ಸುದ್ದಿ 

ಕಾಲೇಜು ವಿದ್ಯಾರ್ಥಿಯ ಲ್ಯಾಪ್‌ಟಾಪ್‌ ಹಾಗೂ ಮೂಲ ದಾಖಲೆಗಳನ್ನು ಕಳ್ಳತನ ಮಾಡಿದ ಘಟನೆ!

Taluknewsmedia.com

Taluknewsmedia.comಬೆಳಗಾವಿ, ಆಗಸ್ಟ್ 6: 2025ಕರ್ನಾಟಕ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನ ಲ್ಯಾಪ್‌ಟಾಪ್ ಹಾಗೂ ಅವನ ಸ್ನೇಹಿತನ ಮೂಲ ದಾಖಲಾತಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ. ಪಿರ್ಯಾದಿದಾರರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದಂತೆ, ಆಗಸ್ಟ್ 2 ರಂದು ರಾತ್ರಿ ಸುಮಾರು 3 ಗಂಟೆಗೆ ಅವರು ತಮ್ಮ ರೂಮಿನಲ್ಲಿ ಕೆಲಸ ಮಾಡಿಕೊಂಡು ಲ್ಯಾಪ್‌ಟಾಪ್‌ನ್ನು ಟೇಬಲ್ ಮೇಲೆ ಇಟ್ಟು ಮಲಗಿದ್ದರು. ಆದರೆ ಬೆಳಗ್ಗೆ 7 ಗಂಟೆಗೆ ಎದ್ದಾಗ ಲ್ಯಾಪ್‌ಟಾಪ್ ಕಾಣೆಯಾಗಿತ್ತು. ರೂಮ್ ಲಾಕ್ ಮಾಡದೆ ಮಲಗಿದ್ದುದರಿಂದ ಯಾರೋ ಕಳ್ಳರು ಪ್ರವೇಶಿಸಿ ಲ್ಯಾಪ್‌ಟಾಪ್ ಹಾಗೂ ಬ್ಯಾಗ್‌ನಲ್ಲಿದ್ದ ಹಲವಾರು ಅತ್ಯಂತ ಮಹತ್ವದ ದಾಖಲೆಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನವಾದ ದಾಖಲೆಗಳಲ್ಲಿ ತ್ರಿಪುರ ರಾಜ್ಯ ಶಿಕ್ಷಣ ಇಲಾಖೆಯಿಂದ ಪಡೆದ 5 ರಿಂದ 12ನೇ ತರಗತಿ ನಿಖರ ಪ್ರಮಾಣಪತ್ರಗಳು, ಶಾಲೆ ಬಿಟ್ಟ ದಾಖಲೆಗಳು, ಎಸ್‌ಸಿ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ, ಪಿಆರ್‌ಟಿ ಪ್ರಮಾಣಪತ್ರ, ಬಿ.ಫಾರ್ಮಸಿ…

