ವಿರಾಜಪೇಟೆ: ನಾಲ್ವರ ಕ್ರೂರ ಹತ್ಯೆ ಪ್ರಕರಣ : ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಾಲಯ
ವಿರಾಜಪೇಟೆ: ನಾಲ್ವರ ಕ್ರೂರ ಹತ್ಯೆ ಪ್ರಕರಣ : ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಾಲಯ ಮಡಿಕೇರಿ: ಪತ್ನಿ, ಆಕೆಯ ಐದು ವರ್ಷದ ಮಗಳು, ಪತ್ನಿಯ ಅಜ್ಜ–ಅಜ್ಜಿ ಸೇರಿ ನಾಲ್ವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ 2025ರ ಮಾರ್ಚ್ 27ರ ರಾತ್ರಿ ನಡೆದ ಈ ಭೀಕರ ಕೊಲೆ ಪ್ರಕರಣದಲ್ಲಿ ಕೇರಳ ಮೂಲದ ಗಿರೀಶ್ (35) ಅಪರಾಧಿ ಎಂದು ಸಾಬೀತಾಗಿದ್ದು, ನ್ಯಾಯಾಲಯವು ಗಲ್ಲುಶಿಕ್ಷೆ ಘೋಷಿಸಿದೆ. ಈ ಕೃತ್ಯದಲ್ಲಿ ಪತ್ನಿ ನಾಗಿ (30), ಆಕೆಯ ಮೊದಲ ಪತಿಯಿಂದ ಜನಿಸಿದ ಮಗಳು ಕಾವೇರಿ (5), ಪತ್ನಿಯ ಅಜ್ಜ ಕರಿಯ (75) ಹಾಗೂ ಅಜ್ಜಿ ಗೌರಿ (70) ಪ್ರಾಣ ಕಳೆದುಕೊಂಡಿದ್ದರು. ನಾಗಿ ಮೊದಲ ಪತಿಯನ್ನು ತೊರೆದು 2024ರಲ್ಲಿ ಗಿರೀಶ್ನೊಂದಿಗೆ ವಿವಾಹವಾಗಿದ್ದಳು ಎನ್ನಲಾಗಿದೆ.…
ಮುಂದೆ ಓದಿ..
