ಸುದ್ದಿ 

ಮೆರವಣಿಗೆಯಲ್ಲಿ ಜಗಳ – ಮೂವರು ವಿರುದ್ಧ ಎಫ್‌ಐಆರ್

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025 ನಗರದ ಯಲಹಂಕ ಸಮೀಪದ ಮರಿಯಣಪಾಳ್ಯದಲ್ಲಿ ನಡೆದ ಸಂತ ಯಾಗಪ್ಪರ ಹಬ್ಬದ ತೇರಿನ ಮೆರವಣಿಗೆಯಲ್ಲಿ ಜಗಳ ಸಂಭವಿಸಿದ್ದು, ಇದರಲ್ಲಿ ಭಾಗಿಯಾದ ಮೂವರ ವಿರುದ್ಧ ಅಮೃತಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚಂದ್ರು ಅವರ ವರದಿಯ ಪ್ರಕಾರ, ಅವರು ದಿನಾಂಕ 27-07-2025ರಂದು ತಮ್ಮ ಪತ್ನಿ ಕೃಷ್ಣವೇಣಿ, ಅತ್ತಿಗೆ ಅನಿತಾ ಹಾಗೂ ಅಣ್ಣನ ಮಗ ಕಿಶೋರ್ ಜೊತೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಮೆರವಣಿಗೆ ಮರಿಯಣಪಾಳ್ಯ ಸರ್ಕಲ್ ಬಳಿ ತಲುಪಿದಾಗ, ರಾಜಪ್ಪ, ಪೀಟರ್ ಮತ್ತು ಪ್ರಶಾಂತ್ ಎಂಬವರು ಇವರನ್ನು ಅಡ್ಡಗಟ್ಟಿ, ಕಿಶೋರ್‌ ಅನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ. ಈ ವೇಳೆ ಪ್ರತಿಸ್ಪಂದನೆ ನೀಡಿದ ಚಂದ್ರು ಅವರ ಕುಟುಂಬದ ಮೇಲೆ ಮೂವರು ಕೈಗಳಿಂದ ಹಲ್ಲೆ ಮಾಡಿ ಗಂಭೀರ ಗಾಯಮಾಡಿದ್ದಾರೆ. ಈ ಹಲ್ಲೆಯಿಂದ ಚಂದ್ರು ಅವರ ಪತ್ನಿಗೆ ತೀವ್ರ ಪೆಟ್ಟು ಬಿದ್ದು ಅವರನ್ನು ಯಲಹಂಕದ ಸರ್ಕಾರಿ…

ಮುಂದೆ ಓದಿ..
ಸುದ್ದಿ 

ಫೇಸ್‌ಬುಕ್ ಲೋನ್ ವಂಚನೆ: 10 ಲಕ್ಷ ಲೋನ್ ಕೊಡುತ್ತೇನೆ ಎಂದು ನಂಬಿಸಿ ₹2.79 ಲಕ್ಷವರೆಗೆ ವಂಚನೆ – ಆರ್.ಟಿ.ನಗರದಲ್ಲಿ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025ಫೇಸ್‌ಬುಕ್ ಮೂಲಕ 10 ಲಕ್ಷ ರೂಪಾಯಿ ಲೋನ್ ಕೊಡುತ್ತೇನೆ ಎಂದು ನಂಬಿಸಿ ಒಟ್ಟು ₹2,79,484 ರೂಪಾಯಿ ವಂಚಿಸಿದ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಶಾಲ್ ಗೌಡ ಅವರು ತಮ್ಮ ತಂದೆ-ತಾಯಿಯೊಂದಿಗೆ ಆರ್.ಟಿ.ನಗರದ ವಿಳಾಸದಲ್ಲಿ ವಾಸವಿದ್ದು, ಕುಟುಂಬದ ಜೀವನ ಸಾಗಿಸಲು ಕರ್ನಾಟಕ ಮಟನ್ & ಚಿಕನ್ ಸ್ಮಾಲ್ ಎಂಬ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಜುಲೈ 24 ರಂದು ಫೇಸ್‌ಬುಕ್‌ನಲ್ಲಿ Deepak Reddy ಎಂಬ ಖಾತೆಯಿಂದ “ಲೋನ್ ನೀಡಲಾಗುತ್ತದೆ” ಎಂಬ ಸಂದೇಶವನ್ನು ನೋಡಿದ ಅವರು ಅದರಲ್ಲಿರುವ ಮೊಬೈಲ್ ಸಂಖ್ಯೆ (9152862915)ಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದರು. ಅವರೊಂದಿಗೆ ಮಾತನಾಡಿದ ಅಪರಿಚಿತ ವ್ಯಕ್ತಿ, 10 ಲಕ್ಷ ರೂಪಾಯಿ ಲೋನ್ ನೀಡುವುದಾಗಿ ನಂಬಿಸಿ, ವಿವಿಧ ದಾಖಲೆಗಳ ಹೆಸರಿನಲ್ಲಿ ಹಣ ಬೇಡುತ್ತಿದ್ದ. ಇದೇ ನೆಪದಲ್ಲಿ ಜುಲೈ 24ರಿಂದ 28ರ ನಡುವೆ ವಿವಿಧ ದಿನಗಳಲ್ಲಿ ₹40,730, ₹40,000, ₹42,555, ₹35,000…

