ಅಪ್ಪನನ್ನು ನೋಡಿಕೊಳ್ಳುವ ವಿಚಾರಕ್ಕೆ ತಂಗಿ–ಅಕ್ಕ ನಡುವೆ ಜಗಳ; ಚಾಕು ಹಾಯ್ದು ಗಾಯಗೊಳಿಸಿದ ಮಗು
ಬೆಂಗಳೂರು ಗ್ರಾಮಾಂತರ , ಜುಲೈ 31:2025 ತಂದೆಯ ನೋಡಿಕೊಳ್ಳುವ ಜವಾಬ್ದಾರಿ ವಿಷಯದಲ್ಲಿ ಉಂಟಾದ ವೈಷಮ್ಯವು ಅಕ್ಕ–ತಂಗಿಯ ನಡುವೆ ಗಂಭೀರ ಜಗಳಕ್ಕೆ ಕಾರಣವಾಗಿ, ಕೊನೆಗೆ ಚಾಕು ಹಾಯ್ದು ಗಾಯಗೊಳಿಸಿದ ಘಟನೆ ಅವಲಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ತಂಗಿ ಅನಸೂಯ ಅವರ ದೂರಿನ ಮೇರೆಗೆ ಮಂಜುಳಾ ಹಾಗೂ ಅವರ ಮಗ ಅಭಿಲಾಷ್ ವಿರುದ್ಧ ರಾಜನಕುಂಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಿಳ್ಳಪ್ಪ ಮತ್ತು ಲೇಟ್ ಆಂಜಿನಮ್ಮ ದಂಪತಿಗೆ ಐದು ಮಂದಿ ಮಕ್ಕಳಿದ್ದು, ರಮೇಶ್, ಕೃಷ್ಣಮೂರ್ತಿ, ರಾಜಮ್ಮ, ಮಂಜುಳಾ ಮತ್ತು ಅನಸೂಯ ಎಂಬವರು ಇದ್ದಾರೆ. ಪಿಳ್ಳಪ್ಪ ಅವರು ಜೀವಿತವಾಗಿದ್ದು, ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಮಂಜುಳಾ ಅವರು ತಂದೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ಒಂದು ತಿಂಗಳ ನಂತರ ಮರಳಿ ಕಳುಹಿಸುವ ಭರವಸೆ ನೀಡಿದ್ದರು. ಆದರೆ ಸಮಯಾದ ನಂತರ ಕೂಡ ತಂದೆಯನ್ನು ಹಿಂತಿರುಗಿಸಲು ನಿರಾಕರಿಸಿದರು. ದಿನಾಂಕ ಜುಲೈ 27, 2025…
ಮುಂದೆ ಓದಿ..
