ ರಸ್ತೆಯ ಮಾರುತಿ ಲೇಔಟ್‌ನಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮರದ ಕೆಳಗೆ ವೃತ್ತಾಕಾರವಾಗಿ ಕುಳಿತುಕೊಂಡು ಅಂದರ್-ಬಾಹರ್ ಆಟವಾಡುತ್ತಿದ್ದ ನಾಲ್ವರನ್ನು ನೆರೆದು ಬಂಧಿಸಿದರು. ಜೂಜಾಟದಲ್ಲಿ ಬಳಸಲಾಗುತ್ತಿದ್ದ 52 ಇಸ್ಪೀಟ್ ಎಲೆಗಳು, ಒಂದು ಹಳೆಯ ಪೇಪರ್ ಹಾಗೂ ₹3,140 ನಗದು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಬೈಕ್ ಕಳ್ಳತನ – 2017ರ ಹೊಂಡಾ ಡಿಯೋ ಕಳವು

ಬೆಂಗಳೂರು, ಜುಲೈ 7: ನಗರದಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನದ ಘಟನೆ ನಡೆದಿದೆ. 2017ರ ಮಾದರಿಯ ಹೊಂಡಾ ಡಿಯೋ ಬೈಕ್‌ನ್ನು ಮನೆಯ ಮುಂದಿನಿಂದ ಕಳ್ಳರು ಕಳವು ಮಾಡಿರುವ ಘಟನೆ ದಿನ ಬೆಳಕಿಗೆ ಬಂದಿದೆ. ಶ್ವೇತಾ ರವರು ತಮ್ಮ ದಿನನಿತ್ಯದ ಪ್ರಯಾಣಕ್ಕೆ ಬಳಸುತ್ತಿದ್ದ ಹೊಂಡಾ ಡಿಯೋ (ನೋಂದಣಿ ಸಂಖ್ಯೆ KA-04-JN-3035) ಬೈಕ್‌ನ್ನು ಜುಲೈ 2, 2025 ರಂದು ರಾತ್ರಿ ಸುಮಾರು 10 ಗಂಟೆಗೆ ತಮ್ಮ ನಿವಾಸದ ಮುಂಭಾಗ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಜುಲೈ 3ರಂದು ಬೆಳಿಗ್ಗೆ 8:30 ಸಮಯದಲ್ಲಿ ಕೆಲಸಕ್ಕೆ ಹೊರಡುವಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣಿಸದೇ ಹೋದ ಬಗ್ಗೆ ತಿಳಿದುಬಂದಿದೆ. ಬೈಕ್ ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ, ಬೈಕ್ ಕಳ್ಳತನವಾಗಿರುವ ಶಂಕೆಯೊಂದಿಗೆ ಶ್ವೇತಾರವರು ಸೋಲದೇವನ ಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ವಾಹನದ ಮಾಹಿತಿ: ಮಾದರಿ: Honda Dio ನೋಂದಣಿ ಸಂಖ್ಯೆ: KA-04-JN-3035 ಚಾಸಿಸ್…

ಮುಂದೆ ಓದಿ..
ಸುದ್ದಿ 

ಶ್ರೀಶೈಲ ಹೋಟೆಲ್‌ ಬುಕಿಂಗ್ ನೆಪದಲ್ಲಿ 77,600 ರೂ. ಮೋಸ – ಬೆಂಗಳೂರಿನಲ್ಲಿ ವ್ಯಕ್ತಿಯಿಂದ ದೂರು

ಬೆಂಗಳೂರು, 7 ಮೇ 2025: ನಗರ ನಿವಾಸಿಯೊಬ್ಬರು ಶ್ರೀಶೈಲದ ಹೋಟೆಲ್‌ನಲ್ಲಿ ರೂಮ್ ಬುಕಿಂಗ್ ಮಾಡುವ ನೆಪದಲ್ಲಿ 77,600 ರೂಪಾಯಿ ಮೊತ್ತವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಜಯನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀ ರಮೇಶ್ ಅವರು ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆ (ಖಾತೆ ಸಂಖ್ಯೆ: 914010057499191) ಬಳಸಿ, ದಿನಾಂಕ: 22.05.2025 ರಂದು ಆಂಧ್ರ ಪ್ರದೇಶದ ಶ್ರೀಶೈಲಾ ದೇವಸ್ಥಾನದ ಬಳಿಯ ಹರಿತಾ ಹೋಟೆಲ್ ಅಂಡ್ ರೆಸಾರ್ಟ್‌ನಲ್ಲಿ ರೂಮ್‌ ಬುಕಿಂಗ್ ಮಾಡಲು ಪ್ರಯತ್ನಿಸಿದರು. ಹೋಟೆಲ್ ಸಿಬ್ಬಂದಿಯಾಗಿ ಪರಿಚಯಿಸಿಕೊಂಡ ವ್ಯಕ್ತಿಗಳು ಫೋನ್‌ಪೇ ಮೂಲಕ ಪಾವತಿ ಮಾಡಲು ಆಗ್ರಹಿಸಿದ್ದು, ನಂಬಿದ ರಮೇಶ್ ಅವರು ಹಂತ ಹಂತವಾಗಿ ಒಟ್ಟು ₹77,600 ಹಣವನ್ನು ವರ್ಗಾಯಿಸಿದರು. ಆದರೆ ನಂತರ ಯಾವುದೇ ರೂಮ್‌ ಕಾನ್ಫರ್ಮೇಶನ್ ದೊರಕದೇ ಹೋದಿದ್ದು, ಹೋಟೆಲ್ ಸಂಪರ್ಕಕ್ಕೂ ಸಿಗದೆ ಮೋಸವಾಗಿ ಹೋಗಿದ್ದಾರೆ ಎಂದು ಪಿರ್ಯಾದಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸಂಜಯ ನಗರ…

