ಸುದ್ದಿ 

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ?

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ? ಬೆಂಗಳೂರು ನಗರದಲ್ಲಿ ನಿಗೂಢ ಸಾವಿನ ಘಟನೆ ಬೆಳಕಿಗೆ ಬಂದಿದೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ಪುತ್ತೂರು ಮೂಲದ 20 ವರ್ಷದ ಯುವಕ ತಕ್ಷಿತ್ ಶವವಾಗಿ ಪತ್ತೆಯಾದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಪ್ರಕಾರ, ತಕ್ಷಿತ್ ಅಕ್ಟೋಬರ್ 9ರಂದು ವಿರಾಜಪೇಟೆಯ ಯುವತಿಯೊಂದಿಗಿದ್ದು, ಲಾಡ್ಜ್‌ನಲ್ಲಿ ರೂಮ್ ಮಾಡಿದ್ದ. ಇಬ್ಬರೂ ಹಿಂದೆ ಪಣಂಬೂರಿನ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದರು. ಆದರೆ ಬ್ಯಾಕ್‌ಲಾಗ್‌ಗಳಿಂದಾಗಿ ಕಾಲೇಜು ಬಿಟ್ಟು ಹೊರ ಬಂದಿದ್ದರು. ಬಳಿಕ ತಕ್ಷಿತ್ ಮೈಸೂರಿಗೆ ಓದಲು ಹೋಗುತ್ತಿದ್ದೇನೆಂದು ಹೇಳಿ, ವಾಸ್ತವದಲ್ಲಿ ಬೆಂಗಳೂರಿಗೆ ಬಂದಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಲಾಡ್ಜ್ ದಾಖಲೆ ಪ್ರಕಾರ, ತಕ್ಷಿತ್ ಮತ್ತು ಯುವತಿ ಕಳೆದ 8 ದಿನಗಳಿಂದ ರೂಮಿನಲ್ಲೇ ಇದ್ದು, ಸ್ವಿಗ್ಗಿ ಮೂಲಕ ಆಹಾರ ಪಾರ್ಸೆಲ್ ಮಾಡಿ ಸೇವಿಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಆಹಾರ…

ಮುಂದೆ ಓದಿ..
ಸುದ್ದಿ 

ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್!

ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್! “ಮೂರು ಪಟ್ಟು ಹಣ ಕೊಡುತ್ತೇವೆ” ಎಂಬ ಆಮಿಷವೊಡ್ಡಿ ಜನರನ್ನು ಭಾರಿ ಮಟ್ಟದಲ್ಲಿ ವಂಚಿಸುತ್ತಿದ್ದ ತಿರುನೆಲ್ವೇಲಿ ಮೂಲದ ನಕಲಿ ನೋಟು ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಸಿಕ್ಕಿದೆ. ಜಯನಗರ ಠಾಣೆಯ ಪೊಲೀಸರು ಸೂಕ್ತ ಮಾಹಿತಿಯ ಆಧಾರದ ಮೇಲೆ ನಡೆಸಿದ ನಿಖರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ರೆಡ್‌ಹ್ಯಾಂಡ್ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಗ್ಯಾಂಗ್ ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ತಮ್ಮ ವಂಚನಾ ಜಾಲವನ್ನು ವಿಸ್ತರಿಸಲು ಮುಂದಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಉರುಲು ಬಲ ಬಿಚ್ಚಿ, ಆರೋಪಿಗಳನ್ನು ಹಣದ ವ್ಯವಹಾರದ ವೇಳೆಯಲ್ಲೇ ಕೈಕಟ್ಟಿದ್ದಾರೆ. ಆರೋಪಿಗಳು “10 ಲಕ್ಷ ಅಸಲಿ ನೋಟು ಕೊಡಿ, ನಾವು ನಿಮಗೆ 30 ಲಕ್ಷ ‘ಕೋಟಾ ನೋಟು’ ನೀಡುತ್ತೇವೆ” ಎಂದು ಜನರಿಗೆ ಆಮಿಷವೊಡ್ಡುತ್ತಿದ್ದರು. ನಂಬಿಕೆ ಮೂಡಿಸಲು ಅಸಲಿ ನೋಟುಗಳ ಬಂಡಲ್‌ನ ಮೇಲ್ಭಾಗ ಮತ್ತು…

ಮುಂದೆ ಓದಿ..
ಸುದ್ದಿ 

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ!

