ಸುದ್ದಿ 

ಸರ್ಕಾರದಿಂದ ಆಂಬುಲೆನ್ಸ್ ಸೇವೆ ಸಿಬ್ಬಂದಿ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ.

Taluknewsmedia.com

Taluknewsmedia.comಸರ್ಕಾರದಿಂದ ಆಂಬುಲೆನ್ಸ್ ಸೇವೆ ಸಿಬ್ಬಂದಿ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ. ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕವಾಗುತ್ತಿಲ್ಲ ಹೊರಗುತ್ತಿಗೆ ಹಾಗೂ ಗುತ್ತಿಗೆಯ ಆಧಾರದ ಮೇಲೆ ನಡೆಯುವಂತಹ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಹೀಗೆ ಸಾವಿರಾರು ವಿಚಾರಗಳು ಮತ್ತೆ ಅವುಗಳ ಗೊಂದಲಗಳಲ್ಲಿ ಇರುವವರಿಗೆ ಸರಕಾರ ಕೊಂಚ ರಿಲೀಫ್ ಕೊಟ್ಟಿದೆ . ರಾಜ್ಯದಲ್ಲಿ ಇದು ಮೊದಲ ಬಾರಿಗೆ ಅಂತ ಹೇಳಬಹುದು 108 ಅಂದ್ರೆ ಆಂಬುಲೆನ್ಸ್ ಸೇವೆ ಮುಖ್ಯವಾಗಿ ಜನರಿಗೆ ತುಂಬಾ ಆರೋಗ್ಯದ ವಿಚಾರದಲ್ಲಿ ಹತ್ತಿರವಾಗಿ ಇರುವಂತದ್ದು. ಈ ಒಂದು ಸೇವೆಯಲ್ಲಿ ಗುತ್ತಿಗೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಎಂದು ಆರೋಗ್ಯ ಇಲಾಖೆ ತಿಳಿಸಿ ಮಂಜೂರು ಕೂಡ ಆಗಿದೆ. ಹಾಗೆ 104 ಸಹಾಯವಾಣಿ ಯೋಜನೆಯನ್ನು ಕೂಡ ಆರೋಗ್ಯ ವತಿಯಿಂದಲೇ ಜಾರಿಗೊಳಿಸಲಾಗುತ್ತದೆ . ಈ ಎರಡು ವಿಭಾಗಕ್ಕೆ ಸಂಬಂಧಪಟ್ಟಹಾಗೆ 3691 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಕ್ಕೆ ಸರ್ಕಾರ ಒಪ್ಪಿಗೆಯನ್ನು ಹಾಗೂ ಮಂಜೂರಾತಿಯನ್ನು ನೀಡಿದೆ. ನರ್ಸಿಂಗ್ ಯಾರ್ ಮಾಡಿದರೂ ಖುಷಿ ಪಡುವಂತ…

ಮುಂದೆ ಓದಿ..
ಸುದ್ದಿ 

2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ

Taluknewsmedia.com

Taluknewsmedia.com2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ 2025ನೇ ಸಾಲಿನ ಬಹುನಿರೀಕ್ಷಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ ಪ್ರದಾನ ಮಾಡಲಾಗಿದೆ. ಈ ಬಾರಿ ಒಟ್ಟು 338 ಮಂದಿ ಮತ್ತು ಸಂಸ್ಥೆಗಳು ನಾಮನಿರ್ದೇಶಿತರಾಗಿದ್ದರು. ಮಚಾಡೊ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉಳಿಸಲು ಹಾಗೂ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ ಶಾಂತಿಯುತ ಬದಲಾವಣೆಗಾಗಿ ನಡೆಸಿದ ಹೋರಾಟಕ್ಕೆ ಈ ಗೌರವ ದೊರೆತಿದೆ. ಪ್ರಶಸ್ತಿಯ ಮೊತ್ತ ಸುಮಾರು ₹10.38 ಕೋಟಿ ಆಗಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಕುರಿತು ಪ್ರಕಟಣೆ ನೀಡಿದ್ದು, “ಮಚಾಡೊ ಅವರು ಒಮ್ಮೆಗೆ ತೀವ್ರವಾಗಿ ವಿಭಜನೆಯಾಗಿದ್ದ ವಿರೋಧ ಪಕ್ಷಗಳಲ್ಲಿ ಸಾಮರಸ್ಯ ನಿರ್ಮಿಸಿ, ದೇಶದಲ್ಲಿ ಸ್ವತಂತ್ರ ಚುನಾವಣೆ ಮತ್ತು ಪ್ರಾತಿನಿಧಿಕ ಆಡಳಿತದ ಅಗತ್ಯತೆಯನ್ನು ಒತ್ತಿ ಹೇಳಿದರು. ಅವರ ಈ ನಿರಂತರ ಪ್ರಯತ್ನಗಳು ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿವೆ” ಎಂದು…

