ಸುದ್ದಿ 

ಖಾಸಗಿ ಅಂಗಡಿಗೆ ಅಕ್ರಮ ಪ್ರವೇಶ – ಪ್ರಕರಣ ದಾಖಲಾತಿ

Taluknewsmedia.com

Taluknewsmedia.comಧಾರವಾಡ ನಗರದ ಹೊಸಯಲ್ಲಾಪುರದ ವನಿತಾ ಸೇವಾ ಸಮಾಜದ ಬಳಿ ಇರುವ ಖಾಸಗಿ ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿದ ಘಟನೆ ಸಂಬಂಧ ಧಾರವಾಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ನೂರುದ್ದೀನ್ ಕಲಾಸಿ (38), ರಸೂಲ್ಪೂರ ಓಣಿ, ಧಾರವಾಡ ನಿವಾಸಿಯವರು ದೂರು ನೀಡಿದ್ದು, ಘಟನೆ ಜುಲೈ 1, 2024ರ ಮಧ್ಯರಾತ್ರಿ 12.01 ರಿಂದ 12.02ರ ನಡುವೆ ನಡೆದಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಕುರಿತು ತಡವಾಗಿ (24-06-2025ರಂದು ರಾತ್ರಿ 11 ಗಂಟೆಗೆ) ಠಾಣೆಗೆ ಮಾಹಿತಿ ನೀಡಲಾಗಿದೆ. ಪ್ರಕರಣ ಸಂಖ್ಯೆ 0105/2025 ರಂತೆ ದಾಖಲೆಯಾಗಿದೆ. ಈ ಕುರಿತು ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 318(4) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿತನು ಸತೀಶ ಚಂದ್ರಶೇಖರ್ ಭಟ್, ವಯಸ್ಸು 34, ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಆಗಸಾರ್ ಗ್ರಾಮದ ನಿವಾಸಿ. ಇವರು ಖಾಸಗಿ ಉದ್ಯೋಗದಲ್ಲಿದ್ದು, ಘಟನಾ ಸ್ಥಳದ ಸಮೀಪದ ಅಂಗಡಿಗೆ ಅಕ್ರಮವಾಗಿ…

ಮುಂದೆ ಓದಿ..
ಸುದ್ದಿ 

ಅಪ್ರಾಪ್ತ ಬಾಲಕಿ ರಕ್ಷಿತಾ ವಿವಾಹ ಪ್ರಕರಣ: ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಕ್ರಮ

Taluknewsmedia.com

Taluknewsmedia.comಅಪ್ರಾಪ್ತ ವಯಸ್ಸಿನ ಬಾಲಕಿಯಾದ ಕುಮಾರಿ ರಕ್ಷಿತಾ (ವಯಸ್ಸು: 14 ವರ್ಷ), ತಂದೆ: ಈರಣಾ, ಇಂಗೋಳಿ, ವಿಳಾಸ: ಹೊಸಯಲಾಪೂರ, ಬನಶಂಕರಿ ದೇವಸ್ಥಾನದ ಹತ್ತಿರ, ನೇಕಾರ ಓಣಿ, ಧಾರವಾಡ – ಈಕೆಯ ವಿವಾಹ ಮಾಡಿರುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ಶನಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಎಚ್.ಹೆಚ್. ಕೂಕನೂರ ಅವರ ಮೊಬೈಲ್ ಸಂಖ್ಯೆ ಗೆ ವಾಟ್ಸಪ್ ಮೂಲಕ ಒಂದು ಭಾವಚಿತ್ರ ಸಹಿತ ಸಂದೇಶ ಬಂದಿತ್ತು. ಈ ಕುರಿತು ಅವರು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರಕಾಶ ಕೊಡಿವಾಡ ಮತ್ತು ಸಂಬಂಧಪಟ್ಟ ಪಿರ್ಯಾದಿದಾರರಿಗೆ ಮಾಹಿತಿಯನ್ನು ಹಂಚಿದರು. ಇದರ ಪ್ರಕಾರ, ದಿನಾಂಕ: 20-06-2025 ರಂದು ಸಂಬಂಧಪಟ್ಟವರು ರಕ್ಷಿತಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶಾಲಾ ದಾಖಲಾತಿ ಆಧಾರವಾಗಿ ಅವಳ ಜನ್ಮ ದಿನಾಂಕ 03-08-2010 ಎಂಬುದಾಗಿ ದೃಢಪಡಿಸಿದರು. ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಿತಾ ಅವರ ಪೋಷಕರ ವಿರುದ್ಧ ಬಾಲ್ಯ ವಿವಾಹ…

