ಧಾರುಣ ಅಂತ್ಯ: ಬೈಕ್ ಸವಾರರೇ ಎಚ್ಚರ! ಸಣ್ಣ ನಿರ್ಲಕ್ಷ್ಯಕ್ಕೆ ನಾವು ತೆರುತ್ತಿರುವ ಬೆಲೆ ಎಷ್ಟು?..
ಧಾರುಣ ಅಂತ್ಯ: ಬೈಕ್ ಸವಾರರೇ ಎಚ್ಚರ! ಸಣ್ಣ ನಿರ್ಲಕ್ಷ್ಯಕ್ಕೆ ನಾವು ತೆರುತ್ತಿರುವ ಬೆಲೆ ಎಷ್ಟು?.. ಪ್ರತಿದಿನ ಬೆಳಿಗ್ಗೆ ಮನೆ ಬಿಟ್ಟು ಹೊರಡುವಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಸಂಜೆ ಮನೆಗೆ ಮರಳಿ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವ ಒಂದು ಸುಂದರ ನಂಬಿಕೆ ಇರುತ್ತದೆ. ಆದರೆ, ಕ್ಷಣಾರ್ಧದ ನಿರ್ಲಕ್ಷ್ಯ ಅಥವಾ ಅನಿರೀಕ್ಷಿತ ಅನಾಹುತ ಈ ನಂಬಿಕೆಯನ್ನು ಹೇಗೆ ಧೂಳೀಪಟ ಮಾಡಬಲ್ಲದು ಎಂಬುದಕ್ಕೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಇಂದು ಸಂಭವಿಸಿದ ಘಟನೆಯೇ ಸಾಕ್ಷಿ. ದೈನಂದಿನ ಕಚೇರಿ ಪಯಣವೊಂದು ಹೀಗೆ ಮಸಣದ ಹಾದಿಯಾಗಬಾರದಿತ್ತು. ಚಿಕ್ಕನಾಯಕನಹಳ್ಳಿಯ ಸಿಡಿಪಿಒ (CDPO) ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಫಾತಿಮಾ (38) ಅವರ ಬದುಕು ಇಂದು ಬೆಳಿಗ್ಗೆ ಅತ್ಯಂತ ಕರುಣಾಜನಕವಾಗಿ ಅಂತ್ಯಗೊಂಡಿದೆ. ಅವರು ತಮ್ಮ ತಂದೆಯೊಂದಿಗೆ ಬೈಕ್ನಲ್ಲಿ ಹಿಂಬದಿ ಸವಾರರಾಗಿ ಕಚೇರಿಗೆ ಹೊರಟಿದ್ದರು. ಪಟ್ಟಣದ ಅರಣ್ಯ ಭವನದ ಮುಂಭಾಗ ಬೈಕ್ ಸಾಗುತ್ತಿದ್ದಾಗ ಈ ದಾರುಣ ಅಪಘಾತ ಸಂಭವಿಸಿದೆ. ಕರ್ತವ್ಯದ…
ಮುಂದೆ ಓದಿ..
