ಸುದ್ದಿ 

ಕುಡತಿನಿ ಹೋರಾಟದ ಪ್ರಮುಖ ಸತ್ಯಗಳು: 1089 ದಿನಗಳ ನೋವಿನ ಕಥೆ…

Taluknewsmedia.com

Taluknewsmedia.comಕುಡತಿನಿ ಹೋರಾಟದ ಪ್ರಮುಖ ಸತ್ಯಗಳು: 1089 ದಿನಗಳ ನೋವಿನ ಕಥೆ… ಕೈಗಾರಿಕಾ ಅಭಿವೃದ್ಧಿಯು ಸಮೃದ್ಧಿ ಮತ್ತು ಉದ್ಯೋಗವನ್ನು ತರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಅಭಿವೃದ್ಧಿಯ ಭರವಸೆಗಳು ಹಳಿ ತಪ್ಪಿದಾಗ, ಅದು ಸೃಷ್ಟಿಸುವ ಮಾನವೀಯ ಬಿಕ್ಕಟ್ಟಿಗೆ ಬಳ್ಳಾರಿಯ ಕುಡತಿನಿ ಹೋರಾಟವು ಕಠೋರ ಸಾಕ್ಷಿಯಾಗಿದೆ. ನಂಬಲಸಾಧ್ಯವಾದರೂ, ತಮ್ಮ ಭೂಮಿಯನ್ನು ಕಳೆದುಕೊಂಡ ಈ ರೈತರು ನ್ಯಾಯಕ್ಕಾಗಿ ಬರೋಬ್ಬರಿ 1089 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಅವರ ಧ್ವನಿ ಮೊಳಗಿದೆ. ಅವರ ಈ ಸುದೀರ್ಘ ಹೋರಾಟದಿಂದ ನಾವು ಕಲಿಯಬೇಕಾದ ಪ್ರಮುಖ ಸತ್ಯಗಳನ್ನು ಮತ್ತು ಅದರ ಹಿಂದಿನ ವಾಸ್ತವವನ್ನು ಈ ಲೇಖನದಲ್ಲಿ ನೋಡೋಣ. ಒಂದು ಹೋರಾಟ, 1089 ದಿನಗಳು: ಇದೊಂದು ಅಂಕಿಅಂಶವಲ್ಲ, ಬದುಕಿನ ಪ್ರಶ್ನೆ… “1089 ದಿನಗಳಿಂದ” – ಈ ಸಂಖ್ಯೆಯು ಕೇವಲ ಒಂದು ಅಂಕಿಅಂಶವಲ್ಲ, ಇದು ನೂರಾರು ಕುಟುಂಬಗಳ ದೈನಂದಿನ ಸಂಕಟದ…

ಮುಂದೆ ಓದಿ..
ಸುದ್ದಿ 

ಅಂತರರಾಷ್ಟ್ರೀಯ ಕಬಡ್ಡಿ ಸಾಧಕರಿಗೆ ವಿಧಾನಸಭೆಯಲ್ಲಿ ಭರ್ಜರಿ ಗೌರವ

Taluknewsmedia.com

Taluknewsmedia.comಅಂತರರಾಷ್ಟ್ರೀಯ ಕಬಡ್ಡಿ ಸಾಧಕರಿಗೆ ವಿಧಾನಸಭೆಯಲ್ಲಿ ಭರ್ಜರಿ ಗೌರವ ಬೆಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2ನೇ ಅಂತರರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತಕ್ಕೆ ಚಾಂಪಿಯನ್ ಹುದ್ದೆ ತಂದ ಕರ್ನಾಟಕದ ಇಬ್ಬರು ಸಾಧಕರಿಗೆ ರಾಜ್ಯ ವಿಧಾನಸಭೆಯಲ್ಲಿ ಗುರುವಾರ ವಿಶಿಷ್ಟ ಸನ್ಮಾನ ನೆರವೇರಿತು. ಭಾರತ ತಂಡದ ಪ್ರಮುಖ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಹಾಗೂ ತಂಡದ ತರಬೇತುದಾರ್ತಿ ತೇಜಸ್ವಿನಿ ಬಾಯಿ ಅವರನ್ನು ಸದನವು ಪಕ್ಷಾತೀತವಾಗಿ ಅಭಿನಂದಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವತಿಯಿಂದ ₹5 ಲಕ್ಷ ಬಹುಮಾನವನ್ನು ಘೋಷಿಸಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಅವರು ಕ್ರೀಡಾಪಟುಗಳನ್ನು ಇನ್ನಷ್ಟು ಪ್ರೋತ್ಸಾಹಿಸಲು ಬಹುಮಾನವನ್ನು ₹50 ಲಕ್ಷಕ್ಕೆ ಹೆಚ್ಚಿಸುವಂತೆ ಸರ್ಕಾರವನ್ನು ಮನವಿ ಮಾಡಿದರು. ವಿಪಕ್ಷದ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಸಹ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಪಕ್ಷಾತೀತವಾಗಿ ವ್ಯಕ್ತವಾದ ಈ…

