ಸುದ್ದಿ 

ಹೆಬ್ಬಾಳ ಬಳಿ 19 ವರ್ಷದ ಯುವತಿ ಮನೆಮಂದಿ ಗಮನಕ್ಕೆ ಬಾರದ ರೀತಿಯಲ್ಲಿ ಕಾಣೆಯಾಗಿದ್ದಾರೆ.

ಹೆಬ್ಬಾಳ, ನಾಗೇನಹಳ್ಳಿ ಸಮೀಪದಲ್ಲಿ 19 ವರ್ಷದ ಯುವತಿ ಕುಮಾರಿ ಆರೋಗ್ಯು ಮೇರಿ ಎಂಬವರು ಮನೆಗೆ ಟಿಪಿಕಲ್ ಸಮಯದಲ್ಲಿ ಓಡೊಡುತ್ತಿದ್ದಾಗ ಆಕಸ್ಮಿಕವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆಕೆಯ ತಂದೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಂತೋನಿ ಸ್ವಾಮಿ ಯವರ ದೂರಿನ ಪ್ರಕಾರ, ಅವರು ಹಾಗೂ ಅವರ ಪತ್ನಿ ಪ್ರತಿದಿನದಂತೆ 24-06-2025 ರಂದು ತಮ್ಮ ತರಕಾರಿ ಅಂಗಡಿಗೆ ಕೆಲಸಕ್ಕೆ ತೆರಳಿದ್ದರು. ಅವರ ಮಗಳು ಮೇರಿ ಮನೆಯಲ್ಲಿಯೇ ಇದ್ದಳು. ಅವರು ಸಂಜೆ 5 ಗಂಟೆಗೆ ತಾತ್ಕಾಲಿಕವಾಗಿ ಮನೆಗೆ ಬಂದು ಟೀ ಕುಡಿದು ಪುನಃ ಅಂಗಡಿಗೆ ಹಿಂತಿರುಗಿದರು. ಆಗ ಮಗಳು ಮನೆಯಲ್ಲಿಯೇ ಇದ್ದರು. ಆದರೆ ರಾತ್ರಿ 10:30ರ ಸಮಯದಲ್ಲಿ ಪತಿ-ಪತ್ನಿ ಮನೆಗೆ ಮರಳಿದಾಗ, ಮನೆಯ ಬಾಗಿಲು ಒಳಗಿನಿಂದಲೇ ಹಾಕಲಾಗಿದ್ದು, ಪಕ್ಕದ ಬಾತ್ ರೂಮ್ ಭಾಗದಲ್ಲಿ ಮನೆಯ ಚಾವಿ ಇಡಲಾಗಿತ್ತು. ಬಾಗಿಲು ತೆರದಾಗ ಮಗಳು ಮನೆಯಲ್ಲಿಲ್ಲದಿರುವುದು ಗಮನಕ್ಕೆ ಬಂತು.…

ಮುಂದೆ ಓದಿ..
ಸುದ್ದಿ 

ಪೆಟರ್‌ನಿಂದ ಜಗಳ ಹಾಗೂ ಹಲ್ಲೆ – ಜೀವ ಬೆದರಿಕೆ ಆರೋಪ

ನಗರದ ಕಸಘಟ್ಟ ಪುರ ಜನತಾ ಕಾಲನಿಯಲ್ಲಿ ತೀವ್ರ ಹಲ್ಲೆ ಮತ್ತು ಜಗಳದ ಘಟನೆ ನಡೆದಿದೆ. ಈ ಕುರಿತು ಸಂಬಂಧಿಕ ವ್ಯಕ್ತಿ ಪೇತ್ರ @ ಪೀಟರ್ ವಿರುದ್ಧ ಪಿರ್ಯಾದು ದಾಖಲಾಗಿದೆ. ಅರ್ಪಿತಾ ರವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ ಮನೆದಲ್ಲಿ ವಾಸವಿದ್ದು, ಗೃಹಿಣಿಯಾಗಿರುತ್ತಾರೆ. ಅವರ ಅಕ್ಕ ಹರ್ಷಿತಾರವರನ್ನು ಎರಡು ವರ್ಷಗಳ ಹಿಂದೆ ಪೇತ್ರ @ ಪೀಟರ್ ರವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಪೇತ್ರ ಮತ್ತು ಹರ್ಷಿತಾ ಅವರು ಕಸಘಟ್ಟ ಪುರ ಜನತಾ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ. ದಿನಾಂಕ 28-06-2025 ರಂದು ರಾತ್ರಿ 09:00 ಗಂಟೆಯ ಸಮಯದಲ್ಲಿ ಪೇತ್ರ @ ಪೀಟರ್ ಅವರು ಅರ್ಪಿತಾ ರವರ ಮನೆಗೆ ಬಂದು, ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದು, ಅವಾಚ್ಯ ಶಬ್ದಗಳಿಂದ ಬೈದು ಮನೆಯ ಹೊರಗಿದ್ದ ಮರದ ರಿಪೀಲ್ (ಕಟ್ಟಿಗೆ) ಅನ್ನು ತೆಗೆದುಕೊಂಡು ಅರ್ಪಿತಾ ರವರ ತಂದೆ ಮೈಕಲ್ ಬಾಬುರವರ ತಲೆಗೆ ಹೊಡೆದಿದ್ದಾರೆ. ಇದರಿಂದ ರಕ್ತಗಾಯ ಸಂಭವಿಸಿದ್ದು,…

