ಸುದ್ದಿ 

ವಿವಾಹದ ನಂತರ ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ: ವರದಕ್ಷಿಣೆಗೆ ಬಲವಂತ, ಕೊನೆಗೆ ವಿಷ ಸೇವನೆ.

Taluknewsmedia.com

Taluknewsmedia.com ನಾಗಮಂಗಲ ತಾಲ್ಲೂಕಿನ ಸುಖಧರೆ ಗ್ರಾಮದ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಗಂಡನ ಕುಟುಂಬದವರಿಂದ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಪೀಡೆಗೆ ಒಳಗಾಗಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಸುಮಾ ಎಂ ಎಸ್ ಅವರ ಮಹಿಳೆಯು 2022ರಲ್ಲಿ ಸುನೀಲ್.ಎಸ್.ಎನ್ ಎಂಬವರೊಂದಿಗೆ ವಿವಾಹವಾದ ಬಳಿಕ, ಪ್ರಾರಂಭದಲ್ಲಿ ಮೂರು ತಿಂಗಳ ಕಾಲ ಸಹಜ ದಾಂಪತ್ಯ ಜೀವನ ನಡೆಸಿದರೂ ನಂತರದಿಂದವೇ ಅವರ ಅತ್ತೆ ಹಾಗೂ ಮಾವನಿಂದ ವರದಕ್ಷಿಣೆಗೆ ಒತ್ತಡ ಹೆಚ್ಚಾಗಿತ್ತು. ವರದಕ್ಷಿಣೆಗಾಗಿ ಬೈದು, ಅವಮಾನಿಸುವುದರ ಜೊತೆಗೆ, ಗಂಡನೂ ಸಹ ಜಮೀನು ಹೆಸರಿನಲ್ಲಿ ಬರೆಸಿಕೊಳ್ಳುವಂತೆ ಬಲವಂತ ಮಾಡಿದ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ.ಇದೇ ಹಿನ್ನೆಲೆಯಲ್ಲಿ ಪತ್ನಿ ವಿರುದ್ದ ಹಲ್ಲೆ ನಡೆಸಿದ ಸಂದರ್ಭ, ಮಾನಸಿಕವಾಗಿ ಸಹಿಸಲಾಗದೆ ವಿಷ ಸೇವಿಸಿದ ಮಹಿಳೆಯನ್ನು ಗಂಡನೇ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಳಿಕ, ಗಂಡನ ಕುಟುಂಬದಿಂದ ದೂರವಿರುವ ವೇಳೆ, ಪತ್ನಿಗೆ ವಿಚ್ಛೇದನ ನೋಟಿಸ್ ಕಳಿಸಲಾಗಿದೆ ಹಾಗೂ ಬಟ್ಟೆಗಳನ್ನು ಮನೆ…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಕಾಲೇಜಿನಲ್ಲಿ ಜಾತಿ ನಿಂದನೆ ಗೊಂದಲ: ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ವಿರುದ್ಧ ಶಿಕ್ಷಕನ ದೂರು.