ಮುಂದೆ ಓದಿ..
ಸುದ್ದಿ 

ಆರ್.ಟಿ.ನಗರದಲ್ಲಿ ಡಿಯೋ ಸ್ಕೂಟರ್ ಕಳ್ಳತನ – ಪೋಲಿಸರಿಗೆ ದೂರು ಸಲ್ಲಿಸಿದ ಖಾಸಗಿ ಉದ್ಯೋಗಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025ಆರ್.ಟಿ.ನಗರದ ಮೋದಿ ಗಾರ್ಡನ್‌ನ 5ನೇ ಕ್ರಾಸ್ ನಿವಾಸಿಯಾಗಿರುವ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ಡಿಯೋ ಸ್ಕೂಟರ್ ಕಳ್ಳತನವಾಗಿರುವ ಘಟನೆ ನಡೆದಿದ್ದು, ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜೇಂದ್ರ ಕುಮಾರ್ ಅವರು ತಮ್ಮ ಹೊಂಡಾ ಡಿಯೋ (ನಂ. KA 04 JN 9750) ವಾಹನವನ್ನು ಸಂಪ್ರಸಿದ್ಧಿ ಗೌಂಡನ್ ಬಳಿ ನಿಲ್ಲಿಸಿ, ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸಲು ಗ್ರೌಂಡ್ಗೆ ತೆರಳಿದ್ದರು. ಸಂಜೆ ಸುಮಾರು 6 ಗಂಟೆಗೆ ಮರಳಿ ಬಂದು ವೀಕ್ಷಿಸಿದಾಗ ವಾಹನ ಅಲ್ಲಿ ಇದ್ದು, ಆದರೆ ಅರ್ಧಗಂಟೆ ನಂತರ, ಅವರು ಮತ್ತೆ ಪರಿಶೀಲನೆ ನಡೆಸಿದಾಗ ಸ್ಕೂಟರ್ ಕಣ್ಮರೆಯಾಗಿತ್ತು. ವಾಹನದ ವಿವರಗಳು ಈ ರೀತಿ ಇವೆ: ವಾಹನ ಮಾದರಿ: 2018 ಬಣ್ಣ: ನೀಲಿ ಎಂಜಿನ್ ನಂ: JF39ET2016361 ಚ್ಯಾಸಿಸ್ ನಂ: ME4JF39DAJT011359 ಅಂದಾಜು ಮೌಲ್ಯ: ₹35,000 ಕಳ್ಳತನದ ಸಂಬಂಧ ಗುರುತು ತಿಳಿಯದ ವ್ಯಕ್ತಿಗಳ ವಿರುದ್ಧ ಎಫ್‌.ಐ.ಆರ್ ದಾಖಲಿಸಲಾಗಿದ್ದು,…

