ದಿನಗೂಲಿ ಕಾರ್ಮಿಕನ ಮಗಳಿಗೆ 21 ಕೋಟಿ ಐಟಿ ನೋಟಿಸ್! ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಬಗ್ಗೆ ಎಚ್ಚರವಿರಲಿ: ಒಂದು ನೈಜ ಕಥೆ..
ದಿನಗೂಲಿ ಕಾರ್ಮಿಕನ ಮಗಳಿಗೆ 21 ಕೋಟಿ ಐಟಿ ನೋಟಿಸ್! ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಬಗ್ಗೆ ಎಚ್ಚರವಿರಲಿ: ಒಂದು ನೈಜ ಕಥೆ.. ಊಟಕ್ಕೇ ಪರದಾಡುವ ಸ್ಥಿತಿ, ವಾಸಿಸಲು ಸರಿಯಾದ ಸೂರಿಲ್ಲದ ಕಡು ಬಡತನ. ಇಂತಹ ಪರಿಸ್ಥಿತಿಯಲ್ಲಿರುವ ಕುಟುಂಬವೊಂದಕ್ಕೆ ಇದ್ದಕ್ಕಿದ್ದಂತೆ 21 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಆ ಕುಟುಂಬದ ಸ್ಥಿತಿ ಏನಾಗಬೇಡ? ಇದು ಯಾವುದೇ ಕಲ್ಪಿತ ಕಥೆಯಲ್ಲ, ಬದಲಿಗೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಣ್ಣ ಗುಡಿಸಲಿನಲ್ಲಿ ವಾಸಿಸುವ ಬಡ ಕುಟುಂಬವೊಂದಕ್ಕೆ ಎದುರಾಗಿರುವ ಭೀಕರ ಆಘಾತ. ದಿನಗೂಲಿ ಕಾರ್ಮಿಕನೊಬ್ಬನ ಮಗಳಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟಿನ ಹೆಸರಿನಲ್ಲಿ ಬಂದಿರುವ ಈ ನೋಟಿಸ್, ಡಿಜಿಟಲ್ ಜಗತ್ತಿನ ಕರಾಳ ಮುಖವನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಚಂಡೀಗಢದ ಆದಾಯ ತೆರಿಗೆ ಇಲಾಖೆಯು ಉನ್ನಾವೋದ ನಿವಾಸಿ ರಶ್ಮಿ ಸವಿತಾ ಎಂಬ ಯುವತಿಗೆ ಈ ನೋಟಿಸ್ ಜಾರಿ ಮಾಡಿದೆ.…
ಮುಂದೆ ಓದಿ..
