ಸುದ್ದಿ 

ರಾಮನಗರ: ಪ್ರೇಮ ವಂಚನೆ ಆರೋಪದ ನಡುವೆ ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಬಚ್ಚಿಟ್ಟ ನೋವು

Taluknewsmedia.com

Taluknewsmedia.comರಾಮನಗರ: ಪ್ರೇಮ ವಂಚನೆ ಆರೋಪದ ನಡುವೆ ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಬಚ್ಚಿಟ್ಟ ನೋವು ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ 22 ವರ್ಷದ ವರ್ಷಿಣಿ ಎಂಬ ಯುವತಿ ಬುಧವಾರ ಆತ್ಮಹತ್ಯೆಗೆ ಶರಣಾದ ಘಟನೆ ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎಂ.ಎಸ್‌.ಸಿ ಅಭ್ಯಾಸ ಮಾಡುತ್ತಿದ್ದ ವರ್ಷಿಣಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ಯಾನ್‌ಗೆ ನೇಣು ಬಿಗಿದು ಜೀವ ಬಿಟ್ಟಿದ್ದಾಳೆ. ಡೆತ್ ನೋಟ್‌ನಲ್ಲಿ ಬರೆದಿರುವ ಭಾವನಾತ್ಮಕ ಮಾತುಗಳು ಘಟನಾ ಸ್ಥಳದಿಂದ ಪೊಲೀಸರು ಡೆತ್ ನೋಟ್‌ ಅನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ “ನನ್ನ ಸಾವಿಗೆ ಅಭಿಯೇ ಕಾರಣ… ಅಮ್ಮ, ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ವರ್ಷಿಣಿ ಬರೆದಿರುವುದು ಕುಟುಂಬವನ್ನು ಶೋಕಸಾಗರಕ್ಕೆ ತಳ್ಳಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ ಎಂಬಾತನೊಂದಿಗೆ ಆಕೆಯ ಸಂಬಂಧ ಇದ್ದು, ಆತ ಮಾಡಿದ ವಂಚನೆಯೇ ಆಕೆಯನ್ನು ಆತ್ಮಹತ್ಯೆಗೆ ನೂಕಿದೆ ಎಂಬುದು ಕುಟುಂಬದ ಆರೋಪ. ಪರಿಶೀಲನೆ…

ಮುಂದೆ ಓದಿ..
ಸುದ್ದಿ 

25 ಲಕ್ಷ ರೂ. ಸುಲಿಗೆಗಾಗಿ ನೇಪಾಳಿ ಮೂಲದ ಮನೋಜ್ ತಾಪ್ ಅವರನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್‌ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಸಿಬ್ಬಂದಿ

Taluknewsmedia.com

Taluknewsmedia.com25 ಲಕ್ಷ ರೂ. ಸುಲಿಗೆಗಾಗಿ ನೇಪಾಳಿ ಮೂಲದ ಮನೋಜ್ ತಾಪ್ ಅವರನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್‌ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಸಿಬ್ಬಂದಿ ವಿರುದ್ಧ ತೀವ್ರ ಆರೋಪ ಕೇಳಿಬಂದಿದ್ದು, ಈ ಘಟನೆ ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಯಲಹಂಕದ ವಿನಾಯಕನಗರದಲ್ಲಿ ಡಿಸೆಂಬರ್‌ 5ರಂದು ರಾತ್ರಿ ಸುಮಾರು 10.30ರ ವೇಳೆಗೆ ನಾಲ್ವರು ಅಪರಿಚಿತರು ಮನೋಜ್ ಅವರ ಮನೆಗೆ ನುಗ್ಗಿ, ರೌಡಿಗಳ ಸಹಾಯದಿಂದ ಅವರಿಗೆ ಅಪಹರಣೆ ಮಾಡಿದ್ದಾರೆ ಎನ್ನಲಾಗಿದೆ. ಸುಲಿಗೆ ಉದ್ದೇಶದಿಂದ 25 ಲಕ್ಷ ರೂ. ಒತ್ತಾಯಿಸಲಾಗಿತ್ತು ಎಂದು ಮನೋಜ್ ಅವರ ಪತ್ನಿ ಲಕ್ಷ್ಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರೇ ಕಿಡ್ನಾಪ್‌ನಲ್ಲಿ ಭಾಗವೆ? ಅಪಹರಣದಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳು ಶಿವಶಂಕರ್ ಮತ್ತು ಕಾಂತರಾಜ್ ಸೇರಿದಂತೆ ಮತ್ತೊಬ್ಬ ಪೊಲೀಸರು ನೇರವಾಗಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ರೆಡ್‌ ಸ್ಯಾಂಟ್ರೋ ಕಾರಿನಲ್ಲಿ ಮನೋಜ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ ದೃಶ್ಯಗಳು…