ಮುಂದೆ ಓದಿ..
ಕ್ರೀಡೆ ಸುದ್ದಿ 

ಎಲ್ಲಾ ಕಂಬಳಗಳಿಗೆ ಪ್ರೋತ್ಸಾಹಧನ: ವಿಧಾನಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ್ ಘೋಷಣೆ

Taluknewsmedia.com

Taluknewsmedia.comಎಲ್ಲಾ ಕಂಬಳಗಳಿಗೆ ಪ್ರೋತ್ಸಾಹಧನ: ವಿಧಾನಸಭೆಯಲ್ಲಿ ಸಚಿವ ಎಚ್‌.ಕೆ. ಪಾಟೀಲ್ ಘೋಷಣೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸಲ್ಪಡುವ 23 ಕಂಬಳಗಳಿಗೆ ಪ್ರತಿವರ್ಷ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡುವ ನಿರ್ಧಾರವನ್ನು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್ ವಿಧಾನಸಭೆಯಲ್ಲಿ ಪ್ರಕಟಿಸಿದರು. ಈಗಾಗಲೇ 10 ಕಂಬಳಗಳಿಗೆ ಅನುದಾನ ಬಿಡುಗಡೆಗೊಂಡಿದ್ದು, ಉಳಿದ ಕಂಬಳಗಳಿಗೂ ಶೀಘ್ರದಲ್ಲಿ ನೆರವು ಒದಗಿಸಲಾಗುವುದು ಎಂದು ತಿಳಿಸಿದರು. ಮುಂದಿನ ವರ್ಷದಿಂದ ಎಲ್ಲಾ ಕಂಬಳಗಳಿಗೆ ಏಕಕಾಲದಲ್ಲಿ ಅನುದಾನ ಮಂಜೂರು ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದೂ ಅಭಿಪ್ರಾಯಪಟ್ಟರು. ಶೂನ್ಯಕಾಲದ ವೇಳೆ ವಿಷಯವನ್ನು ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ರೈ, ಕಂಬಳವನ್ನು ಸರ್ಕಾರ ಅಧಿಕೃತ ರಾಜ್ಯ ಕ್ರೀಡೆಯಾಗಿ ಘೋಷಿಸಿರುವುದನ್ನು ಸ್ವಾಗತಿಸಿದರು. ಕಳೆದ ವರ್ಷ ಕೆಲವು ಕಂಬಳಗಳಿಗೆ ಮಾತ್ರ ಅನುದಾನ ನೀಡಲಾಗಿದ್ದರಿಂದ, ಎಲ್ಲಾ 23 ಕಂಬಳಗಳಿಗೂ ಸಮಾನವಾಗಿ ನೆರವು ನೀಡಬೇಕೆಂದು ಅವರು ಮನವಿ ಮಾಡಿದರು. ಈ ಬೇಡಿಕೆಗೆ ಕರಾವಳಿ ಪ್ರದೇಶದ ಹಲವು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿನ ಶೆಲ್ಟರ್‌ಗಳಲ್ಲಿ ಇರುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಸಾರಿ ಚಿಕನ್–ರೈಸ್: ಯೋಜನೆಗೆ ವರ್ಷಕ್ಕೆ ₹8 ಕೋಟಿಯಷ್ಟಾದರೂ ವೆಚ್ಚದ ಅಂದಾಜು…