Taluknewsmedia.com

Taluknewsmedia.comನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾತಿ ನಿಂದನೆ ಸಂಬಂಧಿತ ಗಂಭೀರ ಆರೋಪ ಉದ್ಭವಿಸಿದ್ದು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಅವರ ವಿರುದ್ಧ ಅಂಗ್ಲಭಾಷೆ ಉಪನ್ಯಾಸಕ ಶ್ರೀ ಸುರೇಶ್ ವೈ. ಅವರು ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.ದೂರುದಾರರ ಪ್ರಕಾರ, ದಿನಾಂಕ 16/06/2025 ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ ಧನಂಜಯ ಮತ್ತು ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ವಿ.ಆರ್. ನಡುವೆ ವಾಗ್ವಾದ ಉಲ್ಬಣಗೊಂಡಿತು. ಮಧ್ಯ ಪ್ರವೇಶಿಸಿ ಸಮ್ಮಜಿಸಲು ಪ್ರಯತ್ನಿಸಿದ ಉಪನ್ಯಾಸಕ ಸುರೇಶ್ ಅವರ ಮೇಲೂ ಧನಂಜಯ ಅವರು ಅನಾದರದ ಮಾತುಗಳನ್ನು ಬಳಸಿ ಗದರಿಸಿದ್ದಾರೆ ಎನ್ನಲಾಗಿದೆ.ಸಭೆಯ ಬಳಿಕ ಧನಂಜಯ ಅವರು ಕಾಲೇಜಿನ ಬಾಗಿಲ ಬಳಿ “ನೀನೇನು ಗಂಗಾಧರನನ್ನು ವಹಿಸಿಕೊಳ್ಳುವುದು ಮಾದಿಗ ಜಾತಿಗೆ ಸರಿಯಾಗಿದೆ. ನೀನು ಮೈಸೂರು ರಸ್ತೆ ಮೇಲೆ ಸಾಯುತ್ತಿರುವೆ” ಎಂಬುದಾಗಿ ಹೇಳಿದ್ದು, ಪರಿಶಿಷ್ಟ ಜಾತಿಗೆ…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಸರ್ಕಾರಿ ಕಾಲೇಜಿನಲ್ಲಿ ಹಲ್ಲೆ ಘಟನೆ: ಉಪಾಧ್ಯಕ್ಷನಿಗೆ ಜೀವ ಬೆದರಿಕೆ!

Taluknewsmedia.com

Taluknewsmedia.comನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ Colleges Development Committee (CDC) ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವವರು ಹಲ್ಲೆಗೊಳಗಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ತಮ್ಮ ಕರ್ತವ್ಯ ನಿಮಿತ್ತ ಪ್ರಾಂಶುಪಾಲರನ್ನು ಭೇಟಿ ಮಾಡಲು ಕಾಲೇಜಿಗೆ ಆಗಮಿಸಿದ ವೇಳೆ, ಇಬ್ಬರು ಉಪನ್ಯಾಸಕರಿಂದ ಹಲ್ಲೆ ಹಾಗೂ ಜೀವ ಬೆದರಿಕೆ ಎದುರಾದ ಘಟನೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪಿರ್ಯಾದಿದಾರರ ಹೇಳಿಕೆ ಪ್ರಕಾರ, ಇಂಗ್ಲಿಷ್ ಉಪನ್ಯಾಸಕ ಸುರೇಶ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ಅವರು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ನಿಂದನೆ ಮಾಡಿ, ಶಾರೀರಿಕವಾಗಿ ಗುದ್ದಿ ನೋವುಂಟುಮಾಡಿದ್ದಾರೆ. ಘಟನೆ ವೇಳೆ ಸ್ಥಳಕ್ಕೆ ಬಂದ ವೆಂಕಟೇಶ ಎಂಬವರು ಗಲಾಟೆ ತಪ್ಪಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.”ಮತ್ತೆ ಕಾಲೇಜಿಗೆ ಬಂದರೆ ಕೊಲೆಮಾಡುತ್ತೇವೆ” ಎಂಬ life threat ಕೂಡ ಆರೋಪಿಗಳಿಂದ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ…

ಮುಂದೆ ಓದಿ..
ಅಂಕಣ 

ಯೋಗ ಮತ್ತು ಧ್ಯಾನ,ಧೀರ್ಘ ಲೇಖನ ಓದುವ ತಾಳ್ಮೆಯೂ ಇರಲಿ….

