ಸುದ್ದಿ 

ಆನ್‌ಲೈನ್ ವಂಚನೆ: ಗ್ರಾಹಕರ ಕ್ರೆಡಿಟ್ ಕಾರ್ಡ್‌ನಿಂದ ₹40,183 ಅಕ್ರಮ ವಹಿವಾಟು

ಬೆಂಗಳೂರು, ಜೂನ್ 24– ನಗರದಲ್ಲೊಂದು ಮತ್ತೊಂದು ಆನ್‌ಲೈನ್ ಹಣಕಾಸು ವಂಚನೆಯ ಘಟನೆ ಬೆಳಕಿಗೆ ಬಂದಿದೆ. HSBC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕ ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರು ತಮ್ಮ ಕಾರ್ಡ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಗೊಂಡ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರ ಪ್ರಕಾರ, ಅವರು ಹೊಂದಿರುವ Visa Platinum ಕ್ರೆಡಿಟ್ ಕಾರ್ಡ್ (ನಂ. 4862 XXXX XXXX 2595) ಮೂಲಕ ದಿನಾಂಕ 08.06.2025 ರಂದು Jioeat.in ಎಂಬ ಆನ್‌ಲೈನ್ ಆಹಾರ ವಿತರಣಾ ವೇದಿಕೆಯ ಲಿಂಕ್ ಮೂಲಕ ಆರ್ಡರ್ ಮಾಡಲು ಯತ್ನಿಸಿದ್ದು, ಆ ಸಮಯದಲ್ಲಿ ಬಂದ ಓಟಿಪಿ (OTP) ಅನ್ನು ಅವರು ಶೇರ್ ಮಾಡಿದ ಬಳಿಕ ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಹಂತ ಹಂತವಾಗಿ ಮೊತ್ತ ₹40,183 ರಷ್ಟು ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ…

ಮುಂದೆ ಓದಿ..
ಅಂಕಣ 

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು.

ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು….. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ.,………… ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ…… ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ ಹಾಕಿದೆ.ವ್ಯಾವಹಾರಿಕ ಪೈಪೋಟಿಗಿಳಿದ ಅದರಲ್ಲೂ ಮುಖ್ಯವಾಗಿ ಟೆಲಿವಿಷನ್ ಮಾಧ್ಯಮ ಇನ್ನೂ ಬಹಳಷ್ಟು ವಿಷಯಗಳಲ್ಲಿ ಮಾನಸಿಕವಾಗಿ ಭ್ರೂಣಾವಸ್ಥೆಯಲ್ಲೇ ಇರುವ ಅನೇಕ ಮಹಿಳೆಯರ ಅಂತರಾಳಕ್ಕೆ ಲಗ್ಗೆ ಇಟ್ಟು ತಪ್ಪು ಸಂದೇಶಗಳನ್ನು ಹರಿಯಬಿಡುತ್ತಿದೆ…… ಹೆಣ್ಣು ಸಮಾಜದ ಮುಕ್ತತೆಗೆ ತೆರೆದುಕೊಳ್ಳುತ್ತಿರುವ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಕೆಟ್ಟ ಮೌಲ್ಯಗಳನ್ನು – ಅಮಾನವೀಯ ವರ್ತನೆಗಳನ್ನು ಸಮರ್ಥಿಸುವ,ಅತಿರಂಜಿತ ಘಟನೆಗಳನ್ನು ವೈಭವೀಕರಿಸಿ ವಾಸ್ತವದ ಅರ್ಥವನ್ನು…

ಮುಂದೆ ಓದಿ..
ಸುದ್ದಿ 

ಇನ್ವೆಸ್ಟ್‌ಮೆಂಟ್ ಆ್ಯಪ್ ‌ಗಳ ಮಾಯಾಜಾಲ: ಯುವಕನಿಗೆ ಲಕ್ಷಾಂತರ ರೂಗಳ ಆನ್‌ಲೈನ್ ವಂಚನೆ.

