ಸುದ್ದಿ 

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು

Taluknewsmedia.com

Taluknewsmedia.comಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಏನ್ ಹೆಚ್ ಹೈವೆ ಬಿಸನಹಳ್ಳಿ ಲ್ಲಿ ಹೋಗುತ್ತಿರುವ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ ಇದರಲ್ಲಿಯ ದೂರುದಾರ ವ್ಯಕ್ತಿಆದ ಗಂಗಾಧರ ಮಲ್ಲಪ್ಪ ಕೋರಿ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ತಾನು ಚಲಾಯಿಸುತ್ತಿದ್ದ ಟ್ರಾಕ್ಟರ್ ಇಂಜಿನ ನಂ: ಕೆಎ-35/ಟಿಬಿ-2995 ನೇದಕ್ಕೆ ಒಂದು ಟ್ರೈಲರ್ ಜೋಡಿಸಿಕೊಂಡು ಟ್ರಾಕ್ಟ‌ರ್ ಇಂಜಿನದ ಮಟಗಡ್ ಮೇಲೆ ಇದರಲ್ಲಿಯ ಮೃತನಾದ ಹಾಲೇಶ ಮತ್ತು ಗಾಯಾಳು ಆದ ಕುಂಬಳ ಚಂದ್ರಪ್ಪ ಗುಮ್ಮಗೊಳ್ ಇವರಿಗೆ ಕೂಡ್ರಿಸಿಕೊಂಡು ದಿನಾಂಕ: 25-08-2025 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಎನ್.ಎಚ್-48 ರಸ್ತೆಯ ಬಿಸನಹಳ್ಳಿ, ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಇದರಲ್ಲಿಯ ಆರೋಪಿಆದ ಸುರೇಶ್ ಬಿಮಣ್ಣ ತಾನು ಚಲಾಯಿಸುತ್ತಿದ್ದ ಟಾಟಾ ಇಂಟ್ರಾ ಕಂಪನಿಯ ಗುಡ್ಸ್ ಟ್ರಕ್ ವಾಹನವನ್ನಾ ಅತೀ…

ಮುಂದೆ ಓದಿ..
ಸುದ್ದಿ 

ಸವಣೂರಿನ, ಹೆಸರೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಕೊಲೆ ಬೆದರಿಕೆ ಏಫ್ ಐ ಆರ್ ದಾಖಲು

Taluknewsmedia.com

Taluknewsmedia.comಸವಣೂರಿನ, ಹೆಸರೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಕೊಲೆ ಬೆದರಿಕೆ ಏಫ್ ಐ ಆರ್ ದಾಖಲು ಹಾವೇರಿ ಜಿಲ್ಲೆ ಸವಣೂರು ತಾಲೂಕ್ ಹೆಸರು ಗ್ರಾಮದಲ್ಲಿ ಎರಡು ಗುಂಪುಗಳ ಮದ್ಯ ಜಗಳವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಂಭವಿಸಿದೆ. ಪೊಲೀಸರಿಗೆ ಕಂಪ್ಲೇಂಟ್ ನೀಡಿದ ಸಿದ್ದಾರೂಢ ಅಯ್ಯಪ್ಪ ಸುಣಗಾರ ಎನ್ನುವ ವ್ಯಕ್ತಿಯೂ ದಿನಾಂಕ 07-09-2025 ರಂದು ಹೆಸರೂರ ಗ್ರಾಮದ ಗೋಮಾಳ(ಖಾಲಿ) ಜಮೀನಿನಲ್ಲಿ ಇರುವ ಮಣ್ಣನ್ನು ಹೇರಲು ಹೋದಾಗ ಆ ಸಮಯದಲ್ಲಿ ಅದೇ ಊರಿನ ಇನ್ನೊಂದು ಗ್ಯಾಂಗ್ ಜೊತೆ ಜಗಳವಾಗಿದ್ದು ನಂತರ ಅದೇ ವಿಷಯಕ್ಕೆ ಸಂಬಂದಪಟ್ಟಂತೆ ದಿನಾಂಕಃ 07-09-2025 ರಂದು ಬೆಳಿಗೆ 9-40 ಗಂಟೆಯ ಸುಮಾರಿಗೆ ಹೆಸರೂರ ಗ್ರಾಮದ ಅರಳಿಮರದ ಚಹ ಅಂಗಡಿ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತರಾದ ಪ್ರಕಾಶ್ ಲಮಾಣಿ,ಚಂದ್ರ ಲಮಾಣಿ,ಲಾಚಪ್ಪ ಲಮಾಣಿ ಇವರು ಸಿದ್ದಾರೂಢ ಅಯ್ಯಪ್ಪ ಸುಣಗಾರ ಹಾಗೂ ಅವರ ಕೆಲ ಸಹೋದರರಿಗೆ ಅವಾಚ್ಯವಾಗಿ ಲೆ ಬೊಸಡಿಮಕ್ಕಳ ನಿಮ್ಮ…

