ಸುದ್ದಿ 

ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಪ್ರಕರಣ; ಒಬ್ಬನ ವಿರುದ್ಧ ಎಫ್‌ಐಆರ್

Taluknewsmedia.com

Taluknewsmedia.com ತೋರವಿಹಕ್ಕಲ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿದ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.ಪೊಲೀಸರ ಪ್ರಕಾರ, ದಿನಾಂಕ 17-06-2025 ರಂದು ಸಂಜೆ 4.30 ಗಂಟೆ ಸುಮಾರಿಗೆ, ಯುವಕನೊಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಧೂಮಪಾನ ಮಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಅನುಮಾನ ಉಂಟಾಯಿತು. ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿತನು ಮಾದಕ ಪದಾರ್ಥವಾದ ಗಾಂಜಾವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡನು.ತಕ್ಷಣ ಫಿರ್ಯಾದಿದಾರರು ಆರೋಪಿತನನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಆರೋಪಿತನು ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿ ಲಿಖಿತ ಅಭಿಪ್ರಾಯ ನೀಡಿದರು. ಆ ಬಳಿಕ ಆರೋಪಿತನನ್ನು ಠಾಣೆಗೆ ಕರೆತಂದು, ಎನ್.ಡಿ.ಪಿ.ಎಸ್ ಕಾಯ್ದೆಯ ಸೆಕ್ಷನ್ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ಪರವಾಗಿ ಪೋಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.ಈ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿ ಇದೆ ಎಂದು…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಜೂಜಾಟ ದಾಳಿ: ಆರೂಣ ಬಿಲಾನಾ ಸೇರಿ 5 ಜನರ ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 24: ಹಳೇಹುಬ್ಬಳ್ಳಿ ತಿಮ್ಮಸಾಗರ ಪಾಟ ಹತ್ತಿರದ ಖುಲ್ಲಾ ಜಾಗೆಯಲ್ಲಿ ಜೂಜಾಟ ನಡೆಯುತ್ತಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಆರುಣ ಬಿಲಾನಾ ಎಂಬುವವರು ಹಾಗೂ ಇವರು ಸೇರಿದಂತೆ ಇನ್ನೂ 4-5 ಜನರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಾಕಿಕೊಂಡು ಇಸ್ಪೆಟ್ ಎಲೆಗಳ ಮೂಲಕ ಅಂದರ್-ಬಾಹರ್ ಆಟವನ್ನಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದರು. ಈ ಕುರಿತು ಮಾಹಿತಿ ಬಂದ ತಕ್ಷಣ ಸ್ಥಳೀಯ ಠಾಣೆಯ ಸಿಬ್ಬಂದಿ ಸಿ.ಪಿ.ಸಿ. 1783, 1811 ಮತ್ತು 2962 ನೇದವರನ್ನು ಒಳಗೊಂಡ ತಂಡ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಾಗಿದ್ದು, ಸನಿಹದಲ್ಲಿಯೇ ನಿಂತು ನೋಡಿ ಮಾಡಿ ಪ್ರಕರಣವನ್ನು ದೃಢಪಡಿಸಿದೆ.ಸ್ಥಳದಲ್ಲಿಯೇ ವಾಚ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ, ಬಳಿಕ ಠಾಣೆಗೆ ಮರಳಿ ದೂರು ದಾಖಲಿಸಿದ್ದು, ಆಧಾರದ ಮೇಲೆ ಹುಬ್ಬಳ್ಳಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 38/2025 ರಂತೆ ಕರ್ನಾಟಕ ಪೊಲೀಸ್ ಕಾಯಿದೆ-1963ರ ಸೆಕ್ಷನ್…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಗ್ರಾಹಕರ ಕ್ರೆಡಿಟ್ ಕಾರ್ಡ್‌ನಿಂದ ₹40,183 ಅಕ್ರಮ ವಹಿವಾಟು

