ಸಿನೆಮಾ ಸುದ್ದಿ 

ಅಕ್ಟೋಬರ್ 31ರಂದು ‘ಕೋಣ’ ಚಿತ್ರ ರಾಜ್ಯವ್ಯಾಪಿ ಪ್ರದರ್ಶನಕ್ಕೆ ಸಜ್ಜು

Taluknewsmedia.com

Taluknewsmedia.comಅಕ್ಟೋಬರ್ 31ರಂದು ‘ಕೋಣ’ ಚಿತ್ರ ರಾಜ್ಯವ್ಯಾಪಿ ಪ್ರದರ್ಶನಕ್ಕೆ ಸಜ್ಜು ತನುಷಾ ಕುಪ್ಪಂಡ ನಟನೆಯ ಮತ್ತು ನಿರ್ಮಾಣದ ‘ಕೋಣ’ ಸಿನಿಮಾ ಟ್ರೇಲರ್‌ ಮೂಲಕ ಕುತೂಹಲ ಮೂಡಿಸಿದೆ ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ತನುಷಾ ಕುಪ್ಪಂಡ ನಾಯಕಿಯಾಗಿ ಹಾಗೂ ನಿರ್ಮಾಪಕಿಯಾಗಿ ಕಾಣಿಸಿಕೊಂಡಿರುವ ‘ಕೋಣ’ ಚಿತ್ರ ಅಕ್ಟೋಬರ್ 31ರಂದು ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ. ನಟ ಕೋಮಲ್ ಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಸೆನ್ಸಾರ್ ಮಂಡಳಿಯಿಂದ U/A ಪ್ರಮಾಣಪತ್ರವನ್ನು ಪಡೆದಿದೆ. ಚಿತ್ರವನ್ನು ಡಾರ್ಕ್ ಕಾಮಿಡಿ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ತಂಡ ತಿಳಿಸಿದೆ. ಚಿತ್ರದಲ್ಲಿ ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಹರಿಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು,…

ಮುಂದೆ ಓದಿ..
ಸುದ್ದಿ 

ಇವತ್ತಿನಿಂದಲೇ ಪೊಲೀಸ್ ಇಲಾಖೆಗೆ ಹೊಸ ಸ್ಪರ್ಶ.. ಹಳೇ ‘ಸ್ಲೋಚ್ ಕ್ಯಾಪ್’ ಬದಲು ಹೊಸ ‘ಪೀಕ್ ಕ್ಯಾಪ್’.. ಸಿಎಂ ಸಿದ್ದು ಚಾಲನೆ!

Taluknewsmedia.com

Taluknewsmedia.comಇವತ್ತಿನಿಂದಲೇ ಪೊಲೀಸ್ ಇಲಾಖೆಗೆ ಹೊಸ ಸ್ಪರ್ಶ.. ಹಳೇ ‘ಸ್ಲೋಚ್ ಕ್ಯಾಪ್’ ಬದಲು ಹೊಸ ‘ಪೀಕ್ ಕ್ಯಾಪ್’.. ಸಿಎಂ ಸಿದ್ದು ಚಾಲನೆ! ರಾಜ್ಯ ಪೊಲೀಸ್ ಸಿಬ್ಬಂದಿಯ ಸಮವಸ್ತ್ರಕ್ಕೆ ಹೊಸ ನೋಟ ನೀಡುವ ನಿಟ್ಟಿನಲ್ಲಿ, ದಶಕಗಳಿಂದ ಬಳಕೆಯಲ್ಲಿದ್ದ ‘ಸ್ಲೋಚ್ ಕ್ಯಾಪ್’ ಬದಲಿಗೆ ‘ಪೀಕ್ ಕ್ಯಾಪ್‘ಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದ್ದು, ಈ ಕ್ಯಾಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಈ ಮಹತ್ವದ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವರಾದ ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. ಅಲ್ಲದೆ, ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ)…

ಮುಂದೆ ಓದಿ..
ಸುದ್ದಿ 

ಕೋಲಾರ : ಮಿಕ್ಸಚರ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾರ್ ಕ್ಯಾಷಿಯರ್ ಕೊಲೆ

