ಸಿಎಂ ತವರಿನಲ್ಲಿ ಒಳಮೀಸಲಾತಿ ಹೋರಾಟಗಾರರ ಪ್ರತಿಭಟನೆ – ಪೊಲೀಸ್ ವಶಕ್ಕೆ ತೆಗೆದುಕೊಂಡ ನಂತರ ಬಿಡುಗಡೆ
ಸಿಎಂ ತವರಿನಲ್ಲಿ ಒಳಮೀಸಲಾತಿ ಹೋರಾಟಗಾರರ ಪ್ರತಿಭಟನೆ – ಪೊಲೀಸ್ ವಶಕ್ಕೆ ತೆಗೆದುಕೊಂಡ ನಂತರ ಬಿಡುಗಡೆ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸುತ್ತಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ಸದಸ್ಯರು ಶನಿವಾರ ವರುಣ ಪ್ರದೇಶದಲ್ಲಿ ನಡೆಸಲು ಯೋಚಿಸಿದ್ದ ಜಾಥಾಕ್ಕೆ ಪೊಲೀಸ್ ಅನುಮತಿ ಇಲ್ಲದಿದ್ದರೂ ಮುಂದಾಗಿದ್ದರಿಂದ, ಅವರನ್ನು ಪೊಲೀಸರು ತಾತ್ಕಾಲಿಕವಾಗಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಮುಖ್ಯಾಂಶಗಳು… ಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂಬ ಆಗ್ರಹಸಿಎಂ ಸಿದ್ದರಾಮಯ್ಯ ಅವರ ಹುಟ್ಟೂರಿನ ಸಿದ್ದರಾಮನಹುಂಡಿಯಲ್ಲಿ ಜಾಥಾ ಆರಂಭಿಸುವ ಯೋಜನೆ.ಅನುಮತಿ ಇಲ್ಲದ ಕಾರಣ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನಹುಂಡಿಯಿಂದ ಮೈಸುರಿನತ್ತ ಕಾಲ್ನಡಿಗೆಯಲ್ಲಿ ಜಾಥಾ ಹಮ್ಮಿಕೊಳ್ಳಲು ಹೋರಾಟ ಸಮಿತಿಯ ಕಾರ್ಯಕರ್ತರು ಮುಂದಾಗಿದ್ದರು. ವರುಣೆಯಿಂದ ತಿ. ನರಸೀಪುರ, ಬನ್ನೂರು ಮತ್ತು ವ್ಯಾಸರಾಯಪುರ ಮಾರ್ಗವಾಗಿ ಡಿಸೆಂಬರ್ 11ರಂದು ಮೈಸೂರಿನ ಪುರಭವನ ಆವರಣದಲ್ಲಿ ಮಹಾಸಭೆ…
ಮುಂದೆ ಓದಿ..
