ಕಾವೇರುತ್ತಿದೆ ಹುಬ್ಬಳ್ಳಿ: ಶಾಲಾ ಆವರಣದಲ್ಲಿ ಕೇಸರಿ-ಹಿಜಾಬ್ ‘ಸಾಂಕೇತಿಕ ಸಮರ’ಕ್ಕೆ ಮರುಜೀವ?..
ಕಾವೇರುತ್ತಿದೆ ಹುಬ್ಬಳ್ಳಿ: ಶಾಲಾ ಆವರಣದಲ್ಲಿ ಕೇಸರಿ-ಹಿಜಾಬ್ ‘ಸಾಂಕೇತಿಕ ಸಮರ’ಕ್ಕೆ ಮರುಜೀವ?.. ಶಿಕ್ಷಣ ಸಂಸ್ಥೆಗಳು ಕೇವಲ ಜ್ಞಾನಾರ್ಜನೆಯ ಕೇಂದ್ರಗಳಾಗಿ ಉಳಿದಿವೆಯೇ ಅಥವಾ ಸೈದ್ಧಾಂತಿಕ ಸಂಘರ್ಷದ ಪ್ರಯೋಗಶಾಲೆಗಳಾಗಿ ಮಾರ್ಪಡುತ್ತಿವೆಯೇ? ಶಾಲಾ-ಕಾಲೇಜುಗಳಲ್ಲಿನ ಶಿಸ್ತು ಮತ್ತು ಧಾರ್ಮಿಕ ಗುರುತುಗಳ ನಡುವಿನ ಹಳೆಯ ಸಂಘರ್ಷವು ಈಗ ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯಾದ್ಯಂತ ಈ ಹಿಂದೆ ಭಾರಿ ಬಿರುಗಾಳಿ ಎಬ್ಬಿಸಿದ್ದ ‘ಹಿಜಾಬ್ v/s ಕೇಸರಿ ಶಾಲು’ ವಿವಾದವು, ಹುಬ್ಬಳ್ಳಿಯ ಇತ್ತೀಚಿನ ಬೆಳವಣಿಗೆಯೊಂದಿಗೆ ಹೊಸ ಆಯಾಮವನ್ನು ಪಡೆದುಕೊಂಡಿದೆ. ಶಾಂತವಾಗಿದ್ದ ಶೈಕ್ಷಣಿಕ ವಲಯದಲ್ಲಿ ಈಗ ಮತ್ತೆ ಧ್ರುವೀಕರಣದ ಕಿಡಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ಜೂನ್ 2, ಸೋಮವಾರದಂದು ಹುಬ್ಬಳ್ಳಿಯ ಶೈಕ್ಷಣಿಕ ಆವರಣಗಳು ಒಂದು ವಿಭಿನ್ನ ಪ್ರತಿಭಟನೆಗೆ ಸಾಕ್ಷಿಯಾದವು. ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ನಗರದ ಕನಕದಾಸ ಶಿಕ್ಷಣ ಸಮಿತಿಯ ಕಾಲೇಜು ಮತ್ತು ಮಹಿಳಾ ವಿದ್ಯಾಪೀಠದಂತಹ ಪ್ರಮುಖ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ಹಂಚುವ ಮೂಲಕ ಸರ್ಕಾರಕ್ಕೆ ನೇರ…
ಮುಂದೆ ಓದಿ..
