ಸುದ್ದಿ 

ಸಂಸ್ಥೆಯಲ್ಲಿ ನಕಲಿ ಆರ್ಡರ್‌ಗಳ ಮೂಲಕ ₹15 ಲಕ್ಷದ ಮೋಸ: ಉದ್ಯೋಗಿ ಸೆಲ್ವಕುಮಾರ್ ವಿರುದ್ಧ FIR

Taluknewsmedia.com

Taluknewsmedia.comಬೆಂಗಳೂರು, ಜುಲೈ 12:2025 ರಾಜಧಾನಿ ಬೆಂಗಳೂರು ಸೇರಿದ ಖಾಸಗಿ ಎಲೆಕ್ಟ್ರಾನಿಕ್ಸ್ ಕಂಪನಿಯಾದ Nenton Electronics (EL 11863) ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸಮಾಡುತ್ತಿದ್ದ ಸೆಲ್ವಕುಮಾರ್ ಸಕರ ಎಂಬವರು ಕಂಪನಿಯ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ನಕಲಿ ಪರ್ಚೇಸ್ ಆರ್ಡರ್‌ಗಳ ಮೂಲಕ ₹15,45,800 ಮೊತ್ತದ ಹಣವನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತದಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಂಪನಿಯವರ ಪ್ರಕಾರ, ಈ ಹಣಕಾಸು ಅವ್ಯವಹಾರದ ಪರಿಣಾಮವಾಗಿ ಸಂಸ್ಥೆಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನಲ್ಲಿ ಕೇಳಲಾದ ಪ್ರಮುಖ ಬೇಡಿಕೆಗಳು: ಆರೋಪಿಯನ್ನು ತಕ್ಷಣ ಬಂಧಿಸಬೇಕು ಕಂಪನಿಗೆ ವಂಚನೆಯ ಮೂಲಕ ಉಂಟಾದ ಮೊತ್ತವನ್ನು ಮರುಪಡೆಯಬೇಕು ಸೆಲ್ವಕುಮಾರ್ ವಿರುದ್ಧ ಸಂಪೂರ್ಣ ತನಿಖೆ ನಡೆಯಬೇಕು ಬಾಗಲೂರು ಪೊಲೀಸ್ ಠಾಣೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಹೋಟೆಲ್‌ಗೆ ಹೋದ ಗಂಡ ಮರಳದೇ ಕಾಣೆಯಾಗಿದ್ದಾನೆ – ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 12 –2025 ನಗರದ ರೆಸಿಡೆನ್ಶಿಯಲ್ ಪ್ರದೇಶವೊಂದರಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಗಂಡನೊಂದು ಕಾಣೆಯಾಗಿರುವ ಘಟನೆ ಇದೀಗ ಆತಂಕವನ್ನು ಉಂಟುಮಾಡಿದೆ. ಪತ್ನಿ ನೀಡಿದ ದೂರಿನ ಆಧಾರದಲ್ಲಿ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ದೂರು ನೀಡಿದ ಮಹಿಳೆ ಹೇಳುವಂತೆ, “ನಾನು ನನ್ನ ತಂದೆ ತಾಯಿಯವರೊಂದಿಗೆ ವಾಸವಾಗಿದ್ದೇನೆ. ನನ್ನ ಗಂಡ ದಾದಪೀರ್ (26) ಅವರು 10/07/2025 ರಂದು ಬೆಳಗ್ಗೆ ಸುಮಾರು 6:30ರ ಸುಮಾರಿಗೆ ‘ಹೋಟೆಲ್‌ಗೆ ಹೋಗಿ ತಿಂಡಿ ಪಾರ್ಸಲ್ ತೆಗೆದುಕೊಂಡು ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೋದವರು, ಇದುವರೆಗೆ ವಾಪಸು ಬಂದಿಲ್ಲ.” ತಕ್ಷಣ ಅವರ ಗಂಡನ ತಾಯಿಗೆ ಹಾಗೂ ಸಂಬಂಧಿಕರಿಗೆ ವಿಚಾರಿಸಿದರೂ, ಅವರು ಸಹ ಮನೆಗೆ ಬಾರದ ಬಗ್ಗೆ ತಿಳಿಸಿದರು. ಗಂಡನ ಎರಡು ಮೊಬೈಲ್ ಸಂಖ್ಯೆಗಳಿಗೆ (8123937754 / 8217322608) ಸಂಪರ್ಕ ಮಾಡಲು ಯತ್ನಿಸಿದಾಗ, ಎರಡೂ ಸಂಖ್ಯೆಗಳೂ ಸ್ವಿಚ್ ಆಫ್ ಆಗಿದ್ದವು. ಕಾಣೆಯಾದ ವ್ಯಕ್ತಿಯ ವಿವರಗಳು ಹೀಗಿವೆ: ಹೆಸರು: ದಾದಪೀರ್…