ಮುಂದೆ ಓದಿ..
ಸುದ್ದಿ 

ಅನಧಿಕೃತ ಮದ್ಯ ಮಾರಾಟ: ವಿದ್ಯಾನಗರದಲ್ಲಿ ಏಸಿಪಿ ನೇತೃತ್ವದಲ್ಲಿ ದಾಳಿ, ಒಬ್ಬ ವ್ಯಕ್ತಿ ಬಂಧನ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 26: ಬೆಳಿಗ್ಗೆ 08.15 ಗಂಟೆಯ ಸಮಯದಲ್ಲಿ ಮಾರ್ನಿಂಗ್ ರೌಂಡ ಕರ್ತವ್ಯದಲ್ಲಿದ್ದ ಸಿಇಎನ್ ಕ್ರೈಂ ಠಾಣೆಯ ಎಸಿಪಿ ಶ್ರೀ ಎಸ್.ಕೆ. ಕಟಕಬಾವಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ವಿದ್ಯಾನಗರದ ಅಂಬಿಕಾ ವೈನ್ಯ ಪಕ್ಕದ ಕೋಣೆಯಲ್ಲಿ ನಡೆಸಿದ ದಾಳಿಯಲ್ಲಿ, ವಾಸು ತಂದೆ ವಿಷು ರಾವ್ ಕಲಾಲದೊಡಮನಿ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತನು ಯಾವುದೇ ಪಾಸ್ ಅಥವಾ ಪರಮಿಟ್ ಇಲ್ಲದೇ ತನ್ನ ಸ್ವಂತ ಪಾಯ್ದೆಗೊಸರಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಮಧ್ಯ ಸೇವನೆಗೆ ಅವಕಾಶ ನೀಡುವ ಉದ್ದೇಶದಿಂದ ಮೂರು ರಟ್ಟಿನ ಬಾಕ್ಸ್‌ಗಳಲ್ಲಿ ಟೆಟ್ರಾ ಪ್ಯಾಕ್ ಮದ್ಯವನ್ನು ಇಟ್ಟುಕೊಂಡು ಮಾರಾಟಕ್ಕೆ ಹೊಂದಿಸಿದ್ದನ್ನೂ ಅಧಿಕಾರಿಗಳು ಸ್ಥಳದಲ್ಲಿಯೇ ಪತ್ತೆ ಹಚ್ಚಿದರು. ಈ ಕುರಿತು ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ಆರೋಪಿತನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15(ಎ), 32 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ…

ಮುಂದೆ ಓದಿ..
ಸುದ್ದಿ 

ಕಾಣೆಯಾದ ಯುವತಿ: ಪೋಷಕರಿಂದ ಮಗಳ ಪತ್ತೆಗಾಗಿ ಮನವಿ

Taluknewsmedia.com

Taluknewsmedia.comಹುಬ್ಬಳ್ಳಿಯ ಸೆಟ್ಲ್ ಮೆಂಟ್ 6ನೇ ಕ್ರಾಸ್ ನಿವಾಸಿ ಮಾರುತಿ ನವಲಗುಂದ ಅವರು ದಿನಾಂಕ 21-06-2025 ರಂದು ತಮ್ಮ ಅಪ್ರಾಪ್ತ ವಯಸ್ಸಿನ ಮಗಳಾದ ಕು: ದೀಪಿಕಾ (ವಯಸ್ಸು: 17 ವರ್ಷ 01 ತಿಂಗಳು) ಕಾಣೆಯಾಗಿರುವ ಕುರಿತು ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿರ್ಯಾದಿದಾರರ ಹೇಳಿಕೆಯಂತೆ, ದೀಪಿಕಾ ಬೆಳಿಗ್ಗೆ 10.00 ರಿಂದ 10.30 ಗಂಟೆಯ ನಡುವೆ “ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಹೋಗಿದ್ದಳು. ಆದರೆ ಅಷ್ಟರಿಂದಲೂ ಮನೆಗೆ ಹಿಂದಿರುಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಗುರುತಿನ ಎಲ್ಲಾ ಕಡೆ ಹುಡುಕಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಯುವತಿಯನ್ನು ಶೀಘ್ರ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ದೀಪಿಕಾ ಬಗ್ಗೆ ಯಾವುದೇ ಮಾಹಿತಿ ಪಡೆದಿದ್ದರೆ, ದಯವಿಟ್ಟು ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಬೇಕೆಂದು…

ಮುಂದೆ ಓದಿ..
ಸುದ್ದಿ 

ಮಗಳು ಕಾಣೆಯಾದ ಕುರಿತು ತಂದೆಯಿಂದ ದೂರು..

