ಕುದುರೆಮುಖ ರಾಷ್ಟ್ರೀಯ ಉದ್ಯಾನವನ : ಪುನರ್ವಸತಿ ಪ್ಯಾಕೇಜ್ಗೆ ರಾಜ್ಯ ಸರ್ಕಾರ ಒಪ್ಪಿಗೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ : ಪುನರ್ವಸತಿ ಪ್ಯಾಕೇಜ್ಗೆ ರಾಜ್ಯ ಸರ್ಕಾರ ಒಪ್ಪಿಗೆ ದಶಕಗಳಿಂದ ಸಂಕಷ್ಟದಲ್ಲಿದ್ದ ಅರಣ್ಯವಾಸಿಗಳಿಗೆ ನಿಟ್ಟಿನ ನಿರ್ಧಾರ ಚಿಕ್ಕಮಗಳೂರು, ಡಿ.12: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯ ನಂತರ ಉದ್ಯಾನ ವ್ಯಾಪ್ತಿಯ ಗ್ರಾಮಗಳಲ್ಲಿ ಉಂಟಾಗಿರುವ ಮಾನವ–ವನ್ಯಜೀವಿ ಸಂಘರ್ಷವನ್ನು ಶಾಶ್ವತವಾಗಿ ತಡೆಯುವ ಉದ್ದೇಶದಿಂದ ಪುನರ್ವಸತಿ ಯೋಜನೆ ಜಾರಿಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಸಂಬಂಧವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಾಕಿ ಉಳಿದ ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ನೀಡಲು ಸರ್ಕಾರ ಸಮ್ಮತಿ ಸೂಚಿಸಿದೆ. ಇದರಿಂದ ಎರಡು ದಶಕಗಳಿಂದ ಅರಣ್ಯ ಸಂಕಷ್ಟದಲ್ಲೇ ಬದುಕುತ್ತಿದ್ದ ಜನರಿಗೆ ನಿರಾಳತೆಯ ಭರವಸೆ ಮೂಡಿದೆ. ಉದ್ಯಾನವನ ವ್ಯಾಪ್ತಿಯಲ್ಲಿರುವ ಒಟ್ಟು 1,382 ಕುಟುಂಬಗಳಲ್ಲಿ 550 ಕುಟುಂಬಗಳು ಸ್ವಯಂಪ್ರೇರಿತವಾಗಿ ಪುನರ್ವಸತಿಗೆ ಅರ್ಜಿ ಸಲ್ಲಿಸಿದ್ದವು. ಈ ಪೈಕಿ 253 ಕುಟುಂಬಗಳು ಈಗಾಗಲೇ ಪ್ಯಾಕೇಜ್ ಪಡೆದು ಸ್ಥಳಾಂತರಗೊಂಡಿದ್ದು, ಉಳಿದ 297 ಕುಟುಂಬಗಳು ಪರಿಹಾರದ ನಿರೀಕ್ಷೆಯಲ್ಲಿ ಇದ್ದವು. ಇತ್ತೀಚೆಗೆ ಕೆರೆಗದ್ದೆ ಪ್ರದೇಶದಲ್ಲಿ…
ಮುಂದೆ ಓದಿ..