Taluknewsmedia.com

Taluknewsmedia.comಬೆಂಗಳೂರು ನಗರದಲ್ಲಿನ ಶೆಲ್ಟರ್‌ಗಳಲ್ಲಿ ಇರುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಸಾರಿ ಚಿಕನ್–ರೈಸ್: ಯೋಜನೆಗೆ ವರ್ಷಕ್ಕೆ ₹8 ಕೋಟಿಯಷ್ಟಾದರೂ ವೆಚ್ಚದ ಅಂದಾಜು… ಬೆಂಗಳೂರು: ಸುಪ್ರೀಂ ಕೋರ್ಟ್‌ ನಿರ್ದೇಶನದ ನಂತರ, ನಗರದ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸಾರಿಗೆ ಕೇಂದ್ರಗಳ ಸುತ್ತಲಿರುವ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸುವ ಕಾರ್ಯ ಗತಿಸುತಿದೆ. ಈ ಕ್ರಮದ ಅಂಗವಾಗಿ, ಗ್ರೇಟರ್‌ ಬೆಂಗಳೂರು ಆಡಳಿತ (GBA) ಶೆಲ್ಟರ್‌ಗಳಲ್ಲಿ ಇರಲಿರುವ ನಾಯಿಗಳಿಗೆ ಪ್ರತಿದಿನ ಎರಡು ಬಾರಿ ಚಿಕನ್–ರೈಸ್ ನೀಡಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಯೋಜನೆಯು ಜಾರಿಗೆ ಬಂದರೆ ಪ್ರತಿ ನಾಯಿಯ ದಿನನಿತ್ಯದ ಪೋಷಣೆಗೆ ಸುಮಾರು ₹102 ವೆಚ್ಚವಾಗುವ ಸಾಧ್ಯತೆ ಇದೆ. ಒಟ್ಟಾರೆ, ವಾರ್ಷಿಕ ಖರ್ಚು ₹8 ಕೋಟಿಗೂ ಮೇಲಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಗರದಲ್ಲಿ ಸರ್ಕಾರಿ ಆವರಣಗಳಲ್ಲಿ ಗುರುತಿಸಲ್ಪಟ್ಟಿರುವ ಬೀದಿ ನಾಯಿಗಳ ಸಂಖ್ಯೆ ಸುಮಾರು 2,206. ಇದುವರೆಗೆ ಶೆಲ್ಟರ್‌ಗಳಲ್ಲಿ ನಾಯಿಗಳಿಗೆ…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರಕ್ಕೆ ಮಾರು ಹೋಗಬೇಡಿ — ಸರ್ಕಾರದ ಸ್ಪಷ್ಟನೆ

Taluknewsmedia.com

Taluknewsmedia.comದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರಕ್ಕೆ ಮಾರು ಹೋಗಬೇಡಿ — ಸರ್ಕಾರದ ಸ್ಪಷ್ಟನೆ ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವಾಗಿ ಘೋಷಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೆಡೆ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ರಾಜ್ಯ ಸರ್ಕಾರ ತಳ್ಳಿ ಹಾಕಿದೆ. ರೈತರಿಗೆ ತಮ್ಮ ಜಮೀನು ಮಾರಾಟದ ಹಕ್ಕುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರೈತರ ಜಮೀನು ಮಾರಾಟದ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂಬ ಅಭಿಪ್ರಾಯ ಕೆಲವು ವಲಯಗಳಲ್ಲಿ ಮೂಡಿರುವ ಹಿನ್ನೆಲೆಯಲ್ಲಿ ಅವರು ಪ್ರಕಟಣೆ ನೀಡುತ್ತಾ, “ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ. ಜಮೀನು ಮಾರಾಟದ ಮೇಲೆ ಸರ್ಕಾರ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ,” ಎಂದು ಹೇಳಿದರು. ರಿಯಲ್…

