ಸುದ್ದಿ 

ಅತಿವೇಗದ ಲಾರಿ ಡಿಕ್ಕಿ: ಮೂರು ವಾಹನಗಳಿಗೆ ಹಾನಿ, ವ್ಯಕ್ತಿಗೆ ಗಾಯ

Taluknewsmedia.com

Taluknewsmedia.comಧಾರವಾಡ: ದಿನಾಂಕ 22.06.2025 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಧಾರವಾಡ ಪಿಬಿ ರಸ್ತೆಯ ಎನ್‌ಟಿಟಿಎಫ್ ಬಿಆರ್‌ಟಿಎಸ್ ಬಸ್‌ಸ್ಟಾಪ್ ಹತ್ತಿರ ಭೀಕರ ಅಪಘಾತ ನಡೆದಿದೆ. ಉತ್ತರಪ್ರದೇಶ ಮೂಲದ ಪ್ರಮೋದಕುಮಾರ್ (ತಂದೆ: ರಾಜೇಂದ್ರಸಿಂಗ್) ಎಂಬಾತನು ತಾನೇ ಚಲಾಯಿಸುತ್ತಿದ್ದ ಟಾಟಾ ಕಂಪನಿಯ ಲಾರಿ (ನಂ. ಆರ್ ಜೆ-14/ಜಿಆರ್-3521)ಯನ್ನು ಜುಬ್ಲಿ ಸರ್ಕಲ್ ದಿಂದ ಹುಬ್ಬಳ್ಳಿ ಕಡೆಗೆ ಅತ್ಯಧಿಕ ವೇಗದಲ್ಲಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಲಾರಿ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಟಾಟಾ ಕಂಪನಿಯ ಕಾರು (ನಂ. ಕೆಎ-65/ಎಮ್-0972)ಗೆ ಡಿಕ್ಕಿ ಹೊಡೆದು ವಾಹನಕ್ಕೆ ಹಾನಿ ಮಾಡಿದ್ದಾನೆ. ಆ ನಂತರವೇ ಸಹ ನಿಯಂತ್ರಣ ತಪ್ಪಿ ಮುಂದೆ ಹೋಗಿ ಮತ್ತೊಂದು ಮಾರುತಿ ಕಂಪನಿಯ ಕಾರು (ನಂ. ಕೆಎ-25/ಪಿ-6675)ಗೆ ಡಿಕ್ಕಿ ಹೊಡೆದಿದ್ದು, ಆ ಕಾರಿನ ಸವಾರ ರವಿ (ತಂದೆ: ಶೇಖರಯ್ಯ ಸಿದಾಟಗಿಮಠ, ವಯಸ್ಸು: 48, ನಿವಾಸಿ ಮಾಳಮಡಿ, ಧಾರವಾಡ) ಅವರಿಗೆ ಸಾದಾ ಗಾಯಗಳು…

ಮುಂದೆ ಓದಿ..
ಅಂಕಣ 

ನಾವು ಯಾರು ? ನಮ್ಮ ಯೋಗ್ಯತೆ ಏನು ?.

Taluknewsmedia.com

Taluknewsmedia.comನಾವು ಯಾರು ? ನಮ್ಮ ಯೋಗ್ಯತೆ ಏನು ?……… ಕೆಲವರ ಬಗ್ಗೆ ಹಲವು ಉದಾಹರಣೆಗಳು……. ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ…. ಮೂಕ ಪ್ರಾಣಿಗಳಿಗೆ ಆಹಾರದಲ್ಲಿ ವಿಷವಿಕ್ಕುವ ಅನಾಗರಿಕರು ನಾವು ಅನಾಗರಿಕರು………. ಅನ್ನಭಾಗ್ಯದ ಹಸಿದ ಹೊಟ್ಟೆಯ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು…. ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು….. ಬುದ್ಧಿಮಾಂದ್ಯ ಬೀದಿ ಹೆಣ್ಣಿನ ಅತ್ಯಾಚಾರ ಮಾಡುವ ಕೀಚಕರು ನಾವು ಕೀಚಕರು…… ವೃದ್ಧಾಪ್ಯದ ಪಿಂಚಣಿಯಲ್ಲಿ ಕಮೀಷನ್ ಹೊಡೆಯುವ ಕಿರಾತಕರು ನಾವು ಕಿರಾತಕರು…… ಡೆತ್ ಸರ್ಟಿಫಿಕೇಟ್ ನೀಡಲೂ ಲಂಚ ಪಡೆಯುವ ಭ್ರಷ್ಟರು ನಾವು ಭ್ರಷ್ಟರು…… ಗಂಡ ಹೆಂಡತಿಯ ಸ್ವಾರ್ಥಕ್ಕಾಗಿ ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವ ಕೊಳಕರು ನಾವು ಕೊಳಕರು…… ಹಣಕ್ಕಾಗಿ ಮನುಷ್ಯನ ಕಿಡ್ನಿಯನ್ನೇ ಕದಿಯುವ ಕಟುಕರು ನಾವು ಕಟುಕರು…… ಮೂರು ವರ್ಷದ ಹಸುಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡುವ ರಾಕ್ಷಸರು ನಾವು…

