ನಿಟ್ಟೂರು ಸರ್ಕಾರಿ ಮಹಿಳಾ ನಿಲಯದಲ್ಲಿ ಜೋಡಿ ವಿವಾಹ ನೆರವೇರಿಕೆ
ನಿಟ್ಟೂರು ಸರ್ಕಾರಿ ಮಹಿಳಾ ನಿಲಯದಲ್ಲಿ ಜೋಡಿ ವಿವಾಹ ನೆರವೇರಿಕೆ ಜಿಲ್ಲಾಧಿಕಾರಿಗಳಿಂದ ನೂತನ ದಂಪತಿಗಳಿಗೆ ಶುಭಾಶಯ ಉಡುಪಿ: ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಇಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅನಾಥ ಯುವತಿಯರು ವಿವಾಹ ಬಂಧನಕ್ಕೆ ಕಾಲಿಟ್ಟು ಹೊಸ ಜೀವನದ ಆರಂಭ ಮಾಡಿದ್ದಾರೆ. ಜಿಲ್ಲಾಡಳಿತದ ಮುಂದಾಳತ್ವದಲ್ಲಿ ಆಯೋಜಿಸಲಾದ ಈ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸ್ವತಃ ಕನ್ಯಾದಾನ ನೆರವೇರಿಸಿ ಮಾನವೀಯತೆಯ ಉದಾಹರಣೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಮೂಲದ ಮಲ್ಲೇಶ್ವರಿ (22) ಪ್ರಸ್ತುತ ತೃತೀಯ ಬಿಎ ಓದುತ್ತಿದ್ದು, ಮೂಲ್ಕಿ ಬಪ್ಪನಾಡಿನ ಎಂ. ಸಂಜಯ ಪ್ರಭು (31) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎಂ.ಕಾಂ ಪದವೀಧರರಾದ ಸಂಜಯ ಪ್ರಭು ಬೆಂಗಳೂರಿನ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಇನ್ನೊಂದು ವಿವಾಹದಲ್ಲಿ ಕಿವಿ ಕೇಳಿಸದ ಹಾಗೂ ಮಾತು ಬಾರದ ಅನಾಥ ಯುವತಿ ಸುಶೀಲಾ (42) ಅವರನ್ನು ಹಾಸನ…
ಮುಂದೆ ಓದಿ..
