ಸುದ್ದಿ 

ಉಪಪ್ರಾಂಶುಪಾಲರ ನೇಮಕದಲ್ಲಿ 7.45 ಲಕ್ಷ ರೂಪಾಯಿ ವಂಚನೆ: ಸಿಎಆರ್ ಮುಖ್ಯಪೇದೆ, ಪತ್ನಿ ಸೇರಿದಂತೆ 7 ಮಂದಿ ವಿರುದ್ಧ FIR.

Taluknewsmedia.com

Taluknewsmedia.comಉಪಪ್ರಾಂಶುಪಾಲರ ನೇಮಕದಲ್ಲಿ 7.45 ಲಕ್ಷ ರೂಪಾಯಿ ವಂಚನೆ: ಸಿಎಆರ್ ಮುಖ್ಯಪೇದೆ, ಪತ್ನಿ ಸೇರಿದಂತೆ 7 ಮಂದಿ ವಿರುದ್ಧ FIR. ವಿದ್ಯಾ ಕ್ಷೇತ್ರದಲ್ಲಿ ಹೆಸರು ಮಾಡಿದ ಅಕ್ಷರ ಫೌಂಡೇಶನ್ ಸಂಸ್ಥಾಪಕ ಸುನಿಲ್ ಅವರಿಗೆ ಉಪಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಸದಸ್ಯರಾಗಿ ನೇಮಕ ಮಾಡಿಸುವ ಭರವಸೆ ನೀಡಿ 7.45 ಲಕ್ಷ ರೂಪಾಯಿ ವಂಚಿಸಲಾದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸಿಎಆರ್ ಮುಖ್ಯಪೇದೆ ಚೆನ್ನಕೇಶವ, ಅವರ ಪತ್ನಿ ಮಮತಾ ಹಾಗೂ ಟ್ರಸ್ಟ್‌ನ 5 ಸದಸ್ಯರ ವಿರುದ್ಧ FIR ದಾಖಲಿಸಲಾಗಿದೆ. ಸುನಿಲ್ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಹೊಂದಿರುವ ವ್ಯಕ್ತಿ. ಚೆನ್ನಕೇಶವ ರಾಮಕೃಷ್ಣನಗರದಲ್ಲಿ “ಗುರುಕಲ್ಪ ಟ್ರಸ್ಟ್” ಮೂಲಕ ವಿಶ್ವಮಾನವ ಪಿಯು ಕಾಲೇಜ್ ಅನ್ನು ನಡೆಸುತ್ತಿದ್ದಾರೆ. ಸುನಿಲ್ ಅವರನ್ನು ಕಾಲೇಜಿಗೆ ಉಪಪ್ರಾಂಶುಪಾಲರಾಗಿ ನೇಮಿಸುವ ಪ್ರಸ್ತಾವನೆ ನಿರಾಕರಿಸಿದ್ದರೂ, ಉತ್ತಮ ವೇತನ ನೀಡುವ ಭರವಸೆ ನೀಡಿದ ಕಾರಣ ಅವರು ಒಪ್ಪಿದ್ದಾರೆ.ಮುಂದಿನ ದಿನಗಳಲ್ಲಿ ಸುನಿಲ್ ಕಾಲೇಜಿನ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ – ಮೂವರು ಕಿಡಿಗೇಡಿಗಳು ವಶಕ್ಕೆ!