ಮುಂದೆ ಓದಿ..
ಸುದ್ದಿ 

ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಹಲ್ಲೆ – “ನಾನು ರೌಡಿ ಬಾಬು” ಎಂದು ಬೆದರಿಕೆ ಹಾಕಿದ ದುಷ್ಕರ್ಮಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 31–2025ಬೆಂಗಳೂರಿನ ಬ್ಯಾಟರಾಯನಪುರದ ಪಾರ್ಕ್ ವ್ಯೂ ಲೇಔಟ್‌ನಲ್ಲಿ ಉದ್ಯೋಗದಲ್ಲಿದ್ದ ಕಾರ್ಮಿಕನೊಬ್ಬನ ಮೇಲೆ ದುಷ್ಕರ್ಮಿಯೊಬ್ಬ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಆರಸೀಕೆರೆ ತಾಲೂಕು, ಕಲ್ಕೆರೆ ಗ್ರಾಮದ ಮೂಲದ ಆದರ್ಶ್ ಎಂಬ ಯುವಕ, ಇಲ್ಲಿ ಒಂದು ವರ್ಷದಿಂದ ಅಶೋಕ್ ಎಂಬವರ ಅಂಗಡಿಯಲ್ಲಿ ವಾಸವಾಗಿದ್ದು, ಕೆಲಸ ಮಾಡಿಕೊಂಡಿದ್ದನು. ದಿನಾಂಕ 28-07-2025 ರಂದು ರಾತ್ರಿ ಸುಮಾರು 8:35ರ ವೇಳೆಗೆ, ಅಂಗಡಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದು “ಹೆಲೈಟ್ ಬೇಕು” ಎಂದು ಕೇಳಿದ್ದ. ಅದಕ್ಕೆ ಆದರ್ಶ್ 1100 ರೂ. ಬೆಲೆಯ ಹೆಲೈಟ್ ನೀಡಿದ್ದು, ಹಣ ಕೇಳಿದಾಗ ಆ ವ್ಯಕ್ತಿ ಕೋಪಗೊಂಡು “ನಾನು ಯಾರು ಗೊತ್ತಾ? ನಾನು ರೌಡಿ ಬಾಬು” ಎಂದು ಬೆದರಿಸಿ, ಹೆಲೈಟ್ ನಿಂದ ಆತನ ಎಡಭುಜಕ್ಕೆ ಹೊಡೆದು, ನಂತರ ಕೊರಳಿನ ಪಟ್ಟಿಯನ್ನು ಹಿಡಿದು ಎಡಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಘಟನೆ ಬಳಿಕ ಅಂಗಡಿಯ ಮಾಲೀಕ ಅಶೋಕ್ ಅವರಿಗೆ ಕರೆಮಾಡಿ ವಿಷಯ…

ಮುಂದೆ ಓದಿ..
ಸುದ್ದಿ 

ಚೆಕ್ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಜಗಳ – ಮಹಿಳೆಗೆ ಜೀವ ಬೆದರಿಕೆ, ದೂರು ದಾಖಲಿಸಿ ತನಿಖೆ ಆರಂಭ