ಮುಂದೆ ಓದಿ..
ಸುದ್ದಿ 

ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ..

ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಡೇರಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆರಾಕೇಶ್ ಕುಮಾರ್ ಯಾದವ್ ಅವರು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ರಾಕೇಶ್ ಕುಮಾರ್ ಯಾದವ್ (32) ಅವರು ತಮ್ಮ ಸ್ನೇಹಿತ ಅವದೇಶ್ ಜೊತೆಗೆ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ (MH-48 DA-4715) ನಲ್ಲಿ ಎಡೆಯೂರಿಗೆ ತೆರಳುತ್ತಿದ್ದಾಗ, ವಡೇರಹಳ್ಳಿ ಗೇಟ್ ಬಳಿ ಎದುರು ದಿಕ್ಕಿನಲ್ಲಿ ತಪ್ಪು ಮಾರ್ಗವಾಗಿ ಬಂದ ಬಜಾಜ್ ಡಿಸ್ಕವರ್ ಬೈಕ್ (KA-02 E-2491) ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಅವದೇಶ್ ಅವರಿಗೆ ತಲೆ, ಮುಖ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ರಾಕೇಶ್‌ ಅವರಿಗೆ, ಎಡಗೈ ಮೊಣಕೈ ಮತ್ತು ತಲೆಗೆ ಪೆಟ್ಟಾಗಿದೆ. ಡಿಕ್ಕಿಯಾದ ಬೈಕ್‌ನ…

ಮುಂದೆ ಓದಿ..
ಸುದ್ದಿ 

ಆದಿಚುಂಚನಗಿರಿ ಬೆಟ್ಟದ ಪಾದದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ದಾಳಿ: 15 ಮಂದಿ ಬಂಧನ, ₹43,000 ನಗದು ವಶ

ಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿಯ ಆದಿಚುಂಚನಗಿರಿ ಬೆಟ್ಟದ ಕೆಳಭಾಗದಲ್ಲಿ ನಡೆದ ಅಕ್ರಮ ಇಸ್ಪೀಟ್ ಜೂಜಾಟ ದಾಳಿಯಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಲಭಿಸಿದ ಖಚಿತ ಮಾಹಿತಿಯ ಮೇಲೆ ಬೆಳ್ಳೂರು ಟೌನ್ ಠಾಣೆಯ ಪಿಎಸ್‌ಐ ರವಿಕುಮಾರ್ ವೈ ಏನ್ ಅವರ ನೇತೃತ್ವದಲ್ಲಿ ತಂಡವೇ ಸ್ಥಳಕ್ಕೆ ದಾಳಿ ನಡೆಸಿತು. ದಾಳಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 15 ಮಂದಿ ಗಂಡಸರು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.ದಾಳಿಯಲ್ಲಿ ಒಟ್ಟು ₹43,000 ನಗದು ಹಾಗೂ 52 ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಟು ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಕೆಲವರು ಆಟೋ ಚಾಲಕರು, ಕಾರು ಚಾಲಕರು, ವ್ಯಾಪಾರಸ್ಥರು ಹಾಗೂ ಕೃಷಿಕರು ಇದ್ದಾರೆ. ಬಂಧಿತರು ಚನ್ನಪಟ್ಟಣ, ರಾಮನಗರ ಮತ್ತು ಮಂಡ್ಯದಿಂದ ಬಂದಿದ್ದು, ಸ್ಥಳೀಯರಂತೆ “ನಾಮಕರಣ ಕಾರ್ಯಕ್ರಮಕ್ಕೆ ಆಗಮಿಸಿದ್ದೆವು” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.ಬಂಧಿತರ ಹೆಸರುಗಳು ಮತ್ತು ವಯಸ್ಸುಗಳು:1. ಉಮೇಶ್ (57),…

