ಸುದ್ದಿ 

ವಿದ್ಯಾರಣ್ಯಪುರದಲ್ಲಿ ಅಕ್ರಮ ಇ-ಸಿಗರೇಟ್ ದಾಸ್ತಾನು: ಇಬ್ಬರು ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 26: 2025ನಗರದ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿ, ಸೋಮೇಶ್ವರ ಬಡಾವಣೆ ಪ್ರದೇಶದಲ್ಲಿ ಇ-ಸಿಗರೇಟು ಹಾಗೂ ವಿದೇಶಿ ಸಿಗರೇಟುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಬಿ ಅಧಿಕಾರಿಗಳ ತನಿಖೆಯ ಫಲಿತಾಂಶವಾಗಿ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದಿನಾಂಕ 22 ಜುಲೈ 2025ರ ಮಧ್ಯಾಹ್ನ 2:30 ಗಂಟೆಗೆ ಸಿಸಿಬಿ ಕಚೇರಿಗೆ ಬಂದ ಮಾಹಿತಿಯ ಪ್ರಕಾರ, ಸಂಭ್ರಮ ಕಾಲೇಜು ಎದುರು ಇರುವ 2ನೇ ಕ್ರಾಸ್‌ನಲ್ಲಿರುವ ಬಿಲ್ಡಿಂಗ್ ನಂ. 50 ರಲ್ಲಿ, ಸಿಗರೇಟು ಪ್ಯಾಕೆಟುಗಳಲ್ಲಿ 85% ಆರೋಗ್ಯ ಎಚ್ಚರಿಕೆ ಸೂಚನೆ ನೀಡದಿರುವ ಹಾಗೂ ಇ-ಸಿಗರೇಟುಗಳನ್ನು ಯುವಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಸಿಬ್ಬಂದಿ ಗ್ರಾಹಕರರಂತೆ ತೆರಳಿ ನೆಲಮಹಡಿಯಲ್ಲಿ ದಾಸ್ತಾನು ಮಾಡಿದ್ದ ಗೋಡೌನ್‌ನ ಮೇಲೆ ದಾಳಿ ನಡೆಸಿದರು. ತನಿಖೆಯಲ್ಲಿ ಜಹೀರ್ ಎಂಬಾತನು ಗೋಡೌನ್ ಮಾಲೀಕರಾಗಿದ್ದು, ಮೊಹಮ್ಮದ್ ಶಂಷಾದ್ ಎಂಬಾತನು ಕೆಲಸಕ್ಕೆ ಇಟ್ಟುಕೊಂಡು…

