ಸುದ್ದಿ 

ಮಹಿಳೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ಹಾಗೂ ಜೀವ ಬೆದರಿಕೆ: ಚರಣ್‌ಜಿತ್‌ಸಿಂಗ್ ಎಂಬುವವನ ವಿರುದ್ಧ ಪಿಸಿಆರ್ ದಾಖಲೆ.

ಬೆಂಗಳೂರು, ಜೂನ್ 19, 2025 –ಬೆಂಗಳೂರು ನಗರದ ಚಿಕ್ಕಪೇಟೆಯಲ್ಲಿ ಅತಿಥಿ ಲಾಡ್ಜ್‌ ಒಂದರಲ್ಲಿ ಮಹಿಳೆಯೊಬ್ಬರ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿ, ತಡೆಯೊಡ್ಡಿದಾಗ ಪ್ರಾಣ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ನ್ಯಾಯಾಲಯದ ಆದೇಶದಂತೆ ಪಿಸಿಆರ್ ದಾಖಲಿಸಿ, ಪ್ರಕರಣ ದಾಖಲಾತಿ ನಡೆಯುತ್ತಿದೆ.ಶ್ರೀಮತಿ ಜೋಶಿನ್ ಫರ್ನಾಂಡಿಸ್ ಅವರು ನೀಡಿದ ದೂರಿನ ಪ್ರಕಾರ, 2019ರ ಏಪ್ರಿಲ್ 24ರಂದು ಗೋವಾದಲ್ಲಿ ಚರಣ್‌ಜಿತ್‌ಸಿಂಗ್ ಕಲಾ ಎಂಬಾತನ ಪರಿಚಯವಾಗಿತ್ತು. ಅವರು ಕಾಲಕಾಲಕ್ಕೆ ಭೇಟಿಯಾಗುತ್ತಿದ್ದು, 2025ರ ಫೆಬ್ರವರಿ 18ರಂದು ಇಬ್ಬರೂ ಚಿಕ್ಕಪೇಟೆಯ ಶಿವಗಂಗಾ ಲಾಡ್ಜ್‌ನಲ್ಲಿ 15 ದಿನಗಳ ಕಾಲ ರೂಂ ಬುಕ್ ಮಾಡಿಕೊಂಡಿದ್ದರು.ಶ್ರೀಮತಿ ಜೋಶಿನ್ ರವರ ಆರೋಪದ ಪ್ರಕಾರ, ಚರಣ್‌ಜಿತ್‌ಸಿಂಗ್ ಪ್ರತಿದಿನ ಮದ್ಯಪಾನ ಮಾಡಿ, ಆಕೆಯ ಸ್ಪಷ್ಟ ವಿರೋಧವನ್ನು ಲೆಕ್ಕಿಸದೇ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಈ ಕೃತ್ಯಕ್ಕೆ ತಡೆ ನೀಡಲು ಯತ್ನಿಸಿದಾಗ, ಕತ್ತನ್ನು ಹಿಸುಕಿ ಕೊಲ್ಲಲು ಪ್ರಯತ್ನ ಪಟ್ಟು, ಆಕೆಗೆ ಪ್ರಾಣ…

ಮುಂದೆ ಓದಿ..
ಸುದ್ದಿ 

ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ – ಲಕ್ಷಾಂತರ ರೂಪಾಯಿ ವಂಚನೆಯ ಪ್ರಕರಣ ದಾಖಲೆ

