ಸುದ್ದಿ 

ವಿದೇಶಿ ಪ್ರಜೆಗಳಿಂದ 4.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ವಶ: ರಾಜಾನುಕುಂಟೆ ಪೊಲೀಸರ ಬೃಹತ್ ದಾಳಿ

ಬೆಂಗಳೂರು: 8 2025 ರಾಜಾನುಕುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಅದ್ರಿಗಾನಹಳ್ಳಿ ಗ್ರಾಮದಲ್ಲಿ ಬಾಡಿಗೆಗೆ ವಾಸವಿದ್ದ ಇಬ್ಬರು ನೈಜೀರಿಯಾದ ಪ್ರಜೆಗಳ ಮೇಲೆ ಪೊಲೀಸರ ಬೃಹತ್ ದಾಳಿ ನಡೆಯಿದ್ದು, ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ Methamphetamine (MDMA Crystals) ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 6, 2025 ರಂದು ಮಧ್ಯಾಹ್ನ 3.30ರ ಸಮಯದಲ್ಲಿ ಈ ಸಂಬಂಧ ಖಚಿತ ಮಾಹಿತಿ ದೊರೆಯುತ್ತಿದ್ದಂತೆ, ರಾಜಾನುಕುಂಟೆ ಪೊಲೀಸ್ ಇನ್ಸ್‌ಪೆಕ್ಟರ್ ಅವರ ನಿರ್ದೇಶನದಂತೆ ಪಿಸಿ 1267 ಗಿರೀಶ್ ಸ್ಥಳಕ್ಕೆ ತೆರಳಿ ಮಾಹಿತಿ ದೃಢಪಡಿಸಿದರು. ನಂತರ ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್‌ಪಿ ಅವರ ಅನುಮತಿಯಿಂದ ಶೋಧನಾ ವಾರೆಂಟ್ ಪಡೆದು, ಸಂಜೆ 4.30ಕ್ಕೆ ಇಬ್ಬರು ಪಂಚಾಯತ್ ಸಾಕ್ಷಿಗಳೊಂದಿಗೆ ಶೋಧನೆ ಕೈಗೊಳ್ಳಲಾಯಿತು. ಶೋಧನೆಯ ವೇಳೆ ಪತ್ತೆಯಾದ ಮಾದಕ ವಸ್ತುಗಳು: 2,820 ಗ್ರಾಂ Methamphetamine Crystals (MDMA) 200 ಗ್ರಾಂ ಒಣಗಿದ ಹೈಡ್ರೋ ಗಾಂಜಾ ₹2,06,870 ನಗದು 2 ತೂಕ ತೀರಕ…

ಮುಂದೆ ಓದಿ..
ಸುದ್ದಿ 

ಲೋನ್ ಮಂಜೂರಿನ ಹೆಸರಿನಲ್ಲಿ ₹2 ಲಕ್ಷಕ್ಕೂ ಹೆಚ್ಚು ಮೊತ್ತದ ಆನ್‌ಲೈನ್ ಮೋಸ

ಬೆಂಗಳೂರು: 8 2025 ವೈಯಕ್ತಿಕ ಲೋನ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು, ಭದ್ರತಾ ಮೊತ್ತ ಮತ್ತು ಇತರೆ ಶುಲ್ಕಗಳ ಹೆಸರಿನಲ್ಲಿ ₹2,01,759/- ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಹರ್ಷಿತಾ ರಾಜು ಎಂ ಅವರು “METCON LEASING AND FINANCE” ಎಂಬ ಕಂಪನಿಗೆ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿದ್ದರು. ಈ ಸಂಬಂಧ 7696633378 ಮತ್ತು 7696566614 ಎಂಬ ದೂರವಾಣಿ ಸಂಖ್ಯೆಗಳಿಂದ ಅವರಿಗೆ ಕರೆ ಬಂದಿದ್ದು, ಲೋನ್ ಮಂಜೂರು ಮಾಡುವುದಾಗಿ ಹೇಳಿ ಪ್ರಾಸೆಸಿಂಗ್ ಫೀಸ್, ದಾಖಲೆ ಶುಲ್ಕ, ಟ್ಯಾಕ್ಸ್ ಮುಂತಾದ ಕಾರಣಗಳಿಂದ ಹಂತ ಹಂತವಾಗಿ ಹಣವನ್ನು ಪಡೆದುಕೊಂಡಿದ್ದಾರೆ.ಆದರೆ, ಹಣ ಪಡೆದ ನಂತರ ಯಾವುದೇ ಲೋನ್ ನೀಡದೆ, ಸಂಪರ್ಕ ಕಳಪೆ ಮಾಡಿಕೊಂಡಿದ್ದಾರೆ. ಇದು ಮೋಸ ಎಂದು ತಿಳಿದ ಬಳಿಕ ದೂರುದಾರರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.ಪೊಲೀಸರು ಸಾರ್ವಜನಿಕರನ್ನು ಎಚ್ಚರಿಕೆ ವಹಿಸಲು ಸೂಚಿಸಿದ್ದು,…