ಮುಂದೆ ಓದಿ..
ಸುದ್ದಿ 

“ಬೆಂಗಳೂರು ನಡಿಗೆ” ಆರಂಭ – ಪ್ರಚಾರ ನಡಿಗೆಯಾ? ಸಮಸ್ಯೆ ಪರಿಹಾರದ ನಡಿಗೆಯಾ?

Taluknewsmedia.com

Taluknewsmedia.com“ಬೆಂಗಳೂರು ನಡಿಗೆ” ಆರಂಭ – ಪ್ರಚಾರ ನಡಿಗೆಯಾ? ಸಮಸ್ಯೆ ಪರಿಹಾರದ ನಡಿಗೆಯಾ? ನಗರದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ಲಾಲ್ ಬಾಗ್ ಪೂರ್ವ ದ್ವಾರದಲ್ಲಿ “ಬೆಂಗಳೂರು ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆದರೆ ನಾಗರಿಕರ ಪ್ರಶ್ನೆ — ನಡಿಗೆಗಳಿಂದ ಸಮಸ್ಯೆ ಪರಿಹಾರವಾಗುವುದೇ? ನಗರದ ಪ್ರತಿಯೊಂದು ವಾರ್ಡ್‌ನಲ್ಲಿ ಮೂಲಸೌಕರ್ಯ ಹದಗೆಟ್ಟಿದೆ, ಗುಂಡಿಗಳು, ಒಳಚರಂಡಿ ತೊಂದರೆ, ಕಸದ ಸಮಸ್ಯೆ, ಟ್ರಾಫಿಕ್ ಅಸ್ತವ್ಯಸ್ತತೆ — ಇವುಗಳ ನಡುವೆ ನಡೆಯುವ ಈ ನಡಿಗೆ, ಜನಸಾಮಾನ್ಯರ ಕಷ್ಟದ “ನಿರೀಕ್ಷಾ ನಡಿಗೆ” ಆಗಿ ತೋರುತ್ತಿದೆ. ಡಿ.ಕೆ. ಶಿವಕುಮಾರ್ ಅವರು ನಾಗರಿಕರ ಅಹವಾಲುಗಳನ್ನು ಖುದ್ದಾಗಿ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದರೂ, ಹಿಂದಿನ ಇಂತಹ ಕಾರ್ಯಕ್ರಮಗಳಲ್ಲಿ ನೀಡಿದ ಭರವಸೆಗಳು ಎಷ್ಟು ನೆಲೆಯಾದವು ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ನಗರಾಭಿವೃದ್ಧಿ…

ಮುಂದೆ ಓದಿ..
ಅಂಕಣ 

ಕುರ್ಚಿಗಾಗಿ ಕಿತ್ತಾಟ…….

Taluknewsmedia.com

Taluknewsmedia.comಕುರ್ಚಿಗಾಗಿ ಕಿತ್ತಾಟ……. ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ….. ಸಮಾಜದ ನಡೆ ದುರಂತದ ಕಡೆ……. ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ…….. ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ. ನಿಮಗೆ ತಿಳಿದಿರಬಹುದು,ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು ‌75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗೃಹ…

