ಸುದ್ದಿ 

ಮನೆಯೊಳಗೆ ಕಳ್ಳತನ: ಲ್ಯಾಪ್‌ಟಾಪ್, ಮೊಬೈಲ್ ಕಳವು

Taluknewsmedia.com

Taluknewsmedia.comಬೆಂಗಳೂರು, ಜುಲೈ 28: 2025ಯಲಹಂಕದ ನಿವಾಸಿಯೊಬ್ಬರ ಮನೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬೆಳಿಗ್ಗೆ ವೇಳೆ ದ್ವಾರ ಮುರಿದು ಒಳಪ್ರವೇಶಿಸಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಕುಮಾರ್ ಅವರ ಪ್ರಕಾರ, ಜುಲೈ 25ರಂದು ಬೆಳಗ್ಗೆ ಸುಮಾರು 6.20ರ ಸುಮಾರಿಗೆ ಅಪರಿಚಿತ ಅಸಾಮಿ ಮನೆಯೊಳಗೆ ನುಗ್ಗಿ, ಅವರ ಮಗಳ ಕೊಠಡಿಯಲ್ಲಿ ಇಡಲಾಗಿದ್ದ ಡೆಲ್ ಕಂಪನಿಯ ಲ್ಯಾಪ್‌ಟಾಪ್ ಹಾಗೂ ವಿವೋ ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾನೆ. ಈ ಸಂದರ್ಭ ವಿಜಯ್ ಕುಮಾರ್ ಅವರು ಸ್ನಾನಕ್ಕೆ ಹೋಗಿದ್ದಾಗ ಮನೆಯ ಬಾಗಿಲು ಲಾಕ್ ಮಾಡಲಾಗಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಗಳು ದಾಖಲಾಗಿವೆ. ಕಳವಾದ ವಸ್ತುಗಳ ಮೌಲ್ಯ ಸುಮಾರು ₹40,000 ಎಂದು ಅಂದಾಜಿಸಲಾಗಿದೆ.affected ಈ ಸಂಬಂಧ ಯಲಹಂಕ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪರಿಚಿತ ಕಳ್ಳನನ್ನು ಗುರುತಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಜಯ್ ಕುಮಾರ್ ಮನವಿ…