Taluknewsmedia.com

Taluknewsmedia.comಬೆಂಗಳೂರಿನಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸ – ಮೂವರು ಕಿಡಿಗೇಡಿಗಳು ವಶಕ್ಕೆ! ಮಹಾನಗರದ ಹೃದಯಭಾಗದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ! ಹೆಣ್ಣೂರು ಬಡಾವಣೆಯ ಸಾರ್ವಜನಿಕ ಪ್ರದೇಶದಲ್ಲಿ ಮಧ್ಯರಾತ್ರಿ ಐವರು ಯುವಕರ ಗುಂಪು ಲಾಂಗ್ ಮತ್ತು ಆಯುಧಗಳೊಂದಿಗೆ ಹಲ್ಲೆ ನಡೆಸಿದ ಘಟನೆ ನಗರದ ಶಾಂತಿಗೆ ಕಲೆಹಾಕಿದೆ. ಹಠಾತ್‌ ಉಂಟಾದ ಈ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದು ಭಯಭೀತರಾಗಿದ್ದಾರೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಯುವಕರು “ಏರಿಯಾದಲ್ಲಿ ಹವಾ ಮೇಂಟೇನ್‌ ಮಾಡಲು” ಅಂದ್ರೆ ತಮ್ಮ ಪ್ರಭಾವ ತೋರಿಸಲು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಮೂವರು ಬಂಧನ – ಇಬ್ಬರಿಗೆ ಹುಡುಕಾಟ ಹೆಣ್ಣೂರು ಠಾಣೆಯ ಪೊಲೀಸರು ತ್ವರಿತ ಕ್ರಮ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಂದರೆ.. ಅಮೀನ್ ಷರೀಫ್ಸೈಯದ್ ಅರ್ಬಾಸ್ಶೀದ್ ಖಾದರ್ ಇನ್ನಿಬ್ಬರು ಆರೋಪಿ ಯುವಕರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎಲ್ಲ ಆರೋಪಿಗಳು ಸರ್ವಜ್ಞನಗರ ಪ್ರದೇಶದ ನಿವಾಸಿಗಳಾಗಿದ್ದಾರೆ. ಕಾನೂನು ಕ್ರಮ ಕೈಗೊಂಡ…

ಮುಂದೆ ಓದಿ..
ಸುದ್ದಿ 

ಹೊಸಕೋಟೆ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಟಿಪ್ಪರ್‌ಗೆ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನ ಸ್ಥಿತಿ ಗಂಭೀರ

Taluknewsmedia.com

Taluknewsmedia.comಹೊಸಕೋಟೆ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಟಿಪ್ಪರ್‌ಗೆ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನ ಸ್ಥಿತಿ ಗಂಭೀರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರ ಗ್ರಾಮದ ಬಳಿ ನಡೆದ ದುರ್ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತರನ್ನು ಉತ್ತರ ಭಾರತ ಮೂಲದ ಲೊಕೇಶ್ (25) ಮತ್ತು ವಿಮಲ್ (27) ಎಂದು ಗುರುತಿಸಲಾಗಿದೆ. ಪೊಲೀಸ್ ವರದಿಯ ಪ್ರಕಾರ, ಹೊಸಕೋಟೆ–ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಸವಾರರು ಓವರ್‌ಟೇಕ್ ಮಾಡಲು ಮುಂದಾದ ವೇಳೆ ಎದುರಿನಿಂದ ಬಂದ ಟಿಪ್ಪರ್ ಲಾರಿಯೊಂದಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಸೌಲಭ್ಯಕ್ಕೆ ಚಾಲನೆ: ಪಾರದರ್ಶಕ ಆಡಳಿತದತ್ತ ಹೆಜ್ಜೆ