ಮುಂದೆ ಓದಿ..
ಅಂಕಣ 

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17………

Taluknewsmedia.com

Taluknewsmedia.comಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17……… ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ….. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ ಬೇಕಾಗುತ್ತದೆ….. ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ಪ್ರಮುಖವಾದದ್ದು. GST ಸಂಗ್ರಹದಲ್ಲಿ ದೇಶದ ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಇಲ್ಲಿನ ಶಾಸಕರ ಸರಾಸರಿ ಆದಾಯ ದೇಶದಲ್ಲೇ ಅತಿ ಹೆಚ್ಚು. ಕರ್ನಾಟಕದ ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕರ್ನಾಟಕವನ್ನು ಸರಳವಾಗಿ ಇಲ್ಲಿನ ಭೌಗೋಳಿಕತೆಯ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಬಹುದು….1) ಮಲೆನಾಡು ಕರ್ನಾಟಕ2) ಮೈಸೂರು ಕರ್ನಾಟಕ3) ಕರಾವಳಿ ಕರ್ನಾಟಕ4) ಕಿತ್ತೂರು (ಮುಂಬಯಿ) ಕರ್ನಾಟಕ5) ಕಲ್ಯಾಣ (ಹೈದರಾಬಾದ್) ಕರ್ನಾಟಕ. ಗಾಳಿ ನೀರು ಆಹಾರ ಶಿಕ್ಷಣ ಆರೋಗ್ಯ ಸಾರಿಗೆ ಸಂಪರ್ಕ ರಸ್ತೆ ಮನೆ ಪ್ರಾಕೃತಿಕ ವಾತಾವರಣ…

ಮುಂದೆ ಓದಿ..
ಸುದ್ದಿ 

ಸವಣೂರೂ-ಯಲವಗಿ ಮಾರ್ಗ ಮಧ್ಯ ಬೈಕ್ ಕಾರ್ ಆಕ್ಸಿಡೆಂಟ್

Taluknewsmedia.com

Taluknewsmedia.comಸವಣೂರೂ-ಯಲವಗಿ ಮಾರ್ಗ ಮಧ್ಯ ಬೈಕ್ ಕಾರ್ ಆಕ್ಸಿಡೆಂಟ್ ಹಾವೇರಿ ಜಿಲ್ಲೆ ಸವಣೂರು ತಾಲುಕು ಯಲವಿಗಿ ಬೈಕ್ ಕಾರ್ ಗೆ ಆಕ್ಸಿಡೆಂಟ್ ಘಟನೆ ಸಂಭವಿಸಿದೆ ದಿನಾಂಕ: 10-09-2025 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಯಲವಿಗಿ ಗ್ರಾಮದ ಪೆಟ್ರೋಲ ಬಂಕ ಕಡೆಯಿಂದ ಯಲವಿಗಿಯಿಂದ ಸವಣೂರ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಯಲವಾಗಿ ಗ್ರಾಮದ ಕಾರ್ತಿಕ್ ಪರಮೇಶಪ್ಪ ಹುಲಗೂರ ಇತನು ತನ್ನ ಬೈಕ್ ನಂಬರ ಕೆಎ-27/ಇಎಮ್-6324 ನೇದ್ದನ್ನು ಪೆಟ್ರೋಲ ಬಂಕ ಕಡೆಯಿಂದ ಅತೀ ಜೋರಾಗಿ, ನಿರ್ಲಕ್ಷ್ಯ, ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಖ್ಯ ರಸ್ತೆಯಲ್ಲಿ ವಾಹನಗಳು ಬರುವದನ್ನು ಗಮನಿಸದೇ ಯಲವಿಗಿಯಿಂದ ಸವಣೂರ ಕಡೆಗೆ ಹೋಗುತ್ತಿದ್ದ ಕಾರ ನಂಬರ ಕೆಎ-04/ಎಮ್.ಯು-7365 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ತಾನು ಗಾಯ, ನೋವು ಹೊಂದಿದ್ದಲ್ಲದೇ ಕಾರಿನಲ್ಲಿದ್ದ, ವ್ಯಕ್ತಿಗಳಾದ ಸಿದ್ದರಾಮಪ್ಪ ಈಶ್ವರಪ್ಪ ಸಂಶಿ, ಮೆಹಬೂಬ ಬಾಬುಸಾಬ ಸಿದ್ಧಿ, ರಾಜೇಸಾಬ ಸಾಬೀರ ಖಾದರಸಾಬ ವಾಲೀಕಾರ ಇವರಿಗೂ ತೀವ್ರ…