ಬೆಂಗಳೂರು, ಜೂನ್ 19:ನಗರದ ಚಿಕ್ಕಪೇಟೆ ಪ್ರದೇಶದಲ್ಲಿರುವ ‘ಅರಾಧನಾ ಟೆಕ್ಸ್ಟೈಲ್ಸ್’ ಅಂಗಡಿಯಲ್ಲಿ ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿಗಳ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿಯ ಮಾಲಕರು ನಾಲ್ವರು ವ್ಯಕ್ತಿಗಳ ವಿರುದ್ಧ ಪಿಸಿಆರ್ (PCR) ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಮಾಹಿತಿ ಪ್ರಕಾರ, ಅಂಗಡಿಯ ನಿರ್ವಹಣೆಗೆ ನೇಮಿಸಲಾಗಿದ್ದ ಹರೇಂದ್ರನಾಥ ಎಂಬಾತನು ಮಾಲಕರ ವಿಶ್ವಾಸಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಲಾಗಿದೆ. ಅಂಗಡಿಯ ಕೀಲಿಯನ್ನು ಪಡೆದ ನಂತರ, ಮಾಲಿಕರ ಅನುಮತಿಯಿಲ್ಲದೆ ರೂ. 18 ಲಕ್ಷ ಮೌಲ್ಯದ ಸೀರೆಗಳನ್ನು ಯಾವುದೇ ಬಿಲ್ ರವಾನೆ ಇಲ್ಲದೇ ಮಾರಾಟ ಮಾಡಿದ್ದಾರೆ. ಅಷ್ಟರಲ್ಲಿ, ಕೌಟುಂಬಿಕ ಸಮಸ್ಯೆ ಹೆಸರಿನಲ್ಲಿ ಫೋನ್ ಪೇ ಮೂಲಕ ರೂ. 6,86,300/- ಹಣ ಪಡೆದಿದ್ದು, ಒಂದು ತಿಂಗಳಲ್ಲಿ ಹಿಂದಿರುಗಿಸುತ್ತೇನೆ ಎಂಬ ಭರವಸೆ ನೀಡಿದರೂ ಈವರೆಗೆ ಹಣ ವಾಪಸ್ಸಾಗಿಲ್ಲ. ಇದೇ ರೀತಿಯಲ್ಲಿ, ಇನ್ನಿಬ್ಬರು ಸೀರೆ ಏಜೆಂಟ್‌ಗಳಾದ ರಮೇಶ್…

ಮುಂದೆ ಓದಿ..
ಸುದ್ದಿ 

ಹೆಚ್‌ಎಸ್‌ಆರ್ ಲೇಔಟ್‌ ನಲ್ಲಿ ಪಿಜಿ ದೊರೆಯುತ್ತದೆ ಎಂದು ನಂಬಿಸಿ, ಯುವಕನಿಂದ ₹1.17 ಲಕ್ಷ ವಂಚನೆ

ಬೆಂಗಳೂರು, ಜೂನ್ 19 – ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ (ಪೇಯಿಂಗ್ ಗೆಸ್ಟ್‌) ಬೇಕೆಂದು ಹುಡುಕುತ್ತಿದ್ದ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಯು ಆನ್‌ಲೈನ್ ವಂಚನೆಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಜಿದಾರರಾದ ಪ್ರಶಾಂತ್ ಕುಮಾರ್ ಪ್ರಜಾಪತಿ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ.ಪ್ರಶಾಂತ್ ರವರು #72, ಫಸ್ಟ್ ಫ್ಲೋರ್, 14ನೇ ಮೇನ್, 16ನೇ ಕ್ರಾಸ್‌ ರೋಡ್, ಐಪಿಎಸ್ ಕಾಲೋನಿ, ಸೆಕ್ಟರ್ 4, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದು, BUYSTARS ARKRMY TECHNOLOGY PVT LTD ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು MagicBricks ಎಂಬ ಹೌಸಿಂಗ್ ವೆಬ್‌ಸೈಟ್‌ ಮೂಲಕ ಪಿಜಿ ಹುಡುಕುತ್ತಿದ್ದ ಸಂದರ್ಭದಲ್ಲಿ ‘ಸ್ವಸ್ತಿಕ್’ ಎಂಬ ವ್ಯಕ್ತಿ (ಮೊಬೈಲ್: 7879588250) ಪಿಜಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ ಇರುವುದಾಗಿ ತಿಳಿಸಿದರು.ಇದನ್ನು ನಂಬಿದ ಪ್ರಶಾಂತ್ ಮೊದಲು ₹2,000 ಟೋಕನ್ ಅಮೌಂಟ್ ಅನ್ನು 2025ರ ಜೂನ್ 8 ರಂದು QR…

ಮುಂದೆ ಓದಿ..
ಸುದ್ದಿ 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಶೇಷ ಶೋಧನೆ – ನಿಷೇಧಿತ ವಸ್ತುಗಳ ಪತ್ತೆ!

