ಸುದ್ದಿ 

ಹಾಸನದ ವಿದ್ಯಾರ್ಥಿನಿ ವತ್ಸಲ (19) ಪಿಜಿಯಲ್ಲಿ ನೇಣು ಬಿಗಿದುಕೊಂಡು ದುರ್ಮರಣ..

Taluknewsmedia.com

Taluknewsmedia.comಹಾಸನದ ವಿದ್ಯಾರ್ಥಿನಿ ವತ್ಸಲ (19) ಪಿಜಿಯಲ್ಲಿ ನೇಣು ಬಿಗಿದುಕೊಂಡು ದುರ್ಮರಣ ನಗರದ ಹೊರವಲಯದಲ್ಲಿರುವ ಹೆಸರುಘಟ್ಟ ರಸ್ತೆ ಪ್ರದೇಶದಲ್ಲಿ ದುಃಖದ ಘಟನೆೊಂದು ಸಂಭವಿಸಿದೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಹೊರಬಿದ್ದಿದೆ. ಹಾಸನ ಮೂಲದ 19 ವರ್ಷದ ವತ್ಸಲ, ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಿ.ಫಾರ್ಮಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಕಾಲೇಜು ಸಮೀಪದಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದ ಅವರು, ಗುರುವಾರ ರಾತ್ರಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಭವದ ತಕ್ಷಣ ಪಿಜಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಹೆಸರುಘಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುವತಿಯ ಅಕಾಲಿಕ ಮರಣಕ್ಕೆ ಪೋಷಕರು, ಸ್ನೇಹಿತರು ಮತ್ತು ಕಾಲೇಜು ವಲಯದಲ್ಲಿ ತೀವ್ರ ದುಃಖ ಮತ್ತು ಅಚ್ಚರಿ ವ್ಯಕ್ತವಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ…

ಮುಂದೆ ಓದಿ..
ಸುದ್ದಿ 

ಚಿಕ್ಕಬಳ್ಳಾಪುರ: ಪತ್ನಿ ಮೇಲೆ ಶಂಕೆ – ಪತಿದಿಂದ ಅಮಾನವೀಯ ಹತ್ಯೆ

Taluknewsmedia.com

Taluknewsmedia.comಚಿಕ್ಕಬಳ್ಳಾಪುರ: ಪತ್ನಿ ಮೇಲೆ ಶಂಕೆ – ಪತಿದಿಂದ ಅಮಾನವೀಯ ಹತ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕಿನ ಗೆರಿಗೆರೆಡ್ಡಿಪಾಳ್ಯ ಪಾತೂರು ಗ್ರಾಮದಲ್ಲಿ ಪತ್ನಿ ಮೇಲೆ ಅನುಮಾನದಿಂದ ಪತಿಯೋರ್ವ ನಡೆಸಿದ ಕ್ರೂರ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಭಾರಿ ಆಕ್ರೋಶ ಮೂಡಿಸಿದೆ. ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾದ ಬಾಲು ಮತ್ತು ದಿಲ್‌ಶಾದ್ (ಕವಿತಾ) ದಂಪತಿಯ ಬದುಕು ಅನುಮಾನಗಳ ನೆರಳಿಗೆ ಸಿಕ್ಕಿತು. ತಮ್ಮ ಪತ್ನಿ ಯಾರೊಂದೋ ಫೋನ್‌ನಲ್ಲಿ ಮಾತನಾಡುತ್ತಾರೆ ಎಂಬ ಶಂಕೆಯಿಂದ ಬಾಲು ಆಗಾಗ ಜಗಳ ಮಾಡುತ್ತಿದ್ದಾನೆಂದು ಮೂಲಗಳು ತಿಳಿಸಿವೆ. ಘಟನೆಯ ದಿನವೂ ಇದೇ ವಿಷಯಕ್ಕೆ ಸಂಬಂಧಿಸಿದ ವಾಗ್ವಾದ ಉಂಟಾಗಿದ್ದು, ಕೋಪದ ಅಲೆ ಏರಿದ ಬಾಲು ಕಬ್ಬಿಣದ ರಾಡ್‌ನಿಂದ ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕವಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ನಡುವೆ ದಾರಿಯಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿದೆ. ಚೇಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ…

