ಮದುವೆ ನಂತರ ಪತ್ನಿಯಿಂದ ಸುಳ್ಳು ದೂರಿನ ಕಿರುಕುಳ – ಸೇನಾ ಅಧಿಕಾರಿಯ ಕುಟುಂಬದಿಂದ ಪೊಲೀಸ್ ದೂರು
ಬೆಂಗಳೂರು: ಆಗಸ್ಟ್ 16 2025ಸೇನಾ ಮೇಜರ್ ಗೌರಿ ಶಂಕರ್ ಪೌಲ್ ಅವರ ಕುಟುಂಬವು, ಪತ್ನಿಯಿಂದ ಮದುವೆಯ ಕೆಲವೇ ದಿನಗಳಲ್ಲಿ ಆರಂಭವಾದ ಕಿರುಕುಳ ಹಾಗೂ ಸುಳ್ಳು ದೂರಿನ ಆರೋಪದ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. 2021ರ ಜುಲೈ 2ರಂದು ಪಂಜಾಬ್ ರಾಜ್ಯದ ಪಠಾಣ್ಕೋಟ್ನಲ್ಲಿ ಮದುವೆಯಾದ ದಂಪತಿಗಳ ಜೀವನದಲ್ಲಿ, ಒಂದು ವಾರದೊಳಗೇ ವೈಮನಸ್ಸು ಶುರುವಾಗಿದೆ. ಪತ್ನಿ ವಿನಿತಾ ಬಸ್ಸಾ ಅವರ ಬಗ್ಗೆ, ಹಿಂದೆಯೇ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾರೆಯೆಂಬ ಅನುಮಾನ ವ್ಯಕ್ತವಾಗಿದ್ದು, ಇದರ ಕುರಿತು ಕೇಳಿದಾಗ ಆಕೆ ಕೋಪಗೊಂಡು ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ನೀಡಿದ್ದಾಳೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಅದಾದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ — ಮಣಿಪುರ, ಹರಿಯಾಣ, ಪಂಜಾಬ್ — ದೂರು-ಪ್ರತಿದೂರುಗಳ ಸರಮಾಲೆ ಮುಂದುವರಿದಿದ್ದು, ಆರೋಪಿಯು 50 ಲಕ್ಷ ರೂ. ಬೇಡಿಕೆ, ಕೆಲಸದ ಸ್ಥಳದಲ್ಲಿ ಗಲಾಟೆ, ಸ್ವಯಂ ಹಾನಿ ಮಾಡುವ ಬೆದರಿಕೆ, ಹಾಗೂ…
ಮುಂದೆ ಓದಿ..