Taluknewsmedia.com

Taluknewsmedia.comಬೆಂಗಳೂರು, ಜೂನ್ 24– ನಗರದಲ್ಲೊಂದು ಮತ್ತೊಂದು ಆನ್‌ಲೈನ್ ಹಣಕಾಸು ವಂಚನೆಯ ಘಟನೆ ಬೆಳಕಿಗೆ ಬಂದಿದೆ. HSBC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕ ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರು ತಮ್ಮ ಕಾರ್ಡ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಗೊಂಡ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರ ಪ್ರಕಾರ, ಅವರು ಹೊಂದಿರುವ Visa Platinum ಕ್ರೆಡಿಟ್ ಕಾರ್ಡ್ (ನಂ. 4862 XXXX XXXX 2595) ಮೂಲಕ ದಿನಾಂಕ 08.06.2025 ರಂದು Jioeat.in ಎಂಬ ಆನ್‌ಲೈನ್ ಆಹಾರ ವಿತರಣಾ ವೇದಿಕೆಯ ಲಿಂಕ್ ಮೂಲಕ ಆರ್ಡರ್ ಮಾಡಲು ಯತ್ನಿಸಿದ್ದು, ಆ ಸಮಯದಲ್ಲಿ ಬಂದ ಓಟಿಪಿ (OTP) ಅನ್ನು ಅವರು ಶೇರ್ ಮಾಡಿದ ಬಳಿಕ ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಹಂತ ಹಂತವಾಗಿ ಮೊತ್ತ ₹40,183 ರಷ್ಟು ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ…

ಮುಂದೆ ಓದಿ..
ಅಂಕಣ 

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು.

Taluknewsmedia.com

Taluknewsmedia.comಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು….. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ.,………… ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ…… ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ ಹಾಕಿದೆ.ವ್ಯಾವಹಾರಿಕ ಪೈಪೋಟಿಗಿಳಿದ ಅದರಲ್ಲೂ ಮುಖ್ಯವಾಗಿ ಟೆಲಿವಿಷನ್ ಮಾಧ್ಯಮ ಇನ್ನೂ ಬಹಳಷ್ಟು ವಿಷಯಗಳಲ್ಲಿ ಮಾನಸಿಕವಾಗಿ ಭ್ರೂಣಾವಸ್ಥೆಯಲ್ಲೇ ಇರುವ ಅನೇಕ ಮಹಿಳೆಯರ ಅಂತರಾಳಕ್ಕೆ ಲಗ್ಗೆ ಇಟ್ಟು ತಪ್ಪು ಸಂದೇಶಗಳನ್ನು ಹರಿಯಬಿಡುತ್ತಿದೆ…… ಹೆಣ್ಣು ಸಮಾಜದ ಮುಕ್ತತೆಗೆ ತೆರೆದುಕೊಳ್ಳುತ್ತಿರುವ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಕೆಟ್ಟ ಮೌಲ್ಯಗಳನ್ನು – ಅಮಾನವೀಯ ವರ್ತನೆಗಳನ್ನು ಸಮರ್ಥಿಸುವ,ಅತಿರಂಜಿತ ಘಟನೆಗಳನ್ನು ವೈಭವೀಕರಿಸಿ ವಾಸ್ತವದ ಅರ್ಥವನ್ನು…

ಮುಂದೆ ಓದಿ..
ಸುದ್ದಿ 

ಇನ್ವೆಸ್ಟ್‌ಮೆಂಟ್ ಆ್ಯಪ್ ‌ಗಳ ಮಾಯಾಜಾಲ: ಯುವಕನಿಗೆ ಲಕ್ಷಾಂತರ ರೂಗಳ ಆನ್‌ಲೈನ್ ವಂಚನೆ.

Taluknewsmedia.com

Taluknewsmedia.comಇನ್ವೆಸ್ಟ್‌ಮೆಂಟ್ ಮೂಲಕ ಹೆಚ್ಚು ಲಾಭದಾಸ್ಯ ಎಂದು ನಂಬಿಸಿ ಸೈಬರ್ ಮೋಸಗಾರು ಬೆಂಗಳೂರಿನ ಯುವಕನೊಬ್ಬನಿಗೆ ರೂ.12.30 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಪದ್ಮಿನಿ ಮಂಜುನಾಥ್ ರವರು ತಮ್ಮ ವಾಟ್ಸಪ್ ನಂಬರ್‌ಗೆ ‘ಮೈ ಶೇರ್‌ಖಾನ್’ ಆಪ್‌ನಿಂದ ಬಂದ ಇನ್ವೆಸ್ಟ್‌ಮೆಂಟ್ ಟ್ರೇಡಿಂಗ್ ಕುರಿತು ಸಂದೇಶವೊಂದನ್ನು ಪಡೆದುಕೊಂಡು, ಅದರಲ್ಲಿ ನೀಡಿದ್ದ ಮಾಹಿತಿಯನ್ನು ನಂಬಿ ‘CWA’ ಎಂಬ ಮತ್ತೊಂದು ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಆಪ್‌ನಲ್ಲಿ ಹೆಚ್ಚು ಲಾಭ ದೊರೆಯುತ್ತೆಂದು ಹೇಳಿ ಇಡೀ ಹೂಡಿಕೆಯನ್ನು ಹಂತ ಹಂತವಾಗಿ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿತ್ತು. ಹೀಗಾಗಿ ಪದ್ಮಿನಿ ಮಂಜುನಾಥ್ ರವರು ತಮ್ಮ ಎಸ್.ಬಿ.ಐ ಖಾತೆ (ಅಕೌಂಟ್ ನಂ: 20083236735) ಸೇರಿದಂತೆ ಇತರ ಖಾತೆಗಳಿಂದ ಈ ಕೆಳಗಿನಂತೆ ಹಣ ವರ್ಗಾಯಿಸಿದ್ದಾರೆ: ಬ್ಯಾಂಕ್ ಆಫ್ ಮಹಾರಾಷ್ಟ್ರ: ₹35,000 IDFC ಬ್ಯಾಂಕ್: ₹96,000 ಆಕ್ಸಿಸ್ ಬ್ಯಾಂಕ್ ₹1,13,000 ಆಕ್ಸಿಸ್ ಬ್ಯಾಂಕ್ ₹5,00,000 ಆಕ್ಸಿಸ್ ಬ್ಯಾಂಕ್…