ಮುಂದೆ ಓದಿ..
ಸುದ್ದಿ 

ಸಿಮ್ ದುರಸ್ತಿ ಬಳಿಕ ಖಾತೆಯಿಂದ ₹2.96 ಲಕ್ಷ ಕಳವು

ಬೆಂಗಳೂರು:8 2025 ನಗರದ ನಿವಾಸಿಯೊಬ್ಬರು ತಮ್ಮ ಮೊಬೈಲ್ ಸಿಮ್ ದುರಸ್ತಿ ಮಾಡಿದ ನಂತರ, ಅವರ ಬ್ಯಾಂಕ್ ಖಾತೆಯಿಂದ ₹2.96 ಲಕ್ಷ ಕಳವಾಗಿರುವ ಘಟನೆ ನಡೆದಿದೆ. ಮಂಜುನಾಥ್ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಸಿಮ್ ನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣ ಅವರು ಮೊಬೈಲ್ ಸ್ಟೋರ್ ಗೆ ಹೋಗಿ ಸಿಮ್ ಕಾರ್ಡ್ ಸರಿಪಡಿಸಿಕೊಂಡರು. ಆದರೆ ಅದರ ನಂತರ ಮೊಬೈಲ್‌ಗೆ ₹6,000 ಡೆಬಿಟ್ ಆದ ಸಂದೇಶ ಬಂದಿದೆ. ತಕ್ಷಣ ಅವರು ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ, ಅವರ ಖಾತೆಯಿಂದ ಒಟ್ಟು ₹2,96,981 ರೂ. ಹಣ ಕಟ್ ಆಗಿರುವುದು ತಿಳಿದುಬಂದಿತು. ಈ ಸಂಬಂಧ ಅಪರಿಚಿತ ವ್ಯಕ್ತಿಗಳು ಹಣ ವಂಚನೆ ಮಾಡಿದ್ದಾಗಿ ಶಂಕಿಸಿ ಅವರು ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಕೆಲಸದ ನೆಪದಲ್ಲಿ 10 ಲಕ್ಷ ರೂ. ವಂಚನೆ – ಮೂವರಿಗೆ ವಿರುದ್ಧ ದೂರು

ಬೆಂಗಳೂರು, ಜುಲೈ 8 2025 ಮಗಳನ್ನು ಎರ್‌ಫೋರ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿಸುತ್ತೇವೆ ಎಂದು ನಂಬಿಸಿ, ಹಂತ ಹಂತವಾಗಿ 10 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ವೀರ, ಸೆಲ್ಲ ಹಾಗೂ ಮಂಜುಳಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಾವು ಟೈಲ್ ವಾಷಿಂಗ್ ಕೆಲಸ ಮಾಡಿಕೊಂಡಿದ್ದು, ಕುಟುಂಬದ ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತಿದ್ದೆನೆಂದು ದೂರಿನಲ್ಲಿ ತಿಳಿಸಿದ್ದಾರೆ. 2019ರಲ್ಲಿ ಆಪಾದಿತರು, ಮಗಳಿಗೆ ಉದ್ಯೋಗ ಕೊಡಿಸಿಕೊಡುತ್ತೇವೆ ಎಂದು ಹೇಳಿ, ಮೊದಲು ನಗದು ರೂಪದಲ್ಲಿ ₹3.5 ಲಕ್ಷ ಮತ್ತು ನಂತರ ಆನ್‌ಲೈನ್ ಮೂಲಕ ₹6.5 ಲಕ್ಷ ಸೇರಿದಂತೆ ಒಟ್ಟು ₹10 ಲಕ್ಷ ಪಡೆದಿದ್ದಾರೆ. ಆದರೂ, ಉದ್ಯೋಗ ಕೊಡಿಸದೇ, ಹಣವನ್ನೂ ಹಿಂದಿರುಗಿಸದೇ, ಕೇಳಲು ಹೋದಾಗ ದುರ್ವ್ಯವಹಾರ ಮಾಡಿದ್ದು, ಗಾಲಿ ಬೈದು, ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಇದುವರೆಗೆ ಕೇವಲ ₹1.45…

