ವೇದಾವತಿ ನದಿಯಲ್ಲಿ ತೆಪ್ಪ ದುರಂತ: ಮೀನುಗಾರಿಕೆಗೆ ತೆರಳಿದ್ದ ಸಹೋದರರಲ್ಲಿ ಓರ್ವ ನಾಪತ್ತೆ..
ವೇದಾವತಿ ನದಿಯಲ್ಲಿ ತೆಪ್ಪ ದುರಂತ: ಮೀನುಗಾರಿಕೆಗೆ ತೆರಳಿದ್ದ ಸಹೋದರರಲ್ಲಿ ಓರ್ವ ನಾಪತ್ತೆ.. ಸಹೋದರರು ಒಟ್ಟಾಗಿ ಸಂತಸದಿಂದ ಮೀನು ಹಿಡಿಯಲು ತೆರಳಿದ್ದ ಕ್ಷಣ, ಕೆಲವೇ ಗಂಟೆಗಳಲ್ಲಿ ಘೋರ ದುರಂತವಾಗಿ ಮಾರ್ಪಟ್ಟಿದೆ. ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ನಡೆದ ಈ ಮನಕಲಕುವ ಘಟನೆಯಲ್ಲಿ, ವೇದಾವತಿ ನದಿಯ ಅಬ್ಬರವು ಒಂದು ಕುಟುಂಬದ ಸಂತಸವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡು, ಆಘಾತದಲ್ಲಿ ಮುಳುಗಿಸಿದೆ. ಯಶವಂತ, ಬಾಲಾಜಿ, ಮತ್ತು ಧನುಷ್ ಎಂಬ ಮೂವರು ಸಹೋದರರು ಮೀನುಗಾರಿಕೆಗಾಗಿ ತೆಪ್ಪದಲ್ಲಿ ಸಾಣಿಕೆರೆ ಬಳಿಯ ವೇದಾವತಿ ನದಿಗೆ ಇಳಿದಿದ್ದರು. ಆದರೆ, ನದಿಯ ಮಧ್ಯೆ ವಿಧಿ ಆಡಿದ ಆಟದಲ್ಲಿ ತೆಪ್ಪ ಏಕಾಏಕಿ ಮುಗುಚಿ, ಮೂವರ ಬದುಕು ಅತಂತ್ರವಾಯಿತು. ತೆಪ್ಪ ಮುಗುಚಿದ ರಭಸಕ್ಕೆ, 21 ವರ್ಷದ ಧನುಷ್ ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ. ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜೊತೆಯಲ್ಲಿದ್ದ ಸಹೋದರರಾದ ಯಶವಂತ ಮತ್ತು ಬಾಲಾಜಿ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಈ…
ಮುಂದೆ ಓದಿ..