Taluknewsmedia.com

Taluknewsmedia.comಬೆಂಗಳೂರು, ಜುಲೈ 31 2025ಚೆಕ್ ಮೂಲಕ ಹಣದ ವ್ಯವಹಾರದಲ್ಲಿ ಉಂಟಾದ ಗೊಂದಲದಿಂದ ಮಹಿಳೆಯೊಬ್ಬರು ತೀವ್ರವಾಗಿ ಮಾನಸಿಕವಾಗಿ ಪರಿತಪಿಸುತ್ತಿದ್ದು, ಜೀವನಕ್ಕೆ ಬೆದರಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಂಬಂಧಿತ ಮಹಿಳೆಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ರುಕ್ಮಿಣಿ ಅವರ ಪ್ರಕಾರ, ಅವರು 2024ರ ಸೆಪ್ಟೆಂಬರ್ 25ರಂದು ಚಿನ್ಮಯಿ ಎಂಬವರೊಂದಿಗೆ ವಿವಾಹವಾಗಿದ್ದರು. ಇವರಿಗೆ ಶೋಭಾ ಎಂಬ ಮಹಿಳೆ ಹಲವಾರು ತಿಂಗಳಿಂದ ಪರಿಚಿತರಾಗಿದ್ದರು. ಶೋಭಾ ಅವರಿಗೆ 2025ರ ಜನವರಿ 23ರಂದು ₹3,00,000 ಮೌಲ್ಯದ ಬ್ಯಾಂಕ್ ಚೆಕ್ ನೀಡಲಾಗಿತ್ತು. ಅದರಿಂದ ನಂತರ ನಿರಂತರವಾಗಿ ಬಡ್ಡಿಯ ಸಹಿತ ಹಣ ಪಾವತಿಸುತ್ತಿದ್ದರು. ಆದರೆ, ಮೇ 26, 2025 ರಂದು ಅವರು ಶೋಭಾ ಅವರ ಮನೆಗೆ ತೆರಳಿ ಹಣ ಹಿಂತಿರುಗಿಸಿ ಚೆಕ್ ವಾಪಸ್ ಕೇಳಿದಾಗ ಕೊಡುವುದಾಗಿ ಹೇಳಿ ನಂತರ ನೀಡಲಿಲ್ಲ. ಪುನಃ ಕೇಳಿದಾಗ, ದೂರಿನ ಪ್ರಕಾರ, ಶೋಭಾ ಅವರು ದೂರುದಾರ ಹಾಗೂ ಅವರ…

ಮುಂದೆ ಓದಿ..
ಸುದ್ದಿ 

ನಮ್ಮ ನಿಷ್ಠೆ ಪ್ರಕೃತಿಗೆ…….

Taluknewsmedia.com

Taluknewsmedia.comನಮ್ಮ ನಿಷ್ಠೆ ಪ್ರಕೃತಿಗೆ……. ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ…… ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು……. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು……. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು…… ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು…….. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು…… ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ ಆಘಾತ ಸಂಭವಿಸಿರಬಹುದು…….. ಹರಕೆಗಳು ಸಂಭವಿಸಲು ಅವು ನಮ್ಮ ಮಿತಿಯಲ್ಲಿರಬೇಕು.ಮದುವೆ, ಮಕ್ಕಳು, ಪರೀಕ್ಷೆ, ಉದ್ಯೋಗ, ಆರೋಗ್ಯ, ಆಸ್ತಿ, ಅಧಿಕಾರ ಎಲ್ಲವೂ ಕನಿಷ್ಟ ನಾವು ಸ್ಪರ್ಧೆಯಲ್ಲಿ ಇದ್ದಾಗ ಮಾತ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಪರ್ಧೆಯಲ್ಲಿ ಇಲ್ಲದೆ ಕೇವಲ ಪ್ರೇಕ್ಷಕರೋ, ವೀಕ್ಷಕರೋ ಆಗಿದ್ದರೆ ಹರಕೆ ಪೂರೈಕೆಯಾಗುವುದಿಲ್ಲ. ಉದಾಹರಣೆಗೆ…… ನೀವು ಮದುವೆ ವಯಸ್ಸಿನವರಾಗಿದ್ದು, ವಧು ವರರ ಹುಡುಕಾಟದಲ್ಲಿ ಇದ್ದಾಗ, ಉದ್ಯೋಗದ ಹುಡುಕಾಟದಲ್ಲಿ ಇದ್ದಾಗ, ವೈದ್ಯಕೀಯ ಭಾಷೆಯಲ್ಲಿ ಮಕ್ಕಳಾಗುವ ಸಾಧ್ಯತೆ ಇದ್ದಾಗ, ಸಾವಿನ ಖಚಿತತೆ ಇಲ್ಲದಿದ್ದಾಗ, ರಾಜಕೀಯ…