ಬೆಂಗಳೂರು, ಜೂನ್ 19:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-06-2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಶೋಧನಾ ಕಾರ್ಯಾಚರಣೆ ನಡೆಯಿತು. ಉಪ ಪೊಲೀಸ್ ಆಯುಕ್ತ (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶೋಧನೆಯ ವೇಳೆ ಪತ್ತೆಯಾದ ವಸ್ತುಗಳು: ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) PI ಕಿರಣ್ ಕುಮಾರ್ ಮತ್ತು ತಂಡವು ವಿಚಾರಣಾಧೀನ ಬಂಧಿಗಳು ತಂಗಿರುವ ಬ್ಯಾರಕ್ ನಂ.5/2ರಲ್ಲಿ ಶೋಧನೆ ನಡೆಸಿ ₹5,500 ನಗದು, ಕಸ್ತೂರಿ ಮೇತಿ ಸೊಪ್ಪು, ಬೆಂಕಿ ಪೊಟ್ಟಣ, SK ಬೀಡಿ ಪ್ಯಾಕೆಟ್‌ಗಳು, ಗಾಂಜಾ ಸೇದುವ ಕೊಳವೆಗಳು, ಚಾಕುಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಸುಣ್ಣದ ಡಬ್ಬಿಗಳನ್ನು ಪತ್ತೆಹಚ್ಚಿದ್ದಾರೆ. ವಿಶೇಷ ವಿಚಾರಣಾ ದಳ PI ಶಿವಕುಮಾರ್ ಹಾಗೂ PI ಶ್ರೀನಿವಾಸ ಜಿ.ಟಿ ನೇತೃತ್ವದ ತಂಡವು VIP ಸೆಕ್ಯೂರಿಟಿ ಬ್ಯಾರಕ್ ನಂ.2, ರೂಮ್ ನಂ.2ರಲ್ಲಿ ಸಜಾ…

ಮುಂದೆ ಓದಿ..
ಸುದ್ದಿ 

ಲಕ್ಕಸಂದ್ರದಲ್ಲಿ ಅಪರಿಚಿತನಿಂದ ಯುವಕನ ಮೇಲೆ ಹಲ್ಲೆ: ತಲೆ ಹಾಗೂ ಕಾಲಿಗೆ ಗಂಭೀರ ಗಾಯ.

ಬೆಂಗಳೂರು, ಜೂನ್ 19: ನಗರದ ಲಕ್ಕಸಂದ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪರಿಚಿತ ವ್ಯಕ್ತಿಯ ಹಲ್ಲೆ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ದುಶ್ಚಟದ ಹಿನ್ನೆಲೆಯಲ್ಲಿ ನಡೆದ ಈ ಗಲಾಟೆಯಲ್ಲಿ ಯುವಕನೊಬ್ಬನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಂದ್ರ ಮೋಹನ್ ನೀಡಿದ ದೂರಿನ ಪ್ರಕಾರ, ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಮ್ಮ ಚಿಕ್ಕಮ್ಮ ಚಂದ್ರಕಲಾ ಅವರ ಮಗ ಉಮಾ ಮಹೇಶ್ ಸಹ ಕೂಲಿ ಕೆಲಸ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿದ್ದರು. ಜೂನ್ 15 ರಂದು ಸಂಜೆ 7 ಗಂಟೆಯ ಸುಮಾರಿಗೆ ಉಮಾ ಮಹೇಶ್ ಚಂದ್ರ ಮೋಹನ್ ರವರಿಗೆ ಕರೆಮಾಡಿ, ಲಕ್ಕಸಂದ್ರದ ಸಾರ್ವಜನಿಕ ಶೌಚಾಲಯದ ಬಳಿ ಯಾರೋ ಅಪರಿಚಿತ ವ್ಯಕ್ತಿ ತಲೆಗೆ ಕಲ್ಲು ಹೊಡೆದು ಗಾಯಗೊಳಿಸಿದ್ದಾನೆಂದು ತಿಳಿಸಿದನು. ಚಂದ್ರ ಮೋಹನ್ ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಉಮಾ ಮಹೇಶ್ ಶೌಚಾಲಯದ ಬಾಗಿಲ ಬಳಿ ತಲೆಯಿಂದ ರಕ್ತಸ್ರಾವವಾಗುತ್ತಾ ಅಸ್ವಸ್ಥ…

ಮುಂದೆ ಓದಿ..
ಸುದ್ದಿ 

ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿವಾದಾಸ್ಪದ ಹೇಳಿಕೆ: ಧಾರ್ಮಿಕ ದ್ವೇಷ ಪ್ರಚೋದನೆ ಆರೋಪದಲ್ಲಿ ಎಫ್‌ಐಆರ್ ದಾಖಲು.