ಮುಂದೆ ಓದಿ..
ಸುದ್ದಿ 

ಕಳೆದ ಇಷ್ಟು ವರ್ಷಗಳಲ್ಲೂ ನಾವು ಇಂತಹ ದೊಡ್ಡ ಹಾಸ್ಪಿಟಲ್‌ನ್ನು ಕಟ್ಟಲು ಯಾರೂ ಮುಂದಾಗಿಲ್ಲ.

Taluknewsmedia.com

Taluknewsmedia.comಕಳೆದ ಇಷ್ಟು ವರ್ಷಗಳಲ್ಲೂ ನಾವು ಇಂತಹ ದೊಡ್ಡ ಹಾಸ್ಪಿಟಲ್‌ನ್ನು ಕಟ್ಟಲು ಯಾರೂ ಮುಂದಾಗಿಲ್ಲ. ನಮಗೆ ಯೋಗ್ಯತೆ, ಸಾಮರ್ಥ್ಯ ಇದ್ರೂ ನಮ್ಮನ್ನು ಒಳಗೊಳ್ಳಲು ಯಾರೂ ಮುಂದೆ ಬಂದಿಲ್ಲ. ಆ ಕಾಲದಲ್ಲೇ ಮೈಸೂರು ಮಹಾರಾಜರು ಈ ಜನರಿಗೋಸ್ಕರ, ಕೊಲಾರ ಜಿಲ್ಲೆ ಜನರಿಗಾಗಿ ಈ ಹಾಸ್ಪಿಟಲ್ ಕಟ್ಟಿಸಿ ಕೊಟ್ಟಿದ್ದಾರೆ. ಆ ಕಾಲದಲ್ಲಿ ಸರ್ಕಾರಕ್ಕೂ ಹಣ ಕಡಿಮೆ, ಜನರಲ್ಲೂ ಹಣ ಇರಲಿಲ್ಲ. ಆದರೂ ಅವರು ಜನರ ಕಾಯಿಲೆ ನೋಡಿಕೊಂಡು ಈ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಬಳಿ ಸಾಕಷ್ಟು ಸರ್ಕಾರದ ಹಣವೂ ಇದೆ, ಜನರಲ್ಲೂ ಸಾಮರ್ಥ್ಯ ಇದೆ. ಆದರೆ ಇವತ್ತಿನ ಜನಸಂಖ್ಯೆಗೆ ಈ ಒಂದು ಹಾಸ್ಪಿಟಲ್ ಸಾಲುವುದಿಲ್ಲ. ಆಗಿನ ಪಾಪುಲೇಶನ್‌ಗೇ ಈ ಮಟ್ಟದ ಹಾಸ್ಪಿಟಲ್ ಕೊಟ್ಟಿದ್ದರೆ, ಇಂದಿನ ಜನಸಂಖ್ಯೆಗೆ ಕನಿಷ್ಠ ಹತ್ತು ಇಂತಹ ಹಾಸ್ಪಿಟಲ್‌ಗಳು ಬೇಕು. ದುಡ್ಡಿರುವವರು ಪ್ರೈವೇಟ್ ಆಸ್ಪತ್ರೆಗೆ ಹೋಗ್ತಾರೆ, ಆದರೆ ಬಡಜನರಿಗೆ ಈ ಸರ್ಕಾರಿ ಆಸ್ಪತ್ರೆಯೇ ಭರವಸೆ.…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು: ಗೃಹಿಣಿ ಸಂಧ್ಯಾ ಕ್ರೂರ ಹತ್ಯೆ.

