ಚಾಮರಾಜನಗರ ನಗರಸಭೆಯಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರದ ಜಾಲ ಮತ್ತು ಸಾರ್ವಜನಿಕರಿಗಿರುವ ಪಾಠಗಳು…
ಚಾಮರಾಜನಗರ ನಗರಸಭೆಯಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರದ ಜಾಲ ಮತ್ತು ಸಾರ್ವಜನಿಕರಿಗಿರುವ ಪಾಠಗಳು… ಸರ್ಕಾರಿ ಕಚೇರಿಗಳು ಇಂದು ಸೇವೆಯ ಕೇಂದ್ರಗಳಾಗುವ ಬದಲು ಸಾರ್ವಜನಿಕರ ಶೋಷಣೆಯ ಅಡ್ಡೆಗಳಾಗಿ ಮಾರ್ಪಟ್ಟಿವೆ ಎನ್ನುವುದಕ್ಕೆ ಚಾಮರಾಜನಗರ ನಗರಸಭೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕಾದ ಮೂಲಭೂತ ಸೇವೆಗಳಿಗೆ ಇಂದು ‘ಬೆಲೆ’ ನಿಗದಿಯಾಗಿದೆ. ಅಧಿಕಾರಿಗಳು ಸಹಿ ಹಾಕಲು ಲಂಚದ ಬೇಡಿಕೆಯಿಡುವುದು ಕೇವಲ ವೈಯಕ್ತಿಕ ದುರಾಸೆಯಲ್ಲ, ಅದು ಇಡೀ ಆಡಳಿತ ಯಂತ್ರಕ್ಕೆ ಹಿಡಿದ ತುಕ್ಕು. ಒಬ್ಬ ಸಾಮಾನ್ಯ ಮನುಷ್ಯ ತನ್ನ ಹಕ್ಕನ್ನು ಪಡೆಯಲು ಅಧಿಕಾರಿಗಳ ಮುಂದೆ ಕೈಚಾಚಿ ನಿಲ್ಲುವ ಬದಲು, ಜೇಬಿಗೆ ಕೈ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ನಮ್ಮ ಸಮಾಜದ ದುರಂತ. ಚಾಮರಾಜನಗರ ನಗರಸಭೆಯಲ್ಲಿ ಖಾತೆ ಬದಲಾವಣೆಯಂತಹ ಒಂದು ಸರಳ ಆಡಳಿತಾತ್ಮಕ ಪ್ರಕ್ರಿಯೆಗೆ ಅಧಿಕಾರಿಗಳು ವಿಧಿಸಿದ ಶುಲ್ಕ ಬರೋಬ್ಬರಿ 25 ಸಾವಿರ ರೂಪಾಯಿಗಳು! ಮೀಸೆ ನಾಗರಾಜು ಎಂಬ ನಾಗರಿಕರು ತಮ್ಮ ಕಾನೂನುಬದ್ಧ…
ಮುಂದೆ ಓದಿ..