ಬೆಂಗಳೂರು, ಜೂನ್ 19, 2025:ಸುಬ್ರಮಣ್ಯಪುರ ಠಾಣಾ ಪೊಲೀಸ್ ಇಲಾಖೆ ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ನಿಟ್ಟಿನಲ್ಲಿ ನೀಡಲಾದ ವಿವಾದಾತ್ಮಕ ಭಾಷಣದ ಕುರಿತಂತೆ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಂಬಂಧವಾಗಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ತೆಗೆದುಕೊಂಡಿದೆ.ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ವಿನಯ್ ಕುಮಾರ್ ಎ.ಬಿ (ಹೆಚ್‌.ಸಿ 9784) ಅವರು ಠಾಣೆಗೆ ಹಾಜರಾಗಿ ನೀಡಿದ ಮಾಹಿತಿ ಪ್ರಕಾರ, 2025ರ ಜೂನ್ 16ರಂದು ಬೆಳಿಗ್ಗೆ 9:30ರ ಸಮಯದಲ್ಲಿ ಸೋಷಿಯಲ್ ಮೀಡಿಯಾ ನಿಗಾವಣೆಯ ವೇಳೆಯಲ್ಲಿ varthabharati.in ಎಂಬ ಜಾಲತಾಣದಲ್ಲಿ ದಿನಾಂಕ 15-06-2025 ರಂದು ರಾತ್ರಿ 10:36ಕ್ಕೆ ಅಪ್ಲೋಡ್ ಮಾಡಿದ ವಿವಾದಾತ್ಮಕ ವಿಡಿಯೋ ಪತ್ತೆಯಾಯಿತು.ವೀಡಿಯೊದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು, “ದುಷ್ಟರನ್ನು ಕೊಲ್ಲುವುದು ಹಿಂದೂ ಧರ್ಮದ ಧ್ಯೇಯ. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ನಾಶಮಾಡಬೇಕು. ಪ್ರತಿಯೊಬ್ಬರೂ ಶಿವಾಜಿಯಾಗಿ ಹೊರಬಂದು ಪಾಪಿಗಳ ವಿರುದ್ಧ ಹೋರಾಡಬೇಕು,” ಎಂಬಂತಹ…

ಮುಂದೆ ಓದಿ..
ಸುದ್ದಿ 

ನಿರ್ಮಾಣ ಭವನದಲ್ಲಿ ಸುರಕ್ಷತಾ ಲೋಪ: ಕಾರ್ಮಿಕನ ದುರ್ಘಟನಾತ್ಮಕ ಸಾವು

ಬೆಂಗಳೂರು, ಜೂನ್ 19: ನಗರದ ಪೂರ್ಣಪ್ರಜ್ಞ ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ದುರ್ಘಟನೆಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಲ್ಲಪ್ಪ ಎಂದು ಗುರುತಿಸಲಾಗಿದೆ. ಮತ್ತೊಮ್ಮೆ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರ ಜೀವಕ್ಕೆ ಹಾನಿಯಾದ ದುಃಖಕರ ಘಟನೆ ವರದಿಯಾಗಿದೆ. ಸುಮಾರು 12 ವರ್ಷಗಳಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಲ್ಲಪ್ಪ ಅವರು ಕಳೆದ ಒಂದು ವರ್ಷದಿಂದ ಮೆಸ್ತ್ರಿ ಮಂಜುನಾಥ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.ಜೂನ್ 15ರಂದು ಬೆಳಗ್ಗೆ ಸುಮಾರು 7:30ಕ್ಕೆ ಮಲ್ಲಪ್ಪ ಅವರನ್ನು ಮೆಸ್ತ್ರಿ ಮಂಜುನಾಥ್ ಕರೆದುಕೊಂಡು ಹೋಗಿ, ಪೂರ್ಣಪ್ರಜ್ಙ ಲೇಔಟ್‌ನ ಕುಮಾರನ್ ಸ್ಕೂಲ್ ಹತ್ತಿರ ನಿರ್ಮಾಣದಲ್ಲಿದ್ದ ಬಿಲ್ಡಿಂಗ್‌ನಲ್ಲಿ ಕೆಲಸಕ್ಕೆ ಹಚ್ಚಿದ್ದರು. ಈ ಭವನ ಬಸವಯ್ಯ ಎಂಬುವವರಿಗೆ ಸೇರಿದ್ದು, ಕಾಮಗಾರಿ ಕಂಟ್ರಾಕ್ಟರ್ ರಮೇಶ್ ಅವರ ನಿಯಂತ್ರಣದಲ್ಲಿತ್ತು.ಮಧ್ಯಾಹ್ನ 12:00 ಗಂಟೆ ಸಮಯದಲ್ಲಿ ಲಿಫ್ಟ್ ವಾಹನದ ಮೂಲಕ ಕಬ್ಬಿಣದ ಕಾಲಮ್ ಬಾಕ್ಸ್‌ನ್ನು ಮೇಲಂತಸ್ತಿಗೆ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಸಿಮೆಂಟ್ ಖರೀದಿಯಲ್ಲಿ ₹1.24 ಲಕ್ಷ ಮೋಸ