Taluknewsmedia.com

Taluknewsmedia.comಕೋಲಾರ : ಮಿಕ್ಸಚರ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾರ್ ಕ್ಯಾಷಿಯರ್ ಕೊಲೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದ ಘಟನೆಯೊಂದು ಆಘಾತ ಮೂಡಿಸಿದೆ. ಸಣ್ಣ ವಿಷಯಕ್ಕೆ ಕೋಪಗೊಂಡು ಒಬ್ಬ ಯುವಕ ಬಾರ್ ಕ್ಯಾಶಿಯರ್‌ನನ್ನೇ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಲಕ್ಕೂರು ಗ್ರಾಮದ ಅಶೋಕ ವೈನ್ಸ್ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಕುಮಾರ್ (45) ಎಂಬಾತ ಕೊಲೆಯಾದ ದುರ್ಘಟಿತ. ಆರೋಪಿಯಾಗಿರುವ ಸುಭಾಶ್ ಬಾರ್‌ನಲ್ಲಿ ಮಿಕ್ಸಚರ್ ನೀಡದ ವಿಚಾರಕ್ಕೆ ಕಿರಿಕ್ ಮಾಡಿದ್ದಾನೆಂಬ ಮಾಹಿತಿ ದೊರೆತಿದೆ. ಬಾರ್ ಮುಚ್ಚಿದ ಬಳಿಕ ರಾತ್ರಿ ಮನೆಗೆ ತೆರಳುತ್ತಿದ್ದ ಕುಮಾರ್‌ನ್ನು ಆರೋಪಿಯು ಮನೆ ಎದುರಿಗೇ ತಡೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ವೇಳೆ ಮೃತನ ಹೆಂಡತಿ ಮತ್ತು ಮಕ್ಕಳು ಕಣ್ಣೆದುರೇ ಈ ನೃಶಂಸ ಕೃತ್ಯ ನಡೆದಿದ್ದು, ಕುಟುಂಬ ಕಂಗಾಲಾಗಿದೆ. ಘಟನೆಯ ಬಳಿಕ ಆರೋಪಿ ಸುಭಾಶ್ ಪರಾರಿಯಾಗಿದ್ದು, ಮಾಲೂರು ಪೊಲೀಸರು ಶೋಧ…

ಮುಂದೆ ಓದಿ..
ಸುದ್ದಿ 

ಕೆ.ಆರ್. ಸಾಗರ ಬೃಂದಾವನದಲ್ಲಿ ದುರಂತ

Taluknewsmedia.com

Taluknewsmedia.comಕೆ.ಆರ್. ಸಾಗರ ಬೃಂದಾವನದಲ್ಲಿ ದುರಂತ ಹಿಂಬದಿ ಚಲಿಸಿದ ಬಸ್ ಮಹಿಳೆಯ ಸಾವುಗೆ ಕಾರಣ ಮಂಡ್ಯ: ಕೆ.ಆರ್. ಸಾಗರದ ಬೃಂದಾವನ ಉದ್ಯಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಕೇರಳ ಮೂಲದ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಕೇರಳದ ಕೊಲ್ಲಂ ಹತ್ತಿರದ ಗ್ರಾಮದ ನಿವಾಸಿ ಕೌಸಲ್ಯ ಎಂಬವರು. ಗಾಯಗೊಂಡಿರುವ ನಾರಾಯಣಿ ಅವರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಮಾಹಿತಿಯ ಪ್ರಕಾರ, ಬೃಂದಾವನ ವೀಕ್ಷಣೆ ಮುಗಿಸಿಕೊಂಡು ಪ್ರವಾಸಿಗರು ಊಟ ಮಾಡುತ್ತಿದ್ದ ವೇಳೆ, ಕೇರಳದ ಕೊಪ್ಪಂನಿಂದ ವಿದ್ಯಾರ್ಥಿಗಳನ್ನು ಕರೆತಂದಿದ್ದ ಬಸ್ ಚಾಲಕ ಬ್ರೇಕ್ ತೆಗೆದು ಮುಂದಕ್ಕೆ ಚಲಿಸಲು ಯತ್ನಿಸಿದಾಗ ಬಸ್ ಏಕಾಏಕಿ ಹಿಂಬದಿ ಚಲಿಸಿತು. ಈ ವೇಳೆ ಹಿಂಭಾಗದಲ್ಲಿ ಊಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಪಡಿಸಿತು. ತಕ್ಷಣ ಬಸ್‌ನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೌಸಲ್ಯ…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