ಮುಂದೆ ಓದಿ..
ಸುದ್ದಿ 

ಡೆಲಿವರಿ ಸಿಬ್ಬಂದಿಗೆ ಲಿಫ್ಟ್ ನಿಷೇಧ ವಿವಾದ: ಮೇಘನಾ ಫುಡ್ಸ್ ಕ್ಷಮೆ ಕೇಳಿ ಹಿಂದೆ ಸರಿತು

Taluknewsmedia.com

Taluknewsmedia.comಡೆಲಿವರಿ ಸಿಬ್ಬಂದಿಗೆ ಲಿಫ್ಟ್ ನಿಷೇಧ ವಿವಾದ: ಮೇಘನಾ ಫುಡ್ಸ್ ಕ್ಷಮೆ ಕೇಳಿ ಹಿಂದೆ ಸರಿತು ಬೆಂಗಳೂರು: ನಗರದಲ್ಲಿನ ಪ್ರಸಿದ್ಧ ಆಹಾರ ಸರಣಿ ಮೇಘನಾ ಫುಡ್ಸ್‌ ಒಂದು ಶಾಖೆಯಲ್ಲಿ ಡೆಲಿವರಿ ಏಜೆಂಟ್‌ಗಳು ಲಿಫ್ಟ್ ಬಳಸಬಾರದೆಂದು ಸೂಚಿಸಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಯಿತು. ನೆಟ್ಟಿಗರ ಆಕ್ರೋಶದ ನಡುವೆ ಸಂಸ್ಥೆ ಅಧಿಕೃತವಾಗಿ ಕ್ಷಮೆಯಾಚಿಸಿ, ಆ ಪೋಸ್ಟರ್ ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಘಟನೆಯ ಮೂಲ, ಒಬ್ಬ ಬಳಕೆದಾರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿದ ಪೋಸ್ಟರ್ ಚಿತ್ರ. ದಿನವಿಡೀ ಶ್ರಮಿಸುವ ಡೆಲಿವರಿ ಕಾರ್ಮಿಕರ ಮೇಲೆ ಇಂಥ ನಿರ್ಬಂಧ ಮಾನವೀಯವಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದರು. ಕ್ಷಣಾರ್ಧದಲ್ಲಿ ಪೋಸ್ಟ್ ವೈರಲ್ ಆಗಿ, ಸಂಸ್ಥೆಯ ವಿರುದ್ಧ ನಕಾರಾತ್ಮಕ ಪ್ರತಿಕ್ರಿಯೆಗಳು ಹೆಚ್ಚಿದವು. ಟೀಕೆಯನ್ನು ಗಮನಿಸಿದ ಮೇಘನಾ ಫುಡ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ, “ಗಂಟೆಗಳ ಪೀಕ್ ಅವಧಿಯಲ್ಲಿ ಗ್ರಾಹಕರಿಗೆ ಲಿಫ್ಟ್‌ಗಳಲ್ಲಿ ಆಗುವ ಬಿಕ್ಕಟ್ಟನ್ನು ತಪ್ಪಿಸಲು ಮಾತ್ರ ಈ…

ಮುಂದೆ ಓದಿ..
ಸುದ್ದಿ 

ಬಾಯ್‌ಫ್ರೆಂಡ್‌ಗಾಗಿ ರೇಪ್‌ ಕಥೆ ಕಟ್ಟಿದ ನರ್ಸಿಂಗ್ ವಿದ್ಯಾರ್ಥಿನಿ — ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಂತು

Taluknewsmedia.com

Taluknewsmedia.comಬಾಯ್‌ಫ್ರೆಂಡ್‌ಗಾಗಿ ರೇಪ್‌ ಕಥೆ ಕಟ್ಟಿದ ನರ್ಸಿಂಗ್ ವಿದ್ಯಾರ್ಥಿನಿ — ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಂತು ಬೆಂಗಳೂರು: ಪ್ರೇಮಿಯ ವಿಶ್ವಾಸ ಗೆಲ್ಲುವ ಉದ್ದೇಶದಿಂದ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬಳು ಸಾಮೂಹಿಕ ಅತ್ಯಾಚಾರದ ನಕಲಿ ಕಥೆ ಹೆಣೆದು ಕ್ಯಾಬ್ ಚಾಲಕನ ಮೇಲೆ ಸುಳ್ಳು ದೂರು ನೀಡಿದ ಘಟನೆ ಬಹಿರಂಗವಾಗಿದೆ. ಬಾಣಸವಾಡಿ ಠಾಣೆ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಘಟನೆಗೆ ನಿಜ ಸ್ವರೂಪ ಪತ್ತೆಯಾಗಿದೆ. ಸುಳ್ಳು ದೂರು ನೀಡಿದ ಹಿನ್ನೆಲೆಯಲ್ಲಿ ಈಗ ವಿದ್ಯಾರ್ಥಿನಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ. ಡಿ.6ರಂದು 22 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್‌తో ಸೇರಿ ಮಡಿವಾಳ ಠಾಣೆಗೆ ತೆರಳಿ, ಡಿ.2ರ ರಾತ್ರಿ ಕ್ಯಾಬ್ ಚಾಲಕ ಹಾಗೂ ಆತನಿಬ್ಬರು ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಬರೆದು ದೂರು ನೀಡಿದ್ದಳು. ದೂರು ದಾಖಲಿಸಿದ ಪೊಲೀಸರು ಪ್ರಕರಣವನ್ನು ಬಾಣಸವಾಡಿ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಕ್ಯಾಬ್‌ ಚಾಲಕನನ್ನು ಬಂಧಿಸಿ ಐದು ದಿನಗಳ…