Taluknewsmedia.com

Taluknewsmedia.comಮಗಳು ಕಾಣೆಯಾದ ಕುರಿತು ತಂದೆಯಿಂದ ದೂರು ಈ ದಿನ 25-06-2025 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ, ಪಿರ್ಯಾದಿದಾರರ ಮಗಳಾದ ಅನುಷಾ, ತಂದೆ ಗೋಕುಲ ಸುತಾರ, ವಯಸ್ಸು 19 ವರ್ಷ, ಇವಳು ಮನೆಯವರಿಗೆ ತಿಳಿಸದೆ ಹೊರಗೆ ಹೋಗಿದ್ದಾಳೆ. ಮೂಲತಃ, ಈಕೆ ತನ್ನ ಗೆಳತಿಯರ ಮನೆಯಲ್ಲಿ ಇದ್ದಿರಬಹುದೆಂದು ಮನೆಯವರು ಮೊದಲಿಗೆ ಶಂಕಿಸಿ ಸುಮ್ಮನಿದ್ದರು. ಆದರೆ ಬಹುಸಮಯವಾದರೂ ಅನುಷಾ ಮನೆಗೆ ವಾಪಸ್ಸು ಬಾರದೇ ಇದ್ದುದರಿಂದ, ಮನೆಯವರು ಮತ್ತು ಸಂಬಂಧಿಕರು ಸೇರಿ ಎಲ್ಲೆಡೆ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿಲ್ಲ. ಅಲ್ಲದೆ, ಸಂಬಂಧಿಕರು ಹಾಗೂ ಗೆಳತಿಯರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಯಾರಿಗೂ ಅನುಷಾದ ಬಗ್ಗೆ ಮಾಹಿತಿ ಇಲ್ಲವೆಂದು ತಿಳಿದುಬಂದಿದೆ. ಈ ಹಿನ್ನೆಲೆಪರವಾಗಿ, ತನ್ನ ಮಗಳು ಅನುಷಾ ಕಾಣೆಯಾಗಿರುವ ಬಗ್ಗೆ ಪತ್ತೆಹಚ್ಚಿ ಮನೆಗೆ ವಾಪಸ್ಸು ಕರೆತರಲಿ ಎಂಬ ಮನವಿಯಿಂದ ಪಿರ್ಯಾದಿದಾರರು ಸಂಬಂಧಿತ ಪೊಲೀಸರಿಗೆ ದೂರು ನೀಡಿರುವುದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವರದಿ :…

ಮುಂದೆ ಓದಿ..
ಅಂಕಣ 

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ…….

Taluknewsmedia.com

Taluknewsmedia.comಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ…….. ಭಾರತದ ವ್ಯಕ್ತಿಯೊಬ್ಬರು ಅಂತರಿಕ್ಷದಲ್ಲಿ ವೈಜ್ಞಾನಿಕ ಸಂಶೋಧನೆಗೆ ಹೊರಟು ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿರುವಾಗ, ಇಡೀ ದೇಶ ಆ ಅದ್ಬುತ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಿರುವಾಗ, ಕರ್ನಾಟಕದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ನಂಜಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪಾತಾಳದೊಳಗೆ ಇಳಿಯುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತಿದೆ….. ಎಲ್ಲಿದೆ ಜಾತಿ, ಎಲ್ಲಿದೆ ಜಾತಿ, ಈಗ ಜಾತಿಯೇ ಇಲ್ಲ, ಹೋಟೆಲ್ ಗಳಲ್ಲಿ ಇಲ್ಲ, ಸಿನಿಮಾ ಮಂದಿರಗಳಲ್ಲಿಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲ, ಪ್ರಯಾಣದಲ್ಲಿ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಇಲ್ಲ, ಎಲ್ಲಿಯೂ ಇಲ್ಲ ಎನ್ನುವವರು, ಭಾರತೀಯರ ಬಹುತೇಕರ ಮನಸ್ಸಿನಲ್ಲಿ ಇದೆ ಎಂಬುದನ್ನು ಮರೆಯುತ್ತಾರೆ. ಅದು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಆಚರಣೆಯಲ್ಲೂ ಇದೆ ಎಂಬುದನ್ನು ಖಂಡಿತ ಸಾಕ್ಷಿ ಸಮೇತ…

ಮುಂದೆ ಓದಿ..
ಅಂಕಣ 

ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ?

