ಸುದ್ದಿ 

ಯಲಹಂಕದಲ್ಲಿ ವಿದೇಶಿಗರ ಅಕ್ರಮ ವಾಸ: ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ

ಬೆಂಗಳೂರು, ಜುಲೈ 3 2025: ಯಲಹಂಕ ಉಪನಗರದಲ್ಲಿ ಎರಡು ವಿದೇಶಿಗರು ಯಾವುದೇ ಮಾನ್ಯ ವೀಸಾ ಅಥವಾ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಿರುವ ಪ್ರಕರಣ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರು ಈ ಪ್ರಕರಣದಲ್ಲಿ ವಿದೇಶಿಗರೊಂದಿಗೆ ಆಶ್ರಯ ನೀಡಿದ ಮನೆ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಹಿಳಾ ಪೊಲೀಸರಾದ ಲಕ್ಷ್ಮಿಬಾಯಿ ಮತ್ತು ಸಿಬ್ಬಂದಿಯ ಸದಸ್ಯರು 2025ರ ಮೇ 16 ರಂದು ಮಧ್ಯಾಹ್ನ 12:15 ಗಂಟೆಗೆ, ಭದ್ರತಾ ಮಾಹಿತಿಯ ಮೇರೆಗೆ ಯಲಹಂಕದ ಮನೆಯೊಂದರಲ್ಲಿ ದಾಳಿ ನಡೆಸಿದರು. ಈ ವೇಳೆ ಗಿಣಿ ಗಣರಾಜ್ಯ (République de Guinée) ದೇಶದ MOUSSA CAMARA (ಪಾಸ್‌ಪೋರ್ಟ್ ಸಂಖ್ಯೆ: 000589734) ಮತ್ತು ನೈಜೀರಿಯಾದ ROSEMARY OBEHI ELEGAUSE (ಪಾಸ್‌ಪೋರ್ಟ್ ಸಂಖ್ಯೆ: B02408181) ಎಂಬವರು ಆ ಮನೆಯಲ್ಲಿದ್ದು, ಅಕ್ರಮವಾಗಿ ವಾಸಿಸುತ್ತಿರುವುದು ದೃಢಪಟ್ಟಿತು. ಅವರ ವೀಸಾ ಹಾಗೂ ಭಾರತದಲ್ಲಿ ವಾಸಿಸಲು ಅನುಮತಿ ನೀಡುವ ಯಾವುದೇ ದಾಖಲೆಗಳನ್ನು ಅವರು ಸಲ್ಲಿಸಲು…

ಮುಂದೆ ಓದಿ..
ಸುದ್ದಿ 

ಕಾಲೇಜುಹೋಗಿದ ಹುಡುಗ್ತಿ ನಾಪತ್ತೆ: ಮಂಜುಳ ಅವರಿಂದ ಪೊಲೀಸರಿಗೆ ದೂರು

ಬೆಂಗಳೂರು, ಜುಲೈ 3 2025: ತಿರುಮೇನಹಳ್ಳಿಯ ಕರ್ನಾಟಕ ಕಾಲೇಜಿನಲ್ಲಿ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯಾದ 19 ವರ್ಷದ ಕು. ಲಿಖಿತಾ ಎಂ, ಜೂನ್ 25ರಂದು ಬೆಳಗ್ಗೆ 8:30ರ ಸುಮಾರಿಗೆ “ಕಾಲೇಜಿಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ಅದಾದ ಬಳಿಕ ಮನೆಗೆ ವಾಪಸಾಗಿಲ್ಲ. ಲಿಖಿತಾ ತಾಯಿ ನೀಡಿರುವ ದೂರಿನಂತೆ, ಅವರು ಮೂವರು ಮಕ್ಕಳೊಂದಿಗೆ ವಾಸವಿದ್ದು, ಹೌಸ್ಕೀಪಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಮಗಳು ದಿನವೂ ಕಾಲೇಜು ಹೋಗುತ್ತಿದ್ದಳು. ಆದರೆ ಈ ಬಾರಿ ಸಂಜೆಯಾದರೂ ವಾಪಸ್ ಬರದೆ ಕಾಣೆಯಾಗಿರುವ ಹಿನ್ನೆಲೆ, ಮನೆಯವರು ಎಲ್ಲ ಕಡೆ ಹುಡುಕಿ ವಿಚಾರಿಸಿದರೂ, ಯಾವ ರೀತಿಯ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದ್ದಾರೆ. ಲಿಖಿತಾ ಎಂ ವಿವರಣೆ: ವಯಸ್ಸು: 19 ಎತ್ತರ: 5 ಅಡಿ 2 ಇಂಚು ಮೈಬಣ್ಣ: ಗೋಧಿ ಮುಖ: ಕೋಲು ಮುಖ, ಸಾಧಾರಣ ಮೈಕಟ್ಟು ಕೂದಲು: ಕಪ್ಪು ಪೋಷಾಕು: ಗ್ರೇ ಶರ್ಟ್ ಮತ್ತು ಪ್ಯಾಂಟ್ ಭಾಷಾ…

