ಸುದ್ದಿ 

ಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ

Taluknewsmedia.com

Taluknewsmedia.comಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪೋಷಕರ ವಿರೋಧದ ನಡುವೆಯೇ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿರಿಸಿರುವ ಘಟನೆ ಗಮನ ಸೆಳೆದಿದೆ. ನಗರದ ಸಿದ್ದಾರ್ಥ ಬಡವಾಣೆಯ ನಿವಾಸಿಗಳಾದ ಗಣೇಶ್ (25) ಮತ್ತು ಅಕ್ಷಯಾ (19) ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರೂ, ಕುಟುಂಬದ ಒಪ್ಪಿಗೆ ಇಲ್ಲದೆ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಅಕ್ಷಯಾಳ ಪೋಷಕರು ಅವಳಿಗೆ ಸೋದರಮಾವನೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರೂ, ಆ ಸಂಬಂಧ ಅವಳಿಗೆ ಇಷ್ಟವಿರಲಿಲ್ಲ. ಪ್ರೀತಿಸಿದವನೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಯುವತಿ ಮನೆ ಬಿಟ್ಟು ಗಣೇಶ್ ಜೊತೆ ಓಡಿಹೋಗಿ ಧರ್ಮಸ್ಥಳದಲ್ಲಿ ಮದುವೆಯಾದಳು. ಮಗಳು ಕಾಣೆಯಾಗಿರುವ ಕುರಿತು ಆತಂಕಗೊಂಡ ಕುಟುಂಬದವರು ಶಿಡ್ಲಘಟ್ಟ ನಗರ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದರು. ತನಿಖೆಯ ಅಂಗವಾಗಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆತರಿದರು. ಸಮಚಾರ ವಿಚಾರಿಸಿದ ನಂತರ, ಇಬ್ಬರೂ ಪರಸ್ಪರರೊಂದಿಗೇ ಬದುಕಲು…

ಮುಂದೆ ಓದಿ..
ಸುದ್ದಿ 

ಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ

Taluknewsmedia.com

Taluknewsmedia.comಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ತೀವ್ರ ದುಃಖ ಹಾಗೂ ಅಸಹನೆಯನ್ನು ಮೂಡಿಸಿದ ಭೀಕರ ಘಟನೆ ವರದಿಯಾಗಿದೆ. ಮನೆಗೆಲಸ ಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಘಾತದ ಅಲೆ ಎಬ್ಬಿಸಿದೆ. ▪️ಚಾಕುವಿನಿಂದ ಕತ್ತು ಕತ್ತರಿಸಿ ಕೊಲೆಪೋಲಿಸ್ ತನಿಖೆ ಪ್ರಾಥಮಿಕ ಮಾಹಿತಿಯ ಪ್ರಕಾರ, ದೀರ್ಘಕಾಲದಿಂದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನೇ ಈ ಕೃತ್ಯಕ್ಕೆ ಕಾರಣನೆಂದು ಶಂಕಿಸಲಾಗಿದೆ. ಮೊಬೈಲ್‌ ಫೋನ್ ಬ್ಯುಸಿ ತೋರಿಸುತ್ತಿದೆ ಎಂಬ ಕಾರಣಕ್ಕೆ ಶೀಲ ಶಂಕೆ ಹುಟ್ಟಿಕೊಂಡು ವಾಗ್ವಾದ ಶುರುವಾಗಿದ್ದು, ಅದೇ ಕ್ಷಣದಲ್ಲಿ ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕತ್ತರಿಸಿ ಆರೋಪಿಯು ದಾರುಣ ಕೃತ್ಯ ಎಸಗಿದ್ದಾನೆ. ▪️ಮೃತ ಮಹಿಳೆಯ ವಿವರಲಲೀತಾ ಬ್ಯಾಡಗಿ (42) ಎಂಬವರು ಹತ್ಯೆಗೆ ಒಳಗಾದ ದುರ್ದೈವಿ. ಮೂಲತಃ ಬ್ಯಾಡಗಿ ತಾಲೂಕಿನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ ಬೆಂಗಳೂರಿನ ಗೋವಿಂದರಾಜನಗರದ ಪಂಚಶೀಲ ನಗರದಲ್ಲಿ ಗೀಸರ್‌ನಿಂದ ಗ್ಯಾಸ್‌ ಸೋರಿಕೆಯಾಗಿದ್ದು, ತಾಯಿ ಹಾಗೂ ಮಗುವಿನ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಗ್ಯಾಸ್‌ ಲೀಕ್‌ ಮಧ್ಯಾಹ್ನ ಸ್ನಾನಕ್ಕೆ ಹೋದಾಗ ಚಾಂದಿನಿ (26) ಮತ್ತು ನಾಲ್ಕು ವರ್ಷದ ಯುವಿ ಅಸ್ವಸ್ಥರಾಗಿದ್ದರು. ಅಸ್ವಸ್ಥರಾಗಿ ಬಿದ್ದಿದ್ದ ತಾಯಿ–ಮಗುವನ್ನು ಸ್ಥಳೀಯರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಅಂತಿಮ ನಿಶ್ವಾಸ ಬಿಟ್ಟಿದ್ದಾರೆ. ಕಾರ್ಪೆಂಟರ್‌ ಉದ್ಯೋಗ ಮಾಡುತ್ತಿದ್ದ ಚಾಂದಿನಿಯ ಪತಿ ಕಿರಣ್ ಕೆಲಸದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಕುರಿತು ತಿಳಿಯುತ್ತಿದ್ದಂತೆಯೇ ಗೋವಿಂದರಾಜನಗರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಾಯಿ ಮತ್ತು ಮಗುವಿನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿದು ಬಂದಿದೆ.

