ಶತಮಾನದ ಸಂಕೋಲೆ ಮುರಿದ ನಿಡಘಟ್ಟದ ಹನುಮ: ಸಮಾನತೆಯ ದಾರಿಯಲ್ಲಿ ಹೊಸ ಇತಿಹಾಸ…
ಶತಮಾನದ ಸಂಕೋಲೆ ಮುರಿದ ನಿಡಘಟ್ಟದ ಹನುಮ: ಸಮಾನತೆಯ ದಾರಿಯಲ್ಲಿ ಹೊಸ ಇತಿಹಾಸ… ನೂರು ವರ್ಷಗಳು ಎಂದರೆ ಕೇವಲ ಕಾಲದ ಲೆಕ್ಕಾಚಾರವಲ್ಲ; ಅದು ನೋವು, ಅವಮಾನ ಮತ್ತು ತಲೆಮಾರುಗಳ ಕಾಲ ಅನುಭವಿಸಿದ ಬಹಿಷ್ಕಾರದ ಕಹಿ ಇತಿಹಾಸ. ದೇವಸ್ಥಾನದ ಗೋಪುರವನ್ನು ದೂರದಿಂದಲೇ ನೋಡಿ ಕೈಮುಗಿಯುತ್ತಿದ್ದ ಸಮುದಾಯವೊಂದಕ್ಕೆ ಆ ಗರ್ಭಗುಡಿಯ ದರ್ಶನ ಪಡೆಯಲು ಒಂದು ಇಡೀ ಶತಮಾನವೇ ಬೇಕಾಯಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟದಲ್ಲಿ ಮಂಗಳವಾರ ಸಂಭವಿಸಿದ ಆ ಕ್ಷಣ, ಕೇವಲ ಒಂದು ಧಾರ್ಮಿಕ ಪ್ರವೇಶವಲ್ಲ; ಅದು ಶತಮಾನಗಳ ಸಾಮಾಜಿಕ ಅಸಮಾನತೆಯ ಸಂಕೋಲೆಗಳು ಕಳಚಿದ ಐತಿಹಾಸಿಕ ಮುಹೂರ್ತ. ದಶಕಗಳ ತಮಸ್ಸನ್ನು ಸರಿಸಿ ಸಮಾನತೆಯ ಬೆಳಕು ಮೂಡಿದ ಈ ಘಟನೆಯು ಸಮಾಜದ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯವು ಈ ಭಾಗದಲ್ಲಿ ‘ಗಟಾಗಟಿ ದೇವರು’ ಎಂದೇ ಅತ್ಯಂತ ಪ್ರಸಿದ್ಧವಾದುದು. ಭಕ್ತರ ನಂಬಿಕೆಯ ಕೇಂದ್ರವಾದ…
ಮುಂದೆ ಓದಿ..