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ! ದೊಡ್ಡಬಳ್ಳಾಪುರ: ಮದುವೆಯಾದ ಕೇವಲ ಒಂಬತ್ತು ತಿಂಗಳಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್‌ ಡ್ಯಾಂ ಹತ್ತಿರ ನಡೆದಿದೆ. 28 ವರ್ಷದ ಪುಷ್ಪಾ ಆತ್ಮಹತ್ಯೆಗೆ ಶರಣಾದ ದುರ್ಘಟಿತೆ. ಮೃತಳಾದ ಪುಷ್ಪಾ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಪತ್ನಿ. ಒಂದೂವರೆ ವರ್ಷಗಳ ಹಿಂದೆ ಇವರ ವಿವಾಹ ನಡೆದಿತ್ತು. ಆದರೆ ಮದುವೆಯ ನಂತರದಿಂದಲೇ ಪತಿ, ಅತ್ತೆ, ಮಾವ ಹಾಗೂ ಇತರ ಕುಟುಂಬಸ್ಥರಿಂದ ವರದಕ್ಷಿಣೆ ಮತ್ತು ನಿವೇಶನಕ್ಕಾಗಿ ನಿರಂತರ ಕಿರುಕುಳ ಎದುರಿಸುತ್ತಿದ್ದಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಮೊದಲು ಪುಷ್ಪಾ ಸೆಲ್ಫಿ ವಿಡಿಯೋ ಮಾಡಿ ತನ್ನ ಜೀವ ತ್ಯಾಗದ ನಿರ್ಧಾರವನ್ನು ದಾಖಲಿಸಿರುವುದು ಘಟನೆಗೆ ಮತ್ತಷ್ಟು ಭಾರಿತನ ನೀಡಿದೆ. ವಿಡಿಯೋದಲ್ಲಿ ಪುಷ್ಪಾ ಪತಿಯ ಕುಟುಂಬದವರು ನೀಡಿದ ಕಿರುಕುಳ ಮತ್ತು ಅವಮಾನವನ್ನು ವಿವರಿಸಿದ್ದಾಳೆ ಎನ್ನಲಾಗಿದೆ. ಮದುವೆಯಾದ…

ಮುಂದೆ ಓದಿ..
ಅಂಕಣ 

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ……

ದೀಪಾವಳಿ………. ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ…… ಜ್ಞಾನದ ಮರು ಪೂರಣ…… ಜ್ಞಾನ – ಬುದ್ದಿ – ತಿಳಿವಳಿಕೆ…..ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ……… ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದ ಹೋಗುವ ಮತ್ತು ಎಂದೂ ಮುಗಿಯದ ವಸ್ತುಗಳು ಎಂದು…. ಜ್ಞಾನ ಮೊದಲ ಪಟ್ಟಿಯಲ್ಲಿ ಸೇರುತ್ತದೆ. ಆದರೆ ಅದರ ವಿಶೇಷತೆ ಎಂದರೆ ಅದಕ್ಕೆ ಎರಡನೇ ಪಟ್ಟಿಯಲ್ಲಿಯೂ ಸ್ಥಾನ ಕಲ್ಪಿಸಬಹುದು. ಅದು ವ್ಯಕ್ತಿಗಳ ಶ್ರಮ, ಸಾಧನೆ ಮತ್ತು ಪ್ರಯತ್ನದ ಮೇಲೆ ಅವಲಂಬಿಸಿರುತ್ತದೆ…… ಒಂದಷ್ಟು ಜನ ಜ್ಞಾನ ಎಂದರೆ ಹಣ ಅಧಿಕಾರ ಆಸ್ತಿ ಸಂಪಾದನೆ ಎಂದು ಭಾವಿಸಿರುತ್ತಾರೆ. ಅದರ ಆಧಾರದ ಮೇಲೆ ಜ್ಞಾನವನ್ನು ಅಳೆಯುತ್ತಾರೆ. ಎಷ್ಟು ಯಶಸ್ವಿಯಾಗುವರೋ ಅಷ್ಟು ಜ್ಞಾನಿಗಳು ಎಂಬ ಅರ್ಥದಲ್ಲಿ……. ಇನ್ನೊಂದಿಷ್ಟು ಜನ ಅಕ್ಷರ ಕಲಿಕೆಯ ಮೂಲಕ ಅಂಕಗಳ ಆಧಾರದ…

ಮುಂದೆ ಓದಿ..
ಸುದ್ದಿ 

ಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ?

ಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ? ಬೆಂಗಳೂರು ನಗರದ ವಿದ್ಯಾಮಾನ್ಯನಗರದಲ್ಲಿ ನಡೆದ ಸಿಲಿಂಡರ್ ಸ್ಫೋಟದಿಂದ ಮಾಜಿ ಸೈನಿಕ ಜನಾರ್ದನ್ ಅವರಿಗೆ ಗಂಭೀರ ಗಾಯವಾದ ಘಟನೆ ಸಾಮಾಜಿಕವಾಗಿ ದೊಡ್ಡ ಪ್ರಶ್ನೆಯನ್ನು ಎತ್ತಿದೆ – ನಮ್ಮ ಮನೆಗಳಲ್ಲಿ ಅನಿಲ ಸುರಕ್ಷತೆ ಬಗ್ಗೆ ನಾವು ಎಷ್ಟು ಜಾಗೃತರಾಗಿದ್ದೇವೆ? ಮಾಜಿ ಸೈನಿಕರು ದೇಶಕ್ಕಾಗಿ ಜೀವ ಪಣಕ್ಕಿಟ್ಟವರು. ಇಂತಹ ವ್ಯಕ್ತಿ ನಾಗರಿಕ ಜೀವನದಲ್ಲಿ ಅಸಾವಧಾನತೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಜೀವಕ್ಕೆ ಹಾನಿಯಾಗುತ್ತಿರುವುದು ಅತ್ಯಂತ ದುಃಖಕರ. ಈ ಘಟನೆ ಕೇವಲ ಒಂದು ಮನೆಯ ದುರಂತವಲ್ಲ, ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆ. ಪ್ರತಿ ಮನೆಗೂ ಅನಿಲ ಸೋರಿಕೆ ಪತ್ತೆ ಸಾಧನಗಳು, ಸರಿಯಾದ ಸಿಲಿಂಡರ್ ನಿರ್ವಹಣೆ ಮತ್ತು ನಿಯಮಿತ ಸುರಕ್ಷತಾ ಪರಿಶೀಲನೆ ಅಗತ್ಯವಾಗಿದೆ. ನಾಗರಿಕರು ಅನಿಲದ ವಾಸನೆ ಕಂಡುಬಂದಾಗ ತಕ್ಷಣವೇ ಗ್ಯಾಸ್ ವಾಲ್ವ್ ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದೇ, ತುರ್ತು ಸಂಖ್ಯೆಗೆ ಕರೆಮಾಡುವ…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ!

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ! ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ವಿಭಜನೆ ಉಂಟುಮಾಡುವ ಭಾಷೆ ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿವಾದಕ್ಕೆ ಒಳಗಾದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯ ವಿರುದ್ಧ ಮತ್ತೊಮ್ಮೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಗೆ 2 ತಿಂಗಳ ಕಾಲ ಪ್ರವೇಶ ನಿಷೇಧ ವಿಧಿಸಿದ್ದ ಆಡಳಿತ, ಇದೀಗ ಬಾಗಲಕೋಟೆ ಜಿಲ್ಲೆಯ ಸೀಮೆಯಿಂದ ಕೂಡ ಸ್ವಾಮೀಜಿಯನ್ನು ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಕೇವಲ ಒಂದು ಗಂಟೆಯೊಳಗೆ ಮಠವನ್ನು ಖಾಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಡಿವೈಎಸ್‌ಪಿ ಗಜಾನನ ಸುತಾರ ಹಾಗೂ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಸ್ವಾಮೀಜಿಗೆ ಅಧಿಕೃತ ನೋಟಿಸ್ ಹಸ್ತಾಂತರಿಸಿದ್ದಾರೆ. ವಿಜಯಪುರ ಪ್ರವೇಶಕ್ಕೆ ನಿರ್ಬಂಧ…

ಮುಂದೆ ಓದಿ..
ಸಿನೆಮಾ ಸುದ್ದಿ 

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್‌ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ. ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ…

ಮುಂದೆ ಓದಿ..
ಸುದ್ದಿ 

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ..