Taluknewsmedia.com

Taluknewsmedia.comಚಿಕ್ಕಮಗಳೂರು: ಗೃಹಿಣಿ ಸಂಧ್ಯಾ ಕ್ರೂರ ಹತ್ಯೆ. ಚಿಕ್ಕಮಗಳೂರು ತಾಲ್ಲೂಕಿನ ಅರೆನೂರು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ನಿಶ್ಚಿಂತೆಗೇ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಹತ್ಯೆಯಾದ ಗೃಹಿಣಿಯನ್ನು ಸಂಧ್ಯಾ (33) ಎಂದು ಗುರುತುಪಡಿಸಲಾಗಿದೆ. ಮೂಲಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ಗಂಡನೊಂದಿಗೆ ಅಣಕಾಡುತ್ತಿದ್ದ ಸಂಧ್ಯಾ, ತವರುಮನೆಗೆ ತೆರಳಿದ್ದರು. ನಾಲ್ಕು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದರಿಂದ ಕುಟುಂಬದವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಿನ್ನೆ ಸಂಜೆ ಸಂಧ್ಯಾ ಅರೆನೂರು ಗ್ರಾಮದ ಮನೆಯತ್ತ ಹಿಂದಿರುಗಿದ್ದ ವೇಳೆ ಯಾವುದೇ ಅನಾಹುತದ ಶಂಕೆ ಯಾರಿಗೂ ಬಂದಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಮನೆ ಹಿಂಭಾಗದ ಕೆಲಸದಲ್ಲಿ ತೊಡಗಿದ್ದಾಗ ಅಜ್ಞಾತ ಹಂತಕ ಕುತ್ತಿಗೆ ಕುಯಿದು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬೇಟಿ ನೀಡಿದ ಆಲ್ದೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಹತ್ಯೆಗೆ ನಿಖರ ಕಾರಣ ಏನೆಂಬುದು…

ಮುಂದೆ ಓದಿ..
ಸುದ್ದಿ 

ಹಾವೇರಿ ಎಕ್ಸಿಕ್ಯುಟಿವ್ ಇಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ: 3 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ

Taluknewsmedia.com

Taluknewsmedia.comಹಾವೇರಿ ಎಕ್ಸಿಕ್ಯುಟಿವ್ ಇಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ: 3 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ ನಗರಾಭಿವೃದ್ಧಿ ಕೋಶದ ಎಕ್ಸಿಕ್ಯುಟಿವ್ ಇಂಜಿನಿಯರ್ ಶೇಖಪ್ಪ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ವಿಸ್ತೃತ ಪರಿಶೀಲನೆ ಭಾರೀ ಚರ್ಚೆಗೆ ಕಾರಣವಾಗಿದೆ. ಹೆಚ್ಚಿನ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ತಂಡಗಳು ಎರಡು ವಿಭಾಗಗಳಾಗಿ ಕಾರ್ಯಾಚರಣೆ ನಡೆಸಿ, ಶೇಖಪ್ಪ ಅವರ ಬಸವೇಶ್ವರ ನಗರದಲ್ಲಿರುವ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದವು. ಪರಿಶೀಲನೆಯ ವೇಳೆ ಸುಮಾರು 10 ಲಕ್ಷ ರೂಪಾಯಿ ನಗದು, ದೊಡ್ಡ ಪ್ರಮಾಣದ ಚಿನ್ನಾಭರಣ, ಮತ್ತು ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಶೇಖಪ್ಪ ಅವರ ಬಳಿ 3 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಇರುವುದನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ, ದಾವಣಗೆರೆ, ಹಾವೇರಿ, ಹಾನಗಲ್ ಹಾಗೂ ಇತರ ಪ್ರದೇಶಗಳಲ್ಲಿ ಒಟ್ಟು 17 ನಿವೇಶನಗಳನ್ನು…

ಮುಂದೆ ಓದಿ..
ಸುದ್ದಿ 

ಗ್ರಾಮೀಣ ಭಾಗದ ಕೃಷಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಈ-ಖಾತಾ ಪ್ರಮಾಣಪತ್ರ ಸಿಗಲಿದ್ದು,