ಇನ್ವೆಸ್ಟ್‌ಮೆಂಟ್ ಮೂಲಕ ಹೆಚ್ಚು ಲಾಭದಾಸ್ಯ ಎಂದು ನಂಬಿಸಿ ಸೈಬರ್ ಮೋಸಗಾರು ಬೆಂಗಳೂರಿನ ಯುವಕನೊಬ್ಬನಿಗೆ ರೂ.12.30 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಪದ್ಮಿನಿ ಮಂಜುನಾಥ್ ರವರು ತಮ್ಮ ವಾಟ್ಸಪ್ ನಂಬರ್‌ಗೆ ‘ಮೈ ಶೇರ್‌ಖಾನ್’ ಆಪ್‌ನಿಂದ ಬಂದ ಇನ್ವೆಸ್ಟ್‌ಮೆಂಟ್ ಟ್ರೇಡಿಂಗ್ ಕುರಿತು ಸಂದೇಶವೊಂದನ್ನು ಪಡೆದುಕೊಂಡು, ಅದರಲ್ಲಿ ನೀಡಿದ್ದ ಮಾಹಿತಿಯನ್ನು ನಂಬಿ ‘CWA’ ಎಂಬ ಮತ್ತೊಂದು ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಆಪ್‌ನಲ್ಲಿ ಹೆಚ್ಚು ಲಾಭ ದೊರೆಯುತ್ತೆಂದು ಹೇಳಿ ಇಡೀ ಹೂಡಿಕೆಯನ್ನು ಹಂತ ಹಂತವಾಗಿ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿತ್ತು. ಹೀಗಾಗಿ ಪದ್ಮಿನಿ ಮಂಜುನಾಥ್ ರವರು ತಮ್ಮ ಎಸ್.ಬಿ.ಐ ಖಾತೆ (ಅಕೌಂಟ್ ನಂ: 20083236735) ಸೇರಿದಂತೆ ಇತರ ಖಾತೆಗಳಿಂದ ಈ ಕೆಳಗಿನಂತೆ ಹಣ ವರ್ಗಾಯಿಸಿದ್ದಾರೆ: ಬ್ಯಾಂಕ್ ಆಫ್ ಮಹಾರಾಷ್ಟ್ರ: ₹35,000 IDFC ಬ್ಯಾಂಕ್: ₹96,000 ಆಕ್ಸಿಸ್ ಬ್ಯಾಂಕ್ ₹1,13,000 ಆಕ್ಸಿಸ್ ಬ್ಯಾಂಕ್ ₹5,00,000 ಆಕ್ಸಿಸ್ ಬ್ಯಾಂಕ್…

ಮುಂದೆ ಓದಿ..
ಸುದ್ದಿ 

ಉದ್ಯೋಗ ಭರವಸೆಯ ಹೆಸರಿನಲ್ಲಿ ಹಣ ವಸೂಲಿ: ನಾಲ್ವರ ವಿರುದ್ಧ ದೂರು ದಾಖಲು.

ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಮಹಿಳೆಯಿಂದ ಹಣ ವಸೂಲಿ ಮಾಡಿ, ನಂತರ ಮೋಸ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಟರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಟರಾಜ್ ಅವರ ಪತ್ನಿಗೆ ದಿನಾಂಕ 12/06/2025 ರಂದು “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಎಂಬ ಕಂಪನಿಯಿಂದ ವಾಟ್ಸ್‌ಆಪ್ ಮೂಲಕ ಸಂದೇಶವೊಂದು ಬಂದು, ಉದ್ಯೋಗಾವಕಾಶವಿದೆ ಎಂದು ತಿಳಿಸಿ ಮರುದಿನ ಕೋರಮಂಗಲದಲ್ಲಿರುವ ವಿಳಾಸಕ್ಕೆ ಸಂದರ್ಶನಕ್ಕೆ ಬರುವಂತೆ ಸೂಚಿಸಲಾಗಿತ್ತು. ಆ ದಂಪತಿ ಸೂಚಿಸಿದ ವಿಳಾಸಕ್ಕೆ ಹೋಗಿದಾಗ ಅಲ್ಲಿ “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಇಲ್ಲದೇ “INFINOX INFO STARK SERVICE PVT LTD” ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು. ಕಂಪನಿಯ ಎಚ್.ಆರ್ ಕನಿಷ್ಕ ಎಂಬುವವರು ನಟರಾಜ್ ಪತ್ನಿಯ ಸಂದರ್ಶನ ನಡೆಸಿದ್ದು, 15 ದಿನಗಳಲ್ಲಿ 1500 ಫಾರಂಗಳನ್ನು ತುಂಬಬೇಕು, ಇದಕ್ಕಾಗಿ ₹15,000 ವೇತನ ನೀಡಲಾಗುವುದು…

