ಅಂಕಣ 

ಅಪ್ಪ ಅಮ್ಮನ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ…

Taluknewsmedia.com

Taluknewsmedia.comಅಪ್ಪ ಅಮ್ಮನ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ…… ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ – ಹಾಡುಗಳಲ್ಲಿ ತಾಯಿಯನ್ನು ಕರುಳು ಹಿಂಡುವಂತೆ ಚಿತ್ರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಂದೆಯ ತ್ಯಾಗವನ್ನು ಸಹ ಕಥೆ, ಹಾಡುಗಳಲ್ಲಿ ಚಿತ್ರಿಸಲಾಗುತ್ತಿದೆ. ಎಲ್ಲಾ ಧಾರಾವಾಹಿ, ಕಥೆ, ಕಾದಂಬರಿ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪುರುಷರನ್ನು ಮಾತ್ರವೇ ಖಳ ಪಾತ್ರಗಳಲ್ಲಿ ನಿರೂಪಿಸಲಾಗುತ್ತಿತ್ತು. ಇತ್ತೀಚೆಗೆ ಮಹಿಳೆಯರ ಪಾತ್ರಗಳನ್ನು ಸಹ ಹೆಚ್ಚು ಹೆಚ್ಚು ವಿಲನ್ ಗಳಾಗಿ ನಿರೂಪಿಸಲಾಗುತ್ತಿದೆ. ಮೊದಲೆಲ್ಲಾ ಪತಿಯಿಂದ ಪತ್ನಿಯ ಕೊಲೆ ಎಂಬುದನ್ನು ಮಾತ್ರವೇ ಕೇಳುತ್ತಿದ್ದೆವು. ಇತ್ತೀಚೆಗೆ ಪತ್ನಿಯಿಂದ ಪತಿ ಕೊಲೆಯ ಪಿತೂರಿ ಎಂಬುದನ್ನು ಸಹ ನೋಡುತ್ತಿದ್ದೇವೆ. ಪ್ರೇಮಿಗಳ ವಿಷಯದಲ್ಲಿ ಗಂಡಿನಿಂದ ಹೆಣ್ಣಿಗೆ ಮೋಸ, ವಂಚನೆಯ ವಿಷಯಗಳು ಮಾತ್ರ ಸುದ್ದಿಯಾಗುತ್ತಿದ್ದವು. ಇತ್ತೀಚೆಗೆ ಹೆಣ್ಣುಗಳಿಂದ ಸಹ ಪುರುಷ ಮೇಲೆ ಮೋಸ, ದೌರ್ಜನ್ಯದ ಕೇಸು ದಾಖಲಾಗುತ್ತಿವೆ.…

ಮುಂದೆ ಓದಿ..
ಸುದ್ದಿ 

ವೈದ್ಯ ಬಸವರಾಜ್ ಗುರುಲಿಂಗಪ್ಪ ಕಿಡ್ನಾಪ್ ಪ್ರಕರಣ – ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪಾಸಾಹೇಬ್ ಜನವಾಡ ಸೇರಿ ಇಬ್ಬರು ಅರೆಸ್ಟ್!

Taluknewsmedia.com

Taluknewsmedia.comವೈದ್ಯ ಬಸವರಾಜ್ ಗುರುಲಿಂಗಪ್ಪ ಕಿಡ್ನಾಪ್ ಪ್ರಕರಣ – ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪಾಸಾಹೇಬ್ ಜನವಾಡ ಸೇರಿ ಇಬ್ಬರು ಅರೆಸ್ಟ್! ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿದ ವೈದ್ಯರ ಅಪಹರಣ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಬಾಗಲಕೋಟೆ ಜಿಲ್ಲೆಯ ಹುನನಾಪುರ ಮೂಲದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪಾಸಾಹೇಬ್ ಜನವಾಡ ಹಾಗೂ ಅವರ ಸಂಬಂಧಿ ಮಂಜು ರೂಗಿರನ್ನು ಚಂದ್ರಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ನಡೆದಿದ್ದ ಈ ಅಪಹರಣ ಪ್ರಕರಣದಲ್ಲಿ ಆರೋಪಿಗಳು ವೈದ್ಯ ಬಸವರಾಜ್ ಗುರುಲಿಂಗಪ್ಪರನ್ನು ಜುಲೈ 17ರಂದು ವಿಜಯನಗರದ ಅತ್ತಿಗುಪ್ಪೆ ಪ್ರದೇಶದಿಂದ ಕಾರಿನಲ್ಲಿ ಅಪಹರಿಸಿ ನೇರವಾಗಿ ಬಾಗಲಕೋಟೆಗೆ ಕರೆದೊಯ್ದಿದ್ದರು. ನಂತರ 75 ಲಕ್ಷ ರೂ. ಹಣಕ್ಕೆ ಕುಟುಂಬದಿಂದ ಬೇಡಿಕೆ ಇಟ್ಟಿದ್ದರು. ಅಪಹರಣದ ಮರುದಿನವೇ ವೈದ್ಯರ ಕುಟುಂಬಕ್ಕೆ ಕರೆ ಮಾಡಿ “ಹಣವನ್ನು ಅಕೌಂಟ್‌ಗೆ ಜಮೆ ಮಾಡದಿದ್ದರೆ ಅನಿಷ್ಟ ಆಗುತ್ತದೆ” ಎಂದು ಬೆದರಿಕೆ ಹಾಕಿದ ಆರೋಪ. ಈ ಕುರಿತು ವೈದ್ಯರ ಸೋದರಪುತ್ರ…