ಮುಂದೆ ಓದಿ..
ಸುದ್ದಿ 

ಬೈಕ್ ಕಳವು: ವ್ಯಾಪಾರಸ್ಥರಿಂದ ಯಲಹಂಕ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 28:2025ಯಲಹಂಕದ ಕೋಗಿಲು ಕ್ರಾಸ್ ಪ್ರದೇಶದಲ್ಲಿ ವ್ಯಾಪಾರಕ್ಕಾಗಿ ಇಡಲಾಗಿದ್ದ ಬೈಕ್‌ವೊಂದು ಕಳವಾಗಿರುವ ಘಟನೆ ನಡೆದಿದೆ. ವ್ಯಾಪಾರಸ್ಥರಾದ ಶ್ರೀ ವಿಷ್ಣು ಬಂಜಾರ ಅವರು ನೀಡಿದ ದೂರಿನ ಪ್ರಕಾರ, ಅವರು ಕೋಗಿಲು ಕ್ರಾಸ್‌ನ ರಘು ಎಂಬವರ ಜಾಗದಲ್ಲಿ ಬೆಡ್‌ಶೀಟ್ ವ್ಯಾಪಾರ ಮಾಡುತ್ತಿದ್ದಾರೆ. ಜುಲೈ 14 ರಂದು ಬೆಳಿಗ್ಗೆ 10 ಗಂಟೆಯ ವೇಳೆಗೆ ತಮ್ಮ ಸೈಂಡ್ಲರ್ ಬೈಕ್ (ಸಂಖ್ಯೆ: 5 14 8333) ಅನ್ನು ವ್ಯಾಪಾರದ ಜಾಗದ ಶೆಡ್‌ ಬಳಿ ನಿಲ್ಲಿಸಲಾಗಿತ್ತು. ಆದರೆ ಜುಲೈ 15 ರಂದು ಬೆಳಿಗ್ಗೆ 6 ಗಂಟೆಗೆ ನೋಡಿದಾಗ ಬೈಕ್ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ಅವರು ಶಂಕಿಸುವಂತೆ, ಅಪರಿಚಿತ ಕಳ್ಳರು ಬೈಕ್ ಕಳವು ಮಾಡಿಕೊಂಡಿರಬಹುದೆಂದು ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಗಂಡ ಕಾಣೆಯಾಗಿರುವ ಪ್ರಕರಣ – ಎಫ್‌ಐಆರ್ ಅರ್ಜಿ ಆಧಾರಿತ ಸುದ್ದಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 28: 2025ಅಮರಜ್ಯೋತಿ ಲೇಔಟ್, ರಾಚಿನಹಳ್ಳಿ ನಿವಾಸಿಯಾಗಿರುವ ಗೃಹಿಣಿಯೊಬ್ಬರು ತಮ್ಮ ಗಂಡನ ಕಾಣೆಯಾದ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫಿರ್ಯಾದಿನ ಪ್ರಕಾರ, ಅವರು ತಮ್ಮ ಗಂಡ ಹಾಗೂ ನಾಲ್ಕು ಮಕ್ಕಳೊಂದಿಗೆ ನಂ.124, 2ನೇ ಮಹಡಿಯಲ್ಲಿ ವಾಸವಾಗಿದ್ದು, ಗಂಡ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರು. ದಿನಾಂಕ 29 ಜೂನ್ 2025 ರಂದು ರಾತ್ರಿ ಅವರ ಗಂಡ ಮಕ್ಕಳೊಂದಿಗೆ ಊಟ ಮಾಡಿದ್ದು, ನಂತರ ದಿನಾಂಕ 30 ಜೂನ್ 2025 ರಂದು ಬೆಳಗ್ಗೆ 4 ಗಂಟೆಗೆ ಮನೆದಿಂದ ನಿರ್ಗಮಿಸಿದ್ದಾರೆ. ಅದಾದಮೇಲೆ ಅವರು ಮನೆಗೆ ಮರಳದೇ ಕಾಣೆಯಾಗಿದ್ದಾರೆ ಎಂದು ಫಿರ್ಯಾದಿದಾರರು ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿ ವಿವರಗಳು ಹೀಗಿವೆ: ಹೆಸರು: ಅಸಾಂ ಪಾಪ (ವಯಸ್ಸು: 49 ವರ್ಷ) ಎತ್ತರ: ಸುಮಾರು 5.2 ಅಡಿ ಮೈಬಣ್ಣ: ಕಪ್ಪು ಮುಖ: ದಪ್ಪ ಮುಖ ಮೈಕಟ್ಟು: ಸಾಧಾರಣ ಮಾತನಾಡುವ ಭಾಷೆ: ಕನ್ನಡ ಮತ್ತು…