ಮುಂದೆ ಓದಿ..
ಸುದ್ದಿ 

ಪತ್ನಿ ನಾಪತ್ತೆ ಪ್ರಕರಣ: ಪತಿಗೆ ಸ್ನೇಹಿತನ ಮೇಲೆ ಶಂಕೆ…

ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪತಿ ಮಂಜುನಾಥ ಬಿನ್ ಮುನಿಯಪ್ಪ (34) ಅವರು ಪೊಲೀಸರ ಬಳಿ ದೂರು ಸಲ್ಲಿಸಿದ್ದಾರೆ. ಮಂಜುನಾಥ ತಮ್ಮ ಪತ್ನಿ ರಾಣಿ ಎಂ (24) ಮತ್ತು 3 ವರ್ಷದ ಮಗ ಯಶ್ ಜೊತೆ ವಾಸವಾಗಿದ್ದು, ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 21 ಜೂನ್ 2025 ರಂದು ಬೆಳಿಗ್ಗೆ 9.00 ಗಂಟೆಗೆ ರಾಣಿ ಎಂ ಅವರು ಕೆಲಸಕ್ಕೆಂದು ಮನೆಯಿಂದ ಹೊರಟಿದ್ದು, ಈವರೆಗೆ ಮನೆಗೆ ಮರಳಿಲ್ಲ. ರಾಣಿಯವರ ನಾಪತ್ತೆ ಸಂಬಂಧಪಟ್ಟಂತೆ ಮಂಜುನಾಥ್ ಸಂಬಂಧಿಕರು, ಸ್ನೇಹಿತರು ಹಾಗೂ ಕೆಲಸದ ಸ್ಥಳಗಳಲ್ಲಿ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ಲಭಿಸಲಿಲ್ಲ. ಇದರಿಂದಾಗಿ ಪತ್ನಿಯ ನಾಪತ್ತೆಗೆ ಆಕಾಶ್ ಎಂಬ ವ್ಯಕ್ತಿಯು ಸಂಬಂಧ ಹೊಂದಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾದ ರಾಣಿ ಎಂ…

ಮುಂದೆ ಓದಿ..
ಸುದ್ದಿ 

ಕಸ್ಟಮರ್ ರಿಟರ್ನ್ ನೆಪದಲ್ಲಿ ಕಂಪನಿಗೆ ಲಕ್ಷಾಂತರ ರೂಪಾಯಿಯ ವಂಚನೆ: ಉದ್ಯೋಗಿ ವಿರುದ್ಧ ದೂರು.

