ಸುದ್ದಿ 

ಅತಿವೇಗ ಬೈಕ್ ಡಿಕ್ಕಿ – 78 ವರ್ಷದ ಹಿರಿಯನಿಗೆ ಗಂಭೀರ ಗಾಯ

Taluknewsmedia.com

Taluknewsmedia.comಬೆಂಗಳೂರು, ಆ. 12:2025ನಗರದ ಅಂಭಾ ಭವಾನಿ ದೇವಸ್ಥಾನ ಮುಖ್ಯರಸ್ತೆ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ 78 ವರ್ಷದ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಮೂಲಗಳ ಪ್ರಕಾರ, ಬೆಳಿಗ್ಗೆ ಸುಮಾರು 7.40 ಗಂಟೆಯ ಸುಮಾರಿಗೆ ಸಿ.ಪಿ. ಶಿವನ್ (78) ಅವರು ಶಶಾಂಕ ಅಪಾರ್ಟ್ಮೆಂಟ್ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆಎ-41-ಇಎಫ್-7518 ನಂಬರಿನ ಬೈಕ್ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ಪರಿಣಾಮ ಶಿವನ್ ನೆಲಕ್ಕೆ ಬಿದ್ದು ತಲೆಗೆ ಭಾರೀ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದಾರೆ. ಅಪಘಾತ ಮಾಡಿದ ಬೈಕ್ ಸವಾರನು ತಕ್ಷಣವೇ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುವನ್ನು ಅವರ ಪುತ್ರ ವಿನೀಶ್ ಎಸ್. ನಾಯರ್ (37) ತಕ್ಷಣವೇ ಆವೇಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಬೈಕ್ ಸವಾರನ ಪತ್ತೆಗೆ…

ಮುಂದೆ ಓದಿ..
ಸುದ್ದಿ 

ಬಿಬಿ ಸರ್ವಿಸ್ ರಸ್ತೆಯಲ್ಲಿ ಟಿವಿಎಸ್ ಸ್ಕೂಟರ್ ಡಿಕ್ಕಿ – ವ್ಯಕ್ತಿಗೆ ಗಾಯ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 12:2025ಬಿಬಿ ಸರ್ವಿಸ್ ರಸ್ತೆ, ಜಿಕೆವಿಕೆ ಬಸ್ ನಿಲ್ದಾಣದ ಹತ್ತಿರ ನಡೆದಿದ್ದ ವೇಳೆ ಟಿವಿಎಸ್ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿಗೆ ಗಾಯವಾದ ಘಟನೆ ನಡೆದಿದೆ. ಆಶಿಶ್ ಅವರ ತಂದೆಯಾದ ಆನಂದ ಪೂಜಾರಿ ಅವರು ತಮ್ಮ ಹೆಂಡತಿ ಜಯಂತಿ ಅವರೊಂದಿಗೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ಕಂಸಂದ್ರ ದಿಕ್ಕಿನಿಂದ ಬಂದ ಟಿವಿಎಸ್ ಸ್ಕೂಟರ್ (ನಂ KA-02-52-8215) ಅವರ ಎಡ ಕಾಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆನಂದ ಪೂಜಾರಿ ಅವರ ಎಡ ಕಾಲಿಗೆ ಬಲವಾದ ಪೆಟ್ಟು ಬಿದ್ದು ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಅವರ ಮಗ ಆಶೀಶ್ (23) ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಕುಟುಂಬ ಜಮೀನು ಗಲಾಟೆ – ವ್ಯಕ್ತಿಗೆ ಗಂಭೀರ ಗಾಯ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 12 2025ಕುಟುಂಬ ಜಮೀನು ವಿಚಾರದಲ್ಲಿ ಉಂಟಾದ ವೈಷಮ್ಯ ತೀವ್ರಗೊಂಡು ಗಲಾಟೆಗೆ ತಿರುಗಿದ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಾಜು ಅವರ ಹೇಳಿಕೆಯಂತೆ, ಆಗಸ್ಟ್ 5ರಂದು ಬೆಳಗ್ಗೆ 8.30ರ ಸುಮಾರಿಗೆ, ಪಕ್ಕದ ಮನೆಯಲ್ಲಿದ್ದ ದೊಡ್ಡಮ್ಮ ಮುನಿಯಮ್ಮ ಅವರು ನಾಗರಾಜು ಅವರ ತಮ್ಮನಾದ ಕೃಷ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ಉಂಟಾದ ವಾಗ್ವಾದಕ್ಕೆ, ಶ್ರೀನಿವಾಸ, ಕಿಶೋರ್, ಹರೀಶ್ ಹಾಗೂ ಚಂದ್ರಕಲಾ ಸೇರಿಕೊಂಡು ನಾಗರಾಜು ಮತ್ತು ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಘಟನೆಯ ವೇಳೆ, ಶ್ರೀನಿವಾಸ ಅವರು ನಾಗರಾಜ ಅವರ ಕುತ್ತಿಗೆಯ ಪಟ್ಟಿಯನ್ನು ಹಿಡಿದು ಮುಖಕ್ಕೆ ಹೊಡೆದಿದ್ದು, ಹರೀಶ್ ಅವರು ನೀಲಗಿರಿ ದೊಣ್ಣೆಯಿಂದ ನಾಗರಾಜು ತಲೆಗೆ ಬಲವಾದ ಹೊಡೆತ ನೀಡಿದ್ದಾರೆ. ಚಂದ್ರಕಲಾ ಮತ್ತು ಕಿಶೋರ್ ಕೃಷ್ಣನಿಗೆ ಕೈಯಿಂದ ಹೊಡೆದಿದ್ದಾರೆ. ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿದ ನಾಗರಾಜು ಪತ್ನಿ ಲಕ್ಷ್ಮೀದೇವಿಯವರಿಗೂ ಹೊಡೆತ ಬಿದ್ದಿದೆ. ಸ್ಥಳೀಯ ವೆಂಕಟೇಶ್…