ಮುಂದೆ ಓದಿ..
ಸುದ್ದಿ 

ಬೀದಿ ನಾಯಿಗಳಿಗೆ ಊಟ ಹಾಕಲು ಹೋಗಿದ್ದ ಮಹಿಳೆಗೆ ದೌರ್ಜನ್ಯ – ಮೂವರ ವಿರುದ್ಧ ಕೇಸ್

Taluknewsmedia.com

Taluknewsmedia.comಬೆಂಗಳೂರು, ಜುಲೈ 28 2025ಬೀದಿ ನಾಯಿಗಳಿಗೆ ಊಟ ಹಾಕಲು ಹೊರಟ್ಟಿದ್ದ ಒಂಟಿ ಮಹಿಳೆಯೊಬ್ಬರ ಮೇಲೆ ನಿಂದನೆ, ಹಲ್ಲೆ, ಲೈಂಗಿಕ ಕಿರುಕುಳ ಹಾಗೂ ಚಿನ್ನದ ಸರ ಲೂಟಿಗೀಡಾದ ಘಟನೆ ಬೆಂಗಳೂರಿನ ಲಕ್ಷ್ಮಯ್ಯ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ. ದೂರಿನ ಪ್ರಕಾರ, ಜೂನ್ 17 ರಂದು ರಾತ್ರಿ 9:15ರ ಸುಮಾರಿಗೆ ಮಹಿಳೆ ಕೋಗಿಲು ಕ್ರಾಸ್, ಲಕ್ಷ್ಮಯ್ಯ ಗಾರ್ಡನ್, 7ನೇ ಕ್ರಾಸ್, ಮನೆ ನಂ.97 ಹತ್ತಿರದ ರಸ್ತೆಬದಿ ಹೋದಾಗ ಮನೆ ನಂ.96 ರ ನಿವಾಸಿಗಳಾದ ರಮೇಶ್, ಅಶ್ವಿನಿ, ಲಕ್ಷ್ಮೀ ಹಾಗೂ ಇನ್ನಿಬ್ಬರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕೈಗಳಿಂದ ಹಲ್ಲೆ ಮಾಡಿ, ರಮೇಶ್ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಜಗಳದ ಸಂದರ್ಭದಲ್ಲಿ ಮಹಿಳೆಯ ಡ್ರೈಮೆಂಡ್ ಪೆಂಡೆಂಟ್ ಇರುವ ಚಿನ್ನದ ಸರವನ್ನು ಬಲವಂತವಾಗಿ ಎಳೆದಿದ್ದು, ಈ ಗಲಾಟೆಯಲ್ಲಿ ಆಕೆಯ ಐಫೋನ್ ನೆಲಕ್ಕೆ ಬಿದ್ದು ಹಾನಿಯಾಗಿದೆ. ಈ ಸಂಬಂಧ ಮಹಿಳೆ ಬಿಎಸ್‌ಸಿ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹2.15 ಲಕ್ಷ ವಂಚನೆ: ಸೈಬರ್ ಕ್ರೈಂ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 28:2025 ಆನ್‌ಲೈನ್‌ನಲ್ಲಿ ಹೆಚ್ಚು ಲಾಭ ನೀಡುವ ಹೂಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುವಕನೊಬ್ಬ ತನ್ನಿಂದ ₹2.15 ಲಕ್ಷದಷ್ಟು ಹಣ ವಂಚಿಸಲ್ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆಗೆ ಫಿರ್ಯಾದು ನೀಡಲಾಗಿದೆ. ಫಿರ್ಯಾದಿದಾರರ mobiel ನಂ. 9365070779 ಗೆ ಅಪರಿಚಿತ ನಂಬರಿನಿಂದ ಸಂದೇಶವೊಂದು ಬಂದಿದ್ದು, ಅದರಲ್ಲಿ “ಹಣ ಹೂಡಿದರೆ ಹೆಚ್ಚಿನ ಲಾಭ ಸಿಗುತ್ತದೆ” ಎಂಬ ಮಿಥ್ಯಾ ಪ್ರಚಾರವಿತ್ತು. ಪ್ರಾರಂಭದಲ್ಲಿ ಸ್ಕ್ರೀನ್‌ಶಾಟ್‌ಗಳ ಹಂಚಿಕೆ ಮಾಡಿಸುವಂತೆ ಟಾಸ್ಕ್‌ಗಳನ್ನು ನೀಡಿ, ನಂತರ ಟೆಲಿಗ್ರಾಂ (Telegram) ಆ್ಯಪ್‌ಗೆ ಸೇರಿಸುವಂತೆ ಸೂಚನೆ ನೀಡಲಾಯಿತು. ಟೆಲಿಗ್ರಾಂ ಆ್ಯಪ್‌ಗೆ ಸೇರಿದ್ದ ಫಿರ್ಯಾದಿದಾರರಿಗೆ ಪ್ರಾರಂಭದಲ್ಲಿ ₹200ರಿಂದ ₹5000 ವರೆಗೆ ಲಾಭದಂತೆ ತೋರಿಸಿ, ಬಳಿಕ ₹15,000, ₹50,000, ₹1,50,000 ಹಂತ ಹಂತವಾಗಿ ಹಣ ಪಾವತಿಸಲು ಒತ್ತಡ ಹಾಕಲಾಯಿತು. ಈ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳ ಮೂಲಕ ಪಾವತಿಸಬೇಕೆಂದು ತಿಳಿಸಲಾಯಿತು. ಅಂತಿಮವಾಗಿ ₹4…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಉದ್ಯೋಗಸ್ಥನ ಲ್ಯಾಪ್‌ಟಾಪ್ ಕಳವು – ₹1.5 ಲಕ್ಷ ನಷ್ಟ

