ಪಿಟಿಸಿಎಲ್ (PTCL) ಕಾಯ್ದೆ ಮತ್ತು ದಲಿತರ ಭೂಮಿ: ರಿಯಲ್ ಎಸ್ಟೇಟ್ ಮಾಫಿಯಾದ ಕಪಿಮುಷ್ಠಿಯಲ್ಲಿ ನ್ಯಾಯ?
ಪಿಟಿಸಿಎಲ್ (PTCL) ಕಾಯ್ದೆ ಮತ್ತು ದಲಿತರ ಭೂಮಿ: ರಿಯಲ್ ಎಸ್ಟೇಟ್ ಮಾಫಿಯಾದ ಕಪಿಮುಷ್ಠಿಯಲ್ಲಿ ನ್ಯಾಯ? ಭೂಮಿ ಎನ್ನುವುದು ಕೇವಲ ಆಸ್ತಿಯಲ್ಲ; ಅದು ದಲಿತ ಮತ್ತು ಆದಿವಾಸಿ ಸಮುದಾಯಗಳ ಪಾಲಿಗೆ ಆತ್ಮಗೌರವ, ಘನತೆ ಮತ್ತು ಬದುಕಿನ ಅಸ್ತಿತ್ವದ ಸಂಕೇತ. ಸ್ವಾತಂತ್ರ್ಯಾನಂತರದ ಸಾಮಾಜಿಕ ನ್ಯಾಯದ ಭಾಗವಾಗಿ ಶೋಷಿತ ಸಮುದಾಯಗಳಿಗೆ ನೀಡಲಾದ ಈ ಜಮೀನುಗಳು ಇಂದು ಅವರ ಕೈತಪ್ಪುತ್ತಿರುವುದು ಕೇವಲ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಸಾಂಸ್ಥಿಕ ವಿಫಲತೆ. ಕಾಯ್ದೆಗಳಿದ್ದರೂ ದಲಿತರ ಭೂಮಿ ಅವರಿಗೆ ದಕ್ಕದಂತೆ ತಡೆಯುತ್ತಿರುವುದು ಯಾರು? ನ್ಯಾಯದ ಹಾದಿಯಲ್ಲಿ ಬಂಡೆಯಂತೆ ನಿಂತಿರುವ ಆ ಶಕ್ತಿಗಳಾದರೂ ಯಾವುವು? ಇದು ಪ್ರತಿಯೊಬ್ಬ ನಾಗರಿಕನೂ ಕೇಳಿಕೊಳ್ಳಬೇಕಾದ ಅನಿವಾರ್ಯ ಪ್ರಶ್ನೆ. ರಿಯಲ್ ಎಸ್ಟೇಟ್ ಮಾಫಿಯಾದ ವ್ಯವಸ್ಥಿತ ಸಂಚು ಮತ್ತು ರಾಜಕೀಯ ಅಡೆತಡೆಗಳು ಕರ್ನಾಟಕದಲ್ಲಿ ದಲಿತರ ಭೂ ಹಕ್ಕನ್ನು ರಕ್ಷಿಸಲೆಂದೇ ತಂದ ‘ಪಿಟಿಸಿಎಲ್ (PTCL) ಕಾಯ್ದೆ’ಯ ಅನುಷ್ಠಾನ ಇಂದು ಐಸಿಯು ಸೇರಿದೆ. ಇತ್ತೀಚೆಗೆ ನ್ಯಾಯಕ್ಕಾಗಿ ಅಖಿಲ ಭಾರತ…
ಮುಂದೆ ಓದಿ..