ಮುಂದೆ ಓದಿ..
ಸುದ್ದಿ 

ಅಕ್ಕಿಂಗ್ ತರಬೇತಿ ಯುವತಿಗೆ ಹಲ್ಲೆ: ಮನೆಗೆ ನುಗ್ಗಿ ಕುಟುಂಬದ ಮೇಲೆ ದಾಳಿಗೈದ ಯುವಕ

Taluknewsmedia.com

Taluknewsmedia.comಬೆಂಗಳೂರು, ಜುಲೈ 26: 2025ನಗರದ ನವರಸ ನಟನೆ ಅಕಾಡೆಮಿಯಲ್ಲಿ ಅಕ್ಕಿಂಗ್ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳಿಗೆ ಹಳೆಯ ಪರಿಚಿತನಿಂದ ಮನೆಯೊಳಗೆ ನುಗ್ಗಿ ಮಾರಕ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಪೀಡಿತ ಯುವತಿಯ ನೀಡಿದ ಮಾಹಿತಿಯ ಪ್ರಕಾರ, 2024ರ ಆಗಸ್ಟ್‌ನಲ್ಲಿ ಆಕೆಯು ನವರಸ ನಟನೆ ಅಕಾಡೆಮಿಯಲ್ಲಿ ಅಕ್ಕಿಂಗ್ ತರಬೇತಿಗೆ ಸೇರ್ಪಡೆಯಾದಾಗ ವಿದ್ಯುತ್ ಜೆ. ಬಾಬು ಎಂಬ ಯುವಕನೊಂದಿಗೆ ಪರಿಚಯವಾಯಿತು. ಕೆಲವು ತಿಂಗಳುಗಳು ಸಂಪರ್ಕದ ಬಳಿಕ ಇಬ್ಬರೂ ಪರಸ್ಪರ ಇಷ್ಟಪಡತೊಡಗಿದರು. ಆದರೆ ಸಂಬಂಧದಲ್ಲಿ ತಪ್ಪುಬಿಟ್ಟಾಗ ಬಾಬು ಅತಿಯಾದ ಅನುಮಾನ ಮತ್ತು ಮಾನಸಿಕ ಕಿರುಕುಳ ನೀಡತೊಡಗಿದನು. ಪೀಡಿತೆಯು ಸಂಬಂಧ ಮುಂದುವರಿಸುವ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದರೂ, ಆರೋಪಿ ನಿರಂತರ ಒತ್ತಡವನ್ನು ತರುತ್ತಿದ್ದ. ಇದೀಗ ಆತನ ಆಕ್ರಮಣಶೀಲ ನಡವಳಿಕೆ ಹಲ್ಲೆಯ ಮಟ್ಟಕ್ಕೆ ತಲುಪಿದೆ.2025ರ ಜುಲೈ 23ರಂದು ಬೆಳಿಗ್ಗೆ 11:30ರ ಸುಮಾರಿಗೆ, ವಿದ್ಯುತ್ ಜೆ. ಬಾಬು ತನ್ನ ಮುಖಕ್ಕೆ ಮಾಸ್ಕ್ ಮತ್ತು…

ಮುಂದೆ ಓದಿ..
ಸುದ್ದಿ 

ಗೂಗಲ್ ನಂಬರ್‌ನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಯಿಂದ ₹1.55 ಲಕ್ಷ ಹಣ ವಂಚನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 26–2025ಬೆಂಗಳೂರಿನ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ಗೂಗಲ್ ಮೂಲಕ ಬ್ಯಾಂಕ್ ಗ್ರಾಹಕ ಸೇವೆಯ ಸಂಖ್ಯೆಯನ್ನು ಹುಡುಕಿದಾಗ ನಕಲಿ ನಂಬರ್‌ಗೆ ಕರೆ ಮಾಡಿದ ಪರಿಣಾಮವಾಗಿ, ಅವರ ಖಾತೆಯಿಂದ ಒಂದು ಕೆಳಗೊಂದು ವಿವಿಧ ಹಂತಗಳಲ್ಲಿ ₹1,55,500 ಹಣ ವಂಚಿಸಲಾಗಿದೆ. ಓಂ ಪ್ರಕಾಶ್ ಯಾದವ್ ಅವರ ಮಾಹಿತಿ ನೀಡಿರುವ ಪ್ರಕಾರ, ಅವರು ತಮ್ಮ ಬ್ಯಾಂಕ್ ಸಂಬಂಧಿತ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಗೂಗಲ್‌ನಲ್ಲಿ ಶೋಧನೆ ಮಾಡಿದಾಗ ತಪ್ಪಾದ ನಂಬರ್ ತೋರಿಸಿಕೊಂಡಿತ್ತು. ಅಂಥ ನಂಬರ್‌ಗೆ ಕರೆ ಮಾಡಿದಾಗ ಕರೆ ಒತ್ತಿದ ವ್ಯಕ್ತಿ ತಕ್ಷಣವೇ ಅವರ ಖಾತೆಯ ಮಾಹಿತಿ ಪಡೆದು, ಮೊದಲು ₹10, ಬಳಿಕ ಕ್ರಮವಾಗಿ ₹47,000, ₹55,000 ಮತ್ತು ₹53,500 ರಷ್ಟು ಹಣವನ್ನು ಡಿಜಿಟಲ್ ಮೂಲಕ ಕದ್ದಿದ್ದಾರೆ. ಸಂಪೂರ್ಣವಾಗಿ ₹1,55,500 ವಂಚನೆಯಾದ ನಂತರ ಅವರು ತಕ್ಷಣವೇ 1930 ಹೆಲ್ಪ್‌ಲೈನ್‌ಗೆ ಕರೆ ಮಾಡಿ ಪ್ರಕರಣ ವರದಿ ಮಾಡಿದ್ದಾರೆ ಮತ್ತು ನಂತರ ಯಲಹಂಕ ಪೊಲೀಸ್ ಠಾಣೆಗೆ ಬಂದು…

