ಸುದ್ದಿ 

ಹೆಬ್ಬಾಳ ನ್ಯಾರೋ ಬ್ರಿಡ್ಜ್ ಬಳಿ ಬಸ್-ಸ್ಕೂಟರ್ ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 9 – ಹೆಬ್ಬಾಳದ ಬಿ.ಬಿ. ರಸ್ತೆಯ ನ್ಯಾರೋ ಬ್ರಿಡ್ಜ್ ಬಳಿ ಇಂದು ಸಂಜೆ ಸಂಭವಿಸಿದ ಬಸ್-ಸ್ಕೂಟರ್ ಡಿಕ್ಕಿ ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರ ಮಾಹಿತಿ ಪ್ರಕಾರ, ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಸೌಮ್ಯ ಲತಾ ಕೊಂ ಹೊನ್ನೆಗೌಡ (40) ಅವರು ತಮ್ಮ ಸ್ಕೂಟರ್ (KA-04-JH-1451) ಮೇಲೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಯಲಹಂಕ ದಿಕ್ಕಿಗೆ ಸಾಗುತ್ತಿದ್ದ ಬಿ.ಎಂ.ಟಿ.ಸಿ ಬಸ್ (KA-57-F-5827) ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಸೌಮ್ಯ ಲತಾ ಕೆಳಗೆ ಬಿದ್ದು ಬಲಗೈ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮವಾಗಿ ಬಲಗೈ ಹರಿದು ಭುಜಕ್ಕೂ ಪೆಟ್ಟಾಗಿದೆ. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಬಸ್ ಚಾಲಕ ತಕ್ಷಣ ಅವರನ್ನು ಆಸ್ಮರ್ ಸಿ.ಎಂ.ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಟ್ರಾಫಿಕ್ ಪೊಲೀಸರು…

ಮುಂದೆ ಓದಿ..
ಸುದ್ದಿ 

ಮದುವೆ ವಾಗ್ದಾನ ತಪ್ಪಿಸಿದ ಯುವಕನ ವಿರುದ್ಧ ದೂರು

Taluknewsmedia.com

Taluknewsmedia.comಬೆಂಗಳೂರು, ಆ.09 : ಮದುವೆಯಾಗುವುದಾಗಿ ವಾಗ್ದಾನ ಮಾಡಿ, ನಂತರ ನಿರಾಕರಿಸಿದ ಪ್ರಕರಣವೊಂದು ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕಾರ, 2023ರ ಮಾರ್ಚ್‌ನಲ್ಲಿ ಹರೀಶ್ ಬಾಬು ಎಂಬಾತನು ಮದುವೆಯಾಗುವುದಾಗಿ ಹೇಳಿ, ತಮ್ಮೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ. ಈ ಅವಧಿಯಲ್ಲಿ ತಾವು ಹಣ ಹಾಗೂ ಆಭರಣಗಳನ್ನು ನೀಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ, ಹರೀಶ್ ಬಾಬು “ನೀನು ನನಗೆ ಬೇಡ, ನಾನು ಬೇರೆ ಹುಡುಗಿಯನ್ನು ಮದುವೆಯಾಗುತ್ತೇನೆ” ಎಂದು ಹೇಳಿ, ಕರೆ-ಮೆಸೇಜ್ ಮಾಡದಂತೆ ಬೆದರಿಕೆ ಹಾಕುತ್ತಿದ್ದಾನೆಂದು ಆರೋಪಿಸಿದ್ದಾರೆ. ಅಂತೋಣಿ ರಾಜ್ ಎಂಬಾತನು ಹರೀಶ್ ಬಾಬುಗೆ ತಮ್ಮ ಬಗ್ಗೆ ಸುಳ್ಳು ಆರೋಪಗಳನ್ನು ಹೇಳಿ, ಇವರಿಬ್ಬರ ಸಂಬಂಧ ಹಾಳುಮಾಡಲು ಕಾರಣನಾಗಿದ್ದಾನೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಕೇಸು ವಾಪಸ್ಸು ಪಡೆಯುವಂತೆ ಹರೀಶ್ ಬಾಬು ಒತ್ತಾಯಿಸುತ್ತಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಚಂಬೇನಹಳ್ಳಿಯಲ್ಲಿ ಮಹಿಳೆಯ ಚಿನ್ನದ ಚೈನ್ ಕಳವು

