ಕಾಂಗ್ರೆಸ್ಗೆ ಮುಸ್ಲಿಂ ಮುಖಂಡರ ಖಡಕ್ ಎಚ್ಚರಿಕೆ: ಜಮೀರ್ ಅಹಮ್ಮದ್ ತಲೆದಂಡವಾದರೆ ಹಸ್ತಕ್ಕೆ ಉಳಿಯಲ್ಲ 20 ಸೀಟು ಕೂಡ!..
ಕಾಂಗ್ರೆಸ್ಗೆ ಮುಸ್ಲಿಂ ಮುಖಂಡರ ಖಡಕ್ ಎಚ್ಚರಿಕೆ: ಜಮೀರ್ ಅಹಮ್ಮದ್ ತಲೆದಂಡವಾದರೆ ಹಸ್ತಕ್ಕೆ ಉಳಿಯಲ್ಲ 20 ಸೀಟು ಕೂಡ!.. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ರಾಜಕೀಯ ಕಣವು ಸದ್ಯ ಒಂದು ಸ್ಫೋಟಕ ಹಂತಕ್ಕೆ ಬಂದು ನಿಂತಿದೆ. ಇದು ಕೇವಲ ಒಂದು ಕ್ಷೇತ್ರದ ಜಿದ್ದಾಜಿದ್ದಿಯಲ್ಲ; ದಶಕಗಳಿಂದ ಕಾಂಗ್ರೆಸ್ನ ಗಟ್ಟಿ ಮತಬ್ಯಾಂಕ್ ಆಗಿದ್ದ ಮುಸ್ಲಿಂ ಸಮುದಾಯ ಮತ್ತು ‘ಹಸ್ತ’ ಪಾಳೆಯದ ನಡುವೆ ಏರ್ಪಡುತ್ತಿರುವ ಗಂಭೀರ ಬಿರುಕಿನ ಮುನ್ಸೂಚನೆ. ಸದಾ ಪಕ್ಷದ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಸಮುದಾಯದಲ್ಲಿ ಈಗ ಅತೃಪ್ತಿಯ ಜ್ವಾಲೆ ಹೊತ್ತಿಕೊಂಡಿದೆ. ರಾಜಕೀಯವಾಗಿ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಕೇವಲ ಆಂತರಿಕ ಭಿನ್ನಮತವಲ್ಲ, ಬದಲಾಗಿ ರಾಜ್ಯ ರಾಜಕಾರಣದ ಸಮೀಕರಣವನ್ನೇ ಬದಲಿಸಬಲ್ಲ ರಾಜಕೀಯ ಧ್ರುವೀಕರಣದ ಹಾದಿಯಂತೆ ಕಾಣುತ್ತಿದೆ. ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ಗೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್…
ಮುಂದೆ ಓದಿ..