ಮುಂದೆ ಓದಿ..
ಸುದ್ದಿ 

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ – ಸಿನಿಮೀಯ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು

Taluknewsmedia.com

Taluknewsmedia.comಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ – ಸಿನಿಮೀಯ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಉದ್ಯಮಿ ಲೋಕೇಶ್ ಅವರನ್ನು ಹಣಕ್ಕಾಗಿ ಅಪಹರಿಸಿದ ಘಟನೆ ತಡರಾತ್ರಿ ದೊಡ್ಡ ಸಂಚಲನ ಮೂಡಿಸಿತು. ಆದರೆ ಕೇವಲ ನಾಲ್ಕು ಗಂಟೆಗಳೊಳಗೇ ಪ್ರಕರಣವನ್ನು ಭೇದಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಚಾಕಚಕ್ಯತೆ ಮೆರೆದಿದ್ದಾರೆ. ವಿಜಯನಗರ ಮೂರನೇ ಹಂತದಲ್ಲಿ ವಾಸಿಸುವ ಲೋಕೇಶ್, ಶುಕ್ರವಾರ ರಾತ್ರಿ ಹೆರಿಟೇಜ್ ಕ್ಲಬ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಟಾಟಾ ಸುಮೋ ಕಾರಿನಲ್ಲಿ ಬಂದ ಐವರು ಯುವಕರು ಅವರನ್ನು ಬಲವಂತವಾಗಿ ಕರೆದುಕೊಂಡು ಹೋದರು. ಅಪಹರಣದ ಬಳಿಕ ಲೋಕೇಶ್ ಅವರ ಮೊಬೈಲ್ ಫೋನ್ ಬಳಸಿ ಅವರ ಪತ್ನಿಗೆ ಕರೆ ಮಾಡಿದ ಆರೋಪಿಗಳು, ₹30 ಲಕ್ಷ ಹಣ ಬೇಡಿಕೆ ಇಟ್ಟಿದ್ದರು. ಗಾಬರಿಗೊಂಡ ಲೋಕೇಶ್ ಅವರ ಪತ್ನಿ ತಕ್ಷಣವೇ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಮಾಹಿತಿ ಲಭ್ಯವಾದ ಕೂಡಲೇ ಪೊಲೀಸ್…

ಮುಂದೆ ಓದಿ..
ಸುದ್ದಿ 

ಬಿಡಿಸಿಸಿ ಬ್ಯಾಂಕ್‌ ಚುನಾವಣೆ: 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೇಲುಗೈ – ಡಿಕೆ ಸುರೇಶ್ ಸಂತೋಷ ವ್ಯಕ್ತಪಡಿಸಿದರು…

Taluknewsmedia.com

Taluknewsmedia.comಬಿಡಿಸಿಸಿ ಬ್ಯಾಂಕ್‌ ಚುನಾವಣೆ: 15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೇಲುಗೈ – ಡಿಕೆ ಸುರೇಶ್ ಸಂತೋಷ ವ್ಯಕ್ತಪಡಿಸಿದರು… ಬೆಂಗಳೂರು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ (ಬಿಡಿಸಿಸಿ ಬ್ಯಾಂಕ್‌) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಕಾಂಗ್ರೆಸ್‌ ಪರ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ – ಕಾಂಗ್ರೆಸ್ ಕೈಬಲ… ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಮುನ್ನಡೆ ಸಾಧಿಸಿ ಜಯಗಳಿಸಿದ್ದಾರೆ. ಬೆಂಗಳೂರಿನ ಉತ್ತರ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪ್ರಾಬಲ್ಯ ಹಿರಿದಾಗಿದ್ದು, ಪಕ್ಷದ ಸಂಘಟನಾ ಶಕ್ತಿ ಹಾಗೂ ಮೈತ್ರಿ ಬಲ ಇಲ್ಲಿ ಸ್ಪಷ್ಟವಾಗಿದೆ. ಎಸ್.ಟಿ. ಸೋಮಶೇಖರ್ ಬೆಂಬಲ ಕಾಂಗ್ರೆಸ್‌ಗೆ ಬಲವರ್ಧನೆ?… ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದುದು, ಪಕ್ಷದ…