ನಗರದ ಮುರುಳಿ.ಜಿ ಎಂಬುವವರು ಆನ್‌ಲೈನ್ ಮೂಲಕ ಸಿಮೆಂಟ್ ಖರೀದಿಸಲು ಯತ್ನಿಸುತ್ತಿದ್ದ ವೇಳೆ ಉದ್ದೇಶಿತ ಮೋಸದ ಬಲಿಯಾದ ಘಟನೆ ವರದಿಯಾಗಿದೆ. ಕೇವಲ ಸಿಮೆಂಟ್ ಖರೀದಿಸೋಣ ಎಂಬ ಉದ್ದೇಶದಿಂದ ಆರಂಭವಾದ ಹುಡುಕಾಟ, ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಯಿತು. ಮರುಳಿ.ಜಿ ಅವರು ತಮ್ಮ ಕೆನರಾ ಬ್ಯಾಂಕ್ ಖಾತೆ ಮೂಲಕ ವ್ಯವಹಾರ ಮಾಡುತ್ತಿದ್ದು, ದಿನಾಂಕ 01 ಜೂನ್ 2025 ರಂದು ಇಂಟರ್ನೆಟ್‌ನಲ್ಲಿ “53 ಗ್ರೇಡ್ ಸಿಮೆಂಟ್” ಕುರಿತು ಹುಡುಕುತ್ತಿದ್ದಾಗ, ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ಅಭಿಷೇಕ್ ಕುಮಾರ್ ಮಂಡಲ್ ಎಂಬಾತನಿಂದ ಕರೆ ಬಂದಿದೆ. ಆತನು 7739604213, 7739628217, 7294003028 ನಂಬರ್‌ಗಳಿಂದ ಸಂಪರ್ಕಿಸಿ, ಸಿಮೆಂಟ್ ಸರಬರಾಜು ಮಾಡುವ ಭರವಸೆ ನೀಡಿದನು.ಮಹತ್ವದ ವಿವರವೆಂದರೆ, ವಂಚಕರು ಮುರುಳಿಗೆ ಬಿಲ್ (Invoice) ಪ್ರತಿಯನ್ನು ಕಳುಹಿಸಿ ವಿಶ್ವಾಸ ಮೂಡಿಸಿದರು. ಇದನ್ನು ನಂಬಿದ ಮುರುಳಿ ಅವರು ದಿನಾಂಕ 13 ಜೂನ್ 2025 ರಂದು ₹1,24,800 ಮೊತ್ತವನ್ನು Utkarsha Small Finance…

ಮುಂದೆ ಓದಿ..
ಸುದ್ದಿ 

ಟಿಕ್‌ಟಾಕ್ ಮಾಲ ಟ್ರೇಡಿಂಗ್ ಹೂಡಿಕೆ ವಂಚನೆ: ಮಹಿಳೆಯಿಂದ ಲಕ್ಷಾಂತರ ರೂಪಾಯಿ ವಂಚನೆ

ಬೆಂಗಳೂರು, ಜೂನ್ 20: ಸಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರಂಭವಾದ ಆಫರ್‌ ಒಂದು ಮಹಿಳೆಯ ಜೀವನದಲ್ಲಿ ತೊಂದರೆ ತಂದಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಸೈಬರ್ ವಂಚಕರು ಮೋಸದಿಂದ ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಿರಿ ಯವರಿಗೆ ಫೇಸ್‌ಬುಕ್‌ನಲ್ಲಿ ಇಮ್ಮಾ ವಿಲ್ಸನ್ ಎಂಬ ಮಹಿಳೆ ದಿನಾಂಕ 31.10.2024 ರಂದು ಸಂಪರ್ಕಿಸಿ, ಟಿಕ್‌ಟಾಕ್ ಮಾಲ್ ಟ್ರೇಡಿಂಗ್ ಕುರಿತು ಮಾಹಿತಿ ನೀಡಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಳು. ಹಣವಿಲ್ಲದ ಕಾರಣದಿಂದ ಗಿರಿ ಯವರು ಹೂಡಿಕೆಗೆ ನಿರಾಕರಣೆ ನೀಡಿದಾಗ, ಇಮ್ಮಾ ವಿಲ್ಸನ್ ತಾವೇ ಗಿರಿಯವರ ಹೆಸರಿನಲ್ಲಿ USD 5,000 (ಅಂದರೆ ₹4.15 ಲಕ್ಷದಿಂದ ಅಧಿಕ) ಹೂಡಿಕೆ ಮಾಡಿರುವಂತೆ ತೋರಿಸಿ, ಅದರಿಂದ USD 25,000 ಲಾಭವಾಯಿತೆಂದು ಸುಳ್ಳು ಭರವಸೆ ನೀಡಿದ್ದಾಳೆ.ಈ ಲಾಭದ ಪ್ರಭಾವದಿಂದ ಪ್ರಭಾವಿತರಾದ ಗಿರಿ, ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಹಾಗೂ ಯುಕೋ ಬ್ಯಾಂಕ್ ಖಾತೆ…