ಮುಂದೆ ಓದಿ..
ಸುದ್ದಿ 

ಪಾರ್ಟ್‌ಟೈಮ್ ಕೆಲಸದ ಮೋಸ: ವ್ಯಕ್ತಿಗೆ ₹6.65 ಲಕ್ಷ ನಷ್ಟ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 6: 2025ಪಾರ್ಟ್‌ಟೈಮ್ ಕೆಲಸದ ಆಫರ್ ಅನ್ನು ನಂಬಿ ಟೆಲಿಗ್ರಾಂ ಲಿಂಕ್‌ಗಳ ಮೂಲಕ ಹಣ ಹೂಡಿದ ವ್ಯಕ್ತಿಗೆ ಆನ್‌ಲೈನ್ ಮೋಸಗಾರರು ₹6.65 ಲಕ್ಷವರೆಗೆ ನಷ್ಟಮಾಡಿದ ಘಟನೆ ಬೆಳಕಿಗೆ ಬಂದಿದೆ. ಇಂದೂಷ ಅವರು ಜುಲೈ 28 ರಂದು +91-6265876135 ಎಂಬ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದ್ದು, ಪಾರ್ಟ್‌ಟೈಮ್ ಕೆಲಸವಿದೆ ಎಂದು ತಿಳಿಸಲಾಗಿತ್ತು. ನಂತರ ಅವರು ಟೆಲಿಗ್ರಾಂ ಗ್ರೂಪಿಗೆ ಸೇರಿಕೊಂಡು, ಒಂದು ವೆಬ್‌ಸೈಟ್ (https://szqqs.cc) ಮೂಲಕ ತಮ್ಮ ವಿವರಗಳನ್ನು ನೋಂದಾಯಿಸಿದ್ದಾರೆ. ಮೋಸಗಾರರು “ಬಾಸ್” ಎಂದು ಪರಿಚಯಿಸಿಕೊಂಡು, ಹಂತ ಹಂತವಾಗಿ ಟಾಸ್ಕ್‌ಗಳ ಹೆಸರಿನಲ್ಲಿ ಹಣವನ್ನು ಇನ್ವೆಸ್ಟ್ ಮಾಡಲು ಸೂಚಿಸಿದ್ದರು. ದೂರಿದಾರರು ಕೊಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ ವಿವಿಧ ಖಾತೆಗಳಿಗೆ ಒಟ್ಟು ₹6,65,000/- ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಈ ಹಣದ ಪ್ರತಿಫಲವಾಗಿ ಯಾವುದೇ ಹಣವನ್ನು ಅವರು ವಾಪಸ್ ಪಡೆಯದೇ, ಮೋಸದಲ್ಲಿ ಸಿಲುಕಿರುವುದಾಗಿ ದೂರಿದ್ದಾರೆ. ತನಿಖೆ ಆರಂಭಿಸಿದ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಪತ್ತೆ…

ಮುಂದೆ ಓದಿ..
ಸುದ್ದಿ 

ಐಫೋನ್ ಕದ್ದೊಯ್ದು ₹30,000 ಹಗರಣ: ಆಟೋಚಾಲಕನಿಗೆ ಹುಡುಕಾಟ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್.6: 2025ನಗರದಲ್ಲಿ ಆಟೋದಲ್ಲಿ ಸಂಚರಿಸುತ್ತಿದ್ದ ವೇಳೆ ಯುವಕನೊಬ್ಬ ತನ್ನ ಮೊಬೈಲ್‌ ಕಳೆದುಕೊಂಡು, ನಂತರ ಬ್ಯಾಂಕ್ ಖಾತೆಯಿಂದ ₹30,000 ಹಣ ಕಳಿದು ಹೋಗಿರುವ ದೂರು ವರದಿಯಾಗಿದೆ. ವೆಂಕಟೇಶ್ ಮಂಜುನಾಥ್ ರಾವ್ ಅವರು ಆಗಸ್ಟ್ 3ರಂದು ರಾತ್ರಿ ಸುಮಾರು 10:15ರ ಸಮಯದಲ್ಲಿ ರಾಜಾಜಿನಗರದ ನವರಂಗ ಥಿಯೇಟರ್ ಬಳಿ ಆಟೋದಲ್ಲಿ ಸಹಕಾರ ನಗರಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಆಟೋಚಾಲಕ ಮಧ್ಯದಲ್ಲಿ “ಇಲ್ಲಿ ಇಳಿಯಿರಿ” ಎಂದು ಹೇಳಿ ದೂರುದಾರರನ್ನು ರಸ್ತೆಯಲ್ಲಿ ಇಳಿಸಲಾಯಿತು. ವೆಂಕಟೇಶ್ ಮಂಜುನಾಥ್ ರಾವ್ ಅವರು ಆಟೋ ಪೇಮೆಂಟ್ ₹150 ಮಾಡಲು ತಮ್ಮ ಐಫೋನ್ 11 ಉಪಯೋಗಿಸುತ್ತಿದ್ದ ಸಂದರ್ಭದಲ್ಲಿ, ಆಟೋಚಾಲಕ ಆ ಮೊಬೈಲ್ ಅನ್ನು ಅಕಸ್ಮಾತ್ ಕಿತ್ತುಕೊಂಡು ಪರಾರಿಯಾದ. ಅದಕ್ಕೂ ಮಿಶ್ರವಾಗಿ, ದೂರುದಾರರು ಮುಂದಿನ ದಿನದಂದು ಬ್ಯಾಂಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆ ಕಳ್ಳನು ಅವರ ಮೊಬೈಲ್ ಉಪಯೋಗಿಸಿ ₹30,000 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾನೆ ಎಂಬುದು ಗೊತ್ತಾಗಿದೆ.…

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂನಲ್ಲಿನ ಪಾರ್ಟ್ ಟೈಂ ಜಾಬ್ ನಂಬಿ 3.74 ಲಕ್ಷ ರೂ. ನಷ್ಟಪಟ್ಟು ವಂಚನೆಗೆ ಒಳಗಾದ ಯುವಕ!

