ಸುದ್ದಿ 

ಚನ್ನಪಟ್ಟಣದ ಸಾತನೂರು ಸರ್ಕಲ್ನಲ್ಲಿ ಮ್ಯಾಗ್ನೆಟ್ ಶಾಲೆಗೆ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ

Taluknewsmedia.com

Taluknewsmedia.comಮ್ಯಾಗ್ನೆಟ್​ ನೆಪದಲ್ಲಿ ಶಾಲೆಗಳನ್ನು ಮುಚ್ಚದಿರಿ ಚನ್ನಪಟ್ಟಣದ ಸಾತನೂರು ಸರ್ಕಲ್​ನಲ್ಲಿ ಮ್ಯಾಗ್ನೆಟ್​ ಶಾಲೆಗೆ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕಾರ್ಯದರ್ಶಿ ಅಜಯ್​ ಕಾಮತ್​, ಆಶಾ ಕಾರ್ಯಕರ್ತೆಯರ ಸಂದ ಎಂ.ಉಮಾದೇವಿ, ಮುಖಂಡರಾದ ಎಚ್​.ಪಿ. ಶಿವಪ್ರಕಾಶ್​, ಸಾರ್ವಜನಿಕ ಶಿಣ ಉಳಿಸಿ ಸಮಿತಿ ಅಧ್ಯ ಮಂಜುನಾಥ್​ ಇತರರಿದ್ದರು. ಚನ್ನಪಟ್ಟಣ: ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಲಿಖಿತ ಭರವಸೆ ನೀಡಲಿ, ಇಲ್ಲದಿದ್ದರೆ ಅವುಗಳ ಉಳಿವಿಗಾಗಿ ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ಎಐಡಿಎಸ್​ಒ ರಾಜ್ಯ ಕಾರ್ಯದರ್ಶಿ ಅಜಯ್​ ಕಾಮತ್​ ಹೇಳಿದರು. ನಗರದ ಸಾತನೂರು ಸರ್ಕಲ್​ನಲ್ಲಿ ಶುಕ್ರವಾರ ತಾಲೂಕಿನ ಹೊಂಗನೂರು ಮ್ಯಾಗ್ನೆಟ್​ ಶಾಲೆಗೆ ಅಕ್ಕಪಕ್ಕದ 7 ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಯೋಜನೆಯಡಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ತೀರ್ಮಾನ ಅವೈಾನಿಕವಾಗಿದೆ. ಸಂತೆ ಮೊಗೇನಹಳ್ಳಿ, ಹೊಡಿಕೆ…

ಮುಂದೆ ಓದಿ..
ಸುದ್ದಿ 

ರಾಣೆಬೆನ್ನೂರ: ಖಾಸಗಿ ಫೈನಾನ್ಸ್‌ ಸಂಸ್ಥೆಯ ವಿರುದ್ಧ ಆಕ್ರೋಶ, ಕಾರು ವಶಪಡಿಸಿಕೊಂಡ ಘಟನೆಗೆ ತೀವ್ರ ಪ್ರತಿಭಟನೆ