ಮುಂದೆ ಓದಿ..
ಸುದ್ದಿ 

ಅಬುಧಾಬಿಯಲ್ಲಿ ಉದ್ಯೋಗದ ಹೆಸರಿನಲ್ಲಿ ನರ್ಸ್‌ಗೆ ಲಕ್ಷಾಂತರ ರೂ. ಸೈಬರ್ ವಂಚನೆ.

ಬೆಂಗಳೂರು: ಜೂನ್ 19 ವಿದೇಶದಲ್ಲಿ ಕೆಲಸದ ಆಸೆ ಇಟ್ಟುಕೊಂಡಿದ್ದ ಮಹಿಳಾ ನರ್ಸ್‌ರೊಬ್ಬರು shine.com ಮೂಲಕ ಅಬುಧಾಬಿಯಲ್ಲಿ ಉದ್ಯೋಗ ದೊರಕಿಸುವುದಾಗಿ ನಂಬಿಸಿ ದುಷ್ಕರ್ಮಿಗಳು ಹಾಕಿದ ಸೈಬರ್ ವಂಚನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವಂಚನೆ ಘಟನೆಯಿಂದಾಗಿ ಆರ್ತಿ ಯವರು ಸುಮಾರು ರೂ.98,224 ರೂಪಾಯಿ ಕಳೆದುಕೊಂಡಿದ್ದಾರೆ.ಆರ್ತಿಯು ಅಬುಧಾಬಿಯಲ್ಲಿ ಸ್ಟಾಫ್ ನರ್ಸ್ ಕೆಲಸಕ್ಕಾಗಿ ಹುಡುಕುತ್ತಿದ್ದು, ಲಿಂಕ್ಡಿಇನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ 2025ರ ಮೇ 12ರಂದು ಬೆಳಿಗ್ಗೆ 11:05ಕ್ಕೆ, shine.com ತಾಣದಿಂದ ಕವಿತಾ ಎಂಬ ಮಹಿಳೆ ಕರೆಮಾಡಿ, ಅಬುಧಾಬಿಯಲ್ಲಿ ಉದ್ಯೋಗ ನೀಡುವುದಾಗಿ ತಿಳಿಸಿ UPI ID: Sea08@upi ಗೆ ರೂ.6,500 ರೆಜಿಸ್ಟ್ರೇಷನ್ ಶುಲ್ಕವಾಗಿ ಪಾವತಿಸಲು ಹೇಳಿದ್ದರು.ನಂತರ, ಅವರು HR ವಿಭಾಗದ ಸೆಂಥಿಲ್ ಎಂಬ ವ್ಯಕ್ತಿಯ ಸಂಪರ್ಕವನ್ನು ನೀಡಿದ್ದು, ಆ ವ್ಯಕ್ತಿಯೂ ವಂಚನೆಗೆ ಕೈಜೋಡಿಸಿದ್ದ. ಅವರು ಹಂತ ಹಂತವಾಗಿ ಹಣವನ್ನು ಬೇಡುತ್ತಾ, ಇತ್ಯರ್ಥವಿಲ್ಲದ ದಾಖಲೆಗಳ ಹೆಸರಿನಲ್ಲಿ ಮತ್ತಷ್ಟು ಮೊತ್ತಗಳನ್ನು – ರೂ.22,585, ರೂ.28,808 ಮತ್ತು ರೂ.40,331…

ಮುಂದೆ ಓದಿ..