Taluknewsmedia.com

Taluknewsmedia.comಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು……..ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ ನಿಷ್ಠೆಯಿಂದ ಬದುಕು ಸಾಗಿಸುತ್ತಿದ್ದರೆ ಅದೇ ಖಂಡಿತವಾಗಲೂ ಅತ್ಯುತ್ತಮ ಜೀವನ ಶೈಲಿ. ಬಹುಶಃ ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯ ಹೀಗೆ ಇತರ ಎಲ್ಲಾ ಪ್ರಾಣಿಗಳಂತೆ ಜೀವಿಸುತ್ತಿದ್ದನು. ಅಂದರೆ ಹೆಚ್ಚು ದೈಹಿಕ ಶ್ರಮ, ಕಡಿಮೆ ಮಾನಸಿಕ ಒತ್ತಡ, ಹಸಿವಾದಾಗ ತಿನ್ನುವುದು, ನಿದ್ದೆ ಬಂದಾಗ ನಿದ್ದೆ ಮಾಡುವುದು, ಅಗತ್ಯಕ್ಕೆ ಅನುಗುಣವಾಗಿ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದು, ಎಲ್ಲಿಂದ ಎಲ್ಲಿಗೋ ಪಯಣ, ನಾಳೆಯ ಚಿಂತೆ ಇಲ್ಲ, ಹಿಂದಿನ ನೆನಪುಗಳಿಲ್ಲ, ಇಂದಿನ ಬದುಕಷ್ಟೇ ಮುಖ್ಯ ಎಂಬ ಸನ್ನಿವೇಶದಲ್ಲಿ ಯೋಗ ಧ್ಯಾನಗಳ ಅವಶ್ಯಕತೆ ಅಷ್ಟಾಗಿ ಇರಲಿಲ್ಲ….. ಆದರೆ ಸಮಾಜ ಮುಂದುವರಿದಷ್ಟು ಮನುಷ್ಯನ ಅಗತ್ಯಗಳು ಹೆಚ್ಚಾಗಿ, ಕುಟುಂಬ ವ್ಯವಸ್ಥೆ ಸಂಕೀರ್ಣವಾದಷ್ಟು ಮನುಷ್ಯನ ದೇಹ ಮತ್ತು ಮನಸ್ಸಿನ…

ಮುಂದೆ ಓದಿ..
ಸುದ್ದಿ 

ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ: ಪಳನಿಸ್ವಾಮಿ ವಿರುದ್ಧ ಕಾನೂನು ಕ್ರಮ

Taluknewsmedia.com

Taluknewsmedia.com ನಾಗಮಂಗಲ, ಜೂನ್ 19, 2025 : ನಾಗಮಂಗಲ ಪಟ್ಟಣದ ಬಸವೇಶ್ವರನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡಿದ ಪ್ರಕರಣವೊಂದರಲ್ಲಿ ಪಳನಿಸ್ವಾಮಿ ಎಂಬಾತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 19-06-2025 ರಂದು ಸಂಜೆ 4 ಗಂಟೆ ಸುಮಾರಿಗೆ ಕೆ. ಮಲೆನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ತೊಡಗಿದ್ದ ಪೊಲೀಸರು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಮಾಹಿತಿ ಪ್ರಕಾರ, ಪಳನಿಸ್ವಾಮಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದನು.ಸ್ಥಳಕ್ಕೆ ತೆರಳಿದ ಪೊಲೀಸರು ಹಾಗೂ ಪಂಚರ ತಂಡದವರ ಮುಡಿಯಲ್ಲಿ, ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದನ್ನು ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಕೂಡಲೇ ಅವರಿಬ್ಬರು ಪರಾರಿಯಾಗಿದ್ದಾರೆ. ಅಂಗಡಿಯೊಳಗಿದ್ದ ಪಳನಿಸ್ವಾಮಿಗೆ ವಿಚಾರಣೆ ನಡೆಸಿದಾಗ, ಆತ ಅಂಗಡಿಯ ವ್ಯವಹಾರಕ್ಕಾಗಿ ಈ ರೀತಿಯ ಅವಕಾಶ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡನು.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ರಾಜ…

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಎರಡು ಕಾರುಗಳ ನಡುವೆ ಅಪಘಾತ : ತಪ್ಪಿದ ಪ್ರಾಣಾಪಾಯ