ಮುಂದೆ ಓದಿ..
ಸುದ್ದಿ 

ನಕಲಿ ಬ್ರಾಂಡ್ ಬಟ್ಟೆ ಮಾರಾಟ – ಕಂಪನಿಯಿಂದ ಕಾನೂನು ದೂರು

ಬೆಂಗಳೂರು, ಜುಲೈ7,2025: ಪ್ರಸಿದ್ಧ ಫ್ಯಾಷನ್ ಬ್ರಾಂಡ್‌ಗಳಾದ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಅಂಗಡಿಯ ವಿರುದ್ಧ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶ್ರೀ ಸುರೇಶ್ ಕುಮಾರ್ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿರುವುದಂತೆ, ಅವರು ಬೆಂಗಳೂರಿನ ಸ್ಟೈಲ್ರ್ಸ್ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಚೀಫ್ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಂಪನಿಗೆ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಎಂಬ ಬಟ್ಟೆ ಬ್ರಾಂಡ್‌ಗಳ ಮಾಲೀಕತ್ವವಿದೆ. ದಿನಾಂಕ 24/06/2025 ರಂದು, ಸಂಜಯನಗರ ಮುಖ್ಯರಸ್ತೆಯಲ್ಲಿರುವ ಅರುಣ್ ಅಡ್ಡ ಎಂಬ ಬಟ್ಟೆ ಅಂಗಡಿಯಲ್ಲಿ ಕಂಪನಿಯ ಬ್ರಾಂಡ್ ಹೆಸರುಗಳನ್ನು ನಕಲು ಮಾಡಿ ಬಟ್ಟೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅವರಿಗೆ ಲಭಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕಂಪನಿಯಿಂದ ಅಧಿಕೃತ ನಿರ್ದೇಶನ ನೀಡಲಾಗಿತ್ತು. ದಿನಾಂಕ 25/06/2025 ರಂದು ಮಧ್ಯಾಹ್ನ ಸುಮಾರು 12:30ರ…

ಮುಂದೆ ಓದಿ..
ಸುದ್ದಿ 

ಜಕ್ಕೂರಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ: ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರು ವಶಕ್ಕೆ

ಬೆಂಗಳೂರು, ಜುಲೈ 7, 2025:ಜಕ್ಕೂರಿನ ಕೆ.ವಿ ಜಯರಾಮ್ ರಸ್ತೆಯಲ್ಲಿ ಒಂದು ಕಾರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತೆ ನಿಲ್ಲಿಸಲಾಗಿದ್ದು, ಪೊಲೀಸರು ಆ ವಾಹನವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 04.07.2025 ರಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ, ಹೆಡ್ ಕಾನ್ಸ್‌ಟೆಬಲ್ ಗುರುಪ್ರಸಾದ್ ಎಂ.ಆರ್ (ಎಚ್.ಸಿ 12280) ಹಾಗೂ ಉಪ ನಿರೀಕ್ಷಕ ಶ್ರೀ ಸುರೇಶ್ ಎಲ್ ಅವರು ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ಕೃಷ್ಣರಾಜ ಸಾಗರ ಹೋಟೆಲ್ ಬಳಿ, ಲಿಕ್ಕರ್ ಟಾಪ್ ಎಂ.ಆರ್.ಪಿ ಬಾರ್ ಎದುರು KA-03-NA-3253 ನಂಬರ್‌ನ ಕಾರು ರಸ್ತೆಯಲ್ಲೇ ನಿಲ್ಲಿಸಲಾಗಿದ್ದು, ಇದು ವಾಹನಗಳ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯುಂಟುಮಾಡುತ್ತಿರುವುದು ಗಮನಕ್ಕೆ ಬಂತು. ಪೊಲೀಸರು ಸ್ಥಳದಲ್ಲೇ ವಾಹನದ ಚಾಲಕನ ಮಾಹಿತಿ ತಿಳಿದುಕೊಳ್ಳಲು ಯತ್ನಿಸಿದರೂ ಯಾವುದೇ ವಿವರ ಸಿಕ್ಕಿಲ್ಲ. ಇದರಿಂದ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು, ಚಾಲಕನ ವಿರುದ್ಧ ಕಾನೂನು ಕ್ರಮ…