Taluknewsmedia.com

Taluknewsmedia.comಗ್ರಾಮೀಣ ಭಾಗದ ಕೃಷಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಈ-ಖಾತಾ ಪ್ರಮಾಣಪತ್ರ ಸಿಗಲಿದ್ದು, ಗ್ರಾಮೀಣ ಜನರಿಗೆ ತಮ್ಮ ಆಸ್ತಿಗಳ ದಾಖಲೆಗಳನ್ನು ಸುಲಭವಾಗಿ ಹಾಗೂ ಡಿಜಿಟಲ್ ರೂಪದಲ್ಲಿ ಪಡೆಯುವ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಕಲ್ಪಿಸಿದೆ. ಈ ಈ-ಸ್ವತ್ತು ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ನಮೂನೆ 11A ಹಾಗೂ 11B ಡಿಜಿಟಲ್ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯ ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ನಿಯಮಗಳು 2025 ಆಧಾರದ ಮೇಲೆ ಈ ಪ್ರಕ್ರಿಯೆ ಇನ್ನಷ್ಟು ಸುಗಮಗೊಂಡಿದೆ. ಈ ಹೊಸ ವ್ಯವಸ್ಥೆಯ ಪ್ರಮುಖ ಬದಲಾವಣೆಗಳಲ್ಲಿ, ಸಾರ್ವಜನಿಕರು ತಮ್ಮ ಮನೆಯಿಂದಲೇ ಈ-ಸ್ವತ್ತು ಪೋರ್ಟಲ್ ಮೂಲಕ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ. ನಿಗದಿತ ಅವಧಿಯೊಳಗೆ ದಾಖಲೆ ನೀಡದಿದ್ದರೆ ಸ್ವಯಂ ಚಾಲಿತ ಅನುಮೋದನೆ ಸಿಗುವ ವ್ಯವಸ್ಥೆಯೂ ಇದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ತೆರಿಗೆಗೆ ಒಳಪಡುವ…

ಮುಂದೆ ಓದಿ..
ಸುದ್ದಿ 

ನವ ವಿವಾಹಿತೆ ಲತಾ ನಾಪತ್ತೆ: ವಾಟ್ಸಪ್‌ನಲ್ಲಿ ‘ಡೆತ್ ನೋಟ್’ ಬರೆದು ಕಾಣೆಯಾಗಿದ್ದರಿಂದ ಸಂಚಲನ

Taluknewsmedia.com

Taluknewsmedia.comನವ ವಿವಾಹಿತೆ ಲತಾ ನಾಪತ್ತೆ: ವಾಟ್ಸಪ್‌ನಲ್ಲಿ ‘ಡೆತ್ ನೋಟ್’ ಬರೆದು ಕಾಣೆಯಾಗಿದ್ದರಿಂದ ಸಂಚಲನ ನವ ವಿವಾಹಿತೆಯೊಬ್ಬಳು ವಾಟ್ಸಪ್‌ನಲ್ಲಿ ‘ಡೆತ್ ನೋಟ್’ ಬರೆದು ನಾಪತ್ತೆಯಾಗಿರುವ ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಗುರುರಾಜ್ ಎಂಬುವವರನ್ನು 2025ರ ಏಪ್ರಿಲ್ 14ರಂದು ವಿವಾಹವಾಗಿದ್ದ ಲತಾ ಈಗ ಕಾಣೆಯಾಗಿರುವುದು ಕುಟುಂಬ ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ವಾಟ್ಸಪ್‌ನಲ್ಲಿ ಬರೆದಿರುವ ನೋಟ್‌ನಲ್ಲಿ ಲತಾ ಪತಿ ಸೇರಿದಂತೆ ಐವರು ತಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನಾನು ಮತ್ತೆ ನಮ್ಮ ಮನೆಯಲ್ಲಿ ಹುಟ್ಟಿ ಬರುತ್ತೇನೆ, ಪಾಪಿಗಳಿಗೆ ಶಿಕ್ಷೆ ಕೊಡಿಸಿ…” ಎಂದು ನೋಟ್‌ನಲ್ಲಿ ಬರೆದಿರುವುದರಿಂದ ಪ್ರಕರಣ ಗಂಭೀರ ತಿರುವು ಪಡೆದಿದೆ. ನಾಪತ್ತೆಯಾಗಿರುವ ದಿನದ ಬೆಳಗ್ಗೆ ಲತಾ ಮನೆ ತೊರೆದಿದ್ದು, ನಂತರದಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಲತಾ ಹುಡುಕಾಟ ಕಾರ್ಯಾಚರಣೆ ಈಗಾಗಲೇ ಆರಂಭಗೊಂಡಿದೆ. ವಾಟ್ಸಪ್ ಮೆಸೇಜ್‌ಗಳ…