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 6: 2025ಪಾರ್ಟ್ ಟೈಂ ಕೆಲಸದ ನೆಪದಲ್ಲಿ ಹಣ ಗಳಿಸಬಹುದು ಎಂಬ ಆಶೆಯಿಂದ ಟೆಲಿಗ್ರಾಂನಲ್ಲಿ ಕಳುಹಿಸಲಾದ ಸಂದೇಶವೊಂದನ್ನು ನಂಬಿದ ಯುವಕನು ರೂ. 3.74 ಲಕ್ಷವನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ರಂಚಿತ ಅವರು ನೀಡಿದ ಮಾಹಿತಿಯ ಪ್ರಕಾರ, ಜುಲೈ 31ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬರು “earning experts” ಎಂಬ ಗ್ರೂಪ್‌ನ ಲಿಂಕ್ ಕಳುಹಿಸಿ, ಯೂಟ್ಯೂಬ್ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್‌ ಮಾಡುವುದರಿಂದ ಹಣ ಗಳಿಸಬಹುದು ಎಂದು ನಂಬಿಸಿದ್ದಾರೆ. ಆರಂಭದಲ್ಲಿ ₹1300 ಹಣವನ್ನು ಖಾತೆಗೆ ಹಾಕಿ ನಂಬಿಕೆ ಮೂಡಿಸಿದ್ದ ಆ ವ್ಯಕ್ತಿಗಳು, ನಂತರ ಹೆಚ್ಚಿನ ಆದಾಯಕ್ಕಾಗಿ ಡೆಪಾಸಿಟ್ ಮಾಡುವಂತೆ ಒತ್ತಾಯಿಸಿದ್ದಾರೆ. ರಂಜಿತಾ ಅವರು ನಂಬಿ mdeshan6@ybl, debbarma.23@superyes, ಮತ್ತು ಹಲವಾರು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಮೂಲಕ ಒಟ್ಟು ₹3,74,000 ನಷ್ಟವಾಗಿದೆ. ಬಳಿಕ ಇದು ಒಂದು ಆಯೋಜಿತ ಹಣಕಾಸು ಮೋಸವಾಗಿದ್ದು ರಂಜಿತ ಅವರು ಕೊಡುಗೆಹಳ್ಳಿ ಪೊಲೀಸ್…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹ್ಯಾಕಿಂಗ್ ಮೂಲಕ ₹99,980 ಕಳವು – ಬೆಂಗಳೂರು ನಿವಾಸಿಯಿಂದ ಹಣ ದೋಚಿದ ಸೈಬರ್ ಅಪರಾಧಿಗಳು

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್. 6. 2025 ನಗರದ ರಾಘವೇಂದ್ರಸ್ವಾಮಿ ಲೇಔಟ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಆನ್‌ಲೈನ್ ಆಪ್ ಹ್ಯಾಕ್‌ನಿಂದಾಗಿ ₹99,980 ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಕಳವಾಗಿರುವುದನ್ನು ತಿಳಿದ ತಕ್ಷಣವೇ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ವಿಜೇಂದ್ರ ಪ್ರಕಾರ, ದಿನಾಂಕ 01-07-2025 ರಂದು ತಮ್ಮ ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ 5202500101517301 ಪರಿಶೀಲನೆ ನಡೆಸಿದಾಗ ₹99,980 ಮೊತ್ತವು ಕಳೆಯಲ್ಪಟ್ಟಿರುವುದು ಬೆಳಕಿಗೆ ಬಂದಿದೆ. ನಂತರದ ಪರಿಶೀಲನೆಯಲ್ಲಿ, ಈ ಹಣವನ್ನು UPI ID: 9707508485@ybl (ಹೆಸರು: ainuddinali) ಗೆ ವರ್ಗಾಯಿಸಲಾಗಿದೆಯೆಂದು ತಿಳಿದುಬಂದಿದೆ. ಪೀಡಿತರು ತಮ್ಮ ಮೊಬೈಲ್ ಆಪ್ ಹ್ಯಾಕ್ ಆಗಿದ್ದು, ಅನಧಿಕೃತ ಗ್ರೂಪ್‌ಗಳ ಮೂಲಕ ಸಂದೇಶ ಬಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳು ದುರಪಯೋಗಕ್ಕೀಡಾಗಿ, ಆನ್‌ಲೈನ್ ಮೂಲಕ ಹಣ ಕಸಿದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ,…