ಮುಂದೆ ಓದಿ..
ಸುದ್ದಿ 

ಸ್ನಾಪ್‌ಡೀಲ್‌ ಕಾರ್‌ ಕವರ್ ಖರೀದಿಸಿ ಹಣ ಕಳೆದುಕೊಂಡ ಗ್ರಾಹಕ – ಸೈಬರ್ ವಂಚನೆ ಪ್ರಕರಣ

Taluknewsmedia.com

Taluknewsmedia.comಸ್ನಾಪ್‌ಡೀಲ್‌ನಿಂದ ಕಾರ್ ಕವರ್ ಖರೀದಿಸಿ ನಂತರ ಹಣವನ್ನು ಕಳೆದುಕೊಂಡಿರುವ ಘಟನೆ ನಾಡಿನಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಹೆಚ್ಚುತ್ತಿರುವ ಅಂಶಕ್ಕೆ ಮತ್ತೊಂದು ಉದಾಹರಣೆ ನೀಡಿದೆ. ಪ್ರಜ್ವಲ್ ರವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಅವರು ಆನ್‌ಲೈನ್‌ ಖರೀದಿ ವೇದಿಕೆ Snapdeal ಮೂಲಕ ಕಾರ್ ಕವರ್ ಖರೀದಿಸಿದ್ದರು. ಆದರೆ ಅದು ಹಾನಿಯಾಗಿರುವುದರಿಂದ ವಾಪಸ್ಸು ಮಾಡಿದ್ದಾರೆ. ವಾಪಸ್ಸು ಮಾಡಿದರೂ 7 ದಿನಗಳವರೆಗೆ ಹಣ ಜಮೆಯಾಗದ ಕಾರಣ, ಅವರು ನೀಡಲಾಗಿದ್ದ ಸಹಾಯವಾಣಿ ಸಂಖ್ಯೆಗಳಿಗೆ (8167899758, 7975747448) ಕರೆಮಾಡಿದರು. ಅಲ್ಲಿಂದ ಬಂದ ಕರೆಗಳಲ್ಲಿ ತಮ್ಮ ಮೊಬೈಲ್‌ನಲ್ಲಿ ಫೋನ್‌ಪೇ ಅಪ್ಲಿಕೇಶನ್ ತೆರೆಯಲು ಹಾಗೂ UPI ಆಯ್ಕೆಯನ್ನು ಕ್ಲಿಕ್ ಮಾಡಲು ಸೂಚನೆ ನೀಡಲಾಗಿದ್ದು, ಅವರು ನೀಡಿದ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡ ಸೈಬರ್ ವಂಚಕರು, ದಿನಾಂಕ 15-06-2025 ರಂದು ಸಂಜೆ 5:59 ಗಂಟೆಗೆ ದೂರುದಾರರ ಖಾತೆ 91900100011594 ಇಂದ ₹85,954ನ್ನು IDBI ಬ್ಯಾಂಕ್‌ನ Nimesh Reang (ಖಾತೆ ಸಂಖ್ಯೆ: 122710400011231455)…