Taluknewsmedia.com

Taluknewsmedia.comನಾಗಮಂಗಲ-ಮಂಡ್ಯ ರಸ್ತೆ ವೆಂಕಟೇಶ್ವರ ಟಾಕೀಸ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಗಂಭೀರ ನಷ್ಟ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.ಎನ್.ಜಿ. ನಾಗೇಗೌಡ (62), ನಾಗೇಗೌಡನಪಾಳ್ಯ ಗ್ರಾಮದ ರೈತರೊಬ್ಬರು, ತಮ್ಮ ಕುಟುಂಬ ಸಮೇತ ಇನ್ನೊವಾ ಕ್ರಿಸ್ತಾ ಕಾರಿನಲ್ಲಿ (KA-06 Z-4681) ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರನ್ನು ಅವರ ಮಗ ಗೋವಿಂದರಾಜು ಚಾಲನೆ ಮಾಡುತ್ತಿದ್ದರು.ವೆಂಕಟೇಶ್ವರ ಟಾಕೀಸ್ ಹತ್ತಿರ ಟಿಎನ್-04 ಎಜೆ-8928 ಸಂಖ್ಯೆದ ಮಾರುತಿ ರಿಡ್ಜ್ ಕಾರು ನಿರ್ಲಕ್ಷ್ಯದಿಂದ ಯು-ಟರ್ನ್ ತೆಗೆದುಕೊಂಡಾಗ ಇನ್ನೊವಾ ಕಾರಿಗೆ ಬಲಭಾಗದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯಿಂದ ಇನ್ನೊವಾ ಕಾರಿನ ಎರಡೂ ಬಲಭಾಗದ ಬಾಗಿಲುಗಳು ಜಖಂಗೊಂಡಿದ್ದು, ಮಾರುತಿ ಕಾರಿನ ಮುಂಭಾಗದ ಬಂಪರ್ ಹಾಗೂ ಚಾಸಿಸು ಧ್ವಂಸವಾಗಿದೆ.ಘಟನೆಯ ನಂತರ ಎರಡೂ ವಾಹನದ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕ ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಸದ್ಯಕ್ಕೆ ಯಾವುದೇ ವ್ಯಕ್ತಿಗೆ…

ಮುಂದೆ ಓದಿ..
ಅಂಕಣ 

ಲೋಕಾಯುಕ್ತ ಭ್ರಷ್ಟಾಚಾರ……

Taluknewsmedia.com

Taluknewsmedia.comತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ,ರಕ್ಷಕರೇ ಭಕ್ಷಕರಾದರೇ,ಕಾಯುವವರೇ ಕೊಲ್ಲುವವರಾದರೇ,ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ…….. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲೂ ಭ್ರಷ್ಟಾಚಾರದ ವಿಷ ತುಂಬಿಕೊಂಡಿರುವಂತಿದೆ. ಅಂದರೆ ಕೆಟ್ಟ, ಭ್ರಷ್ಟ ಹಣದ ಪ್ರಭಾವ ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಹಣ ಹೇಗಾದರೂ ಇರಲಿ, ಹೇಗಾದರೂ ಬರಲಿ ಹಣದಿಂದ ಎಲ್ಲವನ್ನೂ ಪಡೆಯಬಹುದು ಎನ್ನುವ ಮನೋಭಾವನೆಯ ವಾತಾವರಣ ಎಲ್ಲರಲ್ಲೂ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುವುದು ಮೂರ್ಖತನವಾಗುತ್ತದೆ. ಬಹುತೇಕ ಪ್ರತಿಯೊಬ್ಬರು ಹಣದ ಹಿಂದೆಯೇ ಬಿದ್ದಿದ್ದಾರೆ. ಶಿಕ್ಷಣಕ್ಕೆ ಹಣ, ಆರೋಗ್ಯಕ್ಕೆ ಹಣ, ಊಟಕ್ಕೆ ಹಣ, ಪ್ರವಾಸಕ್ಕೆ ಹಣ, ಬಟ್ಟೆಗೆ ಹಣ, ವಸತಿಗೆ ಹಣ, ಮನೆಯ ಗೃಹೋಪಯೋಗಿ ವಸ್ತುಗಳಿಗೆ ಹಣ, ಸಂಪರ್ಕ ಸಾಧನಗಳಿಗೆ ಹಣ, ಮದುವೆಗೆ ಹಣ, ನಾಮಕರಣಕ್ಕೆ ಹಣ, ಹುಟ್ಟುಹಬ್ಬಕ್ಕೆ ಹಣ, ವಾರ್ಷಿಕೋತ್ಸವಕ್ಕೆ ಹಣ, ಜೀವ ವಿಮೆಗೆ ಹಣ, ವಿದ್ಯುತ್ ಬಿಲ್ಲಿಗೆ…

