ಆನೇಕಲ್ ಸಮೀಪ ಬೈಕ್ ಅಪಘಾತ: ಇಬ್ಬರು ಗಂಭೀರವಾಗಿ ಗಾಯಗೊಂಡರು
ಆನೇಕಲ್ ತಾಲೂಕಿನ ಗುಡ್ಡನಹಳ್ಳಿ ಕೆರೆ ಸಮೀಪದ ರಸ್ತೆ ಮೇಲೆ ಜುಲೈ 13ರಂದು ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ಸಾಗರ್ ಶೆಟ್ಟಿ ಮತ್ತು ಲಕ್ಕಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಗಾಯಾಳು ಲಕ್ಕಿಯ ಸ್ನೇಹಿತರಾದ ಶಿವಕುಮಾರ್ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ಮಾಹಿತಿ ಪ್ರಕಾರ, ಘಟನೆ ನಡೆದ ದಿನದಂದು, ಲಕ್ಕಿ ಹಾಗೂ ಸಾಗರ್ ಶೆಟ್ಟಿ ತಮ್ಮ ಕೆಲಸ ಮುಗಿಸಿಕೊಂಡು ಪೂನಹಳ್ಳಿಯಿಂದ ಆನೇಕಲ್ ಟೌನ್ ಕಡೆಗೆ ಮೋಟಾರ್ ಸೈಕಲ್ (ನಂ: TN-09 BK-3753) ನಲ್ಲಿ ತೆರಳುತ್ತಿದ್ದರು. ಮಧ್ಯಾಹ್ನ ಸುಮಾರು 12:40ರ ವೇಳೆಗೆ, ಆನೇಕಲ್-ಹೊಸೂರು ರಸ್ತೆಯ ಗುಡ್ಡನಹಳ್ಳಿ ಕೆರೆ ಕ್ರಾಸ್ ಬಳಿ ಸಾಗರ್ ಶೆಟ್ಟಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದು, ಇಬ್ಬರೂ ರಸ್ತೆಗೆ ಉರುಳಿದ್ದು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ನಂತರ ಅವರನ್ನು ಸ್ಥಳೀಯರು…
ಮುಂದೆ ಓದಿ..