ಮುಂದೆ ಓದಿ..
ಸುದ್ದಿ 

ಆತ್ಮೀಯರ ನಂಬಿಕೆಯನ್ನು ದುರ್ಬಳಕೆ ಮಾಡಿದ ಅಖಿಬರಾಯಿ ವಿರುದ್ಧ ಎಫ್‌ಐಆರ್: ಮಹಿಳೆಗೆ ಹಲ್ಲೆ, ಆಭರಣ ದೋಚಿದ ಆರೋಪ

Taluknewsmedia.com

Taluknewsmedia.comಬೆಂಗಳೂರು, ಜುಲೈ 12 2025 ನಗರದ ಎಸ್.ಆರ್.ಕೆ ನಗರ ಠಾಣಾ ವ್ಯಾಪ್ತಿಯ ರಾಚೀನಹಳ್ಳಿಯಲ್ಲಿ ಭದ್ರತೆಗೆ ಧಕ್ಕೆ ಉಂಟುಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿಗೆ, ಆರು ವರ್ಷಗಳ ದೀರ್ಘ ಸ್ನೇಹದ ಸಂಬಂಧವನ್ನು ನಂಬಿ ಶರಣಾದ ಅಖಿಬರಾಯಿ ಎಂಬ ಮಹಿಳೆ ಮತ್ತು ನರಸಿಂಹಮೂರ್ತಿ ಎಂಬವರು ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಪೀಡಿತ ಮಹಿಳೆ ಈಗ ರಾಚೀನಹಳ್ಳಿ ಭಾಗ್ಯಶ್ರೀ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಈ ಹಿಂದೆ ಅಖಿಬರಾಯಿಯೊಂದಿಗೆ ಐದು ವರ್ಷಗಳ ಕಾಲ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದಳು. ಇತ್ತೀಚೆಗೆ ಅವಳೊಂದಿಗೆ ಸಂಬಂಧ ಮುರಿದುಬಿಟ್ಟು ಬೇರೆ ಮನೆಗೆ ಸ್ಥಳಾಂತರವಾದ ಪೀಡಿತೆಗೆ ಅಖಿಬರಾಯಿ ಜೂನ್ 6ರಂದು ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ‘ಅಪಘಾತವಾಗಿದೆ’ ಎಂಬ ನಾಟಕವಾಡಿ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾಳೆ. ಬಾಗಿಲು ತೆರೆದ ತಕ್ಷಣ ಪೀಡಿತೆಯ ಮೇಲೆ ಹಲ್ಲೆ ನಡೆಸಿ, ಕೈ ಉಗುರಿನಿಂದ ಮೈಮೇಲೆ ಗಾಯಗೊಳಿಸಿ, ಮೊಬೈಲ್ ಫೋನ್…

ಮುಂದೆ ಓದಿ..
ಸುದ್ದಿ 

₹1.l64 ಲಕ್ಷ ಮೊತ್ತದ ಮೋಸ: ರೆಸ್ಟೋರೆಂಟ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್

