ಬಳ್ಳಾರಿಯ ಪಿಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ರಹಸ್ಯ ಸಾವು: ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ? ಕಣ್ಣೀರಲ್ಲಿ ಕುಟುಂಬ..
ಬಳ್ಳಾರಿಯ ಪಿಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ರಹಸ್ಯ ಸಾವು: ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ? ಕಣ್ಣೀರಲ್ಲಿ ಕುಟುಂಬ.. ಬಳ್ಳಾರಿಯ ಅಶೋಕ್ ನಗರದ ಆ ಇಕ್ಕಟ್ಟಾದ ಪಿಜಿ ಕೊಠಡಿಯಲ್ಲಿ ಅಂದು ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಓದಿ ದೊಡ್ಡ ಇಂಜಿನಿಯರ್ ಆಗಬೇಕು, ಬಡತನದಲ್ಲೂ ಮಗನನ್ನು ಸಾಕಿ ಸಲಹಿದ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕನಸು ಕಂಡಿದ್ದ 24 ವರ್ಷದ ಯುವಕ ವಿಶ್ವಾಸ್, ಇಂದು ಹೆಣವಾಗಿ ಮಲಗಿದ್ದಾನೆ. ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಎಂಬ ಪುಟ್ಟ ಗ್ರಾಮದಿಂದ ಹೊರಟು, ಬಳ್ಳಾರಿಯ ಪ್ರತಿಷ್ಠಿತ RYMEC ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಪ್ರತಿಭಾವಂತ ಯುವಕನ ಬದುಕು ಹೀಗೆ ಅರ್ಧಕ್ಕೇ ಮುಕ್ತಾಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಚೌದ್ರಿ ರೆಸಿಡೆನ್ಸ್ ಪಿಜಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿಶ್ವಾಸ್ ಸಾವು ಕೇವಲ ಒಂದು ಕುಟುಂಬದ ಆಧಾರಸ್ತಂಭವನ್ನು ಕುಸಿಯುವಂತೆ ಮಾಡಿಲ್ಲ, ಬದಲಿಗೆ ಶಿಕ್ಷಣ ನಗರಿ ಬಳ್ಳಾರಿಯ ಸುರಕ್ಷತೆಯ ಬಗ್ಗೆ ಹತ್ತಾರು ಪ್ರಶ್ನೆಗಳನ್ನು…
ಮುಂದೆ ಓದಿ..