Taluknewsmedia.com

Taluknewsmedia.comಚಂಬೇನಹಳ್ಳಿ, ಆಗಸ್ಟ್ 9:ಚಂಬೇನಹಳ್ಳಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಚೈನ್ ಕಳವುಗೊಳ್ಳುವ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸಂಜೆ ಸುಮಾರು 4.30ರ ವೇಳೆಗೆ, ಸ್ಥಳೀಯ ಮಹಿಳೆಯೊಬ್ಬರು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಚಂಬೇನಹಳ್ಳಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವಿಳಾಸ ವಿಚಾರಿಸುವ ನೆಪದಲ್ಲಿ ಮಾತನಾಡಿಸಿದ್ದಾರೆ. ಮಹಿಳೆ ಮಾತುಕತೆ ನಡೆಸುತ್ತ ಸ್ವಲ್ಪ ಮುಂದೆ ಸಾಗಿದ ನಂತರ, ತಮ್ಮ ಕುತ್ತಿಗೆಯಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನದ ಚೈನ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಆರೋಪಿ ಇಬ್ಬರು ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಬಳಿಕ ಮಹಿಳೆ ಮನೆಗೆ ಹೋಗಿ ಮಗನಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದರೂ ಚೈನ್ ಪತ್ತೆಯಾಗಿಲ್ಲ. ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ಆರೋಪಿಗಳ ಪತ್ತೆ ಹಾಗೂ ಕಳವುಗೊಂಡ ಚೈನ್ ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಮುಂದೆ ಓದಿ..
ಸುದ್ದಿ 

ಬಾಡಿಗೆ ಮನೆ ವಿವಾದ – ದಂಪತಿಗೆ ಹಲ್ಲೆ, ಬೆದರಿಕೆ

Taluknewsmedia.com

Taluknewsmedia.comದೊಡ್ಡಬಳ್ಳಾಪುರ: ಆಗಸ್ಟ್ 11 2025ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿಗೆ ಮನೆ ಮಾಲೀಕರು ಹಾಗೂ ಸಹಚರರು ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ ಘಟನೆ ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎ.ಎಲ್. ಗಾಯತ್ರಿ ಅವರು ನೀಡಿದ ದೂರಿನ ಪ್ರಕಾರ, 2023ರಿಂದ ಶಿವಣ್ಣ ಎಂಬುವವರ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸುತ್ತಿದ್ದರು. 2024ರಲ್ಲಿ ಪತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮೂರು ತಿಂಗಳು ಬಾಡಿಗೆ ಪಾವತಿಸಲು ವಿಳಂಬವಾಯಿತು. ಇದರಿಂದ ಆಕ್ರೋಶಗೊಂಡ ಮನೆ ಮಾಲೀಕರು ಶಿವಣ್ಣ ಮತ್ತು ರವಿಕುಮಾರ್ ಅವರು ಮನಗೆ ಬೀಗ ಹಾಕಿ, ಬೈದು, ದೈಹಿಕ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಗೋವಿಂದ ಎಂಬುವವರ ಸಹಾಯದಿಂದ ರೌಡಿಗಳನ್ನು ಕರೆಸಿ, ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಮನೆಯಲ್ಲಿದ್ದ ₹60,000 ನಗದು, ಬಂಗಾರದ ಒಲೆ, ಬಟ್ಟೆಗಳು ಹಾಗೂ ಅಡುಗೆ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಾಜನಕುಂಟೆ ಪೊಲೀಸರು ಆರೋಪಿಗಳಾದ ಶಿವಣ್ಣ, ರವಿಕುಮಾರ್…