Taluknewsmedia.com

Taluknewsmedia.comಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರಿಬ್ಬರನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹32 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಪೊಲೀಸ್ ಲೇಔಟ್ ಪ್ರದೇಶದ ನಿವಾಸಿ ಚೈತ್ರಾ ಅವರ ಮನೆಯಲ್ಲಿ ಜೂನ್ 18ರಿಂದ 20ರ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಖಾಲಿಯಾಗಿದ್ದ ವೇಳೆ ಬೀಗ ಮುರಿದು ಒಳನುಗ್ಗಿ ಕಳ್ಳರು 495 ಗ್ರಾಂ ಚಿನ್ನದಾಭರಣ, 1 ಕೆಜಿ 10 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ₹75,000 ನಗದು ಕದ್ದೊಯ್ದಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ, ಚಡ್ಡಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಬಂಧಿಸಿದರು. ಬಂಧಿತರಿಂದ 170 ಗ್ರಾಂ ಚಿನ್ನದ ಗಟ್ಟಿ,…

ಮುಂದೆ ಓದಿ..
ಸುದ್ದಿ 

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಅತ್ತಿಗೆ ಮೇಲೆ ಮೈದುನ ದಾಳಿ — ಜೀವ ಅಪಾಯದಿಂದ ಪಾರಾದ ಮಹಿಳೆ

Taluknewsmedia.com

Taluknewsmedia.comಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಅತ್ತಿಗೆ ಮೇಲೆ ಮೈದುನ ದಾಳಿ — ಜೀವ ಅಪಾಯದಿಂದ ಪಾರಾದ ಮಹಿಳೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಒಂದು ಕುಟುಂಬದೊಳಗಿನ ಭೀಕರ ಹಲ್ಲೆಯಿಂದ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, 17 ಗುಂಟೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಅಣ್ಣ ಇಲ್ಲದ ಸಮಯವನ್ನು ಪ್ರಯೋಜನ ಮಾಡಿಕೊಂಡು ಮೈದುನ ಮುನಿಕೃಷ್ಣ ಹಾಗೂ ಮಂಜಮ್ಮ ಎಂಬುವರು ಅತ್ತಿಗೆ ಲಕ್ಷ್ಮಿದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೈದುನನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ನಡು ರಸ್ತೆಯಲ್ಲೇ ದಾಳಿ ನಡೆಸಿದ್ದು, ಬಳಿಕ ಬಾವಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಆಘಾತಕಾರಿ ಆರೋಪ ಹೊರಹೊಮ್ಮಿದೆ. ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯಲ್ಪಟ್ಟಿದೆ, ಇದರಿಂದ ಪ್ರಕರಣ ಇನ್ನಷ್ಟು ಗಂಭೀರ ತಿರುವು ಪಡೆದಿದೆ. ಗಾಯಗೊಂಡ ಲಕ್ಷ್ಮಿದೇವಮ್ಮ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.…

ಮುಂದೆ ಓದಿ..
ಸುದ್ದಿ 

ಜನ್ಮದಿನದ ಸಂಭ್ರಮ ಕಣ್ಣೀರಿಗೆ ತೇಲಿದ ಮನೆಯಲ್ಲಿ – ಬಿಎಂಟಿಸಿ ಬಸ್ ಡಿಕ್ಕಿ ದುರಂತದಲ್ಲಿ ಮಹಿಳೆ ಸಾವು

