ಸುದ್ದಿ 

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 18,500ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ..

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 18,500ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ವರ್ಷ 18,500ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಆರಂಭದೊಳಗೆ ಎಲ್ಲಾ ಹಂತಗಳೂ ಪೂರ್ಣಗೊಳ್ಳಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದ್ದಾರೆ. ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಸರ್ಕಾರಿ ಶಾಲೆಗಳಿಗೆ ಸುಮಾರು 13 ಸಾವಿರ ಶಿಕ್ಷಕರ ಹಾಗೂ ಅನುದಾನಿತ ಶಾಲೆಗಳಿಗೆ 5,800ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ನ್ಯಾ. ನಾಗಮೋಹನ್‌ದಾಸ್ ಅವರ ವರದಿಯ ಶಿಫಾರಸುಗಳನ್ನು ಅನುಸರಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆಗಳಿದ್ದ ಕಾರಣ ಸ್ವಲ್ಪ ವಿಳಂಬವಾಗಿತ್ತು. ಈಗ ಎಲ್ಲ ಹಂತದ ತಾಂತ್ರಿಕ ಹಾಗೂ ಕಾನೂನು ವಿಚಾರಗಳು ಸರಿಯಾಗಿ ಪೂರ್ಣಗೊಂಡಿವೆ,” ಎಂದು ಹೇಳಿದರು. “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ 4,700…

ಮುಂದೆ ಓದಿ..
ಸುದ್ದಿ 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವ್ಯಾಪ್ತಿಯಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವ್ಯಾಪ್ತಿಯಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ. ಈ ಕುರಿತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿದ್ದು, ಸಮೀಕ್ಷೆ ಒಂದು ರಾಜ್ಯಮಟ್ಟದ ಮಹತ್ವದ ಕಾರ್ಯವಾಗಿದ್ದು, ಅದು ಪ್ರತಿ ಪ್ರದೇಶದ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಳೆಯಲು ನೆರವಾಗಲಿದೆ ಎಂದು ಹೇಳಿದರು. ಅವರು ಮತ್ತಷ್ಟು ವಿವರಿಸಿ —“ಸಮೀಕ್ಷೆ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಪ್ರತಿ ಮನೆ, ಪ್ರತಿ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನಲೆಯನ್ನು ಸರಿಯಾಗಿ ದಾಖಲಿಸುವುದೇ ಇದರ ಉದ್ದೇಶ. ಸಮೀಕ್ಷೆಯ ಅಂಕಿಅಂಶಗಳು ಭವಿಷ್ಯದಲ್ಲಿ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ನಿರ್ಧಾರಕ್ಕೆ ಆಧಾರವಾಗುತ್ತವೆ. ಆದ್ದರಿಂದ ಈ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡಬೇಕು,” ಎಂದು ಮಹೇಶ್ವರ್ ರಾವ್ ವಿನಂತಿಸಿದರು. ಅವರು ಮುಂದುವರಿಸಿ ಹೇಳಿದರು:“ಕೆಲವು ಪ್ರದೇಶಗಳಲ್ಲಿ ಜಿಯೋ ಟ್ಯಾಗಿಂಗ್, ಡೇಟಾ ಅಪ್‌ಲೋಡ್ ಸೇರಿದಂತೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಈ…

ಮುಂದೆ ಓದಿ..
ಸುದ್ದಿ 

ಈ ವರ್ಷದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ಅದ್ಧೂರಿಯಾಗಿ..