Taluknewsmedia.com

Taluknewsmedia.comಬೆಂಗಳೂರು, ಜುಲೈ 12:2025 ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಡೈಲಿ ಸುತಿ ರೆಸ್ಟೋರೆಂಟ್‌ನ ಮಾಜಿ ಸೀನಿಯರ್ ವರ್ಕರ್ ದೇವೇಂದ್ರ ಪ್ರಸಾದ್ ಉಪಾಧ್ಯಾಯ ವಿರುದ್ಧ ₹1,64,423 ಮೊತ್ತದ ಹಣವನ್ನು ಕಂಪನಿಗೆ ವಾಪಸ್ ಮಾಡದೇ ಹಗರಣ ಮಾಡಿಕೊಂಡಿದ್ದಾನೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮಾಹಿತಿ ಈ ರೀತಿ ಇದೆ: BUZA FOODS PVT LTD ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರ ಉಪಾಧ್ಯಾಯರು 17-04-2023 ರಂದು ಇಂಕೋಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಡೈಲಿ ಸುತಿ ಘಟಕದಲ್ಲಿ ಕೆಲಸಕ್ಕೆ ಸೇರಿದ್ದರು. ಅವರು 31-12-2024 ರವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದರು. ನಂತರ 01-01-2025 ರಂದು ಅವರನ್ನು BUZA FOODS PVT LTD ಗೆ ವರ್ಗಾಯಿಸಲಾಯಿತು. ಆದರೆ, 03-07-2025 ರಂದು ಅವರು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ಸೇಲ್ಸ್‌ರಿಪೋರ್ಟ್ ಪರಿಶೀಲನೆ ವೇಳೆ ಗ್ರಾಹಕರಿಂದ ವಸೂಲಾದ ₹1,64,423…

ಮುಂದೆ ಓದಿ..
ಅಂಕಣ 

ಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ..

Taluknewsmedia.com

Taluknewsmedia.comಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ……..ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ ಬಹುತೇಕ ಬಂದ್ ಆಚರಿಸಲಾಗುತ್ತಿತ್ತು. ಸಣ್ಣಪುಟ್ಟ ಗ್ರಾಮಗಳಲ್ಲಿ ಸಹ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ ಬೃಹತ್ ಮೆರವಣಿಗೆ ಘೋಷಣೆಗಳು ನಡೆಯುತ್ತಿದ್ದವು. ಜನರ ಪ್ರತಿಕ್ರಿಯೆ ಅದ್ಭುತವಾಗಿರುತ್ತಿತ್ತು. ವಾಹನ ಸಂಚಾರ ಸಂಪೂರ್ಣ ನಿಂತು ರಸ್ತೆಗಳು ಭಣಗುಡುತ್ತಿದ್ದವು. ಬೀದಿಗಳಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಲ್ಲಿ ಒಂದಷ್ಟು ಗಲಭೆ, ಬೆಂಕಿ, ಹಿಂಸಾಚಾರ, ಲಾಠಿಚಾರ್ಜ್, ಅಶ್ರುವಾಯು, ಗೋಲಿಬಾರ್ ನಡೆಯುತ್ತಿದ್ದವು. ಸರ್ಕಾರಗಳು ನಡುಗುತ್ತಿದ್ದವು. ಆದರೆ 2025 ರ ಜುಲೈ 9 ರ ಈ ಬಂದ್ ಇಷ್ಟೊಂದು ಸಂಪರ್ಕ ಕ್ರಾಂತಿಯ ನಡುವೆಯೂ ಎಷ್ಟೋ ಜನರಿಗೆ ಗೊತ್ತೇ ಆಗಲಿಲ್ಲ. ಮಾಧ್ಯಮಗಳು ಪ್ರಚಾರವನ್ನೂ ಕೊಡಲಿಲ್ಲ. ಕಾರಣ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿರುವುದೇ ಅಥವಾ…

