ಧಾರವಾಡ ಕಾರಾಗೃಹದ ಹಗರಣ: ‘ಬೇಲಿಯೇ ಎದ್ದು ಹೊಲ ಮೇಯ್ದ’ ಬೆಚ್ಚಿಬೀಳಿಸುವ ಸತ್ಯಗಳು..
ಧಾರವಾಡ ಕಾರಾಗೃಹದ ಹಗರಣ: ‘ಬೇಲಿಯೇ ಎದ್ದು ಹೊಲ ಮೇಯ್ದ’ ಬೆಚ್ಚಿಬೀಳಿಸುವ ಸತ್ಯಗಳು.. ಧಾರವಾಡ ಕೇಂದ್ರ ಕಾರಾಗೃಹದ ಬೃಹತ್ ಗೋಡೆಗಳು ಅಪರಾಧ ಮತ್ತು ಅಪರಾಧಿಗಳನ್ನು ಸಮಾಜದಿಂದ ದೂರವಿಡಲು ಇವೆ ಎಂದು ನಾವು ಭಾವಿಸುತ್ತೇವೆ. ಆದರೆ, ಬೆಳಗಿನ ಜಾವ 3:30ಕ್ಕೆ ಆ ಬೃಹತ್ ಕದಗಳನ್ನು ಸದ್ದಿಲ್ಲದೆ ತೆರೆದವರು ಬೇರಾರೂ ಅಲ್ಲ, ಆ ಜೈಲಿನ ಕೀಲಿಗಳನ್ನು ಹಿಡಿದಿದ್ದ ಕಾವಲುಗಾರರೇ! ಕಾರಾಗೃಹಗಳು ಅಪರಾಧಿಗಳನ್ನು ಸನ್ಮಾರ್ಗಕ್ಕೆ ತರುವ ಸುಧಾರಣಾ ಕೇಂದ್ರಗಳಾಗುವ ಬದಲು, ವ್ಯವಸ್ಥೆಯ ರಕ್ಷಕರಿಂದಲೇ ಅಪರಾಧದ ಕರಾಳ ಅಡ್ಡೆಗಳಾಗಿ ಮಾರ್ಪಡುತ್ತಿರುವುದು ಕೇವಲ ಆತಂಕಕಾರಿಯಲ್ಲ, ಇದು ವ್ಯವಸ್ಥೆಯ ಅಧಃಪತನದ ಪರಾಕಾಷ್ಠೆ. ಜೈಲಿನ ಶಿಸ್ತು ಮತ್ತು ಭದ್ರತೆಯನ್ನು ಕಾಯಬೇಕಾದ ವಾರ್ಡನ್ಗಳೇ ಖೈದಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ‘ಡೆಲಿವರಿ ಬಾಯ್’ಗಳಾಗಿ ಕೆಲಸ ಮಾಡುತ್ತಿರುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲುಗಾಡಿಸಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಇಬ್ಬರು ಜೈಲಾಧಿಕಾರಿಗಳು ಇಂದು ಅಪರಾಧಿಗಳ ಸಾಲಿನಲ್ಲಿ ನಿಂತಿರುವುದು ನಾಚಿಕೆಗೇಡಿನ ಸಂಗತಿ.…
ಮುಂದೆ ಓದಿ..