ಮುಂದೆ ಓದಿ..
ಸುದ್ದಿ 

ಕಾರ್ಪೆಂಟರ್ ಮೇಲೆ ಮಧ್ಯಪಾನ ಗಲಾಟೆಯಲ್ಲಿ ದೌರ್ಜನ್ಯ

ಯಲಹಂಕ, ಜುಲೈ 8 –2025 ಎಂ.ಹೊಸಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಪೆಂಟರ್ ವ್ಯಕ್ತಿ ಮೇಲೆ ಮೂರು ಜನರು ಗಲಾಟೆ ವೇಳೆ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಬಿಹಾರ ಮೂಲದ ಕಾರ್ಪೆಂಟರ್ ವ್ಯಕ್ತಿ, ಕೆಲಸಕ್ಕಾಗಿ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅವರು ರಾಜಶೇಖರ್ ಎಂಬ ಮೆಸ್ತ್ರಿಯವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 29ರಂದು (ಭಾನುವಾರ) ಮಧ್ಯಪಾನ ಮಾಡಿದ ನಂತರ ಊಟದ ವಿಚಾರಕ್ಕೆ ಗಲಾಟೆ ಸಂಭವಿಸಿದೆ. ಗಲಾಟೆಯಲ್ಲಿ ರಾಜಕುಮಾರ್ ಶರ್ಮ ಅವರು ಹಿಂಸಾತ್ಮಕವಾಗಿ ವರ್ತಿಸಿ, ಉಕ್ಕಿನ ಪಾತ್ರೆ ಮತ್ತು ಮರದ ಕಟ್ಟಿಗೆಯಿಂದ ಬಡಿದು ಗಾಯ ಮಾಡಿದ್ದಾರೆ. ಸ್ನೇಹಿತ ಬಬು ಶರ್ಮ ಅವರು ಗಾಯಾಳುವನ್ನು ತಕ್ಷಣವೇ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ರಾಜಕುಮಾರ್ ಶರ್ಮ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಮನೆ ಲೀಸ್ ಹೆಸರಿನಲ್ಲಿ ಮೋಸ – ಮಾಲೀಕರಿಗೆ ತೊಂದರೆ

ಬೆಂಗಳೂರು, ಜುಲೈ 8:2025 ಆರ್.ಕೆ. ಹೆಗಡೆನಗರದಲ್ಲಿನ ಮನೆಯ ಮಾಲೀಕರೊಬ್ಬರು ಲೀಸ್ ಹೆಸರಿನಲ್ಲಿ ಮೋಸಕ್ಕೀಡಾದ ಘಟನೆ ನಡೆದಿದೆ. ಶೇಖ್ ಅನ್ವರ್ ಬಾಷಾ ಎಂಬವರು ತಮ್ಮ ಮನೆಯನ್ನು NH Newly Homes ಕಂಪನಿಯ ಪ್ರತಿನಿಧಿಗಳಾದ ಸೈಪ್ ಉರ್ ರೆಹಮಾನ್ ಮತ್ತು ಸೈಯದ್ ಅಬ್ಬಾಸ್ ಅವರಿಗೆ ತಿಂಗಳಿಗೆ ₹21,000 ಬಾಡಿಗೆಯಲ್ಲಿ ಹಾಗೂ ₹1,50,000 ಠೇವಣಿಯಲ್ಲಿ 11 ತಿಂಗಳ ಅವಧಿಗೆ ಬಾಡಿಗೆಗೆ ನೀಡಿದ್ದರು. ಆದರೆ, ಅವರು ಬಾಡಿಗೆ ಹಣವನ್ನು ಪಾವತಿಸದೇ, ಮನೆಗೆ ಪಹೀಮ್ ತಾಜ್ ಎಂಬವರ ಕುಟುಂಬವನ್ನು ಲೀಸ್ ಹೆಸರಿನಲ್ಲಿ ನುಡಿದುಕೊಂಡಿದ್ದಾರೆ. ಮನೆ ಖಾಲಿ ಮಾಡುವಂತೆ ಕೇಳಿದಾಗ ಅವರು “ಲೀಸ್ ಹಣ ಕೊಟ್ಟಿದ್ದೇವೆ, ಅದು ಹಿಂದಿರುಗಿಸಿದರೆ ಮಾತ್ರ ಹೊರಡುತ್ತೇವೆ” ಎಂದು ಹೇಳಿದ್ದಾರೆ. ಇದಲ್ಲದೆ, ಪ್ರಾಣ ಬೆದರಿಕೆ ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶೇಖ್ ಅನ್ವರ್ ಬಾಷಾ ಅವರು ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ…