ಮುಂದೆ ಓದಿ..
ಸುದ್ದಿ 

ಸಾಲದ ಹೆಸರಿನಲ್ಲಿ ಲೈಂಗಿಕ ಕಿರುಕುಳ: ಮಹಿಳೆಯ ದೂರಿನೊಂದಿಗೆ ಎಜಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 10 –2025 ಅಕ್ಕಿ ವ್ಯವಹಾರ ನಡೆಸುತ್ತಿರುವ ಮಹಿಳೆ ಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಎ.ಜಿ. ಶಿವಕುಮಾರ್ ನಾರಾಯಣ ಎಂಬಾತನ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆ ಮೂರು ವರ್ಷಗಳ ಹಿಂದೆ ತನ್ನ ಅಕ್ಕಿ ಬಿಸಿನೆಸ್‌ಗಾಗಿ ಹಣಕಾಸು ಸಹಾಯ ಪಡೆದಿದ್ದು, ಈ ಸಂದರ್ಭದಲ್ಲಿ ಪರಿಚಿತನಾಗಿದ್ದ ಶಿವಕುಮಾರ್ ನಾರಾಯಣನಿಂದ ಸಾಲ ಪಡೆದುಕೊಂಡಿದ್ದಳು. ಸಾಲ ನೀಡುವ ವೇಳೆ ಸೆಕ್ಯುರಿಟಿ ಡಿಪಾಸಿಟ್‌ವೆಂದು ಆಕೆಯ ಎಸ್ಸಿಐ ಬ್ಯಾಂಕ್‌ನ ಮೂವರು ಖಾಲಿ ಚೆಕ್‌ಗಳನ್ನು ತೆಗೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಲ ತೀರಿಸಿದ ನಂತರ, ಮಹಿಳೆ ಚೆಕ್‌ಗಳನ್ನು ಹಿಂತಿರುಗಿಸಬೇಕೆಂದು ಕೇಳಿದಾಗ, ಶಿವಕುಮಾರ್ ವಾಟ್ಸಪ್ ಮೂಲಕ “ನೀನು ನನ್ನ ಹತ್ತಿರ ಬಂದು ಮಲಗಿದರೆ ನಿನ್ನ ಚೆಕ್‌ಗಳನ್ನು ಕೊಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅವನು ಮಹಿಳೆಯ ನಂಬರಿಗೆ ಅನೇಕ ಬಾರಿ ತನ್ನ ನಗ್ನ…

ಮುಂದೆ ಓದಿ..
ಸುದ್ದಿ 

ರಾಜನಮಳ್ಳಿ ನಿವಾಸಿಗೆ ಆನ್‌ಲೈನ್ ವಂಚನೆ – ಲಕ್ಷಕ್ಕಿಂತ ಅಧಿಕ ಹಣ ನಷ್ಟ

Taluknewsmedia.com

Taluknewsmedia.comಬೆಂಗಳೂರು ನಗರ, ಜುಲೈ 10 :2025 ಚಳೆದ ಕೆಲವು ದಿನಗಳ ಹಿಂದೆ ರಾಜನಮಳ್ಳಿ ನಿವಾಸಿಯಾದ ವ್ಯಕ್ತಿಯೊಬ್ಬರು ಆನ್‌ಲೈನ್ ಹಣ ವರ್ಗಾವಣೆಯ ಮೋಸಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಬ್ಯಾಂಕ್ ಪ್ರತಿನಿಧಿಗಳಾಗಿರುವಂತೆ ಸುಳ್ಳು ಪರಿಚಯ ನೀಡಿ, ಒಟ್ಟಾಗಿ ರೂ. 1,21,440/- ವಂಚಿಸಿದ್ದಾರೆ. ಉಟ್ಕರ್ಷ್ ಧನರಾಜ್ ಜಾಗ್ಟಾಪ್ ಅವರು ತಮ್ಮ ಖಾತೆ ಪಂಜಾಬ್ & ಸಿಂಧ್ ಬ್ಯಾಂಕ್‌ನಲ್ಲಿ ಹೊಂದಿದ್ದರು (ಖಾತೆ ಸಂಖ್ಯೆ: 16611000000293, IFSC: PSIB0021161). ಅವರು ನೀಡಿದ ದೂರಿನ ಪ್ರಕಾರ ಮೊದಲು ರೂ. 30,000/-, ನಂತರ ರೂ. 91,440/- ಹಣ ಮೊಬೈಲ್ ಆಪ್ ಅಥವಾ ಇಮೇಲ್ ಮೂಲಕ ಮೋಸದಿಂದ ಕಿತ್ತ ಹಾಕಲಾಗಿದೆ. ಈ ವಂಚನೆಗೆ ಬಳಸಲಾಗಿದ ಇಮೇಲ್ ವಿಳಾಸ: ombk.aaef2670830090jzg05@mbk, ಇದನ್ನು ನಕಲಿ ಬ್ಯಾಂಕ್ ಇಮೇಲ್ ಎಂದು ಶಂಕಿಸಲಾಗಿದೆ. ಪೀಡಿತರು ಈ ಬಗ್ಗೆ ಕೂಡಲೇ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು…