ಮುಂದೆ ಓದಿ..
ಸುದ್ದಿ 

ಉದ್ಯೋಗ ಭರವಸೆಯ ಹೆಸರಿನಲ್ಲಿ ಹಣ ವಸೂಲಿ: ನಾಲ್ವರ ವಿರುದ್ಧ ದೂರು ದಾಖಲು.

Taluknewsmedia.com

Taluknewsmedia.comಉದ್ಯೋಗ ನೀಡುವುದಾಗಿ ಭರವಸೆ ನೀಡಿ ಮಹಿಳೆಯಿಂದ ಹಣ ವಸೂಲಿ ಮಾಡಿ, ನಂತರ ಮೋಸ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಟರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಟರಾಜ್ ಅವರ ಪತ್ನಿಗೆ ದಿನಾಂಕ 12/06/2025 ರಂದು “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಎಂಬ ಕಂಪನಿಯಿಂದ ವಾಟ್ಸ್‌ಆಪ್ ಮೂಲಕ ಸಂದೇಶವೊಂದು ಬಂದು, ಉದ್ಯೋಗಾವಕಾಶವಿದೆ ಎಂದು ತಿಳಿಸಿ ಮರುದಿನ ಕೋರಮಂಗಲದಲ್ಲಿರುವ ವಿಳಾಸಕ್ಕೆ ಸಂದರ್ಶನಕ್ಕೆ ಬರುವಂತೆ ಸೂಚಿಸಲಾಗಿತ್ತು. ಆ ದಂಪತಿ ಸೂಚಿಸಿದ ವಿಳಾಸಕ್ಕೆ ಹೋಗಿದಾಗ ಅಲ್ಲಿ “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಇಲ್ಲದೇ “INFINOX INFO STARK SERVICE PVT LTD” ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು. ಕಂಪನಿಯ ಎಚ್.ಆರ್ ಕನಿಷ್ಕ ಎಂಬುವವರು ನಟರಾಜ್ ಪತ್ನಿಯ ಸಂದರ್ಶನ ನಡೆಸಿದ್ದು, 15 ದಿನಗಳಲ್ಲಿ 1500 ಫಾರಂಗಳನ್ನು ತುಂಬಬೇಕು, ಇದಕ್ಕಾಗಿ ₹15,000 ವೇತನ ನೀಡಲಾಗುವುದು…