ಮುಂದೆ ಓದಿ..
ಸುದ್ದಿ 

ಮಲಗುಂದ,ಹೊಲದಲ್ಲಿ ಅಕ್ರಮ ನಿಧಿ ಹುಡುಕಾಟ ಎಪ್ ಐ ಆರ್ ದಾಖಲು

Taluknewsmedia.com

Taluknewsmedia.comಮಲಗುಂದ,ಹೊಲದಲ್ಲಿ ಅಕ್ರಮ ನಿಧಿ ಹುಡುಕಾಟ ಎಪ್ ಐ ಆರ್ ದಾಖಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡುರೂ ಸಮೀಪದ ಮಲಗುಂದ ಗ್ರಾಮದಲ್ಲಿ ಹೊಲದಲ್ಲಿ ಅಕ್ರಮ ನಿಧಿ ಹುಡುಕುತ್ತಿರುವ ಘಟನೆ ಬೆಳಕಿಗೆ ಬಂದಿದೆ ಇದರಲ್ಲಿನ ಆರೋಪಿತರಾದ ರೇಣುಕಸ್ವಾಮಿ ,ಮೌಲಾಲಿ,ಆನಂದ ಊರಣಕರ್,ಪ್ರವೀಣ ಸಾಲಿಮಠ,ಮಹಾಂತೇಶ್ ಬೆಲ್ಲದ ಇವರು ಮೂಲತಃ ಸ್ಥಳೀಯರೇ ಆಗಿದ್ದು ತಮ್ಮ ಅಕ್ರಮ ಲಾಭಕ್ಕಾಗಿ ದಿನಾಂಕ: 29-03-2025 ರಂದು ಬೆಳಗಿನಜಾವ 4-30 ಘಂಟೆಯ ಸುಮಾರಿಗೆ ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯ ಮಲಗುಂದ ಗ್ರಾಮದ ಮಲಗುಂದ ಗ್ರಾಮದಿಂದ ಕೂಸನೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಇರುವ ವಾಮನರಾವ್ ಕೃಷ್ಣರಾವ್ ದೇಸಾಯಿ ಇವರ ಸರ್ವೇ ನಂ: 119 ನೇದ್ದರ ಜಮೀನಿನ ಬದುವಿನಲ್ಲಿ ಇರುವ ಗಿಡಗಂಟಿಗಳ ನಡುವೆ ಇದ್ದ ಕೋಣಕಲು ಭರಮಪ್ಪ ದೇವರ ಶಿಲಾಮೂರ್ತಿಯನ್ನು ಪಕ್ಕಕ್ಕೆ ಸರಿಸಿ ಇಟ್ಟು ಅದರ ಕೆಳಗಡೆಯ ನೆಲವನ್ನು ಗುದ್ದಲಿ, ಸಲಿಕೆಗಳಿಂದ ಅಗೆದು ನಿಧಿಯನ್ನು ಹುಡುಕಾಟ ಮಾಡಿರುವ ಬಗ್ಗೆ ಆರೋಪ.…

ಮುಂದೆ ಓದಿ..
ಅಂಕಣ 

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣಗಳು – ಬರಹಗಳು……..