Taluknewsmedia.com

Taluknewsmedia.comಬೆಂಗಳೂರು, ಜುಲೈ 28 – 2025ನಗರದ ನಾಗವಾರದ ಮಣಿತೇಜ ಬೂರ್ಲಾ ಎಂಬವರು ತಮ್ಮ ಲ್ಯಾಪ್‌ಟಾಪ್ ಕಳವಾಗಿರುವ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ, ಡೆಲ್ ಕಂಪನಿಯ 5450 ಮಾದರಿಯ ಲ್ಯಾಪ್‌ಟಾಪ್ (Serial Number: GD6RL84) ಅನ್ನು ಯಾರೋ ಅಜ್ಞಾತ ವ್ಯಕ್ತಿಗಳು ಕದ್ದೊಯ್ಯಲಾಗಿದೆ. ಮಣಿತೇಜ ಅವರು ಕೆಲಸಮಾಡುತ್ತಿರುವ ಎ.ಎನ್.ಝಡ್ ಸಪೋಟರ್ ಸರ್ವೀಸ್ ಕಂಪನಿಗೆ ಸೇರಿದ ಈ ಲ್ಯಾಪ್‌ಟಾಪ್‌ನ ಅಂದಾಜು ಮೌಲ್ಯ ₹1,50,000 ಆಗಿದ್ದು, ಜುಲೈ 24 ರಂದು ಬೆಳಿಗ್ಗೆ 11:30 ರಿಂದ ಜುಲೈ 25 ರಂದು ಸಂಜೆ 3:40ರ ನಡುವೆ ಕಳವಾಗಿದೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಮುಂದಿನ ತನಿಖೆ ನಡೆಯುತ್ತಿದೆ

ಮುಂದೆ ಓದಿ..
ಸುದ್ದಿ 

ಬೆಂಗಳೂರು: ನಿವೇಶನ ಮಾರಾಟದಲ್ಲಿ 40 ಲಕ್ಷ ರೂ. ವಂಚನೆ – ಕೊಲೆ ಬೆದರಿಕೆ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 28: ನಿವೇಶನ ಖರೀದಿಗಾಗಿ 40 ಲಕ್ಷ ರೂ. ಹಣ ಪಾವತಿಸಿದ ವ್ಯಕ್ತಿಗೆ ನೊಂದಾಯಿತ ದಾಖಲೆ ನೀಡದೆ ಮೋಸ ಮಾಡಿರುವ ಪ್ರಕರಣವು ಯಲಹಂಕದ ಕೋಗಿಲು ಲೇಔಟ್‌ನಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭರತ್ ಬಿ ರ್ ಪ್ರಕಾರ, ಅವರು ಕಿಶೋರ್ ಪಟೇಲ್ ಎಂಬುವವರಿಂದ 4.34 ಕೋಟಿ ರೂ.ಗೆ ನಿವೇಶನ ಖರೀದಿಗೆ ಒಪ್ಪಂದ ಮಾಡಿಕೊಂಡು, ಮೊದಲ ಹಂತದಲ್ಲಿ 40 ಲಕ್ಷ ರೂ. ಪಾವತಿಸಿದ್ದಾರೆ. ಆದರೆ, ನಿಗದಿಯಂತೆ ಮಾರಾಟದ ನೊಂದಣಿ ಮಾಡದೆ ಸಮಯ ತಡಮಾಡಿ, ನಂತರ ಅವರ ಮಗ ಹರೀಶ್ ಪಟೇಲ್ ಹಕ್ಕು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಇಬ್ಬರು, ಭರತ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳೀಯ ರೌಡಿಗಳ ಸಹಾಯದಿಂದ ಕೊಲೆ ಮಾಡುವ ಬೆದರಿಕೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಿಶೋರ್ ಪಟೇಲ್ ಮತ್ತು ಹರೀಶ್ ಪಟೇಲ್ ವಿರುದ್ಧ…

