ದ್ವೇಷಭಾಷಣ ಮಸೂದೆಯ ಅಸಲಿ ಮುಖ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರವೇ?…
ದ್ವೇಷಭಾಷಣ ಮಸೂದೆಯ ಅಸಲಿ ಮುಖ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರವೇ?… ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನು ಇವೆರಡರ ನಡುವಿನ ಸಮತೋಲನವು ಪ್ರಜಾಪ್ರಭುತ್ವದ ಉಸಿರು. ಆದರೆ, ಸರ್ಕಾರಗಳು ತರುತ್ತಿರುವ ಹೊಸ ಕಾನೂನುಗಳು ಸಮಾಜದ ಶಾಂತಿಯನ್ನು ಕಾಪಾಡಲು ಇವೆಯೇ ಅಥವಾ ಜನರ ಧ್ವನಿಯನ್ನು ಅಡಗಿಸಲು ಅಸ್ತ್ರವಾಗಿ ಬಳಕೆಯಾಗುತ್ತಿವೆಯೇ? ಕರ್ನಾಟಕ ಸರ್ಕಾರದ ಹೊಸ ದ್ವೇಷಭಾಷಣ ಮಸೂದೆಯು ಇಂತಹದ್ದೇ ಒಂದು ಗಂಭೀರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ನಮ್ಮ ಹಕ್ಕಿನ ರಕ್ಷಾ ಕವಚವೋ ಅಥವಾ ನಾವಾಡುವ ಮಾತಿಗೆ ಬೀಗವೋ ಎಂಬ ಪ್ರಶ್ನೆ ಇಂದು ನಮ್ಮ ಮುಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಕೇವಲ ಪತ್ರಿಕೆ ಅಥವಾ ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಹಕ್ಕಲ್ಲ. ಇದು ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನದೇ ಆದ ತತ್ವ, ಸಿದ್ಧಾಂತ ಮತ್ತು ವಿಚಾರಗಳನ್ನು ಅಳವಡಿಸಿಕೊಳ್ಳಲು ಸಂವಿಧಾನ ನೀಡಿರುವ ಶಕ್ತಿ. ವಿಚಾರಗಳು ಕೇವಲ ಭಾಷಣದ ರೂಪದಲ್ಲಷ್ಟೇ ಇರಬೇಕಿಲ್ಲ; ಅವು ಕವಿತೆ, ಶ್ಲೋಕ, ಯಕ್ಷಗಾನ, ಬಯಲಾಟ ಅಥವಾ ಇಂದಿನ…
ಮುಂದೆ ಓದಿ..