Taluknewsmedia.com

Taluknewsmedia.comಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಸೌಲಭ್ಯಕ್ಕೆ ಚಾಲನೆ: ಪಾರದರ್ಶಕ ಆಡಳಿತದತ್ತ ಹೆಜ್ಜೆ ಗ್ರಾಮೀಣ ಆಡಳಿತವನ್ನು ಡಿಜಿಟಲ್‌ಗೊಳಿಸುವ ಮಹತ್ತರ ಹೆಜ್ಜೆಯಾಗಿ ರಾಜ್ಯ ಸರ್ಕಾರ “ಇ-ಸ್ವತ್ತು” ಯೋಜನೆಗೆ ಅಧಿಕೃತ ಚಾಲನೆ ನೀಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತಂದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಯಾಗಿದೆ. ಹೊಸ ನಿಯಮಾವಳಿಗಳ ಪ್ರಕಾರ, ನಿರಾಕ್ಷೇಪಣ ಪತ್ರ (NOC), ಪರವಾನಗಿ, ತೆರಿಗೆ ಹಾಗೂ ಶುಲ್ಕಗಳ ನಿಗದಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿಗದಿಪಡಿಸಲಾಗಿದ್ದು, ರಾಜ್ಯದ 95.75 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ “ಇ-ಸ್ವತ್ತು” ಪ್ರಮಾಣಪತ್ರ ನೀಡುವ ದಾರಿಯನ್ನು ಸರ್ಕಾರ ತೆರೆದಿದೆ. ಹೊಸ ತಂತ್ರಾಂಶದ ಅಭಿವೃದ್ಧಿಯು ಹದಿನೈದು ದಿನಗಳೊಳಗೆ ಪೂರ್ಣಗೊಳ್ಳಲಿದ್ದು, ಗ್ರಾಮೀಣ ನಾಗರಿಕರು ನೇರವಾಗಿ ಆನ್‌ಲೈನ್ ಮೂಲಕ ಈ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ತೆರಿಗೆ ಲೆಕ್ಕಾಚಾರ ವಿಧಾನವನ್ನು ಸರಳಗೊಳಿಸಿರುವ ಸರ್ಕಾರ, ಇ-ಸ್ವತ್ತು ನಮೂನೆ ವಿತರಣೆ ಅವಧಿಯನ್ನು…

ಮುಂದೆ ಓದಿ..
ಅಂಕಣ 

ದೀಪ – ಪಟಾಕಿ ಮತ್ತು ಕತ್ತಲು…..

Taluknewsmedia.com

Taluknewsmedia.comದೀಪ – ಪಟಾಕಿ ಮತ್ತು ಕತ್ತಲು….. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ……. ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು……. ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ,…… ಆಕಾಶದಲ್ಲಿ ಹಕ್ಕಿಯೊಂದು ಹಾರುತ್ತಾ ಕೇಳುತ್ತಿತ್ತು…. ಪ್ರೇಮಿಸುವ ಮನಸುಗಳೇ ಪ್ರೇಮವೆಂದರೇ ಗೊತ್ತೆ…. ಎತ್ತರದಲ್ಲಿ ಹಕ್ಕಿಯೊಂದು ಹಾರುತ್ತಾ ನುಡಿಯುತ್ತಿತ್ತು…… ತ್ಯಾಗ ಜೀವಿಗಳೇ ತ್ಯಾಗವೆಂದರೆ ಗೊತ್ತೆ….. ಮೋಡಗಳಲ್ಲಿ ಹಕ್ಕಿಯೊಂದು ಹಾರುತ್ತಾ ಹೇಳುತ್ತಿತ್ತು…… ಸ್ನೇಹಿತರೆ ಸ್ನೇಹವೆಂದರೆತಿಳಿದಿದೆಯೇ….. ಮೇಲೆ ಹಕ್ಕಿಯೊಂದು ಹಾರುತ್ತಾ ಪ್ರಶ್ನಿಸುತ್ತಿತ್ತು…… ಮನುಷ್ಯರೇ ಮಾನವೀಯತೆ ಎಂದರೆ ಗೊತ್ತಿದೆಯೇ….. ದೂರದಲ್ಲಿ ಹಕ್ಕಿಯೊಂದು ಹಾರುತ್ತಾ ಅನ್ನುತ್ತಿತ್ತು…… ಎಲೈ ಜೀವಿಗಳೆ ಸಂಬಂಧಗಳೆಂದರೆ ಗೊತ್ತೆ……. ಕೆಳಗಿನಿಂದ ಮನುಷ್ಯ ಹೇಳಿದ,ಹೌದು ಚೆನ್ನಾಗಿ ಗೊತ್ತು……. ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಉತ್ತರಿಸಿತು……. ಹೌದು ಅದೆಲ್ಲಾ ನನಗೂ ಕಾಣುತ್ತಿದೆ ಮೇಲಿನಿಂದ….. ಅವೆಲ್ಲಾ ನಿನ್ನ ಆಂತರ್ಯದಲ್ಲಿ ಬಂಧಿಯಾಗಿದೆ……. ಮಸುಕಾಗಿದೆ, ಮಂಕಾಗಿದೆ, ಮುಖವಾಡಧರಿಸಿದಂತಿದೆ…….. ಸರಿಸು ಮುಸುಕನ್ನು,ಒರೆಸು ಮಂಕನ್ನು,ಕಿತ್ತೊಗೆ ಮುಖವಾಡವನ್ನು…… ಆಗ ಗೋಚರಿಸುತ್ತದೆ ನಿನಗೆ ನಿಜವಾದಪ್ರೀತಿ, ಪ್ರೇಮ, ತ್ಯಾಗ,…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ?

