ಬಿಗ್ ಬಾಸ್ ಮತದಾನ ಮತ್ತು ನಮ್ಮ ನೈಜ ಜವಾಬ್ದಾರಿ: ನಾವು ನಿಜವಾಗಿಯೂ ಗೆಲ್ಲುವುದು ಯಾವಾಗ?
ಬಿಗ್ ಬಾಸ್ ಮತದಾನ ಮತ್ತು ನಮ್ಮ ನೈಜ ಜವಾಬ್ದಾರಿ: ನಾವು ನಿಜವಾಗಿಯೂ ಗೆಲ್ಲುವುದು ಯಾವಾಗ? ಮನರಂಜನೆಯ ಅಮಲಿನಲ್ಲಿ ಕಳೆದುಹೋದ ನೈಜ ಕಾಳಜಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಇಂದು ಕೇವಲ ಒಂದು ಮನರಂಜನಾ ಕಾರ್ಯಕ್ರಮವಾಗಿ ಉಳಿದಿಲ್ಲ; ಅದು ಸಮಾಜದ ಆದ್ಯತೆಗಳ ದಿಕ್ಸೂಚಿಯಂತಾಗಿದೆ. ಅದರಲ್ಲೂ ಈ ಬಾರಿ ‘ಗಿಲ್ಲಿ’ಯಂತಹ ಪ್ರತಿಭಾವಂತ ಸ್ಪರ್ಧಿ ಮತ್ತು ಅಶ್ವಿನಿ ಗೌಡ ಅವರ ನಡುವಿನ ಪೈಪೋಟಿ ಜನರಲ್ಲಿ ಎಂತಹ ಭಾವನಾತ್ಮಕ ಉನ್ಮಾದವನ್ನು ಸೃಷ್ಟಿಸಿದೆಯೆಂದರೆ, ಅದು ಯಾವುದೋ ಭಾರತ-ಪಾಕಿಸ್ತಾನ ನಡುವಿನ ಯುದ್ಧವೇನೋ ಎಂಬ ಮಟ್ಟಕ್ಕೆ ತಲುಪಿದೆ. ಒಬ್ಬ ವ್ಯಕ್ತಿಯನ್ನು ಗೆಲ್ಲಿಸಲು ಅಥವಾ ಇನ್ನೊಬ್ಬರನ್ನು ಸೋಲಿಸಲು ಜನರು ತೋರುತ್ತಿರುವ ಈ ಅದಮ್ಯ ಉತ್ಸಾಹ ಮತ್ತು ಎಮೋಷನಲ್ ಕನೆಕ್ಟ್ ಕಂಡಾಗ ಒಬ್ಬ ಸಾಮಾಜಿಕ ವಿಶ್ಲೇಷಕನಾಗಿ ನನಗೆ ಆಶ್ಚರ್ಯದ ಜೊತೆಗೆ ವಿಷಾದವೂ ಉಂಟಾಗುತ್ತಿದೆ. ಪ್ರಶ್ನೆ ಇರುವುದು ಪ್ರತಿಭೆಯನ್ನು ಬೆಂಬಲಿಸುವ ಬಗ್ಗೆ ಅಲ್ಲ, ಬದಲಾಗಿ ಆ ಬೆಂಬಲದ…
ಮುಂದೆ ಓದಿ..