ಹೆಚ್‌.ಎಸ್‌.ಆರ್ ಲೇಔಟ್‌ನ 24ನೇ ಮುಖ್ಯ ರಸ್ತೆಯಲ್ಲಿರುವ Affolife Retail Pvt. Ltd ಕಂಪನಿಗೆ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ನಕಲಿ ಗ್ರಾಹಕರ ರಿಟರ್ನ್ ವಿನಂತಿಗಳನ್ನು ಕಳುಹಿಸಿ, ಕಂಪನಿಯ ಆಂತರಿಕ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಂಪನಿಯ ನಿರ್ದೇಶಕರಾದ ಅಶುತೋಷ್ ಪಾಂಡೆ ಅವರು ನೀಡಿರುವ ದೂರಿನ ಪ್ರಕಾರ, ನೀತಿನ್ ಕುಮಾರ್ ಎಸ್ ಎಂಬುವವರು ದಿನಾಂಕ 15.01.2025 ರಂದು ಕಸ್ಟಮರ್ ಸಕ್ಸಸ್ ಎಕ್ಸಿಕ್ಯೂಟಿವ್ ಆಗಿ ನೇಮಕವಾಗಿದ್ದರು. ಕಂಪನಿಯು Platinum Rx ಎಂಬ ಮೊಬೈಲ್ ಆಪ್ ಮೂಲಕ ಸೇವೆಗಳನ್ನು ನೀಡುತ್ತಿದ್ದು, ಗ್ರಾಹಕರು ಆರ್ಡರ್ ಮಾಡಿದ ನಂತರ Cashfree ಆಯ್ಕೆಯ ಮೂಲಕ ಪಾವತಿಸುತ್ತಿದ್ದರು. ಆದರೆ, ಆರೋಪಿಯಾದ ನೀತಿನ್ ಕುಮಾರ್ ಎಸ್ ಅವರು ಆಪ್‌ನ ಒಳಗಿನ ವ್ಯವಸ್ಥೆಗಳಲ್ಲಿ 246 ನಕಲಿ ರಿಟರ್ನ್ ವಿನಂತಿಗಳನ್ನು ಕಳುಹಿಸಿ, ಮರುಪಾವತಿಯಾಗಬೇಕಾದ ಹಣವನ್ನು ತನ್ನ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ UPI ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಕೊಂಡಿದ್ದಾರೆ…

ಮುಂದೆ ಓದಿ..
ಸುದ್ದಿ 

ಅಮೆರಿಕಾಗೆ ತೆರಳಿದ್ದವರ ಮನೆಯ ಬಾಗಿಲು ಒಡೆದು ಕಳ್ಳತನ – ಅಪರಿಚಿತರ ಕೈಚಳಕ ?

ಅಮೆರಿಕಾಗೆ ತೆರಳಿದ್ದವರ ಮನೆಯ ಬಾಗಿಲು ಒಡೆದು ಕಳ್ಳತನ – ಅಪರಿಚಿತರ ಕೈಚಳಕ ? ಹೆಚ್.ಎಸ್.ಆರ್ ಲೇಔಟ್ ಸೆಕ್ಟರ್-1 ರಲ್ಲಿ ಅಪರಿಚಿತರು ಒಂದು ಖಾಲಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ. ಈ ಕುರಿತು ಬಿ.ವಿ. ವೇಣುಗೋಪಾಲ್ ಎಂಬ ನಿವೃತ್ತ ಇಂಜಿನಿಯರ್ ಹೆಚ್.ಎಸ್.ಆರ್ ಲೇಔಟ್‌ನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು 25 ವರ್ಷಗಳಿಂದ ಸೆಕ್ಟರ್-1, 23ನೇ ಮೇನ್, 15ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ವಾಸವಿದ್ದು, ತಮ್ಮ ಮನೆಯ ಹಿಂದೆ ಇರುವ 2127ನೇ ಮನೆ (22ನೇ ‘ಸಿ’ ಮೇನ್) ಯ ಮಾಲೀಕರಾದ ವಿಜಯ್ ಕುಮಾರ್ ಕುಟುಂಬ ಸಮೇತರಾಗಿ ಸುಮಾರು ತಿಂಗಳ ಹಿಂದೆಯೇ ಅಮೆರಿಕಾಗೆ ತೆರಳಿದ್ದಾರೆ. ಬೆಳಗ್ಗೆ ಮನೆಯಿಂದ ಹೊರಬಂದ ವೇಣುಗೋಪಾಲ್ ರವರಿಗೆ ವಿಜಯ್ ಕುಮಾರ್ ಅವರ ಮನೆಯ ಬಾಗಿಲು ತೆರೆದಿರುವುದು ಕಂಡು ಬಂದು ಶಂಕೆ ಮೂಡಿದೆ. ತಕ್ಷಣವೇ ವಿಜಯ್ ಕುಮಾರ್ ರವರಿಗೆ ದೂರವಾಣಿ ಮೂಲಕ…