Taluknewsmedia.com

Taluknewsmedia.comರಾಣೆಬೆನ್ನೂರ: ಖಾಸಗಿ ಫೈನಾನ್ಸ್‌ ಸಂಸ್ಥೆಯ ವಿರುದ್ಧ ಆಕ್ರೋಶ, ಕಾರು ವಶಪಡಿಸಿಕೊಂಡ ಘಟನೆಗೆ ತೀವ್ರ ಪ್ರತಿಭಟನೆ ರಾಣೆಬೆನ್ನೂರ ನಗರದಲ್ಲಿ ಖಾಸಗಿ ಫೈನಾನ್ಸ್‌ ಸಂಸ್ಥೆಯ ಅಕ್ರಮ ಕ್ರಮಗಳ ವಿರುದ್ಧ ದಲಿತಪರ ಹಾಗೂ ಕನ್ನಡಪರ ಸಂಘಟನೆಗಳು ಭಾನುವಾರ ತೀವ್ರ ಪ್ರತಿಭಟನೆ ನಡೆಸಿವೆ. ಕಾರಿನ ಸಾಲದ ಕಂತು ಎರಡು ತಿಂಗಳು ಬಾಕಿ ಉಳಿದಿದ್ದ ಕಾರಣ, ಆರ್ಬಿಐ ಮಾರ್ಗಸೂಚಿಗಳನ್ನು ಮೀರಿ ವಾಹನವನ್ನು ವಶಪಡಿಸಿಕೊಂಡು, ಮಾಲೀಕರಿಗೆ ಯಾವುದೇ ಅಧಿಕೃತ ನೋಟಿಸ್ ನೀಡದೇ ಬೇರೆವರಿಗೆ ಮಾರಾಟ ಮಾಡಿದ್ದರೆಂಬ ಆರೋಪ ಪ್ರತಿಭಟನಾಕಾರರಿಂದ ಕೇಳಿಬಂದಿದೆ. ಪ್ರತಿಭಟನೆಯನ್ನು ಮುನ್ನಡೆಸಿದ ಕೆ.ಆರ್. ಉಮೇಶ್ ಅವರು ಮಾತನಾಡಿ, “ಸಚೀನ ನೀರಲಗಿ ಅವರು ಖಾಸಗಿ ಫೈನಾನ್ಸ್‌ ಮೂಲಕ ಕಾರು ಖರೀದಿಸಿ ತಿಂಗಳಿಗೆ ಕಂತು ಕಟ್ಟುತ್ತಾ ಬಂದಿದ್ದರು. ಇತ್ತೀಚೆಗೆ ಬಾಡಿಗೆ ಆದಾಯ ಕಡಿಮೆಯಾಗಿದ್ದರಿಂದ ಎರಡು ತಿಂಗಳು ಕಂತು ಬರಲಾಗದ ಪರಿಸ್ಥಿತಿ ಉಂಟಾಯಿತು. ಆದರೆ ಇದನ್ನು ಅವಕಾಶ ಮಾಡಿಕೊಂಡು, ಫೈನಾನ್ಸ್‌ ಸಂಸ್ಥೆಯವರು ಚಿತ್ರದುರ್ಗದಲ್ಲಿ ಕಾರನ್ನು ಸೀಜ್ ಮಾಡಿ, ನಿಯಮಾತೀತವಾಗಿ…

ಮುಂದೆ ಓದಿ..
ಸುದ್ದಿ 

ಪರಿ ನಿರ್ವಾಣ ದಿನ: ಅಂಬೇಡ್ಕರ್ ಪ್ರತಿಮೆ ಮುಂದೆ ಮೇಣದ ಬತ್ತಿ ಬೆಳಗಿದ ನಾಗರಿಕರು

Taluknewsmedia.com

Taluknewsmedia.comಪರಿ ನಿರ್ವಾಣ ದಿನ: ಅಂಬೇಡ್ಕರ್ ಪ್ರತಿಮೆ ಮುಂದೆ ಮೇಣದ ಬತ್ತಿ ಬೆಳಗಿದ ನಾಗರಿಕರು ಹೊಳೆನರಸೀಪುರ: ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನದಂದು ಪಟ್ಟಣದ ಅಂಬೇಡ್ಕರ್ ನಗರದ ಅರಳಿಕಟ್ಟೆ ವೃತ್ತದಲ್ಲಿರುವ ಅವರ ಪ್ರತಿಮೆ ಬಳಿ ನಾಗರಿಕರು ಶನಿವಾರ ಮೇಣದ ಬತ್ತಿ ಹಚ್ಚಿ ಗೌರವ ಸಲ್ಲಿಸಿದರು. ಶಿವಶಂಕರ್, ಲಕ್ಷ್ಮಣ್, ಮನು, ರಮೇಶ್ ಸೇರಿದಂತೆ ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ ಅವರು, “ಭಾರತವನ್ನು ಪ್ರಗತಿಯ ಮಾರ್ಗದಲ್ಲಿ ನಡಿಸುವ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರನ್ನು ದೇಶದ ಜನತೆ ಪ್ರತಿದಿನವೂ ನೆನೆಸಿಕೊಳ್ಳಬೇಕು. ಸಮಾಜದ ಪ್ರತಿಯೊಂದು ವರ್ಗಕ್ಕೂ ಸಂವಿಧಾನದಲ್ಲಿ ನೀಡಿರುವ ಹಕ್ಕು–ಅವಕಾಶಗಳು ಅವರು ದೇಶಕ್ಕೆ ನೀಡಿದ ಶ್ರಮದ ಪಡಿಪಾಗು,” ಎಂದು ತಿಳಿಸಿದರು. ಮೀಸಲಾತಿ ವ್ಯವಸ್ಥೆ ಮೂಲಕ ಅಂಬೇಡ್ಕರ್ ಕೋಟ್ಯಂತರ ಜನರಿಗೆ ಬದುಕಿನ ದಾರಿದೀಪವಾಗಿದ್ದಾರೆ ಎಂದರು. ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್ ಮಾತನಾಡಿ, “ಅಂಬೇಡ್ಕರ್ ರಚಿಸಿದ…