ಮುಂದೆ ಓದಿ..
ಸುದ್ದಿ 

ತಟ್ಟಹಳ್ಳಿ ಅರಣ್ಯದಲ್ಲಿ ಬೆಂಕಿಗೆ ಆಹುತಿಯಾದ ಶವ ಪತ್ತೆ: ಭೀಕರ ಕೊಲೆ ಶಂಕೆ

ನಾಗಮಂಗಲ ತಾಲೂಕಿನ ತಟ್ಟಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದ ವೇಳೆ ಸುಟ್ಟು ಕರಕಲಾಗಿರುವ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆ ಹಚ್ಚಿದ್ದಾರೆ. ಘಟನೆಯು ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಯಾಗಿರುವ ಶಿವರಾಜು ಕರಡಹಳ್ಳಿ ವ್ಯಾಪ್ತಿಗೆ ಸೇರಿದ ತಟ್ಟಹಳ್ಳಿ ಗ್ರಾಮದ ಸರ್ವೇ ನಂ.68 ರ ಅರಣ್ಯ ಪ್ರದೇಶದಲ್ಲಿ ತಮ್ಮ ನಿಯಮಿತ ಗಸ್ತು ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಅವರು ಹೇಮಾವತಿ ನದಿ ಹರಿಯುವ ರಸ್ತೆಯ ಮೂಲಕ ಗಸ್ತು ನಡೆಸುತ್ತಿದ್ದಾಗ, ಉಪನಾಲೆಯ ತೂಬಿನ ಹತ್ತಿರದಿಂದ ಕೆಟ್ಟ ದುರ್ವಾಸನೆ ಮೂಡಿದ ಹಿನ್ನೆಲೆಯಲ್ಲಿ ಅವರು ಸ್ಥಳ ಪರಿಶೀಲನೆ ನಡೆಸಿದರು.ಪರಿಶೀಲನೆಯ ವೇಳೆ, ಅವರು ಒಂದು ಮನುಷ್ಯನ ಶವವನ್ನು ನೋಡಿದ್ದು, ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮೃತದೇಹದ ಮೇಲೆ ಹುಳುಗಳು ಹುಲಿದಿದ್ದು, ಟೈರ್ ಹಾಗೂ ಇತರೆ ವಸ್ತುಗಳಿಂದ ಬೆಂಕಿಹಾಕಿ ಸುಟ್ಟಿರುವ ಪಾದವಿಲ್ಲದ ಸ್ಥಿತಿಯ ಶವ…

ಮುಂದೆ ಓದಿ..
ಸುದ್ದಿ 

ಕೋಳಿ ಫಾರಂನಲ್ಲಿ ವಾಗ್ವಾದದಿಂದ ಮಚ್ಚು ದಾಳಿ:

ಒಬ್ಬ ವ್ಯಕ್ತಿಗೆ ಗಂಭೀರ ಗಾಯ, ನಾಲ್ವರು ವಿರುದ್ಧ ಪ್ರಕರಣ ದಾಖಲುನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಸಾಮಕಹಳ್ಳಿ ಗ್ರಾಮದಲ್ಲಿರುವ ಕೋಳಿ ಫಾರಂನಲ್ಲಿ ನಡೆದ ವಿಚಿತ್ರ ಘಟನೆ ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿದೆ. ಕೋಳಿಮರಿಗಳ ಬೆಳವಣಿಗೆ ವಿಚಾರವಾಗಿ ಕಾರ್ಮಿಕನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಾಲ್ವರು ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಅಭಿಷೇಕ್ ಗೌಡ ಎಂಬುವವರು ಕಳೆದ ಮೂರು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಸೂಪರವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕೋಳಿಮರಿಗಳ ಬೆಳವಣಿಗೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಅವರು ಇತ್ತೀಚೆಗೆ ಅಶೋಕರವರ ಫಾರಂನಲ್ಲಿ 14,000 ಕೋಳಿಮರಿಗಳನ್ನು ಬೆಳೆಸಲಾಗಿತ್ತು. ಕಂಪನಿಯ ನಿಯಮದಂತೆ ಬೆಳವಣಿಗೆಯಿಲ್ಲದ ಮತ್ತು ರೋಗಭಾದಿತ ಕೋಳಿಮರಿಗಳನ್ನು ಅವರು ಮಾರ್ಗಸೂಚಿಯಂತೆ ನಾಶಪಡಿಸಿದ್ದರು.ಫಾರಂಗೆ ಭೇಟಿ ನೀಡಿ ಕೋಳಿಮರಿಗಳನ್ನು ಪರಿಶೀಲಿಸುತ್ತಿದ್ದಾಗ, ಯಶ್ವಂತ್, ದೀಕ್ಷಿತ್, ನಿರಂಜನ್ ಹಾಗೂ ಧನುಷ್ ಎಂಬುವವರು ಈ ಕುರಿತು ವಾದವಿವಾದಕ್ಕೆ ಇಳಿದರು. ಕೆಲಸ ಮುಗಿಸಿ ಬೈಕ್…