ಮುಂದೆ ಓದಿ..
ಸುದ್ದಿ 

ಕೆಲಸಕ್ಕೆಂದು ಹೊರಗೆ ಹೋದ 19 ವರ್ಷದ ಯುವತಿ , ಮನೆಗೆ ಮರಳದೇ ನಾಪತ್ತೆ – ಆತಂಕದಲ್ಲಿ ಕುಟುಂಬಸ್ಥರು.

ನಾಪತ್ತೆಯಾದ ಯುವತಿಯ ಹೆಸರು ಜೀವಿತಾ (19). ಸುಬ್ರಹ್ಮಣಿ ಯವರು ಇಲೆಕ್ಟ್ರಿಷಿಯನ್ ಉದ್ಯೋಗದಲ್ಲಿದ್ದು, ಪತ್ನಿ ಗೀತಾ ಗೃಹಿಣಿಯಾಗಿದ್ದಾರೆ. ಇವರಿಗೆ ಈಶ್ವರಿ, ಜೀವಿತಾ, ವೈದ್ಯನಾದನ್ ಹಾಗೂ ವಾಸುದೇವನ್ ಎಂಬ ನಾಲ್ವರು ಮಕ್ಕಳು. ಜೀವಿತಾ ಸುಮಾರು ಇಪ್ಪತ್ತು ದಿನಗಳ ಹಿಂದೆ ಹೆಚ್‌ಎಸ್‌ಆರ್ ಲೇಔಟ್‌ನ ಪ್ರೋಫೇಷನ್ ಕೂರಿಯರ್ ಆಫೀಸ್‌ನಲ್ಲಿ ಕೆಲಸಕ್ಕೆ ಸೇರಿದಳು. ದಿನಾಂಕ 18.06.2025ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೊರಟ ಜೀವಿತಾ, ನಂತರ ಮನೆಗೆ ಮರಳಿಲ್ಲ. ಅದರ ಬಳಿಕ ಪೋಷಕರು ಜೀವಿತಾಳ ಮೋಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಫೋನ್ ಮನೆಯಲ್ಲಿಯೇ ಬಿಟ್ಟಿದ್ದು ಕಂಡುಬಂದಿದೆ. ನಂತರ ಆಕೆ ಕೆಲಸ ಮಾಡುವ ಕಚೇರಿಗೆ ಕರೆ ಮಾಡಿದಾಗ ಆ ದಿನ ಆಕೆ ಆಫೀಸ್‌ಗೆ ಬಾರದಿರುವುದು ತಿಳಿದು ಬಂದಿದೆ. ಕುಟುಂಬಸ್ಥರು ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಗದ ಕಾರಣ ಇದೀಗ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚಹರೆ…

