ಶಿಕ್ಷಣವೋ ಅಥವಾ ವ್ಯಾಪಾರವೋ? ರಾಣೇಬೆನ್ನೂರಿನ ಕಾಲೇಜು ಘಟನೆ ಮತ್ತು ನಾವು ತಿಳಿಯಲೇಬೇಕಾದ ಕಟು ಸತ್ಯಗಳು…
ಶಿಕ್ಷಣವೋ ಅಥವಾ ವ್ಯಾಪಾರವೋ? ರಾಣೇಬೆನ್ನೂರಿನ ಕಾಲೇಜು ಘಟನೆ ಮತ್ತು ನಾವು ತಿಳಿಯಲೇಬೇಕಾದ ಕಟು ಸತ್ಯಗಳು… ಶಿಕ್ಷಣವೆಂಬುದು ಅಂಧಕಾರವನ್ನು ನೀಗಿಸುವ ಬೆಳಕಾಗಬೇಕಿತ್ತು. ಆದರೆ ಇಂದು ಅಕ್ಷರ ದಾಸೋಹದ ಪವಿತ್ರ ತಾಣಗಳು ಲಾಭಕೋರ ವ್ಯಾಪಾರೀ ಕೇಂದ್ರಗಳಾಗಿ ಮಾರ್ಪಡುತ್ತಿರುವುದು ವಿಷಾದನೀಯ. ಇತ್ತೀಚಿನ ದಿನಗಳಲ್ಲಿ ಬಡವರ ಪಾಲಿಗೆ ಶಿಕ್ಷಣದ ಬಾಗಿಲುಗಳು ‘ಹಣದ ಲಾಕ್’ಗಳಿಂದ ಬಂದ್ ಆಗುತ್ತಿವೆ. ರಾಣೇಬೆನ್ನೂರಿನ ಬಿಎಜೆಎಸ್ಎಸ್ (BAJSS) ಶಿಕ್ಷಣ ಸಂಸ್ಥೆಯಲ್ಲಿ ಕೇವಲ ಶುಲ್ಕದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಹೊರಹಾಕಿದ ಘಟನೆಯು, ಇಂದಿನ ಶೈಕ್ಷಣಿಕ ವ್ಯವಸ್ಥೆಯ ನೈತಿಕ ಅಧಃಪತನ ಹಾಗೂ ಈ ಕ್ಷೇತ್ರದಲ್ಲಿ ಬೇರೂರಿರುವ ‘ಶೈಕ್ಷಣಿಕ ಮಾಫಿಯಾ’ದ ಅಟ್ಟಹಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಮಾನವೀಯತೆ ಮರೆತ ಶಿಕ್ಷಣ ಸಂಸ್ಥೆ: ವ್ಯವಸ್ಥಿತ ಶೋಷಣೆಯ ಒಂದು ನೋಟ… ರಾಣೇಬೆನ್ನೂರು ನಗರದ ಬಿಎಜೆಎಸ್ಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೇವಲ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ತರಗತಿಯಿಂದ ಹೊರದೂಡಿರುವುದು ಅಮಾನವೀಯತೆಯ ಪರಮಾವಧಿಯಾಗಿದೆ. ಈ ಘಟನೆಯು ಕೇವಲ ಆರ್ಥಿಕ…
ಮುಂದೆ ಓದಿ..