ಮುಂದೆ ಓದಿ..
ಸುದ್ದಿ 

ವಾಟ್ಸಾಪ್ ಹ್ಯಾಕ್ ಮಾಡಿ ಸ್ನೇಹಿತರಿಂದ ಲಕ್ಷಾಂತರ ಹಣ ವಂಚನೆ ಶ್ರಿಲೀಕ್ಷ ಸ್ ಅವರಿಂದ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಜುಲೈ 3:2025 :ಜಕ್ಕೂರು ಪ್ರದೇಶದ ಖಾಸಗಿ ಶಾಲೆಯ ಒಬ್ಬ ಶ್ರೀಲೆಕ್ಷ ಸ್ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಹ್ಯಾಕರ್ ದುಷ್ಕರ್ಮಿಗಳು ಅವನ ಸ್ನೇಹಿತರು ಹಾಗೂ ಸಂಬಂಧಿಕರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶ್ರಿಲೀಕ್ಷ ಸ್ ಅವರು ದಿನಾಂಕ 25/06/2025 ರಂದು ವಾಟ್ಸಾಪ್‌ ಮೂಲಕ ಕೃತಕ ಸಂದೇಶಗಳು ಹರಡಲ್ಪಟ್ಟಿರುವುದನ್ನು ಗಮನಿಸಿದರು. ಹ್ಯಾಕರ್‌ಗಳು ಶ್ರಿಲೀಕ್ಷ ಸ್ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ, “ತುರ್ತು ಪರಿಸ್ಥಿತಿ” ಎಂಬ ನೆಪದಲ್ಲಿ ₹45,000 ಹಾಗೂ ₹25,000 ರಂತೆ ಎರಡೂ ಬಾರಿ ಹಣವನ್ನು ಶ್ರಿಲೀಕ್ಷ ಸ್ ಸ್ನೇಹಿತರಾದ ಕೆ.ಎಸ್. ಚಂದ್ರಶೇಖರ್ ಮತ್ತು ಮತ್ತೊಬ್ಬ ಸಂಬಂಧಿಕರಿಂದ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದಂತೆ ಶ್ರಿಲೀಕ್ಷ ಸ್ ಅವರು ತಕ್ಷಣವೇ ತನ್ನ ವಾಟ್ಸಾಪ್ ಖಾತೆ ಪರಿಶೀಲಿಸಿ, ಅದು ಹ್ಯಾಕ್ ಆಗಿರುವುದನ್ನು ದೃಢಪಡಿಸಿದ್ದಾರೆ. ಕೂಡಲೇ ಅವರು ಸೈಬರ್ ಕ್ರೈಮ್ ವಿಭಾಗ ಹಾಗೂ ಸಂಪಿಗೆಹಳ್ಳಿ ಪೊಲೀಸ್…