ಮುಂದೆ ಓದಿ..
ಸುದ್ದಿ 

ನಿವೃತ್ತ ಪೊಲೀಸ್ ಅಧಿಕಾರಿಯ ಮನೆಯಿಂದ ಗ್ಯಾಸ್ ಸಿಲಿಂಡರ್ ಕಳವು

Taluknewsmedia.com

Taluknewsmedia.comವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಬೊಮ್ಮಸಂದ್ರದ ವೈಷ್ಣವಿ ನಿಲಯದಲ್ಲಿ ಗ್ಯಾಸ್ಸು ಸಿಲಿಂಡರ್ ಕಳವು ಪ್ರಕರಣ ವರದಿಯಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಶ್ರೀ ರಾಮ್ ಶೆಟ್ಟಿ ಅವರು ನೀಡಿರುವ ದೂರಿನ ಆಧಾರದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಶ್ರೀ ರಾಮ್ ಶೆಟ್ಟಿ (72 ವರ್ಷ) ಅವರು ತಮ್ಮ ಕುಟುಂಬದೊಂದಿಗೆ ದೊಡ್ಡ ಬೊಮ್ಮಸಂದ್ರದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದಾರೆ. ತಮ್ಮ ಮಗಳು ರಮ್ಯ ರಾಮ್ ಶೆಟ್ಟಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಅವರು ವಾಸಿಸುವ ಬ್ಲಾಕ್‌ನಲ್ಲಿ ಮೂರು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಎಲ್ಲಾ ಮನೆಗಳ ಗ್ಯಾಸ್ಸು ಸಿಲಿಂಡರ್ ಸಂಪರ್ಕಗಳನ್ನು ನೆಲಮಹಡಿಯಲ್ಲಿ ಅಳವಡಿಸಲಾಗಿತ್ತು. ದಿನಾಂಕ 25 ಮೇ 2025 ರ ರಾತ್ರಿ 11 ಗಂಟೆಗೆ ಮನೆಯವರು ಮಲಗಿದ ನಂತರ, 26 ಮೇ ಬೆಳಗ್ಗೆ 6 ಗಂಟೆಗೆ ಎದ್ದು ಅಡಿಗೆ ಮಾಡಲು ಸಿಲಿಂಡರ್ ಬಳಸಲು ಯತ್ನಿಸಿದಾಗ,…

ಮುಂದೆ ಓದಿ..
ಸುದ್ದಿ 

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದರು

Taluknewsmedia.com

Taluknewsmedia.comಅಮೃತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವು ಗಂಭೀರ ಆರೋಪಗಳಲ್ಲಿ ತಲೆಮರೆಸಿಕೊಂಡಿದ್ದ ಶ್ರೀನಿವಾಸ್ @ ಕೋಟೆ (ವಯಸ್ಸು 58), ತಂದೆ ನಂಜುಡಪ್ಪ, ನಿವಾಸಿ ಗಿಂಗ್ರಪ್ಪ ಲೇಔಟ್, ಶ್ರೀರಾಮಪುರ, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಸಾಮಿ ವಿರುದ್ಧ 307, 324, 323, 504, 506 r/w 34 IPC ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಮಾನ್ಯ ಎಸಿಎಿಎಂಎ 7ನೇ ನ್ಯಾಯಾಲಯವು ಉದ್ಯೋಷಣೆ ಹೊರಡಿಸಿತ್ತು. ಜಾಮೀನಿನಲ್ಲಿ ಬಿಡುಗಡೆಯಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಪೊಲೀಸ್ ಸಿಬ್ಬಂದಿ ಎಎಸ್‌ಐ ಶ್ರೀ ಚಿನ್ನಪ್ಪ ಹಾಗೂ ಹೆಡ್ ಕಾನ್ಸ್ಟೆಬಲ್ 11367 ದೇವರಾಜ್ ಅವರು, ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ, 18 ಜೂನ್ 2025ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ವೆಂಕಟೇಗೌಡ ಲೇಔಟ್‌ನ ಮಸೀದಿ ಪಕ್ಕದ ಮನೆ ಬಳಿ ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿ ಠಾಣೆಗೆ ಕರೆತರಲಾಯಿತು. ಆಸಾಮಿಯ ವಿರುದ್ಧ ನ್ಯಾಯಾಲಯದ ಆದೇಶದ ಪ್ರಕಾರ ಮುಂದಿನ ಕಾನೂನು ಕ್ರಮ…

