ಸ್ನೇಹಿತನಿಗೆ ಸಾಲವಾಗಿ ಕೊಟ್ಟ ಹಣ ವಾಪಸಿಲ್ಲ – ಕೇಳಿದಂತೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ, ಜೀವ ಬೆದರಿಕೆ!
ಆನೇಕಲ್, ಜುಲೈ 27:ಸ್ನೇಹಿತನಿಗೆ ಮಾನವೀಯತೆ ನೆಪದಲ್ಲಿ ಸಾಲವಾಗಿ ಕೊಟ್ಟ ಹಣವನ್ನು ವಾಪಸೆಗೆ ಕೇಳಿದ ಪರಿಣಾಮ, ಆರೋಪಿಗಳು ಹಣ ಕೊಡುವ ಬದಲು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ಪ್ರಾಣಬೆದರಿಕೆ ಹಾಕಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೋಕೇಶ್ ಎಂಬವರು ದಿನಾಂಕ 27-07-2025 ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಸ್ನೇಹಿತ ಕರಿಯಲಪ್ಪ ನನ್ನಿಂದ ರೂ. 1,16,000/- ಅನ್ನು ಸಾಲವಾಗಿ ಪಡೆದು, ಕೆಲ ದಿನಗಳಲ್ಲಿ ಹಿಂತಿರುಗಿಸುತ್ತೇನೆಂದು ಭರವಸೆ ನೀಡಿದ್ದನು. ಬಳಿಕ ಚೆಕ್ (ಚೆಕ್ ನಂ. 054816) ನೀಡಿ ಹಣ ಕೊಡಲಿಲ್ಲ. ಮತ್ತೆ ನಾನು ಕೇಳಿದಾಗ ಹಲವು ದಿನಗಳಿಂದ ಹಣ ತಳ್ಳುತ್ತಿದ್ದನು. ಕೊನೆಗೆ ದಿನಾಂಕ 25-07-2025 ರಂದು ಜಿಗಣಿ ಕಡೆಯಿಂದ ಕರೆಸಿಕೊಂಡು, ಸಿಡಿಹೊಸಕೋಟಿ ರಸ್ತೆಯಲ್ಲಿರುವ ಒಂದು ಖಾಲಿ ಪ್ರದೇಶಕ್ಕೆ ಕರೆಯಲು ಮಾಡಿದರು” ಎಂದು ತಿಳಿಸಿದ್ದಾರೆ. ಅಲ್ಲಿ ಕರಿಯಲಪ್ಪ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ನಾರಾಯಣಸ್ವಾಮಿ, ಮರಸೂರು ನಿವಾಸಿ, ಹಣದ…
ಮುಂದೆ ಓದಿ..
