ಬೆಂಗಳೂರು ರೈಲ್ವೆಯಲ್ಲಿ ಕನ್ನಡಕ್ಕೇಕೆ ಈ ಅನ್ಯಾಯ?
ಬೆಂಗಳೂರು ರೈಲ್ವೆಯಲ್ಲಿ ಕನ್ನಡಕ್ಕೇಕೆ ಈ ಅನ್ಯಾಯ? ಬೆಂಗಳೂರು ಕರ್ನಾಟಕದಲ್ಲಿಲ್ಲವೇ? ಈ ಪ್ರಶ್ನೆಯನ್ನು ಕೇಳಿದರೆ ಆಶ್ಚರ್ಯವಾಗಬಹುದು, ಆದರೆ ನೈಋತ್ಯ ರೈಲ್ವೆಯ ಇತ್ತೀಚಿನ ನಡೆಯನ್ನು ಗಮನಿಸಿದರೆ ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ. ರಾಜ್ಯದ ರಾಜಧಾನಿಯಲ್ಲೇ, ಕನ್ನಡಿಗರು ತಮ್ಮದೇ ನೆಲದಲ್ಲಿ, ತಮ್ಮದೇ ಭಾಷೆಯಲ್ಲಿ ಬಡ್ತಿ ಪರೀಕ್ಷೆ ಬರೆಯುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಇದು ಯಾವುದೋ ಆಕಸ್ಮಿಕವಾಗಿ ನಡೆದ ತಪ್ಪಲ್ಲ, ಬದಲಾಗಿ ಪದೇ ಪದೇ ಮರುಕಳಿಸುತ್ತಿರುವ, ಆಳವಾದ ಬೇರುಗಳುಳ್ಳ ಗಂಭೀರ ಸಮಸ್ಯೆಯಾಗಿದೆ.ನೈಋತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗವು ನಡೆಸುವ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ. ನೈಋತ್ಯ ರೈಲ್ವೆಯು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶದಂತೆ ಕಾಣುತ್ತಿದೆಯೇ? ತನ್ನದೇ ವಲಯದೊಳಗೆ ಅದು ಅನುಸರಿಸುತ್ತಿರುವ ತಾರತಮ್ಯದ ನೀತಿ ಈ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ. ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ ನಡೆಯುವ ಬಡ್ತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕನ್ನಡದಲ್ಲಿಯೂ ಉತ್ತರ ಬರೆಯಲು ಅವಕಾಶವಿದೆ. ಆದರೆ, ಅದೇ ವಲಯದ ಅಡಿಯಲ್ಲಿ ಬರುವ ರಾಜ್ಯದ…
ಮುಂದೆ ಓದಿ..