ಮುಂದೆ ಓದಿ..
ಸುದ್ದಿ 

ಜೆ.ಪಿ. ನಗರದಲ್ಲಿ ತಂದೆ-ಮಗನ ವಾಗ್ವಾದ ಬಳಿಕ ಮಗ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್: 11 2025ನಗರದ ಜೆ.ಪಿ. ನಗರದಲ್ಲಿ ಕುಟುಂಬದ ಅಂತರಿಕ ವಿಚಾರದಿಂದ ತಂದೆ-ಮಗನ ನಡುವೆ ನಡೆದ ವಾಗ್ವಾದದ ನಂತರ ಮಗ ಕಾಣೆಯಾದ ಘಟನೆ ಆತಂಕ ಹುಟ್ಟಿಸಿದೆ. ಯಲಹಂಕ ಉಪನಗರ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ದೂರುದಾರ ವೆಂಕಟೇಶ್ ಹಾಗೂ ಅವರ ಮಗ ಕಿಶೋರ್ ನಡುವೆ ಆಗಸ್ಟ್ 8ರಂದು ಅಂಜಿನಯ್ಯ ದೇವಾಸ್ಥಾನ ಹತ್ತಿರ ಇರುವ ಮನೆಯಲ್ಲಿ ಕುಟುಂಬ ಸಂಬಂಧಿತ ವಿಚಾರವಾಗಿ ಮಾತಿನ ತಕರಾರು ಉಂಟಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಶೋರ್ ಮನೆಯಿಂದ ಹೊರಟಿದ್ದಾನೆ. ನಂತರ ಆತ ಮನೆಗೆ ಮರಳದೆ ಇರುವುದರಿಂದ ಕುಟುಂಬದಲ್ಲಿ ಆತಂಕ ಉಂಟಾಗಿದೆ. ಘಟನೆಯ ಬಗ್ಗೆ ವೆಂಕಟೇಶ್ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕಾಣೆಯಾದ ಕಿಶೋರ್ ಅವರನ್ನು ಪತ್ತೆಹಚ್ಚಲು ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಕಿಶೋರ್ ಅವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ…

ಮುಂದೆ ಓದಿ..
ಸುದ್ದಿ 

ಆರ್‌.ಎಂ‌.ಜೆಡ್ ಮಾಲ್‌ನಲ್ಲಿ 3 ಲಕ್ಷ ರೂ. ವಂಚನೆ – ಕ್ಲಸ್ಟರ್ ಮ್ಯಾನೇಜರ್ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 11 2025ನಗರದ ಆರ್‌.ಎಂ‌.ಜೆಡ್ ಮಾಲ್‌ನಲ್ಲಿರುವ ಕವರ್ ಸ್ಟೋರಿ ಶೃತಿಂಗ್ ರೆಮಿಟೆಡ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲಸ್ಟರ್ ಮ್ಯಾನೇಜರ್ ಫರ್ಹಾನ್ ಎಸ್‌.ಎಂ ಅವರು ಗ್ರಾಹಕರಿಂದ ಹಣ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆಂತರಿಕ ತನಿಖೆ ಪ್ರಕಾರ, ಫರ್ಹಾನ್ ಅವರು 2025ರ ಫೆಬ್ರವರಿ 19ರಿಂದ ಮೇ 13ರವರೆಗೆ ಗ್ರಾಹಕರಿಂದ ವಸ್ತುಗಳಿಗಾಗಿ ಬಿಲ್ ನೀಡದೇ ಯುಪಿಐ ಮುಖಾಂತರ ಪಾವತಿಗಳನ್ನು ಸಂಗ್ರಹಿಸಿ ಆ ಮೊತ್ತವನ್ನು ತಮ್ಮ ವೈಯಕ್ತಿಕ ಖಾತೆಗೆ ಜಮಾ ಮಾಡುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಮೂಲ ಬಿಲ್ಲುಗಳನ್ನು ಅಮಾನತುಗೊಳಿಸಿ, ಆ ವಹಿವಾಟಿನ ಹಣವನ್ನು ಸಹ ತಮ್ಮ ಹಿತಕ್ಕಾಗಿ ಬಳಸಿಕೊಂಡಿದ್ದರು. ಒಟ್ಟು 19 ಪ್ರಕರಣಗಳಲ್ಲಿ ₹3 ಲಕ್ಷ ಮೊತ್ತ ಹಾಗೂ ₹2,99,252 ಮೌಲ್ಯದ ಸರಕುಗಳು ಅಂಗಡಿಗೆ ನಷ್ಟವಾಗಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಸಾಕ್ಷ್ಯಾಧಾರಗಳು ದೃಢಪಟ್ಟಿದ್ದು, ಫರ್ಹಾನ್ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅಂಗಡಿ ನಿರ್ವಹಣೆ ಯಲಹಂಕ ಪೊಲೀಸರಿಗೆ ದೂರು ಸಲ್ಲಿಸಿದ್ದು, ಫರ್ಹಾನ್ ಎಸ್‌.ಎಂ ವಿರುದ್ಧ ಕಾನೂನು…