ಮುಂದೆ ಓದಿ..
ಸುದ್ದಿ 

ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಕಿರುಕುಳ – ಅಂಗಡಿ ಮಾಲೀಕನಿಗೆ ಪೊಲೀಸರು ಪೋಕೊ ಕೇಸು ದಾಖಲಿಸಿ ಬಂಧನ

Taluknewsmedia.com

Taluknewsmedia.comಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಕಿರುಕುಳ – ಅಂಗಡಿ ಮಾಲೀಕನಿಗೆ ಪೊಲೀಸರು ಪೋಕೊ ಕೇಸು ದಾಖಲಿಸಿ ಬಂಧನ ಸುರತ್ಕಲ್: ಅಪ್ರಾಪ್ತ ಬಾಲಕನ ಮೇಲೆ ಅಶ್ಲೀಲ ಕೃತ್ಯ ಎಸಗಿದ ಆರೋಪದ ಮೇಲೆ ಸುರತ್ಕಲ್ ಪೊಲೀಸರು ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿ ಕಾರ್ಯನಿರ್ವಹಿಸುತ್ತಿರುವ ಹನಿ ಫ್ಯಾಷನ್ ಶಾಪ್ ಮತ್ತು ಜನರಲ್ ಸ್ಟೋರ್ ಮಾಲಕ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ವಶಕ್ಕೆ ಪಡೆದು ಪೋಕೊ ನಿಯಮಾವಳಿಗಳಡಿ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿಯ ಪ್ರಕಾರ, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಶನಿವಾರ ಚಾಕೊಲೇಟ್ ಖರೀದಿಸಲು ಅಂಗಡಿಗೆ ಬಂದಿದ್ದ ವೇಳೆ, ಆರೋಪಿ ಅಂಗಡಿಯ ಹಿಂಭಾಗದ ಕೋಣೆಗೆ ಕರೆದುಕೊಂಡು ಹೋಗಿ, ಕೈ–ಕಾಲಿಗೆ ಹಗ್ಗ ಬಿಗಿದು, ಲೈಂಗಿಕ ಕಿರುಕುಳ ನೀಡಿದರೆಂದು ಹೇಳಲಾಗಿದೆ. ಘಟನೆಯಿಂದ ಬೆಚಗಿದ ಬಾಲಕ ಮನೆಯವರಿಗೆ ವಿಷಯ ತಿಳಿಸಿದ್ದರಿಂದ, ಬಾಲಕನ ತಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರು ಸ್ವೀಕರಿಸಿದ ಪೊಲೀಸರು ಸೆಕ್ಷನ್ 351(2), 127(2), 2.2.2…

ಮುಂದೆ ಓದಿ..
ಸುದ್ದಿ 

ಹೊಂದಿಸಿ ಬರೆಯಿರಿ.. ನಿರ್ದೇಶಕರಿಂದ ಮತ್ತೊಂದು ಭಾವನಾತ್ಮಕ ಪಯಣ: ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಪ್ರಮುಖ ಹೈಲೈಟ್ಸ್!

Taluknewsmedia.com

Taluknewsmedia.com‘ಹೊಂದಿಸಿ ಬರೆಯಿರಿ’ ನಿರ್ದೇಶಕರಿಂದ ಮತ್ತೊಂದು ಭಾವನಾತ್ಮಕ ಪಯಣ: ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಪ್ರಮುಖ ಹೈಲೈಟ್ಸ್! ‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಬೇಕು ಎಂಬ ಸುಂದರ ಸಂದೇಶವನ್ನು ನೀಡಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಇದೀಗ ಮತ್ತೊಂದು ಭಾವನಾತ್ಮಕ ಕಥೆಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಅವರ ಹೊಸ ಚಿತ್ರ ‘ತೀರ್ಥರೂಪ ತಂದೆಯವರಿಗೆ’. ಆದರೆ, ನಾವು ಗೊತ್ತಿಲ್ಲದೇ ಮಾಡುವ ಸಣ್ಣಪುಟ್ಟ ತಪ್ಪುಗಳು ಕುಟುಂಬದಲ್ಲಿ ಎಂತಹ ದೊಡ್ಡ ಬಿರುಗಾಳಿ ಎಬ್ಬಿಸಬಹುದು? ಇದೇ ಸೂಕ್ಷ್ಮ ಎಳೆಯನ್ನು ಹಿಡಿದು ನಿರ್ದೇಶಕರು ‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ, ಅವುಗಳಲ್ಲಿ ಐದು ಪ್ರಮುಖ ಅಂಶಗಳು ಇಲ್ಲಿವೆ. 90ರ ದಶಕದ ತಾರೆಯೊಬ್ಬರ ಭರ್ಜರಿ ಪುನರಾಗಮನ.. ‘ಹಾಲುಂಡ ತವರು’ ಸೇರಿದಂತೆ 90ರ ದಶಕದಲ್ಲಿ ಅನೇಕ ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ಹಿರಿಯ ನಟಿ ಸಿತಾರಾ, ಬಹಳ ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ…