ಮುಂದೆ ಓದಿ..
ಸುದ್ದಿ 

ಅಂಗಡಿಗೆ ನುಗ್ಗಿ ಲಕ್ಷ ರೂಪಾಯಿಯ ಮಷಿನ್ ಕಳ್ಳತನ – ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯಲ್ಲಿ ಘಟನೆ

Taluknewsmedia.com

Taluknewsmedia.comಆನೇಕಲ್, ಜುಲೈ 27:ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿ ಗ್ರಾಮದಲ್ಲಿ ಅಂಗಡಿ ಕಳ್ಳತನದ ಘಟನೆ ನಡೆದಿದೆ. ಮಹಾಲಕ್ಷ್ಮಿ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಅಳವಡಿಸಿರುವ ಗ್ರಾನೈಟ್ ಕಟಿಂಗ್ ಮತ್ತು ಪಾಲಿಶಿಂಗ್ ಅಂಗಡಿಗೆ ಯಾರೋ ಅಜ್ಞಾತ ಕಳ್ಳರು ನುಗ್ಗಿ, ಸುಮಾರು ₹1 ಲಕ್ಷ ಮೌಲ್ಯದ ಮಷಿನ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಶ್ರೀ ಪಂಕಜ್ ಕುಮಾರ್ ಬಿನ್ ಜಗದೀಶ್ ಸಿಂಗ್, ಕಾವಲಹೊಸಹಳ್ಳಿ ನಿವಾಸಿಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಮಂಜುನಾಥರೆಡ್ಡಿಯವರಿಗೆ ಸೇರಿದ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ವ್ಯವಹಾರ ನಡೆಸುತ್ತಿದ್ದರು. ಸದರಿ ಅಂಗಡಿಯಲ್ಲಿ ಗ್ರಾನೈಟ್ ಕಟಿಂಗ್ ಹಾಗೂ ಪಾಲಿಶಿಂಗ್ ಮಷಿನ್‌ಗಳು ಇಡಲಾಗಿದ್ದವು. ಶ್ರೀ ಪಂಕಜ್ ಕುಮಾರ್ ಅವರ ಪ್ರಕಾರ, ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿಯನ್ನು ಮುಚ್ಚಿ, ಮನೆಗೆ ಹೋದ ಅವರು, ಜುಲೈ 27 ಬೆಳಿಗ್ಗೆ 8 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಮಷಿನ್‌ಗಳು ಕಾಣೆಯಾಗಿದ್ದವು. ಕೂಡಲೇ ಆನೇಕಲ್ ಗ್ರಾಮಾಂತರ ಠಾಣೆಗೆ ದೂರು ನೀಡಲಾಯಿತು.…

