ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ: 40 ದಿನಗಳ ದಾಂಪತ್ಯ ದುರಂತದ ಒಳಸುಳಿಗಳು…
ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ: 40 ದಿನಗಳ ದಾಂಪತ್ಯ ದುರಂತದ ಒಳಸುಳಿಗಳು… ಫೆಬ್ರವರಿ 17, 2024. ಅಂದು ಉದ್ಯಮಿ ಸುದೀಪ್ ರೈ ಮತ್ತು ಸೌಮ್ಯ ಶೆಟ್ಟಿ ಪರಸ್ಪರ ಪ್ರೀತಿಸಿ, ಹೊಸ ಬದುಕಿನ ಭರವಸೆಯೊಂದಿಗೆ ಸಪ್ತಪದಿ ತುಳಿದಿದ್ದರು. ಆದರೆ, ‘ಪ್ರೀತಿಯ ವಿವಾಹ’ ಎಂಬ ಮಧುರ ಬಾಂಧವ್ಯದ ಹೊದಿಕೆಯೊಳಗೆ ಇಂತಹದೊಂದು ಭೀಕರ ದುರಂತ ಅಡಗಿದೆ ಎಂದು ಯಾರೂ ಊಹಿಸಿರಲಿಲ್ಲ. ಕೇವಲ 40 ದಿನಗಳಲ್ಲಿ ನೂರು ಕಾಲದ ಬಾಳಿನ ಕನಸು ಚೂರುಚೂರಾಗಿ, ಅಂತಿಮವಾಗಿ ಆತ್ಮಹತ್ಯೆ ಪ್ರಚೋದನೆಯಂತಹ (Abetment to Suicide) ಗಂಭೀರ ಕಾನೂನು ಪ್ರಕರಣವಾಗಿ ಮಾರ್ಪಟ್ಟಿದೆ. ಪ್ರೀತಿ, ದಾಂಪತ್ಯ ಮತ್ತು ದ್ವೇಷದ ಈ ಕರಾಳ ಪಯಣ ಕರಾವಳಿ ಭಾಗದಲ್ಲಿ ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಸುದೀಪ್ ರೈ ಮತ್ತು ಕಾರ್ಕಳದ ಸೌಮ್ಯ ಶೆಟ್ಟಿ 2024ರ ಫೆಬ್ರವರಿ 17ರಂದು ವಿವಾಹವಾದರು. ಮದುವೆಯ ನಂತರ ಸುದೀಪ್…
ಮುಂದೆ ಓದಿ..