ಮುಂದೆ ಓದಿ..
ಸುದ್ದಿ 

ಮನೆಗೆ ಮರಳದ ರವಿಕಿರಣ್ – ಪೊಲೀಸರು ಶೋಧ ಕಾರ್ಯ ಆರಂಭ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 11:2025ನಗರದ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 31 ವರ್ಷದ ಯುವಕ ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸರ ಪ್ರಕಾರ, ದೂರುದಾರರಾದ ವರ್ಷದ ನರಸಿಂಹ ಮೂರ್ತಿ ಎಂ.ಡಿ. ಅವರು ತಮ್ಮ ಮಗ ರವಿಕಿರಣ್ ಎನ್. ಕಾಣೆಯಾದ ಕುರಿತು ದೂರು ನೀಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಲ್ಯಾಪ್‌ಟಾಪ್ ಸರ್ವಿಸಿಂಗ್ ಹಾಗೂ ದುರಸ್ತಿ ಕೆಲಸ ಮಾಡುತ್ತಿದ್ದ ರವಿಕಿರಣ್, ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ರಾಜಾಜಿನಗರದ ಸ್ಪಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 17ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಮನೆಯಿಂದ ಹೊರಟ ಅವರು, ಬಳಿಕ ಮನೆಗೆ ಮರಳಿಲ್ಲ. ಕುಟುಂಬದವರು ಅನೇಕಡೆ ಹುಡುಕಿದರೂ ಪತ್ತೆಯಾಗದ ಕಾರಣ, ಆಗಸ್ಟ್ 8ರಂದು ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಯಲಹಂಕ ಪೊಲೀಸರು ಯುವಕನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ 23 ವರ್ಷದ ಯುವತಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 11 2025ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ವರ್ಷದ ಯುವತಿ ಕಾಣೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಉಮದ್ರಾಸ್ ಬಿನ್ ಅಬ್ದುಲ್ ಜಬ್ಬರ್ (60) ಅವರು ಯಲಹಂಕ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಬಿಲಿಂಗ್ ಡಮಾಲಿಸ್ ಕೆಲಸ ಮಾಡಿಕೊಂಡಿದ್ದು, ಪತ್ನಿ ಪಾಜೀಲಾ ಬೇಗಂ ಗೃಹಿಣಿಯಾಗಿದ್ದಾರೆ. ದಂಪತಿಗೆ ನಾಲ್ಕು ಮಂದಿ ಮಕ್ಕಳು – ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾರೆ. ಇವರ ಮೂರನೇ ಮಗಳಾದ ಇನ್ಮಾಜ್ (23) ಅವರು 05 ಆಗಸ್ಟ್ 2025 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಯಿಂದ ಹೊರಗೆ ತೆರಳಿ, ವಾಪಸು ಮನೆಗೆ ಬಂದಿಲ್ಲ. ಸಂಬಂಧಿಕರು, ಸ್ನೇಹಿತರು ಮತ್ತು ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಆಕೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. 07 ಆಗಸ್ಟ್ 2025 ರಂದು ತಡವಾಗಿ ಯಲಹಂಕ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ಪಿರ್ಯಾದುದಾರರು, ಕಾಣೆಯಾದ…

ಮುಂದೆ ಓದಿ..
ಸುದ್ದಿ 

ಕಿಂಗ್ಸ್ ಪಿಜಿಯಲ್ಲಿ ಕಳವು – ₹1.1 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ಕಳವು