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್‌ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ. ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ…

ಮುಂದೆ ಓದಿ..
ಸುದ್ದಿ 

ಹಾಸನಾಂಬ ದರ್ಶನದ ವೇಳೆ ಜಿಲ್ಲಾಡಳಿತದ ಶಿಷ್ಟಾಚಾರ ಉಲ್ಲಂಘನೆ ಆರೋಪ – ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಹಾಸನಾಂಬ ದರ್ಶನದ ವೇಳೆ ಜಿಲ್ಲಾಡಳಿತದ ಶಿಷ್ಟಾಚಾರ ಉಲ್ಲಂಘನೆ ಆರೋಪ – ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಸನಾಂಬ ದೇವಾಲಯದ ಮುಖ್ಯ ಪ್ರವೇಶದ್ವಾರದ ಎದುರು ಶನಿವಾರ ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎ. ಮಂಜು, ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಭಾಗವಹಿಸಿದರು. ಶುಕ್ರವಾರ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತವು ಶಿಷ್ಟಾಚಾರ ಪಾಲಿಸದಿರುವುದು ಪ್ರತಿಭಟನೆಯ ಪ್ರಮುಖ ಕಾರಣವಾಗಿದೆ. ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದ ಕುಮಾರಸ್ವಾಮಿ ಅವರ ಸ್ವಾಗತಕ್ಕೆ ಜಿಲ್ಲಾಧಿಕಾರಿ ಹಾಜರಾಗದೇ ಇದ್ದುದು, ಹಾಗೂ ದರ್ಶನದ ನಂತರ ಗೌರವಾರ್ಪಣೆ ಸಲ್ಲಿಸದಿರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಜಿಲ್ಲಾಡಳಿತದ ಈ ವರ್ತನೆ “ಕೇಂದ್ರ ಸಚಿವರಿಗೂ, ಸ್ಥಳೀಯ ಜನಪ್ರತಿನಿಧಿಗಳಿಗೂ ಅವಮಾನ” ಎಂದು ಪ್ರತಿಭಟನಾಕಾರರು…

ಮುಂದೆ ಓದಿ..
ಸುದ್ದಿ 

ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್

ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್! ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಅಜಯ್ ರಾವ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾ ‘ರಾಧೇಯ’ ಟೀಸರ್ ಬಿಡುಗಡೆಯಾಗಿದೆ. ವೇದಗುರು ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಅವರ ನಿರ್ದೇಶನದ ಮೊದಲ ಪ್ರಯತ್ನ. ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಅಜಯ್ ರಾವ್ ಜೊತೆ ಸೋನಾಲ್ ಮಾಂಟೆರೋ ನಾಯಕಿಯಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ವೇದಗುರು ಮಾತನಾಡಿ, “ಮಹಾಭಾರತದ ಕರ್ಣನ ಮತ್ತೊಂದು ಹೆಸರು ‘ರಾಧೇಯ’. ಆದರೆ ನಮ್ಮ ಚಿತ್ರದ ಕಥೆಗೆ ಕರ್ಣನೊಂದಿಗೆ ನೇರ ಸಂಬಂಧವಿಲ್ಲ. ಆದರೆ ಆತನ ತ್ಯಾಗದ ಅಂಶದಿಂದ ಪ್ರೇರಣೆ ಪಡೆದಿದ್ದೇವೆ. ಇದು ಲವ್ ಸ್ಟೋರಿಯಾದರೂ, ಹೊಸ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಮೊದಲಿಗೆ ಅಜಯ್ ರಾವ್ ಅವರಿಗೆ ಈ ಕಥೆ ಹೇಳಿದಾಗ ನಾನು ನಿರ್ದೇಶಕನಷ್ಟೇ ಇದ್ದೆ, ನಂತರ ನಿರ್ಮಾಪಕನಾದೆ. ಚಿತ್ರ ವಿತರಣೆಗೆ ಕಾಂತರಾಜು…

ಮುಂದೆ ಓದಿ..