ಮುಂದೆ ಓದಿ..
ಸುದ್ದಿ 

ಯಲಹಂಕ ಮಿನಿ ವಿಧಾನಸೌಧ ಬಳಿ ದ್ವಿಚಕ್ರ ವಾಹನ ಕಳವು – ಭೂಮಾಪಕನಿಗೆ ಅಸಹ್ಯ ಅನುಭವ

Taluknewsmedia.com

Taluknewsmedia.comಯಲಹಂಕ, ಜುಲೈ 26:2025ಯಲಹಂಕ ಮಿನಿ ವಿಧಾನಸೌಧದ ಬಳಿ ನಿಲ್ಲಿಸಿದ್ದ ಸರ್ಕಾರಿ ಭೂಮಾಪಕನ ದ್ವಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿರುವ ಘಟನೆ ದಾಖಲಾಗಿದ್ದು, ಈ ಕುರಿತು ಠಾಣೆಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ಪ್ರಕಾಶ್ ಎಂ ಎನ್ ಭೂಮಾಪಕರವರು ಸಹಾಯಕ ಭೂ ದಾಖಲೆಗಳ ನಿರ್ದೇಶಕರ ಕಚೇರಿ, ಮಿನಿ ವಿಧಾನಸೌಧ, ಯಲಹಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜುಲೈ 18 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮ್ಮ ಕೆಎ 20 ಇಜೆ 3778 ಸಂಖ್ಯೆಯ ದ್ವಿಚಕ್ರ ವಾಹನವನ್ನು ಕಚೇರಿ ಹತ್ತಿರ ನಿಲ್ಲಿಸಿ ಕೆಲಸಕ್ಕೆ ಒಳಗಾದ ಅವರು, ಸಂಜೆ 5.30ರ ಸುಮಾರಿಗೆ ಹೊರಬಂದಾಗ ವಾಹನ ಕಾಣೆಯಾಗಿತ್ತು. ತಕ್ಷಣವೇ ಸುತ್ತಮುತ್ತಲ್ಲಿಯೆಲ್ಲಾ ಹುಡುಕಿದರೂ ವಾಹನ ಪತ್ತೆಯಾಗದೆ ಇದ್ದ ಕಾರಣ ಅವರು ಕಳ್ಳತನದ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು…

ಮುಂದೆ ಓದಿ..
ಅಂಕಣ 

ಬದಲಾವಣೆ………ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು…….