ಮುಂದೆ ಓದಿ..
ಸುದ್ದಿ 

ವರದಿಗಾರಿಕೆಗೂ ರೋಬೋಟ್ಗಳು ಲಗ್ಗೆಯಿಡುವ ಕಾಲ ಸನ್ನಿಹಿತ : ನಿರ್ಮಲಾನಂದಶ್ರೀ

Taluknewsmedia.com

Taluknewsmedia.comನಾಗಮಂಗಲ : ಪತ್ರಕರ್ತರು ಗುಡ್ಡಗಾಡು ಕಣಿವೆ ಯುದ್ಧ ಪ್ರವಾಹ ಭೀತಿಯ ಪ್ರದೇಶಗಳಿಗೂ ತೆರಳಿ ಸುದ್ದಿ ಪ್ರಕಟಿಸುವ ಸಂದಿಗ್ದತೆ ರೋಬೋಟ್ ಗಳಿಂದ ದೂರವಾಗಲಿದೆ. ಆಯಾ ಪ್ರದೇಶಗಳಲ್ಲಿ ಒಂದೊಂದು ರೋಬೋಟ್ ಸುದ್ದಿ ಪ್ರಕಟಿಸುವ ಕಾರ್ಯ ಮಾಡುವ ದಿನ ಸನ್ನಿಹಿತ ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು. ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸತ್ಯ ನಿಖರ ಮತ್ತು ವಸ್ತುನಿಷ್ಠ ವರದಿಯನ್ನು ಹುಡುಕಿ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಹಿಂದೆ ಶಿಕ್ಷಣ ಮುಖ್ಯವಾಗಿತ್ತು ಇಂದು ಕೌಶಲ್ಯ…

ಮುಂದೆ ಓದಿ..
ಸುದ್ದಿ 

ಹೊಂಗಸಂದ್ರ ನಿವಾಸಿಗೆ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಡಿಕ್ಕಿಯಿಂದ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 29 – ನಗರದ ಹೊರವಲಯದಲ್ಲಿನ ವರ್ತೂರು–ದೊಮ್ಮಸಂದ್ರ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ತೀವ್ರ ಅಪಘಾತದಲ್ಲಿ ಆಟೋ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಬೆಂಗಳೂರಿನ ಹೊಂಗಸಂದ್ರ ನಿವಾಸಿಯಾದ ವಿನಾಯಕ್ ನಾಯಕ್ (ವಯಸ್ಸು: 45) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 1:15ರ ವೇಳೆಗೆ ವಿನಾಯಕ್ ನಾಯಕ್ ಅವರು ತಮ್ಮ ಆಟೋ (ನಂ: KA-01-AN-2247) ಚಾಲನೆ ಮಾಡಿಕೊಂಡು ವರ್ತೂರು ಕಡೆಯಿಂದ ದೊಮ್ಮಸಂದ್ರ ಕಡೆಗೆ ಹೋಗುತ್ತಿದ್ದರು. ಈ ವೇಳೆ, ಹೆಗೊಂಡನಹಳ್ಳಿ ಬಳಿಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ, ಹಿಂದಿನಿಂದ ಬಂದಿದ್ದ ಬಿಎಂಟಿಸಿ ಬಸ್ (ನಂ: KA-57-F-6111) ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ, ಆಟೋ ಸಂಪೂರ್ಣ ಜಖಂಗೊಂಡಿದ್ದು, ವಿನಾಯಕ್ ನಾಯಕ್ ಅವರಿಗೆ ತಲೆಗೆ ಹಾಗೂ ಬಲಗಾಲಿಗೆ ತೀವ್ರ ಗಾಯಗಳಾಗಿವೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಸಾರ್ವಜನಿಕರ ನೆರವಿನಿಂದ ಸ್ವಸ್ತಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಡಿತರ ಸಂಬಂಧಿಕರು ನೀಡಿದ…