ಮುಂದೆ ಓದಿ..
ಸುದ್ದಿ 

ರಾಟ್‌ವೈಲರ್‌ ದಾಳಿಯಿಂದ ಮಹಿಳೆ ಸಾವು – ನಾಯಿಗಳ ಮಾಲೀಕ ಶೈಲೇಶಕುಮಾರ್ ಬಂಧನ

Taluknewsmedia.com

Taluknewsmedia.comರಾಟ್‌ವೈಲರ್‌ ದಾಳಿಯಿಂದ ಮಹಿಳೆ ಸಾವು – ನಾಯಿಗಳ ಮಾಲೀಕ ಶೈಲೇಶಕುಮಾರ್ ಬಂಧನ ದಾವಣಗೆರೆ: ಮಹಿಳೆಯೊಬ್ಬರು ರಾಟ್‌ವೈಲರ್‌ ತಳಿಯ ಎರಡು ನಾಯಿಗಳ ದಾಳಿಗೆ ಗುರಿಯಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ನಾಯಿಗಳ ಮಾಲೀಕ ಶೈಲೇಶಕುಮಾರ್ ಅವರನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಮೂಲತಃ ದೇವರಾಜ ಅರಸು ಬಡಾವಣೆಯಲ್ಲಿ ವಾಸಿಸುವ ಶೈಲೇಶಕುಮಾರ್, ಸ್ಥಳೀಯ ಚಿತ್ರಮಂದಿರ ಮಾಲೀಕರ ಅಳಿಯರಾಗಿದ್ದು, ಒಟ್ಟು ಮೂರು ರಾಟ್‌ವೈಲರ್‌ ನಾಯಿಗಳನ್ನು ಸಾಕುತ್ತಿದ್ದರು. ಈ ಪೈಕಿ ಅತ್ಯಂತ ಹಿಂಸ್ರ ಸ್ವಭಾವ ಹೊಂದಿದ್ದ ಎರಡು ನಾಯಿಗಳು ಹಿಂದೆ ಶೈಲೇಶಕುಮಾರ್ ಮತ್ತು ಅವರ ಮಾವನ ಮೇಲೆಯೂ ದಾಳಿ ನಡೆಸಿ ಗಾಯಗೊಳಿಸಿದ್ದವು ಎಂದು ಪೊಲೀಸರು ಹೇಳಿದ್ದಾರೆ. ನಾಯಿಗಳ ವರ್ತನೆಯಿಂದ ಬೇಸತ್ತ ಶೈಲೇಶಕುಮಾರ್, ಅವನ್ನು ರಾತ್ರೋರಾತ್ರಿ ಹೊನ್ನೂರು ಸಮೀಪದ ಗೊಲ್ಲರಹಟ್ಟಿ ಪ್ರದೇಶದಲ್ಲಿ ಬಿಟ್ಟುಬಂದಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ. ಗುರುವಾರ ರಾತ್ರಿ, ರಾಷ್ಟ್ರೀಯ ಹೆದ್ದಾರಿಯಿಂದ ಮಲ್ಲಶೆಟ್ಟಿಹಳ್ಳಿ ಕಡೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಅನಿತಾ ಎಂಬ ಮಹಿಳೆಯ…