ಮುಂದೆ ಓದಿ..
ಸುದ್ದಿ 

ಕಡಿವಾಳ: ಆಟೋನಲ್ಲಿದ್ದ ವಿದ್ಯಾರ್ಥಿಯಿಂದ ಮೊಬೈಲ್ ದೋಚಿದ ಅಪರಿಚಿತ

ಬೆಂಗಳೂರು, ಜುಲೈ 3 2025 ನಗರದ ಕೊಡಿಗೇಹಳ್ಳಿ ಗೇಟ್ ಬಳಿ ಆಟೋದಲ್ಲಿ ಪ್ಯಾಸೆಂಜರ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯೊಬ್ಬರಿಂದ ದುಷ್ಕರ್ಮಿ ಒಬ್ಬನು ಮೊಬೈಲ್ ಫೋನ್ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಲೋಹಿತ್ ರವರು ದೂರು ನೀಡಿರುವ ಪ್ರಕಾರ ಅಟ್ರಿಯಾ ಯೂನಿವರ್ಸಿಟಿಯ ದ್ವಿತೀಯ ಸೆಮಿಸ್ಟರ್ ಎಸ್‌ಡಿಎಸ್ ಇಂಜಿನಿಯರಿಂಗ್ ವಿದ್ಯಾರ್ಥಿಯು, ತನ್ನ ತಂದೆಯವರು ಆಟೋ ಚಾಲಕರಾಗಿದ್ದು, ರಜಾದಿನ ಹಾಗೂ ವಿಕೇಂಡ್‌ಗಳಲ್ಲಿ ತಂದೆಯ ಆಟೋವನ್ನೇ ಡ್ರೈವ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಘಟನೆ ದಿನಾಂಕ 29-06-2025 ರಂದು ರಾತ್ರಿ ಸುಮಾರು 11:30ಕ್ಕೆ ನಡೆದಿದ್ದು, ಕೊಡಿಗೇಹಳ್ಳಿ ಗೇಟ್ ಬಳಿ ಆಟೋದಲ್ಲಿ ಪ್ಯಾಸೆಂಜರ್‌ಗಾಗಿ ಕಾಯುತ್ತಿರಲಾಗಿದ್ದ ಸಂದರ್ಭ, ಒಂದು ಕಪ್ಪು ಜಾಕೆಟ್ ಹಾಗೂ ಹೆಲ್ಮೆಟ್ ಧರಿಸಿದ ಅಪರಿಚಿತನು ಬಂದು ಟೂ-ವೀಲರ್‌ನಿಂದ ಇಳಿದು, ಏವೋ ಟಿ3-ಎಕ್ಸ್ ಬ್ರಾಂಡ್ ಮೊಬೈಲ್ ಫೋನ್ ಅನ್ನು ತನ್ನಿಂದ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಕುರಿತು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ ಮನೆ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಬೆಂಗಳೂರು, ಜುಲೈ 3: 2025 ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮನೆಯ ಬಾಗಿಲು ಮೀರಿ ಅಪರಿಚಿತ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿರುವ ಘಟನೆ ವರದಿಯಾಗಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಅವರು ತಮ್ಮ ಕುಟುಂಬ ಸಮೇತ ಬೆಂಗಳೂರಿನ ವಿದ್ಯಾರಣ್ಯಪುರ ಪೋಸ್ಟ್ ವ್ಯಾಪ್ತಿಯ 3ನೇ ಮುಖ್ಯ ರಸ್ತೆ, ಮನೆ ಸಂಖ್ಯೆ 405 ರಲ್ಲಿ ವಾಸವಾಗಿದ್ದಾರೆ. ಅವರ ಭಾವಂದಿರಾದ ಸುಬ್ರಮಣ್ಯ ಭಟ್ ಅವರು ದಿನಾಂಕ 24 ಜೂನ್ 2025 ರಂದು ತಂದೆಯ ವಿಧಿವಶವಾದ ಕಾರಣದಿಂದ ಊರಿಗೆ ತೆರಳಿದ್ದು, ಮನೆಯ ಬೀಗವನ್ನು ದೂರುದಾರರ ಬಳಿ ಇಟ್ಟು ಹೋಗಿದ್ದರು. ದಿನಾಂಕ 29 ಜೂನ್ 2025 ರಂದು ದೂರುದಾರರು ಭಾವನವರ ಮನೆಯನ್ನು ನೋಡಲು ಹೋಗಿದಾಗ, ಮನೆ ಬಾಗಿಲು ತೆರೆದಿರುವುದನ್ನು ಕಂಡು ಶಂಕಿತ ಸ್ಥಿತಿಯಲ್ಲಿದ್ದರು. ಒಳಗೆ ಪ್ರವೇಶಿಸಿ ಪರಿಶೀಲನೆ ಮಾಡಿದಾಗ, ಅಪರಿಚಿತ ದುಷ್ಕರ್ಮಿಗಳು ಮನೆ ಬಾಗಿಲು…

