ಖಾಲಿ ಬಿಡದ ಕುರ್ಚಿ ಮತ್ತು 34 ಹುದ್ದೆಗಳ ರಹಸ್ಯ: ಸಹಕಾರ ಮಹಾಮಂಡಳದ ವಿವಾದಾತ್ಮಕ ನಡೆ!..
ಖಾಲಿ ಬಿಡದ ಕುರ್ಚಿ ಮತ್ತು 34 ಹುದ್ದೆಗಳ ರಹಸ್ಯ: ಸಹಕಾರ ಮಹಾಮಂಡಳದ ವಿವಾದಾತ್ಮಕ ನಡೆ!.. ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಾವಧಿ ಮುಗಿದ ಮೇಲೆ ಅಧಿಕಾರಿಗಳು ಸ್ಥಾನ ಬಿಟ್ಟುಕೊಡುವುದು ಕೇವಲ ಶಿಷ್ಟಾಚಾರವಲ್ಲ, ಅದು ಕಾನೂನುಬದ್ಧ ಪ್ರಕ್ರಿಯೆ. ಆದರೆ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದಲ್ಲಿ ನಡೆಯುತ್ತಿರುವುದು ನೋಡಿದರೆ, ಇಲ್ಲಿ ನಿಯಮಗಳಿಗಿಂತ “ಪ್ರಭಾವ” ಮತ್ತು “ಲಾಬಿ”ಗಳೇ ಆಡಳಿತವನ್ನು ನಿಯಂತ್ರಿಸುತ್ತಿವೆಯೇ ಎಂಬ ಬಲವಾದ ಸಂಶಯ ಕಾಡುತ್ತಿದೆ. ಅಧಿಕಾರಾವಧಿ ಮುಗಿದರೂ ಕುರ್ಚಿ ಬಿಡದ ವ್ಯವಸ್ಥಾಪಕ ನಿರ್ದೇಶಕಿ, ಈ ನಡುವೆ ನಡೆಯುತ್ತಿರುವ 34 ಆಯಕಟ್ಟಿನ ಹುದ್ದೆಗಳ ನೇಮಕಾತಿ ರಹಸ್ಯ – ಇವೆಲ್ಲವೂ ವ್ಯವಸ್ಥೆಯೊಳಗಿನ ದೊಡ್ಡ ಹಗರಣದ ಮುನ್ಸೂಚನೆಯಂತೆ ಭಾಸವಾಗುತ್ತಿದೆ. ಅಧಿಕಾರಾವಧಿ ಮುಗಿದರೂ ಬಿಡದ ಹಠ: ನಿವೃತ್ತ ಅಧಿಕಾರಿಯ ಅಕ್ರಮ ನಡವಳಿಕೆ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ನಿವೃತ್ತ ಅಪರ ನಿಬಂಧಕಿ ಕೆ.ಎಂ. ಆಶಾ ಅವರ ಅಧಿಕಾರಾವಧಿ ಜುಲೈ 7ಕ್ಕೇ ಮುಕ್ತಾಯಗೊಂಡಿದೆ. ಅವರ ಅವಧಿ ಮುಗಿಯುತ್ತಿದ್ದಂತೆ ಸಹಕಾರ…
ಮುಂದೆ ಓದಿ..