Taluknewsmedia.com

Taluknewsmedia.comಬದಲಾವಣೆ……… ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು……. ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು…… ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು….. ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು…….. ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು……. ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು….. ಮೌಢ್ಯಗಳ ಮಹಲುಗಳಾಗುತ್ತಿರುವ ಎಲ್ಲಾ ಧರ್ಮಗಳ ದೇವಮಂದಿರಗಳು…… ಗುಲಾಮಿ ಮನೋಭಾವ ಸೃಷ್ಟಿಸುತ್ತಿರುವ ಐಟಿಬಿಟಿ ಕಂಪನಿಗಳು……. ವಿವೇಚನಾ ಶಕ್ತಿಯನ್ನೇ ನಾಶ ಮಾಡುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು……… ಉದ್ಯೋಗಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ವಿದೇಶಿ ಕಂಪನಿಗಳು…… ಮೋಸ, ವಂಚನೆ, ಕುತಂತ್ರಗಳ ಕಣಗಳಾಗುತ್ತಿರುವ ರಾಜಕೀಯ ಪಕ್ಷಗಳು….. ದುಷ್ಟ ಜನಪ್ರತಿನಿಧಿಗಳು ಆಯ್ಕೆಯಾಗಲು ವೇದಿಕೆಯಾಗುತ್ತಿರುವ ಚುನಾವಣೆಗಳು…… ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಪೊಲೀಸ್ ಸ್ಟೇಷನ್ ಮತ್ತು ಜೈಲುಗಳು…… ಮೂಢನಂಬಿಕೆಗಳಿಗೆ ದಾಸರನ್ನಾಗಿ ಮಾಡುತ್ತಿರುವ ಮಠಮಾನ್ಯಗಳು……. ಸೀಡ್ಲೆಸ್ ಯುವ ಜನಾಂಗದ ಸೃಷ್ಟಿಗೆ ಕಾರಣವಾಗುತ್ತಿರುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ ಗಳು……. ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಮಾಡುತ್ತಿರುವ…

ಮುಂದೆ ಓದಿ..
ಸುದ್ದಿ 

ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವ..

Taluknewsmedia.com

Taluknewsmedia.comನಾಗಮಂಗಲ : ಪ್ರತಿಷ್ಠಿತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವವು ಇದೇ ಜುಲೈ ೨೯ರಂದು ಬೆಳಿಗ್ಗೆ ೧೦:೩೦ಕ್ಕೆ ಬಿಜಿಎಸ್ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಪತಿ ಎಸ್ ಎನ್ ಶ್ರೀಧರ ತಿಳಿಸಿದರು. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾರಂಭದ ದಿವ್ಯ ಸಾನಿಧ್ಯವನ್ನು ಗೌರವಾನ್ವಿತ ಕುಲಾಧಿಪತಿಗಳು ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್, ಗೌರವ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಭಾಗವಹಿಸುವರು. ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್ ಎನ್ ಶ್ರೀಧರ. ಕುಲಸಚಿವ ಡಾ ಸಿ ಕೆ ಸುಬ್ಬರಾಯ.ಕುಲ ಸಚಿವ (ಮೌಲ್ಯಮಾಪನ) ಡಾ. ನಾಗರಾಜ್ ಉಪಸ್ಥಿತರಿರುವರು. ೯೬೮ ವಿದ್ಯಾರ್ಥಿನಿಯರಿಗೆ ೯೧೨ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರ ಹಾಗೂ…

ಮುಂದೆ ಓದಿ..
ಸುದ್ದಿ 

ಮಾವಳ್ಳಿ ಪುರ ರಸ್ತೆಯಲ್ಲಿ ಕಾರು ಅಪಘಾತ –一5ಜನರಿಗೆ ಗಾಯ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 25ಜುಲೈ 2025:ಬ್ಯಾಲಕೆರೆ ಬಳಿ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದ ಕುಟುಂಬದ ಕಾರು ಮಾವಳ್ಳಿ ಪುರ ರಸ್ತೆ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. 20 ಜುಲೈ 2025 ರಂದು ಸಂಜೆ 6:30ರ ಸುಮಾರಿಗೆ KA04NB2717 ನಂಬರ್‌ನ ನೆಕ್ಸಾನ್ EV ಕಾರಿನಲ್ಲಿ ವಿನಯ್ ಕುಮಾರ್ ಎಂಬವರು ಚಾಲನೆ ಮಾಡುತ್ತಿದ್ದು, ಕುಟುಂಬದವರು ಊಟ ಮುಗಿಸಿ ರಾತ್ರಿ 10:30ರ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದರು. ಮಾವಳ್ಳಿ ಪುರ ಕಾಲೋನಿಯ ತಿರುವಿನಲ್ಲಿ ಎದುರಿನಿಂದ ಬಂದ ಅತಿಹೆಚ್ಚು ಹೈಬೀಮ್ ಲೈಟ್ ಹೊಂದಿದ್ದ ವಾಹನವನ್ನು ತಪ್ಪಿಸಲು ಪ್ರಯತ್ನಿಸಿದ ಚಾಲಕ ಕಾರು ರಸ್ತೆಯ ಎಡಭಾಗಕ್ಕೆ ತಿರುಗಿಸಿದ್ದರಿಂದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳು: ಪಿರ್ಯಾದಿದಾರ: ಬಲ ಭುಜ ಹಾಗೂ ಸೊಂಟದ ಭಾಗದಲ್ಲಿ ಪೆಟ್ಟು ಅರಾ ಮತ್ತು ಯಶ್ಮಿತಾ: ಸಣ್ಣಪುಟ್ಟ ಗಾಯಗಳು ಭೂಮಿಕಾ ಸಿ ಗೌಡ: ಎಡ ಭುಜದ…