ಮುಂದೆ ಓದಿ..
ಸುದ್ದಿ 

ಯಲಹಂಕ ಉಪನಗರ ಪೊಲೀಸ್ ಠಾಣೆ ಎಎಸ್‌ಐ ವತಿಯಿಂದ ಉದ್ಯೋಷಣಾ ವಾರಂಟ್ ಮೂಲಕ ಆರೋಪಿತರ ಬಂಧನ

ಬೆಂಗಳೂರು, ಜುಲೈ 7:2025 ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಶ್ರೀ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಉದ್ಯೋಷಣಾ ವಾರಂಟ್ ಜಾರಿಗೆ ಮತ್ತೊಂದು ಯಶಸ್ವಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ, ರಾಜೀವ್ ಗಾಂಧಿ ನಗರ, ಸಂಭ್ರಮ್ ಕಾಲೇಜ್ ಹತ್ತಿರ ವಾಸಿಸುತ್ತಿರುವ ಅಜೀಮ್ ಬಿನ್ ಆತಾವುಲ್ಲಾ (30 ವರ್ಷ) ವಿರುದ್ಧ ಸಂಬಂಧಿಸಿದ ನ್ಯಾಯಾಲಯವು ಹಲವಾರು ಬಾರಿ ವಾರಂಟ್ ಜಾರಿಗೆ ತಂದಿದ್ದರೂ ಕೂಡ, ಅವರು ನ್ಯಾಯಾಲಯದ ಮುಂದೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಆರೋಪಿತನ ಪತ್ತೆಗೆ ಹಲವು ಬಾರಿ ಭದ್ರ ರೀತಿಯಲ್ಲಿ ಪ್ರಯತ್ನ ನಡೆಸಿದರೂ ವಿಫಲವಾದ ಯಲಹಂಕ ಉಪನಗರ ಪೊಲೀಸರು, ದಿನಾಂಕ 05/07/2025 ರಂದು ಸಂಜೆ 5 ಗಂಟೆ ಸುಮಾರಿಗೆ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಡಿ.ಜಿ. (ಟೋ-11684) ಹಾಗೂ ಹೆಡ್ ಕಾನ್ಸ್‌ಟೇಬಲ್ ಧನಂಜಯ ನಾಯಕ್ (ಹೆಚ್.ಸಿ-11360) ರವರ ಸಹಾಯದಿಂದ ಆರೋಪಿತನನ್ನು ಸಂಭ್ರಮ್ ಕಾಲೇಜ್ ಹತ್ತಿರ ವಶಕ್ಕೆ ಪಡೆದು, ಸಂಜೆ 5.45ಕ್ಕೆ…

ಮುಂದೆ ಓದಿ..
ಸುದ್ದಿ 

ಉದ್ಯೋಷಣಾ ವಾರೆಂಟ್ ಕಾರ್ಯಾಚರಣೆ ಯಶಸ್ಸು: ನವೀನ್ @ ಪಾವು ಬಂಧನ

ಬೆಂಗಳೂರು, ಜುಲೈ 7, 2025: ಯಲಹಂಕ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮಹತ್ವದ ಉದ್ಯೋಷಣಾ ಕಾರ್ಯಚಟುವಟೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಮಾನಘನ ಸಿಸಿಹೆಚ್-63ನೇ ನ್ಯಾಯಾಲಯದ ಎಸ್.ಸಿ. ನಂ: 1161/2019ಕ್ಕೆ ಸಂಬಂಧಿಸಿದ ಉದ್ಯೋಷಣಾ ವಾರೆಂಟ್‌ನಡಿ ನವೀನ್ ಅಲಿಯಾಸ್ ಪಾವು (24) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಸ್ಐ ಹಾಗೂ ಪಿಸಿ ನಂ. 19679 ಮಲಿಕಾರ್ಜುನ ರೆಡ್ಡಿ ಅವರನ್ನು ನ್ಯಾಯಾಲಯದ ಆದೇಶದಂತೆ ವಾರೆಂಟ್ ಜಾರಿಗೆ ನೇಮಿಸಲಾಗಿದ್ದು, ಅವರು ದಿನಾಂಕ 02.07.2025 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಅಟ್ಟೂರು ಬಸ್ ನಿಲ್ದಾಣದ ಬಳಿ ಪಾವು ಎಂಬ ಅಸಾಮಿಯನ್ನು ಪತ್ತೆಹಚ್ಚಿ ಬಂಧನ ನಡೆಸಿದರು. ಬಂಧಿತನನ್ನು ಸಮಯಮಿತಿಯಲ್ಲಿ – ಬೆಳಿಗ್ಗೆ 10:30ಕ್ಕೆ – ಠಾಣೆಗೆ ಕರೆತಂದು, ಇನ್ಸ್‌ಪೆಕ್ಟರ್ ಎಸ್‌ಎಮ್‌ಸಿ ಓ ರವರ ಮುಂದೆ ಹಾಜರುಪಡಿಸಲಾಯಿತು. ಬಳಿಕ ನ್ಯಾಯಾಂಗ ಕ್ರಮದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಯಿತು. ಯಲಹಂಕ ಉಪನಗರ ಪೊಲೀಸ್ ಇಲಾಖೆಯ ಈ ತಕ್ಷಣದ ಕ್ರಮ…