ಮುಂದೆ ಓದಿ..
ಸುದ್ದಿ 

ವಿಷಕಾರಿ ಕೆಮ್ಮಿನ ಸಿರಪ್ ದುರಂತಕ್ಕೆ ಕೇಂದ್ರದ ಕಠಿಣ ಹೊಡೆತ

Taluknewsmedia.com

Taluknewsmedia.comವಿಷಕಾರಿ ಕೆಮ್ಮಿನ ಸಿರಪ್ ದುರಂತಕ್ಕೆ ಕೇಂದ್ರದ ಕಠಿಣ ಹೊಡೆತ ವಿಷಕಾರಿ ಕೆಮ್ಮಿನ ಸಿರಪ್ ಸೇವನೆಯಿಂದ 20ಕ್ಕೂ ಹೆಚ್ಚು ನಿರಪರಾಧ ಮಕ್ಕಳ ಪ್ರಾಣ ಬಲಿಯಾದ ಹಿನ್ನೆಲೆ, ಕೇಂದ್ರ ಸರ್ಕಾರವು ಔಷಧ ಕಂಪನಿಗಳ ವಿರುದ್ಧ ಇತಿಹಾಸದಲ್ಲೇ ಅತಿ ಕಠಿಣ ಕ್ರಮ ಕೈಗೊಂಡಿದೆ. 🔹 ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ತನಿಖೆ ನಡೆಸಿ, ಮೂರೂ ಕಂಪನಿಗಳ ಉತ್ಪನ್ನಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದುದನ್ನು ದೃಢಪಡಿಸಿದೆ.🔹 ಪರಿಣಾಮವಾಗಿ ಸರ್ಕಾರವು ಕೆಳಗಿನ ಮೂರು ಸಿರಪ್‌ಗಳ ತಯಾರಿ ಹಾಗೂ ಮಾರಾಟವನ್ನು ನಿಷೇಧಿಸಿದೆ: 🧪 ಕೋಲ್ಡ್‌ರಿಫ್‌ (Coldriff) 🧪 ರೆಸ್ಪಿರ್‌ಫ್ರೆಶ್‌-ಟಿಆರ್‌ (Respirefresh-TR) 🧪 ರೀಲೈಫ್‌ (Relife) 🔹 ಈ ಸಿರಪ್‌ಗಳನ್ನು ತಕ್ಷಣ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಹಾಗೂ ಉತ್ಪಾದನೆ ನಿಲ್ಲಿಸುವಂತೆ ಕಂಪನಿಗಳಿಗೆ ಸರ್ಕಾರ ಆದೇಶಿಸಿದೆ.🔹 ಕೇಂದ್ರ ಸರ್ಕಾರವು ಈ ಬೆಳವಣಿಗೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಅಧಿಕೃತ ವರದಿ ಸಲ್ಲಿಸಿದೆ.🔹 ಜೊತೆಗೆ, ಈ ಸಿರಪ್‌ಗಳು ಬೇರೆ…

ಮುಂದೆ ಓದಿ..
ಸುದ್ದಿ 

ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಮೈಸೂರು ಪೊಲೀಸರು ಗುಂಡೇಟು..

Taluknewsmedia.com

Taluknewsmedia.comತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಮೈಸೂರು ಪೊಲೀಸರು ಗುಂಡೇಟು ಮೈಸೂರು: ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಶಂಕಿತನ ಕಾರ್ತಿಕ್ ಅವರನ್ನು ಪೊಲೀಸರ ವಶಕ್ಕೆ ಪಡೆಯುವ ವೇಳೆ, ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ಪ್ರಕರಣದ ಸಂಬಂಧದಲ್ಲಿ ಕಾರ್ತಿಕ್ ಅವರನ್ನು ಸಿದ್ದಲಿಂಗಪುರಕ್ಕೆ ಕರೆದುಕೊಂಡು ಹೋಗಿ ಮರುಬರುವಾಗ, ಮೇಟಗಳ್ಳಿ ಪ್ರದೇಶದಲ್ಲಿ ಅಧಿಕಾರಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯ ಸ್ಥಳದಲ್ಲಿ ನಿಂತಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಾರ್ತಿಕ್ ಅವರನ್ನು ಕೊಳ್ಳೇಗಾಲದಲ್ಲಿ ವಶಪಡಿಸಲಾಗಿತ್ತು. ಮೈಸೂರು ಪೊಲೀಸರು ವಿಚಾರಣೆ ನಡೆಸಿ ಅವನನ್ನು ಮನೆಗೆ ಕರೆದುಕೊಂಡು ಹೋಗಿದ್ದಾಗ, ಮರಳಿ ಬರುವ ಸಮಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರ್ತಿಕ್ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆ. ಕಾರ್ತಿಕ್ ಬಲಗಾಲದ ತೊಡೆಗೆ ಗುಂಡು ಹಾರಲಾಗಿದ್ದು, ಅವನನ್ನು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಅವರಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಬೆಂಕಿ ಅವಘಡ – ಯುವಕ, ಯುವತಿ ಸಾವು