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 11 2025ಬಾಗಲೂರು ರಸ್ತೆಯ ವಿನಾಯಕ ನಗರದಲ್ಲಿರುವ ಕಿಂಗ್ಸ್ ಪಿಜಿಯಲ್ಲಿ ವಿದ್ಯಾರ್ಥಿಯೊಬ್ಬನ ಕೊಠಡಿಗೆ ಕಳ್ಳರು ನುಗ್ಗಿ ಎರಡು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಪೀಡಿತನು ಆರ್‌ಸಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಯಾಲ್ ಪಾರ್ಟ್ನರ್ಸ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾನೆ. ಆಗಸ್ಟ್ 4ರಂದು ಬೆಳಿಗ್ಗೆ 6.30ರ ಸುಮಾರಿಗೆ ರೂಮ್‌ಮೇಟ್‌ ಬಾಗಿಲು ಲಾಕ್‌ ಮಾಡದೆ ಮಲಗಿದ್ದ ಪರಿಣಾಮ, ಕಳ್ಳರು ಒಳನುಗ್ಗಿ ಲ್ಯಾಪ್‌ಟಾಪ್‌ಗಳಿದ್ದ ಬ್ಯಾಗ್‌ ಕದ್ದೊಯ್ದಿದ್ದಾರೆ. ಕಳೆದುಹೋದ ವಸ್ತುಗಳಲ್ಲಿ ಲೆನೊವೊ ಥಿಂಕ್‌ಪ್ಯಾಡ್‌ (ಮೌಲ್ಯ ₹60,000) ಮತ್ತು ಆಸಸ್ ವಿವೋಬುಕ್‌ (ಮೌಲ್ಯ ₹50,000) ಸೇರಿದ್ದು, ಒಟ್ಟು ₹1.1 ಲಕ್ಷ ಮೌಲ್ಯದ ನಷ್ಟವಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಕಳ್ಳ ಬ್ಯಾಗ್‌ ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಯುವಕರ ಮೇಲೆ ಬೈಕ್ ಸವಾರರ ದಾಳಿ – ಬೆದರಿಕೆ ಹಾಕಿದ ಆರೋಪ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 11 2025ಯಲಹಂಕದಲ್ಲಿ ಬೆಳಗಿನ ಜಾವ ಯುವಕರ ಮೇಲೆ ಬೈಕ್ ಸವಾರರ ಗುಂಪು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಪೀಡಿತರ ಹೇಳಿಕೆಯ ಪ್ರಕಾರ, ಆಗಸ್ಟ್ 6ರಂದು ಬೆಳಗ್ಗೆ ಸುಮಾರು 7 ಗಂಟೆಗೆ, ದೂರುದಾರರು ತಮ್ಮ ತಮ್ಮ ಚೇತನ್ ಹಾಗೂ ಸ್ನೇಹಿತ ಸುಬ್ರಮಣಿಯವರೊಂದಿಗೆ ರೇವಾ ಕಾಲೇಜ್ ಎದುರಿನ ಟೀ ಟೈಮ್ ಅಂಗಡಿ ಮುಂದೆ ನಿಂತುಕೊಂಡಿದ್ದರು. ಆ ವೇಳೆ ಹಳ್ಳಿಯ ಪರಿಚಿತನಿಗೆ ‘ಹಾಯ್’ ಎಂದ ತಕ್ಷಣ, ಬೈಕ್‌ನಲ್ಲಿ ಬಂದ ನಾಲ್ವರಿಂದ ಐದು ಮಂದಿ ಏಕಾಏಕಿ ಹಲ್ಲೆ ನಡೆಸಿದರು. ಆರೋಪಿಗಳು ಹೆಲ್ಮೆಟ್ ಮತ್ತು ಇಟ್ಟಿಗೆಯಿಂದ ದೂರುದಾರರ ತಲೆ, ಬೆನ್ನು, ಮುಖ ಭಾಗಗಳಿಗೆ ಹೊಡೆದು ಗಂಭೀರ ಗಾಯಗೊಳಿಸಿದರು. ದೂರುದಾರರ ತಮ್ಮ ಹಾಗೂ ಸ್ನೇಹಿತನಿಗೂ ಇದೇ ರೀತಿಯ ಹಲ್ಲೆ ನಡೆಸಲಾಯಿತು. ಘಟನೆಯ ನಂತರ ಬಸವರಾಜ್ ಎಂಬಾತ “ಇದು ಸ್ಯಾಂಪಲ್, ಮುಂದೆ ನೀನಾಗಲಿ ನಿನ್ನ ಕಾರಾಗಲಿ ಕಂಡರೆ ಮುಗಿಸುತ್ತೇನೆ” ಎಂದು ಬೆದರಿಕೆ ಹಾಕಿ…

ಮುಂದೆ ಓದಿ..