ಮುಂದೆ ಓದಿ..
ಸುದ್ದಿ 

ಸಿಎಂ ಸಿದ್ದರಾಮಯ್ಯ ಮಹಿಳೆಯರ ವಿರುದ್ಧ ಅವಮಾನಕಾರಿ ಶೈಲಿ ಬಳಸುತ್ತಾರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

Taluknewsmedia.com

Taluknewsmedia.comಸಿಎಂ ಸಿದ್ದರಾಮಯ್ಯ ಮಹಿಳೆಯರ ವಿರುದ್ಧ ಅವಮಾನಕಾರಿ ಶೈಲಿ ಬಳಸುತ್ತಾರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೇ ಮಹಿಳೆಯರ ಗೌರವ ಮರೆತ ಭಾಷೆಯನ್ನು ಬಳಸುತ್ತಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತೀವ್ರ ಟೀಕೆ ಮಾಡಿದ್ದಾರೆ. ಸಿಎಂ ಅವರು ಮಹಿಳೆಯರನ್ನು ಉದ್ದೇಶಿಸಿ “ಅವಳಿವಳು” ಎನ್ನುವ ಏಕವಚನದ ಶೈಲಿಯಲ್ಲಿ ಮಾತನಾಡುವ ನಡೆ ಸಂಪೂರ್ಣವಾಗಿ ಅವಮಾನಕಾರಿ ಎಂದು ಅವರು ಪ್ರಕಟಣೆಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೂಡ ಇದೇ ರೀತಿಯಲ್ಲಿ ಏಕವಚನದಲ್ಲಿ ಕರೆದು ಮಾತನಾಡಿರುವುದು ಅತಿ ಗಂಭೀರ ವಿಷಯ ಎಂದು ಜೋಶಿ ಹೇಳಿದ್ದಾರೆ. “ಕೇಂದ್ರ ಮಂತ್ರಿಯಾಗಿರುವ, ದೇಶದ ಗೌರವಾನ್ವಿತ ಸ್ಥಾನದಲ್ಲಿ ಇರುವ ವ್ಯಕ್ತಿಯನ್ನು ಹೀಗೆ ಕಡಿಮೆಮಟ್ಟದಲ್ಲಿ ಉದ್ದೇಶಿಸುವುದು ಸಿಎಂ ಹುದ್ದೆಗೆ ತಕ್ಕದ್ದು ಅಲ್ಲ” ಎಂದು ಅವರು ದೂರಿದ್ದಾರೆ. ಜೋಶಿ ಮುಂದುವರಿಸುತ್ತಾ, ಸಿದ್ದರಾಮಯ್ಯ…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆ (ರಬಕವಿ–ಬನಹಟ್ಟಿ): ರಾಜ್ಯದಲ್ಲಿ ಜವಳಿ ಉದ್ಯಮ ಕಳೆದ ಹತ್ತು ವರ್ಷಗಳಿಂದ ತೀವ್ರ ಗತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Taluknewsmedia.com