ಮುಂದೆ ಓದಿ..
ಸುದ್ದಿ 

ಪೀಕ್ ಅವರ್ಸ್‌ನಲ್ಲಿ ರಸ್ತೆಯ ಮಧ್ಯೆ ಕಾರು ನಿಲ್ಲಿಸಿದ ಚಾಲಕನ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 24, 2025: ನಗರದಲ್ಲಿ ಸಂಚಾರ ದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ಸಂದರ್ಭದಲ್ಲಿಯೇ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿತ ಪೊಲೀಸ್ ಅಧಿಕಾರಿಗೆ, ಜಯಮಹಲ್ ಮುಖ್ಯರಸ್ತೆಯ ಮೇಲೆ ಸಂಭವಿಸಿದ ಒಂದು ಘಟನೆ ತೀವ್ರ ತೊಂದರೆಯನ್ನುಂಟು ಮಾಡಿತು. ದಿನಾಂಕ 24.07.2025 ರಂದು ಬೆಳಗ್ಗೆ 8.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯು, ಸಂಜೆ 07.15ರ ಸುಮಾರಿಗೆ ಜಯಮಹಲ್ ಮುಖ್ಯರಸ್ತೆಯ ಮೇಲೆ ಸಂಚಾರ ನಿಯಂತ್ರಣ ಕಾರ್ಯನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ KA-51-MQ-6237 ಸಂಖ್ಯೆಯ ಕಾರು ಜಯಮಹಲ್ ಮೆಖ್ ಸರ್ಕಲ್ ಕಡೆಗೆ ಹೋಗುವ ರಸ್ತೆಯ ಮಧ್ಯದಲ್ಲಿ ನಿಂತಿರಲಿದ್ದು, ಇದರಿಂದಾಗಿ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿ ಚಾಲಕನನ್ನು ವಿಚಾರಿಸಿದಾಗ, ಕಾರಿಗೆ ಡೀಸೆಲ್ ಖಾಲಿಯಾಗಿರುವುದರಿಂದ ನಿಲ್ಲಿಸಲಾಗಿದೆ ಎಂದು ಚಾಲಕ ತಿಳಿಸಿದ್ದಾರೆ. ಚಾಲಕರ ವಿವರಗಳನ್ನು ಕೇಳಿದಾಗ, ಆತನು ಟಿ.ಎನ್. ಅಶೋಕ್ ಕುಮಾರ್…