Taluknewsmedia.com

Taluknewsmedia.comಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ? ಬೆಂಗಳೂರು ನಗರದಲ್ಲಿ ನಿಗೂಢ ಸಾವಿನ ಘಟನೆ ಬೆಳಕಿಗೆ ಬಂದಿದೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ಪುತ್ತೂರು ಮೂಲದ 20 ವರ್ಷದ ಯುವಕ ತಕ್ಷಿತ್ ಶವವಾಗಿ ಪತ್ತೆಯಾದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಪ್ರಕಾರ, ತಕ್ಷಿತ್ ಅಕ್ಟೋಬರ್ 9ರಂದು ವಿರಾಜಪೇಟೆಯ ಯುವತಿಯೊಂದಿಗಿದ್ದು, ಲಾಡ್ಜ್‌ನಲ್ಲಿ ರೂಮ್ ಮಾಡಿದ್ದ. ಇಬ್ಬರೂ ಹಿಂದೆ ಪಣಂಬೂರಿನ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದರು. ಆದರೆ ಬ್ಯಾಕ್‌ಲಾಗ್‌ಗಳಿಂದಾಗಿ ಕಾಲೇಜು ಬಿಟ್ಟು ಹೊರ ಬಂದಿದ್ದರು. ಬಳಿಕ ತಕ್ಷಿತ್ ಮೈಸೂರಿಗೆ ಓದಲು ಹೋಗುತ್ತಿದ್ದೇನೆಂದು ಹೇಳಿ, ವಾಸ್ತವದಲ್ಲಿ ಬೆಂಗಳೂರಿಗೆ ಬಂದಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಲಾಡ್ಜ್ ದಾಖಲೆ ಪ್ರಕಾರ, ತಕ್ಷಿತ್ ಮತ್ತು ಯುವತಿ ಕಳೆದ 8 ದಿನಗಳಿಂದ ರೂಮಿನಲ್ಲೇ ಇದ್ದು, ಸ್ವಿಗ್ಗಿ ಮೂಲಕ ಆಹಾರ ಪಾರ್ಸೆಲ್ ಮಾಡಿ ಸೇವಿಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಆಹಾರ…

ಮುಂದೆ ಓದಿ..
ಸುದ್ದಿ 

ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್!

Taluknewsmedia.com

Taluknewsmedia.comನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್! “ಮೂರು ಪಟ್ಟು ಹಣ ಕೊಡುತ್ತೇವೆ” ಎಂಬ ಆಮಿಷವೊಡ್ಡಿ ಜನರನ್ನು ಭಾರಿ ಮಟ್ಟದಲ್ಲಿ ವಂಚಿಸುತ್ತಿದ್ದ ತಿರುನೆಲ್ವೇಲಿ ಮೂಲದ ನಕಲಿ ನೋಟು ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಸಿಕ್ಕಿದೆ. ಜಯನಗರ ಠಾಣೆಯ ಪೊಲೀಸರು ಸೂಕ್ತ ಮಾಹಿತಿಯ ಆಧಾರದ ಮೇಲೆ ನಡೆಸಿದ ನಿಖರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ರೆಡ್‌ಹ್ಯಾಂಡ್ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಗ್ಯಾಂಗ್ ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ತಮ್ಮ ವಂಚನಾ ಜಾಲವನ್ನು ವಿಸ್ತರಿಸಲು ಮುಂದಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಉರುಲು ಬಲ ಬಿಚ್ಚಿ, ಆರೋಪಿಗಳನ್ನು ಹಣದ ವ್ಯವಹಾರದ ವೇಳೆಯಲ್ಲೇ ಕೈಕಟ್ಟಿದ್ದಾರೆ. ಆರೋಪಿಗಳು “10 ಲಕ್ಷ ಅಸಲಿ ನೋಟು ಕೊಡಿ, ನಾವು ನಿಮಗೆ 30 ಲಕ್ಷ ‘ಕೋಟಾ ನೋಟು’ ನೀಡುತ್ತೇವೆ” ಎಂದು ಜನರಿಗೆ ಆಮಿಷವೊಡ್ಡುತ್ತಿದ್ದರು. ನಂಬಿಕೆ ಮೂಡಿಸಲು ಅಸಲಿ ನೋಟುಗಳ ಬಂಡಲ್‌ನ ಮೇಲ್ಭಾಗ ಮತ್ತು…