ಮುಂದೆ ಓದಿ..
ಸುದ್ದಿ 

ಮನೆ ಮಾಲೀಕರಿಂದ ಬಾಡಿಗೆದಾರರಿಗೆ ಕಿರುಕುಳ: ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಜುಲೈ 7:2025 ನಗರದ ಒಂದು ನಿವಾಸದಲ್ಲಿ ನೆಲಮಹಡಿಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು, ಮನೆಯ ಮಾಲೀಕರಿಂದ ನಿರಂತರವಾಗಿ ಮಾನಸಿಕ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಗೌತಮ್ ಅವರು ತಮ್ಮ ದೂರಿನಲ್ಲಿ ತಿಳಿಸಿದಂತೆ, ಅವರು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬಾಡಿಗೆ ಪಾವತಿಸುತ್ತಾ, ನೀರು ಮತ್ತು ವಿದ್ಯುತ್ ಬಿಲ್ ಕೂಡ ನಿಯಮಿತವಾಗಿ ಪೂರೈಸುತ್ತಿದ್ದಾರೆ. ಆದರೂ ಮನೆಯ ಮಾಲೀಕರಾದ ಡಿ. ನರಸಿಂಹಯ್ಯ ಅವರು ವೈಯಕ್ತಿಕ ವಿಷಯಗಳ ಬಗ್ಗೆ ಮಾತು ಕೊಡುತ್ತಾ, ಅವಮಾನಕಾರಿ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಆರೋಪಿಸಲಾಗಿದೆ. ಬಾಡಿಗೆದಾರರು ಅನೇಕ ಬಾರಿ ಶಾಂತಿಯುತವಾಗಿ ಮನವಿ ಮಾಡಿದರೂ, ಮಾಲೀಕರು ಯಾವುದೇ ರೀತಿಯ ಸ್ಪಂದನೆ ನೀಡದೆ, ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರಂತೆ. ಈ ಎಲ್ಲಾ ಘಟನೆಗಳಿಂದಾಗಿ ದೂರುದಾರರು ಆರೋಗ್ಯ ಸಮಸ್ಯೆಗೂ ಒಳಗಾಗಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ದೂರು ಪಡೆದುಕೊಂಡ ಅಮೃತಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ಸುರಕ್ಷತಾ ಸಾಧನಗಳಿಲ್ಲದೆ ಪೇಂಟಿಂಗ್ ಕೆಲಸ – ಕಾರ್ಮಿಕನ ದುರ್ಘಟನೆದಲ್ಲಿ ಮರಣ

ಬೆಂಗಳೂರು, ಜುಲೈ 7 2025ಹೆಬ್ಬಾಳದಲ್ಲಿ ನಡೆದ ದುರ್ಘಟನೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಇಮಾಮುಲ್ (28) ಎಂಬ ಕಾರ್ಮಿಕನು ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ. ಇಮಾಮುಲ್ ಅವರು ಕಂಟ್ರಾಕ್ಟರ್ ಮಂಜುನಾಥ್ ಮತ್ತು ಇಂಜಿನಿಯರ್ ನವೀನ್ ಅವರ ಬಳಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಜುಲೈ 5ರಂದು ಮಧ್ಯಾಹ್ನ 3:30ರ ಸಮಯದಲ್ಲಿ ಅವರು ಸುರಕ್ಷತಾ ಉಪಕರಣಗಳಿಲ್ಲದೆ ಎತ್ತರದ ಮೇಲೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅಜಾಗರೂಕತೆಯಿಂದ ಅವರು ಬಿದ್ದು ತೀವ್ರ ಗಾಯಗೊಂಡರು. ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕುಟುಂಬಸ್ಥರು ಈ ಘಟನೆಗೆ ಪೂರಕ ಸುರಕ್ಷತಾ ಸಾಧನಗಳನ್ನು ಒದಗಿಸದ ಕೆಲಸದವರೇ ಕಾರಣವೆಂದು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಮೃತಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮುಂದೆ ಓದಿ..