ಮುಂದೆ ಓದಿ..
ಸುದ್ದಿ 

ಮಂಡ್ಯದಲ್ಲೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ — ಸರ್ಕಾರದ ಹೊಸ ಕ್ರಮ

Taluknewsmedia.com

Taluknewsmedia.comಮಂಡ್ಯದಲ್ಲೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ — ಸರ್ಕಾರದ ಹೊಸ ಕ್ರಮ ರಾಜ್ಯದಲ್ಲಿ ಕೋಮು ಹಿಂಸೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ನಂತರ ಇದೀಗ ಮಂಡ್ಯದಲ್ಲಿಯೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ ರಚನೆ ಮಾಡಲು ಗೃಹ ಇಲಾಖೆ ತೀರ್ಮಾನಿಸಿದೆ. ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಘಟನೆಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದರು. ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಜಿನ್ ಆನ್ ಗೋ ವಾಹನಗಳನ್ನು ಬೆಂಗಳೂರಿನ ಪೊಲೀಸ್‌ ಘಟಕಕ್ಕೆ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸ್ ಇಲಾಖೆಯ ಪ್ರಗತಿಯ ಸ್ತಂಭಗಳು ಪುಸ್ತಕವನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕರಾವಳಿಯಲ್ಲಿ ಯಶಸ್ವಿಯಾದ ವಿಶೇಷ ಪಡೆ ಮಾದರಿ ಕರಾವಳಿಯಲ್ಲಿ ಹಿಂದಿನ ವರ್ಷಗಳಲ್ಲಿ ನಡೆದ…