ಮುಂದೆ ಓದಿ..
ಸುದ್ದಿ 

ಆಡುಗೋಡಿ C.A.R ದಕ್ಷಿಣ ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿತ ಬ್ಯಾಡ್ಮಿಂಟನ್ ಕೋರ್ಟ್‌ – ಖರ್ಚಿನ ವಿವರ ಎಲ್ಲಿ?

Taluknewsmedia.com

Taluknewsmedia.comಆಡುಗೋಡಿ C.A.R ದಕ್ಷಿಣ ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿತ ಬ್ಯಾಡ್ಮಿಂಟನ್ ಕೋರ್ಟ್‌ – ಖರ್ಚಿನ ವಿವರ ಎಲ್ಲಿ? ಬೆಂಗಳೂರು ದಕ್ಷಿಣ ಸಂಸದರ ನಿಧಿ ಅಡಿಯಲ್ಲಿ, ಆಡುಗೋಡಿಯ ಸಿ.ಎ.ಆರ್ ದಕ್ಷಿಣ (ನಗರ ಮೀಸಲು ಪೊಲೀಸ್ ಪಡೆ) ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿಸಿರುವ ನೂತನ ಬ್ಯಾಡ್ಮಿಂಟನ್ ಕೋರ್ಟ್‌ಗೆ ಭರ್ಜರಿ ಉದ್ಘಾಟನಾ ಸಮಾರಂಭ ನಡೆಯಿತು. ಆದರೆ ಈ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ ಖರ್ಚಾದ ಮೊತ್ತ, ಅದರ ವಿವರ ಹಾಗೂ ಪಾರದರ್ಶಕತೆ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎಂಬುದು ಪ್ರಶ್ನೆಗೆ ಕಾರಣವಾಗಿದೆ. ಸಂಸದರ ನಿಧಿಯ ಅಡಿಯಲ್ಲಿ ನಡೆದ ಯೋಜನೆ ಎಂದು ಹೇಳಿಕೊಳ್ಳುವ ಈ ಕಾಮಗಾರಿಯು ಸಾರ್ವಜನಿಕ ಹಣದಿಂದ ನೇರವಾಗಿ ನಡೆಯುತ್ತಿರುವುದರಿಂದ, ಖರ್ಚು ಎಷ್ಟು? ಟೆಂಡರ್ ಪ್ರಕ್ರಿಯೆ ಹೇಗೆ? ಕಾಮಗಾರಿ ಯಾವ ಕಂಪನಿಗೆ ನೀಡಲಾಗಿದೆ? ಎಂಬ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದರಿಂದ ಸಂಶಯಗಳು ವ್ಯಕ್ತವಾಗಿವೆ. ಈ…

ಮುಂದೆ ಓದಿ..
ಸುದ್ದಿ 

ಗಿರಿನಗರ ಸರ ಕಳ್ಳತನ ಪ್ರಕರಣ ಬಿಚ್ಚುಬಿದ್ದಿದೆ – ಇಬ್ಬರು ಆರೋಪಿಗಳ ಬಂಧನ, 74 ಗ್ರಾಂ ಚಿನ್ನ ವಶಕ್ಕೆ!