ಮುಂದೆ ಓದಿ..
ಸುದ್ದಿ 

ಹೂಡಿಕೆ ಹೆಸರಿನಲ್ಲಿ ಆನ್‌ಲೈನ್ ವಂಚನೆ – ಮಹಿಳೆಯಿಂದ ₹1.96 ಲಕ್ಷ ವಂಚನೆ

Taluknewsmedia.com

Taluknewsmedia.comಅಮೃತಹಳ್ಳಿ ನಿವಾಸಿಯೊಬ್ಬರು ಆನ್‌ಲೈನ್ ವಂಚಕರಿಗೆ ₹1,96,800/- ಹಣವನ್ನು ಕಳೆದುಕೊಂಡಿರುವ ಘಟನೆ ಪ್ರಕರಣವಾಗಿ ದಾಖಲಾಗಿದೆ. ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಮೂಲಕ ಸಂಪರ್ಕ ಸಾಧಿಸಿ “ಸ್ಪಾರ್ಕ್ ಹೂಡಿಕೆ” ಎನ್ನುವ ಹೆಸರಿನಲ್ಲಿ ಆಕೆಯನ್ನು ಮೋಸಗೊಳಿಸಲಾಗಿದೆ. ಶ್ವೇತಾ ಸಂಜೀವಯ್ಯ ರವರು ನೀಡಿದ ದೂರಿನ ವಿವರಗಳ ಪ್ರಕಾರ, 14/06/2025 ರಂದು ಬೆಳಿಗ್ಗೆ 11:00 ಗಂಟೆಗೆ ವಾಟ್ಸಾಪ್ ಮೂಲಕ ವಿದೇಶಿ ನಂಬರಿನಿಂದ ಒಂದು ಸಂದೇಶ ಬಂದಿದೆ. ‘ಹಣ ಗಳಿಸಲು ಅವಕಾಶ’ ಎಂಬ ಆಮಿಷದೊಂದಿಗೆ, ಪ್ರಾರಂಭದಲ್ಲಿ ರೆಸ್ಟೋರೆಂಟ್‌ಗಳಿಗೆ ವಿಮರ್ಶೆ ಬರೆಯುವ ಕೆಲಸ ನೀಡಲಾಗುತ್ತಿತ್ತು. ನಂತರ “ಸೀನಿಯರ್ ಹೂಡಿಕೆ ಗುಂಪು” ಎಂಬ ಟೆಲಿಗ್ರಾಂ ಗುಂಪಿಗೆ ಸೇರಿಸಿ ಹೆಚ್ಚಿನ ಹಣ ಹೂಡಿಕೆಗೆ ಪ್ರೇರಣೆ ನೀಡಲಾಯಿತು. ಶ್ವೇತಾ ಸಂಜೀವಯ್ಯ ರವರು ದಿನಾಂಕ 14 ರಿಂದ 16 ಜೂನ್ 2025ರೊಳಗೆ ತಮ್ಮ ಖಾತೆಯಿಂದ HDFC ಬ್ಯಾಂಕಿನ ಶ್ವೇತಾ ಎಂಬ ಹೆಸರಿನ ಖಾತೆಗೆ ₹1,96,800/- ಹಣವನ್ನು UPI ಹಾಗೂ NEFT ಮುಖಾಂತರ ವರ್ಗಾಯಿಸಿದ್ದಾರೆ. ಹಣ…