Taluknewsmedia.com

Taluknewsmedia.comಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣಗಳು – ಬರಹಗಳು…….. ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ.ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ……… ನಮ್ಮ ಅಭಿಪ್ರಾಯ ಏನಿದೆಯೋ ಅದನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯಬಹುದೇ ? ಹಾಗಾದರೆ,ಒಬ್ಬ ಸಕ್ಕರೆ ಕಹಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಬಹುದು, ಇನ್ನೊಬ್ಬ ಕಾಗೆ ಬೆಳ್ಳಗಿದೆ ಎನ್ನಬಹುದು, ಮತ್ತೊಬ್ಬ ಜಾತಿಯೇ ಶ್ರೇಷ್ಠ ಎಂದು ಹೇಳಬಹುದು, ಮಗದೊಬ್ಬ ಆ ಪಕ್ಷ ದೇಶ ದ್ರೋಹಿ ಎನ್ನಬಹುದು, ಇನ್ಯಾರೋ ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎನ್ನಬಹುದು, ಮತ್ತೊಬ್ಬ ಅಧಿಕಾರಿಗಳೆಲ್ಲಾ ಭ್ರಷ್ಟರು ಎನ್ನಬಹುದು, ಮತ್ಯಾರೋ ಯುವಕರೆಲ್ಲಾ ಕೆಟ್ಟವರು ಎನ್ನಬಹುದು, ಅವರ್ಯಾರೋ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಇನ್ನೇನೋ ಹೇಳಬಹುದು, ಹೀಗೆ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿ ಅದು ನನಗಿರುವ ಅಭಿವ್ಯಕ್ತಿ…

ಮುಂದೆ ಓದಿ..
ಅಂಕಣ 

“ಅಪರಾಧಿಯ ನಗು, ಬಾಲಕಿಯ ಅಳಲು – ನ್ಯಾಯ ಯಾವಾಗ?”

Taluknewsmedia.com

Taluknewsmedia.com“ಅಪರಾಧಿಯ ನಗು, ಬಾಲಕಿಯ ಅಳಲು – ನ್ಯಾಯ ಯಾವಾಗ?” ಭಾರತೀಯ ಸಮಾಜವು ತನ್ನ ಸಂಸ್ಕೃತಿ, ಮೌಲ್ಯ ಮತ್ತು ಮಾನವೀಯತೆಯಿಂದ ಜಗತ್ತಿಗೆ ಹೆಸರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದ ಗೌರವವನ್ನು ಮಸಿ ಹೊಡೆಯುತ್ತಿವೆ. ಪ್ರತಿದಿನ ಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸುವ ರಕ್ತ ಕುದಿಸುವ ಘಟನೆಗಳು ಜನತೆಯಲ್ಲಿ ಆತಂಕ, ಕೋಪ ಹಾಗೂ ನಿರಾಸೆಯನ್ನು ಉಂಟುಮಾಡುತ್ತಿವೆ. ಪ್ರತಿ ಕಿರಿಯ ಹುಡುಗಿಯೂ ಭಯದಿಂದ ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ಸಮಾಜದ ದುರಂತವಾಗಿದೆ. ಒಬ್ಬ ಬಾಲಕಿ ಶಾಲೆಗೆ, ಕಾಲೇಜಿಗೆ, ಅಥವಾ ಬೀದಿಗೆ ಹೋಗುವಾಗ ಪೋಷಕರ ಹೃದಯದಲ್ಲಿ ಭಯವಿರಬಾರದು ಎಂಬುದೇ ಪ್ರತಿ ಕುಟುಂಬದ ಕನಸು. ಆದರೆ ಇಂದಿನ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಈಗಾಗಲೇ ಭಾರತದ ಕಾನೂನುಗಳಲ್ಲಿ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಕೆಲ ಸಂದರ್ಭಗಳಲ್ಲಿ ಮರಣದಂಡನೆಗೂ ಅವಕಾಶವಿದೆ. ಆದರೆ ನ್ಯಾಯಾಂಗ ಪ್ರಕ್ರಿಯೆಯು ಅನಾವಶ್ಯಕವಾಗಿ ದೀರ್ಘವಾಗುತ್ತಿರುವುದರಿಂದ ಅಪರಾಧಿಗಳು…

