ಹೆಬ್ಬಾಳ ಸೇತುವೆ ಬಳಿ ಕಂಟೈನರ್ ಲಾರಿ ಡಿಕ್ಕಿ – ತಾಯಿ-ಮಗನಿಗೆ ಗಂಭೀರ ಗಾಯ
ಬೆಂಗಳೂರು: ಅಕ್ಕಿಪೇಟೆಯಿಂದ ಕೋಡಿಗೆಹಳ್ಳಿಯಲ್ಲಿರುವ ಬಂಧುವಿನ ಮನೆಗೆ ತೆರಳುತ್ತಿದ್ದ ತಾಯಿ-ಮಗನ ಸ್ಕೂಟರ್ಗೆ ಮಧ್ಯರಾತ್ರಿ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಆಗಸ್ಟ್ 6ರ ಮಧ್ಯರಾತ್ರಿ ನಡೆದಿದೆ. ಪೊಲೀಸರ ಪ್ರಕಾರ, ಗಾಯಗೊಂಡವರು ರಾಜೇಶ್ ಎ. (ಮಗ) ಮತ್ತು ಶಾಂತಿ (ತಾಯಿ). ಇಬ್ಬರೂ ಸ್ಕೂಟರ್ (KA-01-JC-6720) ನಲ್ಲಿ ಬಿಬಿ ರಸ್ತೆ ಮಾರ್ಗವಾಗಿ ಹೆಬ್ಬಾಳ ನ್ಯಾರೋ ಬ್ರಿಡ್ಜ್ ಹತ್ತಿರ ಕೋಡಿಗೆಹಳ್ಳಿಯ ಕಡೆಗೆ ತೆರಳುತ್ತಿದ್ದಾಗ, ಸುಮಾರು 1 ಗಂಟೆಗೆ ಹಿಂಬದಿಯಿಂದ ಬಂದ ಕಂಟೈನರ್ ಲಾರಿ (RJ-14-GG-8561) ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ, ಸ್ಕೂಟರ್ ಸವಾರರು ರಸ್ತೆ ಮೇಲೆ ಬಿದ್ದು, ಲಾರಿಯ ಚಕ್ರ ಕಾಲುಗಳ ಮೇಲೆ ಹರಿದ ಪರಿಣಾಮ ರಾಜೇಶ್ ಎ. ಅವರಿಗೆ ಎರಡೂ ಕಾಲು, ಎಡ ಕೈ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಎಡ ಕಾಲಿನ ಮಂಡಿಯ ಕೆಳಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ. ಶಾಂತಿ…
ಮುಂದೆ ಓದಿ..
