ಆನೇಕಲ್ನಲ್ಲಿ ಮಾರಣಾಂತಿಕ ಹಲ್ಲೆ ಯತ್ನ: ರವಿಕುಮಾರ್ ಎಂಬ ವ್ಯಕ್ತಿಗೆ ಗುಂಪಿನಿಂದ ದೊಣ್ಣೆಗಳಿಂದ ಹಲ್ಲೆ
ಆನೇಕಲ್ ಪಟ್ಟಣದಲ್ಲಿ ದಿನಾಂಕ 26-07-2025ರಂದು ರಾತ್ರಿ ಭೀಕರ ಘಟನೆ ನಡೆದಿದೆ. ಸ್ಥಳೀಯ ಯುವಕನಾದ ರವಿಕುಮಾರ್ ಎಂಬುವವರಿಗೆ ಕೆಲ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಶ್ರೀ ನವೀನ್ ಕುಮಾರ್ ಎಂಬ ವ್ಯಕ್ತಿ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಸ್ನೇಹಿತನೊಂದಿಗೆ ಆನೇಕಲ್ ನಲ್ಲಿರುವ ಯತೀಶ್ ಎಂಬುವರ ಮನೆಗೆ ಹೋಗುತ್ತಿದ್ದ ವೇಳೆ, ಅಂಬೇಡ್ಕರ್ ಸ್ಮಾರಕ ಹಿಂಭಾಗದಲ್ಲಿ ಕೆಲವರು ಗುಂಪು ಕಟ್ಟಿಕೊಂಡು ನಿಂತಿರುವುದು ಕಾಣಿಸಿಕೊಂಡಿತು. ಹತ್ತಿರ ಹೋಗಿ ನೋಡಿದಾಗ, ಒಬ್ಬ ವ್ಯಕ್ತಿ ಬಿದ್ದು, ತೀವ್ರವಾಗಿ ಗಾಯಗೊಂಡು ಸಹಾಯ ಕೇಳುತ್ತಿದ್ದನು. ಕೂಡಲೇ ಅವರು 112 ಹೆಲ್ಪ್ ಲೈನ್ ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ನಂತರ ತಮ್ಮ ಪರಿಚಿತ ಪೊಲೀಸ್ ಅಧಿಕಾರಿ ಸುರೇಶ್ ಅವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಆ ಸ್ಥಳಕ್ಕೆ ಹಾಜರಾದ ಪೊಲೀಸರ ತನಿಖೆಯಲ್ಲಿ, ಗಾಯಗೊಂಡ ವ್ಯಕ್ತಿಯ ಹೆಸರು ರವಿಕುಮಾರ್ ಎಂದು ಗುರುತಿಸಲಾಗಿದೆ. ಅವನು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ…
ಮುಂದೆ ಓದಿ..