ಮುಂದೆ ಓದಿ..
ಸುದ್ದಿ 

ಪತ್ನಿ ನಾಪತ್ತೆ ಪ್ರಕರಣ: ಪತಿಗೆ ಸ್ನೇಹಿತನ ಮೇಲೆ ಶಂಕೆ…

Taluknewsmedia.com

Taluknewsmedia.comನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪತಿ ಮಂಜುನಾಥ ಬಿನ್ ಮುನಿಯಪ್ಪ (34) ಅವರು ಪೊಲೀಸರ ಬಳಿ ದೂರು ಸಲ್ಲಿಸಿದ್ದಾರೆ. ಮಂಜುನಾಥ ತಮ್ಮ ಪತ್ನಿ ರಾಣಿ ಎಂ (24) ಮತ್ತು 3 ವರ್ಷದ ಮಗ ಯಶ್ ಜೊತೆ ವಾಸವಾಗಿದ್ದು, ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 21 ಜೂನ್ 2025 ರಂದು ಬೆಳಿಗ್ಗೆ 9.00 ಗಂಟೆಗೆ ರಾಣಿ ಎಂ ಅವರು ಕೆಲಸಕ್ಕೆಂದು ಮನೆಯಿಂದ ಹೊರಟಿದ್ದು, ಈವರೆಗೆ ಮನೆಗೆ ಮರಳಿಲ್ಲ. ರಾಣಿಯವರ ನಾಪತ್ತೆ ಸಂಬಂಧಪಟ್ಟಂತೆ ಮಂಜುನಾಥ್ ಸಂಬಂಧಿಕರು, ಸ್ನೇಹಿತರು ಹಾಗೂ ಕೆಲಸದ ಸ್ಥಳಗಳಲ್ಲಿ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ಲಭಿಸಲಿಲ್ಲ. ಇದರಿಂದಾಗಿ ಪತ್ನಿಯ ನಾಪತ್ತೆಗೆ ಆಕಾಶ್ ಎಂಬ ವ್ಯಕ್ತಿಯು ಸಂಬಂಧ ಹೊಂದಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾದ ರಾಣಿ ಎಂ…

ಮುಂದೆ ಓದಿ..
ಸುದ್ದಿ 

ಕಸ್ಟಮರ್ ರಿಟರ್ನ್ ನೆಪದಲ್ಲಿ ಕಂಪನಿಗೆ ಲಕ್ಷಾಂತರ ರೂಪಾಯಿಯ ವಂಚನೆ: ಉದ್ಯೋಗಿ ವಿರುದ್ಧ ದೂರು.

Taluknewsmedia.com

Taluknewsmedia.comಹೆಚ್‌.ಎಸ್‌.ಆರ್ ಲೇಔಟ್‌ನ 24ನೇ ಮುಖ್ಯ ರಸ್ತೆಯಲ್ಲಿರುವ Affolife Retail Pvt. Ltd ಕಂಪನಿಗೆ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ನಕಲಿ ಗ್ರಾಹಕರ ರಿಟರ್ನ್ ವಿನಂತಿಗಳನ್ನು ಕಳುಹಿಸಿ, ಕಂಪನಿಯ ಆಂತರಿಕ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಂಪನಿಯ ನಿರ್ದೇಶಕರಾದ ಅಶುತೋಷ್ ಪಾಂಡೆ ಅವರು ನೀಡಿರುವ ದೂರಿನ ಪ್ರಕಾರ, ನೀತಿನ್ ಕುಮಾರ್ ಎಸ್ ಎಂಬುವವರು ದಿನಾಂಕ 15.01.2025 ರಂದು ಕಸ್ಟಮರ್ ಸಕ್ಸಸ್ ಎಕ್ಸಿಕ್ಯೂಟಿವ್ ಆಗಿ ನೇಮಕವಾಗಿದ್ದರು. ಕಂಪನಿಯು Platinum Rx ಎಂಬ ಮೊಬೈಲ್ ಆಪ್ ಮೂಲಕ ಸೇವೆಗಳನ್ನು ನೀಡುತ್ತಿದ್ದು, ಗ್ರಾಹಕರು ಆರ್ಡರ್ ಮಾಡಿದ ನಂತರ Cashfree ಆಯ್ಕೆಯ ಮೂಲಕ ಪಾವತಿಸುತ್ತಿದ್ದರು. ಆದರೆ, ಆರೋಪಿಯಾದ ನೀತಿನ್ ಕುಮಾರ್ ಎಸ್ ಅವರು ಆಪ್‌ನ ಒಳಗಿನ ವ್ಯವಸ್ಥೆಗಳಲ್ಲಿ 246 ನಕಲಿ ರಿಟರ್ನ್ ವಿನಂತಿಗಳನ್ನು ಕಳುಹಿಸಿ, ಮರುಪಾವತಿಯಾಗಬೇಕಾದ ಹಣವನ್ನು ತನ್ನ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ UPI ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಕೊಂಡಿದ್ದಾರೆ…

ಮುಂದೆ ಓದಿ..
ಸುದ್ದಿ 

ಅಮೆರಿಕಾಗೆ ತೆರಳಿದ್ದವರ ಮನೆಯ ಬಾಗಿಲು ಒಡೆದು ಕಳ್ಳತನ – ಅಪರಿಚಿತರ ಕೈಚಳಕ ?