ಮುಂದೆ ಓದಿ..
ಸುದ್ದಿ 

13 ವರ್ಷದ ಬಾಲಕಿ ಸಲೋಮಿ ಕಾಣೆಯಾಗಿದ್ದಾರೆ

Taluknewsmedia.com

Taluknewsmedia.comಬೆಂಗಳೂರು,ಆಗಸ್ಟ್ 5: ಕೆ.ಜಿ.ಹಳ್ಳಿ ಪ್ರದೇಶದಲ್ಲಿ 13 ವರ್ಷದ ಬಾಲಕಿ ಸಲೋಮಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ತಾಯಿ ಶ್ರೀಮತಿ ಶಾಂತಿ ಅವರು ಠಾಣೆಗೆ ದೂರು ನೀಡಿದ್ದಾರೆ. ದೂರಿನ ವಿವರದ ಪ್ರಕಾರ, ಸಲೋಮಿ ಕೆ.ಜಿ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಿನಾಂಕ 02-08-2025 ರಂದು ಸಂಜೆ 7:30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದ ಅವರು ಈವರೆಗೆ ಮನೆಗೆ ಮರಳಿಲ್ಲ. ಶ್ರೀಮತಿ ಶಾಂತಿ ಅವರು ತಮ್ಮ ಮಗಳನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪೋಲಿಸಠಾಣೆಗೆ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಲೋಮಿಯ ಹಾವಭಾವನೆ, ಉಡುಪುಗಳ ವಿವರ ಹಾಗೂ ಕೊನೆಯ ಬಾರಿ ಕಂಡುಬಂದ ಸ್ಥಳದ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿಂದೆ ಮನೆಯಿಂದ ಈ ರೀತಿ ಹೋಗಿರುವ ಸಂದರ್ಭಗಳು…

ಮುಂದೆ ಓದಿ..
ಸುದ್ದಿ 

ಜಮೀನಿನ ಕಬಳಿಕೆ, ನಕಲಿ ದಾಖಲೆ, ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪ – ಆನೇಕಲ್ ತಾಲ್ಲೂಕಿನಲ್ಲಿ ಗಂಭೀರ ಆರೋಪ

Taluknewsmedia.com

Taluknewsmedia.comಆನೇಕಲ್, 5 ಜುಲೈ 2025:ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಹಾಲೇನಹಳ್ಳಿ ಗ್ರಾಮದ ನಿವಾಸಿ ಟಿ. ಪಿಳ್ಳಪ್ಪ ಅವರು ದಿನಾಂಕ 04-08-2025 ರಂದು ಮಧ್ಯಾಹ್ನ 2 ಗಂಟೆಗೆ ಆನೇಕಲ್ ಪೊಲೀಸ್ ಠಾಣೆಗೆ ಹಾಜರಾಗಿ ಗಂಭೀರ ಆರೋಪಗಳ ನೊಳಗೊಂಡು ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, ಪಿಳ್ಳಪ್ಪ ಅವರು ಹಾಗೂ ಅವರ ಕುಟುಂಬಕ್ಕೆ ಬಗ್ಗನದೊಡ್ಡಿ ಗ್ರಾಮದ ಹಳೇ ಸರ್ವೆ ನಂ. 96 (ಹೊಸ ಸರ್ವೆ ನಂ. 116 ಮತ್ತು 117) ರಲ್ಲಿರುವ 8 ಎಕರೆ ಜಮೀನು ಆದಿಕರ್ಣಾಟಕ ಜನಾಂಗಕ್ಕೆ ಸೇರಿದ PTCL ಕಾಯ್ದೆ ವ್ಯಾಪ್ತಿಗೆ ಒಳಪಟ್ಟ ಜಮೀನಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಅವರು ಚಂದ್ರಶೇಖರ್.ಸಿ ಎಂಬುವವರಿಗೆ ದಿನಾಂಕ 17-03-2020-21 ರಂದು GPA ಮೂಲಕ ನಂಬಿಕೆ ಇಟ್ಟು ನಿಯೋಜಿಸಿದರೂ, ಅವರು ದಾಖಲೆಗಳನ್ನು ತಪ್ಪಾಗಿ ಉಪಯೋಗಿಸಿದ ಬಗ್ಗೆ ದೂರುದಲ್ಲಿದೆ. ಮೂರು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ, GPA ರದ್ದತಿ ಮಾಡಿ,…