ಹಾಸನಾಂಬೆ ಜಾತ್ರೆ : ನಂಬಿಕೆಯ ನವರಂಗದಲ್ಲಿ ಶೃಂಗಾರಗೊಂಡ ಹಾಸನ ಹಾಸನ ನಗರ ಇಂದು ಭಕ್ತಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಗಮವಾಗಿ ಪರಿವರ್ತಿತವಾಗಿದೆ. ಮಲಯಮಾರುತ್ತದ ತಂಪಿನ ಮಧ್ಯೆ ನವರಾತ್ರಿಯ ನಾದ ಪ್ರತಿಧ್ವನಿಸುತ್ತಿರುವಾಗ, ಹಾಸನಾಂಬೆ ದೇವಿಯ ದೈವೀ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಕಾದಿದ್ದಾರೆ. ಈ ವರ್ಷದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಈಗಾಗಲೇ ನಗರದ ಪ್ರತಿಯೊಂದು ಬೀದಿ ದೇವಿಯ ಆರಾಧನೆಯ ಆಲೋಚನೆಯಲ್ಲಿದೆ. 🌺 ಒಡವೆಗಳ ಮೆರವಣಿಗೆ – ಭಕ್ತಿಭಾವದ ಆಭರಣ ಸೋಮವಾರ ಬೆಳಿಗ್ಗೆ ನಗರದ ಸಾಲಗಾಮೆ ರಸ್ತೆಯ ಬಳಿ ಇರುವ ಜಿಲ್ಲಾ ಖಜಾನೆಯಿಂದ ದೇವಿಯ ಅಮೂಲ್ಯ ಆಭರಣಗಳನ್ನು ಮೆರವಣಿಗೆಯ ರೂಪದಲ್ಲಿ ದೇವಾಲಯಕ್ಕೆ ಸಾಗಿಸಲಾಯಿತು. ಹಾಸನ ತಹಸೀಲ್ದಾರ್ ಗೀತಾ ಅವರ ಪೂಜೆ ನಂತರ ಬೆಳ್ಳಿ ರಥದಲ್ಲಿ ಮಂಗಳವಾದ್ಯಗಳ ನಾದದ ನಡುವೆ ಮೆರವಣಿಗೆ ಪ್ರಾರಂಭವಾಯಿತು. ಪೌರಾಣಿಕ ಸಂಪ್ರದಾಯದಂತೆ ಹಾಸನಾಂಬೆಯ ಆಭರಣಗಳು ದೇವಾಲಯದತ್ತ ಸಾಗುತ್ತಿದ್ದಂತೆ, ಮಾರ್ಗದಲ್ಲಿದ್ದ ಭಕ್ತರು…

ಮುಂದೆ ಓದಿ..
ಸುದ್ದಿ 

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌..

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ. ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌, ಆದಿ ಆಂಧ್ರ ಕ್ರಿಶ್ಚಿಯನ್‌, ಆದಿ ದ್ರಾವಿಡ ಕ್ರಿಶ್ಚಿಯನ್‌, ಆದಿ ಕರ್ನಾಟಕ ಕ್ರಿಶ್ಚಿಯನ್‌, ಅಕ್ಕಸಾಲಿಗ ಕ್ರಿಶ್ಚಿಯನ್‌, ಬಣಜಿಗ ಕ್ರಿಶ್ಚಿಯನ್‌, ಬಂಜಾರ ಕ್ರಿಶ್ಚಿಯನ್‌, ಬಾರಿಕಾರ್‌ ಕ್ರಿಶ್ಚಿಯನ್‌, ಬೆಸ್ತರು ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಬುಡುಗ ಜಂಗಮ ಕ್ರಿಶ್ಚಿಯನ್‌, ಚರೋಡಿ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಗೊಲ್ಲ ಕ್ರಿಶ್ಚಿಯನ್‌, ಗೌಡಿ ಕ್ರಿಶ್ಚಿಯನ್‌, ಹೊಲೆಯ ಕ್ರಿಶ್ಚಿಯನ್‌, ಜಲಗಾರ ಕ್ರಿಶ್ಚಿಯನ್‌, ಜಾಡರ್‌ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಕಮ್ಮ ಕ್ರಿಶ್ಚಿಯನ್‌, ಕಮ್ಮ…

