ಒಂದು ಕ್ಷಣ ಸ್ತಬ್ಧಗೊಳಿಸುವ ಘಟನೆ: ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಕಮೋಡ್ನಲ್ಲಿ ನವಜಾತ ಶಿಶು ಪತ್ತೆ
ಒಂದು ಕ್ಷಣ ಸ್ತಬ್ಧಗೊಳಿಸುವ ಘಟನೆ: ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಕಮೋಡ್ನಲ್ಲಿ ನವಜಾತ ಶಿಶು ಪತ್ತೆ ಸಮಾಜದಲ್ಲಿ ಇಂದು ನಾವೊಂದು ಭೀಕರ ವಿರೋಧಾಭಾಸದ ಸುಳಿಯಲ್ಲಿ ಸಿಲುಕಿದ್ದೇವೆ. ಮಕ್ಕಳಿಲ್ಲದ ನೋವಿನಲ್ಲಿ ಬೆಂದು ಹೋಗುತ್ತಿರುವ ಸಾವಿರಾರು ದಂಪತಿಗಳು ಒಂದು ಮಗುವಿಗಾಗಿ ದೇವರ ಮೊರೆ ಹೋಗುವುದನ್ನು, ವೈದ್ಯರ ಉಂಬಲಿ ಹಿಡಿಯುವುದನ್ನು ನಾವು ನಿತ್ಯವೂ ಕಾಣುತ್ತೇವೆ. ಆದರೆ, ಅದೇ ಸಮಾಜದ ಇನ್ನೊಂದು ಕರಾಳ ಮುಖದಲ್ಲಿ ಹೂವಿನಂತ ಮಗುವನ್ನು ಮನುಷ್ಯತ್ವವೇ ಇಲ್ಲದಂತೆ ಎಸೆಯುವ ಕ್ರೂರ ಮನಸ್ಥಿತಿಗಳು ಅಡಗಿವೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಆಘಾತಕಾರಿ ಘಟನೆ ಕೇವಲ ಸುದ್ದಿಯಲ್ಲ, ಅದು ಇಡೀ ಮನುಕುಲದ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿ. ಸ್ವಚ್ಛತಾ ಕಾರ್ಯದ ವೇಳೆ ಬಯಲಾದ ಭೀಕರ ಸತ್ಯ ಬುಧವಾರ ಬೆಳಿಗ್ಗೆ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂದಿನಂತೆ ಚಟುವಟಿಕೆಗಳು ಆರಂಭವಾಗಿದ್ದವು. ಆದರೆ, ಶೌಚಾಲಯದ ಸ್ವಚ್ಛತೆಗೆ ತೆರಳಿದ ಸಿಬ್ಬಂದಿಗೆ ಎದುರಾದ ಆ ದೃಶ್ಯ ಅವರ ಆತ್ಮಸಾಕ್ಷಿಯನ್ನೇ…
ಮುಂದೆ ಓದಿ..