ಮುಂದೆ ಓದಿ..
ಸುದ್ದಿ 

ಸಾಯಿ ಸಿಟಿ ಫೇಸ್-2 ಆಸ್ತಿ ವಂಚನೆ ಪ್ರಕರಣ: ನಿವೇಶನ ಮಾಲಕಿ ನ್ಯಾಯಕ್ಕಾಗಿ ಹೋರಾಟ

Taluknewsmedia.com

Taluknewsmedia.comಆನೇಕಲ್, ಆಗಸ್ಟ್ 5, 2025:ಆನೇಕಲ್ ತಾಲೂಕು, ಕಸಬಾ ಹೋಬಳಿ, ಅಗಸತಿಮ್ಮನಹಳ್ಳಿ ಗ್ರಾಮದ ಸಾಯಿ ಸಿಟಿ ಫೇಸ್-2 ಪ್ರದೇಶದಲ್ಲಿ ಆಸ್ತಿ ವಂಚನೆ ಸಂಬಂಧಿಸಿದ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ನಿವಾಸಿ ಶ್ರೀಮತಿ ಶೃತಿ ಅವರು 2017ರಲ್ಲಿ ಸಾಯಿ ಸಿಟಿ ಫೇಸ್-2 ರಲ್ಲಿ ಹೌಸ್ ನಂಬರ್ 641, ಖಾತೆ ನಂಬರ್ 06, ಅಳತೆ 40×30 ಅಡಿ (ಒಟ್ಟು 1200 ಚದರ ಅಡಿ) ಇದ್ದ ಖಾಲಿ ನಿವೇಶನವನ್ನು ಆರ್. ಪ್ರಭಾಕರ್ ರೆಡ್ಡಿ ಮತ್ತು ಬಿ. ಕೇಶವ ರೆಡ್ಡಿಯಿಂದ ಖರೀದಿಸಿದ್ದರು. ಈ ಖರೀದಿ ಚಾಮರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾಗಿತ್ತು. ನಿವೇಶನ ಖರೀದಿಯ ನಂತರ ಅವರು ತಮ್ಮ ಹೆಸರಿಗೆ ಕಂದಾಯ ಖಾತೆ ತೆರಿದಿದ್ದು, ಎಲ್ಲ ದಾಖಲೆಗಳು ಸಹ ಸುಸ್ಪಷ್ಟವಾಗಿವೆ. ಆದರೆ, 2020 ರಲ್ಲಿ ಕೊರೋನಾ ನಂತರ ಅವರು ಸ್ಥಳಕ್ಕೆ ಹೋಗದೆ ಇದ್ದ ಸಂದರ್ಭದಲ್ಲಿ, 2022ರಲ್ಲಿ ಹೋದಾಗ ನಿವೇಶನವೇ ಅಲ್ಲಿಲ್ಲದೆ ರಸ್ತೆ ಅಗಮ…

ಮುಂದೆ ಓದಿ..
ಸುದ್ದಿ 

ಕ್ಯಾಂಟರ್ ಡ್ರೈವರ್‌ಗೆ ಹಲ್ಲೆ ಮತ್ತು ಕೊಲೆ ಬೆದರಿಕೆ: ಅನೇಕಲ್ ಟೌನ್‌ನಲ್ಲಿ ಎರಡು ಮಂದಿ ಯುವಕರಿಂದ ಹಲ್ಲೆ, ಗಲಾಟೆ

