ಮೈಸೂರು ದಸರಾದಲ್ಲಿ ಕಂಬಳ: ಸಂಪ್ರದಾಯದ ಹೆಸರಿನಲ್ಲಿ ಪರಿಸರ ಮತ್ತು ರೈತರ ಹಿತ ಬಲಿ?..
ಮೈಸೂರು ದಸರಾದಲ್ಲಿ ಕಂಬಳ: ಸಂಪ್ರದಾಯದ ಹೆಸರಿನಲ್ಲಿ ಪರಿಸರ ಮತ್ತು ರೈತರ ಹಿತ ಬಲಿ?.. ನಾಡಹಬ್ಬ ಮೈಸೂರು ದಸರಾ ಎನ್ನುವುದು ಕೇವಲ ಒಂದು ವಾರ್ಷಿಕ ಉತ್ಸವವಲ್ಲ; ಅದು ಕರ್ನಾಟಕದ ಭವ್ಯ ಇತಿಹಾಸ, ಸಾಂಸ್ಕೃತಿಕ ಘನತೆ ಮತ್ತು ಈ ಮಣ್ಣಿನ ಜನಪದೀಯ ನಂಬಿಕೆಗಳ ಸಂಕಲನ. ವಿಜಯನಗರ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಈ ಪರಂಪರೆಗೆ ಇಂದು ಹೊಸದೊಂದು ಆಯಾಮ ನೀಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ‘ಕಂಬಳ’ವನ್ನು ಮೈಸೂರು ದಸರೆಯ ಅಂಗಳಕ್ಕೆ ತರುವ ಸರ್ಕಾರದ ಹಠಾತ್ ನಿರ್ಧಾರವು ಗಂಭೀರವಾದ ಸಂಘರ್ಷಕ್ಕೆ ನಾಂದಿ ಹಾಡಿದೆ. ಭೀಕರ ಬರಗಾಲ ಮತ್ತು ಪರಿಸರ ಬಿಕ್ಕಟ್ಟಿನ ಈ ಸಂದರ್ಭದಲ್ಲಿ, ಈ ನಡೆ “ಸಾಂಸ್ಕೃತಿಕ ವಿಸ್ತರಣೆ”ಯ ಉದ್ದೇಶ ಹೊಂದಿದೆಯೇ ಅಥವಾ ಜನಸಾಮಾನ್ಯರ ಮೂಲಭೂತ ಅವಶ್ಯಕತೆಗಳನ್ನು ಬದಿಗೊತ್ತಿದ “ತಪ್ಪಾದ ಆದ್ಯತೆ”ಯ ಸಂಕೇತವೇ? ಎಂಬ ಪ್ರಶ್ನೆ ಈಗ ನಮ್ಮ ಮುಂದಿದೆ. ರಾಜ್ಯವು ಪ್ರಸಕ್ತ ಶತಮಾನದಲ್ಲೇ ಕಾಣದಂತಹ ಭೀಕರ ಬರಗಾಲವನ್ನು…
ಮುಂದೆ ಓದಿ..