ಮುಂದೆ ಓದಿ..
ಸುದ್ದಿ 

ಅಗ್ರಹಾರ ಬಡಾವಣೆಯಲ್ಲಿ 18 ವರ್ಷದ ಯುವತಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 12 2018ನಗರದ ಅಗ್ರಹಾರ ಬಡಾವಣೆಯಲ್ಲಿ 18 ವರ್ಷದ ಯುವತಿ ಕಾಣೆಯಾದ ಘಟನೆ ನಡೆದಿದೆ. ಕಾಣೆಯಾದ ಯುವತಿ ಅನ್ನಪೂರ್ಣ ಅವರು ನವಾಮಿ ಅಪಾರ್ಟ್‌ಮೆಂಟ್‌ನಲ್ಲಿ ಪ್ರವೀಣ ಎಂಬವರ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಸಂಪಿಗೆಹಳ್ಳಿ ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 9ರಂದು ಸಂಜೆ 4 ಗಂಟೆಯ ವೇಳೆಗೆ ತಾಯಿಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆ ಬಿಟ್ಟ ಅನ್ನಪೂರ್ಣ, ರಾತ್ರಿ ವಾಪಸ್ ಬರಲಿಲ್ಲ. ಕುಟುಂಬದವರು ಮೊಬೈಲ್‌ಗೆ ಕರೆ ಮಾಡಿದರೂ ಸ್ವಿಚ್ ಆಫ್ ಆಗಿದ್ದು, ಸಂಬಂಧಿಕರು ಹಾಗೂ ಪರಿಚಿತರಿಂದ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಕಾಣೆಯಾದ ಯುವತಿಯ ಎತ್ತರ ಸುಮಾರು 5 ಅಡಿ 2 ಇಂಚು, ಗೋಧಿ ಮೈಬಣ್ಣ, ಕಪ್ಪು ಕೂದಲು, ವಿಶೇಷ ಗುರುತು ಇಲ್ಲ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡಬಲ್ಲ ಅವರು ಕಾಣೆಯಾದಾಗ ಹಳದಿ ಬಣ್ಣದ ಚೂಡಿದಾರ ಧರಿಸಿದ್ದರು. ಈ ಸಂಬಂಧ…

