₹1.70 ಕೋಟಿ ಮೌಲ್ಯದ ಕಾಫಿ ರಸ್ತೆಯಲ್ಲಿದ್ದರೂ ಒಂದೇ ಒಂದು ಕಾಫಿ ಬೀಜ ಮಾಯವಾಗಲಿಲ್ಲ! ಚಿಕ್ಕಮಗಳೂರಿನ ಈ ಘಟನೆ ನಮಗೆ ಕಲಿಸುವ ಪಾಠವೇನು?…
₹1.70 ಕೋಟಿ ಮೌಲ್ಯದ ಕಾಫಿ ರಸ್ತೆಯಲ್ಲಿದ್ದರೂ ಒಂದೇ ಒಂದು ಕಾಫಿ ಬೀಜ ಮಾಯವಾಗಲಿಲ್ಲ! ಚಿಕ್ಕಮಗಳೂರಿನ ಈ ಘಟನೆ ನಮಗೆ ಕಲಿಸುವ ಪಾಠವೇನು?… ಜೂನ್ 13ರ ಆ ಶನಿವಾರದ ಕಗ್ಗತ್ತಲ ರಾತ್ರಿ. ಸಮಯ ಸುಮಾರು 12:10. ಸಹ್ಯಾದ್ರಿಯ ಮಡಿಲಲ್ಲಿರುವ ಬಾಬಾಬುಡನ್ ಗಿರಿಯ ತಪ್ಪಲಿನ ಶಾಂತತೆಯನ್ನು ಸೀಳಿಕೊಂಡು ದೊಡ್ಡ ಶಬ್ದವೊಂದು ಕೇಳಿಸಿತು. ಚಿಕ್ಕಮಗಳೂರು–ಕಡೂರು ಮುಖ್ಯರಸ್ತೆಯ ಕಣಿವೆ ಡೌನ್ ಪ್ರದೇಶದಲ್ಲಿ ಸಂಭವಿಸಿದ ಆ ಭೀಕರ ಲಾರಿ ಅಪಘಾತವು ಕೇವಲ ಒಂದು ದುರ್ಘಟನೆಯಾಗಿ ಉಳಿಯಲಿಲ್ಲ; ಬದಲಾಗಿ ಅದು ಕಾಫಿ ನಾಡಿನ ಜನರ ‘ಸಂಸ್ಕಾರ’ಕ್ಕೆ ಒಡ್ಡಿದ ಅಗ್ನಿಪರೀಕ್ಷೆಯಾಯಿತು. ಅಪಘಾತಕ್ಕೀಡಾದ ಆ ಲಾರಿಯಲ್ಲಿದ್ದುದು ಸಾಮಾನ್ಯ ಸರಕಲ್ಲ, ಬರೋಬ್ಬರಿ ₹1.70 ಕೋಟಿ ಮೌಲ್ಯದ ಕಾಫಿ ಮೂಟೆಗಳು! ಸಾಮಾನ್ಯವಾಗಿ ಇಂತಹ ಅಪಘಾತಗಳು ನಡೆದಾಗ, ಗಾಯಾಳುಗಳ ಕಿರುಚಾಟಕ್ಕಿಂತ ಅಲ್ಲಿ ಬಿದ್ದಿರುವ ವಸ್ತುಗಳನ್ನು ದೋಚುವವರ ಹಪಾಹಪಿಯೇ ಹೆಚ್ಚಾಗಿರುತ್ತದೆ. ಆದರೆ, ಅಂದು ಕಣಿವೆ ಡೌನ್ ಹಾದಿಯಲ್ಲಿ ಹರಡಿಕೊಂಡಿದ್ದು ಕಾಫಿ ಬೀಜಗಳ ಪರಿಮಳ ಮಾತ್ರವಲ್ಲ,…
ಮುಂದೆ ಓದಿ..