Taluknewsmedia.com

Taluknewsmedia.comಆನೇಕಲ್, ಆಗಸ್ಟ್ 5:ಆನೇಕಲ್ ಟೌನ್ ಪ್ರದೇಶದಲ್ಲಿ ದಿನದ ಬೆಳಗಿನ ಜಾವ ಕ್ಯಾಂಟರ್ ವಾಹನ ಚಾಲಕನಿಗೆ ಎರಡು ಮಂದಿ ಯುವಕರು ಹಲ್ಲೆ ಮಾಡಿ, ಹಣಕ್ಕೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಶ್ರೀ ವೇಣುಮೂರ್ತಿ ಬಿನ್ ಗಂಗಾಧರಯ್ಯ ರವರು ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಪೆಪ್ಪಿ ಕಂಪನಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 3-08-2025ರಂದು ಮಧ್ಯಾಹ್ನ 3:30ರ ಸುಮಾರಿಗೆ ಅವರು ತಮ್ಮ ವಾಹನ (ಕೆಎ-51 ಎಚ್‌-6641)ದಲ್ಲಿ ಬೆಂಗಳೂರು ಮಾರತಳ್ಳಿಯಿಂದ ಆನೇಕಲ್ ಬಳಿಯ ಮಹೇಂದ್ರ ಗೋಡೌನ್ ಕಡೆಗೆ ಫುಡ್ ಸಾಮಗ್ರಿಗಳನ್ನು ಸಾಗಿಸುತ್ತಿದ್ದರು. ಅವರು ಆನೇಕಲ ಟೌನ್‌ನ ಶಿವಾಜಿ ವೃತ್ತದ ಬಳಿ ಬರುವ ವೇಳೆ, ಒಂದು ಮೋಟಾರು ಸೈಕಲ್‌ನಲ್ಲಿ ಬಂದ ಇಬ್ಬರು ಯುವಕರು ಕ್ಯಾಂಟರ್ ಗಾಡಿಗೆ ಅಡ್ಡವಾಗಿ ನಿಲ್ಲಿಸಿ, “ಬೋಳಿ ಮಗನೇ, ಸೂಳೆ ಮಗನೇ” ಎಂಬ ಹಿನ್ನಾಯಿಕ ಶಬ್ದಗಳಿಂದ ನಿಂದನೆ ಮಾಡಿದರು. ನಂತರ ಅವರು ವೇಣುಮೂರ್ತಿಯ ಮುಖಕ್ಕೆ…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಕಾಲೇಜುಗೆ ಹೋದ ಯುವತಿ ನಾಪತ್ತೆ

Taluknewsmedia.com

Taluknewsmedia.comಆನೇಕಲ್, ಆಗಸ್ಟ್ 5:ಕಾಲೇಜಿಗೆ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೋಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಪೋಷಕರು ಆಕೆಯಿಗಾಗಿ ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಸಂಬಂಧ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೂರು ಮಕ್ಕಳ ಪೋಷಕರಾದ , ಶಾಹಿ ಬಾ ಅವರ ತಮ್ಮ ಕೊನೆಯ ಮಗಳಾದ ಸುಮಯ್ಯ ವಹಾಬ್ ಅವರು 04/08/2025 ರಂದು ಬೆಳಗ್ಗೆ 7 ಗಂಟೆಗೆ “ಕಾಲೇಜಿಗೆ ಹೋಗಿ ಸರ್ಟಿಫಿಕೇಟ್ ತರುತ್ತೇನೆ” ಎಂದು ಮನೆಯಿಂದ ಹೊರಟಿದ್ದಾಗಿ ತಿಳಿಸಿದ್ದಾರೆ. ಆದರೆ ಆಕೆ ಮತ್ತೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಸ್ನೇಹಿತರು, ಸಂಬಂಧಿಕರು ಮತ್ತು ಕಾಲೇಜು ಬಳಿ ಹುಡುಕಿದರೂ ಪತ್ತೆಯಾಗಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಧ್ಯಾಹ್ನ 3 ಗಂಟೆಗೆ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿ ಬಗ್ಗೆ ಯಾವುದೇ…

ಮುಂದೆ ಓದಿ..