ಮುಂದೆ ಓದಿ..
ಸುದ್ದಿ 

ವಾಕ್‌ಗಿಳಿದ ಮಹಿಳೆಗೆ ಆರ್.ಪಿ ರಸ್ತೆಯಲ್ಲಿ ದಾಳಿ ಚಿನ್ನದ ಉಂಗುರ, ಮೊಬೈಲ್ ಹಾಗೂ ನಗದು ಕಸಿದು ದುಷ್ಕರ್ಮಿಗಳು ಪರಾರಿ

ಬೆಂಗಳೂರು, ಜುಲೈ 3 2025 ನಗರದ ಆರ್.ಪಿ. ರಸ್ತೆಯಲ್ಲಿ ಬೆಳಿಗ್ಗೆ ವಾಕ್‌ಗಾಗಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಚಿನ್ನದ ಉಂಗುರ, ಮೊಬೈಲ್ ಹಾಗೂ ನಗದು ಹಣವನ್ನು ಕಸಿದುಕೊಂಡು ಪರಾರಿಯಾದ ಘಟನೆ ಸಂಭವಿಸಿದೆ. ಸೂರ್ಯನಾರಾಯಣ ಅವರು ತಮ್ಮ ಮನೆಬಿಟ್ಟು ಬೆಳಿಗ್ಗೆ ಸುಮಾರು 5:30ಕ್ಕೆ ವಾಕ್ ಮಾಡಲು ಹೊರಟಿದ್ದರು. ಬೆಳಗ್ಗೆ 6:00 ಗಂಟೆಯ ವೇಳೆಗೆ ಅವರು ಶ್ರೀ ಸಾಯಿ ಬೋಟಕ್ ಅಂಗಡಿಯ ಎದುರು, ಗೋವಿಂದಂ ಕೆಪೇ ಪಕ್ಕದಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ತಡೆದಿದ್ದಾರೆ. ಅವರು ಮಹಿಳೆಯ ಕೈಯಲ್ಲಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಬಲವಂತವಾಗಿ ಕಿತ್ತುಕೊಂಡು, ಜೇಬಿನಲ್ಲಿದ್ದ ಶ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು ₹150 ನಗದು ಹಣವನ್ನು ಸಹ ಎಳೆದುಕೊಂಡು ಪರಾರಿಯಾದರು. ನಂತರ ಅವರ ನಡುವೆ ಒಬ್ಬನು ಆಟೋ ಮೂಲಕ ಸ್ಥಳಕ್ಕೆ ಬಂದು ಎಲ್ಲಾ ಸೇರಿಕೊಂಡು ಪರಾರಿಯಾದರು ಎಂದು ತಿಳಿದು ಬಂದಿದೆ. ಕೊಡಿಗೆಹಳ್ಳಿ ಪೊಲೀಸ್…

ಮುಂದೆ ಓದಿ..
ಸುದ್ದಿ 

ವಕೀಲೆಯ ವಿರುದ್ಧ ಜಾತಿ ನಿಂದನೆ, ಮಾನಹಾನಿ ಹಾಗೂ ಬ್ಲಾಕ್‌ಮೇಲ್ ಮೂರು ಮಹಿಳೆಯರ ವಿರುದ್ಧ ದೂರು

ಬೆಂಗಳೂರು, ಜುಲೈ 3 : 2025 ನಗರದ ಪ್ರಖ್ಯಾತ ವಕೀಲೆಯಾಗಿರುವ ಶ್ರೀಮತಿ ಜಿ. ತೇಜಸ್ವಿನಿ ಅವರು ತಮ್ಮ ಮೇಲೆ ನಡೆದಿರುವ ಜಾತಿ ನಿಂದನೆ, ಮಾನಹಾನಿ, ಮತ್ತು ಹಣದ ಬೇಡಿಕೆ ಹಾಗೂ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಮತಿ ಕೀರ್ತಿ ಎಸ್. ಸರಸ್ವತಿ, ಅವರ ತಾಯಿ ಸ್ವಾತಿ ಸುರೇಶ್, ಮತ್ತು ಮತ್ತೊಬ್ಬರು ಸಾವಿತ್ರಿ ಮೂರ್ತಿ ಎಂಬವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೊಡಿಗೆಹಳ್ಳಿ ಪೊಲೀಸ್ ದೂರು ದಾಖಲಿಸಿದ್ದಾರೆ. ತೇಜಸ್ವಿನಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ವಕೀಲ ವೃತ್ತಿಯಲ್ಲಿ ವಾದ ಪ್ರಾರಂಭಿಸಿದ ಬಳಿಕ, 2024ರ ಅಕ್ಟೋಬರ್ 24ರಂದು ಶ್ರೀಮತಿ ಕೀರ್ತಿ ಅವರ ಪರವಾಗಿ ಎಂ.ಸಿ. ನಂ-1505/2020ರಲ್ಲಿ ಕೋರ್ಟ್‌ನಲ್ಲಿ ವಕಾಲತ್ ಹಾಕಿದ್ದರು. ಅವರು ಅವರು ಕೇಸಿನಲ್ಲಿ ಕೆಲವೊಂದು ಅರ್ಜಿಗಳನ್ನು ಸಲ್ಲಿಸಿ, ಕ್ರಿಮಿನಲ್ ಕೇಸ್ ವಾಪಸ್ ಪಡೆಯಲು ಸಹಾಯ ಮಾಡಿದ್ದರು. ಅವರ ಆರೋಗ್ಯದ ದೃಷ್ಟಿಯಿಂದ ಧ್ಯಾನ ಮಾಡಬೇಕು, ಪೆರ್ಸನಲ್ ಆಗಿ ಮುಂದೆ…