ಮುಂದೆ ಓದಿ..
ಸುದ್ದಿ 

ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಕರ್ನಾಟಕದ ಮುಜರಾಯಿ ಇಲಾಖೆ ನಿಯಂತ್ರಣದಲ್ಲಿರುವ 14 ಪ್ರಮುಖ ದೇವಸ್ಥಾನಗಳಲ್ಲಿ ಸೇವಾ ಶುಲ್ಕ (seva / ritual charges) ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಈ ಸೇವಾ ಶುಲ್ಕದ ಆದೇಶವು “ದೇವಾಲಯಗಳ ಆಡಳಿತ ಮಂಡಳಿಗಳ ತೀರ್ಮಾನದ ಅನುಸಾರವಾಗಿದೆ, ಸರ್ಕಾರದ ಸ್ವಯಂ ನಿರ್ಧಾರವಲ್ಲ” ಎಂಬಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಕೆಳಗಿನ ಕೆಲವು ದೇವಾಲಯಗಳು ಸೇವಾ ಶುಲ್ಕ ಏರಿಕೆಗೆ ಒಳಗೊಂಡಿವೆ:

ಮುಂದೆ ಓದಿ..
ಅಂಕಣ 

ಮಹರ್ಷಿ ವಾಲ್ಮೀಕಿ…..

ಮಹರ್ಷಿ ವಾಲ್ಮೀಕಿ….. ರಾಮಾಯಣದ ಸೃಷ್ಟಿಕರ್ತರ ಜಯಂತಿಯ ಸಂದರ್ಭದಲ್ಲಿ……… ಈ ದಿನ ಯಾರನ್ನು ಸ್ಮರಿಸೋಣ…………, ರಾಮ – ಲಕ್ಷ್ಮಣ – ಭರತ – ಶತ್ರುಜ್ಞ – ರಾವಣ – ಸೀತೆ – ಆಂಜನೇಯ – ವಾಲಿ – ಸುಗ್ರೀವ – ವಿಭೀಷಣ – ದಶರಥ – ಶಬರಿ – ಶ್ರವಣ ಕುಮಾರ……. ಹೀಗೆ ಸಾಗುವ ಪಾತ್ರಗಳೋ…. ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ, ಅಥವಾ, ಅದರ ಕರ್ತೃ ವಾಲ್ಮೀಕಿಯನ್ನೋ, ಅಥವಾ, ವಾಲ್ಮೀಕಿಯ ನಾಯಕ ಜನಾಂಗವನ್ನೋ, ಅಥವಾ, ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ…….. ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ…. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ, ಭರತ, ಶತೃಘ್ಞರಂತ ಆದರ್ಶ…

ಮುಂದೆ ಓದಿ..
ಸುದ್ದಿ 

ನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ..

ನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ.. ತೆರೆದ ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ನೀಡುವ ಆಯಿಲ್ ನಂಬದಿರಿ.. ಕಳಪೆ ಆಯಿಲ್ – ರೈತನ ಶ್ರಮಕ್ಕೆ ಕಲ್ಲು ಹಾಕುವಂತದ್ದು! ನಿಮ್ಮ ಮುಂದೆ ಪ್ಯಾಕ್ ಓಪನ್ ಮಾಡಿಸಿ.. ಇಂದನ ತುಂಬಿಸಿ. ಈಗಾಗಲೇ ತಪ್ಪು ಮಾಡುತ್ತೀರುವ ಪೆಟ್ರೋಲ್ ಬಂಕುನವರಿಗೆ ರೈತರೂ ನೇರವಾಗಿ ಹೇಳಿದರೂ ಕೇಳುತ್ತಿಲ್ಲ.. ಇಂದಿನ ದಿನಗಳಲ್ಲಿ ನಗರದಲ್ಲೋ, ಹಳ್ಳಿಯಲ್ಲೋ, ಸ್ಕೂಟರ್, ಬೈಕ್, ಟ್ರ್ಯಾಕ್ಟರ್, ಪಂಪುಮೆಷಿನ್, ಅಥವಾ ಥ್ರೆಷರ್‌ಗಳ ಉಪಯೋಗ ಪ್ರತಿದಿನವೂ ಹೆಚ್ಚುತ್ತಿದೆ. ಇವುಗಳೆಲ್ಲವೂ ಸರಿಯಾಗಿ ಕೆಲಸಮಾಡಬೇಕಾದರೆ, ಅವುಗಳಿಗೆ ಬಳಸುವ ಎಂಜಿನ್ ಆಯಿಲ್ ಅತ್ಯಂತ ಮುಖ್ಯ. ಆದರೆ ಈಗ ಕಳಪೆ ಆಯಿಲ್ (Adulterated/Low Grade Oil) ಗಳ ಬಳಕೆ ಮುಕ್ತಿ ಕೊಡುವಂತೆ ಆಗಿದೆ. ಇದು ಗಾಡಿಯನ್ನಷ್ಟೇ ಅಲ್ಲ, ರೈತನ ದುಡಿಮೆಯನ್ನೂ ನಾಶಪಡಿಸುತ್ತದೆ. ಕಳಪೆ ಆಯಿಲ್ ಎಂದರೇನು? : ಕಳಪೆ ಆಯಿಲ್ ಎಂದರೆ: ಶುದ್ಧ ಎಂಜಿನ್ ಆಯಿಲ್‌ಗೆ ಬೇರೆ ಕಿಮಿಕಲ್…

ಮುಂದೆ ಓದಿ..
ಅಂಕಣ 

ಮಳೆ ಬಂತು, ರಸ್ತೆ ಹೋಯಿತು – ಸರ್ಕಾರದ ಬಗೆಹರಿವಿನ ಮಾರ್ಗ ಯಾವುದು?

ಮಳೆ ಬಂತು, ರಸ್ತೆ ಹೋಯಿತು – ಸರ್ಕಾರದ ಬಗೆಹರಿವಿನ ಮಾರ್ಗ ಯಾವುದು? ಬೆಂಗಳೂರು – ಮಳೆ ಬಂತು ಅಂದರೆ ತಂಪಾದ ಹವಾಮಾನ, ತಾಜಾ ವಾತಾವರಣ, ಹಸಿರು ಚೆಲುವು ಎಂಬ ಸುಂದರ ಚಿತ್ರಣವೇ ತಲೆಗೆ ಬರುವುದು. ಆದರೆ, ಬೆಂಗಳೂರಿನ ನಾಗರಿಕರಿಗೆ ಮಳೆ ಅಂದರೆ ಗುಂಡಿಗಳ ಹಬ್ಬ, ನೀರು ತುಂಬಿದ ರಸ್ತೆಗಳು, ಸಂಚಾರ ಕಷ್ಟ ಹಾಗೂ ಅಪಘಾತದ ಭೀತಿ. ವರ್ಷಾವರ್ಷ ಇದೇ ದೃಶ್ಯ ಮರುಕಳಿಸುತ್ತಿದ್ದರೂ, ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇವಲ “ತಾತ್ಕಾಲಿಕ ಪ್ಯಾಚ್ ವರ್ಕ್” ಮಾಡುತ್ತಲೇ ಕಾಲಹರಣ ಮಾಡುತ್ತಿದೆ. ಸರ್ಕಾರದ ಮಾತು – ನೆಲದ ಸತ್ಯ ಪ್ರತಿ ಬಾರಿ ಮಳೆ ಬಂತು ಅಂದರೆ, “ನಾವು ರಸ್ತೆಗಳ ನವೀಕರಣ ಮಾಡುತ್ತೇವೆ”, “ಶಾಶ್ವತ ಪರಿಹಾರ ತರುತ್ತೇವೆ” ಎಂಬ ಸರ್ಕಾರದ ಘೋಷಣೆಗಳನ್ನು ಜನ ಕೇಳಿದ್ದಾರೆ. ಆದರೆ ನೆಲದ ಸತ್ಯ ಏನು? – ಮಳೆ ಬಂದ ತಕ್ಷಣವೇ ಹೊಸಾಗಿ ಹಾಕಿದ…

ಮುಂದೆ ಓದಿ..
ಅಂಕಣ 

ಆ ನೆನಪು…….

