ನಕಲಿ ಮತದಾರರ ಗುರುತಿನ ಚೀಟಿ ಆರೋಪ ಪ್ರಕರಣ: ಬಿಜೆಪಿ ವಿರುದ್ಧದ ಮಾನಹಾನಿ ದಾವೆ ವಾಪಸ್ ಪಡೆದ ರಿಝ್ವಾನ್ ಅರ್ಷದ್
ನಕಲಿ ಮತದಾರರ ಗುರುತಿನ ಚೀಟಿ ಆರೋಪ ಪ್ರಕರಣ: ಬಿಜೆಪಿ ವಿರುದ್ಧದ ಮಾನಹಾನಿ ದಾವೆ ವಾಪಸ್ ಪಡೆದ ರಿಝ್ವಾನ್ ಅರ್ಷದ್ ಬೆಂಗಳೂರು: 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿದೆ ಎಂಬ ಆರೋಪದಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಟ್ವೀಟ್ಗಳನ್ನು ಅಳಿಸಲಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ವಿರುದ್ಧ ಸಲ್ಲಿಸಿದ್ದ ಮಾನಹಾನಿ ಮೊಕದ್ದಮೆಯನ್ನು ಶಿವಾಜಿನಗರ ಶಾಸಕ ರಿಝ್ವಾನ್ ಅರ್ಷದ್ ಹಿಂಪಡೆದಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಐಟಿ ಸೆಲ್ ಅಧ್ಯಕ್ಷರ ವಿರುದ್ಧ ರಿಝ್ವಾನ್ ಅರ್ಷದ್ ಅವರು ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆಯನ್ನು ನಗರದ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಕೆ.ಎನ್. ಶಿವಕುಮಾರ್ ಅವರು ಶುಕ್ರವಾರ ನಡೆಸಿದರು. ವಿಚಾರಣೆಯಲ್ಲಿ ದೂರುದಾರರ ಪರ ವಕೀಲರಾದ ಸೂರ್ಯ ಮುಕುಂದರಾಜ್ ಹಾಗೂ ಸಂಜಯ್ ಯಾದವ್ ಹಾಜರಾಗಿ ವಾದ ಮಂಡಿಸಿದರು. ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಾ ಟ್ವಿಟರ್ನಲ್ಲಿ ಪೋಸ್ಟ್ಗಳನ್ನು ಪ್ರಕಟಿಸಲಾಗಿದ್ದ ಕಾರಣ…
ಮುಂದೆ ಓದಿ..
