PDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ!
PDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ! ಬೆಂಗಳೂರು: ಅಧಿಕಾರಿಗಳ ಕಿರುಕುಳ ಮತ್ತೊಮ್ಮೆ ಜೀವ ಬಲಿತೆಗೆದುಕೊಂಡಿದೆ. ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ PDO ಗೀತಾಮಣಿ ನೀಡಿದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 25 ವರ್ಷಗಳಿಂದ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರಯ್ಯ, ಕಳೆದ ಮೂರು ತಿಂಗಳಿಂದ ಸಂಬಳ ಕೊಡದೇ, ಅನಗತ್ಯ ಒತ್ತಡ ಹೇರಿದ PDO ಗೀತಾಮಣಿಯ ಕಿರುಕುಳದಿಂದ ಕಂಗೆಟ್ಟು ಜೀವ ತ್ಯಜಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಂಥಾಲಯದ ಬಯೋಮೆಟ್ರಿಕ್ ಹಾಜರಾತಿ ಹಾಕದೇ ಹೋದ ಆರೋಪದ ಹೆಸರಲ್ಲಿ ಸತತ ಕಿರುಕುಳ ನೀಡುತ್ತಿದ್ದ PDO ಯ ವರ್ತನೆ ಮಾನವೀಯ ಮಿತಿಗಳನ್ನು ದಾಟಿದ್ದಂತೆ ಆರೋಪಗಳು ವ್ಯಕ್ತವಾಗಿವೆ. ದಿನದಿನಕ್ಕೂ ಹೀನಾಯ ಕಿರುಕುಳವನ್ನು ಎದುರಿಸಲು ಸಾಧ್ಯವಾಗದೆ, ರಾಮಚಂದ್ರಯ್ಯ ವಿಷ ಸೇವಿಸಿ ಬದುಕು ಮುಗಿಸಿದ್ದಾರೆ.…
ಮುಂದೆ ಓದಿ..