ಮುಂದೆ ಓದಿ..
ಸುದ್ದಿ 

21 ವರ್ಷದ ಯುವತಿ ನಾಪತ್ತೆ – ಮದುವೆಯಾಗಿ ಹೊಗಿದ್ದ ಇರಬಹುದೆಂದು ಪೋಷಕರ ಶಂಕೆ

Taluknewsmedia.com

Taluknewsmedia.comಬೆಂಗಳೂರು – 25 ಜುಲೈ 2025 ಕಮ್ಮಗೊಂಡನಹಳ್ಳಿಯಲ್ಲಿ 21 ವರ್ಷದ ಯುವತಿ ಮರಿಯಾ ಮೆರ್ಲಿನ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈಕೆ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಕಳೆದ 21 ಜುಲೈ 2025 ರಂದು ಬೆಳಿಗ್ಗೆ 11:30ರ ಸುಮಾರಿಗೆ “ಸ್ವಲ್ಪ ಹೊತ್ತಲ್ಲಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಹೋದ ನಂತರ ವಾಪಸ್ ಬಾರದೇ ಕಾಣೆಯಾಗಿದ್ದಾಳೆ. ಮರಿಯಾ ಮೆರ್ಲಿನ್ ಅವರ ತಾಯಿ ನೀಡಿದ ದೂರಿನ ಪ್ರಕಾರ, ಈಕೆ ಕಳೆದ ಎರಡು ತಿಂಗಳಿನಿಂದ ತನ್ನ ತಾಯಿಯ ಜೊತೆಗೆ ವಾಸವಿದ್ದಳು. ಈಕೆ ಹಿಂದೆ ಸಿಮ್ಸನ್ ವರದರಾಜು ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಮತ್ತು ಒಂದು ಸಮಯದಲ್ಲಿ ಆತನೊಂದಿಗೆ ವಾಸಿಸಿದ್ದಳು. ಇದೀಗ ಮರಿಯಾ ಮತ್ತೆ ಆತನೊಂದಿಗೆ ಹೋಗಿರಬಹುದೆಂಬ ಶಂಕೆ ಪೋಷಕರಿಗಿದೆ. ಮರಿಯಾ ಮೆರ್ಲಿನ್ ಅವರ ವೈಶಿಷ್ಟ್ಯಗಳು ಹೀಗಿವೆ – ಗೋಧಿ ಬಣ್ಣ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ. ಬಲ…

ಮುಂದೆ ಓದಿ..
ಸುದ್ದಿ 

ಯಲಹಂಕ: ಲಾರಿ ಡ್ರೈವರ್ ಮೇಲೆ ಹಲ್ಲೆ – ಸ್ಥಳೀಯ ಇಬ್ಬರ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಯಲಹಂಕ, ಜುಲೈ 25: 2025ಲಾರಿ ಚಾಲಕನೊಬ್ಬರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಗಂಚಯಲ್ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅರವಿಂದ್ ಮತ್ತು ಶ್ರೀನಿವಾಸ್ ಎಂಬ ಇಬ್ಬರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಆನಂದ ಅವರು ಲಾರಿ ಡ್ರೈವರ್, ಗಂಚಯಲ್ ಪ್ರದೇಶದಲ್ಲಿನ ಲೆಕ್ಟರ್ ಶಾಪ್ ಹತ್ತಿರ ಇರುವ ಊಟದ ಗಾಡಿಯಿಂದ ಎಗ್ ರೈಸ್ ತೆಗೆದುಕೊಂಡು ಬರುತ್ತಿದ್ದ ವೇಳೆ, ಅರವಿಂದ್ ಮತ್ತು ಶ್ರೀನಿವಾಸ್ ಅವರು ಸ್ಥಳಕ್ಕೆ ಬಂದು ತಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಬಳಿಕ ತಲೆ ಮತ್ತು ಮುಖಕ್ಕೆ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನೆಯ ತಕ್ಷಣವೇ ರವಿ ಮತ್ತು ಸುರೇಶ್ ಎಂಬವರು ಗಾಯಗೊಂಡ ಚಾಲಕನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದಾರೆ. ಪ್ರಸ್ತುತ ಚಾಲಕರು ಆಸ್ಪತ್ರೆಯಿಂದ ಹೊರಬಂದಿದ್ದು, ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು…

ಮುಂದೆ ಓದಿ..