ಮುಂದೆ ಓದಿ..
ಸುದ್ದಿ 

ಬೈಕ್ ಕಳವು ಪ್ರಕರಣ: ವಾಡಿಕೆದಾರನ ದ್ವಿಚಕ್ರ ವಾಹನ ಕಳ್ಳತನ

ಬೆಂಗಳೂರು, 7 ಮೇ 2025:ನಗರದ ಸೀತಪ್ಪ ಲೇಔಟ್ ಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳವುಗೆ ಸಂಬಂಧಿಸಿದ ಪ್ರಕರಣವೊಂದು ದಾಖಲಾಗಿದೆ. ಸೋನು ಬಿಗಿನ್ ತಮ್ಮ ದೂರಿನಲ್ಲಿ ಅವರು ಬಾಡಿಗೆ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ತಮ್ಮ ಹೆಸರಿನಲ್ಲಿ ಖರೀದಿಸಿದ 2022ನೇ ಸಾಲಿನ SPLENDOR+ ಮೋಟಾರ್‌ಸೈಕಲ್ (ರಿಜಿಸ್ಟ್ರೇಷನ್ ಸಂಖ್ಯೆ: KA04KJ6442) ಅನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ತಮ್ಮ ದೂರಿನಲ್ಲಿ, ದಿನಾಂಕ 31.05.2025 ರಂದು ಮಧ್ಯಾಹ್ನ 1 ಗಂಟೆಗೆ ಕೆಲಸಕ್ಕೆ ಹೋದ ಬಳಿಕ, ಅವರ ಜೊತೆಯಲ್ಲಿ ಕೆಲಸಮಾಡುವ ಮಟೋಲಿ ಎಂಬುವವರ ಮನೆ (ಸೀತಪ್ಪ ಲೇಔಟ್, 3ನೇ ಕ್ರಾಸ್, ಮನೆ ನಂ.43) ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಮಧ್ಯಾಹ್ನ 3 ಗಂಟೆಗೆ ಬಂದು ನೋಡಿದಾಗ, ವಾಹನ ಹತ್ತಿರ ಕಾಣಿಸಿಕೊಂಡಿಲ್ಲ. ಅವರು ವಾಹನವನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಕಳವುಗೊಂಡ ವಾಹನದ ವಿವರಗಳು ಹೀಗಿವೆ:ಮಾಡೆಲ್: 06/2022 SPLENDOR+ 13S DR.CST.SSಚೆಸಿಸ್…

ಮುಂದೆ ಓದಿ..
ಸುದ್ದಿ 

ಕೆ ಆರ್ ಪಕ್ಷ ಇದುವರೆಗೂ ಮಾಡಿದ್ದು ಕಾನೂನಿನ ವಿರುದ್ಧ ಹೋರಾಟವೇ.

ಆತ್ಮೀಯ ಬಂಧುಗಳೇ, KRS ಪಕ್ಷದ ವಿರುದ್ಧ ಮತ್ತು ಪಕ್ಷದ ಕಾರ್ಯಕರ್ತ/ಪದಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುವ, ಸುಳ್ಳುಕೇಸುಗಳನ್ನು ದಾಖಲಿಸುವ, ಸಾರ್ವಜನಿಕವಾಗಿ ಅವಮಾನಿಸುವ ಷಡ್ಯಂತ್ರಗಳು ಕೆಲವರಿಂದ ರೂಪುಗೊಳ್ಳುತ್ತಿವೆ ಎನ್ನುವ ಖಚಿತ ಮಾಹಿತಿಗಳು ನಮಗೆ ದೊರಕಿವೆ. ನೀತಿಭ್ರಷ್ಟ, ಅಯೊಗ್ಯ, ಜನವಿರೋಧಿ ರಾಜಕಾರಣಿಗಳು ಮತ್ತು ಭ್ರಷ್ಟ, ಅದಕ್ಷ, ಲಂಚಕೋರ ಅಧಿಕಾರಿಗಳು ಈ ಪಿತೂರಿಗಳ ಭಾಗವಾಗಿರುವುದು ಹಾಗೂ ವಿವಿಧ ಸರ್ಕಾರಿ ಅಂಗಗಳನ್ನು ಮತ್ತು ಮಾಧ್ಯಮಗಳನ್ನು ಅದಕ್ಕಾಗಿ ಬಳಸಲಿರುವುದು ನಮಗೆ ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ KRS ಪಕ್ಷದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ವಿಚಾರವಾಗಿ ನಾನು ಇಲ್ಲಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದ್ದೇನೆ. ಪಕ್ಷದ ಎಲ್ಲಾ ಶಿಸ್ತಿನ ಸಿಪಾಯಿಗಳು ದಯವಿಟ್ಟು ಇದನ್ನು ಗಮನಿಸಬೇಕು ಮತ್ತು ಪಾಲಿಸಬೇಕು ಎಂದು ಈ ಮೂಲಕ ಕೋರುತ್ತೇನೆ. ? ನಿಮ್ಮ ನೆಂಟರು ಅಥವ ಆಪ್ತರಲ್ಲದ ಯಾವುದೇ ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕ ಕೆಲಸಕ್ಕಾಗಿ ಖಾಸಗಿಯಾಗಿ ಭೇಟಿ…

ಮುಂದೆ ಓದಿ..