ಮುಂದೆ ಓದಿ..
ಸುದ್ದಿ 

ಹೆಸರಘಟ್ಟದಲ್ಲಿ ತಾಮ್ರದ ವಿದ್ಯುತ್ ಕಬ್ಬಿಣಗಳ ಕಳ್ಳತನ 92 ಸಾವಿರಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳು..

ಹೆಸರಘಟ್ಟದಲ್ಲಿ ತಾಮ್ರದ ವಿದ್ಯುತ್ ಕಬ್ಬಿಣಗಳ ಕಳ್ಳತನ92 ಸಾವಿರಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳು ಹೆಸರಘಟ್ಟದಲ್ಲಿರುವ CEAH, NDDB ಪ್ರಾಜೆಕ್ಟ್ ಸೈಟ್‌ನಲ್ಲಿ ಸಾವಿರಾರು ರೂಪಾಯಿ ಮೌಲ್ಯದ ತಾಮ್ರದ ವಿದ್ಯುತ್ ಕಬ್ಬಿಣಗಳು ಕಾಣೆಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ಸೈಟ್ ಎಂಜಿನಿಯರ್ ಸುಶಾಂತ್ ಸರ್ಕಾರ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸುಶಾಂತ್ ಸರ್ಕಾರ್ ಅವರು ಕೋಲ್ಕತಾದ Parsons Engineers & Consultants ಸಂಸ್ಥೆಯಲ್ಲಿ ಸೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅವರು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಡಿಪಟ್ಟಣದ ಹೆಸರಘಟ್ಟದ ಸೈಟ್‌ನಲ್ಲಿ ದಿನಾಂಕ 26 ಜೂನ್ 2025 ರಂದು ಮಧ್ಯಾಹ್ನ 3:30ರ ವೇಳೆಗೆ ನಿಯಮಿತ ತಪಾಸಣೆಯ ಸಂದರ್ಭ ನಾಲ್ಕು ತಾಮ್ರದ ಭೂಮಿಯ ವಿದ್ಯುದ್ವಾರಗಳು (copper grounding electrodes) ಕಾಣೆಯಾಗಿರುವುದು ಪತ್ತೆಯಾಗಿದೆ.ಕಳ್ಳತನವಾದ ಈ ವಿದ್ಯುತ್ ಉಪಕರಣಗಳು ಕೊನೆಯದಾಗಿ 25 ಜೂನ್ 2025 ರಂದು ಸಂಜೆ 6:30ಕ್ಕೆ ಪರಿಶೀಲನೆಯಾಗಿತ್ತು. ಅಂದಾಜು ₹92,276 ಮೌಲ್ಯದ ಈ ಕಬ್ಬಿಣಗಳ…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳವು

ಆನೇಕಲ್ ಪಟ್ಟಣದ ಕೆಂಪು ದೊಮ್ಮಸಂದ್ರ ರಸ್ತೆಯ ಆಶ್ರಯ ಯೋಜನೆ ಬಡಾವಣೆಯಲ್ಲಿ ಸ್ಕೂಟರ್ ಕಳವಾಗಿರುವ ಘಟನೆ ವರದಿಯಾಗಿದೆ. ಸ್ಥಳೀಯ ನಿವಾಸಿ ಶ್ರೀಮತಿ ವಾಣೆ (ಕು. ಲೇಟ್ ಮಹೇಶ್) ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮಗೆ ಸೇರಿದ ಡಿಯೋ ಹೋಂಡಾ ಸ್ಕೂಟರ್ ಅನ್ನು ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.ಶ್ರೀಮತಿ ವಾಣಿಯವರ ಪ್ರಕಾರ, ಕೆಎ–59 ಇ–7821 ನೋಂದಾಯಿತ ಸಂಖ್ಯೆಯ ಡಿಯೋ ಹೋಂಡಾ ಸ್ಕೂಟರ್ ಅನ್ನು ಅವರು 19/06/2025 ರಂದು ರಾತ್ರಿ 9 ಗಂಟೆಯ ವೇಳೆಗೆ ಮನೆಯ ಎದುರು ನಿಲ್ಲಿಸಿದ್ದರು. ಆದರೆ 20/06/2025 ರಂದು ಬೆಳಗ್ಗೆ 8 ಗಂಟೆಗೆ ಸ್ಕೂಟರ್ ಕಣ್ಮರೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.ಕಳವಾದ ವಾಹನದ ವಿವರಗಳು ಹೀಗಿವೆ:ವಾಹನ ಸಂಖ್ಯೆ: KA-59 E-7821ಚೆಸ್ಸಿಸ್ ನಂ.: ME4JF39HDKG000392ಎಂಜಿನ್ ನಂ.: JF39EG0000628ಪ್ರಕರಣದ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಕೂಟರ್…