ಆ ನೆನಪು……. ನೆನಪಿನ ರಣಹದ್ದೊಂದುಬಸವಳಿದ ಹೃದಯವನ್ನುಮತ್ತೆ ಮತ್ತೆ ಕುಕ್ಕುತ್ತಲಿದೆ, ಮುಂಜಾವಿನ ಅರೆ ನಿದ್ದೆಯ ಮಂಪರಿನಲ್ಲಿ,ಶೌಚದ ಐಕಾಂತದಲ್ಲಿ,ಬೆಳಗಿನ ವಾಯು ವಿಹಾರದಲ್ಲಿ,ಉಪಹಾರದ ಎಲೆಯಲ್ಲಿ, ಚೂಪಾದ ಉದ್ದನೆಯ ಕೊಕ್ಕಿನಲ್ಲಿ ಕುಟುಕುತ್ತಾ ಮನಸ್ಸು ಹಿಂಡುತ್ತಿದೆ, ಸೂಜಿ ಮಲ್ಲಿಗೆಯ ಚೆಲುವಿನ,ಸಾಸಿವೆಯಷ್ಟು ಸಣ್ಣದಾದ,ಬೆಣ್ಣೆಯಷ್ಟು ಮೃದುವಾದ,ಹೃದಯಯನ್ನು ನೆನಪೆಂಬ ರಣಹದ್ದು ಗಟ್ಟಿಯಾದ ತೀಕ್ಷ್ಣವಾದ ಕೊಕ್ಕಿನಿಂದ ಇರಿಯುತ್ತಿದೆ, ಘಾಸಿಗೊಂಡ ಹೃದಯವೆಂದು ಪಾಪ ಅದಕ್ಕೇನು ಗೊತ್ತು.ಬಗೆದು ತಿನ್ನುವುದು ಅದರ ಸಹಜ ಧರ್ಮ, ಇಡೀ ದಿನದ ಕೆಲಸದಲ್ಲಿ,ಇಳಿ ಸಂಜೆಯ ನೋಟದಲ್ಲಿ,ಹಾಸಿಗೆಯ ಅನಾಥ ಪ್ರಜ್ಞೆಯಲ್ಲಿ,ಚುಚ್ಚುತ್ತಿದೆ ನೆನಪಿನ ರಣಹದ್ದು, ಹೇಳಲಾಗದು,ಹೇಳದಿರಲಾಗದು,ಸಹಿಸಲಾಗದು,ಎದುರಿಸಲಾಗದ,ಅಮಾಯಕ ಅಸಹಾಯಕ ಹೃದಯವದು, ವಿರಹದ ವೇದನೆಯೋ,ಪ್ರೀತಿಯ ವಂಚನೆಯೋ,ನಂಬಿಕೆಯ ದ್ರೋಹವೋ,ಆಂತರ್ಯದ ಬೇಗುದಿಯೋ,ಒಡಲಾಳದ ಸಂಕಟವೋ,ನೆನಪಿನ ರಣಹದ್ದಾಗಿ ಮತ್ತೆ ಮತ್ತೆ ಕುಕ್ಕುತ್ತಲಿದೆ. ಹೊರಬರದ ದಾರಿ ಕಾಣದೆ,ಒಳಗಿರುವ ಜಾಗ ಅರಿಯದೆ,ಸಂಕಟದಿಂದ ವಿಲ ವಿಲನೆ ಒದ್ದಾಡುತ್ತಾ, ಕೆಲವೊಮ್ಮೆ ಕಣ್ಣೀರಾಗಿ,ಒಮ್ಮೊಮ್ಮೆ ಆಕ್ರೋಶವಾಗಿ,ಆಗೊಮ್ಮೆ ಸಮಾಧಾನವಾಗಿಮತ್ತೊಮ್ಮೆ ಹುಚ್ಚುಚ್ಚಾಗಿ,ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಹರಿದಾಡುತ್ತಿದೆ. ನೆನಪಿನ ರಣಹದ್ದನ್ನು ಓಡಿಸಲಾಗದೆ ,ನೋವನ್ನು ಅನುಭವಿಸುತ್ತಾ,ನಿಮ್ಮೊಂದಿಗೆ ಸದಾ ಹಂಚಿಕೊಳ್ಳುತ್ತಿರುವ,ಅನಾಥ – ಅಜ್ಞಾತ,ಹೃದಯ –…

