ಹುಬ್ಬಳ್ಳಿಯಲ್ಲಿ ಅತಿವೇಗದ ಕಾರು ಡಿಕ್ಕಿ: ಮಹಿಳೆಗೆ ಗಂಭೀರ ಗಾಯ
ಹುಬ್ಬಳ್ಳಿ, ಜೂನ್ 24: ದಿನಾಂಕ 20/06/2025 ರಂದು ಮಧ್ಯಾಹ್ನ 3.10 ಗಂಟೆ ಸುಮಾರಿಗೆ ಹುಬ್ಬಳ್ಳಿ ನಗರದ ದೇಸಾಯಿ ಅಂಡರ್ಬ್ರಿಡ್ಜ್ ಹತ್ತಿರ ಗಂಭೀರ ರಸ್ತೆ ಅಪಘಾತ ಸಂಭವಿಸಿದೆ. ಕಲಾಪೂರ ಎಸ್.ಕೆ. (ತಾ: ಬಾದಾಮಿ) ನಿವಾಸಿಯಾಗಿರುವ ಪೂರ್ಣಾನಂದ ರಂಗಪ್ಪ ಕರಡಿಗುಡ್ಡ (ವಯಸ್ಸು: 31), ಅವರು ಚಾಲನೆ ಮಾಡುತ್ತಿದ್ದ ಕಾರು (ನಂ: ಕೆಎ 29 ಎನ್ 5864) ಸರ್ವೋದಯ ಸರ್ಕಲ್ ಕಡೆಯಿಂದ ಕ್ಲಬ್ ರಸ್ತೆ ಮುಖಾಂತರ ವೇಗ ಮತ್ತು ದುಡುಕಿನ ಚಾಲನೆಯಿಂದ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಎರಡು ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪಿರ್ಯಾದಿಕಾರರಾದ ಅನಿಲಕುಮಾರ ಮಿಸಿನ ಅವರ ಪತ್ನಿ ರೂಪಾ ಮಿನ ಅವರು ಸ್ಕೂಟರ್ (ನಂ: ಕೆಎ 63 ಎಸ್ 6386) ಮೇಲೆ ಪ್ರಯಾಣಿಸುತ್ತಿದ್ದು, ಟ್ರಾಫಿಕ್ ಪೊಲೀಸ್ ಸೂಚನೆಯನ್ನು ಪಾಲಿಸಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರ ವಾಹನದ ಹಿಂದಿನ ಭಾಗಕ್ಕೆ ಡಿಕ್ಕಿಯಾಗಿ, ರೂಪಾ…
ಮುಂದೆ ಓದಿ..
