ಮುಳಬಾಗಿಲು: ’ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೇ ಅತ್ಯಂತ ಕಡು ಬಡತನದ ಹಿನ್ನಲೆ ಹೊಂದಿರುವ ಮಕ್ಕಳನ್ನು ಗುರುತಿಸಿ ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್ಟಾಪ್ ವಿತರಿಸಲಾಗುತ್ತಿದೆ’
ಮುಳಬಾಗಿಲು: ’ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೇ ಅತ್ಯಂತ ಕಡು ಬಡತನದ ಹಿನ್ನಲೆ ಹೊಂದಿರುವ ಮಕ್ಕಳನ್ನು ಗುರುತಿಸಿ ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್ಟಾಪ್ ವಿತರಿಸಲಾಗುತ್ತಿದೆ’ ಎಂದು ಕೆ ಎಂ ಎಫ಼್ ನಿರ್ದೇಶಕರು ಬಿ ವಿ ಸಾಮೆಗೌಡ ಹೇಳಿದರು. ಮುಳಬಾಗಿಲು ತಾಲೂಕಿನಲ್ಲಿ ಇದುವರಿಗೆ 5 ಲ್ಯಾಪ್ ಟಾಪ್ 10 ಟ್ಯಾಬ್ ಮತ್ತು ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡಿದರು. ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಲು ಲ್ಯಾಪ್ಟಾಪ್ನಂತಹ ಪರಿಕರಗಳು ಅವಶ್ಯಕವಾಗಿವೆ. ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ ಬಿ ಕೃಷ್ಣಮೂರ್ತಿ ಯುವ ಉದ್ಯಮಿ ಸಿದ್ದಗಟ್ಟ ರಮೇಶ್ ರವರ ಮನವಿಗೆ ಸ್ಪಂದಿಸಿ ಮಕ್ಕಳಿಗೆ ಲ್ಯಾಪ್ಟಾಪ್ ವಿತರಿಸಲಾಗಿದೆ’ ಎಂದು ಹೇಳಿದರು. 2021ರಲ್ಲಿ ಆರಂಭಗೊಂಡ ಉಚಿತ ಲ್ಯಾಪ್ಟಾಪ್ ವಿತರಣೆ ಕಾರ್ಯ ಇಲ್ಲಿಯವರೆಗೆ ಬಂದಿದೆ. ಒಟ್ಟು ಒಂದು ಸಾವಿರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಿಸುವ ಗುರಿ ಇದೆ.…
ಮುಂದೆ ಓದಿ..