ಮುಂದೆ ಓದಿ..
ಸುದ್ದಿ 

ಕ್ರಿಸ್‌ಮಸ್–ಹೊಸ ವರ್ಷದ ಸಂಭ್ರಮಕ್ಕೆ ಕೊಂಕಣ ರೈಲ್ವೆಯಲ್ಲಿ ಹೆಚ್ಚುವರಿ ರೈಲುಗಳು; ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

Taluknewsmedia.com

Taluknewsmedia.comಕ್ರಿಸ್‌ಮಸ್–ಹೊಸ ವರ್ಷದ ಸಂಭ್ರಮಕ್ಕೆ ಕೊಂಕಣ ರೈಲ್ವೆಯಲ್ಲಿ ಹೆಚ್ಚುವರಿ ರೈಲುಗಳು; ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಉಡುಪಿ: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ, ಕೊಂಕಣ ರೈಲ್ವೇ ಸಂಸ್ಥೆ ಹಲವು ವಿಶೇಷ ರೈಲುಗಳನ್ನು ಚಾಲನೆ ಮಾಡಲು ನಿರ್ಧರಿಸಿದೆ. ಯಶವಂತಪುರ–ವಾಸ್ಕೋ ಡ ಗಾಮ ಹಾಗೂ ಬೆಂಗಳೂರು ಕಂಟೋನ್ಮೆಂಟ್–ವಾಸ್ಕೋ ಡ ಗಾಮ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸಲಿದ್ದು, ಒಂದು ರೈಲಿನ ಮಾರ್ಗವ್ಯಾಪ್ತಿ ಮಡಗಾಂವ್ ಜಂಕ್ಷನ್‌ವರೆಗೆ ವಿಸ್ತರಿಸಲಾಗಿದೆ. ತಿರುವನಂತಪುರಂ–ಚಂಡೀಗಢ ಮಾರ್ಗದಲ್ಲೂ ವಿಶೇಷ ಏಕಮುಖ ರೈಲು ಚಲಿಸಲಿವೆ. ಯಶವಂತಪುರ–ವಾಸ್ಕೋ ಡ ಗಾಮ ವಿಶೇಷ ರೈಲು (06505 / 06506) 06505 – ಯಶವಂತಪುರ → ವಾಸ್ಕೋ ಡ ಗಾಮ ದಿನಾಂಕ: ಡಿಸೆಂಬರ್ 25 ಮತ್ತು 31 ಹೊರಟ ಸಮಯ: ರಾತ್ರಿ 12:20 ತಲುಪುವ ಸಮಯ: ಮಧ್ಯಾಹ್ನ 1:50 ನಿಲ್ದಾಣಗಳು: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ,…

ಮುಂದೆ ಓದಿ..
ಸುದ್ದಿ 

ಜನಾರ್ದನ ರೆಡ್ಡಿ ಪುತ್ರನ ವಿರುದ್ಧ ₹100 ಕೋಟಿಯ ಆಸ್ತಿ ಕಬಳಿಕೆ ಆರೋಪ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Taluknewsmedia.com