ಮುಂದೆ ಓದಿ..
ಸುದ್ದಿ 

ಎಲ್‌ಕೆಜಿ–ಯುಕೆಜಿ ಮಕ್ಕಳಿಗೂ ಮಧ್ಯಾಹ್ನದ ಊಟ: ಸರ್ಕಾರದ ಹೊಸ ಆದೇಶ ಜಾರಿ

Taluknewsmedia.com

Taluknewsmedia.comಎಲ್‌ಕೆಜಿ–ಯುಕೆಜಿ ಮಕ್ಕಳಿಗೂ ಮಧ್ಯಾಹ್ನದ ಊಟ: ಸರ್ಕಾರದ ಹೊಸ ಆದೇಶ ಜಾರಿ ಕುಂದಾಪುರ: ರಾಜ್ಯದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬಲ ನೀಡುವ ಉದ್ದೇಶದಿಂದ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಬೇಕೆಂಬ ಮಹತ್ವದ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಇದುವರೆಗೂ 1ರಿಂದ 10ನೇ ತರಗತಿವರೆಗೆ ಸೀಮಿತವಾಗಿದ್ದ ಈ ಸೌಲಭ್ಯವನ್ನು ಇದೀಗ ಕಿರಿಯ ಮಕ್ಕಳಿಗೂ ವಿಸ್ತರಿಸಲಾಗಿದೆ. ಡಿ.1ರಿಂದಲೇ ಈ ಆದೇಶ ಜಾರಿಯಲ್ಲಿ ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ 6.78 ರೂ. ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ 4.07 ರೂ. ಕೇಂದ್ರದಿಂದ ಮತ್ತು 2.71 ರೂ. ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ವಾರಕ್ಕೆ ನಾಲ್ಕು ದಿನ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಅಜೀಂ ಪ್ರೇಮ್‌ಜಿ ಫೌಂಡೇಶನ್ ಒದಗಿಸಲಿದ್ದು, ಉಳಿದ ದಿನಗಳಿಗೆ ರಾಜ್ಯ ಸರ್ಕಾರವೇ ಪೂರೈಕೆ ಮಾಡಲಿದೆ. ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ತರಗತಿಗಳು ಆರಂಭವಾದರೂ ಮಧ್ಯಾಹ್ನದ ಊಟ ಯೋಜನೆ…

ಮುಂದೆ ಓದಿ..
ಸುದ್ದಿ 

ಬಳ್ಳಾರಿ ನಗರಾಭಿವೃದ್ಧಿ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಬೈರತಿ ಸುರೇಶ್ ತಿಂಗಳ ಗಡುವು, ಕಲುಷಿತ ನೀರಿಗೆ ಕಟ್ಟುನಿಟ್ಟು ಕ್ರಮ

Taluknewsmedia.com

Taluknewsmedia.comಬಳ್ಳಾರಿ ನಗರಾಭಿವೃದ್ಧಿ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಬೈರತಿ ಸುರೇಶ್ ತಿಂಗಳ ಗಡುವು, ಕಲುಷಿತ ನೀರಿಗೆ ಕಟ್ಟುನಿಟ್ಟು ಕ್ರಮ ಬಳ್ಳಾರಿ: ಗಣಿನಾಡಿನ ಬಳ್ಳಾರಿ ನಗರದಲ್ಲಿ ಪಾರ್ಕ್‌ಗಳು, ರಸ್ತೆಗಳು ಮತ್ತು ಸರ್ಕಾರಿ ಜಾಗಗಳ ಮೇಲೆ ನಡೆಯುತ್ತಿರುವ ಅಕ್ರಮ ಒತ್ತುವರಿಗಳು ಸಾರ್ವಜನಿಕರಿಗೆ ಅನೇಕ ತೊಂದರೆಗಳನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿ, ಒಂದು ತಿಂಗಳೊಳಗಾಗಿ ಎಲ್ಲ ರೀತಿಯ ಸರ್ಕಾರಿ ಜಾಗದ ಒತ್ತುವರಿಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಗರಾಭಿವೃದ್ಧಿ ಪ್ರಗತಿ ವಿಮರ್ಶಾ ಸಭೆಯ ನಂತರ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಅಕ್ರಮ ನಿರ್ಮಾಣಗಳು ಮತ್ತು ಜಾಗವ್ಯಾಪನೆ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವುಕಲುಷಿತ ನೀರು…

ಮುಂದೆ ಓದಿ..
ಸುದ್ದಿ 

ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪುನರ್ಜೀವ: ವಾಷಿಂಗ್ ಯುನಿಟ್‌ಗಳ ಬಂದ್ ಆದೇಶ ಹಿಂಪಡೆಯಲು ಸಿಎಂ ಸೂಚನೆ