Taluknewsmedia.com

Taluknewsmedia.comಅಮೆರಿಕಾಗೆ ತೆರಳಿದ್ದವರ ಮನೆಯ ಬಾಗಿಲು ಒಡೆದು ಕಳ್ಳತನ – ಅಪರಿಚಿತರ ಕೈಚಳಕ ? ಹೆಚ್.ಎಸ್.ಆರ್ ಲೇಔಟ್ ಸೆಕ್ಟರ್-1 ರಲ್ಲಿ ಅಪರಿಚಿತರು ಒಂದು ಖಾಲಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ. ಈ ಕುರಿತು ಬಿ.ವಿ. ವೇಣುಗೋಪಾಲ್ ಎಂಬ ನಿವೃತ್ತ ಇಂಜಿನಿಯರ್ ಹೆಚ್.ಎಸ್.ಆರ್ ಲೇಔಟ್‌ನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು 25 ವರ್ಷಗಳಿಂದ ಸೆಕ್ಟರ್-1, 23ನೇ ಮೇನ್, 15ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ವಾಸವಿದ್ದು, ತಮ್ಮ ಮನೆಯ ಹಿಂದೆ ಇರುವ 2127ನೇ ಮನೆ (22ನೇ ‘ಸಿ’ ಮೇನ್) ಯ ಮಾಲೀಕರಾದ ವಿಜಯ್ ಕುಮಾರ್ ಕುಟುಂಬ ಸಮೇತರಾಗಿ ಸುಮಾರು ತಿಂಗಳ ಹಿಂದೆಯೇ ಅಮೆರಿಕಾಗೆ ತೆರಳಿದ್ದಾರೆ. ಬೆಳಗ್ಗೆ ಮನೆಯಿಂದ ಹೊರಬಂದ ವೇಣುಗೋಪಾಲ್ ರವರಿಗೆ ವಿಜಯ್ ಕುಮಾರ್ ಅವರ ಮನೆಯ ಬಾಗಿಲು ತೆರೆದಿರುವುದು ಕಂಡು ಬಂದು ಶಂಕೆ ಮೂಡಿದೆ. ತಕ್ಷಣವೇ ವಿಜಯ್ ಕುಮಾರ್ ರವರಿಗೆ ದೂರವಾಣಿ ಮೂಲಕ…

ಮುಂದೆ ಓದಿ..
ಸುದ್ದಿ 

ಕೆಲಸಕ್ಕೆಂದು ಹೊರಗೆ ಹೋದ 19 ವರ್ಷದ ಯುವತಿ , ಮನೆಗೆ ಮರಳದೇ ನಾಪತ್ತೆ – ಆತಂಕದಲ್ಲಿ ಕುಟುಂಬಸ್ಥರು.

Taluknewsmedia.com

Taluknewsmedia.comನಾಪತ್ತೆಯಾದ ಯುವತಿಯ ಹೆಸರು ಜೀವಿತಾ (19). ಸುಬ್ರಹ್ಮಣಿ ಯವರು ಇಲೆಕ್ಟ್ರಿಷಿಯನ್ ಉದ್ಯೋಗದಲ್ಲಿದ್ದು, ಪತ್ನಿ ಗೀತಾ ಗೃಹಿಣಿಯಾಗಿದ್ದಾರೆ. ಇವರಿಗೆ ಈಶ್ವರಿ, ಜೀವಿತಾ, ವೈದ್ಯನಾದನ್ ಹಾಗೂ ವಾಸುದೇವನ್ ಎಂಬ ನಾಲ್ವರು ಮಕ್ಕಳು. ಜೀವಿತಾ ಸುಮಾರು ಇಪ್ಪತ್ತು ದಿನಗಳ ಹಿಂದೆ ಹೆಚ್‌ಎಸ್‌ಆರ್ ಲೇಔಟ್‌ನ ಪ್ರೋಫೇಷನ್ ಕೂರಿಯರ್ ಆಫೀಸ್‌ನಲ್ಲಿ ಕೆಲಸಕ್ಕೆ ಸೇರಿದಳು. ದಿನಾಂಕ 18.06.2025ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೊರಟ ಜೀವಿತಾ, ನಂತರ ಮನೆಗೆ ಮರಳಿಲ್ಲ. ಅದರ ಬಳಿಕ ಪೋಷಕರು ಜೀವಿತಾಳ ಮೋಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಫೋನ್ ಮನೆಯಲ್ಲಿಯೇ ಬಿಟ್ಟಿದ್ದು ಕಂಡುಬಂದಿದೆ. ನಂತರ ಆಕೆ ಕೆಲಸ ಮಾಡುವ ಕಚೇರಿಗೆ ಕರೆ ಮಾಡಿದಾಗ ಆ ದಿನ ಆಕೆ ಆಫೀಸ್‌ಗೆ ಬಾರದಿರುವುದು ತಿಳಿದು ಬಂದಿದೆ. ಕುಟುಂಬಸ್ಥರು ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಗದ ಕಾರಣ ಇದೀಗ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚಹರೆ…

ಮುಂದೆ ಓದಿ..