ಗುರುತಿಸಿದ ಮಹಿಳೆಗೆ ಸನ್ಮಾನ – ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮೂವರು ಹೆಣ್ಣುಮಕ್ಕಳಿಗೆ ಜೀವವಿಮೆ
ಗುರುತಿಸಿದ ಮಹಿಳೆಗೆ ಸನ್ಮಾನ – ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮೂವರು ಹೆಣ್ಣುಮಕ್ಕಳಿಗೆ ಜೀವವಿಮೆ ಕುಕನೂರು: ಸರ್ಕಾರದ ಪ್ರಮುಖ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡ ಜ್ಯೋತಿ ಕನಕಪ್ಪ ಕಲ್ಲೂರು, ತನ್ನ ಮೂವರು ಹೆಣ್ಣುಮಕ್ಕಳಿಗಾಗಿ ಜೀವನ ವಿಮೆ ಖಾತೆ ತೆರೆದಿದ್ದಾರೆ. ಕುಕನೂರು ತಾಲೂಕು ಮಂಗಳೂರಿನ ನಿವಾಸಿ ಜ್ಯೋತಿ, ತಿಂಗಳಿಗೆ 2000 ರೂ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು LIC ಪಾಲಿಸಿ ಮಾಡಿದ ಮೂಲಕ ಗಮನಸೆಳೆದಿದ್ದಾರೆ. ಜ್ಯೋತಿ ಅವರ ಕಾರ್ಯವನ್ನು ಪರಿಶೀಲಿಸಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದರ್ ಅವರು ಅವರ ಸಾಧನೆಗೆ ಸನ್ಮಾನ ನೀಡಿ ಗೌರವ ಸೂಚಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಶಕ್ತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯನ್ನು ತಂದಿವೆ. ತಾಲೂಕು ಪಂಚಾಯ್ತಿ ಇಒ ಸಂತೋಷ್ ಬಿರಾದರ್…
ಮುಂದೆ ಓದಿ..
