ಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ
ಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ತೀವ್ರ ದುಃಖ ಹಾಗೂ ಅಸಹನೆಯನ್ನು ಮೂಡಿಸಿದ ಭೀಕರ ಘಟನೆ ವರದಿಯಾಗಿದೆ. ಮನೆಗೆಲಸ ಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಘಾತದ ಅಲೆ ಎಬ್ಬಿಸಿದೆ. ▪️ಚಾಕುವಿನಿಂದ ಕತ್ತು ಕತ್ತರಿಸಿ ಕೊಲೆಪೋಲಿಸ್ ತನಿಖೆ ಪ್ರಾಥಮಿಕ ಮಾಹಿತಿಯ ಪ್ರಕಾರ, ದೀರ್ಘಕಾಲದಿಂದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನೇ ಈ ಕೃತ್ಯಕ್ಕೆ ಕಾರಣನೆಂದು ಶಂಕಿಸಲಾಗಿದೆ. ಮೊಬೈಲ್ ಫೋನ್ ಬ್ಯುಸಿ ತೋರಿಸುತ್ತಿದೆ ಎಂಬ ಕಾರಣಕ್ಕೆ ಶೀಲ ಶಂಕೆ ಹುಟ್ಟಿಕೊಂಡು ವಾಗ್ವಾದ ಶುರುವಾಗಿದ್ದು, ಅದೇ ಕ್ಷಣದಲ್ಲಿ ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕತ್ತರಿಸಿ ಆರೋಪಿಯು ದಾರುಣ ಕೃತ್ಯ ಎಸಗಿದ್ದಾನೆ. ▪️ಮೃತ ಮಹಿಳೆಯ ವಿವರಲಲೀತಾ ಬ್ಯಾಡಗಿ (42) ಎಂಬವರು ಹತ್ಯೆಗೆ ಒಳಗಾದ ದುರ್ದೈವಿ. ಮೂಲತಃ ಬ್ಯಾಡಗಿ ತಾಲೂಕಿನ…
ಮುಂದೆ ಓದಿ..