ಮುಂದೆ ಓದಿ..
ಸುದ್ದಿ 

6ನೇ ತರಗತಿ ವಿದ್ಯಾರ್ಥಿ ಕಾಣೆ – ಆದಿಚುಂಚನಗಿರಿ ವಿದ್ಯಾರ್ಥಿ ನಿಲಯದಿಂದ ಬಾಲಕ ಕಾಣೆ

Taluknewsmedia.com

Taluknewsmedia.com ನಾಗಮಂಗಲ ತಾಲೂಕಿನಲ್ಲಿ ಆದಿಚುಂಚನಗಿರಿ ಯಲ್ಲಿ ಶ್ರೀ ಗುರುಕುಲ ಮಾ. ಶಾಲೆಯ ವಿದ್ಯಾರ್ಥಿ ನಿಲಯದಿಂದ 12 ವರ್ಷದ ಬಾಲಕನೊಬ್ಬ ಕಾಣೆಯಾಗಿರುವ ದುಃಖದ ಘಟನೆ ನಡೆದಿದೆ.ಗಂಗಾಧರ ಬಿನ್ ಶೇಖಪ್ಪ (ವಯಸ್ಸು 25), ವಾರ್ಡನ್, ಶ್ರೀ ಗುರುಕುಲ ಮಾ. ಶಾಲೆ, ಆದಿಚುಂಚನಗಿರಿ, ಅವರು ನೀಡಿದ ದೂರಿನ ಪ್ರಕಾರ, ದೊಡ್ಡಬಳ್ಳಾಪುರದ ನಿವಾಸಿ ರೇವಂತ ಬಿನ್ ನರಸಿಂಹಮೂರ್ತಿ, 6ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನು ವಿದ್ಯಾರ್ಥಿ ನಿಲಯದಿಂದ ಹೊರ ಹೋಗಿ ನಂತರ ಹಾಸ್ಟೆಲ್‌ಗೆ ಮರಳಿಲ್ಲ.ಬಾಲಕನ ಪೋಷಕರು ನಿನ್ನೆ ಬೆಳ್ಳೂರು ಕ್ರಾಸ್ ಹಾಗೂ ಅದರ ಸುತ್ತಮುತ್ತದ ಬಸ್ ನಿಲ್ದಾಣಗಳು ಸೇರಿದಂತೆ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಅವನು ಪತ್ತೆಯಾಗದ ಹಿನ್ನೆಲೆ ಇಂದು ಠಾಣೆಗೆ ದೂರು ನೀಡಲಾಗಿದೆ.ಕಾಣೆಯಾದ ಬಾಲಕನ ವೈಶಿಷ್ಟ್ಯಗಳು ಈ ಕೆಳಕಂಡಂತಿವೆ:ಮುಖಾಕೃತಿಯು: ದುಂಡು ಮುಖಚರ್ಮದ ಬಣ್ಣ: ಗೋಧಿ ಮೈಬಣ್ಣವಸ್ತ್ರಧರಣೆ: ಬಿಳಿ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್, ಕೆಂಪು ಉದ್ದಗೆರೆಎತ್ತರ: ಸುಮಾರು 4 ಅಡಿ 3…

