ರಿಷಬ್ ಶೆಟ್ಟಿ ಹರಕೆ ನೇಮ ವಿವಾದ: ಸಂಪ್ರದಾಯಬದ್ಧವಾಗಿ ನಡೆದ ನೇಮೋತ್ಸವ – ದೈವಸ್ಥಾನ ಸಮಿತಿಯಿಂದ ಸ್ಪಷ್ಟನೆ
ರಿಷಬ್ ಶೆಟ್ಟಿ ಹರಕೆ ನೇಮ ವಿವಾದ: ಸಂಪ್ರದಾಯಬದ್ಧವಾಗಿ ನಡೆದ ನೇಮೋತ್ಸವ – ದೈವಸ್ಥಾನ ಸಮಿತಿಯಿಂದ ಸ್ಪಷ್ಟನೆ ಮಂಗಳೂರು: ನಟ ರಿಷಬ್ ಶೆಟ್ಟಿ ಅವರು ಸಲ್ಲಿಸಿದ ಹರಕೆ ನೇಮೋತ್ಸವವು ದೈವಸ್ಥಾನದ ಪುರಾತನ ಸಂಪ್ರದಾಯಗಳಂತೆ ಸರಿಯಾಗಿ ನೆರವೇರಿದೆ ಎಂದು ಬಾರೆಬೈಲು ಶ್ರೀ ಜಾರಂದಾಯ ಬಂಟ ದೈವಸ್ಥಾನ ಹಾಗೂ ಶ್ರೀ ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ತಿಳಿಸಿದೆ. ಈ ಕುರಿತು ಹರಡಿರುವ ತಪ್ಪು ಮಾಹಿತಿಗೆ ಸ್ಪಷ್ಟನೆ ನೀಡಿದ ಸಮಿತಿ, ದೈವಸ್ಥಾನದ ಗೌರವಕ್ಕೆ ಧಕ್ಕೆಯಾಗುವ ರೀತಿಯ ಅಪಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಶುಕ್ರವಾರ ಬಾರೆಬೈಲು ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ರವಿ ಪ್ರಸನ್ನ, ರಿಷಬ್ ಶೆಟ್ಟಿ ಅವರು ಕೆಲವು ತಿಂಗಳ ಹಿಂದೆ ನೇಮ ಸಲ್ಲಿಸುವ ಹರಕೆ ಹೇಳಿಕೊಂಡಿದ್ದು, ದೈವದ ಅನುಮತಿ ಪಡೆದು ಸಂಪ್ರದಾಯಾನುಸಾರ ನೇಮವನ್ನು ನಡೆಸಲಾಗಿದೆ ಎಂದರು. ಎಣ್ಣೆ ಬೂಳ್ಯದ ಸಂದರ್ಭದಲ್ಲಿ ದೈವವು ಯಾರ…
ಮುಂದೆ ಓದಿ..