ಮುಂದೆ ಓದಿ..
ಅಂಕಣ 

ಫೀಚರ್: ಡಿಜಿಟಲ್ ಯುಗದಲ್ಲಿ ಯುವಕರ ಜೀವನ – ಅವಕಾಶಗಳೂ, ಆತಂಕಗಳೂ

Taluknewsmedia.com

Taluknewsmedia.comಫೀಚರ್: ಡಿಜಿಟಲ್ ಯುಗದಲ್ಲಿ ಯುವಕರ ಜೀವನ – ಅವಕಾಶಗಳೂ, ಆತಂಕಗಳೂ ಇಂದಿನ ಪೀಳಿಗೆಯನ್ನು “ಡಿಜಿಟಲ್ ಪೀಳಿಗೆ” ಎಂದು ಕರೆಯುತ್ತಾರೆ. ಸ್ಮಾರ್ಟ್‌ಫೋನ್, ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಬದುಕಿನ ಪ್ರತಿಯೊಂದು ಹಂತವೂ ಬದಲಾಗುತ್ತಿದೆ. ವಿಶೇಷವಾಗಿ ಯುವಕರ ಜೀವನದಲ್ಲಿ ತಂತ್ರಜ್ಞಾನವು ಅವಕಾಶಗಳನ್ನೂ, ಆತಂಕಗಳನ್ನೂ ಒಟ್ಟಿಗೆ ತಂದಿದೆ. ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ ಆನ್‌ಲೈನ್ ಪಠ್ಯಕ್ರಮ, ಯೂಟ್ಯೂಬ್ ಕ್ಲಾಸ್‌ಗಳು, ಇ-ಲೈಬ್ರರಿ – ಇವು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ನೀಡಿವೆ. ಬೆಂಗಳೂರು ಮೂಲದ ಶಿಕ್ಷಣ ತಜ್ಞೆ ಡಾ. ಶಿಲ್ಪಾ ಅವರು ಹೇಳುವಂತೆ, “ಗ್ರಾಮಾಂತರದ ವಿದ್ಯಾರ್ಥಿಗೂ ಇಂದಿಗೆ ವಿಶ್ವ ಮಟ್ಟದ ಪಾಠ ತಲುಪುತ್ತಿದೆ. ಆದರೆ ತಂತ್ರಜ್ಞಾನವನ್ನು ಸರಿಯಾಗಿ ಬಳಸಲು ಮಾರ್ಗದರ್ಶನ ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಉದ್ಯೋಗದ ಹೊಸ ದಾರಿಗಳು ಡಿಜಿಟಲ್ ಯುಗವು ಉದ್ಯೋಗದಲ್ಲಿ ಹೊಸ ಹಾದಿಗಳನ್ನು ತೆರೆದಿದೆ. ಫ್ರೀಲಾನ್ಸ್ ಬರಹಗಾರರು, ಡಿಜಿಟಲ್ ಮಾರ್ಕೆಟಿಂಗ್ ತಜ್ಞರು, ಆಪ್ ಡೆವಲಪರ್‌ಗಳು – ಇವು ಇಂದಿನ…