ಮುಂದೆ ಓದಿ..
ಸುದ್ದಿ 

ಅಂಗಡಿಯ ಶಟರ್ ಮುರಿದು ₹82,000 ನಗದು ಹಾಗೂ ವಸ್ತುಗಳ ಕಳವು

Taluknewsmedia.com

Taluknewsmedia.comನಗರದ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಜನ ಔಷಧಿ ಅಂಗಡಿಗೆ ಸಂಬಂಧಪಟ್ಟ ಈ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಅಂಗಡಿಯಲ್ಲಿ ಶಟರ್ ಮುರಿದು ಒಳ ನುಗ್ಗಿದ ಅಪರಿಚಿತ ಕಳ್ಳರು, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು ₹82,000 ನಗದು ಹಾಗೂ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಶ್ರೀ ಶೈಲಕುಮಾರ್ ಅವರು ತಮ್ಮ ಅಂಗಡಿಯನ್ನು ದಿನಾಂಕ 26/07/2025 ರಂದು ರಾತ್ರಿ ಸುಮಾರು 09:30ರ ಹೊತ್ತಿಗೆ ಮುಚ್ಚಿ ಮನೆಗೆ ತೆರಳಿದ್ದರು. ದಿನಾಂಕ 27/07/2025 ರಂದು ಬೆಳಿಗ್ಗೆ 09:00ರ ವೇಳೆಗೆ ಅಂಗಡಿ ತೆರೆಯಲು ಬಂದಾಗ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿತು. ಶಂಕಿತ ಸ್ಥಿತಿಯಲ್ಲಿ ಅಂಗಡಿಯ ಒಳಗೆ ಪ್ರವೇಶಿಸಿದ ಶ್ರೀಶೈಲ ಕುಮಾರ್ ಅವರ, ಗಲ್ಲಾ ಪೆಟ್ಟಿಗೆಯ ಹಣ ಮತ್ತು ಕೆಲವು ವಸ್ತುಗಳು ಕಳುವಾಗಿರುವುದನ್ನು ಗಮನಿಸಿದರು. ತಕ್ಷಣವೇ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ…

ಮುಂದೆ ಓದಿ..
ಸುದ್ದಿ 

ಸ್ನೇಹಿತನಿಗೆ ಸಾಲವಾಗಿ ಕೊಟ್ಟ ಹಣ ವಾಪಸಿಲ್ಲ – ಕೇಳಿದಂತೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ, ಜೀವ ಬೆದರಿಕೆ!

Taluknewsmedia.com

Taluknewsmedia.comಆನೇಕಲ್, ಜುಲೈ 27:ಸ್ನೇಹಿತನಿಗೆ ಮಾನವೀಯತೆ ನೆಪದಲ್ಲಿ ಸಾಲವಾಗಿ ಕೊಟ್ಟ ಹಣವನ್ನು ವಾಪಸೆಗೆ ಕೇಳಿದ ಪರಿಣಾಮ, ಆರೋಪಿಗಳು ಹಣ ಕೊಡುವ ಬದಲು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ಪ್ರಾಣಬೆದರಿಕೆ ಹಾಕಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೋಕೇಶ್ ಎಂಬವರು ದಿನಾಂಕ 27-07-2025 ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಸ್ನೇಹಿತ ಕರಿಯಲಪ್ಪ ನನ್ನಿಂದ ರೂ. 1,16,000/- ಅನ್ನು ಸಾಲವಾಗಿ ಪಡೆದು, ಕೆಲ ದಿನಗಳಲ್ಲಿ ಹಿಂತಿರುಗಿಸುತ್ತೇನೆಂದು ಭರವಸೆ ನೀಡಿದ್ದನು. ಬಳಿಕ ಚೆಕ್ (ಚೆಕ್ ನಂ. 054816) ನೀಡಿ ಹಣ ಕೊಡಲಿಲ್ಲ. ಮತ್ತೆ ನಾನು ಕೇಳಿದಾಗ ಹಲವು ದಿನಗಳಿಂದ ಹಣ ತಳ್ಳುತ್ತಿದ್ದನು. ಕೊನೆಗೆ ದಿನಾಂಕ 25-07-2025 ರಂದು ಜಿಗಣಿ ಕಡೆಯಿಂದ ಕರೆಸಿಕೊಂಡು, ಸಿಡಿಹೊಸಕೋಟಿ ರಸ್ತೆಯಲ್ಲಿರುವ ಒಂದು ಖಾಲಿ ಪ್ರದೇಶಕ್ಕೆ ಕರೆಯಲು ಮಾಡಿದರು” ಎಂದು ತಿಳಿಸಿದ್ದಾರೆ. ಅಲ್ಲಿ ಕರಿಯಲಪ್ಪ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ನಾರಾಯಣಸ್ವಾಮಿ, ಮರಸೂರು ನಿವಾಸಿ, ಹಣದ…

ಮುಂದೆ ಓದಿ..