ಮುಂದೆ ಓದಿ..
ಸುದ್ದಿ 

ಸರ್ಜಾಪುರರಸ್ತೆ ಬಳಿ ಭೀಕರ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲೆ

Taluknewsmedia.com

Taluknewsmedia.comಸರ್ಜಾಪುರ, ಜುಲೈ 29, 2025:ಸರ್ಜಾಪುರ-ಬಾಗಲೂರು ರಸ್ತೆಯ ಸರ್ಜಾಪುರ ಬಾರ್ಡರ್ ಬಳಿ ಭೀಕರ ಮೋಟಾರ್ ಸೈಕಲ್ ಅಪಘಾತ ಸಂಭವಿಸಿದ್ದು, 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತನ ಜೊತೆಯಲ್ಲಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಸರ್ಜಾಪುರ ಟೌನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ರಾಜ್ಯದ ಗೌನ್ ನಗರ ಮೂಲದ ಹರಿಕೃಷ್ಣ ಗುರಿಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬಪ್ಪ ಸರ್ಕಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಳೆದ 5-6 ತಿಂಗಳಿಂದ ಸರ್ಜಾಪುರ ಟೌನ್‌ನ ಹರ್ಬನ್ ಗ್ರೀನ್ ವಿಲಾಸ್ ಹಿಂಭಾಗದ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು. ಅಪಘಾತದ ವಿವರ:ದಿನಾಂಕ 28-07-2025ರಂದು ಮಧ್ಯಾಹ್ನ ಸುಮಾರು 2:00 ಗಂಟೆ ವೇಳೆಗೆ, ಹರಿಕೃಷ್ಣ ಗುರಿಯ ಹಾಗೂ ಬಪ್ಪ ಸರ್ಕಾರ್ ತಮಿಳುನಾಡು ಬಾರ್ಡರ್ ಭಾಗದಿಂದ ಮೀನನ್ನು ತಂದುಕೊಳ್ಳಲು ಹೋಗಿ ಮೋಟಾರ್ ಸೈಕಲ್ ಮೂಲಕ ವಾಪಸ್ಸು ಬರುತ್ತಿದ್ದರು. ಈ ವೇಳೆ ಹರಿಕೃಷ್ಣ ಗುರಿಯನು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಾವ್ಯ ಅನುಮಾನಾಸ್ಪದ ರೀತಿಯಲ್ಲಿ ಕಾಣೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:ನಗರದ ವಸತಿ ಪ್ರದೇಶವೊಂದರಲ್ಲಿ ವಾಸವಿದ್ದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಾವ್ಯ ಎಂಬ ಯುವತಿ ದಿನಾಂಕ 27 ಜುಲೈ 2025ರಂದು ರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಕಾಣೆಯಾದ ಘಟನೆ ವರದಿಯಾಗಿದೆ. ಕಾವ್ಯನ ತಂದೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದಿನಾಂಕ 27ರಂದು ರಾತ್ರಿ ಸುಮಾರು 9.00 ಗಂಟೆಗೆ ಅವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಊಟ ಮುಗಿಸಿ ಮಲಗಿದ್ದರು. ಮಧ್ಯರಾತ್ರಿ ಸುಮಾರು 1.00 ಗಂಟೆಗೆ ಎದ್ದು ನೋಡಿದಾಗ ಮಗಳು ಮಲಗಿದ್ದ ಸ್ಥಳದಲ್ಲಿ ಕಾಣಿಸದಿದ್ದಾಳೆ. ತಕ್ಷಣವೇ ಕುಟುಂಬದವರು ಪರಿಸರದಲ್ಲಿ ಹಾಗೂ ಸಂಬಂಧಿತ ಜಾಗಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ದೊರಕಲಿಲ್ಲ. ಅನಂತರ ದಿನಾಂಕ 28 ಜುಲೈ 2025ರಂದು ಬೆಳಿಗ್ಗೆ 10.30ರ ವೇಳೆಗೆ ಶಿವರಾಜ್‍ರವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾವ್ಯನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಸ್ಥಳೀಯ ನಿವಾಸಿಗಳಿಂದ…

ಮುಂದೆ ಓದಿ..