Taluknewsmedia.com

Taluknewsmedia.com” ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? ………… ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ ನಡೆ ನುಡಿಗಳ ಈ ಸಂದರ್ಭದಲ್ಲಿ ಈ ಮಾತುಗಳು ತುಂಬಾ ಕಾಡುತ್ತಿದೆ. ಅದಕ್ಕಾಗಿ…… ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ….. ನೀವು ಯಾವಾಗಲೂ ಸಮಾಜದಲ್ಲಿರುವ ಕೆಟ್ಟ ಅಂಶಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೀರಿ ಮತ್ತು ಬರೆಯುತ್ತೀರಿ. ಏಕೆ?ಇಲ್ಲಿನ ಒಳ್ಳೆಯಅಂಶಗಳು ನಿಮಗೆ ಕಾಣುವುದಿಲ್ಲವೆ? ಸಮಾಜದಲ್ಲಿನ ಶಾಂತಿ, ಸಾಮರಸ್ಯ, ಅಭಿವೃದ್ಧಿ ನಿಮಗೆಗೋಚರಿಸುವುದಿಲ್ಲವೆ ? ಧರ್ಮ, ದೇವರು, ಜಾತಿಗಳಿಂದ ನಮ್ಮ ಮೇಲಾಗಿರುವ ಒಳ್ಳೆಯ ಪರಿಣಾಮಗಳು ನಿಮಗೆ ತಿಳಿಯುವುದಿಲ್ಲವೆ ? ಭಕ್ತಿ, ನಂಬಿಕೆ, ಭಾವನೆಗಳು ವ್ಯೆಚಾರಿಕತೆಗಿಂತ ಬಲಿಷ್ಟವಾಗಿಲ್ಲವೆ ?…… ನೀವು ನೋಡುವ ದೃಷ್ಟಿ ಸರಿ ಇಲ್ಲ ,ನಿಮ್ಮ ಮನಸ್ಸು ಶುಧ್ದವಿಲ್ಲ,ನೀವು ಒಂದು ರೀತಿಯ ಕೊಳಕರು. ಆದ್ದರಿಂದಲೇ…