Taluknewsmedia.com

Taluknewsmedia.comಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪುನರ್ಜೀವ: ವಾಷಿಂಗ್ ಯುನಿಟ್‌ಗಳ ಬಂದ್ ಆದೇಶ ಹಿಂಪಡೆಯಲು ಸಿಎಂ ಸೂಚನೆ ಬಳ್ಳಾರಿ ಜೀನ್ಸ್ ಉದ್ಯಮ ಎದುರಿಸುತ್ತಿದ್ದ ಮಹತ್ತರ ಸಂಕಷ್ಟಕ್ಕೆ ರಾಜ್ಯ ಸರ್ಕಾರದಿಂದ ದೊಡ್ಡ ಪರಿಹಾರ ದೊರಕಿದೆ. ಪರಿಸರ ಮಾಲಿನ್ಯಕ್ಕೆ ಕಾರಣವೆಂದು 36 ವಾಷಿಂಗ್ ಯುನಿಟ್‌ಗಳಿಗೆ ನೀಡಿದ್ದ ಬಂದ್ ನೋಟಿಸ್ ಉದ್ಯಮಿಗಳನ್ನು ಆತಂಕಕ್ಕೀಡಾಗಿಸುತ್ತಿದ್ದ ಸಂದರ್ಭದಲ್ಲಿ, ರಾಜ್ಯ ಸರ್ಕಾರದಿಂದ ಕಾಮನ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್‌ (CETP) ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಇದರಿಂದ ವಾಷಿಂಗ್ ಯುನಿಟ್‌ಗಳ ಬಂದ್ ಭೀತಿ ನಿವಾರಣೆಯಾಗಿದ್ದು, ಉದ್ಯಮದ ಭವಿಷ್ಯಕ್ಕೆ ಹೊಸ ದಾರಿಯು ತೆರೆದಿದೆ. 22 ಕೋಟಿ ರೂ. ವೆಚ್ಚದಲ್ಲಿ CETP ನಿರ್ಮಾಣಕ್ಕೆ ಅನುಮೋದನೆ. ನಾಲ್ಕು ಎಕರೆ ಜಾಗದಲ್ಲಿ ಪ್ಲಾಂಟ್‌ ಸ್ಥಾಪನೆ. 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಭದ್ರತೆ. ಜೀನ್ಸ್ ಉದ್ಯಮಿಗಳ ಹಲವು ವರ್ಷಗಳ ಬೇಡಿಕೆ ಈಡೇರಿಕೆ. ಬಳ್ಳಾರಿಯಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಸಿದ್ಧ ಉಡುಪು ತಯಾರಿಕಾ ಘಟಕಗಳಿದ್ದು, 10 ಸಾವಿರಕ್ಕೂ…

