ಬಳ್ಳಾರಿಯ ಮೀನುಗಾರಿಕಾ ಅಧಿಕಾರಿಯ ‘ಆಸ್ತಿ ಜಾಲ’: ಲೋಕಾಯುಕ್ತ ದಾಳಿಯ ಆಘಾತಕಾರಿ ಸತ್ಯಗಳು..
ಬಳ್ಳಾರಿಯ ಮೀನುಗಾರಿಕಾ ಅಧಿಕಾರಿಯ ‘ಆಸ್ತಿ ಜಾಲ’: ಲೋಕಾಯುಕ್ತ ದಾಳಿಯ ಆಘಾತಕಾರಿ ಸತ್ಯಗಳು.. ಸರ್ಕಾರಿ ಹುದ್ದೆ ಎಂದರೆ ಅದು ಜನಸೇವೆಯ ಪವಿತ್ರ ಹಾದಿಯೋ ಅಥವಾ ಸಾರ್ವಜನಿಕರ ಹಣವನ್ನು ನುಂಗಿ ನೀರು ಕುಡಿಯುವ ದಂಧೆಯೋ? ಸಣ್ಣ ಮೀನುಗಳನ್ನು ರಕ್ಷಿಸಬೇಕಾದ ಮೀನುಗಾರಿಕೆ ಇಲಾಖೆಯ ಅಧಿಕಾರಿಯೇ ಇಂದು ತಿಮಿಂಗಿಲದಂತೆ ಜನರ ತೆರಿಗೆ ಹಣವನ್ನು ನುಂಗಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯು ಈ ಭ್ರಷ್ಟಾಚಾರದ ಭೀಬತ್ಸ ಮುಖವನ್ನು ಅನಾವರಣಗೊಳಿಸಿದೆ. ಬಡ ಮೀನುಗಾರರ ಹಿತ ಕಾಯಬೇಕಾದ ಅಧಿಕಾರಿಯೊಬ್ಬರು ತನ್ನ ‘ಆಸ್ತಿ ಹಸಿವಿನ’ ಮೂಲಕ ಇಡೀ ವ್ಯವಸ್ಥೆಗೆ ಲಜ್ಜೆಯಿಲ್ಲದೆ ದ್ರೋಹ ಬಗೆದಿರುವುದು ಇಲ್ಲಿ ಸಾಬೀತಾಗಿದೆ. ಒಬ್ಬ ಮಧ್ಯಮ ಶ್ರೇಣಿಯ ಅಧಿಕಾರಿ ತನ್ನ ಅಧಿಕಾರಾವಧಿಯಲ್ಲಿ ಬಳ್ಳಾರಿಯಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಇಷ್ಟೊಂದು ಸ್ಥಿರಾಸ್ತಿ ಸಂಪಾದಿಸುವುದು ಕೇವಲ ವೇತನದಿಂದ ಖಂಡಿತ…
ಮುಂದೆ ಓದಿ..