ಮುಂದೆ ಓದಿ..
ಸುದ್ದಿ 

ಜಯಮಹಲ್ ಹೋಟೆಲ್ ಬಳಿ ಬೈಕ್ ಡಿಕ್ಕಿ – ದಂಪತಿಗೆ ಗಾಯ, ಗಂಡ ಆಸ್ಪತ್ರೆಗೆ ದಾಖಲು

ನಗರದ ಜೆಸಿ ನಗರ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಗಂಡನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕವಾಗಿ ವಾಹನ ಚಲಾಯಿಸಿದ್ದ ಬೈಕ್ ಸವಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಾಹಿತಿಯ ಪ್ರಕಾರ, ಅಜಯ್ (36) ಎಂಬುವರುತಮ್ಮ ಪತ್ನಿಯನ್ನು ಹಿಂಬದಿ ಸವಾರನಾಗಿ ಕೂರಿಸಿಕೊಂಡು, ತಮ್ಮ ದ್ವಿಚಕ್ರ ವಾಹನ (ನೋಂದಣಿ ಸಂಖ್ಯೆ KA-04-HA-1827) ಮೇಲೆ ಜೆ ಸಿ ನಗರ ಪೊಲೀಸ್ ಠಾಣೆಯ ಕಡೆಯಿಂದ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಕಡೆಗೆ ಸಾಗುತ್ತಿದ್ದರು. ಬೆಳಿಗ್ಗೆ 10:00 ಗಂಟೆ ವೇಳೆಗೆ ಅವರು ಜಯಮಹಲ್ ಪ್ಯಾಲೇಸ್ ಹೋಟೆಲ್ ಹತ್ತಿರ, 18 ಸ್ಪೋಟ್ಸ್ ಕಾಂಪ್ಲೆಕ್ಸ್ ಹಾಗೂ ಚಾಮುಂಡಿ ಹೋಟೆಲ್ ಕಾಂಪೌಂಡ್ ಬಳಿಗೆ ಬಂದಾಗ, ಹಿಂದಿನಿಂದ ಬಂದ ಬೈಕ್ (ನೋಂದಣಿ ಸಂಖ್ಯೆ KA-04-KX-0260) ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಈ ಡಿಕ್ಕಿಯ ಪರಿಣಾಮವಾಗಿ…

ಮುಂದೆ ಓದಿ..
ಅಂಕಣ 

ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಳ್ಳಾರಿ ಸಾಹಿತ್ಯ ಸಮ್ಮೇಳನ ಹಾಗೂ ಸರ್ವಾಧ್ಯಕ್ಷ ಸ್ಥಾನ…….

ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ತಾಕ್ ಅವರು ಆಯ್ಕೆಯಾಗಿದ್ದಾರೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೀಗ ಅವರು ಆ ಆಹ್ವಾನ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ.ಈ ನಡುವೆ ಅವರು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಏಕೆಂದರೆ ಎರಡು ವರ್ಷದ ಹಿಂದೆ ಕಲ್ಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಕೆಲವು ಧೋರಣೆಗಳನ್ನು ವಿರೋಧಿಸಿ ಪ್ರಗತಿಪರ ಚಿಂತಕರು ಪ್ರತ್ಯೇಕ ಜನ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದರು. ಅದಕ್ಕೆ ಭಾನು ಮುಷ್ತಾಕ್ ಅವರೇ ಅಧ್ಯಕ್ಷರಾಗಿದ್ದರು. ಈಗ ಅದೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ ಬಾನು ಮುಷ್ತಾಕ್ ಅವರನ್ನು ಬಳ್ಳಾರಿಯ 88ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿದ್ದಾರೆ. ಈ ವಿಷಯದಲ್ಲಿ ಈ ಬಗ್ಗೆ ಯೋಚಿಸುವ ಎಲ್ಲರಿಗೂ ಅವರವರದೇ ಆದ ಅಭಿಪ್ರಾಯವಿರುತ್ತದೆ. ಆ…

ಮುಂದೆ ಓದಿ..