ಯಕ್ಷರಂಗದ ‘ದಶಾವತಾರಿ’ ಸೂರಿಕುಮೇರು ಕೆ. ಗೋವಿಂದ ಭಟ್: 70 ವರ್ಷಗಳ ಕಲಾ ಪಯಣದ ಅಪರೂಪದ ಸಂಗತಿಗಳು…
ಯಕ್ಷರಂಗದ ‘ದಶಾವತಾರಿ’ ಸೂರಿಕುಮೇರು ಕೆ. ಗೋವಿಂದ ಭಟ್: 70 ವರ್ಷಗಳ ಕಲಾ ಪಯಣದ ಅಪರೂಪದ ಸಂಗತಿಗಳು… ತೆಂಕುತಿಟ್ಟು ಯಕ್ಷಗಾನದ ಧ್ರುವತಾರೆ, ‘ನಡೆದಾಡುವ ವಿಶ್ವಕೋಶ’ ಎಂದೇ ಖ್ಯಾತರಾಗಿದ್ದ ಮೇರು ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು ಶುಕ್ರವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ಅಸ್ತಂಗತರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಅವರ ಬಣ್ಣದ ಬದುಕಿಗೆ ತೆರೆ ಬಿದ್ದಿರುವುದು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ಕೇವಲ ಒಬ್ಬ ನಟನಾಗಿ ಉಳಿಯದೆ, ಯಕ್ಷಗಾನದ ಸಮಗ್ರ ಜ್ಞಾನದ ಭಂಡಾರವಾಗಿದ್ದ ಅವರ ಏಳು ದಶಕಗಳ ಸುದೀರ್ಘ ಕಲಾ ಪಯಣವು ಇಂದಿನ ತಲೆಮಾರಿಗೆ ಒಂದು ಅದ್ಭುತ ಪಾಠಶಾಲೆಯಿದ್ದಂತೆ. ಗೋವಿಂದ ಭಟ್ಟರ ಕಲಾ ಬದುಕಿನ ಅತ್ಯಂತ ವಿಸ್ಮಯಕಾರಿ ದಾಖಲೆಯೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳವೊಂದರಲ್ಲೇ ಸತತ 54 ವರ್ಷಗಳ ಕಾಲ ‘ಪ್ರಧಾನ ಕಲಾವಿದ’ರಾಗಿ ಸೇವೆ ಸಲ್ಲಿಸಿದ್ದು. ಇಂದಿನ ವೇಗದ ಯುಗದಲ್ಲಿ ಕಲಾವಿದರು…
ಮುಂದೆ ಓದಿ..