ಮುಂದೆ ಓದಿ..
ಸುದ್ದಿ 

ಇನ್ನು ಸಿಮ್ ಇದ್ದರೆಷ್ಟೋ ಮೆಸೇಜಿಂಗ್ ಆ್ಯಪ್‌ ಬಳಕೆಗೂ ಅಡ್ಡಿ: ಕೇಂದ್ರ ಸರ್ಕಾರ ನಿರ್ಧೇಶನ

Taluknewsmedia.com

Taluknewsmedia.comಇನ್ನು ಸಿಮ್ ಇದ್ದರೆಷ್ಟೋ ಮೆಸೇಜಿಂಗ್ ಆ್ಯಪ್‌ ಬಳಕೆಗೂ ಅಡ್ಡಿ: ಕೇಂದ್ರ ಸರ್ಕಾರ ನಿರ್ಧೇಶನ ಆ್ಯಪ್‌ಗಳ ದುರ್ಭಳಕೆ, ಸೈಬರ್ ಅಪರಾಧ ತಡೆಯಲು ಹೊಸ ಕ್ರಮ – 6 ತಿಂಗಳ ಒಳಗೆ ವಾಟ್ಸ್ಆ್ಯಪ್ ಮೆಸೇಜಿಂಗ್‌ಗೂ ಲಾಗಿನ್ ಅಗತ್ಯ ಬೆಂಗಳೂರು: ಆನ್‌ಲೈನ್‌ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇದೀಗ ಪ್ರಮುಖ ಕ್ರಮ ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದೀಗ ಮೊಬೈಲ್ ಸಿಮ್‌ ಇದ್ದರೆ ಸಾಕು, ಅನೇಕ ಮೆಸೇಜಿಂಗ್ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದಾದ ವ್ಯವಸ್ಥೆಗೆ ಅಡ್ಡಿ ಬರುವ ಸಾಧ್ಯತೆ ಇದೆ. ಸೈಬರ್ ಅಪರಾಧ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುವ ಕೆಲಸವನ್ನು ಆರಂಭಿಸಿದ್ದು, ಎಲ್ಲಾ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಲಾಗಿನ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ತಯಾರಿ ನಡೆಸುತ್ತಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಂ, ಎಕ್ಸ್ (ಟ್ವಿಟ್ಟರ್) ಸೇರಿದಂತೆ ಎಲ್ಲಾ ಆ್ಯಪ್‌ಗಳಲ್ಲಿ ಲಾಗಿನ್ ಇಲ್ಲದೆ ಸೇವೆ ಸಿಗಬಾರದೆನ್ನುವುದು ಸರ್ಕಾರದ ಉದ್ದೇಶ. ಸುಮಾರು 90…

ಮುಂದೆ ಓದಿ..
ಸುದ್ದಿ 

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್: ಪಿರಿಯಾಪಟ್ಟಣ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುವ ವೇಳೆ ಬಂಧನ