Taluknewsmedia.comಜನಾರ್ದನ ರೆಡ್ಡಿ ಪುತ್ರನ ವಿರುದ್ಧ ₹100 ಕೋಟಿಯ ಆಸ್ತಿ ಕಬಳಿಕೆ ಆರೋಪ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಬಳ್ಳಾರಿ ನಗರದ ಹೃದಯಭಾಗದಲ್ಲಿರುವ ₹100 ಕೋಟಿ ಮೌಲ್ಯದ ಜಾಗ ಕಬಳಿಕೆಗೆ ಯತ್ನಿಸಿದ ಆರೋಪ ಎದುರಿಸುತ್ತಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಯ ಪುತ್ರ ಜಿ. ಕಿರೀಟಿ ರೆಡ್ಡಿ ಹಾಗೂ ಅವರ ಸಹವರ್ತಿಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಸ್ತಿಯ ಮೂಲ ಮಾಲೀಕರಾದ ಎಂ. ಗೋವರ್ಧನ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಧಾರವಾಡದಲ್ಲಿ ನಡೆಯಿತು. ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರ ಮೇಲೆ ಜೀವಭೀತಿ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ವಿಚಾರಣೆಯನ್ನು ಮುಂದಿನ 15ರ ತನಕ ಮುಂದೂಡಲಾಗಿದೆ. ಹೈಕೋರ್ಟ್ ವಕೀಲ ಪಿ. ಪ್ರಸನ್ನಕುಮಾರ್ ತಿಳಿಸಿದಂತೆ,2005ರಲ್ಲಿ ಜಿಪಿಎ ಹಾಗೂ…

ಮುಂದೆ ಓದಿ..
ಸುದ್ದಿ 

ತನ್ನದೇ ಶಾಲೆಯ ಬಸ್ ಡಿಕ್ಕಿಯಿಂದ 9 ವರ್ಷದ ಬಾಲಕಿ ದುರ್ಮರಣ: ಚಾಲಕನ ಅಜಾಗರೂಕತೆಯೇ ಕಾರಣ?

Taluknewsmedia.com

Taluknewsmedia.comತನ್ನದೇ ಶಾಲೆಯ ಬಸ್ ಡಿಕ್ಕಿಯಿಂದ 9 ವರ್ಷದ ಬಾಲಕಿ ದುರ್ಮರಣ: ಚಾಲಕನ ಅಜಾಗರೂಕತೆಯೇ ಕಾರಣ? ಬೀದರ್ ಜಿಲ್ಲೆಯ ಜನವಾಡ ಗ್ರಾಮದಲ್ಲಿ ನಡೆದ ದುರಂತದಲ್ಲಿ ಶಾಲಾ ಬಸ್‌ನಿಂದಲೇ 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಓಡಿಸುತ್ತಿದ್ದ ವಾಹನದ ಬಗ್ಗೆ ನಿರ್ಲಕ್ಷ್ಯ ತೋರಿದ ಚಾಲಕನ ವರ್ತನೆಯೇ ಈ ಅನಾಹುತಕ್ಕೆ ಕಾರಣ. ಮಂಗಳವಾರ ಸಂಜೆ ಶಾಲೆಯಿಂದ ಮನೆ ಕಡೆ ಇಳಿದಿದ್ದ ಮೂರನೇ ತರಗತಿಯ ವಿದ್ಯಾರ್ಥಿನಿ ಋತ್ವಿಕಾ ಸುನಿಲಕುಮಾರ (9) ಬಸ್‌ನ ಮುಂಭಾಗದಲ್ಲಿ ನಿಂತಿದ್ದಾಗ, ಚಾಲಕ ಗಮನಿಸದೇ ವಾಹನವನ್ನು ಚಲಾಯಿಸಿದ ಪರಿಣಾಮ ಬಾಲಕಿ ಬಸ್‌ಗೆ ತಗುಲಿ ಗಂಭೀರವಾಗಿ ಗಾಯಗೊಂಡಳು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಮಾರ್ಗ ಮಧ್ಯೆಯೇ ಋತ್ವಿಕಾ ಪ್ರಾಣಬಿಟ್ಟಿದ್ದಾಳೆ. ಮೃತ ಬಾಲಕಿಯ ತಾಯಿ ರೇಣುಕಾ ಅವರು ಜನವಾಡ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದು, ಕುಟುಂಬ ಕ್ವಾಟರ್ಸ್ ಪ್ರದೇಶದಲ್ಲಿ ವಾಸಿಸುತ್ತಿದೆ. ಘಟನೆ ನಡೆದ ತಕ್ಷಣ ಡಿವೈಎಸ್‌ಪಿ ಸನದಿ, ಸಿಪಿಐ…

ಮುಂದೆ ಓದಿ..