ಮುಂದೆ ಓದಿ..
ಸುದ್ದಿ 

ಬಿಬಿ ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯು ಮತ್ತು ಪುಟಪಾತ್‌ ಅನ್ನು ಆವರಿಸಿಕೊಂಡ ಗ್ಯಾರೇಜ್ – ಸಾರ್ವಜನಿಕರಿಗೆ ತೀವ್ರ ಅಡಚಣೆ

ಬೆಂಗಳೂರು, 28 ಜೂನ್ 2025:ನಗರದ ಬಿಬಿ ಸರ್ವಿಸ್ ರಸ್ತೆಯ ರೈತ ಸಂತೆಯ ಬಸ್ ನಿಲ್ದಾಣದಿಂದ ಕೋಗಿಲು ಕ್ರಾಸ್ ಸಿಗ್ನಲ್ ತನಕ ಇರುವ ಸಾರ್ವಜನಿಕ ರಸ್ತೆಯ ಮೇಲೆ ಮತ್ತು ಪುಟಪಾತ್‌ ನಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸಿ ದುರಸ್ತಿಗೆ ಹಾಕುತ್ತಿರುವ ವಿ.ಎಚ್ ಕಾರ್ ಗ್ಯಾರೇಜ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಬ್ರಾ ಗಸ್ತು ಕರ್ತವ್ಯದಲ್ಲಿ ನೇಮಿಸಲಾದ ಯಲಹಂಕ ಸಂಚಾರಿ ಪೊಲೀಸ್ ಸಿಬ್ಬಂದಿ ಅವರು ಸಂಜೆ 6.15ರ ಸುಮಾರಿಗೆ ಗಸ್ತು ಮಾಡುತ್ತಿದ್ದಾಗ ಈ ಅಕ್ರಮ ದೃಶ್ಯ ಕಂಡುಬಂದಿದೆ. ಗ್ಯಾರೇಜ್ ಮಾಲೀಕರು ಸಾರ್ವಜನಿಕ ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ವ್ಯಾಪಿಸಿಕೊಂಡು ದುರಸ್ತಿ ಕಾರ್ಯ ನಡೆಸುತ್ತಿದ್ದು, ಇದು ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಯಲಹಂಕ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಾರದಂತೆ ಗ್ಯಾರೇಜ್ ಮಾಲೀಕರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದ್ದು, ನೋಟಿಸ್ ಸಹ ನೀಡಲಾಗಿದೆ. ಆದರೂ ಯಾವುದೇ ಬದಲಾವಣೆ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮನೆಗೆ ನುಗ್ಗಿ ಲ್ಯಾಪ್‌ಟಾಪ್, ಡಾಕ್ಯುಮೆಂಟ್ ಸೇರಿದಂತೆ ಮೌಲ್ಯವಾದ ವಸ್ತುಗಳ ಕಳವು