ಮುಂದೆ ಓದಿ..
ಸುದ್ದಿ 

ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ಯತ್ನ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 12 2025ಚಿಕ್ಕ ಬೆಟ್ಟಹಳ್ಳಿ ಗ್ರಾಮದಲ್ಲಿ ನಿವೇಶನ ಸಂಖ್ಯೆ 8ನ್ನು ನಕಲಿ ದಾಖಲೆ ಮೂಲಕ ಕಬಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಪೀಡಿತ ರಮೇಶ್ ಅವರು 2017ರಲ್ಲಿ ನಿವೇಶನವನ್ನು ಕಾನೂನುಬದ್ದವಾಗಿ ಖರೀದಿ ಮಾಡಿ, ಶೆಡ್ ನಿರ್ಮಿಸಿ ವಾಸಿಸುತ್ತಿದ್ದರು. ಆದರೆ ಕೆ. ವೇಣುಗೋಪಾಲ್ ಎಂಬಾತ, ನಕಲಿ ಕೆ. ನಾಗರಾಜ್ ಮತ್ತು ಜಯಲಕ್ಷ್ಮಿ ಎಂದು ತೋರಿಸಿದವರ ಸಹಾಯದಿಂದ 2015ರಲ್ಲಿ ನಕಲಿ ಗಿಫ್ಟ್ ಡೀಡ್ ಸೃಷ್ಟಿಸಿ, ಅದನ್ನು ಎ. ಅಮರನಾಥ ರೆಡ್ಡಿಗೆ ಹಸ್ತಾಂತರ ಮಾಡಿದ್ದಾನೆ. ಅಮರನಾಥ ರೆಡ್ಡಿ ಆ ನಕಲಿ ದಾಖಲೆ ಆಧರಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಸಾಲ ಪಡೆದಿದ್ದಾನೆ. ಬ್ಯಾಂಕ್ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡದೇ ಸಾಲ ನೀಡಿರುವ ಆರೋಪ ಇದೆ. ಪೀಡಿತರು ಆರೋಪಿಗಳೊಂದಿಗೆ ಬ್ಯಾಂಕ್ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಆಸ್ತಿ ವಂಚನೆ – ನಕಲಿ ದಾಖಲೆಗಳ ಮೂಲಕ ಕಬಳಿಕೆ ಯತ್ನ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 12 2025ಯಲಹಂಕ ತಾಲೂಕಿನ ಕುವೆಂಪುನಗರದ ಸಿಂಗಾಪುರ ಗ್ರಾಮದಲ್ಲಿ ಆಸ್ತಿ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ದಿವ್ಯ ಅವರ ಹೇಳಿಕೆಯ ಪ್ರಕಾರ, 2010ರಲ್ಲಿ ಅವರು ಸೈಟ್ ನಂ.109ರಲ್ಲಿ ಮನೆ ನಿರ್ಮಿಸಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತಾಯಿ ನಿಧನದ ಬಳಿಕ 2024ರ ಜನವರಿ ಮೊದಲ ವಾರದಲ್ಲಿ ಆರೋಪಿಗಳಾದ ಎ2 ಮತ್ತು ಎ3ರು ಅನುಮತಿ ಇಲ್ಲದೇ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಬಾಡಿಗೆಗೆ ನೀಡಲು ಯತ್ನಿಸಿದರು. ತನಿಖೆಯಲ್ಲಿ, ಆರೋಪಿಗಳು ಎ1ರಿಂದ ಉಡುಗೊರೆಯಾಗಿ ಪಡೆದಿದ್ದೇವೆಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬಹಿರಂಗವಾಗಿದೆ. ಪಿರ್ಯಾದಿಯ ಪ್ರಕಾರ, ಈ ಮೂವರು ಆರೋಪಿಗಳು ಸುಳ್ಳು ದಾಖಲೆಗಳ ಆಧಾರದ ಮೇಲೆ ಆಸ್ತಿಯನ್ನು ಕಬಳಿಸಲು ಬೆದರಿಕೆ ಹಾಕಿದ್ದು, ವಂಚನೆಗೆ ಮುಂದಾಗಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಎ1, ಎ2 ಮತ್ತು ಎ3ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಮನೆಯ ಕಿಟಕಿಯಿಂದ ಚಿನ್ನ ಮತ್ತು ನಗದು ಕಳವು