ಮುಂದೆ ಓದಿ..
ಸುದ್ದಿ 

ಹೂವಿನಹಿಪ್ಪರಗಿ : ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಒಂದು ವರ್ಷ – ಡಿ.10ರಂದು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ

Taluknewsmedia.com

Taluknewsmedia.comಹೂವಿನಹಿಪ್ಪರಗಿ : ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಒಂದು ವರ್ಷ – ಡಿ.10ರಂದು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ಬೆಳಗಾವಿಯ ಸುವರ್ಣಸೌಧದ ಮುಂದೆ ಕಳೆದ ವರ್ಷ ನಡೆದಿದ್ದ 2ಎ ಮೀಸಲಾತಿ ಬೇಡಿಕೆ ಹೋರಾಟದ ವೇಳೆ ಪಂಚಮಸಾಲಿ ಲಿಂಗಾಯತ ಸಮುದಾಯದ ಕಾರ್ಯಕರ್ತರ ಮೇಲೆ ನಡೆದಿದ್ದ ಲಾಠಿಚಾರ್ಜ್ ಘಟನೆಗೆ ಈಗ ಸರಾಗಿ ಒಂದು ವರ್ಷ ಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ, ಡಿಸೆಂಬರ್ 10 ರಂದು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಪತ್ರಕರ್ತರಿಗೆ ಅವರು ಮಾತನಾಡುವಾಗ, “ಅಂದು ಗಾಂಧಿಭವನದಿಂದ ಸುವರ್ಣಸೌಧದವರೆಗೆ ಮೌನ ರ್ಯಾಲಿ ನಡೆಸುವ ನಿರ್ಧಾರ ಕೈಗೊಂಡಿದ್ದೇವೆ. ಬಸವನ ಬಾಗೇವಾಡಿ ಮತ್ತು ವಿಜಯಪುರ ಪ್ರದೇಶದ ಪಂಚಮಸಾಲಿ ಸಮುದಾಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಬೇಕು”…

ಮುಂದೆ ಓದಿ..
ಸುದ್ದಿ 

ದಾಂಡೇಲಿ: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ – ಕಸಾಪ ಅಜೀವ ಸದಸ್ಯರಿಂದ ತೀವ್ರ ಆಕ್ಷೇಪ

Taluknewsmedia.com

Taluknewsmedia.comದಾಂಡೇಲಿ: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ – ಕಸಾಪ ಅಜೀವ ಸದಸ್ಯರಿಂದ ತೀವ್ರ ಆಕ್ಷೇಪ ಉತ್ತರ ಕನ್ನಡ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಕ್ಕೆ ಸಮ್ಮೇಳನ ನಡೆಸಲು ನೀಡಿರುವ ಅನುಮತಿಯ ವಿರುದ್ಧ ಕಸಾಪದ ಅಜೀವ ಸದಸ್ಯರಿಂದ ಜಿಲ್ಲಾಧಿಕಾರಿ ಹಾಗೂ ಕಸಾಪ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಗೆ ಗುರುವಾರ ಲಿಖಿತ ವಿರೋಧ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಮೂರು ತಿಂಗಳ ಅವಧಿಗೆ ಕಸಾಪದ ಆಡಳಿತ ಜವಾಬ್ದಾರಿಯನ್ನು ಸರ್ಕಾರದ ಕಾರ್ಯದರ್ಶಿ ಗಾಯತ್ರಿ ಅವರಿಗೆ ನೀಡಿದ ಕೆಲವೇ ದಿನಗಳಲ್ಲಿ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ ನೀಡಿರುವುದೇನು ಸಮಂಜಸ? ಎಂದು ಅಕ್ರಂ ಖಾನ್, ಆರ್.ವಿ. ಗಡೆಪ್ಪನವರ್ ಸೇರಿದಂತೆ ಅಜೀವ ಸದಸ್ಯರು ಪ್ರಶ್ನಿಸಿದ್ದಾರೆ. ವಂತಿಗೆ ಸಂಗ್ರಹ ನಿಲ್ಲಿಸಬೇಕು – ಮನವಿ ಮನವಿಯಲ್ಲಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬೊಮ್ಮಯ್ಯ ವಾಸರೆ ಉದ್ಯಮಿಗಳು, ವ್ಯಾಪಾರಿಗಳು, ಅರಣ್ಯ ಹಾಗೂ ಅಬಕಾರಿ ಇಲಾಖೆಗಳ ಕೆಲವು ಅಧಿಕಾರಿಗಳಿಂದ ದೊಡ್ಡ ಮೊತ್ತದ ವಂತಿಗೆ ಹಣ…