ಮುಂದೆ ಓದಿ..
ಸುದ್ದಿ 

ಮನೆಯಿಂದ ಕಾಣೆಯಾದ 15 ವರ್ಷದ ಬಾಲಕಿ – ತಾಯಿಯ ಮನವಿಗೆ ಪೋಲಿಸರ ಗಮನ

Taluknewsmedia.com

Taluknewsmedia.comದೇವನಹಳ್ಳಿ ತಾಲೂಕಿನ ಹೀರಾ ನಂದಿನಿ ಅಪಾರ್ಟ್ಮೆಂಟ್‌ನಿಂದ 15 ವರ್ಷದ ಬಾಲಕಿ ಕಾಣೆಯಾಗಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ತಾಯಿ ಠಾಣೆಗೆ ನೀಡಿದ ದೂರಿನ ಪ್ರಕಾರ, ಬಾಲಕಿ ನೀಲುಫರ್ ಬಿ, ಈ ವರ್ಷ 10ನೇ ತರಗತಿ ಪರೀಕ್ಷೆ ನಿರ್ವಹಿಸಿದ್ದರೂ ಉತ್ತೀರ್ಣವಾಗಿಲ್ಲ. ಈಗಾಗಲೇ ಶಾಲೆಯಿಂದ ವಿರಾಮ ತೆಗೆದುಕೊಂಡು ಮನೆಯಲ್ಲಿಯೇ ಟ್ಯೂಷನ್ ಪಡೆಯುತ್ತಿದ್ದಳು. ದಿನಾಂಕ 18-06-2025 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ತಾಯಿ ಅನಾರೋಗ್ಯದಿಂದ ಮಲಗಿದ್ದು, ಆಕೆ ಮಗಳೊಂದಿಗೆ ಮಲಗಿದ್ದಾಳೆ. ಮದ್ಯಾಹ್ನ 1:30ರ ಸುಮಾರಿಗೆ ಟ್ಯೂಷನ್ ಶಿಕ್ಷಕ ಮನೆಗೆ ಬಂದು ಬಾಗಿಲು ತಟ್ಟಿದಾಗ ತಾಯಿ ಎದ್ದಿದ್ದು, ಮಗಳು ಮನೆಯಲ್ಲಿಲ್ಲವನ್ನೂ ಅರಿತು ಅಚ್ಚರಿಗೊಂಡಿದ್ದಾರೆ. ತಕ್ಷಣ ತಾಯಿ ಹಾಗೂ ಕುಟುಂಬಸ್ಥರು ಬಾಗಲೂರು, ಬಾಗಲೂರು ಕ್ರಾಸ್, ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಹುಡುಕಾಟ ನಡೆಸಿದರೂ ನೀಲುಫರ್ ಸಿಗಲಿಲ್ಲ. ಮಗಳ ಮೊಬೈಲ್ ಸಂಖ್ಯೆ 8971412663 ಸಂಪರ್ಕ ಸಾಧ್ಯವಿಲ್ಲದೆ ಸಿಚ್‌ಆಫ್ ಆಗಿದ್ದು, ಯಾವುದೇ…

ಮುಂದೆ ಓದಿ..
ಸುದ್ದಿ 

ದ್ವಿಚಕ್ರ ವಾಹನ ಕಳವು ಪ್ರಕರಣ – ಗಂಭೀರ ತನಿಖೆ ಆರಂಭ

Taluknewsmedia.com

Taluknewsmedia.comಗೌರಿಬಿದನೂರಿನ ತಾಲೂಕ್ ತೌಸಮಾಕಲಹಳ್ಳಿ ಗ್ರಾಮದ ನಿವಾಸಿಯಾದ ನವೀನ್ ಕುಮಾರ T.V ರವರು ಜೈಪುರದ ಬಳಿ ಇರುವ ನಾಟಿ ರುಚಿ ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕನೊಬ್ಬನ ಬೈಕ್ ಕಳವುಗೆ ಒಳಗಾಗಿದೆ. ಆರೋಪಿಯು ತನ್ನ ಹೆಸರಿನಲ್ಲಿ ನೋಂದಾಯಿತ ಬಜಾಜ್ ಪಲ್ಸರ್ ಬೈಕ್ (ನಂ: ಕೆಎ-50-ಎನ್-2659) ಅನ್ನು ದೊಡ್ಡ ಜಾಲದಲ್ಲಿರುವ ಸ್ನೇಹಿತ ಮಂಜುನಾಥ ಡಿ.ಜಿ. ರವರ ಮನೆಯ ಬಳಿ ನಿಲ್ಲಿಸಿದ್ದನು. ದಿನಾಂಕ 15/06/2025 ರಂದು ಬೆಳಿಗ್ಗೆ ಬೈಕ್ ನೋಡಲು ಹೋದಾಗ, ಅದು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿದ್ದು, ತಕ್ಷಣ ಸ್ನೇಹಿತನ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ 04:40 ರಿಂದ 04:50ರ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಕಳ್ಳತನ ಮಾಡಿರುವುದು ದೃಢಪಟ್ಟಿದೆ. ನವೀನ್ ಕುಮಾರ್ ಹಾಗೂ ಸ್ನೇಹಿತರು ಅನೇಕ ಕಡೆ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗದ ಕಾರಣ, ತಡವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ವ್ಯಕ್ತಿಯ ಆತ್ಮಹತ್ಯೆ? ಕುಟುಂಬಸ್ಥರಿಂದ ಅನುಮಾನ ವ್ಯಕ್ತ.