ಮುಂದೆ ಓದಿ..
ಸುದ್ದಿ 

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ!

Taluknewsmedia.com

Taluknewsmedia.comಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ! ದೊಡ್ಡಬಳ್ಳಾಪುರ: ಮದುವೆಯಾದ ಕೇವಲ ಒಂಬತ್ತು ತಿಂಗಳಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್‌ ಡ್ಯಾಂ ಹತ್ತಿರ ನಡೆದಿದೆ. 28 ವರ್ಷದ ಪುಷ್ಪಾ ಆತ್ಮಹತ್ಯೆಗೆ ಶರಣಾದ ದುರ್ಘಟಿತೆ. ಮೃತಳಾದ ಪುಷ್ಪಾ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಪತ್ನಿ. ಒಂದೂವರೆ ವರ್ಷಗಳ ಹಿಂದೆ ಇವರ ವಿವಾಹ ನಡೆದಿತ್ತು. ಆದರೆ ಮದುವೆಯ ನಂತರದಿಂದಲೇ ಪತಿ, ಅತ್ತೆ, ಮಾವ ಹಾಗೂ ಇತರ ಕುಟುಂಬಸ್ಥರಿಂದ ವರದಕ್ಷಿಣೆ ಮತ್ತು ನಿವೇಶನಕ್ಕಾಗಿ ನಿರಂತರ ಕಿರುಕುಳ ಎದುರಿಸುತ್ತಿದ್ದಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಮೊದಲು ಪುಷ್ಪಾ ಸೆಲ್ಫಿ ವಿಡಿಯೋ ಮಾಡಿ ತನ್ನ ಜೀವ ತ್ಯಾಗದ ನಿರ್ಧಾರವನ್ನು ದಾಖಲಿಸಿರುವುದು ಘಟನೆಗೆ ಮತ್ತಷ್ಟು ಭಾರಿತನ ನೀಡಿದೆ. ವಿಡಿಯೋದಲ್ಲಿ ಪುಷ್ಪಾ ಪತಿಯ ಕುಟುಂಬದವರು ನೀಡಿದ ಕಿರುಕುಳ ಮತ್ತು ಅವಮಾನವನ್ನು ವಿವರಿಸಿದ್ದಾಳೆ ಎನ್ನಲಾಗಿದೆ. ಮದುವೆಯಾದ…

