ರಸ್ತೆ ಕಾಮಗಾರಿಯ ವೇಳೆ ಭೂಗತ ವಿದ್ಯುತ್ ಕೇಬಲ್ ಹಾನಿ – ಆರು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ
ಆನೇಕಲ್, ಆಗಸ್ಟ್ 5:ಆನೇಕಲ್ ತಾಲೂಕಿನ ಕಮ್ಮಸಂದ್ರ ಅಗ್ರಹಾರ ಪ್ರದೇಶದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಭೂಗತ ವಿದ್ಯುತ್ ಕೇಬಲ್ ಗೆ ಹಾನಿಯುಂಟಾಗಿ, ಆರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡ ಘಟನೆ ಬೆಳಕಿಗೆ ಬಂದಿದೆ. ತಕ್ಷಣದ ಪ್ರಕಾರ, ದಿನಾಂಕ 11-06-2025 ರಂದು ಬೆಳಿಗ್ಗೆ 10:44ಕ್ಕೆ ಕಮ್ಮಸಂದ್ರ ಅಗ್ರಹಾರ ವ್ಯಾಪ್ತಿಯ ಆನೇಕಲ್ 110/11 ಕೆವಿ ಉಪ ವಿದ್ಯುತ್ ವಿತರಣಾ ಕೇಂದ್ರದ ಬಳಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ವೇಳೆ KA-16-M-6201 ನಂಬರ್ ಹೊಂದಿರುವ JCB ಯಂತ್ರದ ಮೂಲಕ ಕೆಲಸ ನಡೆಯುತ್ತಿದ್ದಾಗ F18, F10 ಮತ್ತು F19 ಮಾರ್ಗದ 400 ಸ್ಕ್ವೆರ್ ಎಂ x 3 ಕೋರ್ ಭೂಗತ ಕೇಬಲ್ ಗೆ ಹಾನಿಯಾಗಿದೆ. ಈ ಘಟನೆಯ ಪರಿಣಾಮವಾಗಿ ಸಂಬಂಧಪಟ್ಟ ಆರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ. ಘಟನೆಗೆ ಸಂಬಂಧಪಟ್ಟಂತೆ 02-08-2025 ರಂದು ಸಂಜೆ 4 ಗಂಟೆಗೆ…
ಮುಂದೆ ಓದಿ..