Taluknewsmedia.comಬಾಗಲಕೋಟೆ (ರಬಕವಿ–ಬನಹಟ್ಟಿ): ರಾಜ್ಯದಲ್ಲಿ ಜವಳಿ ಉದ್ಯಮ ಕಳೆದ ಹತ್ತು ವರ್ಷಗಳಿಂದ ತೀವ್ರ ಗತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಒಮ್ಮೆ ಸದ್ದು ಮಾಡುತ್ತಿದ್ದ ವಿದ್ಯುತ್‌ ಮಗ್ಗಗಳು ಈಗ ಅರ್ಧಕ್ಕಿಂತಲೂ ಕಡಿಮೆಯಾಗಿದ್ದು, ಅನೇಕ ನೇಕಾರ ಕುಟುಂಬಗಳು ಉದ್ಯೋಗದ ಅಭಾವದಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ಬೇರೆ ಉದ್ಯೋಗಗಳಿಗೆ ವಾಲಬೇಕಾದರೆ, ಉಳಿದವರು ನಿರುದ್ಯೋಗದಿಂದ ತತ್ತರಿಸುತ್ತಿದ್ದಾರೆ. ಸಬ್ಸಿಡಿ ನೀತಿಯಲ್ಲಿ ತಾರತಮ್ಯಕ್ಕೆ ನೇಕಾರರ ಆಕ್ರೋಶ.. ಪ್ರಸ್ತುತ ಮಗ್ಗ ಖರೀದಿಗೆ ನೇಕಾರರಿಗೆ 50% ಸಬ್ಸಿಡಿ ಸಿಗುತ್ತಿದ್ದರೆ, ಪ.ಜಾತಿ ಸಮುದಾಯಕ್ಕೆ 90% ಸಬ್ಸಿಡಿ ನೀಡಲಾಗುತ್ತಿದೆ. ಈ ಅಂತರ ನೇಕಾರ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಎಲ್ಲರಿಗೂ ಸಮಾನವಾಗಿ 90% ಸಬ್ಸಿಡಿ ನೀಡಬೇಕೆಂಬದು ಅವರ ಪ್ರಬಲ ಬೇಡಿಕೆ. ಮಾರುಕಟ್ಟೆ ಕುಸಿತ–ಉತ್ಪಾದನೆಗೆ ಲಾಭವಿಲ್ಲ… ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಲ್ಲಿ ತಯಾರಾಗುವ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೇ, ಉತ್ಪಾದಕರಿಗೆ ನಷ್ಟವಾಗುತ್ತಿದೆ. ಕೆಎಚ್‌ಡಿಸಿ ಅಧೀನದಲ್ಲಿರುವ ವಿದ್ಯಾ ವಿಕಾಸ ಯೋಜನೆಯಂತೆ, ವಿದ್ಯುತ್ ಮಗ್ಗ ಉತ್ಪನ್ನಗಳನ್ನು ಸರ್ಕಾರಿ…

ಮುಂದೆ ಓದಿ..
ಸುದ್ದಿ 

ಫಸ್ಟ್ ನೈಟ್ ಜಗಳದಿಂದ ದಾಂಪತ್ಯದಲ್ಲಿ ಬಿರುಕು: ಪತಿ ಆಸ್ಪತ್ರೆಯಿಂದ ಓಡಿಹೋಗಿ, ಹೆಂಡತಿಗೆ ಹಲ್ಲೆ ಮಾಡಿದ ಆರೋಪ

Taluknewsmedia.com

Taluknewsmedia.comಫಸ್ಟ್ ನೈಟ್ ಜಗಳದಿಂದ ದಾಂಪತ್ಯದಲ್ಲಿ ಬಿರುಕು: ಪತಿ ಆಸ್ಪತ್ರೆಯಿಂದ ಓಡಿಹೋಗಿ, ಹೆಂಡತಿಗೆ ಹಲ್ಲೆ ಮಾಡಿದ ಆರೋಪ ಬೆಂಗಳೂರು: ಮದುವೆಯಾಗಿ ಐದು ತಿಂಗಳು ಕಳೆದಷ್ಟರಲ್ಲಿ ಒಬ್ಬ ದಂಪತಿಯ ವೈವಾಹಿಕ ಜೀವನ ಗಂಭೀರ ವಿವಾದಕ್ಕೆ ದಾರಿಯಾಗಿದೆ. ಫಸ್ಟ್ ನೈಟ್‌ನಲ್ಲಿಯೇ ಶುರುವಾದ ಜಗಳ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹೆಸರಘಟ್ಟ ಹೋಬಳಿ ಗುಡ್ಡದಹಳ್ಳಿಯ 26 ವರ್ಷದ ಮಹಿಳೆಯ ವಿವಾಹ ಜೂನ್ 9ರಂದು ನೆಲಮಂಗಲ ಮೂಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್ ಯುವಕನೊಂದಿಗೆ, ಇಬ್ಬರ ಸಮ್ಮತಿ ಹಾಗೂ ಕುಟುಂಬದವರ ಸಾನ್ನಿಧ್ಯದಲ್ಲಿ ಜರುಗಿತ್ತು. ಮದುವೆಯು ಸಂಭ್ರಮದ ನಡುವೆ ನಡೆದಿದ್ದರೂ, ವೈವಾಹಿಕ ಜೀವನ ಮೊದಲೇ ದಿನದಲ್ಲಿ ಅಸಹಜ ತಿರುವು ಪಡೆದಿತು. ಫಸ್ಟ್ ನೈಟ್‌ನಲ್ಲೇ ಪತಿ ಯಾವುದೇ ಆಸಕ್ತಿ ತೋರಲಿಲ್ಲವೆಂದು ಯುವತಿ ತಿಳಿಸಿದ್ದು, ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು ಎಂದು ಕುಟುಂಬದ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಇಬ್ಬರ ಕುಟುಂಬಸ್ಥರು ಸೇರುವುದು ಮತ್ತು ವೈದ್ಯಕೀಯ…