Taluknewsmedia.com

Taluknewsmedia.comಗಿರಿನಗರ ಸರ ಕಳ್ಳತನ ಪ್ರಕರಣ ಬಿಚ್ಚುಬಿದ್ದಿದೆ – ಇಬ್ಬರು ಆರೋಪಿಗಳ ಬಂಧನ, 74 ಗ್ರಾಂ ಚಿನ್ನ ವಶಕ್ಕೆ! ಬೆಂಗಳೂರು ನಗರದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಬಿಚ್ಚುಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಕಿರಾತಕ ಸರಗಳ್ಳರನ್ನು ಬಂಧಿಸುವಲ್ಲಿ ಗಿರಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಾದವರು ಪ್ರವೀಣ್ ಹಾಗೂ ಯೋಗಾನಂದ. ಸೆಪ್ಟೆಂಬರ್ 13ರಂದು ರಾತ್ರಿ ಈಶ್ವರಿನಗರದಲ್ಲಿ ನಡೆದಿದ್ದ ಈ ಕೃತ್ಯದಲ್ಲಿ ಮಹಿಳೆಯೊಬ್ಬರ ಕೈಯ ಎರಡು ಬೆರಳುಗಳು ಲಾಂಗ್‌ನಿಂದ ಕತ್ತರಿಸಿ ಹೋದವು! ಸರ ಕಿತ್ತಾಟದ ಈ ನಾಚಿಕೆಗೇಡಿತನ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ಗಣೇಶ ಹಬ್ಬದ ಆರ್ಕಿಸ್ಟ್ರಾ ನೋಡಿ ಮನೆಗೆ ವಾಪಸ್ಸಾಗುತ್ತಿದ್ದ ಉಷಾ ಹಾಗೂ ವರಲಕ್ಷ್ಮೀ ಎಂಬ ಇಬ್ಬರು ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು, ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಹಿಂಬದಿಯಿಂದ ದಾಳಿ ನಡೆಸಿದ್ದರು. ಉಷಾ ಭಯಗೊಂಡು 10 ಗ್ರಾಂ ಚಿನ್ನದ ಸರ ನೀಡಿದರೆ, ವರಲಕ್ಷ್ಮೀ ಪ್ರತಿರೋಧ…

ಮುಂದೆ ಓದಿ..
ಸುದ್ದಿ 

ಕೋಲಾರ: ಲವರ್ ಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತರಿಂದ ಹಲ್ಲೆ

Taluknewsmedia.com

Taluknewsmedia.comಕೋಲಾರ: ಲವರ್ ಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತರಿಂದ ಹಲ್ಲೆ ಕೋಲಾರ ಜಿಲ್ಲೆಯ ಮಾಲೂರು ನಗರದ ಪ್ರಮುಖ ಘಟನೆಯಾಗಿ, ಸ್ನೇಹಿತರಿಂದ ಹಲ್ಲೆಗಾಗಿ ಯುವಕನಿಗೆ ಗಾಯಗಳಾಗಿವೆ. ಕಬೀರ್ ಪಾಷ ಎಂಬ ಯುವಕ, ಅಭಿಶೇಕ್ ಪ್ರೀತಿಸುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದ ಹಿನ್ನೆಲೆಯಲ್ಲಿ, ಅಭಿಶೇಕ್, ತ್ಯಾಗರಾಜ್, ಚಂದ್ರು, ನವೀನ್ ಮತ್ತು ವೆಂಕಟೇಶ್ ಎಂಬ ಸ್ನೇಹಿತರಿಂದ ಬೆದರಿಕೆ ಮತ್ತು ಹಲ್ಲೆಗಾಗಿ ಗುರಿಯಾಗಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಕಬೀರ್ ಪಾಷ ಬೈಕ್‌ನಲ್ಲಿ ಹತ್ತುಬಿಟ್ಟೆಂದು ಅವರು ಬೇರೆಡೆ ಕರೆದೊಯ್ಯಲಾಗಿದ್ದು, ಅಲ್ಲಿ ಹಲ್ಲೆ ನಡೆದದ್ದಾಗಿ ಆರೋಪಿಸಲಾಗಿದೆ. ಹಲ್ಲೆ ನಂತರ ಗಾಯಗೊಂಡ ಕಬೀರ್ ಪಾಷ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಪ್ರಕರಣದ ಅನ್ವಯ, ಮಾಲೂರು ಪೊಲೀಸ್ ಠಾಣೆಯಲ್ಲಿ ಕಬೀರ್ ಪಾಷ ದೂರಿನ ಮೇರೆಗೆ ಈ ಐವರು ಯುವಕರ ವಿರುದ್ಧ ಕೇಸ್ ದಾಖಲಾಗಿದೆ. ಸ್ಥಳೀಯ ಪೊಲೀಸರಂತೆ, ಪ್ರಕರಣವನ್ನು ತೀವ್ರವಾಗಿ ತನಿಖೆ ಮಾಡಲಾಗುತ್ತಿದೆ.