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 12 2025 ನಗರದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 8, 2025 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶಿವಣ್ಣ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ದೂರುದಾರರು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ 20 ಗ್ರಾಂ ತೂಕದ ಚಿನ್ನದ ಸರ ಮತ್ತು ₹2000 ನಗದು ಇಟ್ಟು, ಅದನ್ನು ಕೋಣೆಯ ಅಲಮಾರಿಯ ಮೇಲೆ ನೇತು ಹಾಕಿದ್ದರು. ಮಲಗಿಕೊಂಡಿದ್ದ ಸಮಯದಲ್ಲಿ, ಮನೆಯ ಹಿಂಭಾಗದ ಕಿಟಕಿಯ ಮೂಲಕ ಉದ್ದವಾದ ಕಟ್ಟಿಗೆಯನ್ನು ಬಳಸಿಕೊಂಡು ಅಪರಿಚಿತ ಕಳ್ಳನು ಬ್ಯಾಗ್ ಎಗರಿಸಿದನು. ನಂತರ ಅದರಲ್ಲಿದ್ದ ಚಿನ್ನದ ಸರ ಮತ್ತು ನಗದು ಕಸಿದು, ಖಾಲಿ ಬ್ಯಾಗ್ ಅನ್ನು ಪ್ಯಾಸೇಜ್‌ನಲ್ಲಿ ಬಿಸಾಕಿ ಪರಾರಿಯಾದನು. ಘಟನೆಯ ಸಂಬಂಧ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳನ ಪತ್ತೆಗಾಗಿ ತನಿಖೆ ಮುಂದುವರಿಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ……………

Taluknewsmedia.com

Taluknewsmedia.comಭಾರತದ ಸ್ವಾತಂತ್ರ್ಯ…….ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ……………ಉಕ್ಕಿ ಹರಿಯುವ ದೇಶಪ್ರೇಮ………..ಎಲ್ಲೆಲ್ಲೂ ರಾಷ್ಟ್ರಗೀತೆ – ರಾಷ್ಟ್ರಧ್ವಜ…….ಜೈ ಭಾರತ್ ಘೋಷಣೆ……ತುಂಬಾ ಸಂತೋಷ……ಆದರೆ,ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ………ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು…..ಇದೇ ಕಣ್ಣುಗಳೇ  ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು….ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆಕೈ ಚಾಚುವುದು…..ಇದೇ ಕಾಲುಗಳೇ ಹಣ, ಹೆಂಡ ಪಡೆದು ಮತದಾನ ಕೇಂದ್ರಕ್ಕೆ  ಸಾಗುವುದು….ಇದೇ ತೋಳುಗಳೇ ಅತ್ಯಾಚಾರಕ್ಕೆ ಬಳಸಲ್ಪಡುವುದು….ಇದೇ ಮನಸ್ಸುಗಳೇ ಇಂದು ದೇಶದಲ್ಲಿ ಅರಾಜಕತೆ ಅಸಹಿಷ್ಣತೆ ಉಂಟು ಮಾಡುತ್ತಿರುವುದು………..ಜನರನ್ನು ಟೀಕಿಸಿದ್ದಕ್ಕೆ ಬೇಸರವಾಗುತ್ತಿದೆಯೇ ?ಬನ್ನಿ ನನ್ನೊಂದಿಗೆ…..ಇಡೀ ದೇಶದ ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆಯಿಂದ ವಿಧಾನಸೌದದವರೆಗೆ,ಜಮೀನು ನೋಂದಣಿ ಕಚೇರಿಯಿಂದ ಮರಣ ನೋಂದಣಿ ಕಚೇರಿಯವರೆಗೆ ಲಂಚವಿಲ್ಲದೆ ಕೆಲಸವಾಗುವುದು ಅಪರೂಪ.ಒಡವೆ ಧರಿಸಿದ ಒಂಟಿ ಹೆಣ್ಣು ಇಲ್ಲಿ ಸುರಕ್ಷಿತ ಎಂದು ಹೇಳುವ ಒಂದೇ ಒಂದು ಜನನಿಬಿಡ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣವನ್ನು ತೋರಿಸಿ.ಕಾನೂನು ತಜ್ಞರ ಸಲಹೆ…