ಮುಂದೆ ಓದಿ..
ಅಂಕಣ 

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್……

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್…… ಬಹುಶಃ ಕೆಲವು ಜನರಿಗೆ ನೆಮ್ಮದಿಯೇ ಬೇಕಿಲ್ಲವೆನಿಸುತ್ತದೆ. ಜೊತೆಗೆ ಇತರರೂ ನೆಮ್ಮದಿಯಾಗಿರಬಾರದು ಎಂಬ ಮನೋಭಾವ. ಅತೃಪ್ತ ಆತ್ಮಗಳೇ ಅವರೊಳಗೆ ತುಂಬಿ ತುಳುಕುತ್ತಿರಬೇಕು ಎಂದೆನಿಸುತ್ತಿದೆ…… ಉಕ್ರೇನಿಯನ್ ಜನರು ಅನುಭವಿಸುತ್ತಿರುವ ನರಕಯಾತನೆಯಾಗಲಿ, ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಜನರಾಗಲಿ, ಆಫ್ರಿಕಾದ ಆಂತರಿಕ ಸಂಘರ್ಷದಿಂದ ಬಳಲುತ್ತಿರುವ ದೇಶಗಳಾಗಲಿ, ದಕ್ಷಿಣ ಅಮೆರಿಕ, ದಕ್ಷಿಣ ಏಷ್ಯಾದ ಕೆಲವು ದೇಶಗಳ ಹಿಂಸಾತ್ಮಕ ಘಟನೆಗಳಾಗಲಿ ಇನ್ನೂ ಜನರಿಗೆ ಬುದ್ಧಿ ಕಲಿಸಿದಂತೆ ಕಾಣುತ್ತಿಲ್ಲ.ಕೊರೋನ ಎಂಬ ವೈರಸ್ ಇಡೀ ಜಗತ್ತನ್ನು ಅಲುಗಾಡಿಸಿತು. ಆ ಸಮಯದಲ್ಲಿ ಬಹಳಷ್ಟು ಜನರಿಗೆ ಸನ್ಯಾಸ ವೈರಾಗ್ಯ ಉಂಟಾಯಿತು. ಜೀವನ ನಶ್ವರ, ಯಾವಾಗ ಬೇಕಾದರೂ, ಯಾವ ರೂಪದಲ್ಲಾದರೂ ಸಾವು ಬರಬಹುದು. ಆದ್ದರಿಂದ ಒಂದಷ್ಟು ತಾಳ್ಮೆಯಿಂದ, ಪ್ರೀತಿಯಿಂದ ದುರಾಸೆಗಳಿಲ್ಲದೆ ಬದುಕಬೇಕು ಎಂದು ಅಂದುಕೊಂಡರು. ಆದರೆ ಸಮಕಾಲಿನ ಜಗತ್ತು ಕೋವಿಡ್ ನಂತರ ಹೆಚ್ಚು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಸಾವೋ, ಬದುಕೋ ಒಟ್ಟಿನಲ್ಲಿ ಸಮಾಜಗಳು,…

ಮುಂದೆ ಓದಿ..