ಮುಂದೆ ಓದಿ..
ಅಂಕಣ 

ನಮ್ಮ ಯೋಚನಾ ಶಕ್ತಿಯ ಮೂಲಗಳು – ಕ್ರಮವಾಗಿ….

Taluknewsmedia.com

Taluknewsmedia.comನಮ್ಮ ಯೋಚನಾ ಶಕ್ತಿಯ ಮೂಲಗಳು – ಕ್ರಮವಾಗಿ…. ಸೃಷ್ಟಿಯ ಮೂಲದಿಂದ ಹುಟ್ಟುವ ಚಿಂತನೆಗಳು….. ಜೀವಪರ ನಿಲುವಿನ ವಿಚಾರಗಳು. ‌‌.‌.. ಮಾನವೀಯ ಮುಖದ ಚಿಂತನೆಗಳು…. ಸತ್ಯದ ಮೂಲದಿಂದ ಹೊಳೆಯುವ ಚಿಂತನೆಗಳು… ಅನುಭವದ ಆಧಾರದ ಮೇಲೆ ಅರಿಯುವ ವಿಚಾರಗಳು…. ಜ್ಞಾನದ ಆಧಾರದಿಂದ ಬರುವ ಚಿಂತನೆಗಳು…….. ನಾಗರಿಕತೆಯ ನಡವಳಿಕೆಗಳಿಂದ ಮೂಡುವ ಅಂಶಗಳು…. ಒಂದು ಪ್ರದೇಶ ಅಥವಾ ದೇಶದ ಕಾರಣದಿಂದಾಗಿ ಹುಟ್ಟುವ ವಿಚಾರಗಳು…… ಧರ್ಮದ ಮೂಲದಿಂದ ರೂಪಿಸಿಕೊಳ್ಳುವ ವಿಚಾರಗಳು…… ಆಡಳಿತ ವ್ಯವಸ್ಥೆಯಿಂದ ಮೂಡುವ ಚಿಂತನೆಗಳು…. ಪಕ್ಷದ ದೃಷ್ಟಿಕೋನದಿಂದ ಬರುವ ಚಿಂತನೆಗಳು.. ಭಾಷೆಯ ಬಲದಿಂದ ಸೃಷ್ಟಿಯಾಗುವ ವಿಚಾರಗಳು…. ಸಂಬಂಧಗಳ ಆಧಾರದಲ್ಲಿ ಬೆಳೆಯುವ ಚಿಂತನೆಗಳು…. ಕುಟುಂಬದ ನೆರಳಲ್ಲಿ ಬೆಳೆಯುವ ಚಿಂತನೆಗಳು.. ಸ್ವಾರ್ಥದ ಮೂಲದಿಂದ ಹೊಳೆಯುವ ವಿಚಾರಗಳು….. ದುರಹಂಕಾರದಿಂದ ಮೊಳೆಯುವ ವಿಚಾರಗಳು….. ಕೋಪದಿಂದ ಮೂಡುವ ಚಿಂತನೆಗಳು……. ಅಸೂಯೆಯಿಂದ ಹುಟ್ಟುವ ವಿಚಾರಗಳು…… ಹೀಗೆ ನಮ್ಮಲ್ಲಿ, ಇವುಗಳಲ್ಲಿ ಯಾವ ಆಧಾರದಲ್ಲಿ ನಮ್ಮ ಚಿಂತನೆಗಳು ಅಭಿಪ್ರಾಯಗಳು ಮೂಡಿವೆ ಎಂಬುದರ ಮೇಲೆ ನಮ್ಮ…