Taluknewsmedia.com

Taluknewsmedia.comಯಲಹಂಕದಲ್ಲಿ ಬೆಂಕಿ ಅವಘಡ – ಯುವಕ, ಯುವತಿ ಸಾವು ಬೆಂಗಳೂರು : ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ ಸಾವು ಕಂಡಿದ್ದಾನೆ. ಈ ವೇಳೆ ಹೊಗೆಯಿಂದ ಉಸಿರುಗಟ್ಟಿ ಯುವತಿಯೂ ಸಾವನ್ನಪ್ಪಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ನಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಲಾಡ್ಜ್‌ನ ಒಂದು ರೂಮಿನಲ್ಲಿ ಗದಗ ಮೂಲದ ಯುವಕ ಹಾಗೂ ಹುನಗುಂದ ಮೂಲದ ಕಾವೇರಿ ಬಡಿಗೇರ್ ಎಂಬ ಯುವತಿ ವಾಸಿಸುತ್ತಿದ್ದರು. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಸಮೀಪದ ಬಿಲ್ಡಿಂಗ್ ಸ್ಪಾದಲ್ಲಿ ಉದ್ಯೋಗದಲ್ಲಿದ್ದರು. ಬೆಳಗಿನ ವೇಳೆ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ತುಂಬಿಕೊಂಡಿತ್ತು. ಹೊಗೆಯಿಂದ ಉಸಿರುಗಟ್ಟುತ್ತಿದ್ದ ಯುವತಿಯು ತಕ್ಷಣ ಲಾಡ್ಜ್ ಸಿಬ್ಬಂದಿಗೆ ಕರೆಮಾಡಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಬಾತ್‌ರೂಮ್‌ನೊಳಗಿದ್ದ ಯುವತಿ ಬಾಗಿಲು ಹಾಕಿಕೊಂಡಿದ್ದಳು. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬಾಗಿಲು ಒಡೆದು ಒಳ ಪ್ರವೇಶಿಸಿ ಇಬ್ಬರ ಮೃತದೇಹಗಳನ್ನು…

ಮುಂದೆ ಓದಿ..
ಸುದ್ದಿ 

ಸುದ್ದಿ-ಕಲೆಯ ನಡುವೆ ಭಕ್ತಿ ಮತ್ತು ವ್ಯವಹಾರದ ರೇಖೆ

Taluknewsmedia.com

Taluknewsmedia.comಸುದ್ದಿ-ಕಲೆಯ ನಡುವೆ ಭಕ್ತಿ ಮತ್ತು ವ್ಯವಹಾರದ ರೇಖೆ ಕಾಂತಾರ ವಿವಾದದ ನಂತರದ ಸಾಮಾಜಿಕ ಚಿಂತನೆ ದೈವಾರಾಧನೆಯ ಆವೇಶದಿಂದ ಪರದೆಯ ಹಾವಳಿ.. ತುಳುನಾಡಿನ ಜನಜೀವನದಲ್ಲಿ ದೈವವು ಕೇವಲ ಭಕ್ತಿ ಅಥವಾ ಪೂಜೆಗಷ್ಟೇ ಸೀಮಿತವಲ್ಲ; ಅದು ಸಂಸ್ಕೃತಿಯ ಶಿರೋಮಣಿಯಂತಿದೆ. ದೈವನರ್ತನ, ಆವೇಶ, ಬಲಿವೇಳೆ — ಇವು ತಲೆಮಾರಿನಿಂದ ತಲೆಮಾರಿಗೆ ಪಾರಂಪರ್ಯವಾಗಿ ಹರಿದು ಬಂದ ಪವಿತ್ರ ಆಚರಣೆಗಳು. ಆದರೆ, ‘ಕಾಂತಾರ’ ಚಿತ್ರದ ನಂತರ ದೈವದ ಈ ಪವಿತ್ರ ಭಾವನೆಗಳು ಪರದೆಯ ಕಲ್ಪನೆಗಳ ಭಾಗವಾಗಿವೆ. ಚಿತ್ರದಲ್ಲಿ ತೋರಿಸಲಾದ ದೃಶ್ಯಗಳು ಪ್ರೇಕ್ಷಕರ ಹೃದಯ ತಟ್ಟಿದರೂ, ಅದು ಕೆಲವರಿಗೆ ನೋವು ತಂದಿದೆ. ದೈವಾರಾಧಕರು ಹೇಳುವಂತೆ — “ದೈವದ ಆವೇಶ ಮನೋರಂಜನೆಗೆ ಅಲ್ಲ; ಅದು ನಂಬಿಕೆಯ ಆಳವಾದ ಪ್ರತ್ಯಕ್ಷತೆ”. ಭಕ್ತಿಯಿಂದ ವ್ಯವಹಾರಕ್ಕೆ — ರೇಖೆ ಎಲ್ಲಿ? ಕಲೆಯು ಭಾವನೆಗಳ ಪ್ರತಿಬಿಂಬ. ಆದರೆ ಆ ಭಾವನೆಗಳು ವ್ಯವಹಾರದ ಸಾಧನವಾಗುವ ಕ್ಷಣದಲ್ಲೇ ಅದರ ಪವಿತ್ರತೆ ಸವಾಲಿಗೆ ಒಳಗಾಗುತ್ತದೆ. ‘ಕಾಂತಾರ’ ಚಿತ್ರವು…