Taluknewsmedia.com

Taluknewsmedia.comಜನ್ಮದಿನದ ಸಂಭ್ರಮ ಕಣ್ಣೀರಿಗೆ ತೇಲಿದ ಮನೆಯಲ್ಲಿ – ಬಿಎಂಟಿಸಿ ಬಸ್ ಡಿಕ್ಕಿ ದುರಂತದಲ್ಲಿ ಮಹಿಳೆ ಸಾವು ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸ್ಥಳೀಯರಲ್ಲಿ ಶೋಕ ತಂದಿದೆ. ದುರಂತದಲ್ಲಿ ಮೃತಪಟ್ಟವರು ಮಾಲಾ (58) ಎಂದು ಗುರುತಿಸಲಾಗಿದೆ. ಮಾಲಾ ಇಂದು ತಮ್ಮ 58ನೇ ಜನ್ಮದಿನವನ್ನು ಆಚರಿಸಬೇಕಾಗಿತ್ತು. ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅವರು ನಿನ್ನೆ ಮಧ್ಯಾಹ್ನ ಬ್ಯೂಟಿ ಪಾರ್ಲರ್‌ಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ವಿಜಯನಗರದ ಆರ್‌ಪಿಸಿ ಲೇಔಟ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಮಾಲಾ ಅವರನ್ನು ಡಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದರು. ಹಂಪಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾಸವಿದ್ದ ಮಾಲಾ ಸ್ಥಳೀಯರಲ್ಲಿ ಎಲ್ಲರಿಗೂ ಪರಿಚಿತರು. “ಮಕ್ಕಳು ಅಥವಾ ಹಿರಿಯರು ರಸ್ತೆ…

ಮುಂದೆ ಓದಿ..
ಸುದ್ದಿ 

ಮಹಿಳೆಯ ಕೊಲೆ, ಆಟೋದಲ್ಲಿ ಎಸ್ಕೇಪ್: ಪ್ರಿಯಕರನಿಗೆ ಪೊಲೀಸರ ಶೋಧ

Taluknewsmedia.com

Taluknewsmedia.comಮಹಿಳೆಯ ಕೊಲೆ, ಆಟೋದಲ್ಲಿ ಎಸ್ಕೇಪ್: ಪ್ರಿಯಕರನಿಗೆ ಪೊಲೀಸರ ಶೋಧ ತಿಲಕನ್ ನಗರ: ಸ್ಥಳೀಯರು ಪ್ರಭಾತ ಸಮಯದಲ್ಲಿ ಭಯಾನಕ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ. 35 ವರ್ಷದ ಸಲ್ಮಾ, ಮದುವೆಯಾಗಿ ನಾಲ್ವರು ಮಕ್ಕಳ ತಾಯಿ, ಗಂಡನ ಮೃತ್ಯುವಿನ ನಂತರ ಸುಬ್ಬುಮಣಿ ಎಂಬ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದಳು. ಆರೋಪಿಯು ತಿಲಕನ್ ನಗರ ಪ್ರದೇಶದ ನಿವಾಸಿ. ನಿನ್ನೆ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆಯಿತು. ಆ ಸಂದರ್ಭದಲ್ಲಿ ಆರೋಪಿ ತಮ್ಮ ಕೋಪದೊಂದಿಗೆ ಸಲ್ಮಾ ಅವರನ್ನು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಹತ್ಯೆಯ ನಂತರ, ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಆಟೋ ವಾಹನದಲ್ಲಿ ಎಸ್ಕೇಪ್ ಆಗಿದ್ದಾನೆ. ಇಂದಿನ ಸಂಜೆ ಸುಮಾರು ನಾಲ್ಕು ಗಂಟೆಗೆ ಸ್ಥಳೀಯರು ಶಂಕಿತ ಆಟೋವನ್ನು ಗಮನಿಸಿ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ

Taluknewsmedia.com

Taluknewsmedia.comಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ ಮೈಸೂರು: ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕನ್ನಡ ಚಲನಚಿತ್ರ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ ಈ ದಿನ ಚಾಮುಂಡಿ ಬೆಟ್ಟದ ಪ್ರಸಿದ್ಧ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ನಿರ್ದೇಶಕ ಹಾಗೂ ನಾಯಕನಟ M.J. ಜಯರಾಜ್ ಈ ಸಂದರ್ಭ ಹಾಜರಾಗಿ ಪೂಜೆಯನ್ನು ಮುನ್ನಡೆಸಿದರು. ಅವರು “ದೈವ ಚಿತ್ರದಲ್ಲಿ ನಟಿಸಿ, ಆಕ್ಷನ್ ಕಟ್ ಹೇಳಿರುವ” ಅನುಭವವನ್ನು ಪಡೆದುಕೊಂಡ ನಂತರ, ಹೊಸ ಸಿನಿಮಾದ ಸದ್ದಿಗೆ ಫಿದಾ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಚಿತ್ರದ ನಿರ್ಮಾಪಕರು ಸಂಗಮ್ಮ ರಾಮಣ್ಣ ಮತ್ತು ಮೇಘಲಮನಿಯವರು, ನಿರ್ದೇಶನ ಜೊತೆಗೆ ನಾಯಕನಟನಾಗಿ ಅಭಿನಯಿಸುತ್ತಿರುವ ಜಯರಾಜ್ ಅವರನ್ನು ಬೆಂಬಲಿಸಿದ್ದಾರೆ. ಚಿತ್ರ ಕಥೆಯನ್ನು VCN ಮಂಜುರಾಜ್ ಸೂರ್ಯ ರಚಿಸಿದ್ದು, ಸಿದ್ಧಾರ್ಥ್ H.R. ಛಾಯಾಗ್ರಹಣ ಮತ್ತು ವಿಜಯ್ ಮಂಜಯ್ಯ ಸಂಗೀತ ನಿರ್ದೇಶನ ನಡೆಸುತ್ತಿದ್ದಾರೆ. ಪೂಜೆಯಲ್ಲಿ ನಿರ್ದೇಶಕ M.J. ಜಯರಾಜ್, ಕಥೆಗಾರ VCN ಮಂಜುರಾಜ್, ಛಾಯಾಗ್ರಾಹಕ…

ಮುಂದೆ ಓದಿ..
ಸುದ್ದಿ 

ಚಾಮರಾಜನಗರ: ಟಿಪ್ಪರ್ ಡಿಕ್ಕಿ – ಕಾರಿನಲ್ಲಿ ಸವಾರ ಕೇರಳ ದಂಪತಿ ಸಾವು

Taluknewsmedia.com

Taluknewsmedia.comಚಾಮರಾಜನಗರ: ಟಿಪ್ಪರ್ ಡಿಕ್ಕಿ – ಕಾರಿನಲ್ಲಿ ಸವಾರ ಕೇರಳ ದಂಪತಿ ಸಾವು ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಮಾದಾಪಟ್ಟಣದ ಬಳಿ ದಾರ್ಘಟನೆಯಾಗಿದೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಕರಿಕಲ್ಲು ವೆಸ್ಟ್ ಬಳಿ ತುಂಬಿದ್ಧ ಟಿಪ್ಪರ್ ಡಿಕ್ಕಿ ಹೊಡೆದು, ಕಾರು ಜಮೀನಿಗೆ ನುಗ್ಗಿದೆ. ಘಟನೆಯ ಪರಿಣಾಮವಾಗಿ ಕಾರಿನಲ್ಲಿದ್ದ ಕೇರಳ ಮೂಲದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ತಂಡ ತಲುಪಿದ್ದು, ದಾರ್ಘಟನೆಯ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಟಿಪ್ಪರ್ ನಿರ್ವಹಣೆಯಲ್ಲಿ ಲೋಪವಿದ್ದುದರಿಂದ ಈ ದುರಂತ ಸಂಭವಿಸಿದೆ ಎಂದು ಕಾಣುತ್ತಿದೆ. ಸ್ಥಳದಲ್ಲಿ ಪೊಲೀಸರ ಸಹಾಯವಾಣಿ ಮತ್ತು ಪೊಲೀಸರು ದುರಂತ ನಿರ್ವಹಣೆ ಕಾರ್ಯಾಚರಣೆ ನಡೆಸಿದ್ದಾರೆ.

ಮುಂದೆ ಓದಿ..