ಮುಂದೆ ಓದಿ..
ಸುದ್ದಿ 

ಕೋಟೆ ಗಣಪತಿ ವಿಸರ್ಜನೆಗಾಗಿ ಸಿಂಗಾರಗೊಂಡಿರುವ ನಾಗಮಂಗಲ

Taluknewsmedia.com

Taluknewsmedia.comಕೋಟೆ ಗಣಪತಿ ವಿಸರ್ಜನೆಗಾಗಿ ಸಿಂಗಾರಗೊಂಡಿರುವ ನಾಗಮಂಗಲ ಇಂದು ನಾಗಮಂಗಲ ಪಟ್ಟಣದಲ್ಲಿ ವೈಭವಯುತ ಮೆರವಣಿಗೆಯೊಂದಿಗೆ 73ನೇ ವರ್ಷದ ಕೋಟೆ ಗಣಪತಿ ವಿಸರ್ಜನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಯಶಸ್ವಿಯಾದ ಅನ್ನ ಸಂತರ್ಪಣ ಕಾರ್ಯಕ್ರಮ: ದಿ:15/10/25 ರಂದು ಕೋಟೆ ಗಣಪತಿ ಸೇವಾ ಸಮಿತಿಯಿಂದ ಜರುಗಿದ ಅನ್ನ ಸಂತರ್ಪಣ ಕಾರ್ಯಕ್ರಮದಲ್ಲಿ ಸು 9000 ಮಂದಿ ಪ್ರಸಾದ ಸ್ವೀಕರಿಸಿ ವಿನಾಯಕನ ಕೃಪೆಗೆ ಪಾತ್ರರಾದರು. ಟಿ ಮರಿಯಪ್ಪ ವೃತ್ತದ ಮಹಾದ್ವಾರ ಪ್ರಮುಖ ಆಕರ್ಷಣೆ: ಬೀದರ್ – ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆ ಎಸ್ ಟಿ ರಸ್ತೆ ಸಂಧಿಸುವ ಟಿ ಮರಿಯಪ್ಪ ವೃತ್ತದಲ್ಲಿ ನಿರ್ಮಿಸಿರುವ ಭಜರಂಗಿ ಹಾಗೂ ಶ್ರೀರಾಮಚಂದ್ರ ಲಕ್ಷ್ಮಣರ ಪ್ರತಿಮೆ ಇರುವ ಮಹಾದ್ವಾರವು ದಾರಿಹೋಕರ ನಯನ ಚಿತ್ತಗಳನ್ನು ಆಕರ್ಷಿಸುತ್ತಿದ್ದು ಹಿಂದುತ್ವದ ಭಾವವನ್ನು ಪ್ರತಿಯೊಬ್ಬ ನೋಡುಗರಲ್ಲೂ ಮೂಡಿಸುವಂತಿದೆ. ಸುಮಾರು 25,000 ಜನರು ಭಾಗಿಯಾಗುವ ನಿರೀಕ್ಷೆ :ಇಂದು ನೆಡೆಯುವ ಶೋಭಾಯಾತ್ರೆಯಲ್ಲಿ ಸರಿಸುಮಾರು 25,000 ಜನರು ಹಾಗೂ ನೂರಾರು ಕಲಾ…

ಮುಂದೆ ಓದಿ..
ಸುದ್ದಿ 

ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮೇಲೆ ಕೋಟಿ ಕೋಟಿ ವಂಚನೆ – ASB ಡೆವಲಪರ್ಸ್‌ ವಿರುದ್ಧ FIR ದಾಖಲಾಗಿದೆ.

Taluknewsmedia.com

Taluknewsmedia.comಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮೇಲೆ ಕೋಟಿ ಕೋಟಿ ವಂಚನೆ – ASB ಡೆವಲಪರ್ಸ್‌ ವಿರುದ್ಧ FIR ದಾಖಲಾಗಿದೆ. 139 ಮಂದಿ ಸ್ಯಾಂಡಲ್ವುಡ್ ಹಿರುತೆರೆ, ಕಿರುತೆರೆ ನಟ–ನಟಿಯರಿಗೆ ನಿವೇಶನ ಕೊಡುವ ಭರವಸೆ ನೀಡುವ ಮೂಲಕ ASB ಡೆವಲಪರ್ಸ್ ನ ಸಂಸ್ಥಾಪಕರು, ಚೇರ್ಮನ್ ಭಗೀರಥ ಮತ್ತು MD ವಿಜಯ್ ಕುಮಾರ್, ನೂರಾರು ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ FIR ದಾಖಲಾಗಿದೆ. ಘಟನೆಯ ಮುಖ್ಯ ಅಂಶಗಳು: 139 ನಟ–ನಟಿಯರನ್ನು ತಾವು ನೀಡುವ ನವೀನ ನಿವೇಶನದ ಭರವಸೆ ನೀಡಿ ಕೋಟಿ ಕೋಟಿ ಹಣ ವಂಚನೆ. ಖ್ಯಾತ ಪತ್ರಕರ್ತ ರವಿಬೆಳೆಗೆರೆ ಪುತ್ರಿ ಭಾವನಾ ಬೆಳಗೆರೆ ಕೂಡ ವಂಚನೆಯ ಪೀಡಿತರಲ್ಲಿ ಒಬ್ಬರು. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ, ಆದರೆ ಇನ್ನೂ ಯಾವುದೇ ಬಂಧನ ನಡೆಯಿಲ್ಲ. ಒಂದು FIR ನಲ್ಲಿ ಮಾತ್ರ 1.6 ಕೋಟಿ ರೂ. ವಂಚನೆ ದಾಖಲಾಗಿದೆ. 10ಕ್ಕೂ ಹೆಚ್ಚು ಪ್ರಕರಣಗಳು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಗೇಲ್ ಸಂಸ್ಥೆಯಿಂದ CBG ಘಟಕ