ಮುಂದೆ ಓದಿ..
ಸುದ್ದಿ 

ಯಲಹಂಕ ಡಿ ಮಾರ್ಟ್ ಬಳಿ ಬೈಕ್ ಡಿಕ್ಕಿ: 72 ವರ್ಷದ ಹಿರಿಯರಿಗೆ ತೀವ್ರ ಗಾಯ

Taluknewsmedia.com

Taluknewsmedia.comಯಲಹಂಕ, ಜುಲೈ 10 – 2025 ಯಲಹಂಕ ಉಪನಗರದಲ್ಲಿರುವ ಡಿ ಮಾರ್ಟ್ ಹತ್ತಿರದ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಸಂಭವಿಸಿದ ಬೈಕ್ ಅಪಘಾತದಲ್ಲಿ 72 ವರ್ಷದ ಹಿರಿಯ ನಾಗರಿಕ ಶಿವಣ್ಣ ಎಸ್. ಅವರಿಗೆ ತೀವ್ರ ಗಾಯವಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ 4.30ರ ಸುಮಾರಿಗೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಡೈರಿ ಸರ್ಕಲ್ ಕಡೆಯಿಂದ ಅತಿವೇಗವಾಗಿ ಬಂದ ಯಮಹ ಎಂ.ಟಿ-15 ಬೈಕ್ (ನಂಬರ್ ಕೆ.ವಿ.52.ಎಕ್ಸ್.0347) ಸವಾರ ಯಶಸಿ ರಸ್ತೆ ದಾಟುತ್ತಿದ್ದ ಶಿವಣ್ಣ ಎಸ್. ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಿಂದ ಅವರು ರಸ್ತೆಯ ಮೇಲೆ ಬಿದ್ದು ಬಲಭುಜ ಮತ್ತು ಎಡಗಾಲಿಗೆ ತೀವ್ರವಾಗಿ ಪೆಟ್ಟು ಬಿದ್ದು ಮೂಳೆ ಮುರಿದಿದೆ. ಘಟನೆ ನಡೆದ ನಂತರ ಸಾರ್ವಜನಿಕರು ತಕ್ಷಣವೇ ಗಾಯಾಳು ಶಿವಣ್ಣ ಎಸ್. ಹಾಗೂ ಬೈಕ್ ಸವಾರ ಯಶಸಿ ಮತ್ತು ಹಿಂಬದಿ ಸವಾರ ಹಿತೇಶ್ ಜಿ. ಅವರನ್ನು ನಿಕಟದ ಈತಾ ಆಸ್ಪತ್ರೆಗೆ…

ಮುಂದೆ ಓದಿ..
ಸುದ್ದಿ 

ಯಲಹಂಕದ ಮನೆಗೆ ಬಾಡಿಗೆ ನೀಡಿದ ವ್ಯಕ್ತಿ ಮೇಲೆ ವಿದೇಶಿ ಮಹಿಳೆಯರ ಅಕ್ರಮ ವಾಸದ ಆರೋಪ – ಲಕ್ಷ್ಮೀಕಾಂತ ಬಂಧನ