ಮುಂದೆ ಓದಿ..
ಸುದ್ದಿ 

ಸಿಎಂ ಕಾರ್ಯಕ್ರಮಕ್ಕೆ ಹಣ ವಸೂಲಿ ಆರೋಪ – ಗೋಪಾಲಸ್ವಾಮಿ ತೀವ್ರ ಪ್ರತಿಕ್ರಿಯೆ, ರೇವಣ್ಣ ಹೇಳಿಕೆಗೆ ಕಟು ಟೀಕೆ..

Taluknewsmedia.com

Taluknewsmedia.comಸಿಎಂ ಕಾರ್ಯಕ್ರಮಕ್ಕೆ ಹಣ ವಸೂಲಿ ಆರೋಪ – ಗೋಪಾಲಸ್ವಾಮಿ ತೀವ್ರ ಪ್ರತಿಕ್ರಿಯೆ, ರೇವಣ್ಣ ಹೇಳಿಕೆಗೆ ಕಟು ಟೀಕೆ.. ಹಾಸನ: ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಮೇಲೆ ನಾಲ್ಕು ಕೋಟಿಯಷ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆರೋಪ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಈ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಸ್ವಾಮಿ,“ಯಾವುದೇ ಆರೋಪ ಮಾಡೋದಕ್ಕೂ ಮೊದಲು ಲೆಕ್ಕಪತ್ರ ಮತ್ತು ದಾಖಲೆ ಹೊಂದಿರಬೇಕು. ನಾಲ್ಕು ಕೋಟಿಯಷ್ಟು ದೊಡ್ಡ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ಹೇಳುವವರು — ಯಾರು ಹಣ ನೀಡಿದ್ದಾರೆ? ಎಲ್ಲಿ ವಸೂಲಿ ನಡೆದಿದೆ? ಇದರ ದೃಢವಾದ ಸಾಕ್ಷಿ ಇದ್ದರೆ ತೋರಿಸಲಿ,” ಎಂದು ಪ್ರಶ್ನೆ ಮಾಡಿದರು. ತಮ್ಮ ಪ್ರತಿಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸಿದ ಅವರು, “ಇಂತಹ ಮಾತುಗಳು ಗಾಳಿಯಲ್ಲಿ ಗುಂಡು ಹಾರಿಸುವಂತದ್ದು. ರಾಜಕೀಯ…

ಮುಂದೆ ಓದಿ..
ಸುದ್ದಿ 

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಪೊಲೀಸ್ ಸಮನ್ಸ್

Taluknewsmedia.com

Taluknewsmedia.comನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಪೊಲೀಸ್ ಸಮನ್ಸ್ ನ್ಯಾಷನಲ್ ಹೆರಾಲ್ಡ್ ವಿವಾದ ಇನ್ನೊಮ್ಮೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರಿಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ಶಾಖೆಯಿಂದ ನೋಟಿಸ್ ಜಾರಿಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ನವೆಂಬರ್ 29 ರಂದು ನೀಡಲಾದ ನೋಟಿಸ್ ಪ್ರಕಾರ, ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಕುಮಾರ್ ಅವರು ಮಹತ್ವದ ದಾಖಲೆಗಳನ್ನು ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆ ಇದು. ಆದ್ದರಿಂದ ಡಿಸೆಂಬರ್ 19ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅಥವಾ ಬೇಡಿಕೆ ಮಾಡಿದ ಹಣಕಾಸು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ತನಿಖಾ ತಂಡವು ಶಿವಕುಮಾರ್ ಅವರ ವೈಯಕ್ತಿಕ, ರಾಜಕೀಯ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗೆ…

ಮುಂದೆ ಓದಿ..