Taluknewsmedia.com

Taluknewsmedia.comಬೆಂಗಳೂರು ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಗೇಲ್ ಸಂಸ್ಥೆಯಿಂದ CBG ಘಟಕ ಬೆಂಗಳೂರು: ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೆಸಿಡಿಸಿ ಪ್ರದೇಶದಲ್ಲಿ ಗೇಲ್ ಸಂಸ್ಥೆಯು ಕಂಪ್ರೆಸ್ಡ್ ಬಯೋ ಗ್ಯಾಸ್ (CBG) ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹಾಗೂ ಗೇಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಎನ್. ಯಾದವ್ ರವರು, ಮಾನ್ಯ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಇಂದು ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಮೂಲಕ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಬೆ.ಘ.ತ್ಯಾ.ನಿ. ನಿಯಮಿತದ ಸಿಇಒ ಕರೀಗೌಡ, ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು…

ಮುಂದೆ ಓದಿ..
ಸುದ್ದಿ 

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – ಸಾರ್ವಜನಿಕ ಸೇವಕರ ಸುರಕ್ಷತೆ ಯಾರು ಕಾಪಾಡಬೇಕು?

Taluknewsmedia.com

Taluknewsmedia.comಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – ಸಾರ್ವಜನಿಕ ಸೇವಕರ ಸುರಕ್ಷತೆ ಯಾರು ಕಾಪಾಡಬೇಕು? ಬೆಂಗಳೂರು ನಗರದ ಬಿಎಂಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ನಡೆದ ಹಲ್ಲೆ, ನಮ್ಮ ಸಮಾಜದ ಅಸಹಿಷ್ಣುತೆಯ ನಿಜವಾದ ಮುಖವನ್ನು ಮತ್ತೊಮ್ಮೆ ಬಯಲಿಗೆಳೆಯಿದೆ. ಚಿಕ್ಕಗೊಲ್ಲರಹಟ್ಟಿ ಬಳಿ ನಡೆದ ಈ ಘಟನೆ ಕೇವಲ ಒಂದು ತಕರಾರು ಅಲ್ಲ – ಅದು ಸಾರ್ವಜನಿಕ ಸೇವೆ ನೀಡುವವರ ಮೇಲಿನ ಗೌರವ ಕುಸಿಯುತ್ತಿರುವ ಸಂಕೇತ. ಬೈಕ್ ಸವಾರರಿಗೆ ಹಾರ್ನ್ ಕೊಟ್ಟ ಅಷ್ಟೇ ಕಾರಣಕ್ಕೆ ಬಸ್ ನಿಲ್ಲಿಸಿ, ಚಾಲಕ-ಕಂಡಕ್ಟರ್‌ರನ್ನು ಹೊಡೆದು ರಕ್ತಸಿಕ್ತಗೊಳಿಸಿದ ಪುಂಡತನ, ನಾವು ಹೇಗೆ ನಾಗರಿಕ ಸಮಾಜವೆಂದು ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಎಬ್ಬಿಸುತ್ತದೆ. ರಸ್ತೆಯ ನಿಯಮ ಪಾಲಿಸುವವರು ತಪ್ಪಿತಸ್ಥರಾಗುತ್ತಿದ್ದರೆ, ಕಾನೂನು ಯಾವತ್ತಿಗೆ ಕೇವಲ ಕಾಗದದ ಮೇಲೇ ಉಳಿಯಬೇಕು? ಈ ಘಟನೆಯ ನಂತರ ಪೊಲೀಸರ ಕ್ರಮ ಶ್ಲಾಘನೀಯವಾದರೂ, ಮನೋಭಾವದ ಬದಲಾವಣೆ ಮಾತ್ರವೇ ಇಂತಹ ಘಟನೆಗಳ ತಡೆಗಟ್ಟುವ ದಾರಿ.ಬಸ್ ಚಾಲಕರು,…

ಮುಂದೆ ಓದಿ..