ಮುಂದೆ ಓದಿ..
ಸುದ್ದಿ 

ಉಡುಪಿಗೆ ಭೇಟಿ ನೀಡಿದ ಪವನ್ ಕಲ್ಯಾಣ್‌ಗೆ ‘ಅಭಿನವ ಕೃಷ್ಣದೇವರಾಯ’ ಬಿರುದು..

Taluknewsmedia.com

Taluknewsmedia.comಉಡುಪಿಗೆ ಭೇಟಿ ನೀಡಿದ ಪವನ್ ಕಲ್ಯಾಣ್‌ಗೆ ‘ಅಭಿನವ ಕೃಷ್ಣದೇವರಾಯ’ ಬಿರುದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್‌ ಕಲ್ಯಾಣ್‌ ಉಡುಪಿಗೆ ಭಾನುವಾರ ವಿಶೇಷ ಭೇಟಿಯನ್ನು ನೀಡಿದರು. ಗೀತೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಅವರು, ಮೊದಲೇ ಪರ್ಯಾಯ ಪುತ್ತಿಗೆ ಮಠದ ಶ್ರೀಗಳಿಂದ ಅದ್ಧೂರಿ ಸ್ವಾಗತ ಪಡೆದರು. ಬಳಿಕ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿ ಭಕ್ತಿ ಭಾವ ವ್ಯಕ್ತಪಡಿಸಿದರು. ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದ ಪವನ್ ಕಲ್ಯಾಣ್, ಅಲ್ಲಿಿಂದ ರಸ್ತೆ ಮಾರ್ಗವಾಗಿ ಉಡುಪಿ ಸೇರಿದರು. ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚೆಯೇ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನದ ಊಟ ಸೇವಿಸಿ ನಂತರ ಕೃಷ್ಣ ಮಠದತ್ತ ಹೊರಟರು. ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಧ್ವ ಸರೋವರದ ತೀರ್ಥ ಪ್ರೋಕ್ಷಣೆಗೆ ಹಾಜರಾಗಿದ್ದ ಅವರು, ನಂತರ ಅನಂತೇಶ್ವರ ದೇವಾಲಯಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪರ್ಯಾಯ ಶ್ರೀ ಸುಗುಣೇಂದ್ರ…