ಮುಂದೆ ಓದಿ..
ಸುದ್ದಿ 

ಹಟ್ನ ಗ್ರಾಮದಲ್ಲಿ ಅಕ್ರಮ ಮದ್ಯ ವಿತರಣೆ : ಆರೋಪಿತನಿಂದ ಮದ್ಯ ಹಾಗೂ ಲೋಟ ವಶ

Taluknewsmedia.com

Taluknewsmedia.com ಹಟ್ನ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಬೆಳ್ಳೂರು ಠಾಣೆಯ ಪೊಲೀಸರು ದಾಳಿ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಿನಾಂಕ 19/06/2025 ರಂದು ಸಂಜೆ 04:30 ಗಂಟೆಗೆ ಈ ದಾಳಿ ನಡೆಯಿತು.ಪಿಎಸ್‌ಐ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಕಾಶ್ (CP-679), ಕಾಂತ (CP-254), ರಮೇಶ್ (CP-490) ಹಾಗೂ ಇಬ್ಬರು ಪಂಚಾಯತ್ ಸದಸ್ಯರು ಪಾಲ್ಗೊಂಡರು. ದಾಳಿ ವೇಳೆ ಹಟ್ನ ಗೇಟ್ ಬಳಿಯ ಕ್ಯಾಂಡಿಮೆಂಟ್ಸ್ ಅಂಗಡಿಯಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಲೋಟಗಳಲ್ಲಿ ಮದ್ಯ ನೀಡುತ್ತಿದ್ದ ದೇವರಾಜು ಬಿನ್ ಬಸವೇಗೌಡ (35),ಹಟ್ನ ಗ್ರಾಮಸ್ಥನನ್ನು ಬಂಧಿಸಲಾಯಿತು.ಆತನಿಂದ 180 ಎಂ.ಎಲ್. Old Admiral Brandy ಯ 4 ಟೆಟ್ರಾ ಪ್ಯಾಕ್‌ಗಳು ಹಾಗೂ 3 ಪ್ಲಾಸ್ಟಿಕ್ ಲೋಟಗಳು ವಶಪಡಿಸಿಕೊಳ್ಳಲಾಗಿದೆ. ಪ್ಯಾಕ್‌ಗಳ ಒಟ್ಟು ಮೌಲ್ಯ ₹540 ರೂ. ಆಗಿದೆ. ದೇವರಾಜು ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯ…

ಮುಂದೆ ಓದಿ..
ಸುದ್ದಿ 

ಹಿರಿಯ ರೈತ ನಾರಾಯಣ ಗೌಡ ರಿಗೆ ರಸ್ತೆಯ ಅಪಘಾತದಲ್ಲಿ ಗಂಭೀರ ಗಾಯ : ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ ಬೈಕ್ ಸವಾರ.

Taluknewsmedia.com

Taluknewsmedia.comನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ಒಂದು ರಸ್ತೆ ಅಪಘಾತದಲ್ಲಿ ಹಿರಿಯ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಬೈಕ್ ಸವಾರ ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ್ದರಿಂದ ಗಾಯಾಳು ಕುಟುಂಬದವರು ಈಗ ಪೊಲೀಸ್ ದೂರು ದಾಖಲಿಸಿದ್ದಾರೆ.ಎನ್. ನಿಕೇಶ್ (38), ರವರ ಪ್ರಕಾರ ನಾಗತಿಹಳ್ಳಿ ಗ್ರಾಮ, ತಮ್ಮ ತಂದೆ ಎನ್.ಎಂ. ನಾರಾಯಣಗೌಡ (65) ಅವರು “ಕದಬಹಳ್ಳಿಗೆ ಹೋಗಿ ಬರುತ್ತೇನೆ” ಎಂದು ಹೊಂಡಾ ಡಿಯೋ ಸ್ಕೂಟರ್ (ನಂ. ಕೆಎ-41-ಇ.ಕ್ಯೂ-7137) ನಲ್ಲಿ ಹೊರಟಿದ್ದರು. ಬಳಿಕ, ಅವರ ಗ್ರಾಮಸ್ಥ ಎನ್.ಟಿ. ನಾಗರಾಜೇಗೌಡ ಅವರನ್ನು ಸ್ಕೂಟರ್ ಹಿಂಬದಿಯಲ್ಲಿ ಕೂರಿಸಿಕೊಂಡು ಎ.ನಾಗತಿಹಳ್ಳಿ ಕಡೆಗೆ ವಾಪಸ್ಸಾಗುತ್ತಿದ್ದರು.ತಮ್ಮ ಗ್ರಾಮದ ಎನ್.ಟಿ. ಬಾಲಮೂರ್ತಿ ಅವರ ತೋಟದ ಹತ್ತಿರ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಹೋಂಡಾ ಶೈನ್ ಬೈಕ್ (ನಂ. ಕೆಎ-50-ವೈ-8184) ಡಿಕ್ಕಿಯಾಗಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.ಅಪಘಾತ ಮಾಡಿದ ಬೈಕ್ ಸವಾರನು ಇದೇ…

ಮುಂದೆ ಓದಿ..