ಮುಂದೆ ಓದಿ..
ಸುದ್ದಿ 

ನವವಿವಾಹಿತ ಯುವಕನ ದಾರುಣ ಅಂತ್ಯ: ಮದುವೆಯಾದ ಮರುದಿನವೇ ಹೃದಯಾಘಾತಕ್ಕೆ ಬಲಿ

Taluknewsmedia.com

Taluknewsmedia.comನವವಿವಾಹಿತ ಯುವಕನ ದಾರುಣ ಅಂತ್ಯ: ಮದುವೆಯಾದ ಮರುದಿನವೇ ಹೃದಯಾಘಾತಕ್ಕೆ ಬಲಿ ವಿಜಯನಗರ, ಹರಪ್ಪನಹಳ್ಳಿ: ಹೊಸ ಜೀವನದ ಕನಸುಗಳೊಂದಿಗೆ ಹಸೆಮಣೆ ಏರಿದ್ದ ಯುವಕನೊಬ್ಬ ಮರುದಿನವೇ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗದ ಭದ್ರಾವತಿ ಮೂಲದ 30 ವರ್ಷದ ರಮೇಶ್ ಎಂಬುವವರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಘಟನೆಯ ಸಂಕ್ಷಿಪ್ತ ವಿವರ ನವೆಂಬರ್ 30 – ರಮೇಶ್ ಹಾಗೂ ಮಧುವಿನ ವಿವಾಹ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಜರುಗಿತ್ತು. ಡಿಸೆಂಬರ್ 1 – ಸಂಪ್ರದಾಯದಂತೆ ದಂಪತಿ ವಧುವಿನ ಮನೆ ಬಂಡ್ರಿ ಗ್ರಾಮಕ್ಕೆ ಆಗಮಿಸಿದರು. ಮೆರವಣಿಗೆಯೊಂದಿಗೆ ಹೊಸ ವರ-ವಧುವಿಗೆ ಸ್ವಾಗತ ಸಲ್ಲಿಸಲಾಯಿತು. ನಂತರ ದೇವರ ದರ್ಶನಕ್ಕಾಗಿ ದೇವಾಲಯಕ್ಕೆ ಭೇಟಿ ನೀಡಿದಾಗ ದಾರುಣ ಘಟನೆ ಸಂಭವಿಸಿತು. ಹೃದಯಾಘಾತದಿಂದ ಅಕಾಲಿಕ ಮರಣ ದೇವರ ಮನೆಗೆ ಕಾಲಿಟ್ಟಿದ್ದ ರಮೇಶ್ ಅಚಾನಕ್‌ನೆ ತಲೆಯು ತಿರುಗಿದಂತೆ ನೆಲಕ್ಕುರುಳಿದರು. ಕುಟುಂಬಸ್ಥರು ತಕ್ಷಣವೇ…

ಮುಂದೆ ಓದಿ..
ಸುದ್ದಿ 

ಹಾವೇರಿ: ‘ಅನ್ನ ಸುವಿಧಾ’ ಯೋಜನೆಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ – ಮನೆ ಬಾಗಿಲಿಗೇ ಪಡಿತರ ಸೇವೆ

Taluknewsmedia.com

Taluknewsmedia.comಹಾವೇರಿ: ‘ಅನ್ನ ಸುವಿಧಾ’ ಯೋಜನೆಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ – ಮನೆ ಬಾಗಿಲಿಗೇ ಪಡಿತರ ಸೇವೆ ಹಾವೇರಿ ಜಿಲ್ಲೆಯಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿರುವ ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳಿಗೆ ಸರ್ಕಾರ ಜಾರಿಗೊಳಿಸಿರುವ ‘ಅನ್ನ ಸುವಿಧಾ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜಿಲ್ಲೆಯಲ್ಲಿ ಒಟ್ಟು 7 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ 400ಕ್ಕೂ ಹೆಚ್ಚು ವಯೋವೃದ್ಧರು ಮನೆ ಬಾಗಿಲಿಗೆ ಪಡಿತರ ವಿತರಣೆಗಾಗಿ ಒಪ್ಪಿಗೆ ನೀಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 7,211 ಫಲಾನುಭವಿಗಳ ಗುರುತು. 75 ವರ್ಷ ಮೇಲ್ಪಟ್ಟ ವೃದ್ಧರು ಮಾತ್ರ ಇರುವ ಮನೆಗಳಿಗೆ ಪಡಿತರ ಅಂಗಡಿಕಾರರು ನೇರವಾಗಿ ತೆರಳಿ ಪಡಿತರ ವಿತರಣೆ. ಜಿಲ್ಲೆಯ 447ಕ್ಕೂ ಹೆಚ್ಚು ಫಲಾನುಭವಿಗಳಿಂದ ಮೊದಲ ತಿಂಗಳಲ್ಲೇ ಒಪ್ಪಿಗೆ ಪತ್ರ ಸಂಗ್ರಹ. ಅಂಗಡಿಕಾರರಿಗೆ ಪ್ರತಿ ಮನೆಯಲ್ಲಿ ಪಡಿತರ ನೀಡಿದಕ್ಕಾಗಿ ಹೆಚ್ಚುವರಿ 50 ರೂ. ಕಮಿಷನ್ ಯೋಜನೆಗೆ ಸಾರ್ವಜನಿಕ ಸ್ಪಂದನೆ.. ವಯೋವೃದ್ಧರು ದೂರದ ಪಡಿತರ…