ಮುಂದೆ ಓದಿ..
ಅಂಕಣ 

ತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ…….

Taluknewsmedia.com

Taluknewsmedia.comತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ……. ಅಕ್ಟೋಬರ್ 16 – ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ….. ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿದ್ದ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ….. ಅಕ್ಟೋಬರ್ 16 ” ವಿಶ್ವ ಆಹಾರ ದಿನ “….. 1945 ರಲ್ಲಿ ವಿಶ್ವಸಂಸ್ಥೆಯ ” Food and agriculture organization ( FAO ) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಲಕ್ಷಾಂತರ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ…

ಮುಂದೆ ಓದಿ..
ಸುದ್ದಿ 

ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು.

Taluknewsmedia.com

Taluknewsmedia.comಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು. ಸಮಾಜದಲ್ಲಿ ಸಾಕಷ್ಟು ರಕ್ಷಣಾ ವೇದಿಕೆಗಳು ಅನಾಥಾಶ್ರಮಗಳು ಹಾಗೆ ನಿರ್ಗತಿಕರ ಆಶ್ರಮಗಳು ಕೂಡ ಸಾಕಷ್ಟು ಇದ್ದರು ಇಂದಿನ ದಿನಮಾನದಲ್ಲೂ ಸಹಿತ ಸಾಕಷ್ಟು ಜನ ಟೆಂಟ್ ವ್ಯವಸ್ಥೆ. ಹಾಗೂ ಬಸ್ ಸ್ಟ್ಯಾಂಡ್ ಗಳಲ್ಲಿ ತಮ್ಮ ಜೀವನವನ್ನು ಸಾಗಿಸುವುದು . ಗುಡಿ ಗುಂಡಾರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಇವುಗಳನ್ನು ಸಾಕಷ್ಟು ಕಂಡು ಹಾಗೂ ಕೇಳುತ್ತಿದ್ದೇವೆ ಕೂಡ . ಸರ್ಕಾರ ಎಷ್ಟೇ ಯೋಚನೆಗಳನ್ನು ಕೊಟ್ಟರು ಕೂಡ ಕೆಲವೊಂದಿಷ್ಟು ಜನರಿಗೆ ಅವು ತಲುಪಲು ಆಗುತ್ತಿಲ್ಲ ಇಂದಿನವರೆಗೂ ತಲುಪಿಲ್ಲ ಕೂಡ. ಅದಕ್ಕೆ ಜೀವಂತ ಸಾಕ್ಷಿ ಎಂಬಂತೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ನಿಜಕ್ಕೂ ಇದು ಕರುಳು ಎನ್ನುವ ಘಟನೆ ಕೂಡ ಹೌದು. ಹುಬ್ಬಳ್ಳಿಯಲ್ಲಿ ಓರ್ವತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸಲು ಮನೆ ಇಲ್ಲದೆ ಕೇಶವಪುರದ ರಸ್ತೆಯಲ್ಲಿ ಬರುವ ಬಸ್ ಸ್ಟ್ಯಾಂಡ್ ನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದು .…

ಮುಂದೆ ಓದಿ..