ಮುಂದೆ ಓದಿ..
ಅಂಕಣ 

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ……

Taluknewsmedia.com

Taluknewsmedia.comದೀಪಾವಳಿ………. ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ…… ಜ್ಞಾನದ ಮರು ಪೂರಣ…… ಜ್ಞಾನ – ಬುದ್ದಿ – ತಿಳಿವಳಿಕೆ…..ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ……… ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದ ಹೋಗುವ ಮತ್ತು ಎಂದೂ ಮುಗಿಯದ ವಸ್ತುಗಳು ಎಂದು…. ಜ್ಞಾನ ಮೊದಲ ಪಟ್ಟಿಯಲ್ಲಿ ಸೇರುತ್ತದೆ. ಆದರೆ ಅದರ ವಿಶೇಷತೆ ಎಂದರೆ ಅದಕ್ಕೆ ಎರಡನೇ ಪಟ್ಟಿಯಲ್ಲಿಯೂ ಸ್ಥಾನ ಕಲ್ಪಿಸಬಹುದು. ಅದು ವ್ಯಕ್ತಿಗಳ ಶ್ರಮ, ಸಾಧನೆ ಮತ್ತು ಪ್ರಯತ್ನದ ಮೇಲೆ ಅವಲಂಬಿಸಿರುತ್ತದೆ…… ಒಂದಷ್ಟು ಜನ ಜ್ಞಾನ ಎಂದರೆ ಹಣ ಅಧಿಕಾರ ಆಸ್ತಿ ಸಂಪಾದನೆ ಎಂದು ಭಾವಿಸಿರುತ್ತಾರೆ. ಅದರ ಆಧಾರದ ಮೇಲೆ ಜ್ಞಾನವನ್ನು ಅಳೆಯುತ್ತಾರೆ. ಎಷ್ಟು ಯಶಸ್ವಿಯಾಗುವರೋ ಅಷ್ಟು ಜ್ಞಾನಿಗಳು ಎಂಬ ಅರ್ಥದಲ್ಲಿ……. ಇನ್ನೊಂದಿಷ್ಟು ಜನ ಅಕ್ಷರ ಕಲಿಕೆಯ ಮೂಲಕ ಅಂಕಗಳ ಆಧಾರದ…

ಮುಂದೆ ಓದಿ..
ಸುದ್ದಿ 

ಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ?

Taluknewsmedia.com

Taluknewsmedia.comಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ? ಬೆಂಗಳೂರು ನಗರದ ವಿದ್ಯಾಮಾನ್ಯನಗರದಲ್ಲಿ ನಡೆದ ಸಿಲಿಂಡರ್ ಸ್ಫೋಟದಿಂದ ಮಾಜಿ ಸೈನಿಕ ಜನಾರ್ದನ್ ಅವರಿಗೆ ಗಂಭೀರ ಗಾಯವಾದ ಘಟನೆ ಸಾಮಾಜಿಕವಾಗಿ ದೊಡ್ಡ ಪ್ರಶ್ನೆಯನ್ನು ಎತ್ತಿದೆ – ನಮ್ಮ ಮನೆಗಳಲ್ಲಿ ಅನಿಲ ಸುರಕ್ಷತೆ ಬಗ್ಗೆ ನಾವು ಎಷ್ಟು ಜಾಗೃತರಾಗಿದ್ದೇವೆ? ಮಾಜಿ ಸೈನಿಕರು ದೇಶಕ್ಕಾಗಿ ಜೀವ ಪಣಕ್ಕಿಟ್ಟವರು. ಇಂತಹ ವ್ಯಕ್ತಿ ನಾಗರಿಕ ಜೀವನದಲ್ಲಿ ಅಸಾವಧಾನತೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಜೀವಕ್ಕೆ ಹಾನಿಯಾಗುತ್ತಿರುವುದು ಅತ್ಯಂತ ದುಃಖಕರ. ಈ ಘಟನೆ ಕೇವಲ ಒಂದು ಮನೆಯ ದುರಂತವಲ್ಲ, ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆ. ಪ್ರತಿ ಮನೆಗೂ ಅನಿಲ ಸೋರಿಕೆ ಪತ್ತೆ ಸಾಧನಗಳು, ಸರಿಯಾದ ಸಿಲಿಂಡರ್ ನಿರ್ವಹಣೆ ಮತ್ತು ನಿಯಮಿತ ಸುರಕ್ಷತಾ ಪರಿಶೀಲನೆ ಅಗತ್ಯವಾಗಿದೆ. ನಾಗರಿಕರು ಅನಿಲದ ವಾಸನೆ ಕಂಡುಬಂದಾಗ ತಕ್ಷಣವೇ ಗ್ಯಾಸ್ ವಾಲ್ವ್ ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದೇ, ತುರ್ತು ಸಂಖ್ಯೆಗೆ ಕರೆಮಾಡುವ…

ಮುಂದೆ ಓದಿ..