ಮುಂದೆ ಓದಿ..
ಸುದ್ದಿ 

ಪಿಜ್ಜಾ ಡೆಲಿವರಿ ಬಾಯ್ ರಾಂಗ್ ರೂಟ್‌ನಲ್ಲಿ ಬಂದು ಜಗಳ: ವ್ಯಕ್ತಿಯ ಮೇಲೆ ಹಲ್ಲೆ…

ಹೆಚ್.ಎಸ್.ಆರ್ ಲೇಔಟ್‌ನ ಅಗರ ಲೇಕ್ ಬಳಿ ಪಿಜ್ಜಾ ಡೆಲಿವರಿ ಬಾಯ್‌ ಒಬ್ಬರು ದ್ವಿಚಕ್ರ ವಾಹನದಲ್ಲಿ ರಾಂಗ್ ರೂಟ್‌ನಲ್ಲಿ ಬಂದು ಅಪಘಾತಕ್ಕೆ ಕಾರಣರಾಗಿದ್ದು, ಬಳಿಕ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮನೋಜ್ ಕುಮಾರ್.ಹೆಚ್ ಅವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಕನಕಪುರದ ಬಿಸಿಎಎಂಸಿ ಲೇಔಟ್, ರಘುನಹಳ್ಳಿಯಲ್ಲಿ ವಾಸವಿದ್ದಾರೆ. ಜೂನ್ 21 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅವರು ಅಗರ ಲೇಕ್ ಬಳಿಯ ಡೊಮಿನೋಸ್ ಹತ್ತಿರ ರಸ್ತೆಯನ್ನು ದಾಟುತ್ತಿರುವಾಗ, KA-05-LM-0482 ಸಂಖ್ಯೆಯ ಪಿಜ್ಜಾ ಡೆಲಿವರಿ ವಾಹನ ಚಾಲಕನು ರಾಂಗ್ ರೂಟ್‌ನಲ್ಲಿ ಬಂದು ಅವರ ವಾಹನಕ್ಕೆ ಗುದ್ದಿದನು. ಅಪಘಾತದ ನಂತರ ಮಾತಿಗೆ ಮಾತು ಬೆಳೆದು, ಡೆಲಿವರಿ ಬಾಯ್ ಮತ್ತು ಅವನ ಸ್ನೇಹಿತ ಇಬ್ಬರೂ ಸೇರಿ ಮನೋಜ್ ಕುಮಾರ್ ಅವರನ್ನು ತಡೆದು ಕೈಗಳಿಂದ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಮನೋಜ್ ಕುಮಾರ್ ನ ಎಡಗೈಗೆ ಗಾಯವಾಗಿದ್ದು, ಆತಂಕ…

ಮುಂದೆ ಓದಿ..
ಸುದ್ದಿ 

ಚಾಮರಾಜಪೇಟೆಯಲ್ಲಿ 26 ವರ್ಷದ ಯುವಕ ನಾಪತ್ತೆ – ತಂದೆಯಿಂದ ಚಾಮರಾಜಪೇಟೆಯ ಪೊಲೀಸ್ ಠಾಣೆಗೆ ದೂರು..

ನಗರದ ಚಾಮರಾಜಪೇಟೆಯ ಪೈಪ್ ಲೈನ್ ರಸ್ತೆಯಲ್ಲಿ ಆಲೂಗಡ್ಡೆ ಚಿಪ್ಸ್ ಅಂಗಡಿ ನಡೆಸುತ್ತಿರುವ ವ್ಯಕ್ತಿಯ ಮಗನು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನ ತಂದೆ ಲಿಂಗಮೂರ್ತಿ ಬಿನ್ ಸಂಜೀವಪ್ಪ (51), ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲಿಂಗಮೂರ್ತಿ ಯವರ ಪ್ರಕಾರ, ಅವರು ತಮ್ಮ ಕುಟುಂಬ ಸಮೇತ ಕಸ್ತೂರ್ ಬಾ ನಗರದಲ್ಲಿರುವ ಅಶ್ವಥ್ ಕಟ್ಟೆ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ವಾಸಿಸುತ್ತಿದ್ದಾರೆ. ಪೈಪ್ ಲೈನ್ ರಸ್ತೆ, ಸೋಮಶೇಖರ್ ತೋಟದ ಬಳಿ ಚಿಪ್ಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಮಗ ರುದ್ರೇಶ್ (26) ಈ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದರು. ದಿನಾಂಕ 15-06-2025 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ, ರುದ್ರೇಶ್ ತಾವು ಬಳಸುತ್ತಿದ್ದ ಟಿವಿಎಸ್ ಅಪಾಚೆ ದ್ವಿಚಕ್ರ ವಾಹನ (ನಂ. KA 05 H 2595) ತೆಗೆದುಕೊಂಡು ಹೊರಟ್ಟಿದ್ದನು. ಆದರೆ ಸಂಜೆವರೆಗೆ ಮನೆಗೆ ಮರಳದೆ, ಮೊಬೈಲ್‌ಗೆ…

ಮುಂದೆ ಓದಿ..