ಮುಂದೆ ಓದಿ..
ಅಂಕಣ 

ಮಹಿಳಾ ಸಬಲೀಕರಣ – ಸಮಾಜದ ನಿಜವಾದ ಶಕ್ತಿ

Taluknewsmedia.com

Taluknewsmedia.comಮಹಿಳಾ ಸಬಲೀಕರಣ – ಸಮಾಜದ ನಿಜವಾದ ಶಕ್ತಿ ಮಹಿಳಾ ಸಬಲೀಕರಣವೆಂಬ ಪದದನ್ನು ಇಂದು ಎಲ್ಲೆಡೆ ಕೇಳಬಹುದು. ಆದರೆ ಇದು ಕೇವಲ ಘೋಷಣೆಯಲ್ಲ. ಸಮಾಜದ ಪ್ರಗತಿಯ ಮೂಲ ಸತ್ಯ ಕುಟುಂಬ, ಆರ್ಥಿಕತೆ, ರಾಜಕೀಯ, ವಿಜ್ಞಾನ – ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಕೊಡುಗೆ ಅತ್ಯಂತ ಪ್ರಮುಖ ಅದರೂ, ಇತಿಹಾಸದಲ್ಲಿ ಅವರ ಶ್ರಮವನ್ನು ಆನೇಕ ಬಾರಿ ಕಡೆಗಣಿಸಲಾಗಿದೆ. ಪತ್ರಕರ್ತನಾಗಿ, ಈ ವಿಚಾರವನ್ನು ಅನ್ವೇಷಿಸುವುದು ಕೇವಲ ಲೇಖನ ಬರೆಯುವುದಲ್ಲ -ಸಮಾಜದ ಮುಂದೆ ನಿಜವನ್ನು ತೆರೆದಿಡುವುದಾಗಿದೆ ಶಿಕ್ಷಣವೇ ಮೊದಲ ಹೆಜ್ಜೆ ಶಿಕ್ಷಣ ಪಡೆದ ಹುಡುಗಿ ತನ್ನ ಜೀವನವನ್ನೇ ಬದಲಾಯಿಸಬಲ್ಲಳು. ಗ್ರಾಮೀಣ ಭಾರತದಲ್ಲಿ ಇನ್ನೂ ಅನೇಕ ಹೆಣ್ಣುಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ತಳ್ಳಲ್ಪಡುತ್ತಿದ್ದಾರೆ. ಬೆಟ್ಟಿ ಬಚಾವೋ, ಬೆಟ್ಟಿ ಪದಾವೋ ತರಹದ ಸರ್ಕಾರದ ಯೋಜನೆಗಳು ಶಿಕ್ಷಣದ ಹಕ್ಕನ್ನು ಬಲಪಡಿಸುತ್ತಿದ್ದರೂ, ಸಾಮಾಜಿಕ ಅಡೆತಡೆಗಳು ಇನ್ನೂ ಅಸ್ತಿತ್ವದಲ್ಲಿವೆ. ಆರ್ಥಿಕ ಸ್ವಾವಲಂಬನೆ ಮಹಿಳೆಯರು ಸ್ವಂತ ಆದಾಯ ಗಳಿಸಿದಾಗ, ಕುಟುಂಬದಲ್ಲಿಯೂ ಸಮಾಜದಲ್ಲಿಯೂ ನಿರ್ಧಾರ…

ಮುಂದೆ ಓದಿ..
ಸುದ್ದಿ 

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ……..

Taluknewsmedia.com

Taluknewsmedia.comಕರ್ನಾಟಕ ರತ್ನ…….. ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ…….. ರಾಷ್ಟ್ರಕವಿ ಕುವೆಂಪು, ( ಸಾಹಿತ್ಯ)ಡಾಕ್ಟರ್ ರಾಜ್ ಕುಮಾರ್, ( ಸಿನಿಮಾ )ಶ್ರೀ ಎಸ್. ನಿಜಲಿಂಗಪ್ಪ,( ರಾಜಕೀಯ)ಡಾಕ್ಟರ್ ಸಿಎನ್ಆರ್ ರಾವ್,( ವಿಜ್ಞಾನ )ಡಾಕ್ಟರ್ ದೇವಿ ಶೆಟ್ಟಿ,( ವೈದ್ಯಕೀಯ)ಶ್ರೀ ಭೀಮ್ ಸೇನ್ ಜೋಶಿ,( ಸಂಗೀತ )ಸಿದ್ದಗಂಗೆಯ ಶ್ರೀಗಳಾದ ಶಿವಕುಮಾರ ಸ್ವಾಮಿ,( ಧಾರ್ಮಿಕ – ಸಮಾಜ ಸೇವೆ )ಶ್ರೀ ದೇ. ಜವರೇಗೌಡ,( ಸಾಹಿತ್ಯ }ಶ್ರೀ ವೀರೇಂದ್ರ ಹೆಗ್ಗಡೆ,( ಧಾರ್ಮಿಕ – ಸಮಾಜ ಸೇವೆ )ಶ್ರೀ ಪುನೀತ್ ರಾಜಕುಮಾರ್,( ಸಿನಿಮಾ )ಶ್ರೀ ವಿಷ್ಣುವರ್ಧನ್,( ಸಿನಿಮಾ )ಶ್ರೀಮತಿ ಬಿ. ಸರೋಜಾ ದೇವಿ,( ಸಿನಿಮಾ )………… ಇದರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದ ನಾಲ್ಕು ಜನ, ಧಾರ್ಮಿಕ, ಸಮಾಜ ಸೇವಾ ಕ್ಷೇತ್ರಕ್ಕೆ ಸೇರಿದ ಇಬ್ಬರು, ಸಾಹಿತ್ಯ ಕ್ಷೇತ್ರದ ಇಬ್ಬರು, ರಾಜಕೀಯ, ಸಂಗೀತ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ತಲಾ ಒಬ್ಬರು ಸೇರಿ ಒಟ್ಟು 12 ಜನರಿಗೆ…

ಮುಂದೆ ಓದಿ..