ಮುಂದೆ ಓದಿ..
ಸುದ್ದಿ 

ಮಹಿಳೆ ಕಾಣೆ ಪ್ರಕರಣ – ಪತಿಯು ಪೊಲೀಸರಿಗೆ ದೂರು ನೀಡಿದ ಘಟನೆ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 26: ನಗರದ ಮಂಟೂರ ರಸ್ತೆ, ಭಾರತ ನಗರ, ಹೊಸ ಚರ್ಚ್ ಹತ್ತಿರ ವಾಸವಿರುವ ಯುವತಿಯೊಬ್ಬರು ಅನಿರೀಕ್ಷಿತವಾಗಿ ಮನೆಯಿಂದ ಕಾಣೆಯಾದ ಪ್ರಕರಣ ಇಂದು ಬೆಳಕಿಗೆ ಬಂದಿದೆ.ಈ ಕುರಿತು ಪ್ರಕರಣ ದಾಖಲಿಸಿರುವವರು ಶ್ರೀ ಜಮೀರಅಹಮ್ಮದ ತಂದೆ ದಾದಾಪೀರ ಬೇಪಾರಿ (ವಯಸ್ಸು: 32 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಸ್ಟೀಲ್ ಫರ್ನಿಚರ್ ಕೆಲಸಗಾರ, ನಿವಾಸಿ: ಮಂಟೂರ ರೋಡ್, ಭಾರತ ನಗರ, ಹೊಸನ ಚರ್ಚ್ ಹತ್ತಿರ, ಹುಬ್ಬಳ್ಳಿ. ಇವರು ಪೊಲೀಸ ಠಾಣೆಗೆ ನೀಡಿರುವ ದೂರು ಪ್ರಕಾರ, ಅವರ ಪತ್ನಿಯಾದ ನಜಮಾಬಾನು (ವಯಸ್ಸು: 28 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಮನೆಕೆಲಸದವರು, ದಿನಾಂಕ 19-06-2025 ರಂದು ಮಧ್ಯಾಹ್ನ 1.30 ರಿಂದ ರಾತ್ರಿ 9.00 ಗಂಟೆಯೊಳಗೆ ತಮ್ಮ ನಿವಾಸದಿಂದ ಯಾರಿಗೂ ತಿಳಿಸದೇ ಎಲ್ಲಿಯೋ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಮನೆಗೆ ಹಿಂತಿರುಗದೆ, ಬಹಳ ಕಾಲವಾದರೂ ಪತ್ತೆಯಾಗದ ಕಾರಣ ತಮ್ಮ ಪತ್ನಿಯನ್ನು ಎಲ್ಲ ಕಡೆಗಳಲ್ಲಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಅತಿವೇಗದ ಕಾರು ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 24: ದಿನಾಂಕ 20/06/2025 ರಂದು ಮಧ್ಯಾಹ್ನ 3.10 ಗಂಟೆ ಸುಮಾರಿಗೆ ಹುಬ್ಬಳ್ಳಿ ನಗರದ ದೇಸಾಯಿ ಅಂಡರ್‌ಬ್ರಿಡ್ಜ್ ಹತ್ತಿರ ಗಂಭೀರ ರಸ್ತೆ ಅಪಘಾತ ಸಂಭವಿಸಿದೆ. ಕಲಾಪೂರ ಎಸ್.ಕೆ. (ತಾ: ಬಾದಾಮಿ) ನಿವಾಸಿಯಾಗಿರುವ ಪೂರ್ಣಾನಂದ ರಂಗಪ್ಪ ಕರಡಿಗುಡ್ಡ (ವಯಸ್ಸು: 31), ಅವರು ಚಾಲನೆ ಮಾಡುತ್ತಿದ್ದ ಕಾರು (ನಂ: ಕೆಎ 29 ಎನ್ 5864) ಸರ್ವೋದಯ ಸರ್ಕಲ್ ಕಡೆಯಿಂದ ಕ್ಲಬ್ ರಸ್ತೆ ಮುಖಾಂತರ ವೇಗ ಮತ್ತು ದುಡುಕಿನ ಚಾಲನೆಯಿಂದ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಎರಡು ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪಿರ್ಯಾದಿಕಾರರಾದ ಅನಿಲಕುಮಾರ ಮಿಸಿನ ಅವರ ಪತ್ನಿ ರೂಪಾ ಮಿನ ಅವರು ಸ್ಕೂಟರ್ (ನಂ: ಕೆಎ 63 ಎಸ್ 6386) ಮೇಲೆ ಪ್ರಯಾಣಿಸುತ್ತಿದ್ದು, ಟ್ರಾಫಿಕ್ ಪೊಲೀಸ್ ಸೂಚನೆಯನ್ನು ಪಾಲಿಸಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರ ವಾಹನದ ಹಿಂದಿನ ಭಾಗಕ್ಕೆ ಡಿಕ್ಕಿಯಾಗಿ, ರೂಪಾ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25: ದಿನಾಂಕ 23.06.2025 ರಂದು ಮಧ್ಯಾಹ್ನ 2.15 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಕಡೆಯಿಂದ ಹೊಸೂರ ಸರ್ಕಲ್ ಕಡೆಗೆ ಸಾಗುತ್ತಿರುವ ಸಾರ್ವಜನಿಕ ರಸ್ತೆಯಲ್ಲಿ ದಿ ಪರ್ಣ ಹೋಟೇಲ್ ಹತ್ತಿರ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕ್ಷಣದಲ್ಲಿ ಓರ್ವನ ಜೀವ ಹಾರಿಹೋಗಿದೆ. ಪ್ರಕರಣದ ವಿವರದಲ್ಲಿ, ಆರೋಪಿತನಾದ ಹಣಮಪ್ಪ (45), ತಂದೆ ನಿಂಗಪ್ಪ ಚುಂಚನೂರ, ವಾಸ: ನಲವಡಿ, ತಾ: ನವಲಗುಂದ – ಈತನು ಕೆಎಸ್‌ಆರ್‌ಟಿಸಿ ಬಸ್ (ನಂಬರ: ಕೆಎ-25/ಎಫ್-3261) ಚಲಾಯಿಸುತ್ತಿದ್ದನು. ಈ ಬಸ್ಸು excessive speed ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ವೇಳೆ, ಬಸ್ಸು ಪಿರ್ಯಾದಿದಾರರ ಗಂಡನಾದ ತಿರುಪತಿ (40), ತಂದೆ ಹನಮಂಪಪ್ಪ ವಡರ, ಸಾ: ನಾವಳ್ಳಿ ಪ್ಲಾಟ್, ಗೋಕುಲ ರೋಡ, ಹುಬ್ಬಳ್ಳಿ – ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ (ನಂಬರ: ಕೆಎ-63/ಯು-0479) ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅವರನ್ನು ರಸ್ತೆಗೆ ಕೆಡವಿದೆ.…

ಮುಂದೆ ಓದಿ..