ಮುಂದೆ ಓದಿ..
ಸುದ್ದಿ 

ಪ್ರಾಣಿಗಳಿಗೂ ‘ಆಧಾರ್’ ಗುರುತು?

Taluknewsmedia.com

Taluknewsmedia.comಪ್ರಾಣಿಗಳಿಗೂ ‘ಆಧಾರ್’ ಗುರುತು? ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಮಾರ್ಟ್ ಟ್ಯಾಗಿಂಗ್ ವ್ಯವಸ್ಥೆ ಜಾರಿಗೆ ಯೋಚನೆ ಹುಬ್ಬಳ್ಳಿ–ಧಾರವಾಡ: ಮನುಷ್ಯರಿಗೆ ನೀಡುವ ಆಧಾರ್ ಕಾರ್ಡ್ ಮಾದರಿಯಲ್ಲೇ ಈಗ ಜಾನುವಾರು ಹಾಗೂ ಬೀದಿ ನಾಯಿಗಳಿಗೆ ಗುರುತು ಸಂಖ್ಯೆ ನೀಡುವ ಯೋಜನೆ ಮಹಾನಗರ ಪಾಲಿಕೆಯಲ್ಲಿ ಚರ್ಚೆಗೆ ಬಂದಿದೆ. ‘ಸ್ಮಾರ್ಟ್ ಪ್ಲಾಕ್’ ಎಂಬ ವಿಶೇಷ ಅಪ್ಲಿಕೇಶನ್‌ ಮೂಲಕ ಪ್ರಾಣಿಗಳ ಮಾಹಿತಿಯನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿ, ಕಿವಿಗೆ ಸ್ಕ್ಯಾನರ್‌ ಹೊಂದಿರುವ ಟ್ಯಾಗ್ ಅಳವಡಿಸುವ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಕುರಿತು ಪಾಲಿಕೆ ತೀವ್ರವಾದ ಚಿಂತನೆ ನಡೆಸುತ್ತಿದೆ. ಯೋಜನೆಯ ಮುಖ್ಯ ಅಂಶಗಳು..ಪ್ರಾಣಿಗಳ ಕಿವಿಗೆ ಸ್ಕ್ಯಾನರ್ ಹೊಂದಿರುವ ಟ್ಯಾಗ್ ಅಳವಡಿಕೆ ಟ್ಯಾಗ್ ಸ್ಕ್ಯಾನ್ ಮಾಡಿದರೆ ಮಾಲೀಕರ ವಿವರದಿಂದ ಹಿಡಿದು ಪ್ರಾಣಿಯ ಆರೋಗ್ಯ ಮಾಹಿತಿ ವರೆಗೆ ಲಭ್ಯ. ಕಳ್ಳತನ ತಡೆ, ಆರೋಗ್ಯ ನಿರೀಕ್ಷಣೆ ಹಾಗೂ ಪ್ರಾಣಿಗಳ ಸುರಕ್ಷತೆಗಾಗಿ ಉಪಯುಕ್ತ ಐಐಟಿ ಧಾರವಾಡದಲ್ಲಿ ಅಭಿವೃದ್ದಿಯಾದ ತಂತ್ರಜ್ಞಾನ.. ಈ ಟ್ಯಾಗಿಂಗ್‌ ತಂತ್ರಜ್ಞಾನವನ್ನು ಐಐಟಿ ಧಾರವಾಡದ ಇಂಕ್ಯೂಬೇಷನ್ ಸೆಂಟರ್‌ನಲ್ಲಿ…

ಮುಂದೆ ಓದಿ..