Taluknewsmedia.com

Taluknewsmedia.comಯಲಹಂಕದ ಬಳಿ ಇರುವ ಖಾಸಗಿ ಜಾಗೃತಿ ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಇಗ್ನಿಸಿಯಸ್ ಸಭಾಸ್ಟಿಯನ್ ಪರ್ಟಾಡೋ ಎಂದು ಗುರುತಿಸಲಾಗಿದ್ದು, ಅವರು ಮದ್ಯಪಾನ ವ್ಯಸನದಿಂದ ಪೀಡಿತರಾಗಿದ್ದರಿಂದ ದಿನಾಂಕ 11 ಜೂನ್ 2025 ರಂದು ರಿಹಾಬ್ ಸೆಂಟರ್‌ಗೆ ದಾಖಲಿಸಲಾಗಿತ್ತು. ದಿನಾಂಕ 16 ಜೂನ್ 2025 ರಂದು ಸಂಜೆ 6:30ರ ವೇಳೆಗೆ ರಿಹಾಬ್ ಸಿಬ್ಬಂದಿಯಿಂದ ಮೃತರ ಕುಟುಂಬಕ್ಕೆ ಕರೆ ಮಾಡಿ, ಅವರು ತಮ್ಮ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ತಕ್ಷಣ ಚಿಕಿತ್ಸೆ ನೀಡಿದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಮೃತರ ಸಹೋದರರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಈ ಘಟನೆಯ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. “ಸೆಂಟರ್‌ನಲ್ಲಿ ಮೊಬೈಲ್ ಚಾರ್ಜರ್, ವೈರ್, ಬ್ಲೇಡ್ ಮುಂತಾದ ಆತ್ಮಹತ್ಯೆಗೆ ಬಳಸಬಹುದಾದ ವಸ್ತುಗಳನ್ನು ವಾಪಸ್ ಪಡೆದುಕೊಂಡು, ಬೆಲ್ಟ್…

ಮುಂದೆ ಓದಿ..
ಸುದ್ದಿ 

ಕೋಗಿಲು ಕ್ರಾಸ್ ಬಳಿ ಬಾರ್ ಮೇಲೆ ಪೀಸ್ ಪೊಲೀಸ್ ದಾಳಿ: ಅಕ್ರಮ ಮದ್ಯ ಮಾರಾಟ ಪತ್ತೆ

Taluknewsmedia.com

Taluknewsmedia.comನಗರದ ಯಲಹಂಕದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕೋಗಿಲು ಕ್ರಾಸ್ ಬಳಿಯ Siri Spirit Bar ನಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಾರ್ ತೆರೆಯುವ ಮೂಲಕ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಪೊಲೀಸರು ಸ್ಥಳದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ಮುಂಜಾನೆ 4:00 ರಿಂದ 8:00 ಗಂಟೆಯವರೆಗೆ ಜನಸಾಮಾನ್ಯರು ವಾಕಿಂಗ್ ಮಾಡುವ ಪ್ರದೇಶಗಳಲ್ಲಿ ವಿಶೇಷ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಪಿ.ಸಿ. 19261 ಹಾಗೂ ಸಿ.11190 ರವರು ಗಸ್ತು ಹೊಡುತ್ತಿದ್ದ ವೇಳೆ, ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಕೋಗಿಲು ಕ್ರಾಸ್ ಬಳಿ ಬಾರ್ ಬಾಗಿಲು ತೆರೆಯಲಾಗಿದ್ದು.ಕೆಲ ವ್ಯಕ್ತಿಗಳು ಒಳಗೆ ಮತ್ತು ಹೊರಗೆ ನಿಂತಿರುವುದು ಗಮನಿಸಿದರು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋದಾಗ ಬಾರ್ ಒಳಗೆ ಗ್ರಾಹಕರಿಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದ್ದು, ಇದು ಬಾರ್ ಲೈಸೆನ್ಸ್ ನಿಯಮ ಉಲ್ಲಂಘನೆಯಾಗಿರುವುದಾಗಿ ದೃಢಪಟ್ಟಿದೆ. ಬಾರ್ ಮಾಲೀಕರು ಮತ್ತು ಸಿಬ್ಬಂದಿ…

ಮುಂದೆ ಓದಿ..