Taluknewsmedia.com

Taluknewsmedia.comಬೆಂಗಳೂರು, ಜುಲೈ 10, 2025: ನಗರದ ಯಲಹಂಕ ಬಳಿಯ ಕಟ್ಟಿಗೇನಹಳ್ಳಿಯಲ್ಲಿ ವಿದೇಶಿ ಮಹಿಳೆಯರು ಅಕ್ರಮವಾಗಿ ವಾಸವಿದ್ದ ಪ್ರಕರಣವೊಂದರಲ್ಲಿ ಮನೆಯ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಕಟ್ಟಿ ಗೇನಹಳ್ಳಿಯ ಶ್ರೀ ಸಾಯಿ ಲೇಔಟ್‌ನ ಸ್ವಲಾಕ್ಸ್ ರೆಸಿಡೆನ್ಸಿಯ 3ನೇ ಮಹಡಿಯಲ್ಲಿ ವಾಸವಿದ್ದ ಮೂರು ಉಗಾಂಡ ಮೂಲದ ಮಹಿಳೆಯರು — Jalia Naluboga, Hellen Nabukenya ಮತ್ತು Namuli Christine — ಅಕ್ರಮ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ಪತ್ತೆಯಾಗಿತ್ತು. ಅಕ್ರಮ ವಾಸಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ಮನೆಯ ಮಾಲೀಕರಿಗಾಗಿ ಯಲಹಂಕ ಪೊಲೀಸರು ತನಿಖೆ ಆರಂಭಿಸಿದರು. ನಂತರ, ತನಿಖೆಯಲ್ಲಿನ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿಯನ್ನು ಲಕ್ಷ್ಮೀಕಾಂತ ಕದಿರಿ (ವಯಸ್ಸು 30), ರಾಚೀನಹಳ್ಳಿಯ ರೆಜೆನ್ನಿ ಪಿನಾಕಲ್ ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಅವರನ್ನು ಯಲಹಂಕ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಆರೋಪಿಯು…

ಮುಂದೆ ಓದಿ..
ಸುದ್ದಿ 

ಸುರದೇನುಪುರ ಗೇಟ್ ಬಳಿ ಬೈಕ್ ದಾಳಿ: ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ದೋಚಿದ ದುಷ್ಕರ್ಮಿ ಪರಾರಿಯಾಗಿದ್ದಾನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 10 2025 ದೊಡ್ಡಬಳ್ಳಾಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸುರದೇನುಪುರ ಗೇಟ್ ಸಮೀಪ ಇಂದು ಮಧ್ಯಾಹ್ನ ಸಂಭವಿಸಿದ ಚೈನ್ ಸ್ನಾಚಿಂಗ್ ಪ್ರಕರಣದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಬೈಕ್‌ನಲ್ಲಿ ಪತಿ ಹಾಗೂ ಮಗಳೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಬೈಕ್‌ನಿಂದ ಬಂದು ಬಲವಂತವಾಗಿ ಕಿತ್ತು ಪರಾರಿಯಾದ ಘಟನೆ ವರದಿಯಾಗಿದೆ. ಶ್ರೀಮತಿ ಹಸ ಅವರು ತಮ್ಮ ಗಂಡ ಕಿರಣ್ ಕುಮಾರ್ ಮತ್ತು ಮಗಳು ರೇಖಾ ಅವರೊಂದಿಗೆ ಹುಣಸಮಾರನಹಳ್ಳಿಯ ಶ್ರೀ ಕೃಷ್ಣದೇವರಾಯ ಡೆಂಟಲ್ ಆಸ್ಪತ್ರೆ ಕಡೆಗೆ ಹೊರಟಿದ್ದರು. ಇವರು KA-43-V-2508 ನಂಬರಿನ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಮಧ್ಯಾಹ್ನ ಸುಮಾರು 1:45 ಗಂಟೆ ಸಮಯಕ್ಕೆ, ಹಿಂಬದಿಯಿಂದ ಅತಿವೇಗವಾಗಿ ಬಂದ ಬೈಕ್ ಸವಾರನು ಅವರ ಕತ್ತಿಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೆಂಗಳೂರು ಕಡೆಗೆ ಓಡಿದನು. ಕದ್ದ ಚಿನ್ನದ ಸರದಲ್ಲಿ – ಮಾಂಗಲ್ಯ, ಎರಡು…

ಮುಂದೆ ಓದಿ..