Taluknewsmedia.com

Taluknewsmedia.comಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್: ಪಿರಿಯಾಪಟ್ಟಣ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುವ ವೇಳೆ ಬಂಧನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಕಂದಾಯ ಇಲಾಖೆಯ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪೋಡಿ ದುರಸ್ತಿ ಹಾಗೂ ದಾಖಲೆ ತಿದ್ದುಪಡಿ ಮಾಡಿಕೊಡುವ ಹೆಸರಿನಲ್ಲಿ ಅವರು ಲಂಚ ಕೇಳುತ್ತಿದ್ದರೆಂಬ ಮಾಹಿತಿ ಹಿನ್ನೆಲೆ ಕಾರ್ಯಾಚರಣೆ ನಡೆದಿದೆ. ಜಮೀನಿನ ಮಾರ್ಗ ರಸ್ತೆಯತ್ತ ಹೋಗುತ್ತದೆ ಎಂದು ಭೀತಿಗೊಳಿಸಿ, ಕೆಲಸ ಮಾಡಿಕೊಡುವುದಾಗಿ ಹೇಳಿ ಒಟ್ಟು 1 ಲಕ್ಷ ರೂ. ಲಂಚ ಕೇಳಿದ್ದ ಸರ್ವೇಯರ್, 30 ಸಾವಿರ ರೂ. ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ತಂಡ ಕೈಕಡವಿ ಹಿಡಿದಿದೆ. ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ವಿಜಯಕುಮಾರ್ ಅವರ ನೇತೃತ್ವದ ತಂಡ ಹುಣಸೂರಿನ ಬಾರ್‌ನಲ್ಲಿ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯನ್ನು ನಡೆಸಿತು. ಹಣ ಸ್ವೀಕರಿಸುವ ಕ್ಷಣದಲ್ಲೇ ಸರ್ವೇಯರ್ ರವೀಂದ್ರನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಲಂಚದ…

ಮುಂದೆ ಓದಿ..
ರಾಜಕೀಯ ಸುದ್ದಿ 

“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ..

Taluknewsmedia.com

Taluknewsmedia.com“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ಮಹಾ ತಂತ್ರ ಅಂತ ಭ್ರಮೆ. ಆದರೆ ಇದು ಕೇವಲ ಸಿನಿಮಾದ ಇಂಟರ್‌ವಲ್‌—ವಿರಾಮ ಮಾತ್ರ. ನಿಜ ಜೀವನದಲ್ಲಿ ಇದು ಒಬ್ಬ ಬೃಹತ್ ನಾಟಕ. ಈ ನಾಟಕದಿಂದ ಜನರಿಗೆ ಏನೂ ಪ್ರಯೋಜನವಾಗೋದಿಲ್ಲ. ಜನರಿಗೆ ನಾಟಕ ಬೇಕಾಗಿಲ್ಲ, ಅಭಿವೃದ್ಧಿ ಬೇಕು, ಸಮಸ್ಯೆಗಳ ಪರಿಹಾರ ಬೇಕು. ನನ್ನ ವಾದವೇನೆಂದರೆ— ಕಾಂಗ್ರೆಸ್ ಇಂದು ದೇಶದಿಂದ ಮಾಯವಾಗೋ ಕಾಲ ಬಂದಿದೆ.ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಯಾವ ತೀರ್ಮಾನವನ್ನು ತೆಗೆದುಕೊಳ್ಳಲು ಸಹ ಸ್ಥಿತಿಯಲ್ಲ. ವಿವೇಕರಹಿತ ನಾಯಕತ್ವದಡಿ ಈ ದೇಶವನ್ನು ಆಳೋ ಸಾಧ್ಯತೆಯೇ ಇಲ್ಲ. ಇನ್ನೊಂದು ಎರಡು–ಮೂರು ವರ್ಷಗಳಲ್ಲಿ ಕಾಂಗ್ರೆಸ್ ಹುಡುಕಿದ್ರೂ ಸಿಗೋದಿಲ್ಲ ಅನ್ನೋ ಪರಿಸ್ಥಿತಿ ಬರುತ್ತದೆ. ಹೀಗಿದ್ದಾಗ ‘ಹೈಕಮಾಂಡ್ ತೀರ್ಮಾನ’ ಅಂತ ಹೇಳೋದು ಸುಳ್ಳು. ದಾವಣಗೆರೆಯಲ್ಲಿ ಎಚ್.ಸಿ. ಮಹಾದೇವಪ್ಪ ಅವರೇ ಹೇಳಿದ್ರು – ‘ಸಿದ್ದರಾಮಯ್ಯ ಅವರು ಐದು ವರ್ಷ…

ಮುಂದೆ ಓದಿ..