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ರಿಂಗ್‌ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಮಹಿಳೆ ಗಂಭೀರ ಗಾಯ

Taluknewsmedia.com

Taluknewsmedia.comಬೆಂಗಳೂರು, ಆ.08 – ಬೆಳಗಿನ ಜಾವ ಹೆಬ್ಬಾಳ ರಿಂಗ್‌ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪೊಲೀಸರ ಮಾಹಿತಿಯಂತೆ, ಪರಶುರಾಮ್ ಅವರ ಮಗಳಾದ ನೇಹಾ ಪಿ. ಗಡ್ಕರಿ (30) ಅವರು ಶುಕ್ರವಾರ ಬೆಳಿಗ್ಗೆ ಸುಮಾರು 6.30 ರಿಂದ 6.40ರ ವೇಳೆಗೆ ತಮ್ಮ ಸ್ಕೂಟರ್ (ನಂಬರ KA-04-KW-0201) ನಲ್ಲಿ ಮನೆಯಿಂದ ಆಫೀಸ್‌ಗೆ ತೆರಳುತ್ತಿದ್ದರು. ಲುಂಬಿನಿ ಗಾರ್ಡನ್‌ ವೀರಣ್ಯಪಾಳ್ಯ ಅಪ್‌ರ್ಯಾಂಪ್ ಹತ್ತಿರ ವೇಗ ಹಾಗೂ ನಿರ್ಲಕ್ಷ್ಯದಿಂದ ಸವಾರಿ ಮಾಡುವ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ತಲೆಗೆ ಪೆಟ್ಟಾಗಿದ್ದಾಳೆ. ಸಾರ್ವಜನಿಕರ ನೆರವಿನಿಂದ ಪ್ರೈವೇಟ್ ಆಂಬ್ಯುಲೆನ್ಸ್ ಮೂಲಕ ಅವರನ್ನು ತಕ್ಷಣವೇ ಆಸ್ಟರ್ CMI ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಮಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರಿಂದ ದೂರುವನ್ನು ತಡವಾಗಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಮುಂದೆ ಓದಿ..
ಸುದ್ದಿ 

ಬಿ.ಕಾಂ ವಿದ್ಯಾರ್ಥಿ ನಾಪತ್ತೆ – ಹುಡುಕಾಟ ಜೋರಾಗಿದೆ

Taluknewsmedia.com

Taluknewsmedia.comಬೆಂಗಳೂರು, – ನಗರದ ಸರ್ಮಾಪುರದಲ್ಲಿರುವ ಎಸ್.ವಿ.ಪಿ. ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಕೆ. ಮಂಜುನಾಥ್ (ವಯಸ್ಸು ಅಂದಾಜು 21) ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಾತೃ ಫೌಂಡೇಷನ್‌ನಲ್ಲಿ ಸುಮಾರು 7 ವರ್ಷಗಳಿಂದ ವಾಸಿಸುತ್ತಿದ್ದ ಮಂಜುನಾಥ್‌ರನ್ನು, ಜು. 6 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಸಂಸ್ಥೆಯ ಚಾಲಕರಾದ ಕುಮಾರಸ್ವಾಮಿ ಕಾಲೇಜಿಗೆ ಬಿಟ್ಟಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ, ವಿದ್ಯಾರ್ಥಿ ಕಾಣೆಯಾಗಿರುವುದಾಗಿ ಫೌಂಡೇಷನ್‌ಗೆ ತಿಳಿಸಿದ್ದಾರೆ. ಘಟನೆಯ ನಂತರ ಕಾಲೇಜು ಆವರಣ, ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬೆಂಗಳೂರು ಮೆಜೆಸ್ಟಿಕ್ ಭಾಗಗಳಲ್ಲಿ ಹುಡುಕಾಟ ನಡೆಸಿದರೂ, ಮಂಜುನಾಥ್ ಪತ್ತೆಯಾಗಿಲ್ಲ. ಹುಡುಗನ ತಂದೆ-ತಾಯಿಗೆ ವಿಷಯ ತಿಳಿಸಲಾಗಿದ್ದು, ಮಂಜುನಾಥ್ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.

ಮುಂದೆ ಓದಿ..