ಬೆಂಗಳೂರು, ಜೂನ್ 30:ನಗರದ ನಿವಾಸಿಯೊಬ್ಬರು ತಮ್ಮ ಮನೆಗೆ ಕಳ್ಳರು ನುಗ್ಗಿ ಸುಮಾರು ಮೂರು ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂಬ ದೂರು ದಾಖಲಾಗಿದೆ. ಸತ್ಯಂ ರಾಜ್ ಅವರ ಹೇಳಿಕೆಯಂತೆ, ಅವರು ಜೂನ್ 25, 2025 ರಂದು ರಾತ್ರಿ 11.50ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಬಾಗಿಲು ತೆರೆಯುವ ವೇಳೆ ಕೀ ಅನ್ನು ನೆಲದ ಮೇಲೆ ಇಡಲಾಗಿತ್ತು. ಬೆಳಗ್ಗೆ, ಜೂನ್ 26 ರಂದು ಸುಮಾರು 9.00 ಗಂಟೆಗೆ ಎದ್ದು ನೋಡಿದಾಗ ಆಫೀಸ್ ಬ್ಯಾಗ್, HP Pavilion ಲ್ಯಾಪ್‌ಟಾಪ್ (ಸೀರಿಯಲ್ ನಂ. 5CD207G0F8), ವ್ಯಾಲೆಟ್, ಡಾಕ್ಯುಮೆಂಟ್‌ಗಳು, ಚೆಕ್ ಬುಕ್ ಮತ್ತು ವೈರ್‌ಲೆಸ್ ಇಯರ್‌ಬಡ್ಸ್ ನಾಪತ್ತೆಯಾಗಿರುವುದು ಗೊತ್ತಾಗಿದೆ. ಆಫೀಸ್ ಬ್ಯಾಗಿನಲ್ಲಿ ಪ್ರಮುಖ ದಾಖಲೆಪತ್ರಗಳು ಮತ್ತು ನಗದು ಹಣವೂ ಇದ್ದು, ಒಟ್ಟು ಕಳವಾದ ವಸ್ತುಗಳ ಅಂದಾಜು ಮೌಲ್ಯ ರೂ. 3,00,000 ಆಗಿದೆ ಎಂದು ಅವರು ತಿಳಿಸಿದ್ದಾರೆ.ಬಾಗಲೂರು ಪೊಲೀಸ್…

ಮುಂದೆ ಓದಿ..
ಸುದ್ದಿ 

ಕಂಬದಹಳ್ಳಿಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಪತ್ತೆ: ಮೂರು ಮಂದಿ ವಿರುದ್ಧ ಪ್ರಕರಣ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಹಿಂದ್ರಾ ಬೊಲೆರೂ ಮ್ಯಾಕ್ಸ್ ಪಿಕಪ್ ಗೂಡ್ಸ್ ವಾಹನವೊಂದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.ಮಾರುತಿ ಪಿಎಸ್‌ಐ ಅವರು ಸ್ಥಳೀಯ ಬಾತ್ಮಿದಾರರಿಂದ ಪಡೆದ ಮಾಹಿತಿಯಂತೆ, ಮಹೀಂದ್ರ ಬೊಲೆರೊ ಮ್ಯಾಕ್ಸ್ ಪಿಕಪ್ (ನಂ. ಕೆಎ-53 ಎಬಿ-6149) ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಶ್ರವಣಬೆಳಗೊಳದ ದಾರಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಕೇಶವೇಗೌಡ, ಪರಶುರಾಮ್ ರಾಥೋಡ್ ಮತ್ತು ಚಾಲಕ ಶೇಷಗಿರಿಯವರ ಸಹಾಯದಿಂದ ತಪಾಸಣೆಗೆ ಮುಂದಾದಾಗ, ಆರೋಪಿಗಳು ವಾಹನ ನಿಲ್ಲಿಸಿ ಓಡಲು ಯತ್ನಿಸಿದರು. ಆದರೆ ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಯಿತು.ವಾಹನದ ಹಿಂಭಾಗವನ್ನು ಪರಿಶೀಲಿಸಿದಾಗ, 03 ಎಮ್ಮೆಗಳು, 01 ಎಮ್ಮೆ ಕರು, 01 ಹೆಚ್.ಎಫ್ ಹಸು ಮತ್ತು 01 ಜೆರ್ಸಿ ಹಸು, ಒಟ್ಟು 06 ಜಾನುವಾರುಗಳು ಕ್ರೂರವಾಗಿ ತುಂಬಲಾಗಿದ್ದು, ಆಹಾರ ಮತ್ತು…

ಮುಂದೆ ಓದಿ..