ಮೃತ್ಯುವಿನ ದವಡೆಯಿಂದ ಮರಳಿ ಬಂದ ಕಂದಮ್ಮ: ಶಿರಸಿಯ ಈ ಎದೆ ಝಲ್ಲೆನಿಸುವ ಘಟನೆ…
ಮೃತ್ಯುವಿನ ದವಡೆಯಿಂದ ಮರಳಿ ಬಂದ ಕಂದಮ್ಮ: ಶಿರಸಿಯ ಈ ಎದೆ ಝಲ್ಲೆನಿಸುವ ಘಟನೆ… ಒಂದು ಕ್ಷಣದ ಅಜಾಗರೂಕತೆ ಮತ್ತು ಎದುರಾದ ಆತಂಕ… ಅದು ಶಿರಸಿಯ ಕಸ್ತೂರಬಾ ನಗರದ ಶಾಂತಿಯುತ ಸೋಮವಾರದ ಮಧ್ಯಾಹ್ನ. ಬಿಸಿಲಿನ ಬೇಗೆಯ ನಡುವೆ ಎಲ್ಲವೂ ಎಂದಿನಂತೆ ಸಾಮಾನ್ಯವಾಗಿಯೇ ಇತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಕೇವಲ ಎರಡು ವರ್ಷದ ಪುಟ್ಟ ಕಂದಮ್ಮ ‘ಭುವಿ’ ಆಟವಾಡುತ್ತಿದ್ದವಳು ಕ್ಷಣಾರ್ಧದಲ್ಲಿ ಕಣ್ಮರೆಯಾದಾಗ ಇಡೀ ವಾತಾವರಣವೇ ಸ್ತಬ್ಧವಾಯಿತು. ಮಗುವಿಗೆ ಊಟ ತರಲೆಂದು ಅಜ್ಜಿ ಮನೆಗೆ ಹೋದ ಆ ಐದೇ ನಿಮಿಷಗಳು ಆ ಕುಟುಂಬದ ಪಾಲಿಗೆ ದಶಕಗಳಷ್ಟು ಭಾರವಾದವು. ಮನೆಯ ಆವರಣದಲ್ಲಿ ಎಲ್ಲೂ ಕಾಣದ ಮಗು, ಮನೆಯ ಹಿಂದಿನ ಆಳವಾದ ಬಾವಿಯಲ್ಲಿ ಬಿದ್ದಿರಬಹುದು ಎಂಬ ಸಂಶಯ ಕಾಡಿದಾಗ ಇಡೀ ಕಸ್ತೂರಬಾ ನಗರದ ಎದೆ ಝಲ್ಲೆಂದಿತು. ಕತ್ತಲ ಬಾವಿಯ ಆಳದಿಂದ ಕೇಳಿಬಂದ ಮಗುವಿನ ಅಳುವಿನ ದನಿ, ಅಜ್ಜಿಯ ಎದೆಯಲ್ಲಿ ಆತಂಕದ ಕಿಚ್ಚು ಹಚ್ಚಿತ್ತು.…
ಮುಂದೆ ಓದಿ..