ಮುಂದೆ ಓದಿ..
ಸುದ್ದಿ 

ಗೋವಾ ಅಗ್ನಿ ಅವಘಡದಲ್ಲಿ ಬೆಂಗಳೂರು ಮೂಲದ ಯುವಕ ಸೇರಿ 25 ಮಂದಿ ಸಾವು…

Taluknewsmedia.com

Taluknewsmedia.comಗೋವಾ ಅಗ್ನಿ ಅವಘಡದಲ್ಲಿ ಬೆಂಗಳೂರು ಮೂಲದ ಯುವಕ ಸೇರಿ 25 ಮಂದಿ ಸಾವು… ಗೋವಾದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಟ್ಟು 25 ಮಂದಿ ಜೀವ ಕಳೆದುಕೊಂಡಿರುವ ಘಟನೆ ಆತಂಕ ಮೂಡಿಸಿದೆ. ಮೃತಪಟ್ಟವರ ಪೈಕಿ ಬೆಂಗಳೂರಿನ ಥಣಿಸಂದ್ರ–ಹೆಗಡೆನಗರ ಮೂಲದ ಇಶಾಕ್ (25) ಎಂಬ ಯುವಕನೂ ಒಬ್ಬರು. ನಾಲ್ವರು ಸ್ನೇಹಿತರೊಂದಿಗೆ ಭಾನುವಾರ ಮಧ್ಯಾಹ್ನ ಗೋವಾ ಪ್ರವಾಸಕ್ಕೆ ತೆರಳಿದ್ದ ಇಶಾಕ್‌ ಅಪಘಾತದಲ್ಲಿ ದಹನಗೊಂಡಿದ್ದಾರೆ. ಅವರ ಮೃತದೇಹವನ್ನು ಡಿಸೆಂಬರ್ 7ರ ರಾತ್ರಿ ಬೆಂಗಳೂರಿಗೆ ತರಲಾಗುತ್ತಿದೆ. ಅಕಸ್ಮಿಕ ಬೆಂಕಿಗಾಹುತಿಯಾದವರು… ಉತ್ತರ ಗೋವಾದ ಅರ್‌ಪೋರಾ ಪ್ರದೇಶದಲ್ಲಿದ್ದ ನೈಟ್ ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ಬೆಂಕಿ ಹೊತ್ತಿಕೊಂಡು ಮಿಂಚಿನ ವೇಗದಲ್ಲಿ ವ್ಯಾಪಿಸಿತು. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿ ಎಂದು ತಿಳಿದುಬಂದಿದೆ. ಅವರಲ್ಲೂ ಮೂವರು ಮಹಿಳೆಯರು ಸೇರಿದ್ದಾರೆ. ಜೊತೆಗೆ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರೂ ಮೃತಪಟ್ಟಿರುವುದು ದೃಢಪಟ್ಟಿದೆ. ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯವೇ ಕಾರಣ? ಪ್ರಾಥಮಿಕ ತನಿಖೆಯ ಪ್ರಕಾರ,…

ಮುಂದೆ ಓದಿ..
ಸುದ್ದಿ 

ಆನ್‌ಲೈನ್‌ ಆಟದ ವ್ಯಸನ: 3 ಲಕ್ಷ ರೂಪಾಯಿ ನಷ್ಟದಿಂದ ಬಳಲಿದ ಯುವಕ ಆತ್ಮಹತ್ಯೆ

Taluknewsmedia.com

Taluknewsmedia.comಆನ್‌ಲೈನ್‌ ಆಟದ ವ್ಯಸನ: 3 ಲಕ್ಷ ರೂಪಾಯಿ ನಷ್ಟದಿಂದ ಬಳಲಿದ ಯುವಕ ಆತ್ಮಹತ್ಯೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಆನ್‌ಲೈನ್‌ ಗೇಮ್‌ಗೆ ಬಿದ್ದಿದ್ದ ಯುವಕನೊಬ್ಬ ಜೀವನ ಅಂತ್ಯ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯ ಹಣ ಸಂಗ್ರಹಣೆ ಕೆಲಸ ಮಾಡುತ್ತಿದ್ದ ಬಸವರಾಜ ಸಕ್ರಪ್ಪನ್ನವರ (28) ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡವನು. ಫೈನಾನ್ಸ್ ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ಕೆಲವು ದಿನಗಳಿಂದ ಈತ ಆನ್‌ಲೈನ್‌ ಆಟಗಳಲ್ಲಿ ಹೂಡಿಕೆ ಮಾಡುತ್ತಿದ್ದ. ಗೇಮ್‌ ವ್ಯಸನ ಹೆಚ್ಚಾದ ಪರಿಣಾಮವಾಗಿ 3 ಲಕ್ಷಕ್ಕೂ ಮೀರಿ ಮೊತ್ತ ನಷ್ಟವಾದ್ದರಿಂದ ಹಣ ಹಿಂತಿರುಗಿಸಲು ಸಾಧ್ಯವಾಗದೆ ಮನಸ್ಸಿನಲ್ಲಿ ಭಾರವಾದ ಒತ್ತಡ ಉಂಟಾಗಿತ್ತು. ಕುಟುಂಬ ಮತ್ತು ಬದುಕಿನ ಬಗ್ಗೆ ತೀವ್ರ ಆವೇಶಗೊಂಡಿದ್ದ ಯುವಕ ಗ್ರಾಮದಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂದೆ ಓದಿ..